ವಿಭಾಗಗಳು

ಸುದ್ದಿಪತ್ರ


 

ನಿವೇದಿತೆಯ ಋಣ ತೀರಿಸಲು ಜನ್ಮ ಸಾಲದು!

ಬೋಸರಿಗೆ ಆರ್ಥಿಕ ಸಹಾಯ ಮಾಡಿದ್ದಷ್ಟೇ ಅಲ್ಲ. ಅವರ ಎಲ್ಲಾ ಸಂಶೋಧನಾ ಪ್ರಬಂಧಗಳನ್ನೂ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಅದನ್ನು ಪ್ರಕಟಿಸಲು ಆಕೆ ಬೆನ್ನೆಲುಬಾಗಿ ನಿಂತಳು. ಬೋಸರೊಂದಿಗೆ ಸ್ವತಃ ತಾನೇ ಕೂತು ಅವರ ಪ್ರಬಂಧಗಳನ್ನು ಕರಾರುವಾಕ್ಕಾಗಿ ಮತ್ತು ಆಸಕ್ತಿಕರವಾಗಿ ದಾಖಲಿಸಿ ವಿಷಯದ ಮೇಲೆ ಆಸಕ್ತಿ ಇಲ್ಲದವರೂ ಅರ್ಥೈಸಿಕೊಳ್ಳುವಂತೆ ಪ್ರಭಾವಿಯಾಗಿ ಬರೆದದ್ದು ನಿವೇದಿತೆಯೇ. ಬ್ರಿಟೀಷ್ ವಿಜ್ಞಾನಿಗಳ ಮೇಲೆ ನಿರಂತರ ಒತ್ತಡ ಹೇರಿ ಬೋಸರ ಸಾಧನೆಯನ್ನು ಗೌರವಿಸುವಂತೆ ನಿವೇದಿತೆ ಮಾಡಿದ ಅವಿರತ ಪ್ರಯತ್ನದಿಂದಾಗಿಯೇ ಅವರಿಗೆ ಮುಂದೆ ನೈಟ್ಹುಡ್ ಪದವಿ ದಕ್ಕಿದ್ದು. 1901 ರಲ್ಲೊಮ್ಮೆ ಬೋಸ್ ದಂಪತಿಗಳು ಲಂಡನ್ನಿನಲ್ಲಿದ್ದಾಗ ಬೋಸರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಆಗ ಅವರ ಶುಶ್ರೂಷೆ ಮಾಡಿ ಆರೋಗ್ಯ ಹದ ತಪ್ಪದಂತೆ ನೋಡಿಕೊಂಡವಳೂ ಈ ಮಹಾತಾಯಿಯೇ. ಅವಳಿಗೆ ಜಗದೀಶ್ ಚಂದ್ರ ಬೋಸರ ಮೇಲೆ ಇಷ್ಟೊಂದು ಪ್ರೀತಿ-ಗೌರವ ಇರಲು ಕಾರಣ ಒಂದೇ. ಅವರು ಭಾರತದ ಕೀತರ್ಿ ಪತಾಕೆಯನ್ನು ವೈಜ್ಞಾನಿಕ ಪಥದಲ್ಲಿ ಮುಗಿಲೆತ್ತರಕ್ಕೆ ಹಾರಿಸಿದ್ದಾರೆಂದು ಮಾತ್ರ! ಓಹ್. ಅದೆಂತಹ ಭಾರತಭಕ್ತಿ.

akka-7

ಮತ್ತೆ ಮತ್ತೆ ನನ್ನ ಕಾಡುವ ಅಂಶ ಅದೊಂದೇ. ಐರ್ಲೆಂಡಿನಿಂದ ಬಂದ ಹೆಣ್ಣು ಮಗುವೊಂದು ಭಾರತವನ್ನು ಇಷ್ಟೊಂದು ಪ್ರೀತಿಸಿತು. ಬರಿಯ ಪ್ರೀತಿಯಷ್ಟೇ ಅಲ್ಲ. ಈ ದೇಶದ ಜನರ ಸೇವೆಯನ್ನು ಭಕ್ತಿಯಿಂದ ಮಾಡಿತು. ಅಲ್ಲಿಗೆ ನಿಲ್ಲದೇ ಈ ದೇಶದ ಘನತೆಯನ್ನು ಜಗತ್ತಿಗೆ ಮುಟ್ಟಿಸಲು ಟೊಂಕಕಟ್ಟಿ ನಿಂತಿತು. ಕೊನೆಗೆ ಇಲ್ಲಿನ ವಿಜ್ಞಾನಿಗಳಿಗೆ, ಲೇಖಕರಿಗೆ, ಕಲಾಕಾರರಿಗೆ ಆಸರೆಯಾಗಿ ನಿಂತು ಅವರೆಲ್ಲ ಜಾಗತಿಕ ಮಟ್ಟದಲ್ಲಿ ತಮ್ಮ ಛಾಪು ಒತ್ತುವಂತೆಯೂ ಮಾಡಿತು. ಆಕೆಯ ಪಾದಗಳಿಗೆ ಹಣೆ ಮುಟ್ಟಿಯೇ ನಮಸ್ಕರಿಸಬೇಕು.
ಯೌವ್ವನದಲ್ಲಿ ಐರಿಶ್ ಸ್ವಾತಂತ್ರ್ಯಕ್ಕಾಗಿ ಕಾದಾಡಿದ ಹೆಣ್ಣು ಮಗಳಿಗೆ ಬ್ರಿಟಿಷ್ ಸಾಮ್ರಾಜ್ಯದ ಕುರಿತ ನಿಷ್ಠೆ ಜೋರಾಗಿಯೇ ಇತ್ತು. ವಿವೇಕಾನಂದರ ಯೂರೋಪಿನ ಭಾಷಣಗಳಲ್ಲಿ ಬ್ರಿಟಿಷರ ವಿರುದ್ಧದ ಚಿಂತನೆಗಳೇನೂ ಇರಲಿಲ್ಲ. ವೇದಾಂತದ ಪ್ರತಿಪಾದನೆಗೆ ಪೂರಕವಾಗಿ ಕ್ರಿಶ್ಚಿಯನ್ ಮಿಶನರಿಗಳನ್ನು ಝಾಡಿಸುತ್ತಿದ್ದುದು ನಿಜವಾದರೂ ಅದು ಪ್ರಭುತ್ವಕ್ಕೆ ನೇರ ಸವಾಲಾಗಿ ಕಂಡಿರಲಿಲ್ಲ. ಹೀಗಾಗಿ ವಿವೇಕಾನಂದರ ಹಿಂದು ಹಿಂದೆಯೇ ನಿವೇದಿತಾ ಭಾರತಕ್ಕೆ ಬಂದಾಗಲೂ ಆಕೆಯ ಆಂಗ್ಲ ಪ್ರಭುತ್ವ ನಿಷ್ಠೆ ಎಳ್ಳಷ್ಟು ಮಾಸಿರಲಿಲ್ಲ. ಅವಳಿಗೊಂದು ಭ್ರಮೆ ಖಂಡಿತ ಇತ್ತು. ‘ಭಾರತ ಮತ್ತು ಇಂಗ್ಲೆಂಡುಗಳು ಒಬ್ಬರನ್ನೊಬ್ಬರು ಪ್ರೀತಿಸುವಂತೆ ಮಾಡಬೇಕು’ ಅಂತ. ಎರಿಕ್ ಹ್ಯಾಮಂಡ್ರಿಗೆ ಬರೆದ ಪತ್ರದಲ್ಲಿ ಇದನ್ನು ಉಲ್ಲೇಖ ಮಾಡಿಯೂ ಇದ್ದಳು ಆಕೆ. ಬ್ರಿಟೀಷರ ವಿರುದ್ಧ ಭಾರತೀಯರ ಆಕ್ರೋಶ ಪ್ರೇಮವಾಗಿ ಬದಲಾಗಬೇಕೆಂದು ಆಕೆಯ ಹೆಬ್ಬಯಕೆಯಾಗಿತ್ತು. ಹೀಗಾಗಿ ವಿವೇಕಾನಂದರು ರಾಮಕೃಷ್ಣ ಮಠ ಕಟ್ಟುವ ಕಲ್ಪನೆ ಮುಂದಿರಿಸಿದಾಗ ಇಂಗ್ಲೆಂಡಿನ ಸ್ನೇಹಿತರೋರ್ವರಿಗೆ ಬರೆದ ಪತ್ರದಲ್ಲಿ ಆಕೆ, ‘ಇಡಿಯ ಸಾಮ್ರಾಜ್ಯವನ್ನು ಆಧ್ಯಾತ್ಮ ಪೂರಕವಾಗಿಸುವ ಚಳುವಳಿ ಇದು. ಹೊಸ ಹಿಂದುತ್ವ ಅಮೇರಿಕಾ, ಯೂರೋಪುಗಳಲ್ಲಿ ಭದ್ರವಾಗಿ ನೆಲೆಯೂರಿದೆಯಷ್ಟೇ ಅಲ್ಲ, ಇದರಲ್ಲಿ ಭಾಗವಹಿಸಿದ ಪ್ರತಿಯೊಬ್ಬನೂ ಕ್ರಿಯಾತ್ಮಕವಾಗಿ ಮತ್ತು ಭಾವನಾತ್ಮಕವಾಗಿ ಇಂಗ್ಲೆಂಡಿಗೆ ನಿಷ್ಠನಾಗಿದ್ದಾನೆ’ ಎಂದಿದ್ದಳು. ಅವಳ ಅನಿಸಿಕೆ ಬಲು ಸ್ಪಷ್ಟ. ಇಂಗ್ಲೆಂಡಿನ ಪ್ರಭುತ್ವವನ್ನು ಒಪ್ಪುವ ಜನರೇ ಹಿಂದುತ್ವದೆಡೆಗೆ ವಾಲುತ್ತಿರುವುದರಿಂದ ಹೊಸದೊಂದು ಆಧ್ಯಾತ್ಮಿಕ ಚಳುವಳಿ ನಡೆದು ಯೂರೋಪು ಮತ್ತು ಭಾರತೀಯರ ನಡುವೆ ಸೌಹಾರ್ದ ಸಂಬಂಧವೇರ್ಪಡುವುದು ಅಂತ! ಈ ಹಿನ್ನೆಲೆಯಲ್ಲಿಯೇ ನಿನ್ನ ದೇಶ ಯಾವುದೆಂದು ಸ್ವಾಮೀಜಿ ಕೇಳಿದಾಗ, ದೃಢವಾದ ದನಿಯಲ್ಲಿ ‘ಇಂಗ್ಲೆಂಡು’ ಅಂದಿದ್ದು ಆಕೆ. ಸ್ವಾಮೀಜಿಯ ಕಣ್ಣುಗಳು ನಿಗಿ ನಿಗಿ ಕೆಂಡವಾಗಿದ್ದವು. ‘ನಿಮ್ಮಂಥವರ ದೇಶಭಕ್ತಿಯೇ ಮಹಾಪಾಪ’ ಎಂದರು ಸ್ವಾಮೀಜಿ. ಒಂದಷ್ಟು ಜನಾಂಗಗಳು ತಮ್ಮನ್ನು ತಾವೇ ಸಾಕ್ಷಾತ್ತು ದೈವಸಮಾನ ಎಂದು ಭಾವಿಸುವ ಸ್ವಾರ್ಥಪ್ರೇರಿತ ದೇಶಪ್ರೇಮ ಅದು ಎಂದು ಸ್ವಾಮೀಜಿ ಕಠೋರವಾಗಿಯೇ ಝಾಡಿಸಿದರು. ಕೊನೆಗೆ ‘ಅಜ್ಞಾನವನ್ನು ನಿಷ್ಠೆಯಿಂದ ಪಾಲಿಸುವುದೇ ಕ್ರೌರ್ಯ’ ಎಂದು ಉರಿಯುವ ಮಾತುಗಳನ್ನು ಹೊರಹಾಕಿದ ಸ್ವಾಮೀಜಿ ನಿವೇದಿತೆಯ ಆಂತರ್ಯದ ನಂಬಿಕೆಗಳನ್ನೆಲ್ಲ ಮೂಲೋತ್ಪಾಟನೆ ಮಾಡಲಾರಂಭಿಸಿದರು. ಒಂದೆಡೆ ಸ್ವಾಮೀಜಿಯ ವೈಚಾರಿಕ ಚಾಟಿ ಏಟುಗಳು. ಮತ್ತೊಂದೆಡೆ ನಿವೇದಿತೆಗೇ ಆದ ಪ್ರತ್ಯಕ್ಷ ಅನುಭವಗಳು ಅವಳ ಬ್ರಿಟೀಷ್ ನಿಷ್ಠೆಯನ್ನು ಅಲುಗಾಡಿಸಲಾರಂಭಿಸಿದ್ದವು.
