ವಿಭಾಗಗಳು

ಸುದ್ದಿಪತ್ರ


 

ಚೀನಾಕ್ಕೆ ಥಂಡಿ, ಇಲ್ಲಿ ಮಾವೋವಾದಿಗಳಿಗೆ ಜ್ವರ!!

Saturday, September 3rd, 2016

ಎಲ್ಲಾ ರಾಜತಾಂತ್ರಿಕ ನಡೆಗೂ ಕಿರೀಟಪ್ರಾಯವಾದುದು ಭಾರತ ಮತ್ತು ಅಮೇರಿಕಾದ ನಡುವಣ ಸೇನಾ ನೆಲೆ ಕುರಿತಂತಹ ಒಪ್ಪಂದ. ಈ ಎರಡೂ ರಾಷ್ಟ್ರಗಳೂ ಒಬ್ಬರು ಮತ್ತೊಬ್ಬರ ಭೂ, ನೌಕಾ, ವಾಯು ನೆಲೆಗಳನ್ನು ಬಳಸಿಕೊಳ್ಳುವ ಈ ಒಪ್ಪಂದ ಐತಿಹಾಸಿಕವೇ ಸರಿ. ಅತ್ತ ರಷ್ಯಾದೊಂದಿಗೆ ಸುಖೋಯ್ ವಿಮಾನಗಳ ಅಭಿವೃದ್ಧಿಯ ಒಪ್ಪಂದಕ್ಕೆ ಅಂಕಿತ ಹಾಕುವ ಭಾರತ ಇತ್ತ ಅಮೇರಿಕಾದೊಂದಿಗೆ ಇಂತಹುದೊಂದು ಮಹತ್ವದ ಹೆಜ್ಜೆ ಇಟ್ಟು ದಕ್ಷಿಣ ಚೀನಾದ ಸಮುದ್ರಕ್ಕೆ ಅದು ಅಬಾಧಿತವಾಗಿ ಬರುವಂತೆ ತಬ್ಬಿಕೊಳ್ಳುತ್ತದೆ. ಅದಕ್ಕೇ ಆರಂಭದಲ್ಲಿಯೇ ಬಹುಮಿತ್ರನೀತಿ ಎಂದಿದ್ದು. ಜವಹರಲಾಲ್ ನೆಹರೂರವರ ‘ಅಲಿಪ್ತ […]

ಮಾಯೆಯ ಜಿಂಕೆ..

Wednesday, August 31st, 2016

ಒಮ್ಮೊಮ್ಮೆ ನಮ್ಮ ಪರಿಸ್ಥಿತಿ ಹೇಗಿರುತ್ತೆಂದರೆ, ‘ಛೇ, ಹೀಗೆ ಮಾಡಬಾರದು ಎಂದುಕೊಂಡಿದ್ದೆ. ಗೊತ್ತಿಲ್ಲದೇ ಆಗಿಬಿಟ್ಟಿತು’ ಎಂದು ಹಲುಬುತ್ತಿರುತ್ತೇವೆ. ಒಂದು ಕ್ಷಣ, ಎಚ್ಚರಿಕೆ ತಪ್ಪಿದರೂ ಜೀವನದುದ್ದಕ್ಕೂ ಸಂಕಟ. ಹೀಗೆ ಎಚ್ಚರ ತಪ್ಪಿ ಎಡವಿ ಬೀಳುವುದನ್ನು ‘ಮಾಯೆ’ ಅಂತಾರೆ! ಈ ಮಾಯೆಯ ಪ್ರಭಾವ ಅದೆಷ್ಟು ಗಹನ ಎಂದರೆ ಭಗವಂತನನ್ನೂ ಅದು ಬಿಡಲಿಲ್ಲ. ಸೀತೆ ಮಾಯಾ ಜಿಂಕೆ ಕಂಡು ನನಗದು ಬೇಕು ಎಂದಳಲ್ಲ ಆಗ ರಾಮ ಸುಮ್ಮನಿರಬಹುದಿತ್ತು. ಅದೇನಾಯಿತೋ ರಾಮನಿಗೆ. ಜೀವಂತ ಸಿಕ್ಕರೆ ಆಟವಾಡಲು ಸರಿ, ಸತ್ತರೆ ಚರ್ಮ ಉಪಯೋಗವಾದೀತೆಂದು ಸೀತೆಯ ಮೋಹದ […]

ಏಳು ನೂರು ವರ್ಷಗಳ ಬೆಳಕಿನ ಸ್ರೋತಕ್ಕೇ ಬಿತ್ತು ಬೆಂಕಿ!!

