ವಿಭಾಗಗಳು

ಸುದ್ದಿಪತ್ರ


 

  ಗೋವಾದ ಕನ್ನಡಿಗರ ಸಮಸ್ಯೆಗೆ ಪರಿಹಾರವೇನು?

ಹೇಗೆ ಕನರ್ಾಟಕದಲ್ಲಿ ಕನ್ನಡ ಪ್ರೇಮವೆಂದರೆ ತಮಿಳು-ಹಿಂದಿ ದ್ವೇಷವೆಂಬುದನ್ನು ನಾವು ಮುಂದಿಡುತ್ತೇವೆಯೋ ಹಾಗೆಯೇ ಅಲ್ಲಿ ಗೋವಾದ ಪ್ರೇಮವೆಂದರೆ ಕನರ್ಾಟಕದ ವಿರೋಧವೆಂಬಂತಾಗಿದೆ. ಅಲ್ಲಿನ ಒಟ್ಟೂ ಜನಸಂಖ್ಯೆ ಹದಿನೈದು ಲಕ್ಷವಾದರೆ, ಕನ್ನಡಿಗರೇ ಮೂರು ಲಕ್ಷದಷ್ಟಿದ್ದಾರಂತೆ! ಅಂದರೆ ಪ್ರತಿ ಐವರಲ್ಲಿ ಒಬ್ಬ ಕನ್ನಡಿಗ. ಹೀಗೆ ಬಂದಿರುವ ಅನೇಕರಲ್ಲಿ ಮುಸಲ್ಮಾನರೂ ದೊಡ್ಡ ಪ್ರಮಾಣದಲ್ಲಿರುವುದರಿಂದ ಅವರಿಂದ ನಿಮರ್ಾಣಗೊಂಡಿರುವ ಎಲ್ಲ ಪ್ರತ್ಯೇಕತಾವಾದಿ ಸಮಸ್ಯೆಗಳಿಗೂ ಅವರೀಗ ಕನರ್ಾಟಕವನ್ನೇ ದೂರುತ್ತಿದ್ದಾರೆ. ಅದಷ್ಟೇ ಅಲ್ಲ. ಇಲ್ಲಿನ ಗಣಿ ಉದ್ಯಮದಲ್ಲಿ ಬಹುಪಾಲು ಮುಖ್ಯ ಸ್ಥಾನದಲ್ಲಿ ಕನ್ನಡಿಗರೇ ಇದ್ದಾರೆ. ಬ್ಯಾಂಕುಗಳಲ್ಲಿ ಕನ್ನಡಿಗರಿದ್ದಾರೆ. ಇಲ್ಲಿನ ಹೋಟೆಲ್ ಉದ್ಯಮ ಕನ್ನಡಿಗರ ಕೈಲಿದೆ. ಓಹ್. ಒಬ್ಬ ಗೋವೆಯನ್ನನಿಗೆ ಕನ್ನಡಿಗರ ಕಂಡು ಉರಿದು ಬೀಳಲು ಅಷ್ಟು ಸಾಕು.

ಗೋವಾದ ಬಾಯ್ಣಾದಲ್ಲಿ ಕಳೆದ ಎರಡು ವಾರಗಳಿಂದ ಬಿಗುವಿನ ವಾತಾವರಣ. ನಾಲ್ಕು ದಶಕಗಳಿಂದ ಕೂಲಿ ಕೆಲಸ ಮಾಡಿಕೊಂಡು ಸಮುದ್ರ ತೀರದಲ್ಲಿ ನೆಲೆ ನಿಂತಿದ್ದ ಸುಮಾರು ಐವತ್ತಾರು ಕುಟುಂಬಗಳನ್ನು ಒಕ್ಕಲೆಬ್ಬಿಸಿ ಬೀದಿಗೆ ತಳ್ಳಲಾಗಿದೆ. ಅದಕ್ಕೆ ಕನರ್ಾಟಕ-ಗೋವಾ ಬಣ್ಣ ಬೇರೆ ಬಂದು ಬಿಟ್ಟಿರುವುದರಿಂದ ನಿಜಕ್ಕೂ ಸದ್ಯಕ್ಕೆ ಮುಗಿಯಲಾರದ ಸ್ಥಿತಿಯಲ್ಲಿದೆ ಈ ವಿವಾದ.