ಮುಕ್ತ ವಾತಾವರಣಕ್ಕೆ ಹೆಸರುವಾಸಿಯಾಗಿದ್ದ ಇಂಗ್ಲೆಂಡಿನ ಕುರಿತಂತೆ ಹೆಮ್ಮೆ ಹೊಂದಿದ್ದ ನಿವೇದಿತಾ ಬ್ರಿಟೀಷ್ ಅಧಿಕಾರಿಗಳು ವಿವೇಕಾನಂದರ ಹಿಂದೆಯೂ ಗೂಢಚಾರರನ್ನು ನೇಮಿಸಿದ್ದಾರೆಂದು ಅರಿತಾಗ ದಂಗು ಬಡಿದಳು. ‘ಸರ್ಕಾರಕ್ಕೆ ಹುಚ್ಚೇ ಹಿಡಿದಿರಬೇಕು. ಇದು ನಿಜವೇ ಆಗಿದ್ದರೆ ದೇಶದುದ್ದಗಲಕ್ಕೂ ಕಾಡ್ಗಿಚ್ಚು ಹಬ್ಬುವುದರಲ್ಲಿ ಅನುಮಾನವೇ ಇಲ್ಲ. ಅತ್ಯಂತ ನಿಷ್ಠ ಇಂಗ್ಲೆಂಡು ಮಹಿಳೆಯಾಗಿ ನಾನೇ ಮೊದಲ ಕಿಡಿ ಹಚ್ಚುತ್ತೇನೆ’ ಎಂದು ತನ್ನ ಸ್ನೇಹಿತೆಗೆ ಬರೆದ ಪತ್ರದಲ್ಲಿ ನೋವು ತೋಡಿಕೊಂಡಿದ್ದಳು. ಕೆಲವು ತಿಂಗಳಲ್ಲಿಯೇ ಸ್ವಾಮೀಜಿಯ ಕೆಲವು ಭಕ್ತರು ಕಾಶ್ಮೀರದಲ್ಲಿ ಸ್ತ್ರೀಯರ ಮಠಕ್ಕೆಂದು ಒಂದಷ್ಟು ಜಮೀನು ಹಸ್ತಾಂತರಿಸಲು ಬಂದಾಗ ಬ್ರಿಟೀಷ್ ಸರ್ಕಾರ ಒಪ್ಪಿಗೆ ಕೊಡಲು ನಿರಾಕರಿಸಿತು. ಇಂಗ್ಲೆಂಡೆಂದರೆ ಜಗತ್ತಿನ ಉದ್ಧಾರಕ್ಕೆಂದೇ ಹುಟ್ಟಿದ ರಾಷ್ಟ್ರವೆಂದು ಭಾವಿಸಿದ್ದ ನಿವೇದಿತಾಳಿಗೆ ಈಗ ಅದರ ನಿಜರೂಪ ಕಂಡು ಬಂದಿತ್ತು. ‘ಇಂಗ್ಲಿಷ್ ಪ್ರಜೆಯಾಗಿ ಇಂಗ್ಲೆಂಡು ಇಷ್ಟು ಕೆಟ್ಟದಾಗಿ ವರ್ತಿಸುವುದನ್ನು ಸಹಿಸುವುದು ಹೇಗೆ ಸಾಧ್ಯ’ ಎಂದು ಪತ್ರವೊಂದರಲ್ಲಿ ಬರೆದಳು. ಈಗಲೂ ಆಕೆಯ ಬ್ರಿಟೀಷ್ ನಿಷ್ಠೆ ಪೂರ್ಣ ಪ್ರಮಾಣದಲ್ಲಿ ಕಡಿಮೆಯೇನೂ ಆಗಿರಲಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬೇಕು ಎನ್ನುವಾಗ ಅವಳ ಹೃದಯದಲ್ಲಿದ್ದುದು ಆಸ್ಟ್ರೇಲಿಯಾದಿಂದ ಇಟಲಿ, ತುರ್ಕಿಯಿಂದ ಗ್ರೀಸ್ ಸ್ವಾತಂತ್ರ್ಯ ಪಡೆದಂತೆಯಷ್ಟೇ. ಭಾರತ ಸ್ವಾತಂತ್ರ್ಯಕ್ಕೆ ಪಕ್ವವಾಗಿಲ್ಲವೆಂದು ಅವಳು ನಿರ್ಧರಿಸಿದ್ದಳು. ‘ಹಿಂದೂ ತನ್ನ ಮತ್ತು ಮುಸಲ್ಮಾನರ ಕಾಲದ ಶಾಂತಿಯುತ ಆಡಳಿತಕ್ಕೆ ಮರಳಲು ಇನ್ನೂ ಕೆಲವು ಶತಮಾನಗಳು ಬೇಕಾಗಬಹುದು. ಸದ್ಯಕ್ಕೆ ಭಾರತದ ಸಾಮಾಜಿಕ ಅಭಿವೃದ್ಧಿಗೆ ಬೇಕಾದ ರಾಜಕೀಯ ಶಾಂತಿಯ ವಾತಾವರಣ ಸ್ಥಳೀಯ ಪೂರ್ವಗ್ರಹಗಳಿಲ್ಲದ ಸುದೂರದ ತೃತೀಯ ಶಕ್ತಿಯೊಂದರಿಂದ ಮಾತ್ರ ನೀಡಲು ಸಾಧ್ಯ’ ಎಂದು ಆಕೆ ಶ್ರದ್ಧೆಯಿಂದಲೇ ಭಾವಿಸಿದ್ದಳು. ಆಗಿನ ದಿನಗಳಲ್ಲಿ ಪ್ರತಿಯೊಬ್ಬ ಬ್ರಿಟೀಷ್ನಿಗೂ ಇದೇ ಭಾವನೆ ಇದ್ದಿರಲು ಸಾಕು. ಭಾರತಕ್ಕೆ ಒಳಿತಾಗಬೇಕು, ಅನಕ್ಷರತೆ ತೊಲಗಬೇಕು, ಸಾಮಾಜಿಕ ಸ್ತರದಲ್ಲಿ ಬದಲಾವಣೆ ಬರಬೇಕು ಎಂದು ಎಲ್ಲವನ್ನೂ ಬಯಸುವವರೂ ಇದಕ್ಕೆಲ್ಲ ಬ್ರಿಟೀಷ್ ಆಡಳಿತದ ಛತ್ರಛಾಯೆ ಬೇಕೇ ಬೇಕು ಎಂದು ನಂಬಿಬಿಟ್ಟಿದ್ದರು. ಹೊರಗಿನವರು ಬಿಡಿ, ಸ್ವತಃ ಭಾರತೀಯರೂ ಈ ನಂಬಿಕೆಯಿಂದ ಹೊರತಾಗಿರಲಿಲ್ಲ.

swami-and-sis-niveditasm
ಇಷ್ಟು ಕಠೋರ ಬ್ರಿಟೀಷ್ ಪ್ರೇಮಿಯಾಗಿದ್ದ ನಿವೇದಿತಾ ನಿಧಾನವಾಗಿ ಬದಲಾದಳು. ಗುರುದೇವ ವಿವೇಕಾನಂದರೊಂದಿಗೆ ನಡೆದುಕೊಂಡ ಆಡಳಿತದ ರೀತಿ ನೀತಿಯಿಂದ ಅವಳು ಬೇಸತ್ತಿದ್ದು ಒಂದೆಡೆಯಾದರೆ, ಜಗದೀಶ್ ಚಂದ್ರ ಬೋಸ್ರೊಂದಿಗೆ ಇಂಗ್ಲೆಂಡಿನ ವಿಶಾಲ ಹೃದಯದ ಬುದ್ಧಿವಂತರು ವ್ಯವಹರಿಸಿದ ರೀತಿ ಆಕೆಯಲ್ಲಿನ ಭ್ರಮೆಯನ್ನೂ ತೊಡೆದುಹಾಕಿತ್ತು. ‘ಜನಾಂಗ ದ್ವೇಷವೆಂದರೇನೆಂದು ಇಂಗ್ಲೆಂಡಿನಲ್ಲಿ ಕುಳಿತು ಅರ್ಥೈಸಿಕೊಳ್ಳೋದು ಕಷ್ಟ. ಸ್ಥಳೀಯರೊಂದಿಗೆ ಇಂಗ್ಲೀಷರ ವ್ಯವಹಾರ ನೋಡಿದರೆ ನನ್ನಂತೆ ನೀನೂ ಉರಿದು ಬೀಳುತ್ತೀಯಾ’ ಎಂದು ಇಂಗ್ಲೆಂಡಿನ ಗೆಳತಿ ಮಿಸಸ್ ಹ್ಯಾಮಂಡ್ಗೆ ಪತ್ರ ಬರೆದಿದ್ದಳು ನಿವೇದಿತಾ.

