ವಿಭಾಗಗಳು

ಸುದ್ದಿಪತ್ರ


 

ನೋವು ನುಂಗುವ ಶಿವ, ಪ್ರೇಮ ಪ್ರವಾಹದ ಬುದ್ಧ!

ನಿವೇದಿತಾಗೆ ಸ್ವಾಮೀಜಿಯವರ ಮೇಲೆ ಅಪಾರ ಶ್ರದ್ಧೆಯಿತ್ತು. ಸ್ವಾಮೀಜಿ ಹೇಳಿದ ಕೆಲಸ ಮಾಡುವುದಷ್ಟೇ ತನ್ನ ಜೀವನದ ಗುರಿಯೆಂದು ಆಕೆ ನಿರ್ಧರಿಸಿಯಾಗಿತ್ತು. ಹೀಗೆ ನಿರ್ಧರಿಸುವ ಮುನ್ನ ಅನೇಕ ತಾಕಲಾಟಗಳು ಎದುರಾದರೂ ಅದನ್ನು ಎದುರಿಸಿ ಗೆದ್ದು ಭಾರತದ ಶಿಶುವಾದಳು. ಹಾಗಂತ ಇದು ಏಕಾಕಿ ನಡೆದ ಪ್ರಕ್ರಿಯೆಯಲ್ಲ. ಸ್ವಾಮೀಜಿ ಭಾರತಕ್ಕೆ ಬಂದ ನಂತರ ಮಾರ್ಗರೇಟ್ ನೋಬಲ್ಳೊಡನೆ ನಿರಂತರ ಪತ್ರ ವ್ಯವಹಾರ ನಡೆದಿದೆ. ಅತ್ತ ಆಕೆಯೂ ವೇದಾಂತದ ಪ್ರಚಾರ ಕಾರ್ಯದಲ್ಲಿ ತನ್ನ ತಾನು ಪೂತರ್ಿ ತೊಡಗಿಸಿಕೊಂಡು ಆಧ್ಯಾತ್ಮದ ಅತ್ಯುನ್ನತ ಸವಿ ಅನುಭವಿಸಲಾರಂಭಿಸಿದ್ದಳು. ಆ ವೇಳೆಗೆ ಸ್ವಾಮೀಜಿ ಇಲ್ಲಿ ಬರಗಾಲದ ಪರಿಹಾರಕ್ಕೆಂದು ಸೋದರ ಸಂನ್ಯಾಸಿಗಳಿಗೆ ದೀಕ್ಷೆ ಕೊಟ್ಟು ಕಳಿಸಿದ್ದರು. ತಮ್ಮ ಪ್ರತೀ ಪತ್ರದಲ್ಲೂ ಈ ಬಗೆಯ ಸಾಮಾಜಿಕ ಚಟುವಟಿಕೆಗಳನ್ನೇ ಉಲ್ಲೇಖಿಸುತ್ತಿದ್ದ ಸ್ವಾಮೀಜಿ ಧ್ಯಾನದಿಂದ ಮುಕ್ತಿಯ ಹಾದಿಯಲ್ಲಿದ್ದ ನಿವೇದಿತೆಯನ್ನು ಕರ್ಮಮಾರ್ಗದೆಡೆಗೆ ಎಳೆದೆಳೆದು ತರುತ್ತಿದ್ದರು.

ಸ್ವಾಮಿ ವಿವೇಕಾನಂದರಿಗೆ ನಿವೇದಿತಾಳಷ್ಟೇ ಸಮರ್ಥಳಾದ ಭಾರತೀಯ ಹೆಣ್ಣುಮಕ್ಕಳು ಸಿಗಲೇ ಇಲ್ಲವಾ? ಹಾಗಂತ ಅನೇಕರು ಪ್ರಶ್ನಿಸುತ್ತಾರೆ. ಭಾರತೀಯ ಹೆಣ್ಣುಮಕ್ಕಳ ಸಾಮಥ್ರ್ಯ ಮತ್ತು ಚೌಕಟ್ಟು ಎರಡೂ ಅವರಿಗೆ ಗೊತ್ತಿರದ ಸಂಗತಿಯೇನಲ್ಲ. ಅದೇ ವೇಳೆಗೆ ಪಶ್ಚಿಮದ ಹೆಣ್ಣುಮಕ್ಕಳ ಸಾಮಥ್ರ್ಯ ಮತ್ತು ಛಲಭರಿತ ವ್ಯಕ್ತಿತ್ವದ ಅರಿವೂ ಅವರಿಗಿತ್ತು. ಸ್ವಾಮೀಜಿ ಸದಾ ಕಾಲ ಶ್ರದ್ಧೆಯ ಬಗ್ಗೆ ಮಾತನಾಡುತ್ತಿದ್ದರು ಮತ್ತು ಪಶ್ಚಿಮದವರಲ್ಲಿ ಶ್ರದ್ಧೆ ಅಪಾರವಾಗಿದೆ ಎಂಬುದೂ ಅವರಿಗೆ ಗೊತ್ತಿತ್ತು. ಅದರಲ್ಲೂ ಸ್ವಾಮಿ ವಿವೇಕಾನಂದರ ವಿಶ್ವರೂಪವನ್ನೇ ದರ್ಶನ ಮಾಡಿಕೊಂಡಿದ್ದ ಪಾಶ್ಚಾತ್ಯ ಶಿಷ್ಯರು ಈ ಮಹಾಮಹಿಮನ ಕಾರ್ಯಕ್ಕೆ ಸರ್ವಸಮರ್ಪಣೆಗೆ ಸಿದ್ಧವಾಗಿದ್ದರು. ಹಾಗಂತ ಸ್ವಾಮೀಜಿ ಪೂರಾ ಪಶ್ಚಿಮದವರ ಮೇಲೆಯೇ ಭರವಸೆ ಇಟ್ಟಿದ್ದರೆಂದೇನಿಲ್ಲ. ಭಾರತೀಯ ಸ್ತ್ರೀ ರತ್ನಗಳಿಗಾಗಿ ತಡಕಾಡಿದ್ದರು. ಅಂಥವರು ಸಿಕ್ಕಾಗ ಕುಣಿದಾಡಿದ್ದರು.
ಗುರುದೇವ ರವೀಂದ್ರರ ಅಕ್ಕ ಸ್ವರ್ಣಕುಮಾರಿ ದೇವಿಯ ಮಗಳಾದ ಸರಳಾದೇವಿ ಘೋಷಾಲರು ವಿವೇಕಾನಂದರ ಮೆಚ್ಚುಗೆಗೆ ಪಾತ್ರರಾದ ಹೆಣ್ಣುಮಕ್ಕಳಲ್ಲಿ ಒಬ್ಬರು. ಆಕೆ ಭಾರತದ ಸ್ವಾತಂತ್ರ್ಯ ಸಂಘರ್ಷದಲ್ಲಿ ಪಾಲ್ಗೊಂಡ ಕ್ರಾಂತಿಕಾರಿ ಹೆಣ್ಣುಮಗಳು. ಭಾರತದ ಮೊದಲ ಮಹಿಳಾ ಸಂಘಟನೆ ಭಾರತ್ ಸ್ತ್ರೀ ಮಹಾಮಂಡಲದ ಸ್ಥಾಪಕಿ. ಆ ಮೂಲಕ ಸ್ತ್ರೀ ಶಿಕ್ಷಣಕ್ಕೆ ತೊಡಗಿಸಿಕೊಂಡವಳು ಆಕೆ. ಸ್ವಾಮೀಜಿಯ ವಿಚಾರಗಳಿಂದ ಆಕೆ ಬಹುವಾಗಿ ಪ್ರಭಾವಿತಳಾಗಿದ್ದಳು. ತನ್ನ ‘ಭಾರತಿ’ ಎಂಬ ಪತ್ರಿಕೆಯನ್ನು ಅವರಿಗೆ ಕಳಿಸಿ ಅಭಿಪ್ರಾಯ ಅಪೇಕ್ಷಿಸಿದ್ದಳು. ಆಗ ಡಾಜರ್ಿಲಿಂಗ್ನಿಂದ ಪತ್ರ ಬರೆದ ಸ್ವಾಮೀಜಿ ಭಾರತದ ತತ್ಕಾಲೀನ ಸಮಸ್ಯೆಯ ಕುರಿತಂತೆ ಅವಳಿಗೆ ವಿವರಿಸಿ ‘ಓ! ಭಾಗ್ಯವತಿಯರು ನೀವು! ನೀವು ಐಶ್ವರ್ಯಹೀನರೂ, ನಿಭರ್ಾಗ್ಯರೂ, ತುಳಿತಕ್ಕೊಳಗಾದವರೂ ಆದವರನ್ನು ಹೃತ್ಪೂರ್ವಕವಾಗಿ ಪ್ರೀತಿಸಿದರೆ ಅವರು ಮತ್ತೊಮ್ಮೆ ಏಳುವರೆಂದು ನಾನು ನಂಬುತ್ತೇನೆ’ ಎಂದರು. ಮತ್ತೊಂದು ಸುದೀರ್ಘ ಪತ್ರದಲ್ಲಿ ‘ವೇದಾಂತವನ್ನು ತಿಳಿದುಕೊಂಡ, ಅನುಭವವುಳ್ಳ, ಧೈರ್ಯಶಾಲಿಗಳಾದ ಮತ್ತು ಸುಸಂಸ್ಕೃತರಾದ ನಿಮ್ಮಂತಹ ಹೆಂಗಸರು ಇಂಗ್ಲೆಂಡ್ ದೇಶಕ್ಕೆ ಬೋಧಿಸಲು ಹೋದರೆ ಪ್ರತೀ ವರ್ಷವೂ ನೂರಾರು ಜನ ಗಂಡಸರು ಮತ್ತು ಹೆಂಗಸರು ಭಾರತೀಯ ಧರ್ಮವನ್ನು ಸ್ವೀಕರಿಸಿ ಧನ್ಯರಾಗುವರೆಂದು ನಾನು ನಂಬುತ್ತೇನೆ’ ಎಂದರು. ಇಲ್ಲಿಂದ ವಿದೇಶಕ್ಕೆ ಹೋದ ರಮಾಬಾಯಿ ಪಾಶ್ಚಾತ್ಯ ರಾಷ್ಟ್ರಗಳ ಕುರಿತಂತೆ ಅರಿಯದೇ, ಸಮರ್ಥ ಆಂಗ್ಲ ಪಾಂಡಿತ್ಯವನ್ನು ಹೊಂದದೇ ಇದ್ದಾಗ್ಯೂ ಮಾಡಿದ ಸಾಧನೆ ಅವರನ್ನು ಮೂಕವಿಸ್ಮಿತರನ್ನಾಗಿಸಿತ್ತು. ಅಂತಹುದರಲ್ಲಿ ಸರಳಾಘೋಷಾಲ್ರಂಥವರು ಇಂಗ್ಲೆಂಡಿಗೆ ಹೋದರೆ ಅದರ ಪ್ರಭಾವ ಜೋರಾಗಿರುವುದೆಂಬ ಖಾತ್ರಿ ಅವರಿಗಿತ್ತು. ‘ಭಾರತೀಯ ನಾರಿಯು ಭಾರತೀಯ ಉಡುಪಿನಲ್ಲಿ ಋಷಿಮುಖದಿಂದ ಹೊರಟ ಧರ್ಮ ಬೋಧಿಸಿದರೆ ಪಾಶ್ಚಾತ್ಯ ದೇಶಗಳಲ್ಲೂ ಮಹಾ ಮಹಾತರಂಗವೇಳುವುದು. ಮೈತ್ರೇಯಿ, ಲೀಲಾವತಿ, ಸಾವಿತ್ರಿ, ಉಭಯ ಭಾರತಿಯರನ್ನು ಹೆತ್ತ ನಾಡಲ್ಲಿ ಇದನ್ನು ಸಾಧಿಸುವ ಧೈರ್ಯವುಳ್ಳ ನಾರಿಯರು ಇಲ್ಲವೇನು?’ ಎಂದು ಬಲು ಜೋರಾಗಿಯೇ ಪ್ರಶ್ನಿಸಿದರು.

