ವಿಭಾಗಗಳು

ಸುದ್ದಿಪತ್ರ


 

ಐತಿಹಾಸಿಕ ಸಜರ್ಿಕಲ್ ಸ್ಟ್ರೈಕ್ಗೆ ವರ್ಷದ ಸಂಭ್ರಮ!

ಮೊದಲೆಲ್ಲ ಹಿಂದೂ ಧರ್ಮವನ್ನು ಅವಹೇಳನ ಮಾಡುವಂತಹ, ಭಯೋತ್ಪಾದಕರ ಮೇಲೆ ಕರುಣೆ ಹುಟ್ಟುವಂತಹ ಸಿನಿಮಾಗಳೆ ರಾರಾಜಿಸುತ್ತಿದ್ದವು. ಇಂದು ಜನ ಅವುಗಳತ್ತ ಕಡೆಗಣ್ಣಿಂದಲೂ ನೋಡುತ್ತಿಲ್ಲ. ಬಾಲಿವುಡ್ಡನ್ನು ಆಳುತ್ತಿದ್ದ ಶಾರುಖ್, ಅಮೀರರೆಲ್ಲ ಸಾಲು ಸಾಲು ತೋಪೆದ್ದ ಸಿನಿಮಾಗಳಿಂದ ಬೀದಿಗೆ ಬಂದುಬಿಟ್ಟಿದ್ದಾರೆ. ದೇಶಭಕ್ತಿಗೆ ಮೇರುವಿನಷ್ಟು ಮೌಲ್ಯ ಬಂದಿರುವ ವಿಶೇಷವಾದ ಕಾಲಘಟ್ಟದಲ್ಲಿ ನಾವಿದ್ದೇವೆ.

1ಐತಿಹಾಸಿಕ ಸಜರ್ಿಕಲ್ ಸ್ಟ್ರೈಕ್ಗೆ ವರ್ಷದ ಸಂಭ್ರಮ! ‘ಆಧ್ಯಾತ್ಮದ ಮೂಲ ಅವಶ್ಯಕತೆಯೇ ನಿಭರ್ೀತಿ. ಹೇಡಿಗಳು ಎಂದಿಗೂ ನೀತಿವಂತರಾಗಿರುವುದಿಲ್ಲ’ ಈ ಸಾಲುಗಳನ್ನು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಶಿವ್ ಅರೂರರ ‘ಇಂಡಿಯಾಸ್ ಮೋಸ್ಟ್ ಫಿಯರ್ಲೆಸ್’ ಎನ್ನುವ ಕೃತಿಯ ಮುನ್ನುಡಿಯಲ್ಲಿ ಉಲ್ಲೇಖಿಸಿದ್ದಾರೆ. ಉರಿ ಛದ್ಮ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ಸಜರ್ಿಕಲ್ ಸ್ಟ್ರೈಕ್ಗೆ ಮೊನ್ನೆ ತಾನೇ ಒಂದು ವರ್ಷವಾದಾಗ ಮಾರುಕಟ್ಟೆಗೆ ಬಂದ ಪುಸ್ತಕ ಇದು. ಒಂದೇ ಗುಕ್ಕಿಗೆ ಮುಗಿಸಿಬಿಡಬಹುದಾದ ರೋಚಕ ಕೃತಿ. ಭಾರತೀಯ ಸೈನಿಕರ ಕಂಡು ಕೇಳರಿಯದ ಸಾಹಸ ಗಾಥೆಗಳ ಸಂಪೂರ್ಣ ವಿವರ ಇದರಲ್ಲಿ ಹಾಸು ಹೊಕ್ಕಾಗಿದೆ. ಕದನ ಕಲಿಗಳನ್ನು ಖುದ್ದು ಮಾತಾಡಿಸಿ ಅವುಗಳಲ್ಲಿ ಗೌಪ್ಯತೆಯ ದೃಷ್ಟಿಯಿಂದ ಹೇಳಬಾರದ ಕೆಲ ವಿಷಯಗಳನ್ನು ಪಕ್ಕಕ್ಕಿಟ್ಟು ಉಳಿದುದನ್ನು ಕಣ್ಣಿಗೆ ಕಟ್ಟುವಂತೆ ವಣರ್ಿಸಿರುವ ಅಪರೂಪದ ಪುಸ್ತಕವಿದು. ಸೈನಿಕರ ಕಥನಗಳು ಹೀಗೆ ಪುಸ್ತಕವಾಗಿ ಹೊರಬರಬೇಕು. ಸಿನಿಮಾಗಳಾಗಿ ಜನರ ಮುಂದೆ ರಾರಾಜಿಸಬೇಕು. ಆಗಲೇ ಜನ ಸಾಮಾನ್ಯರಲ್ಲೂ ಆತ್ಮವಿಶ್ವಾಸದ ಕಿಡಿ ಹೊಮ್ಮೋದು. ಬಹುಶಃ ಅತಿಶಯೋಕ್ತಿಯಾದೀತೇನೋ? ಮೋದಿ ಬರುವ ಮುನ್ನ ಪರಮವೀರ ಚಕ್ರ ಪಡೆದವರೊಂದಷ್ಟು ಜನರ ಕಥನಗಳನ್ನಷ್ಟೇ ಓದಬೇಕಿತ್ತು. ಕಾಗರ್ಿಲ್ ದಾಳಿಯ ವೇಳೆಗೆ ಪತ್ರಕರ್ತರನ್ನು ಕದನ ಭೂಮಿಗೆ ಬಿಟ್ಟಿದ್ದರ ಫಲವಾಗಿ ಒಂದಷ್ಟು ಮೈನವಿರೇಳಿಸುವ ಕಥೆಗಳು ಸಮಾಜಕ್ಕೆ ದಕ್ಕಿದವು. ಕಳೆದ ಮೂರು ವರ್ಷಗಳಲ್ಲಿ ಭಾರತೀಯ ಸೇನೆಯ ಸಾಹಸವನ್ನು ಆಧಾರವಾಗಿಟ್ಟುಕೊಂಡ ಕಥೆಗಳು ಸಿನಿಮಾಗಳಾದವು. ಬೇಬಿ, ರುಸ್ತುಂಗಳು ಅಂಥವು. ಏರ್ ಲಿಫ್ಟ್ ಸೈನಿಕನ ಕಥೆಯಲ್ಲದಿದ್ದರೂ ಭಾರತೀಯನೊಬ್ಬನ ಆತ್ಮವಿಶ್ವಾಸ ಬಡಿದೆಬ್ಬಿಸುವಲ್ಲಿ ಅದರ ಪಾತ್ರವೇನೂ ಕಡಿಮೆ ಇರಲಿಲ್ಲ. ನೀರಜಾ ಭಾನೋಟ್ ಎಂಬ ಗಗನ ಸಖಿಯ ಸಾಹಸ ಗಾಥೆಯೂ ಸಿನಿಮಾ ಆಗಿದ್ದು ಈ ಅವಧಿಯಲ್ಲಿಯೇ. ಮೊದಲೆಲ್ಲ ಹಿಂದೂ ಧರ್ಮವನ್ನು ಅವಹೇಳನ ಮಾಡುವಂತಹ, ಭಯೋತ್ಪಾದಕರ ಮೇಲೆ ಕರುಣೆ ಹುಟ್ಟುವಂತಹ ಸಿನಿಮಾಗಳೆ ರಾರಾಜಿಸುತ್ತಿದ್ದವು. ಇಂದು ಜನ ಅವುಗಳತ್ತ ಕಡೆಗಣ್ಣಿಂದಲೂ ನೋಡುತ್ತಿಲ್ಲ. ಬಾಲಿವುಡ್ಡನ್ನು ಆಳುತ್ತಿದ್ದ ಶಾರುಖ್, ಅಮೀರರೆಲ್ಲ ಸಾಲು ಸಾಲು ತೋಪೆದ್ದ ಸಿನಿಮಾಗಳಿಂದ ಬೀದಿಗೆ ಬಂದುಬಿಟ್ಟಿದ್ದಾರೆ. ದೇಶಭಕ್ತಿಗೆ ಮೇರುವಿನಷ್ಟು ಮೌಲ್ಯ ಬಂದಿರುವ ವಿಶೇಷವಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಹೀಗಾಗಿಯೇ ಈ ಕೃತಿ ಹೆಚ್ಚು ಗಮನ ಸೆಳೆದಿದ್ದು. ಜನರಲ್ ರಾವತ್ರೇ ಅನೇಕ ಕಥೆಗಳನ್ನು ಲೇಖಕರಿಗೆ ವಿವರಿಸಿರುವುದರಿಂದ ಸಕರ್ಾರದ ಆಸ್ಥೆಯಿಂದಲೇ ಹೊರಬಂದಿರುವ ಪುಸ್ತಕವಿದು ಎಂದು ಮೇಲ್ನೋಟಕ್ಕೇ ನಿರ್ಣಯಿಸಿಬಿಡಬಹುದು. ಬಿಡಿ. ಸದ್ಯಕ್ಕೆ ಚಚರ್ೆಯಾಗಬೇಕಿರುವ ಸಂಗತಿ ಅದಲ್ಲ, ಈ ಕೃತಿಯ ವಸ್ತುವಿನದ್ದು. ಸಹಜವಾಗಿಯೇ ಮೊದಲ ಅಧ್ಯಾಯ ಸಜರ್ಿಕಲ್ ದಾಳಿಗೆ ಸಂಬಂಧಿಸಿದ್ದೇ. ‘ಭಯವೆಂದರೇನೆಂದೇ ನಮಗೆ ಗೊತ್ತಿಲ್ಲ’ ಎಂಬುದು ಅದರ ಶೀಷರ್ಿಕೆ. ಭಾರತೀಯ ಸೇನೆಯ ಸ್ಪೆಶಲ್ ಫೋಸರ್್ ಕುರಿತಂತೆ ಅರಿತವರಿಗೆ ಈ ಶೀಷರ್ಿಕೆ ಹೊಸತೆನಿಸಲಾರದು. ಈ ವಿಶೇಷ ಪಡೆಯ ಸದಸ್ಯನಾಗುವುದು ಪ್ರತಿಯೊಬ್ಬ ಸೈನಿಕನ ಮನದಾಳದ ಬಯಕೆ. ಏಕೆಂದರೆ ಭಾರತದ ಈ ಪಡೆ ಜಗತ್ತಿನ ಅತ್ಯಂತ ಶ್ರೇಷ್ಠ ತುಕಡಿಗಳಲ್ಲಿ ಗಣಿಸಲ್ಪಡುವಂಥದ್ದು. ಭಾರತದ ನೌಕಾ ಪಡೆಯಲ್ಲಿ ಮಾಕರ್ೋಸ್ಗಳು ವಿಶೇಷ ಪಡೆಯೆನಿಸಿದರೆ, ಸಿಆರ್ಪಿಎಫ್ನಲ್ಲಿ ಕೋಬ್ರಾ ಪಡೆ ಇದೆ. ವಾಯು ಪಡೆಯಲ್ಲಿನ ಈ ವಿಶೇಷ ತುಕಡಿಯನ್ನು ಗರುಡವೆಂದರೆ, ಭೂಸೇನೆಯಲ್ಲಿ ಘಾತಕ್, ಎನ್ಎಸ್ಜಿ, ಪ್ಯಾರಾ ಕಮಾಂಡೋಗಳು ಪ್ರಮುಖ. ಈ ತುಕಡಿಗಳಿಗೆ ಸೇರುವುದು ಸುಲಭವೆಂದೆಣಿಸಬೇಡಿ. ಬಂದ ಶೇಕಡಾ ಎಂಭತ್ತರಷ್ಟು ಅಜರ್ಿಗಳು ಮೊದಲ ಸುತ್ತಿನಲ್ಲಿಯೇ ತಿರಸ್ಕರಿಸಲ್ಪಡುತ್ತವೆ. ಉಳಿದವರಿಗೂ ಎಂತೆಂತಹ ಸವಾಲುಗಳೆಂದರೆ ಅದನ್ನೆದುರಿಸಿ ಗೆದ್ದು ಬಂದವ ನಿಸ್ಸಂಶಯವಾಗಿ ಭಾರತೀಯ ಸೇನೆಯ ಅತ್ಯಂತ ಹೆಮ್ಮೆಯ ಸಿಪಾಯಿಯೇ ಸರಿ. ಆಯ್ಕೆಯಾದರೆ ಮುಗಿಯಲಿಲ್ಲ. ಪ್ರತಿದಿನವೂ ಮೈಮುರಿಯುವಷ್ಟು ಕವಾಯತು. 60 ಕೇಜಿ ಭಾರ ಹೊತ್ತು, 20 ಕಿಮೀ ಓಟ. ಪ್ಯಾರಾ ಕಮಾಂಡೋಗಳಿಗಾದರೆ ಮುವ್ವತ್ಮೂರುವರೆ ಸಾವಿರ ಅಡಿ ಎತ್ತರದಿಂದ ಧುಮುಕುವ ಅಭ್ಯಾಸ. ಭಿನ್ನ ಭಿನ್ನ ವಾತಾವರಣದಲ್ಲಿ ವ್ಯಕ್ತಿ-ವ್ಯಕ್ತಿಯೊಂದಿಗೆ ಕದನ ನಡೆಸುವ ಅಭ್ಯಾಸ. ಅಷ್ಟೇ ಅಲ್ಲ ನೀರು, ಗಾಳಿ, ಭೂಮಿ ಯಾವ ಬಗೆಯಲ್ಲಾದರೂ ಸರಿ ಶತ್ರು ದೇಶದೊಳಗೆ ನುಸುಳುವ, ಹೊರ ಬರುವ ಎಲ್ಲ ಮಾರ್ಗಗಳನ್ನೂ ಅರಿತಿರುವ ತಯಾರಿ. ನೆನಪಿಡಿ. ಈ ವಿಶೇಷ ತುಕಡಿಯ ಸೈನಿಕರು ಒಂದೋ ಯಾರೊಂದಿಗಾದರೂ ಕಾದಾಡುತ್ತಿರುತ್ತಾರೆ ಅಥವಾ ಕದನಕ್ಕೆ ತಯಾರಿ ನಡೆಸುತ್ತಲೇ ಇರುತ್ತಾರೆ. ಅವರು ವಿಶ್ರಾಂತಿ ಪಡೆಯುವ ಸಮಯವೇ ಇಲ್ಲ!