3

ಬಾಯ್ಣಾ ಬೀಚಿನ ಈ ಒಕ್ಕಲೆಬ್ಬಿಸುವಿಕೆ ಹೊಸ ವಿವಾದವಲ್ಲ. 2004ರಲ್ಲಿಯೇ ಈ ಕುರಿತಂತೆ ಗಲಾಟೆಗಳು ಭುಗಿಲೆದ್ದಿದ್ದವು. ಈ ಎಲ್ಲ ಗಲಾಟೆಗಳ ಹಿಂದಿರುವುದು ವೇಶ್ಯಾವಾಟಿಕೆಯ ಸಮಸ್ಯೆ ಅನ್ನೋದು ಅನೇಕರಿಗೆ ಹೊಸ ವಿಷಯವೆನಿಸಬಹುದು. ಗೋವಾದಲ್ಲಿನ ಸೆಕ್ಸ್ ಚಟುವಟಿಕೆಗಳು ನಡೆಯುವ ಕೇಂದ್ರ ಯಾವುದೆಂದು ಕೇಳಿದರೆ ತಕ್ಷಣಕ್ಕೆ ಸಿಗುವ ಉತ್ತರವೇ ಬಾಯ್ಣಾ ಬೀಚಿನದು. ಒಂದು ಕಾಲದಲ್ಲಿ ಉತ್ತರ ಕನರ್ಾಟಕದ ಮತ್ತು ಆಂಧ್ರ-ಒರಿಸ್ಸಾಗಳ ಕರಾವಳಿಯ ಅನೇಕರಿಗೆ ಇಲ್ಲಿ ಇದೇ ಉದ್ಯೋಗವಾಗಿತ್ತು. ಈ ಬೀಚಿಗೆ ಬರಲು ಜನರು ಹೆದರುತ್ತಿದ್ದ ಕಾಲ ಅದು. ಥೇಟು ಹಿಂದಿ ಸಿನಿಮಾಗಳಂತೆ ತಮ್ಮ ತಮ್ಮ ಮನೆಯ ಹೊರಗೆ ನಿಂತು ಗಿರಾಕಿಗಳನ್ನು ಆಕಷರ್ಿಸುವ ಹೆಣ್ಣುಮಕ್ಕಳು ಇಡಿಯ ಬಾಯ್ಣಾಕ್ಕೆ ಕೆಟ್ಟ ಹೆಸರು ಕೊಟ್ಟಾಗಿತ್ತು. ಸ್ವಚ್ಛ ನೀಲಿ ನೀರಿನ ಸುಂದರವಾದ ಈ ಬೀಚಿಗೆ ಜನ ಬರುವ ಉದ್ದೇಶ ಬೇರೆಯೇ ಆಗಿದ್ದರಿಂದ ಇದರ ಆಸುಪಾಸಿಗೆ ಜನ ಉಳಿದುಕೊಳ್ಳುವುದೇ ಕಷ್ಟವೆನಿಸುವ ಪರಿಸ್ಥಿತಿ. ಗೋವಾ ಸಕರ್ಾರಕ್ಕೆ ದೊಡ್ಡ ತಲೆನೋವಾಗಿತ್ತು ಇದು. ಹಾಗಂತ ಇದು ಒಂದು ದಶಕದ ಹಿಂದಿನದ್ದಷ್ಟೇ ಸಮಸ್ಯೆಯಲ್ಲ, ಸುಮಾರು ನಲವತ್ತು ವರ್ಷಗಳಿಂದಲೂ ಇಲ್ಲಿ ನೆಲೆಸಿರುವ ಜನರ ತೊಂದರೆ.

2004ರಲ್ಲಿ ಅಂದಿನ ಸಕರ್ಾರ ಮುಲಾಜಿಲ್ಲದೇ ಬಾಯ್ಣಾದಿಂದ ಈ ಹಣೆಪಟ್ಟಿಯನ್ನು ಕಿತ್ತೆಸೆಯುವ ಸಂಕಲ್ಪ ಮಾಡಿ ಅಲ್ಲಿನ ಮನೆಗಳನ್ನು ಸಂಪೂರ್ಣ ನೆಲಸಮ ಮಾಡಿಬಿಟ್ಟಿತು. ಸಾವಿರಾರು ಜನ ಬೀದಿಗೆ ಬಂದರು. ಹಾಗಂತ ಅವರ ಪರವಾಗಿ ದನಿ ಎತ್ತುವವರೂ ಯಾರೂ ಇರಲಿಲ್ಲ. ಬೇರೆಯವರು ಬಿಡಿ. ಸ್ವತಃ ಒಕ್ಕಲೆಬ್ಬಿಸಿಕೊಂಡವರೂ ಪ್ರತಿಭಟನೆಗೆ ನಿಲ್ಲಲಿಲ್ಲ ಏಕೆಂದರೆ ಅವರಿಗೇ ಆ ವಿಶ್ವಾಸವಿರಲಿಲ್ಲ. ಒಂದಷ್ಟು ಜನರನ್ನು ಸಕರ್ಾರೇತರ ಸಂಸ್ಥೆಗಳ ಸುಪದರ್ಿಗೆ ಕೊಟ್ಟು ಅವರನ್ನು ತಿದ್ದಿ ತೀಡುವ, ಬದುಕು ಕಟ್ಟಿ ಕೊಡುವ ಪ್ರಯತ್ನವನ್ನೂ ಆಗ ಮಾಡಲಾಗಿತ್ತು. ಆದರೆ ವೇಶ್ಯಾವಾಟಿಕೆ ಎನ್ನುವುದು ನದಿಯೊಳಗಿನ ಸುಳಿಯಿದ್ದಂತೆ. ಒಮ್ಮೆ ಸಿಕ್ಕಿಕೊಂಡರೆ ಮುಗಿಯಿತು, ಹೊರಗೆ ಬರುವುದು ಬಲು ಕಷ್ಟ. ಬಾಯ್ಣಾದ ಇದೇ ಜನರ ಸಮಸ್ಯೆಯ ಕುರಿತಂತೆ ಇತ್ತೀಚೆಗೆ ಫ್ರಂಟ್ಲೈನ್ ಎಂಬ ಪತ್ರಿಕೆಯೊಂದು ಸವಿಸ್ತಾರವಾಗಿ ವರದಿ ಮಾಡಿದೆ. ಬಳ್ಳಾರಿಯಲ್ಲಿ ಕೆಲಸಕೊಡಿಸುವೆನೆಂದು ಬಾಗಲಕೋಟೆಯಿಂದ ಹೆಣ್ಣುಮಗಳನ್ನು ಕರೆದುಕೊಂಡು ಬಂದಿದ್ದ ದಲ್ಲಾಳಿಯೊಬ್ಬ ಇಲ್ಲಿನ ಹೆಂಗಸೊಬ್ಬಳಿಗೆ ಆಕೆಯನ್ನು ಮಾರಿ ಹೋದ. ಅವಳ ಬದುಕು ಬೀಚಿನಲ್ಲಿಯೇ ಮರಳಾಗಿಬಿಟ್ಟಿತಷ್ಟೇ. ಇಲ್ಲಿ ಆಕೆಯ ಧಂಧೆಯ ಅರಿವಾದೊಡನೆ ಮನೆಯವರೂ, ಸಂಬಂಧಿಕರೂ ಆಕೆಯನ್ನು ದೂರ ಮಾಡಿಬಿಟ್ಟರು. ಅಲ್ಲಿಗೆ ಅವಳ ಬದುಕನ್ನು ಯಾವ ಸಂಘಟನೆಗಳೂ ಸುಧಾರಿಸಲಾರವು. ಇಂತಹ ಅನೇಕರನ್ನು 2004ರಲ್ಲಿ ಸಂಘಟಿಸಿ ಅವರಿಗೆ ಒಂದಷ್ಟು ಮೌಲ್ಯಯುತ ಜೀವನದ ಪಾಠ ಹೇಳಿ ಅವರವರ ಊರಿನ ಗಾಡಿ ಹತ್ತಿಸಿ ಕಳಿಸಿಕೊಟ್ಟರೆ ಗೋವಾ ಗಡಿ ದಾಟುವ ಮುನ್ನವೇ ಇಳಿದು ಮರಳಿ ಬಂದು ಬಿಟ್ಟಿದ್ದರು. ಬಾಯ್ಣಾದಲ್ಲಿ ಕೇಂದ್ರೀಕೃತವಾಗಿದ್ದ ವಹಿವಾಟು ಇಡಿಯ ಗೋವಾಕ್ಕೆ ವಿಸ್ತಾರವಾಗುತ್ತಿತ್ತು.

