ವಿಭಾಗಗಳು

ಸುದ್ದಿಪತ್ರ


 

ನರೇಂದ್ರ ಭಾರತಕ್ಕಿದೋ ಭದ್ರ ಹೆಜ್ಜೆ!

20 ನೇ ಶತಮಾನದ ಆಲೋಚನೆಗಳ ಮೇಲೆ ಸ್ವಾಮೀಜಿಯವರ ಪ್ರಭಾವ ಅಗಾಧವಾದುದು. ಪಶ್ಚಿಮದ ಖ್ಯಾತ ವಿಜ್ಞಾನಿ ನಿಕೋಲಾ ಟೆಸ್ಲಾ ವಿದ್ಯುತ್ ವಿಜ್ಞಾನದಲ್ಲಿ ಮಹತ್ವದ ಸಂಶೋಧನೆಯ ಹುಚ್ಚು ಹತ್ತಿಸಿಕೊಂಡಿದ್ದನಲ್ಲ ಅವನಿಗೆ ಸಾಂಖ್ಯ ದರ್ಶನದ ಕಲ್ಪನೆ ಕೊಟ್ಟದ್ದೇ ಸ್ವಾಮಿ ವಿವೇಕಾನಂದರು. ಆನಂತರವೇ ಆತ ಬೇಕಾದ್ದೆಲ್ಲವೂ ಆಕಾಶದಲ್ಲಿದೆ ಎಂಬ ಚಿಂತನೆಯ ಜಾಡು ಹಿಡಿದು ಹೆಜ್ಜೆ ಹಾಕಿದ್ದು. ಸ್ವಾಮೀಜಿಯ ರಾಜಯೋಗದಲ್ಲಿ ಅಡಗಿದ್ದ ವಿಜ್ಞಾನದ ಅಧ್ಯಯನದಿಂದಲೇ ಪಶ್ಚಿಮದ ಚಿಂತಕರು ಹೊಸ ಲೋಕದೆಡೆಗೆ ಹೊರಳಿದ್ದು. ಹಾರ್ವಡರ್್ ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರಜ್ಞ ವಿಲಿಯಂ ಜೋನ್ಸ್ ತನ್ನ ಕೃತಿಗಳ ಹಿಂದಿನ ಸ್ಫೂತರ್ಿ ವಿವೇಕಾನಂದ ಎಂದೊಪ್ಪಿಕೊಳ್ಳಲು ಎಂದಿಗೂ ಹಿಂಜರಿಯಲಿಲ್ಲ. ಆನಂತರದ ದಿನಗಳಲ್ಲಿ ಆಲ್ಡಸ್ ಹಕ್ಸ್ಲಿ, ಕ್ರಿಸ್ಟೊಫರ್ ಐಷರ್ವುಡ್, ಗೆರಾಲ್ಡ್ ಹಡರ್್ರಂಥವರೂ ವಿವೇಕಾನಂದರ ಚಿಂತನೆಗಳಿಂದ ಬಹುವಾಗಿ ಪ್ರಭಾವಿತರಾದವರೇ. ಫ್ರೆಂಚ್ ಸಾಹಿತಿ ನೋಬೆಲ್ ಪ್ರಶಸ್ತಿ ವಿಜೇತ ರೋಮಾರೋಲಾಗಂತೂ ವಿವೇಕಾನಂದರ ಹುಚ್ಚೇ ಹಿಡಿದಿತ್ತು.

3

ಕಾಲದ ಗತಿ ಅನುಪಮ. ಭಾರತವನ್ನು-ಭಾರತೀಯರನ್ನು ಮೂದಲಿಸುತ್ತಿದ್ದ ಜಾಗತಿಕ ನಾಯಕರನ್ನು ಕಂಡು ನಾವೇ ಹೊಟ್ಟೆ ಉರಕೊಂಡದ್ದಿದೆ. 125 ಕೋಟಿ ಜನರ ಭಾರತವನ್ನು ಗಣನೆಗೇ ತೆಗೆದುಕೊಳ್ಳದೇ ಜಗತ್ತಿನ ಚಕ್ರ ಸುತ್ತುತ್ತಲೇ ಇತ್ತು. ಅಸಹಾಯಕರಾದ ನಾವುಗಳೂ ಪ್ರಾಚೀನ ಭಾರತದ ವೈಭವವನ್ನು ಕೊಂಡಾಡುತ್ತಾ ‘ಒಮ್ಮೆ ಹೀಗಾಗುತ್ತೇವೆ’ ಎಂದು ಹೆಮ್ಮೆಯಿಂದ ಹೇಳಿ ನಿಟ್ಟುಸಿರು ಬಿಟ್ಟುಬಿಡುತ್ತಿದ್ದೆವು. ನಮ್ಮೆಲ್ಲರ ಕಣ್ಣೆದುರಿಗೇ ಕಾಲಚಕ್ರ ಒಂದು ಸುತ್ತು ಬಂದಿದೆ. ಅಮೇರಿಕದ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ನಂತರ ಕೆನಡಾ, ಮೆಕ್ಸಿಕೊ, ಸಿರಿಯಾ, ಈಜಿಪ್ಟ್ನ ಮುಖ್ಯಸ್ಥರಿಗೆ ಕರೆ ಮಾಡಿ ಮಾತನಾಡಿದ ಅಧ್ಯಕ್ಷ ಟ್ರಂಪ್ರ ಐದನೇ ಅಧಿಕೃತ ಕರೆ ಮಾಡಿದ್ದು ಭಾರತಕ್ಕೇ! ಏಷ್ಯಾದ ರಕ್ಕಸ ರಾಷ್ಟ್ರ ಚೀನಾದ ಶೀಗೆ, ಜಪಾನಿನ ಶಿಂಜೋಗೆ, ರಷ್ಯಾದ ಪುತೀನ್ರಿಗೂ ದೊರೆಯದ ಗೌರವ ಭಾರತಕ್ಕೆ. ಅದೂ ಸರಿಯೇ. ಅಮೇರಿಕದ ಅಧ್ಯಕ್ಷರ ಕರೆಯನ್ನು ಇಷ್ಟು ಸಂಭ್ರಮಿಸುವ ಅಗತ್ಯ ಖಂಡಿತ ಇಲ್ಲ. ಆದರೆ ‘ಭಾರತ ಕಡೆಗಣಿಸಬಹುದಾದ ರಾಷ್ಟ್ರವಲ್ಲ’ ಎಂಬ ಸಂದೇಶ ಹೊರಟಿರುವುದೇ ಬಲು ವಿಶಿಷ್ಟವಾದುದು. .