swami-vivekanandaarticle-swami-vivekanandaarticle-on-swami-vivekanandastory-of-swami-vivekanandawritten-by-swami-vivekanandawritten-for-swami-vivekananda-authored-swami-vivekanandaswami-vivekananda-an
ಸರಳಾಘೋಷಾಲರನ್ನು ವಿದೇಶದ ನೆಲದಲ್ಲಿ ಪರಿಚಯಿಸುವ ಬಯಕೆ ವಿವೇಕಾನಂದರಿಗಿತ್ತು. ಆದರೆ ಮನೆಯವರು ಒಪ್ಪಿಗೆ ಕೊಡಲಿಲ್ಲ. ಅವರ ಮದುವೆಯನ್ನೂ ಮಾಡಲಾಯಿತು. ಮೇಲ್ನೋಟಕ್ಕೆ ಸ್ವಾಮೀಜಿ ಆಕೆಯನ್ನು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸುವ ಕುರಿತಂತೆ ಅಪಾರ ಭರವಸೆ ಇಟ್ಟಿದ್ದರೆನಿಸುತ್ತದೆ. ಒಮ್ಮೆಯಂತೂ ಶಿಕ್ಷಣದ ಕಲ್ಪನೆಯನ್ನು ಮುಂದಿಟ್ಟು ಸರಳಾಘೋಷಾಲರಂತೆ ಪ್ರಯತ್ನ ಮಾಡಬೇಕೆಂದು ನಿವೇದಿತೆಗೆ ಆದರ್ಶವನ್ನೂ ಕಟ್ಟಿಕೊಟ್ಟಿದ್ದರು. ಮುಂದೆ ಸರಳಾಘೋಷಾಲರ ಬದುಕು ಅನೂಹ್ಯ ತಿರುವುಗಳನ್ನು ಪಡಕೊಂಡಿತು; ವಿವಾದಾತ್ಮಕವೂ ಆಯಿತು. ಅಷ್ಟೇ ಅಲ್ಲ, ರಾಮಕೃಷ್ಣ ಪಂಥವನ್ನು ಸಮಾಪ್ತಿಗೊಳಿಸಿದರೆ ವಿವೇಕಾನಂದರ ಕೆಲಸಕ್ಕೆ ತೊಡಗಿಸಿಕೊಳ್ಳುವುದಾಗಿ ಪತ್ರವನ್ನೂ ಬರೆದಳು. ಆಕೆಯಲ್ಲಿ ಶ್ರದ್ಧೆಯ ಕೊರತೆ ಎದ್ದು ಕಾಣುತಿತ್ತು. ಆ ವೇಳೆಗಾಗಲೇ ನಿವೇದಿತಾ ವಿವೇಕಾನಂದರ ಪುಷ್ಪವಾಗಿ ಅರಳಲಾರಂಭಿಸಿದ್ದಳು.
ನಿವೇದಿತಾಗೆ ಸ್ವಾಮೀಜಿಯವರ ಮೇಲೆ ಅಪಾರ ಶ್ರದ್ಧೆಯಿತ್ತು. ಸ್ವಾಮೀಜಿ ಹೇಳಿದ ಕೆಲಸ ಮಾಡುವುದಷ್ಟೇ ತನ್ನ ಜೀವನದ ಗುರಿಯೆಂದು ಆಕೆ ನಿರ್ಧರಿಸಿಯಾಗಿತ್ತು. ಹೀಗೆ ನಿರ್ಧರಿಸುವ ಮುನ್ನ ಅನೇಕ ತಾಕಲಾಟಗಳು ಎದುರಾದರೂ ಅದನ್ನು ಎದುರಿಸಿ ಗೆದ್ದು ಭಾರತದ ಶಿಶುವಾದಳು. ಹಾಗಂತ ಇದು ಏಕಾಕಿ ನಡೆದ ಪ್ರಕ್ರಿಯೆಯಲ್ಲ. ಸ್ವಾಮೀಜಿ ಭಾರತಕ್ಕೆ ಬಂದ ನಂತರ ಮಾರ್ಗರೇಟ್ ನೋಬಲ್ಳೊಡನೆ ನಿರಂತರ ಪತ್ರ ವ್ಯವಹಾರ ನಡೆದಿದೆ. ಅತ್ತ ಆಕೆಯೂ ವೇದಾಂತದ ಪ್ರಚಾರ ಕಾರ್ಯದಲ್ಲಿ ತನ್ನ ತಾನು ಪೂತರ್ಿ ತೊಡಗಿಸಿಕೊಂಡು ಆಧ್ಯಾತ್ಮದ ಅತ್ಯುನ್ನತ ಸವಿ ಅನುಭವಿಸಲಾರಂಭಿಸಿದ್ದಳು. ಆ ವೇಳೆಗೆ ಸ್ವಾಮೀಜಿ ಇಲ್ಲಿ ಬರಗಾಲದ ಪರಿಹಾರಕ್ಕೆಂದು ಸೋದರ ಸಂನ್ಯಾಸಿಗಳಿಗೆ ದೀಕ್ಷೆ ಕೊಟ್ಟು ಕಳಿಸಿದ್ದರು. ತಮ್ಮ ಪ್ರತೀ ಪತ್ರದಲ್ಲೂ ಈ ಬಗೆಯ ಸಾಮಾಜಿಕ ಚಟುವಟಿಕೆಗಳನ್ನೇ ಉಲ್ಲೇಖಿಸುತ್ತಿದ್ದ ಸ್ವಾಮೀಜಿ ಧ್ಯಾನದಿಂದ ಮುಕ್ತಿಯ ಹಾದಿಯಲ್ಲಿದ್ದ ನಿವೇದಿತೆಯನ್ನು ಕರ್ಮಮಾರ್ಗದೆಡೆಗೆ ಎಳೆದೆಳೆದು ತರುತ್ತಿದ್ದರು.