J_C_Bose_board
1898 ರಲ್ಲಿ ಲಂಡನ್ನಿನ ರಾಯಲ್ ಸೊಸೈಟಿಯ ಬಿಳಿಯ ವಿಜ್ಞಾನಿಗಳೆದುರೇ ತಮ್ಮ ಸಾಮಥ್ರ್ಯವನ್ನು ತೆರೆದಿಟ್ಟ ಜಗದೀಶ್ ಚಂದ್ರಬೋಸರು ಕಣ್ಣುಕುಕ್ಕುವ ವ್ಯಕ್ತಿಯಾಗಿ ಮಾರ್ಪಟ್ಟಿದ್ದರು. ಆದರೆ ಭಾರತದಲ್ಲಿ ಅವರ ಸಾಧನೆಯನ್ನು ಗುರುತಿಸುವಲ್ಲಿ, ಗೌರವಿಸುವಲ್ಲಿ ಬೇಕೆಂತಲೇ ಬಿಳಿಯ ಪ್ರಭುತ್ವ ಅಸಡ್ಡೆ ತೋರುತ್ತಿತ್ತು. ಕೋಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜು ಮತ್ತು ಬ್ರಿಟೀಷ್ ಸರ್ಕಾರದ ಶಿಕ್ಷಣ ವಿಭಾಗ ಅವರಿಗೆ ಭೌತಶಾಸ್ತ್ರದ ಪ್ರೊಫೆಸರ್ ಹುದ್ದೆಯನ್ನು ನಿರಾಕರಿಸಿತ್ತು. ವೈಸ್ರಾಯ್ ರಿಪ್ಪನ್ರ ಪ್ರಭಾವದ ಪತ್ರವನ್ನೂ ಕಡೆಗಣಿಸಿ ಅವರನ್ನು ಸಹಾಯಕ ಪ್ರೊಫೆಸರ್ ಆಗಿ ಹುದ್ದೆ ನೀಡಲಾಯ್ತು. ಅವರ ಯೋಗ್ಯತೆಗಿಂತ ಬಲು ಕಡಿಮೆ ಸಂಬಳದ ಹುದ್ದೆ ಅದು. ಬೋಸರು ತನಗೆ ಮತ್ತು ತನ್ನ ದೇಶಕ್ಕಾದ ಈ ಅವಮಾನವನ್ನು ಸ್ವಾಭಿಮಾನದಿಂದ ಎದುರಿಸಿ ಸಂಬಳವನ್ನೇ ಸ್ವೀಕರಿಸಲು ನಿರಾಕರಿಸಿದರು. ಒಟ್ಟು ಮೂರು ವರ್ಷ ಸಂಬಳವಿಲ್ಲದ ಸೇವೆಯಾಯ್ತು ಅವರ ಬದುಕು.

jag

ನಾಚಿಕೆಗೆಟ್ಟ ಕಾಲೇಜು ಆಡಳಿತ ಅವರಿಗೆ ಹೆಚ್ಚಿನ ಹೊರೆ ಹೊರೆಸಿದ್ದಲ್ಲದೇ ಸಂಶೋಧನೆಗೆ ಸೂಕ್ತ ಪ್ರಯೋಗಶಾಲೆಯನ್ನೂ ಒದಗಿಸಿ ಕೊಡಲಿಲ್ಲ. ಬೋಸ್ರ ನಿಕಟವರ್ತಿಯಾಗಿದ್ದ ನಿವೇದಿತೆಗೆ ಈ ಅವಮಾನ ಸಹಿಸಲಸಾಧ್ಯವೆನಿಸಿತು. ಇಂಗ್ಲೆಂಡಿನ ಮೇಲಿದ್ದ ಆಕೆಯ ಗೌರವದ ಭಾವನೆಗಳೆಲ್ಲ ಕಳಚಿ ಪುಡಿ ಪುಡಿಯಾಗಿ ಬಿತ್ತು. ಆಕೆ ಬೋಸ್ರಿಗೆ ಧೈರ್ಯ ತುಂಬಿದಳು. ಅವರ ಮುಂದಿನ ಪ್ರಯೋಗಗಳಿಗೆ ಬೇಕಿದ್ದ ದ್ರವ್ಯವನ್ನು ಒದಗಿಸಲು ಕ್ರಿಯಾಶೀಲಳಾದಳು. ವಿವೇಕಾನಂದರ ಶಿಷ್ಯೆಯಾಗಿದ್ದ ಅಮೇರಿಕಾದ ಸಿರಿವಂತೆ ಶ್ರೀಮತಿ ಓಲೆಬುಲ್ಳಿಗೆ ಬೋಸರ ಪರಿಚಯ ಮಾಡಿಸಿ ಇವರನ್ನು ಆಕೆಯ ದತ್ತು ಪುತ್ರನೆಂದಳು. ಆಕೆಯಿಂದ ಇದರ ಸಂಶೋಧನೆಗೆ ಹಣ ಒದಗಿಸುವಲ್ಲಿ ಮಹತ್ವದ ಕೊಂಡಿಯಾಗಿ ನಿಂತಳು. ಹೀಗೆ ಬಂದ ಹಣದಲ್ಲಿಯೇ ಬೋಸರು ಒಂದಷ್ಟು ಸಂಶೋಧನೆ ಮಾಡಲು ಸಾಧ್ಯವಾಯ್ತು, ಒಂದಷ್ಟು ಪ್ರಬಂಧ ಪ್ರಕಟಿಸಲು ಅನುಕೂಲವಾಯ್ತು. ಕೊನೆಗೆ ತಾವೇ ರೂಪಿಸಿದ್ದ ಸಾಧನವೊಂದಕ್ಕೆ ಅಮೇರಿಕಾದ ಪೇಟೆಂಟ್ ಪಡೆಯಲೂ ಅವಕಾಶವಾಯ್ತು. ಹಾಗಂತ ಅವರಿಗೆ ಈ ಹಣ ಸಾಲುವಂತಿರಲಿಲ್ಲ. ಆಗಲೇ ನಿವೇದಿತೆ ಭಾರತೀಯರಿಗೆ ಪ್ರೇರಣೆ ಕೊಟ್ಟು ಬೋಸ್ರಿಗೆ ಬೆಂಬಲವಾಗಿ ನಿಲ್ಲುವಂತೆ ಕೇಳಿಕೊಂಡಿದ್ದು. ಆಕೆಯ ಪ್ರೇರಣಾದಾಯಿ ಮಾತುಗಳಿಂದಲೇ ರವೀಂದ್ರನಾಥ ಠಾಕೂರರು ಕೆಲವು ಸಿರಿವಂತರ ಮನೆಗೆ ಹೋಗಿ ಬೋಸ್ರಿಗೆ ಸಹಾಯ ಮಾಡುವಂತೆ ಬೇಡಿಕೊಂಡಿದ್ದು. ಹೇಳಿ ನಿವೇದಿತೆಯ ಋಣ ತೀರಿಸುತ್ತೀರಾ?