Monday, August 29th, 2016

ಏಳು ಶತಮಾನಗಳ ಕಾಲ ಭೂಪಟದಲ್ಲಿ ಮಿಂಚಿ ಬೆಳಕಿನ ಸ್ರೋತವಾಗಿ ನಿಂತ ನಲಂದಾ ಕಾಲಕ್ರಮದಲ್ಲಿ ಪ್ರಭೆಯನ್ನು ಕಳಕೊಳ್ಳುತ್ತಾ ಬಂತು. ಬೌದ್ಧ ಮತ ತಾನು ಅನುಭವಿಸುತ್ತಿದ್ದ ರಾಜಾಶ್ರಯವನ್ನು ಕಳಕೊಳ್ಳುತ್ತ ಬಂದಂತೆ ನಲಂದದ ಪ್ರಗತಿ ಕುಂಠಿತವಾಯ್ತು. ಆನಂತರದ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬಂದ ವಿಕ್ರಮಶಿಲಾ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಅನುದಾನಗಳು ದೊರೆಯಲಾರಂಭಿಸಿತು. ವಿದ್ಯಾಥರ್ಿಗಳ ಸಂಖ್ಯೆ ಕಡಿಮೆಯಾಯ್ತು. ಕೊನೆಗೆ ಮುಸ್ಲೀಂ ದಾಳಿಕೋರ ಭಕ್ತಿಯಾರ್ ಖಿಲ್ಜಿ 12ನೇ ಶತಮಾನದ ಕೊನೆಯ ವೇಳೆಗೆ ಘೋರ ಆಕ್ರಮಣ ಮಾಡಿದ. ಸಾವಿರಾರು ಸಂಖ್ಯೆಯಲ್ಲಿದ್ದ ವಿದ್ಯಾಥರ್ಿಗಳು, ಭಿಕ್ಷುಗಳು ಆತ್ಮರಕ್ಷಣೆಯನ್ನು ಮಾಡಿಕೊಳ್ಳದಾದರು. ಅಹಿಂಸೆಯ ಮಂತ್ರವನ್ನು […]

ಬೆಳಕು ತೋರುವ ಗುರುವಿಗೆ ನಮನ..

Wednesday, August 24th, 2016

‘ಗುರು’ ಎನ್ನುವ ಪದವೇ ಅದೆಷ್ಟು ಸುಂದರ ಅಲ್ಲವೇ? ‘ಗು’ ಎಂದರೆ ಅಂಧಕಾರವಂತೆ. ‘ರು’ ಅಂದರೆ ಬೆಳಕಂತೆ, ಕತ್ತಲಿಂದ ಬೆಳಕಿನೆಡೆಗೆ ಒಯ್ಯುವವನೇ ಗುರು! ಈ ಕಲ್ಪನೆಯೇ ಸುಂದರ. ಅದಕ್ಕೂ ಮಿಗಿಲಾಗಿ ಈ ಪದ ಸೃಷ್ಟಿಯೇ ಅದ್ಭುತ. ಅಂಧಕಾರದಿಂದ ಬೆಳಕಿನೆಡೆಗೆ ಒಯ್ಯುವವನು ಎಂದ ಮೇಲೆ ಆತ ಮೊದಲೇ ಬೆಳಕನ್ನು ಕಂಡವನೆಂದಾಯ್ತು. ಜೊತೆಗೆ ಬೇಕೆಂದಾಗ ಕತ್ತಲೆಡೆಗೆ ಮರಳಿ ಬರಬಲ್ಲ ಸಾಮಥ್ರ್ಯ ಅವನಿಗಿರಬೇಕು. ಅಷ್ಟೇ ಅಲ್ಲ. ಹೀಗೆ ಬಂದವನು ಕತ್ತಲಲ್ಲಿರುವವರ ಜೊತೆಗೊಯ್ಯುವ ಸಾಮಥ್ರ್ಯವನ್ನೂ ಹೊಂದಿರಬೇಕು. ಅಬ್ಬಬ್ಬ! ಅಲ್ಲಿಗೆ ಸಾಮಾನ್ಯನೊಬ್ಬ ಗುರುವಾಗುವಂತೆಯೇ ಇಲ್ಲ. ಅಂತಹ […]

ಜಗದ ಕಣ್ ಕುಕ್ಕಿದ ನಲಂದಾ..

