ದೀದಿಯ ಎಲ್ಲ ಅಸ್ತ್ರಗಳೂ ಖಾಲಿಯಾಗಿವೆ!
ಬಂಗಾಳದೊಳಗೆ ಉರಿಯುತ್ತಿರುವ ಬೆಂಕಿಗೆ ದೀದಿ ತುಪ್ಪ ಹಾಕುತ್ತಲೇ ಇದ್ದರು. ಮೊನ್ನೆ ಡಿಸೆಂಬರ್ 12 ಕ್ಕೆ ಧುಲಾಘರ್ನಲ್ಲಿ ಮಿಲಾಡ್ ಲಲ್ ನಬಿಯ ಮೆರವಣಿಗೆಯ ಹೊತ್ತಲ್ಲಿ ಮುಸಲ್ಮಾನರು ಬೀದಿಗಿಳಿದು ನೂರಾರು ಹಿಂದೂ ಮನೆಗಳನ್ನು ಲೂಟಿ ಗೈದರು. ಹೆಣ್ಣು ಮಕ್ಕಳ ಮಾನಭಂಗವಾಯಿತು. ಅಪಹರಣವಾಯ್ತು. ಹತ್ತಾರು ಜನ ಕೊಲ್ಲಲ್ಪಟ್ಟರು. ವರದಿ ಮಾಡಲೆಂದು ಹೋದ ಪತ್ರಕರ್ತರನ್ನು ಒಳಗೇ ಬಿಡಲಿಲ್ಲ. ಜೀ ನ್ಯೂಸ್ನ ಸುಧೀರ್ ಚೌಧರಿಯ ಮೇಲೆ ಕೇಸು ಜಡಿಯಲಾಯ್ತು. ಹಿಂದೂಗಳನ್ನು ಬೀದಿ ನಾಯಿಗಳಿಗಿಂತ ಕಡೆಯಾಗಿ ನಡೆಸಿಕೊಳ್ಳಲಾಯಿತು. ಇಷ್ಟಕ್ಕೂ ಒಂದೇ ಕಾರಣ ದೀದಿಯದ್ದು. ಮುಸಲ್ಮಾನರು ತನ್ನ ವೋಟು ಬ್ಯಾಂಕು ಮತ್ತು ಈ ಹಿಂದೂ-ಮುಸ್ಲೀಂ ದಂಗೆಗಳು ದೇಶವ್ಯಾಪಿ ವಿಸ್ತಾರಗೊಂಡರೆ ಮೋದಿಯವರಿಗೆ ಅದನ್ನು ಸಂಭಾಳಿಸಲಾಗದೇ ಕೆಳಗಿಳಿಯಲೇಬೇಕಾದ ಅನಿವಾರ್ಯತೆ ಸೃಷ್ಟಿಸುವುದು.
ಸೋದರಿ ನಿವೇದಿತಾಳ 150 ನೇ ಜಯಂತಿ. ವಿವೇಕಾನಂದರ ಚಿಂತನೆಗಳಿಗೆ ಮನಸೋತು ತನ್ನ ದೇಶವನ್ನು ಬಿಟ್ಟು ಭಾರತಕ್ಕೆ ಬಂದ ಅಕ್ಕ. ಬಂಗಾಳದಲ್ಲಿ ಶಾಲೆಯನ್ನು ತೆರೆದು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವೇದಿಕೆ ಕಲ್ಪಿಸಿಕೊಟ್ಟ ‘ದೀದಿ’. ಹಿಂದೂ-ಮುಸಲ್ಮಾನರನ್ನು ವಿಭಜಿಸಿ ಆಳುವ ನೀತಿಗೆ ಪೂರಕವಾಗಿ ತುಂಡಾಗಿದ್ದ ಬಂಗಾಳವನ್ನು ಒಗ್ಗೂಡಿಸುವಲ್ಲಿ ಅವಳ ಪಾತ್ರ ಅಗಾಧ. ದುರದೃಷ್ಟ. ಅಕ್ಕ ಕಟ್ಟಿದ್ದ ಅದೇ ಬಂಗಾಳವನ್ನು ಪೂತರ್ಿ ಹಾಳುಗೈದು ನಾಶ ಮಾಡುವ ತವಕದಲ್ಲಿದ್ದಾಳೆ ಈಗಿನ ದೀದಿ ಅಲಿಯಾಸ್ ಮಮತಾ ಬ್ಯಾನರ್ಜಿ.