ಹೀಗೊಂದು ವಾತಾವರಣವನ್ನು ಬಲು ಹಿಂದೆ ವಿವೇಕಾನಂದರು ಸೃಷ್ಟಿಸಿದ್ದರು. ಭಾರತವನ್ನು ಜಗತ್ತಿನ ಮುಂದೆ ಭಾರತೀಯರೇ ಕೆಟ್ಟದಾಗಿ ಚಿತ್ರಿಸಿದ್ದಾಗ ವಿವೇಕಾನಂದರು ಇಡಿಯ ಕ್ಯಾನ್ವಾಸಿಗೆ ಬಣ್ಣ ಬಳಿದು ಹೊಸ ಚಿತ್ರ ರಚಿಸಿದ್ದರು. ಹೌದು. ಪರಿಸ್ಥಿತಿ ಇಂದಿನಂತೆ ಇತ್ತು. ಹೇಗೆ ದೆಹಲಿಯಲ್ಲಿ ಕುಳಿತ ಭಾರತೀಯ ಮಾಧ್ಯಮದವರು ಭಾರತೀಯತೆಯನ್ನೇ ಹಳಿದು ಸಾಹಿತ್ಯ ರಚಿಸಿ, ಮಾಧ್ಯಮಗಳ ಮೂಲಕ ಭಾರತವನ್ನು ಕನಿಷ್ಠ ಮಟ್ಟದಲ್ಲಿ ಪ್ರತಿಬಿಂಬಿಸುವಂತೆ ಮಾಡುತ್ತಾರೋ, ಅವತ್ತೂ ಹಾಗೆಯೇ. ರಮಾಬಾಯಿ ಎಂಬ ಕ್ರೈಸ್ತ ಮತಕ್ಕೆ ಪರಿವರ್ತನೆಗೊಂಡ ಹೆಣ್ಣುಮಗಳು ತನ್ನದೊಂದು ಸಂಘ ಕಟ್ಟಿಕೊಂಡು ಭಾರತೀದಲ್ಲಿ ಬಾಲ ವಿಧವೆಯರು, ಪುರುಷರಿಂದ ಶೋಷಣೆಗೊಳಗಾಗುವ ಹೆಣ್ಣುಮಕ್ಕಳ ಪರಿಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ಹೃದಯವಿದ್ರಾವಕವಾಗಿ ಅಮೇರಿಕಾದಲ್ಲಿ ಬಣ್ಣಿಸುತ್ತಿದ್ದಳು. ತೀರಾ ಇತ್ತೀಚೆಗೆ ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿ ನಡುರಾತ್ರಿ ನಡೆದ ಘಟನೆಯನ್ನು ಮುಂದಿಟ್ಟುಕೊಂಡು ಇಡಿಯ ಬೆಂಗಳೂರಿಗರು ಸ್ತ್ರೀ ಶೋಷಕರೆಂಬಂತೆ ಬಿಂಬಿಸಿಬಿಟ್ಟವಲ್ಲ ಮಾಧ್ಯಮಗಳು! ಈ ಚಚರ್ೆ ಇಲ್ಲಿ ಮಾತ್ರ ನಡೆದದ್ದಲ್ಲ. ಜಾಗತಿಕ ಮಟ್ಟದಲ್ಲಿ ನಿರ್ಭಯಾ ಕೇಸಿನಂತೆ ಸುದ್ದಿ ಮಾಡ ಹೊರಟಿತ್ತು ಈ ಘಟನೆ. ಇಡಿಯ ಹಿಂದೂ ಸಮಾಜ ನಿರ್ಲಜ್ಜ, ಸ್ತ್ರೀ ಶೋಷಕ ಅಂತ ಸಾಬೀತು ಪಡಿಸಲು ಹೆಣಗಾಡಿದ್ದರು. ಜಾಗತಿಕ ಮಟ್ಟದ ಲೇಖಕರೇ ಅನೇಕರು ಕುಂಭಮೇಳದಲ್ಲಿ ಲಕ್ಷಾಂತರ ಹೆಣ್ಣುಮಕ್ಕಳು ಸ್ನಾನಕ್ಕಿಳಿದಾಗಲೇ ಕೆಡದ ಮನಸ್ಥಿತಿಯವನು