ಅನುಭಾವ ಬಿಂದುಗಳು…
– 1 –
ಕಾಣದ ನಿನ್ನ
ಅರಸಿ ಅರಸಿಯೇ ಬೇಸತ್ತೆ.
ಊಹೂಂ…!
ಇಲ್ಲಿಯೂ ದಕ್ಕಲಿಲ್ಲ
ಅಲ್ಲೂ ದಕ್ಕಲಿಲ್ಲ.
ಮಾಡಿಟ್ಟ ಅಡುಗೆಯ ಬಿಟ್ಟು
ಭಿಕ್ಷಾಟನೆಗೆ
ಹೋಗಿದ್ದೇ ತಪ್ಪಾಯಿತೇನೋ?
– 2 –
ಮಾತಿಗೆ ನಿಲುಕದವನು
ಎನ್ನುತ್ತಲೇ
ಮಾತಾಡುತ್ತಾರೆ
ನಿನ್ನ ಬಗ್ಗೆ
ರೇಜಿಗೆ ಹುಟ್ಟುವುಷ್ಟು
ನಿನ್ನ ಕಂಡ ಮೇಲೆ
ಮಾತಾಡಲು
ಅವರಿಗೆ ಅದೆಲ್ಲಿ
ಪುರುಸೊತ್ತು!?
– 3 –
ಹೂವು ಚೆಂದ, ಸುಂದರ
ಅನ್ನುತ್ತಲೇ ಉಳಿದೆವು,
ದುಂಬಿ ಹೀರಿತು ಮಕರಂದ.
ನಿನ್ನ ಬಗ್ಗೆ
ಹೇಳಿದ್ದೇ ಬಂತು,
ಅವ ಸವಿದ ನಿನ್ನಂದ!
– 4 –
ಬದುಕಿಗಿಂತ ಸಾವೇ ಮೇಲು
ಅನ್ನುತ್ತಾರೆ ಕೆಲವರು.
ಬದುಕಿನ ಸವಿ ಹೀರಲಾಗದೆ,
ಸಾವಿನ ಸಾಹಸ ಮಾಡಲಾಗದೆ
ನಿತ್ಯ ಸಾಯುತ್ತಾರೆ,
ಬದುಕಿದ್ದೂ ಸತ್ತಂತಿರುತ್ತಾರೆ.
– 5 –
ಹುಟ್ಟಿದೊಡನೆ ಅಮ್ಮನ್ನ ಕಳಕೊಂಡೆ
ಅವಳು ಹಾಲೂಡಿಸಿದ್ದರೆ,
ಈ ಅಲ್ಕೋಹಾಲು ನಾನೇಕೆ ಕುಡಿಯುತ್ತಿದ್ದೆ?
ಹಾಗಂತ ಹಲುಬುತ್ತಲೇ ಇದ್ದೆ.
ನೆನ್ನೆಯಷ್ಟೇ ಸಮಾಧಾನವಾಯಿತು
ಬಾರಿನ ನನ್ನ ಟೇಬಲ್ಲ ಪಕ್ಕದಲ್ಲಿ
ಪಾರ್ಟಿ ನಡೆದಿತ್ತು
ಅಧಿಕಾರಿಗಳು, ರಾಜಕಾರಣಿಗಳು
ಜಾಮಿನ ಮೇಲೆ ಜಾಮಿಳಿಸುತ್ತಿದ್ದರು,
‘ಹಾಲೂಡಿಸಿದ ತಾಯಿ’ಗೆ ವಿಷ ಕೊಟ್ಟು!
January 3rd, 2008 at 6:54 pm
ಚಕ್ರವರ್ತಿ,
ಮೊದಲೆರಡು ಸ್ಟಾಂಜಾಗಳು ಬಹಳ ಹಿಡಿಸಿದವು. ಇದೇ ಮೊದಲ ಸಾರಿ ನಿಮ್ಮ ಕವಿತೆ ಓದುತ್ತ ಇರುವುದು. ಇನ್ನೂ ಹೆಚ್ಚಿಗೆ ಬರೀತೀರ ತಾನೆ?
-ಟೀನಾ.
January 4th, 2008 at 1:36 am
ನಮಸ್ತೇ ಟೀನಾ,
ಈ ಥರದ್ದನ್ನ ನಾನು ಬರೀತಿರೋದೂ ಇದೇ ಮೊದಲ ಸಾರ್ತಿ. ಇದು ಮುಂದುವರಿಯುತ್ತದೆ ಅಂದುಕೊಳ್ಳುತ್ತೇನೆ!