ಮೊದಲ ಬಾರಿಗೆ ಎಡಚರಿಂದ ಆಕೆ ಅಧಿಕಾರ ಕಸಿದಾಗ ಇಡಿಯ ದೇಶ ಹೆಮ್ಮೆ ಪಟ್ಟಿತ್ತು. ಆಕೆಯ ಧಾಡಸಿತನಕ್ಕೆ, ಗುಂಡಾ ಕಮ್ಯೂನಿಸ್ಟರನ್ನು ಎದುರು ಹಾಕಿಕೊಳ್ಳುವ ಆಕೆಯ ಧಾಷ್ಟ್ರ್ಯಕ್ಕೆ ಎಲ್ಲರೂ ತಲೆದೂಗಿದ್ದರು. ಐದು ವರ್ಷ ಕಳೆಯುವುದರೊಳಗಾಗಿ ರಾಜಕಾರಣದ ಕೆಸರು ಮೆತ್ತಿಕೊಂಡ ದೀದಿ ಅದರಿಂದ ಹೊರಬರಲಾಗದೇ ರಾಡಿಯಲಿ ಮತ್ತೆ ಮತ್ತೆ ಆಳಕ್ಕೆ ತಳ್ಳಲ್ಪಡುತ್ತಿರುವುದು ನೋಡಿದರೆ ಎಂಥವನಿಗೂ ಹೇಸಿಗೆಯಾಗದಿರದು. ಶಾರದಾ ಹಗರಣದಲ್ಲಿ ಸಿಕ್ಕು ಹಾಕಿಕೊಂಡು ಕೈ ಕೆಸರು ಮಾಡಿಕೊಂಡ ದೀದಿ ರೋಸ್ ವ್ಯಾಲಿಯಲ್ಲಿ ಮೈಯೆಲ್ಲಾ ಕೆಸರು ಮಾಡಿಕೊಂಡರು. ಅಷ್ಟಕ್ಕೆ ತೃಪ್ತಿಯಾಗಲಿಲ್ಲ ಅವರಿಗೆ. ಅವರೇ ಬರೆದ ಬಣ್ಣ ಬಣ್ಣದ 300 ಚಿತ್ರಗಳು ಒಂಭತ್ತು ಕೋಟಿ ರೂಗಳಿಗೆ ಮಾರಾಟಗೊಂಡವೆಂದು ಆಕೆಯೇ ಹೇಳಿಕೊಂಡಾಗ ದೇಶವೆಲ್ಲ ನಕ್ಕಿತ್ತು. ಹೀಗೆ ಆಕೆಯ ಚಿತ್ರ ಖರೀದಿ ಮಾಡಿದವರು ನೇರವಾಗಿ ಹಗರಣಗಳಲ್ಲಿ ಭಾಗಿಯಾದವರೇ ಎಂಬುದು ಗೊತ್ತಾದಾಗ ಹಗರಣದ ಹೆಬ್ಬಾವು ಆಕೆಯನ್ನೇ ಸುತ್ತಿ ಬಳಸಿಕೊಂಡಿತ್ತು. ಇದರ ಹಿನ್ನೆಲೆಯಲ್ಲಿಯೇ ನೋಟು ಅಮಾನ್ಯೀಕರಣವನ್ನು ಆಕೆ ವಿರೋಧಿಸುವಾಗ ಏನೋ ಆಗಬಾರದ್ದು ಆಗಿ ಹೋಗಿದೆ ಎನ್ನುವುದು ಪ್ರತಿಯೊಬ್ಬರಿಗೂ ಅರಿವಾಗಿತ್ತು.
