ಅಧಿಕಾರಕ್ಕಾಗಿ ಎಲ್ಲರೂ ಹಸಿದ ನಾಯಿಗಳೇ!!
Friday, June 8th, 2018ಐಟಿ ರಾಜಧಾನಿಯೆಂದು ಕರೆಸಿಕೊಳ್ಳಲ್ಪಡುವ ಬೆಂಗಳೂರಿಗೆ ಕುಮಾರ ಸ್ವಾಮಿ ಕೊಟ್ಟಿರುವ ಐಟಿ ಮಂತ್ರಿ ಬರಿಯ ದ್ವಿತೀಯ ಪಿಯುಸಿ ಓದಿರುವುದಷ್ಟೇ ಎಂಬುದು ದೇಶಾದ್ಯಂತ ಸುದ್ದಿಯಾಗಬೇಕಿರುವ ವಿಚಾರ. ಬಿಜೇಪಿಗರು ತಲೆ ಕೆಡಿಸಿಕೊಳ್ಳದೇ ಎಲ್ಲವನ್ನು ಮೋದಿ ಮಾಡಲಿ ಎಂದು ಕಾಯುತ್ತ ಕುಳಿತಿದ್ದಾರೆ. ಅಧಿಕಾರದ ದಾಹ ಅದೆಷ್ಟಿದೆಯೆಂದರೆ ನಾಯಿ ಎತ್ತಿನ ವೃಷಣಗಳಿಗೋಸ್ಕರ ಕಾದಂತೆ ಕಾಯುತ್ತಲೇ ಇರುವುದು ಇವರ ಪಾಡಾಗಿಬಿಡುವುದೇನೊ! ರಸ್ತೆಯಲ್ಲಿ ಎತ್ತು ನಡೆದು ಹೋಗುವಾಗ ಹಸಿದ ನಾಯಿಯೊಂದು ಅದನ್ನು ಹಿಂಬಾಲಿಸುತ್ತದೆಯಂತೆ. ನೇತಾಡುತ್ತಿರುವ ಎತ್ತಿನ ವೃಷಣಗಳನ್ನು ಕಂಡು ಅದು ಎತ್ತಿನದೇ ಮಾಂಸವೆಂದು ಭಾವಿಸುತ್ತದೆಯಂತೆ. ಈಗಲೋ ಆಗಲೋ […]