ವಿಭಾಗಗಳು

ಸುದ್ದಿಪತ್ರ


 

ಮುಸಲ್ಮಾನರೇ ವಿರೋಧಿಸುವ ಮುಸ್ಲೀಂ ಪಂಗಡವೊಂದಿದೆ, ಗೊತ್ತಾ?

Sunday, July 9th, 2017

ಜಾತಿ, ಮತಗಳ ಗೊಡವೆ ಇಲ್ಲವೆಂದು ಹೇಳಿಕೊಳ್ಳುವ ಇಸ್ಲಾಂ, ಅಹ್ಮದಿಯಾಗಳೆಂಬ ತಮ್ಮೊಳಗಿನ ಪಂಗಡವೊಂದಕ್ಕೆ ಬದುಕುವ ಯೋಗ್ಯತೆ ಇಲ್ಲವೆಂದು ಹೇಳುತ್ತ ಅವರ ಮಸೀದಿಗಳನ್ನು ಕೆಡವುವ, ಅನುಯಾಯಿಗಳನ್ನು ಬರ್ಬರವಾಗಿ ಕೊಲ್ಲುವ ಕಾರ್ಯ ಜಗತ್ತಿನೆಲ್ಲೆಡೆ ಮಾಡುತ್ತಿದೆ. ತಮ್ಮನ್ನು ತಾವು ಅಹ್ಮದಿಯಾಗಳೆಂದು ಧೈರ್ಯವಾಗಿ ಹೇಳಿಕೊಳ್ಳಲಾಗದ ಲಕ್ಷಾಂತರ ಜನ ಜಗತ್ತಿನೆಲ್ಲೆಡೆ ಹರಡಿಕೊಂಡಿದ್ದಾರೆ. ಪಾಕೀಸ್ತಾನದ ಪರಿಸ್ಥಿತಿಯಂತೂ ಬಲು ಕೆಟ್ಟದ್ದು. ಜೀಸಸ್ ಕ್ರಿಸ್ತ್ ಎನ್ನು ಐತಿಹಾಸಿಕ ವ್ಯಕ್ತಿಯೊಬ್ಬರು ಬದುಕಿದ್ದುದೇ ಸುಳ್ಳು ಅಂತ ಒಂದು ವಾದವಿದೆ. ಅಕಸ್ಮಾತ್ ಬದುಕಿದ್ದರೂ ಆತ ತನ್ನ ಜೀವನದ ಕೊನೆಯ ಅವಧಿಯನ್ನು ಕಳೆದಿದ್ದು ಕಾಶ್ಮೀರದಲ್ಲಿ ಅಂತ […]

ಐಸಿಸ್ ಅಧ್ಯಾಯದ ಕೊನೆಯ ಪುಟಗಳು!

Sunday, July 2nd, 2017

ಇಸ್ಲಾಂ ಜಗತ್ತಿನ ದೌರ್ಬಲ್ಯವೇ ಕ್ರೌರ್ಯ. ಅವರ ಎಲ್ಲಾ ಜಾಗತಿಕ ಸಂಘಟನೆಗಳೂ ಇದನ್ನೇ ಬಂಡವಾಳ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವುದು. ಹೆಚ್ಚು ಹೆಚ್ಚು ಜನರ ಕತ್ತು ಕೊಯ್ದು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳ ಮೂಲಕ ಹರಿದಾಡಿಸಿದರೆ ಸಂಘಟನೆಯನ್ನು ಅಪ್ಪುವ ಜನ ಮತ್ತು ಸಂಗ್ರಹವಾಗುವ ನಿಧಿಯ ಪ್ರಮಾಣ ಹೆಚ್ಚುತ್ತಾ ಸಾಗುವುದು. ಈ ದುರಹಂಕಾರ ಎಷ್ಟರ ಮಟ್ಟಿಗೆ ಬೆಳೆಯುತ್ತದೆಯೆಂದರೆ ಕಟ್ಟರ್ ಪಂಥಿ ಇಸ್ಲಾಂ ತಮ್ಮದೇ ಎನ್ನುತ್ತ ಉಳಿದವರನ್ನೆಲ್ಲ ಧಿಕ್ಕರಿಸಿ ಬಿಡುತ್ತವೆ. ಇಸ್ರೇಲಿನಲ್ಲಿ ಬೆಂಜಮಿನ್ ನೆತನ್ಯಾಹು, ರಷ್ಯಾದಲ್ಲಿ ವ್ಲಾದಿಮಿರ್ ಪುತಿನ್, ಅಮೇರಿಕಾದಲ್ಲಿ ಡೊನಾಲ್ಡ್ […]

