ಕಾವೇರಿ ದಡದಲ್ಲಿ ಕನ್ನಡ-ತಮಿಳುಗಳ ಬಲವಾದ ‘ಮೈಟ್ರೀ’!
Saturday, May 27th, 2017ಮೊದಲ ಬಾರಿ ಕಲ್ಯಾಣಿ ಸ್ವಚ್ಛತೆಯ ಕಲ್ಪನೆ ನಾವು ಕಟ್ಟಿಕೊಂಡಾಗ ಅನೇಕರು ನಕ್ಕಿದ್ದರು. ಈ ದೇಶದಲ್ಲಿ ಈ ರೀತಿಯ ಚಟುವಟಿಕೆಗಳಿಗೆ ಬೆಲೆ ಇಲ್ಲವೆಂದಿದ್ದರು. ನಮ್ಮಲ್ಲಿ ಹರಿಯುತ್ತಿರುವುದು ಋಷಿ ರಕ್ತ ಎನ್ನುವಾಗ ನಕ್ಕು ಆಡಿಕೊಳ್ಳುತ್ತಿದ್ದರು. ಕೆಡವುವರ ನಡುವೆ ಕಟ್ಟುವ ಕೆಲಸಕ್ಕೆ ಹೆಚ್ಚಿನ ಬೆಲೆ ಇದೆ. ಎಲ್ಲವನ್ನು ಆಡಳಿತ ಯಂತ್ರವೇ ಮಾಡಬೇಕೆನ್ನುವುದು ಬ್ರಿಟೀಷರು ನಮಗೆ ಕಲಿಸಿಕೊಟ್ಟು ಹೋದ ಪಾಠ. ನಾವೀಗ ಬದಲಾಗಬೇಕಿದೆ. ನಮ್ಮ ಮನಸ್ಥಿತಿಯನ್ನು ಬದಲು ಮಾಡಿಕೊಳ್ಳಲೇಬೇಕಿದೆ. ಈ ನಿಟ್ಟಿನಲ್ಲಿಯೇ ಹೊಸ ತಾರುಣ್ಯದ ಮೇಲೆ ವಿಶ್ವಾಸವುಕ್ಕೇರೋದು. ಕಾವೇರಿಗಾಗಿ ಗಲಾಟೆ ತೀವ್ರವಾಗಿದ್ದ ಹೊತ್ತದು. […]