ಸ್ವಾಮೀಜಿಯವರ ಪತ್ರಗಳೇ ಸಂಶೋಧನೆಗೆ ಯೋಗ್ಯವಾದವು. ಅವರವರ ಮನಸ್ಥಿತಿಯಿಂದ ಅವರವರನ್ನು ಮೇಲೆತ್ತುವ ಪ್ರಯತ್ನ ಬರೆದ ಪತ್ರಗಳಲ್ಲಿ ಎದ್ದು ಕಾಣುತ್ತಿರುತ್ತದೆ. ನಿವೇದಿತೆಗೆ ಸದಾ ಚಟುವಟಿಕೆಗಳನ್ನು ವಿವರಿಸಿದರೆ, ಮಿಸ್ ಮೇರಿ ಹೇಲ್, ಜೋಸೆಫಿನ್ ಮ್ಯಾಕ್ಲಿಯೊಡ್ರಿಗೆ ಪಶ್ಚಿಮದ ಹುಳುಕುಗಳನ್ನು ಎತ್ತಿ ತೋರುತ್ತಿದ್ದರು. ಸೋದರ ಸಂನ್ಯಾಸಿಗಳಲ್ಲಿ ದುಃಖ ತೋಡಿಕೊಂಡರೆ, ಅಳಸಿಂಗನಿಗೆ ಬೈದು ಸಮಾಧಾನ ಮಾಡುತ್ತಿದ್ದರು!
ಪದೇ ಪದೇ ಬರೆದ ಪತ್ರಗಳಲ್ಲೂ ಅವರೆಂದಿಗೂ ನಿವೇದಿತಾಳನ್ನು ಭಾರತಕ್ಕೆ ಬರುವಂತೆ ಕರೆಯಲೇ ಇಲ್ಲ. ಒಮ್ಮೆಯಂತೂ ‘ನೀನು ಇಲ್ಲಿಗೆ ಬರುವುದಕ್ಕಿಂತ ಇಂಗ್ಲೆಂಡಿನಲ್ಲಿಯೇ ಇದ್ದು ನಮಗಾಗಿ ಹೆಚ್ಚು ಕೆಲಸಗಳನ್ನು ಮಾಡಬಹುದು. ಬಡ ಭಾರತೀಯರಿಗಾಗಿ ಮಹತ್ತರವಾದ ಸ್ವಾರ್ಥ ತ್ಯಾಗಕ್ಕಾಗಿ ದೇವರು ನಿನ್ನ ಆಶೀರ್ವದಿಸಲಿ’ ಎಂದಿದ್ದರು. ಅಷ್ಟೇ ಅಲ್ಲ ಮ್ಯಾಕ್ಲಿಯೊಡ್ಗೆ ಬರೆದ ಪತ್ರದಲ್ಲಿ ‘ನೀನು ಇಲ್ಲಿಗೆ ಖಂಡಿತ ಬರಬಹುದು. ಆದರೆ ನೀನು ಇದನ್ನು ಜ್ಞಾಪಕದಲ್ಲಿಡಬೇಕು; ಯೂರೋಪಿಯನ್ನರು ಮತ್ತು ಹಿಂದೂಗಳು ನೀರು ಮತ್ತು ಎಣ್ಣೆಯಂತೆ ಇರುವರು. ದೇಶೀಯರೊಂದಿಗೆ ಬೆರೆಯುವುದನ್ನು ಯೂರೋಪಿಯನ್ನರು ಬಹಳ ಅವಮಾನಕರ ಎಂದು ಭಾವಿಸುವರು. ರಾಜಧಾನಿಗಳಲ್ಲಿ ಕೂಡ ಚೆನ್ನಾದ ಹೋಟಲಿಲ್ಲ. ಮೊಣಕಾಲುದ್ದದ ಬಟ್ಟೆಯನ್ನುಟ್ಟವರನ್ನು ನೀನು ಸಹಿಸಬೇಕಾಗಿದೆ. ನಾನು ಕೂಡ ಒಂದು ಪಂಚೆಯನ್ನು ಮಾತ್ರ ಉಟ್ಟಿರುವುದನ್ನು ನೋಡುವೆ. ಎಲ್ಲಾ ಕಡೆಯೂ ಕೊಳೆ, ಕಸ, ಕಂದುಬಣ್ಣದ ಜನ; ಆದರೆ ನಿನ್ನೊಡನೆ ವೇದಾಂತವನ್ನು ಮಾತನಾಡುವವರು ಬೇಕಾದಷ್ಟು ಜನ ಸಿಕ್ಕುವರು. ಇಲ್ಲಿಯ ಇಂಗ್ಲಿಷಿನವರೊಂದಿಗೆ ನೀನು ಬೆರೆತರೆ ನಿನಗೆ ಬೇಕಾದಷ್ಟು ಸೌಕರ್ಯಗಳು ಸಿಕ್ಕುತ್ತವೆ. ಆದರೆ ಹಿಂದೂಗಳ ನೈಜಸ್ಥಿತಿಯನ್ನು ಅರಿಯಲಾರೆ’ ಎಂದು ಹೆದರಿಸಿಯೂ ಇದ್ದರು.