ಇನ್ನಾದರೂ ಗುಲಾಮರಂತೆ ಯೋಚಿಸುವುದು ಬಿಡಿ

Saturday, July 1st, 2017

ಗೋಹತ್ಯೆ ಯಾಂತ್ರಿಕ ಕಸಾಯಿ ಖಾನೆಗಳ ಮೂಲಕ ವ್ಯಾಪಕವಾಯ್ತು. ಗೋವು ನಮಗೆ ಮಾಂಸದ ಮೂಲಕ ಹಣ ತರುವ ವಸ್ತುವಾಯ್ತು. ಅಕ್ಷರಶಃ ಇವೆಲ್ಲವೂ ಬ್ರಿಟೀಷರು ನಮಗೆ ಬಿಟ್ಟು ಹೋದ ಬಳುವಳಿ. ಅವರದ್ದೇ ಮಾನಸಿಕತೆಯ ಮುಂದುವರೆದ ಭಾಗ. ಗುಲಾಮಿ ಮಾನಸಿಕತೆ ಅಂದರೆ ಇದೇ. ಗೋವಿನ ಕುರಿತಂತೆ ಗಾಂಧಿವಾದಿ ಧರ್ಮಪಾಲರದು ವಿಶೇಷ ಅಧ್ಯಯನ ಮತ್ತು ಆಳವಾದ ಹೊಳಹು. ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಗೋವಿನ ಕುರಿತಂತೆ ರಚಿಸಿದ ವಿಶೇಷ ಸಮಿತಿಯಲ್ಲಿ ಅವರಿಗೆ ಪ್ರಧಾನ ಜವಾಬ್ದಾರಿ ಇತ್ತು. ಗೋಹತ್ಯಾ ನಿಷೇಧ ಕುರಿತಂತೆ ದೇಶದಾದ್ಯಂತ ವ್ಯಾಪಕ […]

ಕಾಶ್ಮೀರದ ಬೀದಿಗಳಲ್ಲಿ ಭಸ್ಮಾಸುರ ನರ್ತನ!

Sunday, June 25th, 2017

ಶ್ರೀನಗರದ ಮುಖ್ಯ ಬೀದಿಗಳಲ್ಲಿ ಒಂದು ಶವಯಾತ್ರೆ. ತೀರಿಕೊಂಡವನ ಸಹೋದರಿ ಎಲ್ಲರೆದುರು ಆಕ್ರೋಶದಿಂದಲೇ ಕಿರುಚುತ್ತಿದ್ದಳು ‘ಹೌದು, ನಾವು ಭಾರತೀಯರೇ’. ಉಳಿದವರೆಲ್ಲ 57 ವರ್ಷದ ಹುತಾತ್ಮ ಡಿಎಸ್ಪಿ ಮೊಹಮ್ಮದ್ ಅಯೂಬ್ ಪಂಡಿತ್ರಿಗೆ ಜೈಕಾರ ಮೊಳಗಿಸುತ್ತ ನಡೆದಿದ್ದರು. ಕಳೆದ ನಾಲ್ಕಾರು ತಿಂಗಳಲ್ಲಿ ತನ್ನ ತಲೆಯ ಮೇಲೆ ತಾನೇ ಕೈಯಿಟ್ಟುಕೊಂಡ ಭಸ್ಮಾಸುರನ ಕಥೆ ಮತ್ತೆ ಮತ್ತೆ ನೆನಪಿಸುತ್ತಿದೆ ಕಾಶ್ಮೀರ.   ಅದು ರಂಜಾನ್ ತಿಂಗಳ ವಿಶೇಷ ದಿನ. ಶಕ್ತಿಯ ರಾತ್ರಿ ಅದು. ಶಬ್-ಇ-ಕದರ್ ಅಂತಾರೆ ಅದನ್ನು. ಕುರಾನ್ ಪ್ರವಾದಿಯವರ ಮೇಲೆ ಅವತೀರ್ಣಗೊಂಡ ಮೊದಲ […]

ಹಾಲು ನೆಪ, ಕುಡಿಯುತ್ತಿರೋದು ಹಾಲಾಹಲ!