5

ಇವರ ಸಂಖ್ಯೆ ಬಲು ಜೋರಾಗಿದ್ದುದರಿಂದ ರಾಜಕೀಯ ಪಕ್ಷಗಳೂ ಇವರೊಂದಿಗೆ ಕೈ ಜೋಡಿಸಿಯೇ ಇದ್ದವು. ಕಾಂಗ್ರೆಸ್ಸಿಗೆ ವೋಟು ಹಾಕುವ ಜನರಾದರೆ ಬಾಂಗ್ಲಾ-ರೋಹಿಂಗ್ಯಾಗಳಾದರೂ ಪರವಾಗಿಲ್ಲವೆಂಬ ಮನಸ್ಥಿತಿ ಇರುವಾಗ ಇವರನ್ನು ಬಿಟ್ಟೀತೇನು? ಈ ಜನರಿಗೆ ಮತ ಚಲಾಯಿಸುವ ಅಧಿಕಾರಕ್ಕೆ ಬೇಕಾದ ಎಲ್ಲ ಸವಲತ್ತುಗಳನ್ನು ಸ್ಥಳೀಯ ನಾಯಕರು ಮಾಡಿಕೊಟ್ಟುಬಿಟ್ಟರು. ಕರೆಂಟು, ನೀರು ಈ ಬಗೆಯ ಮೂಲ ಸೌಲಭ್ಯಗಳೆಲ್ಲ ಅಲ್ಲದೇ ಅವರವರ ಜಾಗದ ತೆರಿಗೆಯನ್ನೂ ಅವರು ನಗರ ಪಾಲಿಕೆಗೆ ಕಟ್ಟುವಂತೆ ವ್ಯವಸ್ಥೆ ಮಾಡಿಕೊಡಲಾಯಿತು. ಅವರೀಗ ಅಧಿಕೃತ ನಿವಾಸಿಗಳಾಗಿಬಿಟ್ಟರು. ನಲವತ್ತು ವರ್ಷಗಳ ದೀರ್ಘ ಕಾಲದಲ್ಲಿ ಅವರಿಗೆ ಮಕ್ಕಳಾದರು, ಮೊಮ್ಮಕ್ಕಳಾದರು. ಅನೇಕರಿಗೆ ಉದ್ಯೋಗ ದೊರೆಯಿತು. ಕೊಂಕಣಿ ಅವರ ಮನೆಮಾತಾಗಿಬಿಟ್ಟಿತು. ಬಾಯ್ಣಾದಲ್ಲಿದ್ದು ಅವರು ಗೋವಾದವರೇ ಆಗಿಬಿಟ್ಟಿದ್ದರು. ಕೆಲವು ಕುಟುಂಬಗಳ ಹೊಸ ಪೀಳಿಗೆಗಳು ವೇಶ್ಯಾವಾಟಿಕೆಯಿಂದ ಹೊರಬಂದವು ಕೂಡ. ಆದರೆ ಅವರಿಗೆ ಅಂಟಿದ್ದ ವೇಶ್ಯಾವಾಟಿಕೆಯ ಹಣೆಪಟ್ಟಿಯಿಂದ ಮಾತ್ರ ಹೊರಬರಲಾಗಲಿಲ್ಲ. ಈ ಕಾರಣಕ್ಕೇ 2004ರಲ್ಲಿ ಒಂದಿಡೀ ಓಣಿಯನ್ನು ಧ್ವಂಸಗೊಳಿಸಿದಾಗ ಹುಯಿಲೆದ್ದಿದ್ದು ನಿಜವಾದರೂ ಗೋವಾದ ಜನತೆಗೆ ಅದರಲ್ಲೂ ಬಾಯ್ಣಾದ ಆಸುಪಾಸಿನ ಜನರಿಗೆ ಅದು ನೆಮ್ಮದಿಯನ್ನು ತಂದುಕೊಟ್ಟಿತು. ಹೊರ ಜಗತ್ತಿಗೆ ಈ ವಿಚಾರವನ್ನು ಹೇಳದೇ ಅಲ್ಲಿನ ಸಕರ್ಾರ ಸಮುದ್ರ ತೀರದಲ್ಲಿ ಮನೆಗಳನ್ನು ಕಟ್ಟುವಂತಿಲ್ಲ, ವಸತಿ ಮಾಡುವಂತಿಲ್ಲ ಎಂಬೆಲ್ಲ ನೆಪ ಹೇಳಿತ್ತು.

 