ಹಿಂದೂ ಎಂದು ಹೇಳಿ ಬಾಯ್ಮುಚ್ಚಿಸಿದ್ದಕ್ಕೆ ಬಚಾವು. ಅಂದೂ ಹಾಗೆಯೇ ರಮಾಬಾಯಿಯಂಥವರನ್ನು ಮುಂದಿಟ್ಟುಕೊಂಡು ಕ್ರಿಶ್ಚಿಯನ್ ಮಿಶನರಿಗಳು ಭಾರತದ ಹೆಸರನ್ನು ಸಾಕಷ್ಟು ಹಾಳುಗೆಡವಿದ್ದರು. ನಮ್ಮನ್ನು ನಾಗರಿಕರನ್ನಾಗಿಸಲು ಅಲ್ಲಿ ನಿಧಿ ಸಂಗ್ರಹಿಸುತ್ತಿದ್ದರು. ಅಂತಹ ಹೊತ್ತಲ್ಲಿ ಅಮೇರಿಕಾಕ್ಕೆ ವಿವೇಕಾನಂದರ ಪದಾರ್ಪಣೆಯಾಗಿತ್ತು.

1

ಸರ್ವಧರ್ಮ ಸಮ್ಮೇಳನದಲ್ಲಿ ಅವರ ಭಾಗವಹಿಸುವಿಕೆ ಪೂರ್ವ ನಿಗದಿತವೇನೂ ಆಗಿರಲಿಲ್ಲ. ಇಷ್ಟಕ್ಕೂ ಸಮ್ಮೇಳನ ನಡೆದಿದ್ದು ಎಲ್ಲಾ ಮತ-ಪಂಥಗಳು ಸಮಾನವೆಂದು ಸಾರಲೇನೂ ಅಲ್ಲ. ಎಲ್ಲರನ್ನೂ ಒಟ್ಟಿಗೇ ಕೂರಿಸಿ ಇವರುಗಳ ನಡುವೆ ಕ್ರಿಶ್ಚಿಯನ್ ಪಂಥದ ಶ್ರೇಷ್ಠತೆಯನ್ನು ಸಾರುವ ತವಕ ಅವರಿಗಿದ್ದೇ ಇತ್ತು. ಕೆಲವು ಸಂಪ್ರದಾಯಬದ್ಧ ಚಚರ್ುಗಳ ಮುಖ್ಯಸ್ಥರಂತೂ ಕ್ರಿಶ್ಚಿಯನ್ ಮತವನ್ನು ಇತರರೊಂದಿಗೆ ಸಮಸಮಕ್ಕೆ ಕೂರಿಸುವುದನ್ನೇ ಕಟುವಾಗಿ ವಿರೋಧಿಸಿ ಸಮ್ಮೇಳನವನ್ನೇ ಧಿಕ್ಕರಿಸಿದ್ದರು. ಆದರೇನು? ಅಮೇರಿಕಾದ ಈ ಸಾಧನಾ ಜಾತ್ರೆಯಲ್ಲಿ ಶಿಕ್ಷಣ, ಕಲೆ, ವಿದ್ವತ್ತಿನ ಪ್ರದರ್ಶನಕ್ಕೆ ಕೊಟ್ಟಷ್ಟೇ ಮೌಲ್ಯವನ್ನು ಧರ್ಮಕ್ಕೂ ನೀಡಬೇಕೆಂದು ಪ್ರಮುಖ ಸಂಘಟಕರಾದ ಜಾನ್ ಹೆನ್ರಿ ಬರೋಸ್ ಆಗ್ರಹಿಸಿದ್ದರು. ಜಗತ್ತಿನ ಬೇರೆ ಬೇರೆ ಮತ ಪ್ರಮುಖರನ್ನು ಸಂಪಕರ್ಿಸಿ ಅವರನ್ನು ಆಹ್ವಾನಿಸಿದ್ದರು. ನೋಂದಣಿ ಅದಾಗಲೇ ಮುಗಿದು ಹೋಗಿತ್ತು. ಬರುವ ಗಣ್ಯರಿಗಾಗಿ ವ್ಯವಸ್ಥೆಯೂ ಆಗಿ ಹೋಗಿತ್ತು. ಹೊಸಬರನ್ನು ಈ ಪಟ್ಟಿಯ ನಡುವೆ ನುಗ್ಗಿಸುವ ಪ್ರಶ್ನೆಯೇ ಇರಲಿಲ್ಲ. ಇವ್ಯಾವುದರ ಅರಿವಿರದಿದ್ದ ಸ್ವಾಮಿ ವಿವೇಕಾನಂದರ ಅನುಯಾಯಿಗಳು ಗುರುಗಳ ಯೋಗ್ಯತೆಯನ್ನಷ್ಟೇ ಗುರುತಿಸಿ ನಿಧಿ ಸಂಗ್ರಹಿಸಿ ಕಳಿಸಿಬಿಟ್ಟಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕಾರನಾಗಿ ಭಾಗವಹಿಸುವ ಎಲ್ಲಾ ಅವಕಾಶಗಳನ್ನು ಕಳಕೊಂಡ ಸ್ವಾಮೀಜಿ ಕೇಳುಗನಾಗಿ ಕುಳಿತುಕೊಳ್ಳಲು ನಿಶ್ಚಯಿಸಿದ್ದರು. ಆದರೆ ಕ್ರಿಶ್ಚಿಯನ್ನರ ಹಣೆಬರಹ ಬೇರೆಯೇ ಇತ್ತು. ವೇದಿಕೆಯ ಮೇಲೆ 31ನೆಯವರಾಗಿ ಕುಳಿತ ಸ್ವಾಮೀಜಿ ಈಗ ಬೇಡವೆಂದು ದೂಡುತ್ತಲೇ ಅದೊಮ್ಮೆ ಮಾತು ಶುರು ಮಾಡಿದರು. ಮಾತು ಮುಗಿದದ್ದು ತಿಳಿಯಲೇ ಇಲ್ಲ. ಪಶ್ಚಿಮ ಹಿಂದೂ ಅಪ್ಪುಗೆಯಲ್ಲಿ ಮೈಮರೆತುಬಿಟ್ಟಿತ್ತು. ಅಮೇರಿಕಾದ ಲೇಖಕನೊಬ್ಬ ಬರೆದ ‘ಪೂರ್ವದ ಕುರಿತಂತೆ ಭಕ್ತಿ ಮೂಡುವಂತೆ ಮಾಡಿದರು ವಿವೇಕಾನಂದ’.
ಮೊದಲ ಭಾಷಣಕ್ಕೆ ಅನುಮತಿ ಸಿಗುವುದು ಅನುಮಾನವಿತ್ತು. ಈಗ ಆ ಭಾಷಣದ ನಂತರ ಎಲ್ಲಿ ಸಮ್ಮೇಳನ ನಡೆದರೂ ವಿವೇಕಾನಂದರೇ ಪ್ರಮುಖ ಆಕರ್ಷಣೆ. 1894 ರ ಏಪ್ರಿಲ್ 5 ರಂದು ಬೋಸ್ಟನ್ ಈವ್ನಿಂಗ್ ಟ್ರಾನ್ಸ್ಕ್ರಿಪ್ಟ್ ಪತ್ರಿಕೆ ‘ಭಾಷಣಕಾರರ ತಲೆ ಚಿಟ್ಟು ಹಿಡಿಸುವ ಉದ್ದುದ್ದ ಭಾಷಣಗಳನ್ನು ಕೇಳಿ ಜನ ದೊಡ್ಡ ಸಂಖ್ಯೆಯಲ್ಲಿ ಎದ್ದು ಹೋಗಲಾರಂಭಿಸಿದರೆ, ಅಧ್ಯಕ್ಷರು ಎದ್ದು ಸ್ವಾಮಿ ವಿವೇಕಾನಂದರು ಕಾರ್ಯಕ್ರಮ ಮುಗಿಯುವ ಮುನ್ನ ಸಣ್ಣದೊಂದು ಉಪನ್ಯಾಸ ಮಾಡಲಿದ್ದಾರೆ ಎಂದೊಡನೆ ಎದ್ದು ಹೋಗಬೇಕೆಂದಿದ್ದವರು ಶಾಂತ ಚಿತ್ತರಾಗಿ ಕುಳಿತುಬಿಡುತ್ತಿದ್ದರು. ಕೊಲಂಬಸ್ ಹಾಲ್ನಲ್ಲಿ ತುಂಬಿದ್ದ 4 ಸಾವಿರ ಜನರೂ ವಿವೇಕಾನಂದರ 15 ನಿಮಿಷ ಭಾಷಣಕ್ಕಾಗಿ ಬೇರೆಯವರ ಗಂಟೆಗಟ್ಟಲೆ ಕೊರೆತವನ್ನು ನಗುತ್ತಲೇ ಕೇಳುತ್ತಿದ್ದರು’ ಎಂದು ಬರೆದಿತ್ತು.