akka-7

ಭಾರತಕ್ಕಿಂತ ಇಂಗ್ಲೆಂಡೇ ನಿನಗೆ ಶ್ರೇಯಸ್ಕರವೆಂದು ಸ್ವಾಮೀಜಿ ಹೇಳಿದಾಗ ನಿವೇದಿತೆಯ ತುಮುಲ ಹೇಳತೀರದು. ಅವಳು ಅದಾಗಲೇ ಭಾರತಕ್ಕೆ ಧಾವಿಸಿ ಇಲ್ಲಿನ ಜನರ ಸೇವೆಯಲ್ಲಿ ತಾನು ಸವೆಯುವುದರ ಕನಸು ಕಾಣತೊಡಗಿದಳು. ಸ್ವಾಮೀಜಿಯ ಆಜ್ಞಾಪಾಲಕಿಯಾಗಿ ಅವರಿಂದಲೇ ವೇದಾಂತ ತತ್ತ್ವಗಳನ್ನು ಅರಿಯುವ ಅವಳ ಬಯಕೆ ಈಗ ತೀವ್ರಗೊಂಡಿತ್ತು. ಆಕೆ ಮಿತ್ರರೆಲ್ಲರ ಬಳಿ ತನ್ನ ದುಃಖ ತೋಡಿಕೊಂಡಳು. ಸ್ವಾಮೀಜಿಗೆ ಆಕೆಯ ನಿರ್ಣಯ ಕೇಳಿದಾಗ ಆದ ಆನಂದ ಅಷ್ಟಿಷ್ಟಲ್ಲ. ಈ ನಿರ್ಣಯದಲ್ಲಿ ತನ್ನ ಪಾತ್ರವದೇನೂ ಇಲ್ಲ; ಆಕೆಯದ್ದೇ ದೃಢನಿಶ್ಚಯವೆಂಬುದು ಅವರಿಗೆ ಮಾನಸಿಕ ನೆಮ್ಮದಿ ತಂದಿರಲು ಸಾಕು. ಹೀಗಾಗಿ ಸುದೀರ್ಘ ಪತ್ರವೊಂದನ್ನು ಬರೆದು, ‘ಈಗ ನಾನು ನಿನಗೆ ಮುಚ್ಚುಮರೆಯಿಲ್ಲದೆ ಹೇಳುತ್ತೇನೆ. ಭಾರತಖಂಡದ ಕೆಲಸದಲ್ಲಿ ನಿನಗೆ ಬಹಳ ದೊಡ್ಡ ಭವಿಷ್ಯವಿದೆ ಎಂಬುದು ನನಗೆ ಈಗ ನಿಧರ್ಾರವಾಯಿತು. ಭಾರತೀಯರಿಗೆ ಅದರಲ್ಲೂ ಭಾರತದ ಮಹಿಳೆಯರಿಗಾಗಿ ಕೆಲಸ ಮಾಡುವುದಕ್ಕೆ ಬೇಕಾಗಿರುವುದು ಪುರುಷನಲ್ಲ, ಸ್ತ್ರೀ, ನಿಜವಾದ ಸ್ತ್ರೀ, ನಿಜವಾದ ಸಿಂಹಿಣಿ. ಭರತಖಂಡ ಇನ್ನೂ ಮಹಾಮಹಿಳೆಯರನ್ನು ಹೆತ್ತಿಲ್ಲ. ಬೇರೆ ದೇಶಗಳಿಂದ ಅವರನ್ನು ಎರವಲಾಗಿ ತೆಗೆದುಕೊಳ್ಳಬೇಕಾಗಿದೆ. ನಿನ್ನ ವಿದ್ಯೆ, ನಿಷ್ಕಾಪಟ್ಯ, ಪಾವಿತ್ರ್ಯ, ಅನಂತಪ್ರೀತಿ, ಸ್ಥಿರಸಂಕಲ್ಪ, ಎಲ್ಲಕ್ಕಿಂತ ಹೆಚ್ಚಾಗಿ ನಿನ್ನ ನಾಡಿಯಲ್ಲಿ ಸಂಚರಿಸುವ ಕೆಲ್ಟ್ ಜನಾಂಗದ ರಕ್ತ- ಇವು ನಿನ್ನನ್ನು ನಮಗೆ ಬೇಕಾದ ಮಹಿಳೆಯನ್ನಾಗಿ ಮಾಡಿದೆ. ಆದರೂ ತೊಂದರೆಗಳು ಹಲವಿದೆ. ಇಲ್ಲಿರುವ ದುಃಖ, ಮೂಢನಂಬಿಕೆ, ಗುಲಾಮಗಿರಿ ಇವನ್ನು ನೀನು ಊಹಿಸಲಾರೆ. ವಿಚಿತ್ರ ಜಾತಿ ಮತ್ತು ಪ್ರತ್ಯೇಕತಾ ಭಾವನೆಗಳಿಂದ ಕೂಡಿದ ಅರೆಬೆತ್ತಲೆ ಇರುವ ಪುರುಷರು, ಸ್ತ್ರೀಯರ ಮಧ್ಯದಲ್ಲಿ ನೀನು ಇರಬೇಕಾಗುವುದು. ಅವರು ಅಂಜಿಕೆಯಿಂದ ಅಥವಾ ದ್ವೇಷದಿಂದ ಬಿಳಿ ಜನರಿಂದ ದೂರವಿರುವರು. ಇಲ್ಲಿನ ಜನರು ಬಿಳಿಯವರಿಂದ ವಿಪರೀತವಾದ ದ್ವೇಷಕ್ಕೆ ಗುರಿಯಾಗಿದ್ದಾರೆ. ಅದಲ್ಲದೆ ಬಿಳಿಯ ಜನರು ನೀನೊಬ್ಬಳೆ ಹುಚ್ಚಿಯೆಂದು ತಿಳಿದು ನಿನ್ನ ಪ್ರತಿಯೊಂದು ವ್ಯವಹಾರವನ್ನೂ ಅನುಮಾನದಿಂದ ನೋಡುವರು. ಇನ್ನು ಹವಾಗುಣವಾದರೋ ವಿಪರೀತ ಸೆಕೆ. ಅನೇಕ ಸ್ಥಳಗಳಲ್ಲಿ ನಮ್ಮ ಚಳಿಗಾಲ ನಿಮ್ಮ ಬೇಸಿಗೆ ಕಾಲದಂತೆ ಇರುವುದು. ದಕ್ಷಿಣದಲ್ಲಿಯಾದರೋ ಯಾವಾಗಲೂ ಬಿಸಿಲು ಉರಿಯುತ್ತಲೇ ಇರುವುದು. ಪಟ್ಟಣಗಳಿಂದ ಹೊರಗೆ ಇರುವ ಸ್ಥಳಗಳಲ್ಲಿ, ಐರೋಪ್ಯ ಜನರಿಗೆ ಅಗತ್ಯವಾದ ಸೌಕರ್ಯಗಳು ಒಂದೂ ದೊರಕುವುದಿಲ್ಲ. ಇಷ್ಟೊಂದು ಅನನುಕೂಲಗಳಿದ್ದರೂ ನೀನು ಕೆಲಸ ಮಾಡಲು ನಿಧರ್ಾರಮಾಡಿದ್ದರೆ ಬರಬಹುದು. ನಿನಗೆ ನೂರು ಸ್ವಾಗತಗಳು’ ಎಂದರು. ಇಷ್ಟೆಲ್ಲಾ ಗಂಭೀರ ವಿವರಣೆಯ ನಡುವೆಯೂ ಅವರಿಗೆ ಭಾರತದಲ್ಲಿ ಕೆಲಸ ಮಾಡಲು ನಿವೇದಿತಾ ಆಗಮಿಸಲೇಬೇಕೆಂಬುದು ಗೊತ್ತಿತ್ತು. ಹಾಗಾಗಿ ಅದೇ ಪತ್ರದಲ್ಲಿ ತಮ್ಮ ಧಾಟಿ ಬದಲಾಯಿಸಿ, ‘ಕೆಲಸಕ್ಕೆ ಕೈ ಹಾಕಿದ ಮೇಲೆ ನೀನು ಇದರಲ್ಲಿ ಸೋಲಬಹುದು ಅಥವಾ ಬೇಸರವಾಗಬಹುದು. ನೀನು ಭರತಖಂಡಕ್ಕೆ ಸಹಾಯ ಮಾಡಬಹುದು, ಬಿಡಬಹುದು; ವೇದಾಂತವನ್ನು ಸ್ವೀಕರಿಸಬಹುದು, ಬಿಡಬಹುದು ನಾನಂತೂ ಜೀವನವಿರುವವರೆಗೂ ನಿನ್ನೊಡನೆ ನಿಲ್ಲುವೆನೆಂಬ ಮಾತು ಕೊಡುತ್ತೇನೆ’ ಎಂದಿದ್ದರು. ಅಷ್ಟೇ ಅಲ್ಲದೆ ‘ಭರತಖಂಡದಲ್ಲಿ ನನಗೆ ಒಂದು ರೊಟ್ಟಿ ಸಿಗುವ ಹಾಗಿದ್ದರೂ ನೀನು ಅದನ್ನು ಸಂಪೂರ್ಣವಾಗಿ ಹೊಂದುವೆ’ ಎಂದು ಭರವಸೆ ಕೊಟ್ಟಿದ್ದರು. ಗುರುವಿನಿಂದ ಶಿಷ್ಯೆಗೆ ಬೇಕಾದ ಆಶ್ವಾಸನೆ ಇನ್ನೇನು ಹೇಳಿ. ಮಾರ್ಗರೇಟ್ ನೋಬಲ್ ಈಗ ತಡಮಾಡಲಿಲ್ಲ. ಭಾರತಕ್ಕೆ ಹೊರಟು ನಿಂತಳು. ಹಾಗಂತ ಅದು ಸುಲಭವಾಗಿರಲಿಲ್ಲ. ಮನೆ-ಮಠ, ಬಂಧು-ಮಿತ್ರರು, ಊರು-ದೇಶ, ವೇಷ-ಭಾಷೆ ಸಂಸ್ಕೃತಿಗಳನ್ನೆಲ್ಲ ಬಿಟ್ಟು ಹೊಸದೊಂದು ನಾಡಿಗೆ ಆಕೆ ಬರಬೇಕಿತ್ತು. ಅದೂ ಎಂತಹ ನಾಡು? ಏನೆಂದರೆ ಏನೂ ಗೊತ್ತಿರದ ಅನ್ಯರ ನಾಡು. ಇಡಿಯ ಭರತಖಂಡದಲ್ಲಿ ಅವಳಿಗೆ ಗೊತ್ತಿದ್ದುದು ಒಂದೇ. ಗುರುದೇವ, ವಿವೇಕಾನಂದರು ಮಾತ್ರ. ಅದೇ ಭರವಸೆಯೊಂದಿಗೆ ಮಾರ್ಗರೇಟ್ ನೋಬಲ್ ದೇಶಬಿಟ್ಟು ಹೊರಟಳು.
