ವಿಭಾಗಗಳು

ಸುದ್ದಿಪತ್ರ


 

ಗೂಢಚಾರನೊಬ್ಬನ ಹಿಂದೆ ಎಷ್ಟೆಲ್ಲಾ ರಾಜತಾಂತ್ರಿಕ ನಡೆ!

ಮೋದಿಯ ಕುರಿತಂತೆ ಭರವಸೆ ಈಗ ಪಾಕೀಸ್ತಾನದಲ್ಲಿರುವ ಹಿಂದೂಗಳಿಗೆ ಮಾತ್ರವಲ್ಲ ಟಿಬೇಟಿನಲ್ಲಿರುವ ಬುದ್ಧಾನುಯಾಯಿಗಳಿಗೂ ಇದೆ. ಈಗ ಚೀನಾಕ್ಕಿದ್ದದ್ದು ಒಂದೇ ದಾರಿ. ‘ಪಾಕಿಸ್ತಾನದ ಗಡಿಯ ಮೇಲೆ ಸರ್ಜಿಕಲ್ ದಾಳಿ ಮತ್ತು ನೋಟ್ ಬಂದಿಯ ನಂತರ ಯಾವ ಹಿಡಿತ ಭಾರತ ಹೊಂದಿದೆಯೋ ಅದನ್ನು ಸಡಿಲಗೊಳಿಸುವಂತಾಗಬೇಕು. ಆಗ ಮಾತ್ರ ಟಿಬೇಟಿನತ್ತ ತಲೆ ಹಾಕುವುದನ್ನು ಭಾರತ ಬಿಡುತ್ತದೆ’. ಆಗಲೇ ಅವರ ತಲೆ ಹೊಕ್ಕಿದ್ದು ಕಾಶ್ಮೀರದಲ್ಲಿ ತೀವ್ರಗೊಳ್ಳಬೇಕಿರುವ ತೀವ್ರಗಾಮಿ ಚಟುವಟಿಕೆ ಮತ್ತು ಭಾರತದ ಗಮನವನ್ನು ಮತ್ತೊಂದೆಡೆ ಸೆಳೆಯಬಲ್ಲ ಯಾವುದಾದರೂ ಯೋಜನೆ. ಪಾಕ್ನ ಹೆಗಲ ಮೇಲೆ ಬಂದೂಕಿಟ್ಟು ಗುಂಡು ಹಾರಿಸಬೇಕು ಅಷ್ಟೇ! ಈಗ ಆಯ್ಕೆಯಾಗಿದ್ದು ಕುಲಭೂಷಣ್ ಜಾಧವ್.