ಒಂದಷ್ಟು ವರ್ಷಗಳ ಕಾಲ ಉಳಿದ ಕೆಲವರನ್ನೂ ಒಕ್ಕಲೆಬ್ಬಿಸಬೇಕು ಅಂತ ಚಚರ್ೆ ನಡೆದೇ ಇತ್ತು. ಮನೋಹರ್ ಪರಿಕ್ಕರ್ ಅಧಿಕಾರಕ್ಕೆ ಬಂದ ಮೇಲೆ ಇದಕ್ಕೆ ತೀವ್ರವಾದ ವೇಗ ಬಂದಿತ್ತು. ಹೇಗೆ ಕನ್ನಡಿಗರಿಗಾಗಿ ಕನರ್ಾಟಕ ಎಂಬ ಕೂಗು ಜೋರಾದಾಗಲೆಲ್ಲ ಇಲ್ಲಿನ ಭಾರತೀಯ ಜನತಾ ಪಕ್ಷವನ್ನು ರಾಷ್ಟ್ರೀಯವಾದಿ ಎಂಬ ಕಾರಣಕ್ಕಾಗಿ ವಿರೋಧಿಸುತ್ತೇವೆಯೋ ಅಲ್ಲಿಯೂ ಹಾಗೆಯೇ. ಗೋಮಾಂತಕದ ಭಾವನೆಗಳು ಬಲವಾದಾಗಲೆಲ್ಲ ಅಲ್ಲಿನ ರಾಜಕೀಯ ಆಕಾಂಕ್ಷಿಗಳು ಬಿಜೇಪಿಯನ್ನು ಕಂಠಮಟ್ಟ ವಿರೋಧಿಸುತ್ತಾರೆ. ಈ ಪ್ರಾಂತವಾದದಿಂದಾಗಿಯೇ ಮಹದಾಯಿಗೆ ಉತ್ತರ ಸಿಗದೇ ತೊಳಲಾಟ ನಡೆದಿರೋದು. ಮಹದಾಯಿ ವಿಚಾರದಲ್ಲಿ ಸುಪ್ರೀಂ ಕೋಟರ್್ನಲ್ಲಿ ಗೆಲುವಾದಾಗ ಈಗಿನ ಸಕರ್ಾರ ಬಹುವಾಗಿ ಸಂಭ್ರಮಿಸಿತ್ತು. ಕಾರಣ ಬಲು ಸ್ಪಷ್ಟ. ಗೋವಾಕ್ಕಾಗಿ ನಾವೂ ಇದ್ದೇವೆ ಎಂಬುದನ್ನು ಜನರ ಮುಂದೆ ಸಾಬೀತು ಪಡಿಸಲಿಕ್ಕಾಗಿ ಅಷ್ಟೇ. ಹೇಗೆ ಕನರ್ಾಟಕದಲ್ಲಿ ಕನ್ನಡ ಪ್ರೇಮವೆಂದರೆ ತಮಿಳು-ಹಿಂದಿ ದ್ವೇಷವೆಂಬುದನ್ನು ನಾವು ಮುಂದಿಡುತ್ತೇವೆಯೋ ಹಾಗೆಯೇ ಅಲ್ಲಿ ಗೋವಾದ ಪ್ರೇಮವೆಂದರೆ ಕನರ್ಾಟಕದ ವಿರೋಧವೆಂಬಂತಾಗಿದೆ. ಬಾಯ್ಣಾದಲ್ಲಿ ಒಕ್ಕಲೆದ್ದ ಜನರ ಮಾತನಾಡಿಸಿ ನೇರ ಗೋವಾದಲ್ಲಿರುವ ಕನ್ನಡಿಗರೊಂದಷ್ಟು ಜನರನ್ನು ಭೇಟಿಯಾದಾಗ ಅಚ್ಚರಿಯೆನಿಸುವ ಒಂದಷ್ಟು ಸಂಗತಿಗಳು ಹೊರಬಂದವು. ಅಲ್ಲಿನ ಒಟ್ಟೂ ಜನಸಂಖ್ಯೆ ಹದಿನೈದು ಲಕ್ಷವಾದರೆ, ಕನ್ನಡಿಗರೇ ಮೂರು ಲಕ್ಷದಷ್ಟಿದ್ದಾರಂತೆ! ಅಂದರೆ ಪ್ರತಿ ಐವರಲ್ಲಿ ಒಬ್ಬ ಕನ್ನಡಿಗ. ಹೀಗೆ ಬಂದಿರುವ ಅನೇಕರಲ್ಲಿ ಮುಸಲ್ಮಾನರೂ ದೊಡ್ಡ ಪ್ರಮಾಣದಲ್ಲಿರುವುದರಿಂದ ಅವರಿಂದ ನಿಮರ್ಾಣಗೊಂಡಿರುವ ಎಲ್ಲ ಪ್ರತ್ಯೇಕತಾವಾದಿ ಸಮಸ್ಯೆಗಳಿಗೂ ಅವರೀಗ ಕನರ್ಾಟಕವನ್ನೇ ದೂರುತ್ತಿದ್ದಾರೆ. ಅದಷ್ಟೇ ಅಲ್ಲ. ಇಲ್ಲಿನ ಗಣಿ ಉದ್ಯಮದಲ್ಲಿ ಬಹುಪಾಲು ಮುಖ್ಯ ಸ್ಥಾನದಲ್ಲಿ ಕನ್ನಡಿಗರೇ ಇದ್ದಾರೆ. ಬ್ಯಾಂಕುಗಳಲ್ಲಿ ಕನ್ನಡಿಗರಿದ್ದಾರೆ. ಇಲ್ಲಿನ ಹೋಟೆಲ್ ಉದ್ಯಮ ಕನ್ನಡಿಗರ ಕೈಲಿದೆ. ಓಹ್. ಒಬ್ಬ ಗೋವೆಯನ್ನನಿಗೆ ಕನ್ನಡಿಗರ ಕಂಡು ಉರಿದು ಬೀಳಲು ಅಷ್ಟು ಸಾಕು. ಇತ್ತೀಚೆಗಂತೂ ಒಂದೆರಡು ಕಡೆ ಪಂಚಾಯತ್ ಪ್ರಮುಖರೂ ಕನ್ನಡಿಗರೇ ಆಗಿಬಿಟ್ಟ ಮೇಲಂತೂ ಆಳುವ ವರ್ಗವಾಗಿ ಪರಿವರ್ತನೆಯಾಗುತ್ತಿರುವುದು ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಮಾವರ್ಾಡಿ ವ್ಯಾಪಾರಿಗಳನ್ನು ಕಂಡಾಗ, ಬೆಂಗಳೂರಿನ ಮಾಕರ್ೆಟ್ನಲ್ಲಿ ತಮಿಳರನ್ನು ಕಂಡಾಗ, ಸಾಫ್ಟ್ವೇರ್ ಉದ್ಯಮದಲ್ಲಿ ಉತ್ತರ ಭಾರತೀಯರನ್ನು ಕಂಡಾಗ ನಮಗೂ ಹೀಗೇ ಆಗುತ್ತಲ್ಲವೇ?