Sunday, August 21st, 2016

‘ವಿಶ್ವವಿದ್ಯಾಲಯ ಆರಂತಸ್ತಿನ ಕಟ್ಟಡವಾಗಿತ್ತು. ಸುತ್ತಲೂ ಎತ್ತರದ ಕಾಂಪೌಂಡು ಗೋಡೆ. ಇಡಿಯ ವಿಶ್ವವಿದ್ಯಾಲಯಕ್ಕೆ ಒಂದೇ ದ್ವಾರ. ಅದನ್ನು ತೆರೆದೊಡನೆ ವಿಶಾಲ ಕಾಲೇಜಿನೊಳಕ್ಕೆ ಹೊಕ್ಕಬಹುದಿತ್ತು, ಅಲ್ಲಿಂದ ಎಂಟು ವಿಸ್ತಾರ ಕೊಠಡಿಗಳಿಗೆ! ಪ್ರತೀ ಕೊಠಡಿಗಳೂ ಅನೇಕ ಅಂತಸ್ತುಗಳಿಂದ ಕೂಡಿದ್ದು ಮುಗಿಲ ಚುಂಬಿಸುವ ಗಿರಿ ತುದಿಯಂತೆ ಕಾಣುತ್ತಿದ್ದವು. ಮೇಲಿನ ಕೋಣೆ ಮೋಡದ ಮೇಲೆಯೇ ನಿಮರ್ಿಸಿದಂತೆ ಕಾಣುತ್ತಿತ್ತು. ಈ ಕೋಣೆಗಳಲ್ಲಿ ಕುಳಿತವರು ಕಿಟಕಿಗಳ ಮೂಲಕ ಮೋಡಗಳು ಗಾಳಿಯೊಂದಿಗೆ ಸೇರಿ ನತರ್ಿಸುವುದನ್ನು ನೋಡಬಹುದಿತ್ತು. ಸಂಜೆಯಾಗುತ್ತಲೆ ಸೂಯರ್ಾಸ್ತದ ವೈಭವವನ್ನು, ಚಂದ್ರ-ತಾರೆ ನರ್ತನವನ್ನೂ ಆನಂದಿಸಬಹುದಿತ್ತು. ನೆಲದ ಮೇಲಿನ ಕೊಳಗಳಲ್ಲಿ […]

ಲಾಠೀಚಾರ್ಜಿನ ನಡುವೆ ಕಳೆದು ಹೋದ ಶಶಿಧರ್!!

Sunday, August 21st, 2016

ಅಧಿಕಾರಿಗಳು, ರಾಜಕಾರಣಿಗಳು ಮನವೊಲಿಸಲು ಯತ್ನಿಸಿದರೂ ಪುಣ್ಯಾತ್ಮ ಜಗ್ಗಲಿಲ್ಲ. ಆಂದೋಲನವೊಂದು ರೂಪುಗೊಳ್ಳಲಾರಂಭಿಸಿತು. ಪೊಲೀಸ್ ಪೇದೆಗಳು ಸಾಮೂಹಿಕ ರಜೆಗೆ ಸಿದ್ಧರಾದರು. ಇಡಿಯ ರಾಜ್ಯ ಈ ಹೋರಾಟಕ್ಕೆ ಸಾಕ್ಷಿಯಾಗಲಿತ್ತು. ಅಷ್ಟರೊಳಗೆ ಸಕರ್ಾರ ಶಶಿಧರ್ರನ್ನು ಬಂಧಿಸಿ ಜೈಲಿಗಟ್ಟಿತು. ಯಾವ ಪೇದೆಗಳಿಗಾಗಿ ಆತ ಇಷ್ಟೆಲ್ಲಾ ಕಷ್ಟಪಟ್ಟನೋ ಅದೇ ಪೇದೆಗಳು ಶಶಿಧರ್ ಬಂಧನಕ್ಕೆ ಅಣಿಯಾಗಿ ಬಂದಿದ್ದರು. ಅತ್ತ ಆತ ಜೈಲು ಸೇರುತ್ತಿದ್ದಂತೆ ಇತ್ತ ಹೋರಾಟ ಸ್ತಬ್ಧವಾಯಿತು. ಪೊಲೀಸರ ವೇತನದಲ್ಲಿ ಹೆಚ್ಚಳವಾಗುವ ಭರವಸೆ ದಕ್ಕಿತು. ಅವರಿಗೆ ರಜೆಗಳು ಸುಲಭವಾಗಿ ದಕ್ಕಲಾರಂಭಿಸಿತು. ಅನೇಕ ಬೇಡಿಕೆಗಳು ಈಡೇರಲಾರಂಭಿಸಿದವು. ಆದರೆ. . […]

ನಾಲ್ಕು ಜೈಲು, ಹದಿನಾಲ್ಕು ತಿಂಗಳು ನೂರಾರು ನೆನಪುಗಳು

Thursday, August 18th, 2016

ಕಾಂಗ್ರೆಸ್ಸಿಗೆ ಆರಂಭದಿಂದಲೂ ಅದು ರೂಢಿಯೇ. ಪಾಳೆಗಾರಿಕೆಯ ಹಠ ಅದಕ್ಕೆ. ಸ್ವಾತಂತ್ರ್ಯ ತಂದುಕೊಡಲು ಕಾರಣವಾದವರೇ ತಾವೆಂಬ ದುರಹಂಕಾರ. ಪ್ರಾಣ ಪಣಕ್ಕಿಟ್ಟು ಹೋರಾಡಿದವರೆಲ್ಲ ಮೂಲೆಗುಂಪಾಗಿ ಜೈಲಿನಲ್ಲಿ ನಾಲ್ಕು-ಎಂಟು ದಿನ ಕಳೆದವರೆಲ್ಲ ‘ತಮ್ಮಿಂದಲೇ ಭಾರತ’ವೆಂಬ ಭ್ರಮಾ ಲೋಕದಲ್ಲಿದ್ದರು. ಹೀಗಾಗಿ ದೇಶದ ಮೇಲಿನ ಮೊದಲ ಹಕ್ಕು ತಮ್ಮದೇ ಎಂದು ತೀಮರ್ಾನಿಸಿಬಿಟ್ಟಿದ್ದರು. ಸಕರ್ಾರದ ಎಲ್ಲಾ ವ್ಯವಸ್ಥೆಗಳನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ದುಡಿಸಿಕೊಳ್ಳುವ ಚಾಳಿ ಅವರಿಗೆ ಸಹಜವಾಗಿಬಿಟ್ಟಿತ್ತು. ಜೂನ್ 25, 1975 ರ ಮಧ್ಯರಾತ್ರಿ! ಭಾರತದ ಪಾಲಿಗೆ 1947 ರ ಆಗಸ್ಟ್ 14 ರ ನಂತರ […]

ಒಂದೂರಲ್ಲಿ ಒಬ್ಬ ಬಡ ಬ್ರಾಹ್ಮಣನಿದ್ದ…

Tuesday, August 16th, 2016

ಅಂದಿನ ಶಿಕ್ಷಣ ಪದ್ಧತಿಯ ಸೌಂದರ್ಯವೇ ಇದು. ಶಿಕ್ಷಣ ಮಾರಾಟದ ಸರಕಾಗಿರಲಿಲ್ಲ. ಶಿಕ್ಷಕರು ಸಂಬಳಕ್ಕೆ ದುಡಿಯುವವರಾಗಿರಲಿಲ್ಲ. ಹಣಗಳಿಸಿ ಶ್ರೀಮಂತಿಕೆಯ ಕನಸು ಕಾಣುತ್ತಿದ್ದವ ಈ ವೃತ್ತಿಗೆ ಕಾಲಿಡುತ್ತಲೇ ಇರಲಿಲ್ಲ. ಅವನು ಸೇನೆಗೆ ಸೇರುತ್ತಿದ್ದ, ವ್ಯಾಪಾರಿಯಾಗುತ್ತಿದ್ದ ಅಥವಾ ಇತರೆ ನೌಕರಿ ಮಾಡಿಕೊಂಡು ಹಾಯಾಗಿರುತ್ತಿದ್ದ. ಸರಳವಾಗಿ ಹೇಳಬೇಕೆಂದರೆ ಐಷಾರಾಮಿ ಬದುಕು ಬಯಸುವವ ಇಚ್ಛೆಯಿಂದಲೇ ಬ್ರಾಹ್ಮಣ ವರ್ಣದಿಂದ ದೂರವಾಗಿ ಅನ್ಯ ವರ್ನಗಳನ್ನು ಆಶ್ರಯಿಸುತ್ತಿದ್ದ. ಏಕೆಂದರೆ ಸಕಲ ವಿದ್ಯೆಯ ಮೇಲೂ ಆಧಿಪತ್ಯ ಸ್ಥಾಪಿಸಿ ಅದನ್ನು ಮುಂದಿನ ಪೀಳಿಗೆಗೆ ವಗರ್ಾಯಿಸುವ ಕಾರಣಕ್ಕಾಗಿಯೇ ಇಷ್ಟ ಪಟ್ಟು ಬಡವನಾಗಿರುತ್ತಿದ್ದವ ಬ್ರಾಹ್ಮಣ […]

ಬದುಕೆಂಬ ಪರೀಕ್ಷೆ, ನಪಾಸಾಗದಿದ್ದರೆ ಸಾಕು!