ಮೋದಿಯವರು ಅಧಿಕಾರಕ್ಕೆ ಬಂದ ಆರಂಭದ ತಿಂಗಳುಗಳವು. ದೆಹಲಿಯ ಅಧಿಕಾರದ ಪಡಸಾಲೆಗೆ ಹತ್ತಿರವಿರುವ ಪ್ರಮುಖರೊಬ್ಬರು ಮೋದಿಯವರ ರಾಜತಾಂತ್ರಿಕ ನಡೆಯ ಕುರಿತಂತೆ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದರು. ಎರಡೆರಡು ರಾಷ್ಟ್ರಗಳನ್ನು ಏಕಕಾಲಕ್ಕೆ ವಿರೋಧಿಸುವುದು ಸರಿಯಲ್ಲ ಸಮಾಧಾನವಾಗಿ ಹೆಜ್ಜೆ ಇಟ್ಟು ಜನರ ಮನಸನ್ನು ಗೆದ್ದು ಆಮೇಲೆ ಒಂದೊಂದೇ ಸಮಸ್ಯೆ ಪರಿಹರಿಸಬೇಕು ಅಂತ ಅವರ ಅಂಬೋಣ. ಹೌದು. 70 ವರ್ಷಗಳಿಂದ ಭಾರತದ್ದು ಇದೇ ಮಾದರಿ. ಜವಹರಲಾಲ್ ನೆಹರೂರವರಿಗೆ ಆಳಲು ಬೇಕಾದಷ್ಟು ಸಮಯವಿತ್ತು. ಅವರಾಗಿಯೇ ದೇಹ ಬಿಡುವವರೆಗೆ ಕುರ್ಚಿ ಬಿಡುವ ಪ್ರಮೇಯವಿರಲಿಲ್ಲ. ಇಂದಿರಾಗಾಂಧಿಯವರದ್ದೂ ಅದೇ ಕಥೆ. ರಾಜೀವ್ ಗಾಂಧಿಯವರೂ ಬದುಕಿದ್ದರೆ ಮತ್ತೆ ಕುರ್ಚಿಯ ಮೇಲೆ ಆಸೀನರಾಗಿರುತ್ತಿದ್ದರು. ಆಮೇಲೆ ಅವರ ಮಗ, ಮೊಮ್ಮಗ ಪರಂಪರೆ ಮುಂದುವರೆದಿರುತ್ತಿತ್ತು. ಅವರಿಗೆಲ್ಲ ಸಾಕಷ್ಟು ಸಮಯವಿತ್ತು. ದೀರ್ಘಕಾಲ ತಾವೇ ಮೆರೆಯಬಹುದಾದ ಅವಕಾಶವೂ ಇತ್ತು. ಮಧ್ಯೆ ಸ್ವಲ್ಪ ಎಡವಟ್ಟಾಗಿ ಅಧಿಕಾರ ಇತರರ ಕೈ ಸೇರಿತು. ಆದರೆ ಹೀಗೆ ಕೈಗೆತ್ತಿಕೊಂಡ ಬೇರೆಯವರೂ ಹಳೆಯ ಆಳುವ ನೀತಿಯನ್ನೇ ಬಳಸಿದರು. ಸುಖ-ನೆಮ್ಮದಿಯಿಂದಿದ್ದ ವ್ಯವಸ್ಥೆಯನ್ನು ಅಲುಗಾಡಿಸುವ ಕೆಲಸಕ್ಕೆ ಅವರು ಕೈ ಹಾಕಲೇ ಇಲ್ಲ. ಹೌದು. ನಾನು ಅಟಲ್ ಬಿಹಾರಿ ವಾಜಪೇಯಿಯವರ ಕುರಿತಂತೆಯೇ ಮಾತನಾಡುತ್ತಿದ್ದೇನೆ. ಅಧಿಕಾರ ಬಲು ಬೇಗ ಕಳೆದು ಹೋಯಿತು. ಮತ್ತೆ ಸುಖಾಸನಕ್ಕೆ ಹಪಹಪಿಸುವ ವೇಳೆಗಾಗಲೇ ಹತ್ತು ಸುದೀರ್ಘ ವರ್ಷ ಕಳೆದೇ ಹೋಯ್ತು. ನಮಗಂಟಿದ ಜಾಡ್ಯ ಕಳೆಯಲೇ ಇಲ್ಲ.
ನರೇಂದ್ರ ಮೋದಿ ತಮಗಿರುವ ಸಮಯದ ಮಿತಿ ಅರಿತಿದ್ದಾರೆ. ಕ್ರಾಂತಿಯ ವೇಗ ಅವರಿಗೆ ಬೇಕಿದೆ. ಹಾಗಂತಲೇ ಜಗದ ವೇಗಕ್ಕೆ ತಮ್ಮ ವೇಗವನ್ನು ತಮ್ಮದೇ ಶೈಲಿಯಲ್ಲಿ ಹೊಂದಿಸಿಕೊಂಡದ್ದು. ಈಗ ಜಗದ ವೇಗವೇ ತಮ್ಮ ವೇಗಕ್ಕಿಂತ ಕಡಿಮೆಯಾಗುವಂತೆ ಮಾಡಿಕೊಂಡು ಬಿಟ್ಟಿದ್ದಾರೆ. ಹೀಗಾಗಿ ಪುತಿನ್, ಟ್ರಂಪ್ರನ್ನು ಹೇಗೆ ಕಾಣುತ್ತಿದ್ದಾರೋ ಅದೇ ಮಟ್ಟದಲ್ಲಿ ನರೇಂದ್ರ ಮೋದಿಯವರನ್ನು ಕಾಣುತ್ತಿದ್ದಾರೆ.