1

ಈ ಬಗೆಯ ಭಾವತಂತುಗಳನ್ನು ಮೀಟಿಯೇ ಗೋವಾ ಫಾರ್ವಡರ್್ ಪಾಟರ್ಿಯ ಮೂರು ಜನ ಶಾಸಕರಾಗಿದ್ದಾರೆ. ಅಲ್ಲಿನ ಖಿಚಡಿ ಸಕರ್ಾರದಲ್ಲಿ ಮೂವರೂ ಮಂತ್ರಿಗಳಾಗಿಬಿಟ್ಟಿದ್ದಾರೆ. ಗೋವಾ ಗೋವೆಯನ್ನರಿಗಾಗಿ ಎಂಬ ಹೇಳಿಕೆಯನ್ನು ಹಿಡಿದೇ ಅವರು ಮುಂದಿನ ಚುನಾವಣೆಗೆ ತಯಾರಿ ನಡೆಸುತ್ತಿರೋದು. ಇದನ್ನು ಸರಿದೂಗಿಸಲು ಗೋವಾ ಸಕರ್ಾರಕ್ಕೆ ಇರುವ ಅಸ್ತ್ರವೇ ತಾವೂ ಗೋವೆಗಾಗಿಯೇ ಇರುವವರೆಂದು ತೋರಿಸೋದು ಮಾತ್ರವೇ. ಅದಕ್ಕೆ ಮೊದಲ ಹೆಜ್ಜೆ ಮಹದಾಯಿ ತಿರಸ್ಕಾರವಾದರೆ ಎರಡನೆಯದು ಬಾಯ್ಣಾ ಬೀಚಿನ ಕಾಯರ್ಾಚರಣೆ ಎನ್ನುವುದು ವಿಶ್ಲೇಷಕರ ಅಂಬೋಣ. ದುದರ್ೈವವೇನು ಗೊತ್ತೇ? ಈ ಬಾರಿ ಒಕ್ಕಲೆಬ್ಬಿಸಿದ ಸುಮಾರು 55 ಮನೆಗಳಲ್ಲಿ ಕೂಲಿ ಕಾಮರ್ಿಕರೇ ಇದ್ದರು. ನಾಲ್ಕು ದಶಕಗಳಿಂದ ಅಲ್ಲಿಯೇ ನೆಲೆಸಿ ತಮ್ಮ ಜೀವನವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದರು. ಅವರು ನೆಲೆಸಿದ್ದ ಚಚರ್ಿಗೆ ಸೇರಿದ್ದ ಆ ಜಾಗವನ್ನು ಚಚರ್ು ಉದ್ಯಮಿಯೊಬ್ಬರಿಗೆ ಮಾರಿದಾಗಿನಿಂದ ಅವರ ಬದುಕು ಮೂರಾಬಟ್ಟೆಯಾಯ್ತು. ನೆಮ್ಮದಿ ಕಳೆದು ಹೋಯ್ತು. ನೋಟೀಸುಗಳು ಬರಲಾರಂಭಿಸಿದವು, ಕೋಟರ್ಿನ ಮೆಟ್ಟಿಲೇರಿದರು. ಅಲ್ಲಿಯೂ ನೆಮ್ಮದಿ ಸಿಗದಾದಾಗ ಅವರು ಜಿಲ್ಲಾಧಿಕಾರಿಯಿಂದ ಸ್ವಲ್ಪ ಅವಕಾಶ ಪಡೆದುಕೊಂಡರು. ಆದರೆ ಜಾಗ ತಮ್ಮದೆನ್ನುವ ಯಾವ ಆಧಾರ ಪತ್ರಗಳೂ ಇಲ್ಲವಾದ್ದರಿಂದ ಏಕಾಕಿ ಹದಿನೈದು ಬುಲ್ಡೋಜéರುಗಳೊಂದಿಗೆ ನುಗ್ಗಿದ ಪೊಲೀಸು ಪಡೆ ಮನೆಯನ್ನು ಬಿಡಿ, ಎರಡು ಮಂದಿರವನ್ನೂ ನೆಲಸಮ ಮಾಡಿಬಿಟ್ಟಿತು. ಮಳೆಗಾಲವಾದ್ದರಿಂದ ಅಷ್ಟೂ ಜನ ಅನಾಥರೇ. ಪರೀಕ್ಷಾ ಸಮಯವಾದ್ದರಿಂದ ಮಕ್ಕಳ ಪರಿಸ್ಥಿತಿಯೂ ಅಯೋಮಯ. ಕೆಲವರು ತಂತಮ್ಮ ಊರುಗಳಿಗೆ ಮರಳಿ ಸ್ವಲ್ಪ ಸಮಯ ಕಳೆದ ನಂತರ ಮರಳುವ ಯೋಚನೆಯಲ್ಲಿದ್ದಾರೆ. ಈ ಐವತ್ತೈದು ಮನೆಗಳಲ್ಲಿ ಕೆಲವರು ಮತ್ತದೇ ಚಟುವಟಿಕೆಯಲ್ಲಿ ತೊಡಗಿದವರೂ ಇರಬಹುದು. ಅಂಥವರು ತಮ್ಮ ನೆಲೆಯನ್ನು ಮುಂಬೈಗೆ ಸ್ಥಳಾಂತರಿಸಿದ್ದಾರೆ ಎನ್ನುತ್ತದೆ ಪತ್ರಿಕೆಯ ವರದಿ. ಪಾರಿಕ್ಕರ್ ಕೂಡ ಸುಮ್ಮನಿಲ್ಲ. ಸೆಕ್ಸ್ ವರ್ಕಸರ್್ ಅಲ್ಲದವರಿಗೆ ನವೆಂಬರ್ ವೇಳೆಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ಹೇಳಿಕೆ ಕೊಟ್ಟಿದ್ದಾರಲ್ಲದೇ ಅಂಥವರು ನೋಂದಾಯಿಸಿಕೊಳ್ಳುವಂತೆ ಕರೆ ನೀಡಿದ್ದಾರೆ. ಸ್ಥಳೀಯ ತಹಶೀಲ್ದಾರರ ಪ್ರಕಾರ ಹೀಗೆ ಬಂದ 300 ಕುಟುಂಬಗಳಲ್ಲಿ ಸುಮಾರು 80 ಕುಟುಂಬಗಳು ಮಾತ್ರ ಪುನರ್ವಸತಿಗೆ ಸೂಕ್ತವಾದವೆಂದು ದೃಢಪಟ್ಟಿದೆ. ಉಳಿದವರು ತಮ್ಮ ತಮ್ಮ ಹಾದಿ ತಾವೇ ನೋಡಿಕೊಳ್ಳಬೇಕಷ್ಟೇ.