4

ಸಜರ್ಿಕಲ್ ದಾಳಿಯಲ್ಲಿ ಅತ್ಯುನ್ನತ ಗೌರವ ಕೀತರ್ಿ ಚಕ್ರ ಪಡೆದ ಮೇಜರ್ ಟ್ಯಾಂಗೋ ಸೈನ್ಯಕ್ಕೆ ಸೇರುವ ಹುಚ್ಚು ಹತ್ತಿಸಿಕೊಂಡಿದ್ದು ಆರನೇ ವಯಸ್ಸಿನಲ್ಲಂತೆ. 1980 ರಲ್ಲಿ ಬಿಡುಗಡೆಯಾಗಿದ್ದ ವಿಜೇತಾ ಎಂಬ ಸೈನ್ಯಕ್ಕೆ ಸಂಬಂಧಿಸಿದ ಚಿತ್ರದ ಟೇಪ್ನ್ನು ತಂದೆ ಚೂರುಚೂರು ಮಾಡಿ ಬಿಸಾಡುವವರೆಗೂ ಅದೆಷ್ಟೋ ಬಾರಿ ನೋಡಿದ್ದರಂತೆ. ಅಲ್ಲಿಂದ ಹನ್ನೆರಡು ವರ್ಷಗಳ ಕಾಲ ಸೈನ್ಯದ ಹುಚ್ಚು ಹೆಚ್ಚಾಯಿತೇ ಹೊರತು ಕಡಿಮೆಯಾಗಲಿಲ್ಲ. ನೇರ ನ್ಯಾಶನಲ್ ಡಿಫೆನ್ಸ್ ಅಕಾಡೆಮಿಗೆ ಸೇರಿಕೊಂಡ ಟ್ಯಾಂಗೋ ಅಲ್ಲಿ ಪ್ಯಾರಾ ಎಸ್ಎಫ್ ಸೈನಿಕರ ಕಥೆಗಳನ್ನು ಕಿವಿಯಗಲಿಸಿ ಕೇಳುತ್ತಿದ್ದರು. ಅವರಿಗೀಗ ಸೇನೆಯಲ್ಲಿರುವುದು ವಿಶೇಷವೆನಿಸಲಿಲ್ಲ, ವಿಶೇಷ ಪಡೆಯ ಸದಸ್ಯರಾಗುವ ಕನಸು ಕಾಣತೊಡಗಿದರು. ಅವರ ಉತ್ಸಾಹಕ್ಕೆ ತಕ್ಕಂತೆ 2004ರಲ್ಲಿ ಅವರನ್ನು ವಿಶೇಷ ಪಡೆಗೆ ಲೆಫ್ಟಿನೆಂಟ್ ಆಗಿ ಸೇರ್ಪಡೆ ಮಾಡಿಕೊಳ್ಳಲಾಯಿತು. ಒಮ್ಮೆ ಸೇರಿದರೆ ಮುಗಿದಂತಲ್ಲ. ಆರು ತಿಂಗಳ ತರಬೇತಿಯ ಅವಧಿಯಲ್ಲೂ ಹೊರದಬ್ಬುವ ಎಲ್ಲ ಅವಕಾಶಗಳೂ ಇರುತ್ತವೆ. ದೈಹಿಕವಾಗಿಯಂತೂ ರುಬ್ಬುವುದು ಇದ್ದೇ ಇರುತ್ತದೆ, ಮಾನಸಿಕವಾಗಿ, ಬೌದ್ಧಿಕವಾಗಿಯೂ ಕೂಡ ಸೈನಿಕನನ್ನು ಪೂರ್ಣ ಪರೀಕ್ಷೆಗೊಳಪಡಿಸುವ ಸಮಯ ಅದು. ನೀವು ನಾಯಕರಾಗಬಲ್ಲಿರೋ? ಸೂಕ್ತವಾಗಿ ಸಾಥು ಕೊಡುವ ಸಮರ್ಥರಾಗಬಲ್ಲಿರೋ? ಎಂಬುದನ್ನು ಸೂಕ್ಷ್ಮವಾಗಿಯೇ ಅವಲೋಕಿಸುತ್ತಿರುತ್ತಾರೆ. ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸಿಬಿಡುವ ಹೊಸ ಹೊಸ ಸವಾಲುಗಳನ್ನು ನೀಡುತ್ತಲೇ ಇರುತ್ತಾರೆ. ಒಟ್ಟಾರೆ ಕುಗ್ಗಿ ಕುಸಿಯುವ ಬಿಂದುವನ್ನು ಗುರುತಿಸುವುದಷ್ಟೇ ಉದ್ದೇಶ. ಎಂತಹ ಕಠಿಣ ಪ್ರಸಂಗ ಬಂದಾಗಲೂ ಕೈಚೆಲ್ಲದಷ್ಟು ಬಲಶಾಲಿಯನ್ನಾಗಿಸುವುದೇ ಎಲ್ಲದರ ಗುರಿ. ಒಮ್ಮೆಯಂತೂ ಟ್ಯಾಂಗೋನನ್ನು ಬೆಳಗಿನ ಜಾವ ಎರಡು ಗಂಟೆಗೆ ನಿದ್ದೆಯಿಂದ ಎಬ್ಬಿಸಿ ‘ಪಾಕೀಸ್ತಾನದ ಮಾಜಿ ನಾಯಕರ ಮುಟ್ಟಿನ ಚಕ್ರ ಪಶ್ಚಿಮ ಬಂಗಾಳದ ಮಾನ್ಸೂನ್ನ್ನು ಹೇಗೆ ಪ್ರಭಾವಿಸಬಲ್ಲದು’ ಎಂಬ ವಿಷಯದ ಕುರಿತಂತೆ ಒಂದು ಸಾವಿರ ಪದಗಳಷ್ಟು ಸುದೀರ್ಘ ಪ್ರಬಂಧ ಬರೆಯಲು ಕೇಳಿಕೊಳ್ಳಲಾಗಿತ್ತಂತೆ. ಏನನ್ನು ಎದುರಿಗೆಸೆದರೂ ಅದನ್ನು ಹೇಗೆ ನಿಭಾಯಿಸಬಲ್ಲನೆಂಬುದೇ ಪರೀಕ್ಷೆ. ಎದುರಿಸು. ಗೆದ್ದರೆ ಒಳಕ್ಕೆ ಇಲ್ಲವೇ ಹೊರಕ್ಕೆ! ನಾಲ್ಕೇ ತಿಂಗಳಲ್ಲಿ ಎಲ್ಲವನ್ನೂ ಯಶಸ್ವಿಯಾಗಿ ಮುಗಿಸಿದ ಮೈಕ್ ಟ್ಯಾಂಗೋನನ್ನು ವಿಶೇಷ ಪರಿಣತಿಗಾಗಿ ಕಾಶ್ಮೀರಕ್ಕೆ ಕಳಿಸಲಾಗಿತ್ತು. ಮರಳಿ ಬಂದಾಗ ಅವರ ಕಮ್ಯಾಂಡಿಂಗ್ ಆಫಿಸರ್ ವಿಶೇಷ ಪಡೆಗೆ ಆತ ಸೂಕ್ತವಲ್ಲವೆಂದು ಕೂಗಾಡಿಬಿಟ್ಟರು. ಅಷ್ಟು ಸಾಲದೆಂಬಂತೆ ಅದೇ ಸ್ಥಳದಲ್ಲಿ ಐವತ್ತು ದಂಡ ಹೊಡೆಯುವಂತೆ ಆದೇಶಿಸಿದರು. ಕೋಪ-ಆವೇಶಗಳಿಂದ ಹತಾಶನಾಗಿದ್ದ ಟ್ಯಾಂಗೋ ಮರುಮಾತಾಡದೇ ದಂಡ ಹೊಡೆದು ಮುಗಿಸುವಲ್ಲಿ ಅಧಿಕಾರಿ ವಿಶೇಷ ಪಡೆಗೆ ಸೇರಿದುದರ ಕುರುಹಾದ ವಿಶೇಷ ಪಾನೀಯ ಅವನಿಗೆ ಕುಡಿಸಿ ತಬ್ಬಿಕೊಂಡರು. ಆ ಕ್ಷಣ ಹೇಗಿರಬಹುದು ಎನ್ನುವುದನ್ನು ಒಮ್ಮ ಊಹಿಸಿ. ಅದೇ ಟ್ಯಾಂಗೋಗೆ ಸಜರ್ಿಕಲ್ ಸ್ಟ್ರೈಕ್ನ ಜವಾಬ್ದಾರಿ ಹೆಗಲೇರಿತ್ತು.

5

ಉರಿಯಲ್ಲಿ ಒಳನುಸುಳಿದ ಪಾಕೀ ಭಯೋತ್ಪಾದಕರು ಭಾರತೀಯ ಸೇನಾಪಡೆಯ ಸೈನಿಕರ ಮೇಲೆ ದಾಳಿ ನಡೆಸಿ ಅವರನ್ನು ಕೊಂದು ಹಾಕಿದಾಗ ದೇಶದಲ್ಲಿ ಅಲ್ಲೋಲಕಲ್ಲೋಲವೆದ್ದಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಐವತ್ತಾರು ಇಂಚಿನ ಎದೆಯ ಕುರಿತಂತೆ ಎಲ್ಲೆಡೆ ಜನ ಆಡಿಕೊಳ್ಳುವಂತಾಗಿತ್ತು. ಭಾರತದ ಸಾರ್ವಭೌಮತೆಗೆ ಇದು ಬಲು ದೊಡ್ಡ ಹೊಡೆತವೇ ಸರಿ. ಆಗ ಅಲ್ಲಿಂದ 800 ಕಿಮೀಗಳಷ್ಟು ಮೇಲೆ ಟ್ಯಾಂಗೋ ಪುಟ್ಟದೊಂದು ಟಿವಿಯಲ್ಲಿ ಇಡಿಯ ಘಟನೆಯನ್ನು ನೋಡುತ್ತ ಕೈ ಕೈ ಹಿಸುಕಿಕೊಂಡು ಕುಳಿತಿದ್ದ. ಉಧಮ್ಪುರದ ಸೈನ್ಯದ ಮುಖ್ಯಾಲಯದಿಂದ ಕರೆ ಬಂತು. ಹಾಗೊಂದು ಕರೆ ಬಂದಾಗ ವಿಶೇಷ ಪಡೆ ಹೊರಡಬೇಕಷ್ಟೇ. ಸೆಪ್ಟೆಂಬರ್ 18ಕ್ಕೆ ದ್ರಾಸ್ಗೆ ಬಂದು ಸೇರಿಕೊಂಡಿತು ತುಕಡಿ ಅಲ್ಲಿಂದ ಶ್ರೀನಗರದತ್ತ ಪಯಣ. ಆವೇಳೆಗಾಗಲೇ ದೆಹಲಿಯ ರೈಸಿನಾ ಹಿಲ್ನಲ್ಲಿ ಮೋದಿ ಮತ್ತು ದೋವಲ್ರ ತುತರ್ು ಸಭೆ ಮುಗಿದಿತ್ತು. ಪಾಕೀಸ್ತಾನಕ್ಕೆ ಇದುವರೆಗಿನ ಅತ್ಯಂತ ಕರಾಳ ಪಾಠ ಕಲಿಸುವ ಮತ್ತು ಇಡಿಯ ಕಾಯರ್ಾಚರಣೆಯನ್ನು ಬಲು ಗೌಪ್ಯವಾಗಿರಿಸುವ ಯೋಜನೆ ರೂಪಿಸಲಾಗಿತ್ತು.  ಅದರ ಮೊದಲ ಹೆಜ್ಜೆಯಾಗಿಯೇ ಮಾಜಿ ಸೈನ್ಯ ಮುಖ್ಯಸ್ಥ ಜನರಲ್ ವಿಕೆ ಸಿಂಗ್ ಪಾಕೀಸ್ತಾನವನ್ನು ಕಟು ಮಾತುಗಳಲ್ಲಿ ನಿಂದಿಸಿದರು. ರಕ್ಷಣಾ ಸಚಿವರು ಸರಿಯಾದ ಸಮಯದಲ್ಲಿ ಸರಿಯಾದ ಉತ್ತರ ನೀಡುವೆವೆಂದರು. ಇದ್ಯಾವುದೂ ಪಾಕೀಸ್ತಾನಕ್ಕೆ ಹೊಸತಾಗಿರಲಿಲ್ಲ. ಭಾರತ ಸಕರ್ಾರದ ಎಂದಿನ ಪ್ರತಿಕ್ರಿಯೆಯಂತಿತ್ತು.