Modi_PTI-L

ಚೀನಾದೊಂದಿಗೆ ಮೋದಿ ನಡಕೊಳ್ಳುತ್ತಿರುವ ರೀತಿ ಅದನ್ನು ಸ್ಪಷ್ಟವಾಗಿ ಪ್ರತಿಬಿಂಬಿಸಿದೆ. ಇತ್ತೀಚೆಗೆ ದಲೈಲಾಮಾರನ್ನು ತವಾಂಗ್ಗೆ ಕಳಿಸುವ ಯೋಜನೆ ರೂಪಿಸಿತ್ತಲ್ಲ ಸರ್ಕಾರ, ಅದರ ಹಿಂದೆ ಇದ್ದದ್ದು ಇದೇ ಚಾಕಚಕ್ಯತೆ. ಚೀನಾ ಪಾಕ್ ಎಕಾನಾಮಿಕ್ ಕಾರಿಡಾರ್ ಮೂಲಕ ಗಡಿಯಲ್ಲಿ ಚೀನಾ ಕಿರಿಕಿರಿ ಮಾಡುವುದನ್ನು ತಡೆಗಟ್ಟಲು ಗೋಗರೆಯುವ ಮಾರ್ಗ ಅನುಸರಿಸಲಿಲ್ಲ ಭಾರತ. ಸೌಹಾರ್ದ ಮಾತುಕತೆಗಳಾದವು, ಜಗತ್ತಿನ ರಾಷ್ಟ್ರಗಳನ್ನು ತನ್ನೆಡೆ ಸೆಳೆಯುವ ಭೇದೋಪಾಯ ಅವಲಂಬಿಸಿತು. ಏನೂ ಆಗಲಿಲ್ಲವೆಂದಾಗ ಚೀನಾಕ್ಕೆ ಗಡಿ ಅಭದ್ರತೆ ಉಂಟಾಗುವಂತೆ ಮಾಡಲು ತವಾಂಗ್ಗೆ ಲಾಮಾರನ್ನು ಕಳಿಸಿತು. ಬಹಳ ಜನರಿಗೆ ಗೊತ್ತಿಲ್ಲ. ಕಾಶ್ಮೀರದ ಸಮಸ್ಯೆ ನಮ್ಮನ್ನು ಹೇಗೆ ಹಿಂಡುತ್ತಿದೆಯಲ್ಲ ಅಂಥ ನಾಲ್ಕು ಪಟ್ಟು ದೊಡ್ಡ ಕಾಶ್ಮೀರ ಚೀನಾದೊಳಗಿದೆ, ಟಿಬೇಟ್ ರೂಪದಲ್ಲಿ. ಅದನ್ನು ಎಷ್ಟು ತೀವ್ರವಾದ ವ್ರಣವಾಗಿಸುತ್ತೇವೆಯೋ ಅಷ್ಟು ಚೀನಾ ಹೈರಾಣಾಗುತ್ತಿದೆ. ಈ ಬಾರಿ ಆಗಿದ್ದೂ ಅದೇ. ದಲೈಲಾಮಾ ಅರುಣಾಚಲ ಭೇಟಿ ಯೋಜನೆಯಾದೊಡನೆ ಚೀನಾ ವಿಲವಿಲನೆ ಒದ್ದಾಡಿತು. ಅತ್ತ ಟಿಬೇಟಿನಲ್ಲಿ ಹೊಸ ಸಂಚಲನ. ಮೋದಿಯ ಕುರಿತಂತೆ ಭರವಸೆ ಈಗ ಪಾಕೀಸ್ತಾನದಲ್ಲಿರುವ ಹಿಂದೂಗಳಿಗೆ ಮಾತ್ರವಲ್ಲ ಟಿಬೇಟಿನಲ್ಲಿರುವ ಬುದ್ಧಾನುಯಾಯಿಗಳಿಗೂ ಇದೆ. ಕಾಶ್ಮೀರದ ಸಮಸ್ಯೆಗೆ ಪಾಕಿಗೆ ನೀವು ಬೆಂಬಲ ಕೊಟ್ಟಿದ್ದೇ ಆದರೆ ಟಿಬೆಟ್ನಲ್ಲಿ ಬೆಂಕಿ ಭುಗಿಲೇಳಲು ನಾವೂ ಪ್ರಯತ್ನ ಹಾಕುತ್ತೇವೆ ಎಂಬ ಸ್ಪಷ್ಟ ಸಂದೇಶ ಕೊಟ್ಟಿತು ಭಾರತ. ಈಗ ಚೀನಾಕ್ಕಿದ್ದದ್ದು ಒಂದೇ ದಾರಿ. ‘ಪಾಕಿಸ್ತಾನದ ಗಡಿಯ ಮೇಲೆ ಸರ್ಜಿಕಲ್ ದಾಳಿ ಮತ್ತು ನೋಟ್ ಬಂದಿಯ ನಂತರ ಯಾವ ಹಿಡಿತ ಭಾರತ ಹೊಂದಿದೆಯೋ ಅದನ್ನು ಸಡಿಲಗೊಳಿಸುವಂತಾಗಬೇಕು. ಆಗ ಮಾತ್ರ ಟಿಬೇಟಿನತ್ತ ತಲೆ ಹಾಕುವುದನ್ನು ಭಾರತ ಬಿಡುತ್ತದೆ’.