ಧನ್ಯವಾದ
– ಚಕ್ರವರ್ತಿ
January 4th, 2008 at 6:55 pm
ಮೊದಲನೆಯದು ತುಂಬಾ ಚೆನ್ನಾಗಿದೆ. ಇನ್ನಷ್ಟು ಬರಲಿ.
January 5th, 2008 at 9:04 am
Dhanyavaada Vikram.
– Chakravarty
September 30th, 2008 at 12:24 pm
ಅನುಭಾವ ಬಿಂದುಗಳು…
In ಅನುಭಾವ ಬಿಂದುಗಳು on January 2, 2008 at 4:11 pm
– 1 –
ಕಾಣದ ನಿನ್ನ
ಅರಸಿ ಅರಸಿಯೇ ಬೇಸತ್ತೆ.
ಊಹೂಂ…!
ಇಲ್ಲಿಯೂ ದಕ್ಕಲಿಲ್ಲ
ಅಲ್ಲೂ ದಕ್ಕಲಿಲ್ಲ.
ಮಾಡಿಟ್ಟ ಅಡುಗೆಯ ಬಿಟ್ಟು
ಭಿಕ್ಷಾಟನೆಗೆ
ಹೋಗಿದ್ದೇ ತಪ್ಪಾಯಿತೇನೋ?
ಎಷ್ಟು ಸರಳ!ಆದರೆ ಎಂತಹಾ ಚಾಟಿ ಏಟು?
ಚನ್ನಾಗಿದೆ, ಚಕ್ರವರ್ತಿಗಳೇ,ತುಂಬಾ ಜನರ ಪರಿಸ್ತಿತಿ ಇದು. ಮನೆಯಲ್ಲಿ ಮೃಷ್ಟಾನ್ನ ಇಟ್ಟು ಕೊಂಡು ಬೀದಿ ಬೀದಿ ಅಲೆಯೋ ಜನ ಇದಾರೆ. ತಿಳಿದುಕೊಳ್ಳಲು ಸಾಕಷ್ಟು ಇದೆ. ಹೀಗೆಯೇ ಬರೆಯಿರಿ, ಧನ್ಯವಾದಗಳು
ಹರಿಹರಪುರಶ್ರೀಧರ್
hariharapurasridhar.blogspot.com
October 8th, 2009 at 5:40 am
ತುಂಬಾ ಸಂತೋಷ ವಾಯಿತು Sir , ನಿಮ್ಮ ಈ ತರಹದ ಸಾಲುಗಳನ್ನು ಓದಿ . ಹೀಗೆ ಮುಂದುವರೆಯುತ್ತದೆ ಎಂದು ಆಶಿಸುತ್ತೇನೆ . . 😉
February 12th, 2010 at 9:50 am
ನಿಮ್ಮ ಕವಿತೆಯ ಸಾಲುಗಳನ್ನು ಓದಿ ತುಂಬಾ ಸಂತೋಷವಾಯಿತು ಇನ್ನು ಹೆಚ್ಚಿನ ಕವಿತೆಗಳು ಸುಂದರವಾಗಿ ಮೂಡಿಬರಲಿ ಎಂದು ಹಾರೈಸುತ್ತೇನೆ ….ಮುಸ್ಸಂಜೆಯ ಶುಭ ಕಾಮನೆಗಳು
December 13th, 2010 at 6:59 am
ಅನುಭವ ಅನುಭಾವಗಳ ಬೆಸುಗೆ ಇದು.. ಕಾದ ಇಳೆಗೆ ಮಳೆಯು ಸುರಿದು ಮಣ್ಣಿನ ವಾಸನೆ ಹರಡಿದಂತೆ..
July 29th, 2012 at 7:04 am
i read all this very use full me
April 10th, 2013 at 10:26 pm
sundara kavite, nagna satya
July 25th, 2014 at 8:10 am
Dear Chakravathi sir…. tumba artha garbitha salugalu.ಬದುಕಿಗಿಂತ ಸಾವೇ ಮೇಲು
ಅನ್ನುತ್ತಾರೆ ಕೆಲವರು.
ಬದುಕಿನ ಸವಿ ಹೀರಲಾಗದೆ,
ಸಾವಿನ ಸಾಹಸ ಮಾಡಲಾಗದೆ
ನಿತ್ಯ ಸಾಯುತ್ತಾರೆ,
ಬದುಕಿದ್ದೂ ಸತ್ತಂತಿರುತ್ತಾರೆ. e tarada salugalu indina yuvakaru yochisuvante ive. we are expecting some more, thank u