Tuesday, June 20th, 2017

ಹಾಲು ಅಂದಾಗ ಹೇಳಲೇಬೇಕಾದ ಸಂಗತಿಯೊಂದಿದೆ. ನಾವು ಕುಡಿಯುವ ಹಾಲೇ ನಮಗೆ ಅನೇಕ ರೋಗಗಳನ್ನು ತಂದೊಡ್ಡುತ್ತವೆಯೆಂಬ ಅಚ್ಚರಿಯ ಸಂಗತಿ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಹಾಲನ್ನು ಬಿಳಿಯ ವಿಷ ಅಂತಲೂ ಕರೆಯುತ್ತಾರೆ. ಸಕ್ಕರೆ ಮತ್ತು ಮೈದಾಗಳು ದೇಹಾರೋಗ್ಯಕ್ಕೆ ಅದೆಷ್ಟು ಕೆಟ್ಟದ್ದೋ ಹಾಲೂ ಅಷ್ಟೇ ಕೆಟ್ಟದ್ದು ಅಂತ ಪುರಾವೆ ಸಹಿತ ವಾದಿಸುವವರಿದ್ದಾರೆ. ಇದೆಲ್ಲವೂ ಶುರುವಾಗಿದ್ದು 1993ರಲ್ಲಿ. ಚಿತ್ರದುರ್ಗದ ಸಿರಿಗೊಂಡನ ಹಳ್ಳಿಗೆ ಹೋಗುವ ಅವಕಾಶ ಸಿಕ್ಕಿತು. ಒಟ್ಟು 90 ದನಗಳನ್ನು ಮನೆಯಲ್ಲಿಯೇ ಸಾಕಿರುವ 93 ವರ್ಷದ ಹಿರಿಯ ರೈತ ನಾಗಣ್ಣರವರನ್ನು ಅವರ ಮನೆಯಲ್ಲಿಯೇ ಭೇಟಿಯಾಗಿದ್ದೆ. […]

ಗೋಹತ್ಯೆಯ ಹಿಂದಿನ ‘ಹಿಡನ್ ಅಜೆಂಡಾ’

Sunday, June 11th, 2017

ಹಿಂದೂಗಳ ನಂಬಿಕೆಯನ್ನು ಬದಿಗಿಟ್ಟು ನೋಡಿದಾಗಲೂ ದೇಸೀ ಗೋವುಗಳನ್ನು ಉಳಿಸಬೇಕೆಂಬ ಕೂಗು ವೈಜ್ಞಾನಿಕವಾದುದೇ. ಕಾಳಜಿ ಇರೋದು ಯಾವುದೋ ಸಂಸ್ಕೃತಿ, ಆಚರಣೆಗಳದ್ದಲ್ಲ ಬದಲಿಗೆ ಹಿಂದೂಗಳನ್ನು ವಿರೋಧಿಸೋದು ಮಾತ್ರ. ಇಲ್ಲವಾದಲ್ಲಿ ದೀಪಾವಳಿಗೆ ಪಟಾಕಿ ಸುಟ್ಟರೆ ಪರಿಸರ ನಾಶವಾಗುತ್ತದೆನ್ನುವ ಈ ಹೋರಾಟಗಾರರು ಗೋವು ಕಡಿದರೆ ಭೂ ತಾಪಮಾನ ಏರಿಕೆಯಾಗುವುದೆಂಬುದನ್ನು ಮಾತ್ರ ಅದೇಕೆ ಅಲಕ್ಷಿಸುತ್ತಾರೆ? ‘ಹಿಡನ್ ಅಜೆಂಡಾ’ ಅಂದರೆ ಇದೇ. ಜಾತ್ಯತೀತತೆಯ ಮುಸುಕೆಳೆದು ಭಾರತವನ್ನು ಭಾರತೀಯರನ್ನು ಎಷ್ಟು ಸಾಧ್ಯವೋ ಅಷ್ಟು ಶೋಷಿಸಲಾಗುತ್ತಿದೆ. ಕಳೆದ ಎರಡು ಮೂರು ದಶಕಗಳಲ್ಲಂತೂ ಇದು ಪರಂಪರೆಯನ್ನು ನಂಬಿ ಪ್ರಗತಿಯೆಡೆಗೆ ದಾಪುಗಾಲಿಡುತ್ತಿರುವ ಪ್ರತಿಯೊಬ್ಬರ […]

ಇನ್ನೂ ಎರಡೇ ವರ್ಷ. ಸವಾಲುಗಳು ಮಾತ್ರ ಅಸಂಖ್ಯ

Saturday, June 10th, 2017

ಇದು ಭಾರತದ ಪಾಲಿಗೆ ಪರ್ವಕಾಲ. ತರುಣರ ಸಂಖ್ಯೆ ಹಿಂದೆಂದಿಗಿಂತಲೂ ಅಧಿಕವಾಗಿದೆ ಈಗ. ಒಂದು ರೀತಿಯಲ್ಲಿ ನೋಡುವುದಾದರೆ ಎಲ್ಲಾ ಬಗೆಯ ಹೊಸ ಕೆಲಸಗಳಿಗೂ ತರುಣರ ಪಡೆ ಸಿದ್ಧವಾಗಿದೆ. ರಾಷ್ಟ್ರ ಕಟ್ಟುವ ಯಾವುದೇ ಕೆಲಸಕ್ಕೆ ಮೋದಿ ಕರೆ ಕೊಟ್ಟಾಗ್ಯೂ ಅವರು ಧಾವಿಸಿ ಬರುತ್ತಾರೆ. ಆದರೆ ತಮ್ಮನ್ನು ತಾವು ಕಟ್ಟಿಕೊಳ್ಳಬಲ್ಲ ಕೆಲಸವನ್ನೇ ಅವರಿಗೆ ಕೊಡಲಿಲ್ಲವೆಂದರೆ ಹೇಗೆ? ಕಾಲ ಕಳೆದಂತೆ ಈ ಸಮಸ್ಯೆ ನರೇಂದ್ರ ಮೋದಿಯವರ ಎಲ್ಲಾ ಮಹತ್ವಾಕಾಂಕ್ಷೆಗೂ ತಣ್ಣೀರೆರೆಚಿಬಿಡಬಲ್ಲದು. ತೊಂದರೆಗಳಿಲ್ಲದ ಬದುಕು ನಡೆಸಲು ಎರಡು ಮಾರ್ಗವಿದೆ. ಮೊದಲನೆಯದು ಮುಂದೆಂದೋ ಬರುವ ತೊಂದರೆಗಳನ್ನು […]

ಯುವಾಬ್ರಿಗೇಡ್ ಎಂಬ ವಿಶಾಲವಾದ ಪರಿವಾರ!

Wednesday, June 7th, 2017

ಕೆಲವೊಮ್ಮೆ ನಿಮ್ಮಂತಹ ತಮ್ಮಂದಿರ, ತಂಗಿಯರ ಪಡೆದ ನನ್ನ ಭಾಗ್ಯಕ್ಕೆ ನಾನೂ ಕರುಬುತ್ತೇನೆ. ಹಾಗಿರುವಾಗ ಬೇರೆಯವರು ಹೊಟ್ಟೆ ಉರಿಸಿಕೊಳ್ಳುವುದು ಬಲು ದೊಡ್ಡದಲ್ಲ. ನಮ್ಮ ಸಂಪರ್ಕಕ್ಕೆ ಬಂದ ಹೊರಗಿನವರು ಯುವಾಬ್ರಿಗೇಡಿನ ಕಾರ್ಯಕರ್ತರ ಕುರಿತಂತೆ ಆಡುವ ಮೆಚ್ಚುಗೆಯ ಮಾತುಗಳು ನನ್ನನ್ನು ಆಗಸದಲ್ಲಿ ತೇಲಿಸುತ್ತವೆ. ಅನೇಕ ಬಾರಿ ಒಬ್ಬನೇ ಕುಳಿತು ನಮ್ಮದು ವಿಶಾಲವಾದ ಒಂದು ಪರಿವಾರವಾಗಿಬಿಟ್ಟಿದೆಯಲ್ಲ ಅಂತ ಖುಷಿ ಪಡುತ್ತಿರುತ್ತೇನೆ. ಎಷ್ಟು ದಿನ ಸಾಧ್ಯವೋ ಅಷ್ಟು ದಿನ ಹೀಗೆಯೇ ಕೈ ಹಿಡಿದು ಸಾಗೋಣ. ನಮ್ಮವರನ್ನು ಜೊತೆಗೆ ಒಯ್ಯೋಣ. ಬೇಕಿದ್ದರೆ ಕುಂಟುತ್ತ, ತೆವಳುತ್ತಲಾದರೂ ಸರಿಯೇ […]