ಈಗ ನಮ್ಮ ಮುಂದಿರುವ ಹಾದಿ ಏನು? ಈ ಇಡಿಯ ವಿಚಾರವನ್ನು ಕನ್ನಡಿಗ-ಗೋವಾ ಎಂಬ ದೃಷ್ಟಿಕೋನದಿಂದ ಹುಯಿಲೆಬ್ಬಿಸುವುದೇ ಅಥವಾ ಬಡವರನ್ನು ಬೀದಿಗೆ ತರುವ ಸಕರ್ಾರದ ನೀತಿಗಳ ವಿರುದ್ಧ ಪ್ರತಿಭಟಿಸುವುದೇ? ಕನ್ನಡ-ಗೋವಾ ಕಂದಕದ ಮೇಲೆಯೇ ಅಲ್ಲಿನ ಹೊಸ ರಾಜಕಾರಣ ರೂಪುಗೊಳ್ಳುತ್ತಿರುವ ಹೊತ್ತಲ್ಲಿ ಇಡಿಯ ಹೋರಾಟಕ್ಕೆ ಕನ್ನಡತನದ ರಂಗು ತುಂಬಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು. ನಾವೀಗ ಇದನ್ನು ಬೀದಿಗೆ ಬಿದ್ದ ಬಡವರ ಹೋರಾಟವಾಗಿ ರೂಪಿಸುವ ಅಗತ್ಯವಿದೆ. ಅಷ್ಟೇ ಅಲ್ಲ. ರಾಜ್ಯವನ್ನಾಳುವ ನಾಯಕರು ಅಕ್ಕಪಕ್ಕದ ರಾಜಕೀಯ ನಾಯಕರೊಂದಿಗೆ ಸುಂದರವಾದ ಗೆಳೆತನವೊಂದನ್ನು ಸಂಭಾಳಿಸಿಕೊಂಡು ತಮ್ಮ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಬೇಕಿದೆ. ಮೋದಿ ಜಾಗತಿಕ ನಾಯಕರೊಂದಿಗೆ ಇಟ್ಟುಕೊಂಡ ಬಾಂಧವ್ಯವನ್ನು ನೋಡಿಯೂ ಕಲಿಯದಿದ್ದರೆ ಏನೆನ್ನಬೇಕು ಹೇಳಿ? ಬಿಡಿ. ಪ್ರತಿಯೊಬ್ಬರಿಗೂ ದೇಶದ ಹಿತಕ್ಕಿಂತ ಕುಚರ್ಿಯ ವ್ಯಾಮೋಹವೇ ಬಹಳವಾಗಿರುವಾಗ ಇವೆಲ್ಲ ಮಾತಾಡಿಯೂ ಪ್ರಯೋಜನವಿಲ್ಲ.