ಸ್ವಾಮಿ ವಿವೇಕಾನಂದರ ಶಕ್ತಿ ಇದ್ದುದು ಅವರ ವ್ಯಕ್ತಿತ್ವದಲ್ಲಿಯೇ. ಅವರೆಂದಿಗೂ ಅಮೇರಿಕಾದ ವೈಭವಕ್ಕೆ ಮಾರುಹೋಗಿ ತಮ್ಮತನವನ್ನು ಕಳಕೊಂಡವರಲ್ಲ. ಬುದ್ಧಿಜೀವಿಗಳ ಬರಡು ವಾದಕ್ಕೆ ಬೆರಗಾದವರಂತೂ ಅಲ್ಲವೇ ಅಲ್ಲ. ಒಮ್ಮೆಯಂತೂ ಸರ್ವಧರ್ಮ ಸಮ್ಮೇಳನದ್ದೇ ಕಾರ್ಯಕ್ರಮವೊಂದರಲ್ಲಿ ಪ್ರಭಾವೀ ಜನರ ದೊಡ್ಡದೊಂದು ಸಮೂಹದೆದುರು ನಿಂತು ಸ್ವಾಮೀಜಿ ‘ನಿಮ್ಮಲ್ಲೆಷ್ಟು ಜನ ಹಿಂದೂ ಶಾಸ್ತ್ರಗಳ ಅಧ್ಯಯನ ಮಾಡಿದ್ದೀರಿ?’ ಎಂದು ಪ್ರಶ್ನಿಸಿದರು. ಇಡಿಯ ಸಭೆಯಲ್ಲಿ ಮೂರ್ನಾಲ್ಕು ಜನ ಕೈ ಎತ್ತಿರಬಹುದಷ್ಟೇ. ಸ್ವಾಮೀಜಿ ದನಿ ಎತ್ತರಿಸಿದರು, ಎದೆ ಉಬ್ಬಿತು. ಬುದ್ಧಿವಂತರೆನಿಸಿಕೊಂಡಿದ್ದವರೆಲ್ಲರನ್ನು ಒಮ್ಮೆ ದಿಟ್ಟಿಸಿ ನೋಡಿ ಸರಳವಾದ ಪ್ರಶ್ನೆ ಕೇಳಿದರು ‘ಅಷ್ಟಾದರೂ ನಮ್ಮ ಕುರಿತಂತೆ ತೀಪರ್ು ಕೊಡುವ ಧಾಷ್ಟ್ರ್ಯ ತೋರುತ್ತೀರಿ’. ಸ್ವಾಮೀಜಿ ಅಕ್ಷರಶಃ ಇಲಿಯೊಂದಿಗೆ ಆಡುವ ಬೆಕ್ಕಿನಂತೆ ಆಟವಾಡಿದರು. ಹಿಂದೂ ಧರ್ಮವನ್ನು ಅವಹೇಳನ ಮಾಡುತ್ತಿದ್ದ ಕ್ರಿಶ್ಚಿಯನ್ನರನ್ನಂತೂ ಬಿಡಲಿಲ್ಲ; ಭಾರತವನ್ನು ಆಳುತ್ತಿದ್ದ ಬ್ರಿಟೀಷರನ್ನು ತರಾಟೆಗೆ ತೆಗೆದುಕೊಂಡರು. ‘ಕ್ರಿಶ್ಚಿಯನ್ ರಾಷ್ಟ್ರಗಳಲ್ಲಿ ಅತ್ಯಂತ ಸಂಪದ್ಭರಿತವಾದ ಇಂಗ್ಲೆಂಡು 25 ಕೋಟಿ ಏಷ್ಯನ್ನರ ಕುತ್ತಿಗೆಯ ಮೇಲೆ ಕುಂತಿದೆ’ ಎಂದರು. ‘ಯೂರೋಪಿನ ಸಿರಿವಂತಿಕೆಯ ಆರಂಭವಾದುದು ಸ್ಪೇನ್ ಮೆಕ್ಸಿಕೋದ ಮೇಲೆ ಆಕ್ರಮಣ ಮಾಡಿದ ನಂತರ. ಕ್ರಿಶ್ಚಿಯನ್ನರ ಸಂಪತ್ತು ಸಹಮಾನವರ ಕತ್ತು ಕಡಿಯುವುದರಿಂದ ಬಂದಿರುವಂಥದ್ದು. ಇಂತಹ ಬೆಲೆ ತೆತ್ತು ಬರುವ ಸಿರಿವಂತಿಕೆಯನ್ನು ಹಿಂದೂ ಕಡೆಗಣ್ಣಿಂದಲೂ ನೋಡಲಾರ’ ಎಂದು ತಮ್ಮ ಹಿರಿಮೆಯನ್ನು ಸಾರಿಕೊಂಡರು.