ಇತ್ತ ಸೇನೆ ಹಿಂದೆಂದೂ ನಡೆದಿರದ ಬಲು ಅಪರೂಪದ ಕಾಯರ್ಾಚರಣೆಗೆ ರೂಪುರೇಷೆ ನಿರ್ಧರಿಸುತ್ತಿತ್ತು. ಸ್ವತಃ ಆಗಿನ ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಯೋಜನೆಯಲ್ಲಿ ಆಸ್ಥೆ ವಹಿಸಿದರು. ಆಯ್ಕೆಗಳನ್ನು ಪಟ್ಟಿಮಾಡಲಾಯ್ತು. ಆಕ್ರಮಣ ಮಾಡಬೇಕಾದ ಸ್ಥಳಗಳು, ಗಡಿಯಿಂದ ಅವುಗಳಿಗಿರುವ ದೂರ, ಅಲ್ಲಿರಬಹುದಾದ ನುಸುಳುಕೋರ ಭಯೋತ್ಪಾದಕರ ಅಂದಾಜು ಸಂಖ್ಯೆ, ದಾಳಿ ಮಾಡಬೇಕಾದ ಸೈನಿಕರ ಸಂಖ್ಯೆ ಮತ್ತು ಅವರಿಗೆ ಬೇಕಾದ ವ್ಯವಸ್ಥೆ ಇವಿಷ್ಟರ ಜೊತೆಗೆ ಕೊನೆಯ ಸ್ತಂಭದಲ್ಲಿ ದಾಳಿಯಲ್ಲಿ ಹುತಾತ್ಮರಾಗಬಹುದಾದವರ ಸಂಖ್ಯೆಯನ್ನೂ ನಮೂದಿಸಲಾಗಿತ್ತು. ಈ ಸಂಖ್ಯೆ ಸೊನ್ನೆಯಿಂದ ಹಿಡಿದು ಎರಡಂಕಿಗಳವರೆಗೂ ವ್ಯಾಪಿಸಿತ್ತು. ಇಡಿಯ ಯೋಜನೆ ಎಷ್ಟು ಗೌಪ್ಯವಾಗಿತ್ತೆಂದರೆ ಯಾರಿಗೆ ಎಷ್ಟು ಮಾಹಿತಿ ಬೇಕೋ ಅಷ್ಟೇ ಮಾಹಿತಿ ನೀಡಲಾಗಿತ್ತು. ಮೇಜರ್ ಟ್ಯಾಂಗೋ ತನ್ನ ಹತ್ತೊಂಭತ್ತು ಸೈನಿಕರೊಂದಿಗೆ ಬಾರಾಮುಲ್ಲಾ ಬಂದು ಸೇರಿಕೊಂಡರು. ಗಡಿಯವರೆಗೂ ಅವರಿಗೆ ನಡೆದೇ ಹೋಗುವ ಆದೇಶವಿತ್ತು. ಹೆಲಿಕಾಪ್ಟರಿನಿಂದ ಅವರನ್ನು ಗಡಿಗೆ ಬಿಡುವ ಯೋಚನೆಯೂ ಮಾಡುವಂತಿರಲಿಲ್ಲ ಏಕೆಂದರೆ ಅದು ಪೂರ್ಣ ಗುಪ್ತ ಕಾಯರ್ಾಚರಣೆಯಾಗಿತ್ತು.