ನಾವೀಗ ಸಮಸ್ಯೆಯ ಬದಲು ಪರಿಹಾರದ ಕುರಿತಂತೆ ಮಾತಾಡಬೇಕು. ಒಕ್ಕಲೆಬ್ಬಿಸಿದವರಿಗೆ ಮತ್ತೆಲ್ಲಾದರೂ ಜಾಗ ಕೊಟ್ಟು ವಸತಿ ನಿಮರ್ಿಸಿಕೊಡುವಂತೆ ಸಕರ್ಾರದ ಮೇಲೆ ಒತ್ತಡ ತರಬೇಕು. ಕಠೋರವಾದ ಪತ್ರ ಬರೆದರೆ ಪಕ್ಕದ ರಾಜ್ಯದವರು ಹೆದರುತ್ತಾರೆಂದು ಭಾವಿಸಿದರೆ ಅದು ಮೂರ್ಖತನವೇ. ತಮಿಳುನಾಡಿನ ಮುಖ್ಯಮಂತ್ರಿ ಕಾವೇರಿಗಾಗಿ ಕಠೋರ ಪತ್ರ ಬರೆಯಲಿಲ್ಲ ಅದಕ್ಕಾಗಿ ಕೇಂದ್ರ ಮಟ್ಟದಲ್ಲಿ ಲಾಬಿ ಮಾಡಿದರೆಂಬುದನ್ನು ಮರೆಯದಿರಿ. ನಾವಿನ್ನೂ ಮೂಗಿಗೆ ತುಪ್ಪ ಸವರುವ ರಾಜಕಾರಣಿಗಳ ಸಹವಾಸದಲ್ಲೇ ಇದ್ದೇವೆ.

ಅಂದಹಾಗೆ ನನಗೆ ಅರ್ಥವಾಗದ ಒಂದು ಪ್ರಶ್ನೆ ಇದೆ. ತೆಲುಗರ ಮೇಲಿಲ್ಲದ ನಮ್ಮ ದ್ವೇಷ ತಮಿಳಿಗರ ಮೇಲಿದೆಯಲ್ಲ ಏಕೆ? ಮರಾಠಿಗರನ್ನು ಕಂಡರೆ ಪ್ರೀತಿಸುವ ಗೋವಾದವ ಕನ್ನಡಿಗರನ್ನು ಕಂಡೊಡನೆ ಕೆಂಡಕಾರುತ್ತಾನಲ್ಲ ಏಕೆ? ಹಿಂದಿ ಭಾಷಿಗರನ್ನು ಕಂಠಮಟ್ಟ ದ್ವೇಷಿಸುವ ಮಹಾರಾಷ್ಟ್ರದ ಜನ ಕನ್ನಡಿಗರ ಮೇಲೆ ಪ್ರೀತಿ ತೋರುತ್ತಾರಲ್ಲ ಏಕಿರಬಹುದು? ಬಹುಶಃ ಈ ವಿಚಾರವನ್ನು ಸೂಕ್ತವಾಗಿ ಅಳೆದು ಸುರಿದರೆ ಪ್ರಾಂತವಾದದ ಅನೇಕ ಸಮಸ್ಯೆಗಳಿಗೆ ಪರಿಹಾರ ಹುಡುಕಬಹುದೇನೋ?

Comments are closed.