ಅಮೇರಿಕಾದ ಪ್ರಾಮಾಣಿಕ ವರ್ಗ ವಿವೇಕಾನಂದರ ಮಾತುಗಳಿಂದ ಧಿಗ್ಗನೆದ್ದು ಕುಳಿತಿತು. ನ್ಯೂಯಾಕರ್್ ಹೆರಾಲ್ಡ್ ಪತ್ರಿಕೆ ‘ಅವರನ್ನು ಕೇಳಿದ ನಂತರ ಇಂತಹ ಜ್ಞಾನಿಯ ನಾಡಿಗೆ ಮಿಶನರಿಗಳನ್ನು ಕಳಿಸುವ ನಾವೆಷ್ಟು ಮೂರ್ಖರು ಎನಿಸುತ್ತಿದೆ’ ಎಂದು ಬರೆಯಿತು. ಪರಿಣಾಮ ಏನಾಯಿತು ಗೊತ್ತೇ? ಪ್ರಚಂಡ ಎಂಜಿನಿಯರ್, ವಿಜ್ಞಾನಿ, ಹೀರಂ ಮ್ಯಾಕ್ಸಿಂ ಹೇಳುವಂತೆ ‘ಮಿಷನರಿಗಳ ಆದಾಯ ವರ್ಷಕ್ಕೆ ಹತ್ತು ಲಕ್ಷಕ್ಕೂ ಹೆಚ್ಚು ಡಾಲರ್ಗಳಷ್ಟು ಕಡಿಮೆಯಾಯ್ತು’. ಅಮೇರಿಕಾದ ಚಚರ್ುಗಳು ನಿಗಿ ನಿಗಿ ಕೆಂಡವಾದವು. ರಮಾದೇವಿಯನ್ನು ಬಳಸಿಕೊಂಡು ವಿವೇಕಾನಂದರ ವಿರುದ್ಧ ಬಗೆ ಬಗೆಯ ಆರೋಪಗಳನ್ನು ಮಾಡಿದವು. ಭಾರತದಲ್ಲಿ ಹೆಣ್ಣುಮಕ್ಕಳ ಸ್ಥಿತಿಗತಿಗಳ ಕುರಿತಂತೆ ತಾನು ಹೇಳಿದ್ದನ್ನು ಸಾಬೀತು ಪಡಿಸಲು ಆಕೆ ವಿವೇಕಾನಂದರ ಚಾರಿತ್ರ್ಯವನ್ನೇ ಪ್ರಶ್ನಿಸಿದಳು. ಸ್ವಾಮೀಜಿ ತಮ್ಮ ಪ್ರಿಯ ಶಿಷ್ಯೆ ಓಲೆ ಬುಲ್ಳಿಗೆ ಬರೆದ ಪತ್ರದಲ್ಲಿ ‘ಒಬ್ಬ ಮನುಷ್ಯ ಎಷ್ಟೇ ಸಭ್ಯಸ್ಥನಾಗಿದ್ದರೂ ಅವನ ಕುರಿತಂತೆ ಕರಾಳ ಸುಳ್ಳುಗಳನ್ನು ಹೆಣೆಯುವವರು ಇದ್ದೇ ಇರುತ್ತಾರೆ. ಚಿಕಾಗೋದಲ್ಲಿ ಪ್ರತಿ ದಿನ ನನ್ನ ವಿರುದ್ಧ ಇಂತಹ ಸುಳ್ಳುಗಳನ್ನು ಹಬ್ಬಿಸುವವರು ಬೇಕಾದಷ್ಟಿದ್ದರು. ಮತ್ತು ಈ ಮಹಿಳೆಯರೆಲ್ಲ ಕ್ರಿಶ್ಚಿಯನ್ನರಲ್ಲಿ ಕ್ರಿಶ್ಚಿಯನ್ನರಾಗಿದ್ದರು’ ಎಂದು ನೊಂದುಕೊಂಡಿದ್ದರು.

ಗೆಲುವನ್ನು ಸಹಿಸದಾದಾಗ ಸುಳ್ಳು ಆಪಾದನೆ ಮಾಡಿ ಸೋಲಿಸಲು ಪ್ರಯತ್ನ ಪಡುವಂಥವರು ಯಾವಾಗಲೂ ಇದ್ದೇ ಇರುತ್ತಾರೆ. ಹಿಂದೂ ಧರ್ಮಕ್ಕಾದದ್ದೂ ಇದೇ. ಭಾರತಕ್ಕಾದುದೂ ಇದೇ. ನೇರ ಮಾರ್ಗದಲ್ಲಿ ಹಿಂದೂವನ್ನು ಎದುರಿಸಲು ಸಾಧ್ಯವಾಗದಾದಾಗ ಸುಳ್ಳು ಸುದ್ದಿಯ ಮೂಲಕ ನಮ್ಮನ್ನು ಹೀಗಳೆಯಲಾಯ್ತು. ಶತಮಾನಗಳ ಕಾಲ ಅದನ್ನೇ ಕೇಳಿ ಹೊರಗಿನವರು ನಂಬುವುದು ಬಿಡಿ, ನಾವೂ ನಂಬಿ ಕುಳಿತುಬಿಟ್ಟೆವು. ಸ್ವಾಮಿ ವಿವೇಕಾನಂದರ ಆಗಮನ ಅಂತಹುದೇ ಕಾಲದಲ್ಲಿ ಆಗಿದ್ದು. ರಾಜೀವ್ ಮಲ್ಹೋತ್ರ ಸ್ವಾಮೀಜಿಯವರ ಸಾಧನೆಗಳನ್ನು ಸುಂದರವಾಗಿ ಹಿಡಿದಿಟ್ಟಿದ್ದಾರೆ. ಅವರ ಪ್ರಕಾರ ಸ್ವಾಮಿ ವಿವೇಕಾನಂದರ ಆಂದೋಲನ ಇಬ್ಬಗೆಯದು. ಮೊದಲನೆಯದು ಅವರು ಬದುಕಿದ್ದಾಗ ಆದ ನೇರ ಕ್ರಾಂತಿಕಾರಿ ಬದಲಾವಣೆಗಳದ್ದು. ಇದಕ್ಕೆ ಆಧಾರಭೂತವಾಗಿ ನಿಂತವರು ರಾಮಕೃಷ್ಣಾಶ್ರಮದ ಸಾಧುಗಳು, ಪಶ್ಚಿಮದ ವಿವೇಕಾನಂದರ ಭಕ್ತರು-ಮಿತ್ರರು ಮತ್ತು ಸ್ವಾಮೀಜಿಯ ಚಟುವಟಿಕೆಗಳ ಪರಿಧಿಯಿಂದ ಹೊರಗಿದ್ದೂ ಅವರ ಪ್ರಭಾವಕ್ಕೆ ಒಳಗಾದವರು. ಇನ್ನು ಎರಡನೆಯದು ಅವರು ತೀರಿಕೊಂಡ ನಂತರವೂ ಪೀಳಿಗೆಯಿಂದ ಪೀಳಿಗೆಗೆ ಹರಡುತ್ತಿರುವ ಅವರ ಚಿಂತನೆಗಳು ನಡೆಸುತ್ತಿರುವ ಆಂದೋಲನ. ಪ್ರತೀ ಹಂತದಲ್ಲೂ ಅವರ ಚಿಂತನೆಗಳು ಹೊಸ ರೂಪ ಹೊಂದಿ ಮತ್ತೆ ಜೀವ ಪಡೆದುಕೊಳ್ಳುತ್ತವೆ. ಕೆಲವೊಮ್ಮೆ ಹೊಸ ರೂಪ ಕೊಟ್ಟವರು ಇದನ್ನು ತಮ್ಮದೇ ವಿಚಾರಧಾರೆಯೆಂಬಂತೆ ಪ್ರತಿಪಾದಿಸಿಬಿಡುತ್ತಾರೆ. ಇನ್ನೂ ಕೆಲವರು ತಮ್ಮ ಆಲೋಚನೆಯ ಹಿಂದಿನ ಸೂತ್ರಧಾರನನ್ನು ಸ್ಮರಿಸಿಕೊಂಡು ಕೃತಜ್ಞತೆ ಸಮಪರ್ಿಸುತ್ತಾರೆ.

4
ಹಾಗೆ ನೋಡಿದರೆ 20 ನೇ ಶತಮಾನದ ಆಲೋಚನೆಗಳ ಮೇಲೆ ಸ್ವಾಮೀಜಿಯವರ ಪ್ರಭಾವ ಅಗಾಧವಾದುದು. ಪಶ್ಚಿಮದ ಖ್ಯಾತ ವಿಜ್ಞಾನಿ ನಿಕೋಲಾ ಟೆಸ್ಲಾ ವಿದ್ಯುತ್ ವಿಜ್ಞಾನದಲ್ಲಿ ಮಹತ್ವದ ಸಂಶೋಧನೆಯ ಹುಚ್ಚು ಹತ್ತಿಸಿಕೊಂಡಿದ್ದನಲ್ಲ ಅವನಿಗೆ ಸಾಂಖ್ಯ ದರ್ಶನದ ಕಲ್ಪನೆ ಕೊಟ್ಟದ್ದೇ ಸ್ವಾಮಿ ವಿವೇಕಾನಂದರು. ಆನಂತರವೇ ಆತ ಬೇಕಾದ್ದೆಲ್ಲವೂ ಆಕಾಶದಲ್ಲಿದೆ ಎಂಬ ಚಿಂತನೆಯ ಜಾಡು ಹಿಡಿದು ಹೆಜ್ಜೆ ಹಾಕಿದ್ದು. ಸ್ವಾಮೀಜಿಯ ರಾಜಯೋಗದಲ್ಲಿ ಅಡಗಿದ್ದ ವಿಜ್ಞಾನದ ಅಧ್ಯಯನದಿಂದಲೇ ಪಶ್ಚಿಮದ ಚಿಂತಕರು ಹೊಸ ಲೋಕದೆಡೆಗೆ ಹೊರಳಿದ್ದು. ಹಾರ್ವಡರ್್ ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರಜ್ಞ ವಿಲಿಯಂ ಜೋನ್ಸ್ ತನ್ನ ಕೃತಿಗಳ ಹಿಂದಿನ ಸ್ಫೂತರ್ಿ ವಿವೇಕಾನಂದ ಎಂದೊಪ್ಪಿಕೊಳ್ಳಲು ಎಂದಿಗೂ ಹಿಂಜರಿಯಲಿಲ್ಲ. ಆನಂತರದ ದಿನಗಳಲ್ಲಿ ಆಲ್ಡಸ್ ಹಕ್ಸ್ಲಿ, ಕ್ರಿಸ್ಟೊಫರ್ ಐಷರ್ವುಡ್, ಗೆರಾಲ್ಡ್ ಹಡರ್್ರಂಥವರೂ ವಿವೇಕಾನಂದರ ಚಿಂತನೆಗಳಿಂದ ಬಹುವಾಗಿ ಪ್ರಭಾವಿತರಾದವರೇ. ಫ್ರೆಂಚ್ ಸಾಹಿತಿ ನೋಬೆಲ್ ಪ್ರಶಸ್ತಿ ವಿಜೇತ ರೋಮಾರೋಲಾಗಂತೂ ವಿವೇಕಾನಂದರ ಹುಚ್ಚೇ ಹಿಡಿದಿತ್ತು. ಆತ ತನ್ನ ಜೀವಿತಾವಧಿಯ ಬಹುಪಾಲು ಸಮಯವನ್ನು ವಿವೇಕಾನಂದರ ಕುರಿತಂತಹ ಸಂಶೋಧನೆಗಳಲ್ಲಿಯೇ ಕಳೆದ. ಈ ಕಾರಣಕ್ಕಾಗಿಯೇ ಮತ್ತೊಬ್ಬ ನೋಬೆಲ್ ಪ್ರಶಸ್ತಿ ವಿಜೇತ ಹರ್ಮನ್ ಹೆಸ್ಸಿ ತನ್ನ ಸಿದ್ಧಾರ್ಥ ಎಂಬ ಕೃತಿಯನ್ನು ರೋಮಾ ರೋಲಾಗೇ ಅಪರ್ಿಸಿ ಧನ್ಯನಾದ.