ಬೋಸರಿಗೆ ಆರ್ಥಿಕ ಸಹಾಯ ಮಾಡಿದ್ದಷ್ಟೇ ಅಲ್ಲ. ಅವರ ಎಲ್ಲಾ ಸಂಶೋಧನಾ ಪ್ರಬಂಧಗಳನ್ನೂ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಅದನ್ನು ಪ್ರಕಟಿಸಲು ಆಕೆ ಬೆನ್ನೆಲುಬಾಗಿ ನಿಂತಳು. ಬೋಸರೊಂದಿಗೆ ಸ್ವತಃ ತಾನೇ ಕೂತು ಅವರ ಪ್ರಬಂಧಗಳನ್ನು ಕರಾರುವಾಕ್ಕಾಗಿ ಮತ್ತು ಆಸಕ್ತಿಕರವಾಗಿ ದಾಖಲಿಸಿ ವಿಷಯದ ಮೇಲೆ ಆಸಕ್ತಿ ಇಲ್ಲದವರೂ ಅರ್ಥೈಸಿಕೊಳ್ಳುವಂತೆ ಪ್ರಭಾವಿಯಾಗಿ ಬರೆದದ್ದು ನಿವೇದಿತೆಯೇ. ರೆಸ್ಪಾನ್ಸ್ ಇನ್ ದ ಲಿವಿಂಗ್ ಅಂಡ್ ನಾನ್ ಲಿವಿಂಗ್, ಪ್ಲಾಂಟ್ ರೆಸ್ಪಾನ್ಸ್ ಮತ್ತು ಕಂಪಾರೆಟಿವ್ ಎಲೆಕ್ಟ್ರೊ ಸೈಕಾಲಜಿ ಈ ಮೂರು ಕೃತಿಗಳೂ ಅವಳದ್ದೇ ಸಹಕಾರದಿಂದ ಪ್ರಕಟಗೊಂಡವು. ಅವುಗಳಲ್ಲಿನ ಬರಹಕ್ಕೆ ಪೂರಕವಾದ ಚಿತ್ರಗಳೂ ನಿವೇದಿತೆಯದ್ದೇ! ಬ್ರಿಟೀಷ್ ವಿಜ್ಞಾನಿಗಳ ಮೇಲೆ ನಿರಂತರ ಒತ್ತಡ ಹೇರಿ ಬೋಸರ ಸಾಧನೆಯನ್ನು ಗೌರವಿಸುವಂತೆ ನಿವೇದಿತೆ ಮಾಡಿದ ಅವಿರತ ಪ್ರಯತ್ನದಿಂದಾಗಿಯೇ ಅವರಿಗೆ ಮುಂದೆ ನೈಟ್ಹುಡ್ ಪದವಿ ದಕ್ಕಿದ್ದು. 1901 ರಲ್ಲೊಮ್ಮೆ ಬೋಸ್ ದಂಪತಿಗಳು ಲಂಡನ್ನಿನಲ್ಲಿದ್ದಾಗ ಬೋಸರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಆಗ ಅವರ ಶುಶ್ರೂಷೆ ಮಾಡಿ ಆರೋಗ್ಯ ಹದ ತಪ್ಪದಂತೆ ನೋಡಿಕೊಂಡವಳೂ ಈ ಮಹಾತಾಯಿಯೇ.

jag3
ಗೊತ್ತಿರಲಿ. ನಿವೇದಿತೆ ಅಕಾಲ ಮೃತ್ಯುವಿಗೆ ತುತ್ತಾದ ಆಘಾತ ಎಂಥದ್ದಿತ್ತೆಂದರೆ, ಬೋಸರು ದೀರ್ಘಕಾಲ ಹಾಸಿಗೆ ಹಿಡಿದು ಮಲಗಿಬಿಟ್ಟಿದ್ದರು. ಅಂತಹುದೊಂದು ಕರುಳೂ ಅರಿಯದ ಸಂಬಂಧವನ್ನು ನಿರ್ಮಿಸಿ ಹೋಗಿದ್ದಳು ನಿವೇದಿತಾ. ಅವಳಿಗೆ ಜಗದೀಶ್ ಚಂದ್ರ ಬೋಸರ ಮೇಲೆ ಇಷ್ಟೊಂದು ಪ್ರೀತಿ-ಗೌರವ ಇರಲು ಕಾರಣ ಒಂದೇ. ಅವರು ಭಾರತದ ಕೀರ್ತಿ ಪತಾಕೆಯನ್ನು ವೈಜ್ಞಾನಿಕ ಪಥದಲ್ಲಿ ಮುಗಿಲೆತ್ತರಕ್ಕೆ ಹಾರಿಸಿದ್ದಾರೆಂದು ಮಾತ್ರ! ಓಹ್. ಅದೆಂತಹ ಭಾರತಭಕ್ತಿ.