ಈಗಂತೂ ಆಕೆ ಮತ್ತೂ ವಿಕೃತಳಾಗಿ ವತರ್ಿಸುತ್ತಿದ್ದಾರೆ. ಮೋದಿಯನ್ನು ಬಂಧಿಸಿ ಎಂದರು. ರಾಷ್ಟ್ರಪತಿ ಭವನದವರೆಗೂ ಮೆರವಣಿಗೆ ಹೊರಟರು. ಬದ್ಧ ವೈರಿ ಎಡಪಂಥೀಯರನ್ನೂ ಮೋದಿ ವಿರೋಧಕ್ಕೆ ಕೈ ಜೋಡಿಸಿರೆಂದು ಕರೆದು ಛೀಮಾರಿ ಹಾಕಿಸಿಕೊಂಡರು. ಮೋದಿಯನ್ನು ಕೆಳಗಿಳಿಸಿ, ರಾಜ್ನಾಥ್ ಸಿಂಗ್, ಅಡ್ವಾಣಿ, ಜೇಟ್ಲಿ ಯಾರು ಪ್ರಧಾನಿಯಾದರೂ ಅಭ್ಯಂತರವಿಲ್ಲವೆಂದು ರಾಷ್ಟ್ರಪತಿಗಳಿಗೆ ಪತ್ರ ಬರೆದರು. ಸೈನ್ಯ ಬಂಗಾಳಕ್ಕೆ ಬಂದಿರುವುದೇ ತನ್ನ ಬಂಧಿಸಲು ಎಂದರು. ತಮಿಳುನಾಡಿನಲ್ಲಿ ಅಧಿಕಾರಿಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಧಾಳಿಗೈದಾಗ ವಿರೋಧಿಸಿದರು. ಬಂಗಾಳದಲ್ಲಿ ಕೈ ಹಾಕಿ ನೋಡಿ, ನಾನು ಸುಮ್ಮನಿರೋಲ್ಲ ಅಂತ ಗದರಿಸಿದರು. ಓಹ್, ಆಕೆಗೆ ಮತಿ ಭ್ರಮಣೆಯಾಗಿಬಿಟ್ಟಿದೆಯೆಂದು ಸಮಾಜವೇ ಭಾವಿಸುವಷ್ಟರ ಮಟ್ಟಿಗೆ. ಇವೆಲ್ಲದರ ನಡುವೆ ಮೋದಿಯನ್ನು ಅಡ್ಡಗಟ್ಟಬೇಕೆಂದರೆ ಹಿಂದೂಗಳನ್ನು ಹಿಂಸಿಸಬೇಕೆಂಬ ಅಫ್ಜಲ್ಖಾನ್ನ ಸಿದ್ಧಾಂತ ಆಕೆಯ ತಲೆ ಹೊಕ್ಕಿತು. ಆಗಲೇ ಶುರುವಾಗಿದ್ದು ಆಕೆಯ ಪ್ರೇತ ನರ್ತನ.
ಈ ಬಾರಿ ಅಕ್ಟೋಬರ್ 11 ಕ್ಕೆ ವಿಜಯ ದಶಮಿ. ಅದೇ ದಿನ ದೇವಿಯ ವಿಸರ್ಜನೆ ಕೂಡ. ಎಲ್ಲರಿಗೂ ತಿಳಿದಿರುವಂತೆ ನಮ್ಮಲ್ಲಿ ಹೇಗೆ ಚೌತಿಯ ಪೂಜೆಯೋ ಬಂಗಾಳದಲ್ಲಿ ಹಾಗೆ ದುಗರ್ಾಪೂಜೆ. ಈ ಬಾರಿ ದುರ್ಗಾ ಪೂಜೆಯ ಮರು ದಿನವೇ ಮೊಹರಂ. ಮುಸಲ್ಮಾನರನ್ನೇ ಸುತ್ತಲೂ ಇಟ್ಟುಕೊಂಡು ಬಾಂಗ್ಲಾ ದೇಶದವರಾದರೂ ಸರಿ ಓಟು ಹಾಕಿದರೆ ಪಾಕಿಯ ಭಾವದಲ್ಲಿರುವ ದೀದಿ ಈ ಬಾರಿ ದುರ್ಗಾಪೂಜೆಗೇ ಕಡಿವಾಣ ಹಾಕಲು ನಿಶ್ಚಯಿಸಿದರು. ದೊಡ್ಡ ದೊಡ್ಡ ದುರ್ಗಾ ಪೆಂಡಾಲುಗಳು ವಿಜಯದಶಮಿಯಂದು ಮೂರ್ತಿ ವಿಸರ್ಜಿಸದೇ ಮೊಹರ್ರಂ ನಂತರವೇ ವಿಸರ್ಜಿಸುವಂತೆ ಸರ್ಕಾರದ ಆದೇಶ ಹೊರಡಿತು. ಮನೆಗಳಲ್ಲಿ ದುರ್ಗೆಯನ್ನಿಟ್ಟು ಪೂಜಿಸುವವರು ವಿಜಯದಶಮಿಯ ದಿನ ಸಂಜೆ ನಾಲ್ಕರೊಳಗೇ ವಿಸರ್ಜಿಸಿ ಕೈ ತೊಳೆದುಕೊಳ್ಳಬೇಕೆಂದಿತು ಸರ್ಕಾರ. ಇದು ಅಕ್ಷರಶಃ ಹಿಂದೂಗಳನ್ನು ತುಳಿದು ಬಿಸಾಡುವ ಪ್ರಕ್ರಿಯೆಯೇ ಆಗಿತ್ತು. ಇಷ್ಟು ದಿನ ಸಹಿಸಿಕೊಂಡು ಬದುಕಿದ್ದ ಬಂಗಾಳದ ಹಿಂದೂಗಳಿಗೆ ಸರಿಯಾಗಿ ಕಪಾಳಮೋಕ್ಷವಾಗಿತ್ತು.
ಸ್ಥಳೀಯ ಅಪಾರ್ಟ್ಮೆಂಟಿನ ನಿವಾಸಿಗಳು ನ್ಯಾಯಾಲಯದ ಬಾಗಿಲು ಬಡಿದರು. ನ್ಯಾಯಾಸ್ಥಾನದಿಂದ ಹೊರಟ ನ್ಯಾಯ ಎಲ್ಲರಿಗೂ ಶಕ್ತಿ ತುಂಬಿತು. ‘ನಾಲ್ಕರೊಳಗೆ ವಿಸರ್ಜಿಸಬೇಕೆಂಬುದು ಸರಿಯಲ್ಲ, ರಾತ್ರಿ 8.30 ರವರೆಗೂ ಪೊಲೀಸರು ಸಹಕರಿಸಲೇಬೇಕು. ಇದು ಒಂದು ಮತವನ್ನು ಮಾತ್ರ ಓಲೈಸುವ ಅತ್ಯಂತ ಕೆಟ್ಟ ಪ್ರತೀತಿ. ಮೊಹರ್ರಂ ಮುಸಲ್ಮಾನರ ಪಾಲಿಗೆ ಮಹತ್ವದ ಹಬ್ಬವೇ ಅಲ್ಲ, ಅದಕ್ಕೆ ಈ ಹಿಂದೆ ಸಾರ್ವಜನಿಕ ರಜೆ ಘೋಷಿಸಿದ ಉದಾಹರಣೆಯೂ ಇಲ್ಲ. ಹೀಗಿರುವಾಗ ಸರ್ಕಾರ ನಡಕೊಂಡ ರೀತಿ ದುರ್ಗಾ ಪೂಜಕರ ಮೂಲಭೂತ ಹಕ್ಕು ಕಸಿದಂತೆ’ ಎಂದೆಲ್ಲಾ ಹೇಳಿದ ನ್ಯಾಯಾಧೀಶರು ದೀದಿಯ ಮುಖಕ್ಕೆ ಮಂಗಳಾರತಿ ಮಾಡಿದ್ದರು. ಆದರೇನು? ದೀದಿಯ ತಲೆಗೆ ಮೊಹರ್ರಂನ ಪಿತ್ತ ಏರಿಯಾಗಿತ್ತು. ಬಂಗಾಳದ ದಿಕ್ಕು ದಿಕ್ಕುಗಳಿಂದ ದುರ್ಗಾ ಮೂರ್ತಿಯನ್ನು ವಿರೂಪಗೊಳಿಸಿದ ಸುದ್ದಿ ಬರಲಾರಂಭಿಸಿತು. ಹೌರಾದಲ್ಲಿ ದುರ್ಗಾ ಮೂರ್ತಿಯ ಮೇಲೆ ಮತಾಂಧನೊಬ್ಬ ಉಚ್ಚೆ ಹೊಯ್ದ ವಿಕಟನಗೆ ನಕ್ಕು. ಭರತ್ಪುರ, ಮುರ್ಷಿದಾಬಾದ್ನಲ್ಲಿ ದುರ್ಗಾ ಪೆಂಡಾಲುಗಳನ್ನು ಮುಸಲ್ಮಾನರು ವಿರೋಧಿಸಿದರೆಂಬ ಒಂದೇ ಕಾರಣಕ್ಕೆ ಮುಚ್ಚಿಸಲಾಯ್ತು. ಕಾಂಗ್ಲಾ ಪಹಾಡಿಯಲ್ಲಂತೂ ನಾಲ್ಕು ವರ್ಷಗಳಿಂದ 300 ಕುಟುಂಬಗಳು ದುರ್ಗಾ ಪೂಜೆ ಆಚರಿಸಬಾರದೆಂದು ಆಡಳಿತ ನಿಷೇಧ ಹೇರಿರುವುದು ಬೆಳಕಿಗೆ ಬಂತು.
ಬಂಗಾಳದೊಳಗೆ ಉರಿಯುತ್ತಿರುವ ಬೆಂಕಿಗೆ ದೀದಿ ತುಪ್ಪ ಹಾಕುತ್ತಲೇ ಇದ್ದರು. ಮೊನ್ನೆ ಡಿಸೆಂಬರ್ 12 ಕ್ಕೆ ಧುಲಾಘರ್ನಲ್ಲಿ ಮಿಲಾಡ್ ಲಲ್ ನಬಿಯ ಮೆರವಣಿಗೆಯ ಹೊತ್ತಲ್ಲಿ ಮುಸಲ್ಮಾನರು ಬೀದಿಗಿಳಿದು ನೂರಾರು ಹಿಂದೂ ಮನೆಗಳನ್ನು ಲೂಟಿ ಗೈದರು. ಹೆಣ್ಣು ಮಕ್ಕಳ ಮಾನಭಂಗವಾಯಿತು. ಅಪಹರಣವಾಯ್ತು. ಹತ್ತಾರು ಜನ ಕೊಲ್ಲಲ್ಪಟ್ಟರು. ವರದಿ ಮಾಡಲೆಂದು ಹೋದ ಪತ್ರಕರ್ತರನ್ನು ಒಳಗೇ ಬಿಡಲಿಲ್ಲ. ಜೀ ನ್ಯೂಸ್ನ ಸುಧೀರ್ ಚೌಧರಿಯ ಮೇಲೆ ಕೇಸು ಜಡಿಯಲಾಯ್ತು. ಹಿಂದೂಗಳನ್ನು ಬೀದಿ ನಾಯಿಗಳಿಗಿಂತ ಕಡೆಯಾಗಿ ನಡೆಸಿಕೊಳ್ಳಲಾಯಿತು. ಇಷ್ಟಕ್ಕೂ ಒಂದೇ ಕಾರಣ ದೀದಿಯದ್ದು. ಮುಸಲ್ಮಾನರು ತನ್ನ ವೋಟು ಬ್ಯಾಂಕು ಮತ್ತು ಈ ಹಿಂದೂ-ಮುಸ್ಲೀಂ ದಂಗೆಗಳು ದೇಶವ್ಯಾಪಿ ವಿಸ್ತಾರಗೊಂಡರೆ ಮೋದಿಯವರಿಗೆ ಅದನ್ನು ಸಂಭಾಳಿಸಲಾಗದೇ ಕೆಳಗಿಳಿಯಲೇಬೇಕಾದ ಅನಿವಾರ್ಯತೆ ಸೃಷ್ಟಿಸುವುದು. ಬಹುಶಃ ಮೊದಲಿನಂತೇ ಆಗಿದ್ದರೆ ಅಂದುಕೊಂಡಂತೆ ಆಗಿರುತ್ತಿತ್ತೇನೋ! 500 ಮತ್ತು 1000 ದ ನೋಟು ಅಮಾನ್ಯವಾದ ಮೇಲೆ ಬಿಟ್ಟಿಯಾಗಿ ಹಂಚಲು ದುಡ್ಡಿಲ್ಲದೇ ಕೊರಗುತ್ತಿದೆ ಗೂಂಡಾ ಸಮಾಜ. ಮಮತಾ ಬ್ಯಾನಜರ್ಿ, ಕೇಜ್ರಿವಾಲ್ನಂತವರು ಕೂಡಿಟ್ಟ ಬೇನಾಮಿ ಹಣಕ್ಕೆ ಕಿಮ್ಮತ್ತಿಲ್ಲದಂತಾಗಿ ಕಂಗಾಲಾಗಿದ್ದಾರೆ. ಅವರಿಗೆಲ್ಲ ಮುಂದಿನ ದಿನಗಳು ಅಂಧಕಾರವಾಗಿ ಕಾಡಲಾರಂಭಿಸಿವೆ. ದೇಶ ಸದೃಢ ಭವಿಷ್ಯದತ್ತ ಹೆಜ್ಜೆ ಇಡುತ್ತಿದೆ.