Modi at Thiruvananthapuram

ಸೆಪ್ಟೆಂಬರ್ 21ಕ್ಕೆ ಯುಎನ್ನ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ನವಾಜ್ ಷರೀಫ್ ಕಾಶ್ಮೀರದಲ್ಲಿನ ಅತ್ಯಾಚಾರದ ಬಗ್ಗೆ ಮಾತನಾಡಿದನೇ ಹೊರತು ಉರಿ ದಾಳಿಯ ಕುರಿತಂತೆ ಚಕಾರವೆತ್ತಲಿಲ್ಲ. 24ರ ಸಂಜೆ ಪ್ರಧಾನ ಮಂತ್ರಿ ಮೋದಿಯವರು ಕೇರಳದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಬೇಕಿತ್ತು. ಅದಾಗಲೇ ಅವರ ಕೆಚ್ಚೆದೆಯ ಕುರಿತಂತೆ ಅನೇಕರು ವ್ಯಂಗ್ಯವಾಡಿದ್ದರು. ಅವರ ಅಂದಿನ ಭಾಷಣವೂ ಸವಾಲಿನದ್ದೇ ಆಗಿತ್ತು ಏಕೆಂದರೆ ಅವರು ಸಜರ್ಿಕಲ್ ಸ್ಟ್ರೈಕ್ನ ವಿವರ ಹೇಳುವಂತಿರಲಿಲ್ಲ, ಹಾಗಂತ ಸುಮ್ಮನಿರುವಂತೆಯೂ ಇರಲಿಲ್ಲ. ಮೋದಿ ಎಂದಿಗಿಂತ ಭಿನ್ನವಾದ ಬಡತನದ ವಿರುದ್ಧ ಜೊತೆಗೂಡಿ ಕಾದಾಡುವ ಕರೆಯನ್ನು ಪಾಕೀಸ್ತಾನಕ್ಕೆ ಕೊಟ್ಟರು. ಅವರೀಗ ತಾವೇ ರೂಪಿಸಿದ ನಾಟಕದ ಪಾತ್ರಧಾರಿಗಳಾಗಿಬಿಟ್ಟಿದ್ದರು. ಯುಎನ್ನಲ್ಲಿ ಮಾತನಾಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜರೂ ಒಂದಿನಿತೂ ಸುಳಿವು ಬಿಟ್ಟುಕೊಡದ ಪಾಕೀಸ್ತಾನದ ದ್ರೋಹವನ್ನು ಎತ್ತಿ ತೋರಿಸುವ ಭಾಷಣ ಮಾಡಿ ಸುಮ್ಮನಾಗಿಬಿಟ್ಟರು. ಇವಿಷ್ಟೂ ಯೋಜನೆಯನ್ನು ಗುಪ್ತವಾಗಿರಿಸುವಲ್ಲಿ ಮಾಡಿದ ಪ್ರಯತ್ನಗಳು. ಆ ವೇಳೆಗಾಗಲೇ ಸ್ಪೆಷಲ್ ಫೋಸರ್್ ಗಡಿಯ ಬಳಿಬಂದು ಐದಾರು ದಿನ ಕಳೆದು ಬಿಟ್ಟಿತ್ತು. ಪಡೆಯ ಧೀರರೆಲ್ಲ ಒಂದು ಆಜ್ಞೆಗಾಗಿ ಕಾಯುತ್ತ ಕುಳಿತರು. ಒಟ್ಟಾರೆ ನಾಲ್ಕು ಟೆರರ್ ಲಾಂಚ್ ಪ್ಯಾಡ್ಗಳ ಮೇಲೆ ದಾಳಿಗೆ ತಯಾರಿ ಮಾಡಲಾಗಿತ್ತು. ಟ್ಯಾಂಗೋ ಟೀಮಿಗೆ ಎರಡನ್ನು ಉಡಾಯಿಸುವ ಜವಾಬ್ದಾರಿ ನೀಡಿದರೆ ಇನ್ನೆರಡಕ್ಕೆ ಮತ್ತೆರಡು ವಿಶೇಷ ಪಡೆಗಳನ್ನು ಬಳಸಿಕೊಳ್ಳಲಾಗಿತ್ತು. ಸೆಪ್ಟೆಂಬರ್ 26ಕ್ಕೆ ತಯಾರಾಗಿ ನಿಲ್ಲುವ ಆಜ್ಞೆ ಸಿಕ್ಕಿತು. ಎಲ್ಲ ಬಗೆಯ ಶಸ್ತ್ರಾಸ್ತ್ರಗಳೊಂದಿಗೆ ಸನ್ನದ್ಧವಾದ ಪಡೆ ಯಾವ ಕ್ಷಣದಲ್ಲೂ ಬರಬಹುದಾದ ಸಂದೇಶಕ್ಕಾಗೆ ಕಾತರಿಸುತ್ತಿತ್ತು. ಗಡಿ ದಾಟಿ, ಒಳನುಸುಳಿ ಶತ್ರುಗಳ ನಾಶ ಮಾಡುವುದು ವಿಶೇಷವಲ್ಲ; ಆ ವೇಳೆಗೆ ಜಾಗೃತವಾಗಿಬಿಡುವ ಸೈನಿಕರ ಕಣ್ತಪ್ಪಿಸಿ ಮರಳಿ ಬರುವುದೇ ನಿಜವಾದ ಸವಾಲು. ಅಲ್ಲದೇ ಮತ್ತೇನು? ಮರಳಿ ಗುಡ್ಡ ಹತ್ತುವಾಗ ಶತ್ರುಗಳೆಡೆಗೆ ಬೆನ್ನು ಇರುತ್ತದೆ. ಆತನ ದಾಳಿಯ ತೀವ್ರತೆ ಗುರುತಿಸುವಷ್ಟೂ ಸಮಯವಿಲ್ಲ. ಅವರಿಗೆ ನಿಗದಿಯಾಗಿರುವ ಲಾಂಚ್ ಪ್ಯಾಡುಗಳಂತೂ ಪಾಕಿನ ಗಡಿಯೊಳಗೆ ಸಾಕಷ್ಟು ದೂರದಲ್ಲಿದ್ದು ಎರಡರ ನಡುವೆ ಅರ್ಧ ಕಿಮೀನಷ್ಟು ಅಂತರವಿತ್ತು.  27ರ ಮಧ್ಯಾನ್ಹದ ವೇಳೆಗೆ ಮೂರು ತುಕಡಿಗೆ ಒಳ ನುಗ್ಗುವ ಆದೇಶ ಸಿಕ್ಕಿತು. ರಾತ್ರಿ ಒಂಭತ್ತರ ವೇಳೆಗೆ ಗಡಿ ದಾಟಿದ ಪಡೆ ನಾಲ್ಕು ಗಂಟೆಗಳ ಕಾಲ ಗುಡ್ಡವಿಳಿದು ತಮ್ಮ ಗುರಿಯಿಂದ ಒಂದು ಕಿಮೀ ದೂರಕ್ಕೆ ಬಂದು ನಿಂತಿತು. ತೆವಳುತ್ತ ಇನ್ನೂರು ಮೀಟರ್ನಷ್ಟು ಹತ್ತಿರ ಬರುವ ವೇಳೆಗೆ ಅತ್ತಲಿಂದ ಗುಂಡು ಸಿಡಿದ ಸದ್ದು ಬಂತು. ಶತ್ರುಗಳಿಗೆ ಸುದ್ದಿ ಸಿಕ್ಕಿತಾ ಎಂದು ಆಲೋಚಿಸುತ್ತಿರುವಾಗಲೇ ಅದು ಕಣ್ತಪ್ಪಿನಿಂದ ಆದದ್ದೆಂದು ಗೊತ್ತಾಗಿ ನಿಟ್ಟುಸಿರು ಬಿಟ್ಟಿತು ಪಡೆ. ಅವರ ಬಳಿ ಇದ್ದ ಸ್ಯಾಟಲೈಟ್ ಫೋನು ಕೊಡುತ್ತಿದ್ದ ಸ್ಥಳದ ಮಾಹಿತಿಯಿಂದಾಗಿ ಪ್ರೇರಣೆ ಪಡೆದ ಪಡೆ ತಡ ಮಾಡದೇ ಮುನ್ನುಗ್ಗಿತು. ಅಲ್ಲಿಯೇ ಇದ್ದ ಬಂಡೆಯೊಂದನ್ನೇರಲು ತನ್ನ ಜೊತೆಗಾರನನ್ನೇ ಬಳಸಿಕೊಂಡ ಟ್ಯಾಂಗೋ ಲಾಂಚ್ ಪ್ಯಾಡ್ ಕಾಯಲು ನಿಂತ ಇಬ್ಬರು ಭಯೋತ್ಪಾದಕರನ್ನು ನೋಡಿದರು. ತಡಮಾಡದೇ ಗುಂಡು ಹಾರಿಸಿ ಇಬ್ಬರನ್ನೂ ಕೊಂದು ಬಿಸಾಡಿದರು. ಇಪ್ಪತ್ತೂ ಜನ ಹರಡಿಕೊಂಡರು. ಕರಾರುವಾಕ್ಕಾದ ದಾಳಿ ಅದು. ಹಿಂದಿನಿಂದ ದಾಳಿ ನಡೆಸಲು ಬಂದವರನ್ನೂ ಕೊಂದಿತು ಈ ಪಡೆ. ಎರಡೂ ಲಾಂಚ್ ಪ್ಯಾಡುಗಳನ್ನು ಪೂರ್ಣ ನಾಶ ಮಾಡಲಾಯ್ತು. ಮೂರೂ ಪಡೆಗಳು ಸೇರಿ ಒಂದೇ ಹೊತ್ತಲ್ಲಿ ನಾಲ್ಕು ಲಾಂಚ್ ಪ್ಯಾಡ್ಗಳನ್ನು ನಾಶ ಮಾಡಿ, ಇಬ್ಬರು ಪಾಕಿ ಸೈನಿಕರನ್ನು, ನಲವತ್ತು ಭಯೋತ್ಪಾದಕರನ್ನು ಯಮಪುರಿಗೆ ಕಳಿಸಿದ್ದವು.

ಸೈನಿಕರಲ್ಲಿಯೇ ಒಬ್ಬ ಈಗ ಕವರಿಂಗ್ ಫೈರ್ ಕೊಡಲಾರಂಭಿಸಿದ. ಮೇಜರ್ ಟ್ಯಾಂಗೋ ತನ್ನ ಪಡೆಯೊಂದಿಗೆ ಅತ್ಯಂತ ವೇಗವಾಗಿ ದಾಪುಗಾಲಿಡುತ್ತ ಮರಳಿ ಭಾರತದ ಗಡಿಯೊಳಕ್ಕೆ ಸೇರಿಕೊಂಡುಬಿಟ್ಟರು.

ಆಮೇಲಿನದ್ದು ಇತಿಹಾಸ. ಹೌದು. ಭಾರತದ ಕ್ಷಾತ್ರತೇಜದ ಪುಟಗಳಲ್ಲಿ ಶಾಶ್ವತವಾಗಿ ದಾಖಲಾದ ಸಾಹಸವಿದು!

Comments are closed.