ಕೊಲ್ಕೊತ್ತಾಕ್ಕೆ ತಲುಪಿದ ಮಾರ್ಗರೇಟ್ ಸ್ವತಃ ಸ್ವಾಮೀಜಿ ಆಕೆಯ ಸ್ವಾಗತಕ್ಕೆಂದು ನಿಂತಿದ್ದುದು ಆಕೆಯ ಮನ ತಣಿಸಿತ್ತು. ಭಾರತೀಯರ ಅನಾಗರೀಕತೆಯ ಬಗ್ಗೆ ಯೂರೋಪಿನಲ್ಲಿ ಮನೆಗೊಂದು ಕಥೆ ಕೇಳಿದ್ದಳು ಆಕೆ. ಸಹಜವಾಗಿಯೇ ಹೆದರಿಕೆ ಇತ್ತು. ಬಿಳಿಯರನ್ನು ಕಂಡರೆ ಮುಗಿಬೀಳುವ ಕಾಡು ಜನಾಂಗದ ನಡುವೆ ಬಿಳಿಯರ ಸಂಪರ್ಕವೇ ಇರದಂತೆ ಬದುಕಬೇಕಿತ್ತು ಆಕೆ. ಇಷ್ಟರ ನಡುವೆಯೂ ಅಂದಿನ ರಾತ್ರಿ ತನ್ನ ಡೈರಿಯ ಪುಟದಲ್ಲಿ ’28 ಜನವರಿ 1898, ಜಯವಾಗಲಿ! ನಾನು ಭಾರತದಲ್ಲಿದ್ದೇನೆ’ ಎಂದು ಬರೆದುಕೊಂಡಳು.

sarada_devi_and_sister_nivedita
ಭಾರತ ಆಕೆಯನ್ನು ಸ್ವೀಕರಿಸುವುದು ಅಷ್ಟು ಸುಲಭವಾಗಿರಲಿಲ್ಲ. ಬಿಳಿಯರನ್ನು ದ್ವೇಷಿಸುತ್ತಿದ್ದ ಭಾರತೀಯರು. ಜಾತಿ-ವರ್ಗಗಳ ಸಂಘರ್ಷದ ತಾಕಲಾಟದಲ್ಲಿ ಅವರುಗಳಿಂದ ದೂರ ಓಡುತ್ತಿದ್ದ ಜನಾಂಗ. ಇವುಗಳ ನಡುವೆ ಪ್ರೀತಿಯಿಂದಷ್ಟೇ ಕೆಲಸ ಮಾಡಬೇಕಿತ್ತು. ಅದು ಮೊದಲು ಎತ್ತಲಿಂದ ಹರಿಯಬೇಕೆಂಬುದಷ್ಟೇ ಈಗ ಇದ್ದ ಪ್ರಶ್ನೆ. ಪ್ರೇಮ ಪ್ರವಾಹದ ವಿಚಾರ ಬಂದಾಗ ಕೃಷ್ಣನ ನೆಲ ಭಾರತಕ್ಕೇ ಮೊದಲ ಸ್ಥಾನ. ರಾಮಕೃಷ್ಣರ ಶಿಷ್ಯೆಯಾದ ಗೋಪಾಲನ ತಾಯಿಯೆಂಬ ವೃದ್ಧ ಮಹಿಳೆಯೊಬ್ಬಳು ನಿವೇದಿತಾ ಮತ್ತು ಆಕೆಯೊಂದಿಗಿದ್ದ ಇತರೆ ವಿದೇಶೀ ಮಹಿಳೆಯರ ಗಲ್ಲ ಸ್ಪಶರ್ಿಸಿ ಮುತ್ತಿಟ್ಟು ‘ನರೇಂದ್ರನ ವಿಲಾಯಿತಿ ಮಕ್ಕಳು’ ಎಂದು ಒಳಗಿದ್ದ ಬಂಗಾಳಿ ತಾಯಂದಿರಿಗೆಲ್ಲ ಪರಿಚಯ ಮಾಡಿಕೊಟ್ಟಳು. ಆ ಸ್ಪರ್ಶ ಹೇಗಿತ್ತೆಂದರೆ ಮುಂಜಾವಿನ ಮಂಜಿನಂಥದ್ದು ಎನ್ನುತ್ತಾಳೆ ನಿವೇದಿತಾ. ಇಲ್ಲಿನ ಜನರ ಈ ನಿಷ್ಲಲ್ಮಶ ಪ್ರೇಮ, ಔದಾರ್ಯವೇ ಮುಂದೆ ನಿವೇದಿತಾಳನ್ನು ಭಾರತಕ್ಕೆ ಹತ್ತಿರವಾಗಿಸಿದ್ದು. ಸ್ವಾಮೀಜಿಯ ದೇಹತ್ಯಾಗದ ನಂತರ ನಿವೇದಿತೆ ಬದುಕಿದ್ದು ಒಂದಷ್ಟು ತೀವ್ರತರವಾದ ಕೆಲಸಗಳನ್ನು ಮಾಡಿದಳೆಂದರೆ ಅದಕ್ಕೆ ಈ ಅಸ್ಖಲಿತವಾದ ಪ್ರೇಮವೇ ಕಾರಣವಾಗಿತ್ತು. ಹೀಗಾಗಿಯೇ ನಿವೇದಿತಾ ದೇಶದ ಕುರಿತಂತೆ ಮಾತನಾಡುವಾಗಲೆಲ್ಲ ‘ನನ್ನ ಭಾರತ’ ಎನ್ನುತ್ತಿದ್ದಳು; ಸ್ತ್ರೀಯರ ವಿಚಾರವಾಗಿ ಹೇಳುವಾಗಲೆಲ್ಲ ‘ನಾವು’ ಎಂದೇ ಬಳಸುತ್ತಿದ್ದಳು. ಅವಳು ಭಾರತದೊಂದಿಗೆ ಏಕರಸವಾಗಿಬಿಟ್ಟಿದ್ದಳು!