ಗೋವಧೆಯ ಹಿಂದಿನ ರೈತವಿರೋಧಿ ಮನಸ್ಥಿತಿ

Sunday, June 4th, 2017

1580 ರ ಸುಮಾರಿಗೆ ಭಾರತಕ್ಕೆ ಬಂದಿದ್ದ ರಾಲ್ಫ್ ಪಿಚ್ ಎಂಬ ವ್ಯಾಪಾರಿ ಬರೆದ ಪತ್ರವೊಂದರಲ್ಲಿ, ‘ಅವರದ್ದೊಂದು ಅಪರೂಪದ ಆಚರಣೆ. ಅವರು ಗೋ ಪೂಜೆ ಮಾಡುತ್ತಾರೆ ಮತ್ತು ಅದರ ಸಗಣಿಯನ್ನು ಮನೆಯ ಗೋಡೆಗಳಿಗೆ ಬಣ್ಣವಾಗಿ ಬಳಿಯುತ್ತಾರೆ. ಮಾಂಸ ತಿನ್ನುವುದಿಲ್ಲ ಬದಲಿಗೆ ಅಕ್ಕಿ, ಹಾಲು ಮತ್ತು ಬೇರುಗಳನ್ನು ತಿಂದು ಬದುಕುತ್ತಾರೆ’ ಎಂದಿದ್ದ. ‘ಕೃಷಿಯನ್ನು ಬಲವಾದ ಅಡಿಪಾಯವನ್ನಾಗಿಸಿಕೊಂಡು ರಾಷ್ಟ್ರವೊಂದು ರಾಜನೀತಿ, ವ್ಯಾಪಾರ, ಕಲೆಯೇ ಮೊದಲಾದ ಜಗತ್ತಿನ ಶ್ರೇಷ್ಠ ಸಂಗತಿಗಳನ್ನು ಸದೃಢವಾಗಿ ಕಟ್ಟಬಹುದು’ ಎನ್ನುತ್ತಾನೆ 18ನೇ ಶತಮಾನದಲ್ಲಿ ಪೇಶ್ವೆಗಳಿಗೆ ರಾಯಭಾರಿಯಾಗಿದ್ದ ಸರ್ ಚಾಲ್ಸರ್್ […]

ಕೃತಕ ಸುನಾಮಿ, ಭೂಕಂಪಗಳ ಹೊಸ ಬಗೆಯ ಯುದ್ಧ!

Sunday, May 28th, 2017

ಪ್ರಕೃತಿಯನ್ನು ಶಾಂತಗೊಳಿಸುವ ಸಾತ್ವಿಕ ಪ್ರಯತ್ನಗಳಿಗೆ ನಾವು ಕೈ ಹಾಕಿದ್ದರೆ ಅತ್ತ ಕೆಲವು ರಾಷ್ಟ್ರಗಳು ಪಕ್ಕಾ ಜಗತ್ತನ್ನು ಅಂಧಕಾರಕ್ಕೆ ತಳ್ಳುವ ತಾಮಸಿಕ ಮಾರ್ಗದ ಆರಾಧಕರಾಗಿದ್ದಾರೆ. ಇವರುಗಳು ಯಾವ ಪರಿಯ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದಾರೆಂದರೆ ಅಗತ್ಯ ಬಿದ್ದಾಗ ಕೃತಕ ಕ್ಷಾಮ ಸೃಷ್ಟಿಸಬಲ್ಲರು, ಬೇಕೆನಿಸಿದರೆ ಕೃತಕ ಮಂಜಿನ ಆವರಣವನ್ನೂ ಸೃಷ್ಟಿಸಬಲ್ಲರು. ಈ ಬಗೆಯ ಸಂಶೋಧನೆಗಳಿಗೆ ಆಯಾ ರಾಷ್ಟ್ರಗಳು ಅವರವರ ನೆಲವನ್ನೇ ಬಳಸಿಕೊಳ್ಳುತ್ತವೆ. ಈ ಹೊತ್ತಲ್ಲಿ ಅನಪೇಕ್ಷಿತ ಪರಿಣಾಮಗಳನ್ನೂ ಎದುರಿಸುತ್ತವೆ. ಹಾಗೆಯೇ ಊಹಿಸಿಕೊಳ್ಳಿ. ಹರಳುಗಟ್ಟಿ ಮಳೆಗರೆಯಲು ಸಿದ್ಧವಾಗಿದ್ದ ಮೋಡ ಇದ್ದಕ್ಕಿದ್ದಂತೆ ಚೆದುರಿ ಕಾಣೆಯಾಗಿ ಹೋದರೆ? […]