modi-dalai-lama-650_650x400_61491402672

ಆಗಲೇ ಅವರ ತಲೆ ಹೊಕ್ಕಿದ್ದು ಕಾಶ್ಮೀರದಲ್ಲಿ ತೀವ್ರಗೊಳ್ಳಬೇಕಿರುವ ತೀವ್ರಗಾಮಿ ಚಟುವಟಿಕೆ ಮತ್ತು ಭಾರತದ ಗಮನವನ್ನು ಮತ್ತೊಂದೆಡೆ ಸೆಳೆಯಬಲ್ಲ ಯಾವುದಾದರೂ ಯೋಜನೆ. ಪಾಕ್ನ ಹೆಗಲ ಮೇಲೆ ಬಂದೂಕಿಟ್ಟು ಗುಂಡು ಹಾರಿಸಬೇಕು ಅಷ್ಟೇ! ಈಗ ಆಯ್ಕೆಯಾಗಿದ್ದು ಕುಲಭೂಷಣ್ ಜಾಧವ್.

ಭಾರತದ ನೌಕಾ ಸೇನೆಯಲ್ಲಿ ಉದ್ಯೋಗಿಯಾಗಿದ್ದ ಕುಲಭೂಷಣ್ ಜಾಧವ್ ಅವಧಿಗೆ ಮುಂಚೆ ನಿವೃತ್ತರಾಗಿ 2000 ನೇ ಇಸವಿಯಲ್ಲಿ ಸ್ವಂತ ಉದ್ಯೋಗ ಮಾಡುವ ಇಚ್ಛೆಯಿಂದ ಇರಾನಿಗೆ ಹೋದರು. ಛಾಬಹಾರ್ ಬಂದರಿನಲ್ಲಿ ಸಣ್ಣದೊಂದು ಉದ್ದಿಮೆ ತೆರೆದು ಶ್ರದ್ಧೆಯಿಂದಲೇ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದರು. ಕರಾಚಿ, ಲಾಹೋರ್ಗಳೊಂದಿಗೂ ಅವರ ಸಂಪರ್ಕ ಚೆನ್ನಾಗಿಯೇ ಇತ್ತು. ಇದ್ದಕ್ಕಿದ್ದಂತೆ 2015ರಲ್ಲಿ ತಾಲೀಬಾನು ಇವರನ್ನು ಅಪಹರಿಸಿತು. ಭಾರತದ ನೌಕಾಸೇನೆಯಿಂದ ನಿವೃತ್ತನೆಂದು ಗೊತ್ತಾದೊಡನೆ ಆತನನ್ನು ಪಾಕೀಸ್ತಾನಕ್ಕೆ ಮಾರಿಬಿಟ್ಟಿತು! ಭಾರತ-ಪಾಕೀಸ್ತಾನಗಳ ಶಾಂತಿ ಮಾತುಕತೆಯನ್ನು ಹಾಳುಗೆಡವಲು ಈತನನ್ನು ಬಳಸಿಕೊಳ್ಳುವ ನಿರ್ಧಾರ ಐಎಸ್ಐನದ್ದು. ಮೋದಿ ಪಾಕ್ ಭೇಟಿಯ ನಂತರವಂತೂ ಐಎಸ್ಐ ಚುರುಕಾಯ್ತು. ಸರಿಸುಮಾರು ಇದೇ ವೇಳೆಗೆ ಪಟಾನ್ಕೋಟ್ನಲ್ಲಿ ವಾಯು ದಾಳಿಯಾಯ್ತು. ಪಾಕೀಸ್ತಾನೀ ಸೇನೆ ಭಾರತ ಅತೀ ದೊಡ್ಡ ಮರುದಾಳಿ ಸಂಘಟಿಸುವುದೆಂದು ಕಾಯುತ್ತಲೇ ಕುಳಿತಿತ್ತು. ಹಾಗಾಗಲಿಲ್ಲ. ಪಾಕೀಸ್ತಾನದ ತಂಡಕ್ಕೆ ಪಟಾನ್ಕೋಟ್ಗೆ ಬಂದು ಅಧ್ಯಯನ ಮಾಡಿ ಹೋಗಲು ಅನುಮತಿ ಕೊಟ್ಟು ಇದರಲ್ಲಿ ಅವರದ್ದೇ ಕೈವಾಡ ಇರುವುದಕ್ಕೆ ಸಾಕಷ್ಟು ಸಾಕ್ಷಿಗಳನ್ನು ಕೈಗಿತ್ತಿತು. ಪಾಕೀಸ್ತಾನೀ ಪ್ರೇರಿತ ಜೈಶ್-ಎ-ಮೊಹಮ್ಮದ್ ಈ ದಾಳಿಯ ಹಿಂದಿರುವ ಸಂಘಟನೆ ಎಂಬುದು ಮನವರಿಕೆಯಾಗುತ್ತಿದ್ದಂತೆ ಜಗತ್ತಿನ ರಾಷ್ಟ್ರಗಳು ಪಾಕೀಸ್ತಾನವನ್ನು ಕೆಕ್ಕರಿಸಿಕೊಂಡು ನೋಡಿದವು. ಇದರಿಂದ ಬಚಾವಾಗಲು ಅವರಿಗೆ ಬೇರೆ ಮಾರ್ಗವಿರಲಿಲ್ಲ.

ಕುಲಭೂಷಣ್ರನ್ನು ನಿರಂತರ ಹಿಂಸೆಗೆ ಒಳಪಡಿಸುತ್ತಾ ತಾನು ಭಾರತದ ಪರವಾಗಿ ಕೆಲಸ ಮಾಡುತ್ತಿದ್ದ ಗೂಢಚಾರ ಎಂದು ಒಪ್ಪುವಂತೆ ಮಾಡಲಾಯ್ತು. ಅದರಲ್ಲೂ ಚಾಬಹಾರ್ನಿಂದ ಬಲೂಚಿಗಳೊಂದಿಗೆ ನೇರ ಸಂಪರ್ಕ ಇಟ್ಟುಕೊಂಡು ಪ್ರತ್ಯೇಕ ಬಲೂಚಿಸ್ತಾನಕ್ಕೆ ಭಾರತದ ಪರವಾಗಿ ಕುಮ್ಮಕ್ಕು ಕೊಡಲು ಬಂದವನೆಂದು ಆತನ ಬಾಯಲ್ಲಿಯೇ ಹೇಳಿಸಲಾಯ್ತು. ಈ ಹೊತ್ತಲ್ಲಿಯೇ ಭಾರತ ಸರ್ಕಾರ 13 ಬಾರಿ ಆತನ ಭೇಟಿಗೆ ಅನುಮತಿ ಕೇಳಿ ಪಾಕೀಸ್ತಾನ ಸರ್ಕಾರಕ್ಕೆ ಪತ್ರ ಬರೆಯಿತು. ಲಾಭವಾಗಲಿಲ್ಲ.

 

ಚೀನಾ ತುದಿಗಾಲಲ್ಲಿ ನಿಂತಿತ್ತು. ಅದಕ್ಕೆ ತುರ್ತಾಗಿ ಭಾರತವನ್ನು ಬೇರೊಂದು ವಿಚಾರದಲ್ಲಿ ಸಿಲುಕಿಸುವ ಜರೂರತ್ತಿತ್ತು. ಅದಕ್ಕೇ ಕುಲಭೂಷಣ್ರ ಮೇಲೆ ತೂಗು ಕತ್ತಿಯಾಗಿರಬಹುದು ಎನ್ನುತ್ತಾರೆ ರಕ್ಷಣಾ ಚಿಂತಕ ರಾಜೀವ್ ಶರ್ಮಾ. ಭಾರತವೇನೂ ಸುಮ್ಮನಿರಲಿಲ್ಲ. ಇದನ್ನು ಅಂದಾಜು ಮಾಡಿಯೇ ಒಂದಷ್ಟು ಗುಪ್ತ ಚಟುವಟಿಕೆ ಮಾಡಿತು. ಪಾಕೀಸ್ತಾನೀ ಮಾಧ್ಯಮಗಳನ್ನು ನಂಬುವುದಾದರೆ ಪಾಕೀಸ್ತಾನದ ಲೆಫ್ಟಿನೆಂಟ್ ಕರ್ನಲ್ ಮೊಹಮ್ಮದ್ ಹಬೀಬ್ ಜಾಹೀರ್ನನ್ನು ಭಾರತ ನೇಪಾಳದಿಂದ ಅಪಹರಿಸಿತು. ಅವರಿಗೆ ಇಂಗ್ಲೆಂಡಿನಿಂದ ಕರೆ ಬಂತು. ವಿಶೇಷ ಮಾಹಿತಿ ಕೊಡುವ ದೃಷ್ಟಿಯಿಂದ ಕಟ್ಮಂಡುವಿಗೆ ಕರೆಯಲಾಯ್ತು. ಅಲ್ಲಿಂದ ಲುಂಬಿಣಿಗೊಯ್ದು ಅರಿವೇ ಆಗದಂತೆ ಭಾರತಕ್ಕೆ ಕರೆದುಕೊಂಡು ಬರಲಾಯ್ತು. ಹಾಗಂತ ಪಾಕೀಸ್ತಾನದ ಆಕ್ಷೇಪ. ತಾಲೀಬಾನಿನೊಂದಿಗೆ ಒಪ್ಪಂದ ಮಾಡಿಕೊಂಡು ಕುಲಭೂಷಣ್ರನ್ನು ಹಿಡಿದು ತರುವಲ್ಲಿ ಹಬೀಬ್ರ ಪಾತ್ರವಿತ್ತು ಅಂತ ಅಲ್ಲಿನ ಪತ್ರಿಕೆಗಳು ವರದಿ ಮಾಡಿವೆ. ಐಎಸ್ಐನ ಮಹತ್ವದ ಸುಳಿಗಳನ್ನು ಹೊಂದಿರುವ ಈತನ ಅಪಹರಣದ ಸುದ್ದಿ ಜಗತ್ತಿಗೆ ಮೊದಲು ಹರಡಿದ್ದರೆ ಪಾಕೀಸ್ತಾನದ ಮಾನ ಮೂರ್ಕಾಸಿಗೆ ಹರಾಜಾಗಿರುತ್ತಿತ್ತು. ಹೀಗಾಗಿ ತರಾತುರಿಯಲ್ಲಿ ಕುಲಭೂಷಣ್ರನ್ನು ಮಿಲಿಟರಿ ನ್ಯಾಯಾಲಯದಲ್ಲಿ ಮರಣ ದಂಡನೆಯ ಶಿಕ್ಷೆ ನೀಡುವ ಘೋಷಣೆ ಮಾಡಲಾಯ್ತು. ಒಂದಂತೂ ನೆನಪಿಟ್ಟುಕೊಳ್ಳಿ. ಮರಣ ದಂಡನೆಗೆ ತೋರಿರುವ ಆತುರ, ಜಿನೇವಾ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಕೊಟ್ಟಿರುವ ಶಿಕ್ಷೆ ನೋಡಿದರೆ ಕುಲಭೂಷಣ್ ಜಾಧವ್ ಬದುಕಿರುವ ಬಗ್ಗೆಯೂ ಅನುಮಾನವಿದೆ. ಹೀಗಾಗಿಯೇ ಭಾರತದ ಅಧಿಕಾರಿಗಳು ಮೊದಲ ದಿನವೇ ಇದನ್ನು ಅಕ್ಷಮ್ಯ ಕೊಲೆ ಎಂದು ಜರೆದಿರುವುದು.