ಇಷ್ಟೆಲ್ಲಾ ಇದ್ದರೂ ಪಶ್ಚಿಮ ಬೇಕಂತಲೇ ಸ್ವಾಮೀಜಿಯವರ ಅವಗಣನೆ ಮಾಡಿತು. ಅವರ ಪ್ರಭಾವದಿಂದ ಸಮಾಜದಲ್ಲಿ ಕೀತರ್ಿವಂತರಾದವರ ಕೃತಿಗಳನ್ನು ಹಾಡಿ ಹೊಗಳುವಾಗ ಬೇಕಂತಲೇ ಸ್ವಾಮಿ ವಿವೇಕಾನಂದರನ್ನು ಬಿಡಲಾಯ್ತು. ಅವರ ಚಿಂತನೆಗಳ ಓತಪ್ರೋತ ಪ್ರವಾಹವನ್ನು ಕಡೆಗಣಿಸುವ ಈ ಪ್ರಯತ್ನಕ್ಕೆ ಕೊನೆಯ ಪಕ್ಷ ಭಾರತ ಬೌದ್ಧಿಕ ಪ್ರತಿರೋಧವನ್ನಾದರೂ ಒಡ್ಡಬೇಕಿತ್ತು. ಅವರ 150ನೇ ಜಯಂತಿಯ ಅವಕಾಶವೂ ಒದಗಿತ್ತು. ನಾವು ಉಪಯೋಗಿಸಿಕೊಳ್ಳಲಿಲ್ಲ. ರಥಯಾತ್ರೆಗಳು, ಶಾಲಾ-ಕಾಲೇಜು ಕಾರ್ಯಕ್ರಮಗಳಾದವು ನಿಜ. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅವರನ್ನು ಪುನಸ್ಥರ್ಾಪಿಸುವ ಕೆಲಸ ಆಗಲಿಲ್ಲ. ನಾವು ಸೋತೆವು. ಅಂದಹಾಗೆ ಈ ವರ್ಷ ನಿವೇದಿತೆಯ 150 ನೇ ಜಯಂತಿ. ಶಿಷ್ಯೆಯ ನೆನಪು ಮಾಡಿಕೊಳ್ಳುವ ನೆಪದಲ್ಲಿ ಮತ್ತೆ ಗುರುವಿನ ವೈಭವ ಸಾರೋಣ. ಹಾಗೆಂದೇ ಮಂಗಳೂರಿನಲ್ಲಿ ಫೆಬ್ರುವರಿ 11 ಮತ್ತು 12 ರಂದು ಇವರೀರ್ವರ ಸಾಹಿತ್ಯದ ಚಚರ್ಾ ಗೋಷ್ಠಿಗಳು ನಡೆಯುತ್ತಿರೋದು.
ಹ್ಞಾಂ! ಟ್ರಂಪ್ ಕರೆಯನ್ನು ನೆನಪಿಸಿಕೊಳ್ಳುತ್ತಾ ಎಲ್ಲಿಯವರೆಗೆ ಬಂದುಬಿಟ್ಟೆವು. ಭಾರತದ ಗೌರವ ಈಗ ಮತ್ತೆ ಘನೀಭವಿಸುತ್ತಿದೆ. ಮೊನ್ನೆ 26ಕ್ಕೆ ದುಬೈನ ಗಗನಚುಂಬಿ ಕಟ್ಟಡ ಬುಜರ್್ ಖಲೀಫಾವನ್ನೂ ಕೇಸರಿ-ಬಿಳಿ-ಹಸಿರು ಬಣ್ಣದ ದೀಪಗಳಿಂದ ಸಿಂಗರಿಸಿದ್ದನ್ನು ನೋಡುವಾಗ ಮೈಮೇಲೆ ಮುಳ್ಳುಗಳೆದ್ದಿದ್ದವು. ಭಾರತ ಮತ್ತೆ ಜಗತ್ತಿನ ಪ್ರೀತಿ ಪಾತ್ರ ರಾಷ್ಟ್ರವಾಗುತ್ತಿದೆ. ನಮ್ಮೊಳಗಿನ ಅಂತಃಶಕ್ತಿ ಅಖಂಡವಾಗಿ ಜಾಗೃತವಾಗಿ ನಿಂತಿದೆ. ನರೇಂದ್ರ ಭಾರತ ಮೈದಳೆಯುತ್ತಿದೆ

Comments are closed.