Monday, August 8th, 2016

ಪರೀಕ್ಷೆ ಕೊಠಡಿಯಲ್ಲಿ ಮೇಷ್ಟ್ರು ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆ ಹಂಚಿದ್ದಾರೆ. ಉತ್ತರ ಬರೆಯಬೇಕಾದ ಹುಡುಗ ಸುಮ್ಮನೆ ಕುಳಿತ. ಮೂರು ತಾಸು ಕಳೆಯಿತು. ಗಂಟೆ ಬಾರಿಸುವುದಕ್ಕೆ ಕೆಲವೇ ಕ್ಷಣ ಉಳಿದಿರುವಾಗ ಆತ ಪತ್ರಿಕೆಯ ಮೇಲೆ ಒಂದಷ್ಟು ಗೀಚಿದ. ಪ್ರಶ್ನೆ ಓದುವ ಪ್ರಯತ್ನ ಮಾಡಿದ. ಆದರೆ ಸಮಯ ಮೀರಿತ್ತು. ಮೇಷ್ಟ್ರು ಬಂದು ಉತ್ತರ ಪತ್ರಿಕೆ ಪಡೆದು ನಡೆದೇ ಬಿಟ್ಟರು! ಈ ಕಥೆಯಲ್ಲಿ ಅದೇನು ವಿಶೇಷವೆಂದರೆ ಅಚ್ಚರಿಯೇ? ಉತ್ತರ ಬರೆಯಬೇಕಿದ್ದ ಆ ಹುಡುಗರು ನಾವೇ. ಪ್ರಶ್ನೆ ಪತ್ರಿಕೆ ಕೊಟ್ಟವ ಭಗವಂತ. […]

ತಕ್ಷಶಿಲೆಗೂ ಪ್ರಾಚೀನ, ವೇದಕಾಲದ ಶಿಕ್ಷಣ!

Sunday, August 7th, 2016

ವಾಸ್ತವವಾಗಿ ವೇದಾಧ್ಯಯನ ಎರಡು ಭಾಗಗಳಲ್ಲಿರುವಂಥದ್ದು. ಮೊದಲನೆಯದು ಆಲೋಚನೆ, ತತ್ತ್ವ, ಧ್ಯಾನ, ತಪಸ್ಸುಗಳ ಕುರಿತಂಥ ಜ್ಞಾನಕಾಂಡವಾದರೆ ಮತ್ತೊಂದು ಯಜ್ಞ, ಆಚರಣೆ, ಮಂತ್ರೋಚ್ಚಾರಗಳಿಗೆ ಸಂಬಂಧಿಸಿದ ಕರ್ಮಕಾಂಡ. ಎಷ್ಟೇ ಬೇಡವೆಂದರೂ ಕಾಲಕ್ರಮದಲ್ಲಿ ವಿದ್ಯಾಥರ್ಿಗಳು ಅಧ್ಯಯನಶೀಲರಾಗಿ ಉಚ್ಚಾರಣೆ, ಆಚರಣೆಗಳನ್ನು ಗಮನವಿಟ್ಟು ಅಧ್ಯಯನ ಮಾಡಿ ಯಜ್ಞಯಾಗಾದಿಗಳನ್ನು ಸರಿಯಾಗಿ ನಡೆಸಿಕೊಡುವ ಪುರೋಹಿತರಷ್ಟೇ ಆಗತೊಡಗಿದರು. ವೇದಗಳ ದರ್ಶನದ ಮೂಲ ಉದ್ದೇಶವೇ ಬದಿಗೆ ಸರಿಯಲ್ಪಟ್ಟಿತು. ಆಗಲೇ ಉಪನಿಷತ್ತುಗಳ ಹೊಸ ಲೋಕ ತೆರೆದುಕೊಂಡು ಋಗ್ವೇದದ ಹೃದಯಬಡಿತ ಎಲ್ಲೆಲ್ಲೂ ಪ್ರತಿಧ್ವನಿಸತೊಡಗಿದ್ದು. ತಕ್ಷಶಿಲೆಯ ಕುರಿತಂತಹ ವಿವರಗಳು ಮೈನವಿರೇಳಿಸುವಂಥದ್ದು. ಹಾಗಂತ ಅದಕ್ಕೂ ಮೊದಲು ಶಿಕ್ಷಣ […]