ಬೋಸರ ವಿಚಾರವಾಗಿ ಇಂಗ್ಲೆಂಡಿನ ಅಸಡ್ಡೆಯನ್ನು ತೀವ್ರ ಪದಗಳಲ್ಲಿ ಖಂಡಿಸಿ, ಆಕೆ ‘ಬೋಸರೊಂದಿಗಿನ ಕದನ ಇಂಗ್ಲೆಂಡನ್ನು ವೈಯಕ್ತಿಕವಾಗಿಯೂ, ಸಾರ್ವತ್ರಿಕವಾಗಿಯೂ ಪ್ರಪಾತಕ್ಕೆ ತಳ್ಳುತ್ತಿದೆ. ಇಂಗ್ಲೆಂಡು ಅಥವಾ ಕೊನೆಯ ಪಕ್ಷ ಆಕೆಯೊಳಗಿದ್ದ ಪವಿತ್ರವಾದುದೆಲ್ಲವೂ ಸತ್ತಿದೆಯೆಂದೆನಿಸುತ್ತಿದೆ’ ಎಂದು ದುಃಖಪಟ್ಟಿದ್ದಳು. ಅದಾದ ಮೇಲೆಯೇ ಆಕೆಯ ಚಿಂತನೆಗಳಲ್ಲಿ ತೀವ್ರತರದ ಬದಲಾವಣೆ ಕಂಡು ಬಂದಿದ್ದು. ‘ಭೂಮಂಡಲದ ಮೇಲಿರುವವರಿಗೆಲ್ಲ ಸ್ವಾತಂತ್ರ್ಯವೆಂಬ ಇಂಗ್ಲೆಂಡಿನ ರಾಷ್ಟ್ರೀಯ ಆದರ್ಶದ ಮಾತು ವ್ಯರ್ಥವೆನಿಸುತ್ತಿದೆ. ಅದರ ಒಟ್ಟಾರೆ ಅರ್ಥ ಬ್ರಿಟೀಷರ ಸುಖ, ಗೆಲುವು ಮತ್ತು ಸಂಪತ್ತು ಮಾತ್ರ. ಇವೆಲ್ಲವೂ ನನ್ನ ಪಾಲಿಗೆ ಬೂದಿಯ ರಾಶಿಯಂತೆ ಕಾಣುತ್ತಿದೆ. ನಿಜಕ್ಕೂ ನನಗೆ ಭ್ರಮನಿರಸನವಾಗಿದೆ ಮತ್ತು ನಾನು ಆಘಾತಕ್ಕೊಳಗಾಗಿದ್ದೇನೆ’ ಎಂದು ಜೋಸೇಫಿನ್ ಮ್ಯಾಕ್ಲಿಯೊಡ್ಳಿಗೆ ಬರೆದ ಪತ್ರದಲ್ಲಿ ನೊಂದು ಉದ್ಗರಿಸಿದ್ದಳು.
ಸ್ವಾಮಿ ವಿವೇಕಾನಂದರು ಆಕೆಯ ಇಂಗ್ಲೆಂಡು ಪ್ರೇಮವನ್ನು ಪಾಪವೆಂದು ಕರೆದಾಗ ಅವಳು ನೊಂದುಕೊಂಡಿದ್ದಿರಬಹುದು. ಆದರೆ ಈಗ ಅವಳಿಗೆ ಆ ಪಾಪದ ಎಳೆ ಎಳೆಯೂ ಅನಾವರಣಗೊಂಡಿತ್ತು. ಅವಳೀಗ ಹೃದಯಾಂತರಗೊಂಡಿದ್ದಳು. ಅವಳ ನಿಷ್ಠೆ ಈಗ ಭಾರತದೆಡೆಗೆ ಪರಿಪೂರ್ಣವಾಗಿತ್ತು. ಈಗವಳು ಪಶ್ಚಿಮದ ನೆಲದಲ್ಲಿ ಭಾರತದ ಕುರಿತಂತೆ ಮಾತನಾಡುವಾಗ ಭಾವುಕಳಾಗುತ್ತಿದ್ದಳು. ‘ಭಾರತದ ನಾರಿಯರ ಆದರ್ಶ’, ‘ಭಾರತದ ನಾರಿಯರ ಭವಿಷ್ಯ’, ‘ಭಾರತದ ಸಮಸ್ಯೆ’, ‘ಭಾರತದಲ್ಲಿ ಇಂಗ್ಲೆಂಡಿನ ಸೋಲು’ ಹೀಗೆ ಒಂದಾದ ಮೇಲೊಂದು ಭಾಷಣಗಳನ್ನು ಆಕೆ ವಿದೇಶದ ನೆಲದಲ್ಲಿ ಮಾಡುವಾಗ ಜನ ಕಣ್ಣರಳಿಸಿಕೊಂಡು ಕೇಳುತ್ತಿದ್ದರು. ಪತ್ರಿಕೆಯೊಂದು ‘ಭಾರತದಲ್ಲಿನ ಆಳುವ ವರ್ಗಕ್ಕೆ ಸೇರಿದ ಅಪ್ರತಿಮ ಸಾಮಥ್ರ್ಯದ ಹೆಣ್ಣುಮಗಳು. ಇಂಗ್ಲೆಂಡಿನಲ್ಲಿ ಶ್ರೇಷ್ಠ ಜೀವನದ ಭರವಸೆ ಇದ್ದಾಗ್ಯೂ ಅದನ್ನು ತ್ಯಜಿಸಿ ಭಾರತದ ಮಹಿಳೆಯರ ಸೇವೆಗೆ ದೃಢವಾಗಿ ನಿಂತವಳು. ಮಾರ್ಗರೇಟ್ ನೋಬಲ್ ಅನ್ನೋ ಹೆಸರಿನ ಈಕೆ ಭಾರತದಲ್ಲಿದ್ದು ಹದಿನೆಂಟು ತಿಂಗಳುಗಳಷ್ಟೇ ಕಳೆದಿರಬಹುದು ಆದರೆ ಅನೇಕ ವರ್ಷಗಳಿಂದ ಅಲ್ಲಿಯೇ ಇರುವವರಿಗಿಂತ ಹೆಚ್ಚು ಭಾರತವನ್ನು ಅರಿತಿದ್ದಾಳೆ. ಟಿಪ್ಪಣಿಯೇ ಇಲ್ಲದೇ ಮಾತಾಡುವ, ಭಾರತದ ಬಡವರ ಕುರಿತ ಅಪಾರ ಕರುಣೆಯಿಂದ ಮತ್ತು ಭಾರತದ ಕುರಿತಂತೆ ಇಂಗ್ಲೀಷರಿಗಿರುವ ತಪ್ಪು ಕಲ್ಪನೆಯನ್ನು ಛಿದ್ರಗೊಳಿಸುವ ತುಡಿತದಿಂದ ಕೂಡಿದ ಆಕೆಯ ವಾಕ್ಚಾತುರ್ಯ ಬೆಚ್ಚಿ ಬೀಳಿಸುವಂಥದ್ದು’ ಎಂದು ಆಕೆಯ ಕುರಿತಂತೆ ಉದ್ಗಾರವೆತ್ತಿತ್ತು. ಸ್ವಾಮಿ ವಿವೇಕಾನಂದರನ್ನೇ ಜೀರ್ಣಿಸಿಕೊಳ್ಳಲು ಹೆಣಗಾಡಿದ್ದ ಕ್ರೈಸ್ತ ಮಿಶನರಿಗಳಿಗೆ ನಿವೇದಿತಾಳ ಸವಾಲು ಎದುರಿಸುವುದು ಮತ್ತೂ ಕಷ್ಟವಾಯಿತು. ಸ್ಕಾಟ್ಲ್ಯಾಂಡಿನಲ್ಲಿ ಆಕೆ ಮಾತನಾಡುವಾಗ ಹಿಂದೂ ಧರ್ಮದಿಂದ ಮತಾಂತರಗೊಂಡಿದ್ದ ತರುಣ ಕ್ರಿಶ್ಚಿಯನ್ನನೊಬ್ಬನನ್ನು ಆಕೆಯೆದುರು ನಿಲ್ಲಿಸಿದರು. ನಿವೇದಿತೆಯ ಭಾಷಣ ಮುಗಿಯುತ್ತಿದ್ದಂತೆ ಆತ ಎದ್ದು ನಿಂತ. ಅವಳು ಮಾತಾಡಿದ್ದನ್ನೆಲ್ಲ ವಿರೋಧಿಸಲೆಂದೇ ಮಿಶನರಿಗಳು ತರಬೇತು ನೀಡಿ ಕರಕೊಂಡು ಬಂದಿದ್ದರು. ಆದರೆ ನಿವೇದಿತೆಯ ಮಾತಿನ ಪ್ರಭಾವಕ್ಕೆ ಒಳಗಾದ ಆತ ಎದ್ದು ನಿಂತು ಆಕೆಯನ್ನೂ ಬಲು ಪ್ರೀತಿಯಿಂದ ಮಾತನಾಡಿಸಿದ, ಆಕೆ ಹೇಳಿದ್ದೆಲ್ಲವೂ ಸತ್ಯವೆಂದು ಅನುಮೋದಿಸಿದ. ಮಿಶನರಿಗಳು ಪೆಚ್ಚಾದರು. ಭಾರತೀಯನೊಬ್ಬನ ಈ ಬಲಾಢ್ಯ ಮನಸ್ಥಿತಿಯನ್ನು ನಿವೇದಿತಾ ಕೊಂಡಾಡಿದಳು. ಆದರೆ ಮಿಶನರಿಗಳ ವಿರುದ್ಧ ಆಕೆಯ ಆಕ್ರೋಶ ಹೆಚ್ಚಾಯಿತು. ಕುರಿಗಳ ಹಿಂಡಿನಲ್ಲಿ ತೋಳ ಎಂಬೊಂದು ಪುಸ್ತಕ ಬರೆದು ಮಿಶನರಿಗಳ ಒಟ್ಟಾರೆ ಕಾರ್ಯ ಸೂಚಿಯನ್ನು ವಿವರಿಸಿ ಅವರು ಭಾರತದ ಸ್ತ್ರೀಯರ ಮೇಲೆ ಮಾಡಿದ ಆರೋಪಗಳಿಗೆಲ್ಲ ಸಮರ್ಥ ಉತ್ತರ ನೀಡಿದಳು.
ಈ ಹೊತ್ತಿನಲ್ಲಿಯೇ ಭಾರತದಲ್ಲಿ ಮಿಶನರಿಗಳಷ್ಟೇ ಅಲ್ಲ ಇಲ್ಲಿನ ಬ್ರಿಟೀಷ್ ಆಡಳಿತವೂ ಅತ್ಯಂತ ಕ್ರೂರಿ ಎಂದರಿತ ಆಕೆ ಭಾರತದ ಅಭಿವೃದ್ಧಿಗೆ ಏಕೈಕ ಮಾರ್ಗ ರಾಜಕೀಯ ಸ್ವಾತಂತ್ರ್ಯ ಮಾತ್ರವೆಂದು ಸ್ಪಷ್ಟ ನಿರ್ಧಾರಕ್ಕೆ ಬಂದಳು. ಅವಳ ಮನಸಲ್ಲಿ ಈಗ ಇಂಗ್ಲೆಂಡಿನ ವಿರುದ್ಧ ಧಗಧಗಿಸುವ ಆಕ್ರೋಶವಿತ್ತು. ಭಾರತದ ಅಂತಃಸತ್ತ್ವದ ಲಾವಾ ಸಿಡಿಯದಂತೆ ತಡೆದಿರುವ ಈ ಬ್ರಿಟೀಷ್ ಆಡಳಿತದ ಮುಚ್ಚಳವನ್ನು ತೆರೆದು ಬಿಸಾಡಲು ಆಕೆ ಸಂಪೂರ್ಣ ಸಮರ್ಪಣೆಗೆ ಸಜ್ಜಾಗಿದ್ದಳು. ಹೀಗಾಗಿಯೇ ತನಗೆ ಅತ್ಯಂತ ಪ್ರಿಯವಾಗಿದ್ದ ಆಧ್ಯಾತ್ಮದ ಹಾದಿ ಬಿಟ್ಟು ರಾಜಕೀಯದ ಮಾರ್ಗ ಆರಿಸಿಕೊಂಡಳು.
ಹೇಳಿ. ಈ ಜನುಮದಲ್ಲಿ ಆಕೆಯ ಋಣ ನಾವು ತೀರಿಸುತ್ತೇವಾ?

Comments are closed.