ವಿಶ್ವಮಾನವ ತತ್ವದ ಶ್ರೇಷ್ಠ ಹರಿಕಾರ
Friday, December 28th, 2012ವಿವೇಕಾನಂದರು ಕುವೆಂಪುರವರ ನರನಾಡಿಗಳಲ್ಲಿ ಪ್ರವಹಿಸುತ್ತಿದ್ದುದರಿಂದ ಅವರ ವ್ಯಕ್ತಿತ್ವಕ್ಕೆ ವಿಶೇಷವಾದ ಮೆರುಗಿತ್ತು. ಯಾರಿಗೂ ಜಗ್ಗದ, ಬಾಗದ ಧೀರ ವ್ಯಕ್ತಿತ್ವ ಸಿದ್ಧಿಸಿತ್ತು ಅವರಿಗೆ. ಕನ್ನಡ ಸಾಹಿತ್ಯ ಸಮ್ಮೇಳನ. ಶಿವಮೊಗ್ಗದಲ್ಲಿ ನಡೆಯುತ್ತಿತ್ತು. ಎಡಪಂಥೀಯ ವಿಚಾರಧಾರೆಯ ಪುಸ್ತಕಗಳನ್ನು ಮಾರುತ್ತಿದ್ದ ಅಂಗಡಿಯದು. ’ನೂರು ದೇವರನೆಲ್ಲ ನೂಕಾಚೆ ದೂರ – ಕುವೆಂಪು’ ಎಂದು ದೊಡ್ಡದಾಗಿ ಬರೆಸಿ ತೂಗು ಹಾಕಿತ್ತು. ಯಾಕೋ ಕುವೆಂಪುರವರ ದೈವ ವಿರೋಧಿ ನಿಲುವು ಸಹಿಸಿಕೊಳ್ಳಲು ಆಗಲಿಲ್ಲ. ಕೆಲವು ದಿನಗಳ ಅನಂತರ ಆ ಕವನ ಓದುವ ಅವಕಾಶ ಸಿಕ್ಕಿತು. ಓದಿ ಗಾಬರಿಯೂ ಆಯ್ತು! ಆ […]