hqdefault

ಭಾರತ ಸುಮ್ಮನೆ ಕೂಡಲಿಲ್ಲ. ದೇಶದಲ್ಲಿ ಒಕ್ಕೊರಲ ಅಭಿಪ್ರಾಯ ಮೂಡುವಂತೆ ಮಾಡಿತು. ಜಗತ್ತಿನಲ್ಲಿ ತನ್ನ ಪ್ರಭಾವ ಬಳಸಿತು. ಆಮ್ನೆಸ್ಟಿ ಇಂಟರ್ನ್ಯಾಷನಲ್ ಅನಿವಾರ್ಯವಾಗಿ ದನಿಯೆತ್ತಬೇಕಾಯ್ತು. ಅಮೇರಿಕಾ-ಯೂರೋಪುಗಳು ಪಾಕೀಸ್ತಾನದ ಕ್ರಮವನ್ನು ಜರಿದವು. ಕೊನೆಗೆ ಪಾಕೀಸ್ತಾನದ ಮಾನವ ಹಕ್ಕು ಸಂಘಟನೆಗಳೂ ಈ ನಿರ್ಧಾರವನ್ನು ವಿರೋಧಿಸಿದವು. ಅಲ್ಲಿನ ಪತ್ರಿಕೆಗಳು ಸರ್ಕಾರದ ವಿರುದ್ಧ, ಸೈನ್ಯದ ನ್ಯಾಯಾಲಯದ ವಿರುದ್ಧ ಬರೆದವು. ಇವೆಲ್ಲವೂ ರಾಜತಾಂತ್ರಿಕ ಗೆಲುವೇ. ಪಾಕೀಸ್ತಾನ ಪೀಪಲ್ಸ್ ಪಾರ್ಟಿಯ ಬಿಲಾವಲ್ ಭುಟ್ಟೋ ಮರಣ ದಂಡನೆಯನ್ನು ವಿರೋಧಿಸುತ್ತೇನೆ ಎಂದ. ಇಮ್ರಾನ್ ಖಾನ್ ಸರ್ಕಾರಕ್ಕೆ ಬುದ್ಧಿಮಾತು ಹೇಳಿ ಒಂದು ತಪ್ಪು ಹೆಜ್ಜೆ ಇಟ್ಟರೆ ಮೋದಿ ಪಾಕೀಸ್ತಾನವನ್ನು ಚೂರು-ಚೂರು ಮಾಡಿ ಬಿಡುತ್ತಾರೆ ಎಂದ. ನ್ಯಾಯಾಲಯವೂ ತರಾತುರಿಯಲ್ಲಿ ಕುಲಭೂಷಣ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದಿತು. ಅತ್ತ ನ್ಯಾಯವಾದಿಗಳು ಅವನ ಪರವಾಗಿ ಯಾರೂ ನಿಲ್ಲುವಂತಿಲ್ಲವೆಂದು ಎಚ್ಚರಿಕೆ ಕೊಟ್ಟರು. ಭಾರತವನ್ನು ತೊಂದರೆಗೆ ಸಿಲುಕಿಸ ಹೋಗಿ ಪಾಕೀಸ್ತಾನ ಸಮಸ್ಯೆಗಳ ಸುಳಿಗೆ ಸಿಲುಕಿಕೊಂಡಿತು.