ಆಕೆಯ ನಿಜವಾದ ಗೆಲುವು ರಾಮಕೃಷ್ಣರ ಶ್ರೀಮತಿಯಾದ ಶಾರದಾದೇವಿಯವರು ಆಕೆಯನ್ನು ಸ್ವೀಕಾರ ಮಾಡಿದ್ದು. ಮಡಿವಂತ ಬಂಗಾಳಿ ಹೆಂಗಸಿನಂತೆ ಬದುಕುತ್ತಿದ್ದ ಶ್ರೀಮಾತೆಯವರು ಆಕೆಯನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಆಕೆಯ ಕೈಯ ಹಣ್ಣನ್ನು ಸ್ವೀಕರಿಸಿ ಮಹತ್ತರ ಸಂದೇಶವೊಂದನ್ನು ಎಲ್ಲರಿಗೂ ಕೊಟ್ಟರು. ನಿವೇದಿತೆಯಂತೂ ಸಮಯ ಸಿಕ್ಕಾಗಲೆಲ್ಲ ಅವರೊಡನೆ ಕಾಲ ಕಳೆಯುವುದನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ತಾಯಿಯೇ ಸ್ವೀಕರಿಸಿದ ಮೇಲೆ ಇನ್ನು ಯಾರು ಸ್ವೀಕರಿಸದಿದ್ದರೂ ತಲೆಕೆಡಿಸಿಕೊಳ್ಳಲಾರೆ ಎನ್ನುತ್ತಿದ್ದರು ಸ್ವಾಮೀಜಿ. ನಿವೇದಿತಾ ಪರೀಕ್ಷೆ ಪಾಸಾಗಿ ಮುಂದಿನ ಸಾಹಸಕ್ಕೆ ಅಣಿಯಾಗಿದ್ದಳು. ಅದಕ್ಕೆಂದೇ ಅವಳಿಗೆ ವಿವೇಕಾನಂದರು ಮಾಚರ್್ 25ರಂದು ಬ್ರಹ್ಮಚರ್ಯ ದೀಕ್ಷೆ ಕೊಟ್ಟು ನಿವೇದಿತಾ ಎಂಬ ನಾಮಕರಣ ಮಾಡಿದ್ದು. ಓದಿಗೆ ಅನುಕೂಲವಾಗಲೆಂದು ಎಲ್ಲೆಡೆ ನಿವೇದಿತಾ ಎಂಬ ಹೆಸರೇ ಬಳಕೆಯಾಗಿದ್ದರೂ ಮಾಚರ್್ 25ಕ್ಕೆ ಮುನ್ನ ಆಕೆ ಮಾರ್ಗರೇಟ್ ನೋಬಲ್ ಆಗಿದ್ದವಳು. ಆಕೆಯ ಬದುಕು ತಾಯಿ ಭಾರತಿಗೆ ಹೂವಾಗಿ ಸಮರ್ಪಣೆಯಾಗಲೆಂಬ ದೃಷ್ಟಿಯಿಂದಲೇ ಆಕೆಗೆ ‘ನಿವೇದಿತಾ’ ಎಂದು ನಾಮಕರಣ ಮಾಡಿದ್ದರು ಸ್ವಾಮೀಜಿ. ಶಿವನ ಪೂಜೆಯನ್ನು ಆಕೆಯ ಕೈಯಿಂದಲೇ ಮಾಡಿಸಿ, ಬುದ್ಧನಿಗೆ ಹೂಗಳನ್ನಪರ್ಿಸಲು ಹೇಳಿದ್ದರು. ಎರಡೂ ಸಂಕೇತವೇ. ನೋವು-ಅಪವಾದ-ಕಷ್ಟಗಳನ್ನೆಲ್ಲ ಶಿವನಂತೆ ನುಂಗಬೇಕು ಮತ್ತು ಬುದ್ಧನಂತೆ ತೊಂದರೆ ಕೊಟ್ಟವರಿಗೆ ಪ್ರೀತಿಯನ್ನು ಹರಿಸಬೇಕು! ನಿವೇದಿತಾ ಅಕ್ಷರಶಃ ಹಾಗೆಯೇ ಆಗಿಬಿಟ್ಟಳು. ಜೊತೆಗೆ ಭಾರತವನ್ನು ನುಂಗಲು ಬಂದವರಿಗೆ ಕಾಳಿ ರೂಪಿಣಿಯಾಗಿ ನಿಂತಳು ಕೂಡ.

Comments are closed.