ಇತ್ತ ನರೇಂದ್ರ ಮೋದಿ ರಷ್ಯಾ, ಇಸ್ರೇಲು, ಆಸ್ಟ್ರೇಲಿಯಾಗಳೊಂದಿಗೆ ಅನೇಕ ರಕ್ಷಣಾ ಒಪ್ಪಂದಗಳಿಗೆ ತಯಾರಿ ಮಾಡಿಕೊಳ್ಳುತ್ತಾ ಚೀನಾದ ಮೇಲಿದ್ದ ತಮ್ಮ ಕಣ್ಣು ಒಂದಿಂಚೂ ಪಕ್ಕಕ್ಕೆ ಸರಿದಿಲ್ಲವೆಂದು ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ. ರಾಜತಾಂತ್ರಿಕ ನಡೆ ಅಂದರೆ ಹಾಗೆಯೇ. ನಮ್ಮನ್ನು ಎತ್ತೆತ್ತಲೋ ಸುಳಿಯಲು ಚೀನಾ ಪ್ರಯತ್ನಿಸುತ್ತಲೇ ಇದೆ. ಅದರ ಕಣ್ಣೊಳಗೆ ಕೈಯ್ಯಿಡಲು ನಾವು ಸಿದ್ಧರಿದ್ದೇವೆ ಎಂಬ ನಮ್ಮ ಧಾಡಶಿ ತನವೇ ಜಗತ್ತಿಗೆ ಇಷ್ಟವಾಗೋದು. ಅದಾಗಲೇ ಬಾಂಗ್ಲಾ, ಮಯನ್ಮಾರ್, ಶ್ರೀಲಂಕಾಗಳು ನಮ್ಮ ತೆಕ್ಕೆಗೆ ಬಂದಾಗಿವೆ. ಹೀಗಾಗಿ ನಮಗೆ ಉರುಳು ಹಾಕುವ ಚೀನಾದ ಎಲ್ಲಾ ಪ್ರಯತ್ನಗಳು ಸೋಲು ಕಂಡಿವೆ. ಕುಲಭೂಷಣನ ಸಮಸ್ಯೆಯೊಂದು ಹೀಗೆಯೇ ಪರಿಹಾರವಾದರೆ ಚೀನಾಕ್ಕೆ ಬಲವಾದ ಕಪಾಳಮೋಕ್ಷವಷ್ಟೇ!

Comments are closed.