ಇವುಗಳನ್ನೇ ಸಹಿಸಲಾಗದ ದೀದಿ ಎಡವಟ್ಟುಗಳ ಮೇಲೆ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಕಲ್ಕತ್ತಾ ಕ್ಲಬ್ಬು ಕಾಶ್ಮೀರ ಮತ್ತು ಬಲೂಚಿಸ್ಥಾನಗಳ ಜನರ ಆಕ್ರಂದನ ಕುರಿತಂತೆ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಖ್ಯಾತ ಲೇಖಕ, ಕಟು ನುಡಿಯ ಮಾತುಗಾರ ತಾರೇಕ್ ಫತೆ ಕಾರ್ಯಕ್ರಮಕ್ಕೆ ಆಗಮಿಸಬೇಕಿತ್ತು. ಜೊತೆಗೆ ಜನರಲ್ ಜಿ.ಡಿ ಭಕ್ಷಿ ಕೂಡ. ದೀದಿಯ ತಂಡ ಆಕ್ಷೇಪ ವ್ಯಕ್ತ ಪಡಿಸಿತು. ಕಾರ್ಯಕ್ರಮದ ಹೆಸರಲ್ಲಿರುವ ಕಾಶ್ಮೀರವನ್ನು ತೆಗೆದುಬಿಡಬೇಕೆಂದು ಕ್ಯಾತೆ ತೆಗೆಯಿತು. ಆಮೇಲೆ ತಾರೀಕ್ ಫತೆಯನ್ನೇ ಅತಿಥಿಯ ಪಟ್ಟಿಯಿಂದ ಕೈ ಬಿಡಬೇಕೆಂದು ಕಿರಿಕಿರಿ ಮಾಡಿತು. ಆತ ಪಾಕೀಸ್ತಾನದ ವಿರೋಧಿಯಾದ್ದರಿಂದ ಸ್ಥಳೀಯ ಮುಸಲ್ಮಾನರಿಗೆ ಇದು ಒಗ್ಗುವುದಿಲ್ಲವೆಂಬ ಅಸಂಬದ್ಧ ಸಮಜಾಯಿಷಿಯನ್ನು ಕೊಟ್ಟಿತು ಸಕರ್ಾರ. ಅಲ್ಲಿಗೆ ದೀದಿಯ ಬೆಂಬಲಿಗ ಮುಸಲ್ಮಾನರು ಪಾಕಿಗಳ ಪರ ನಿಂತವರೆಂದು ಸಕರ್ಾರವೇ ಅಧಿಕೃತ ಮುಚ್ಚಳಿಕೆ ಬರೆದಿಟ್ಟೂ ಆಯಿತು. ತಾರೇಕ್ ಫತೆಯನ್ನು ಕೈ ಬಿಡಲೊಪ್ಪದ ಕಲ್ಕತ್ತಾ ಕ್ಲಬ್ಬು ಕಾರ್ಯಕ್ರಮವನ್ನೇ ರದ್ದುಗೊಳಿಸಿತು. ದೇಶ ಮೊದಲ ಬಾರಿಗೆ ನಿಜವಾದ ಅಸಹಿಷ್ಣುತೆಯ ಪರ್ವದ ಕಡೆಗೆ ಹೊರಳಿತ್ತು. ಈ ಹಿಂದೆ ಜೆ ಎನ್ ಯುನಲ್ಲಿ ತಾರೇಕ್ರಿಗೆ ಹೊಡೆಯಲೆತ್ನಿಸಿದ ವಿದ್ಯಾಥರ್ಿಯ ಕುರಿತಂತೆ ನಾವು ಕೇಳಿದ್ದೆವು. ಈಗ ಸಕರ್ಾರವೇ ಅಧಿಕೃತವಾಗಿ ಅವರನ್ನು ಕಾರ್ಯಕ್ರಮದಿಂದ ಆಚೆ ಇಟ್ಟಿತ್ತು. ಆದರೆ ಬೌದ್ಧಿಕವಲಯ ತುಟಿ ಬಿಚ್ಚಲಿಲ್ಲ. ಅವಾಡರ್್ ವಾಪ್ಸಿ ಗ್ಯಾಂಗುಗಳು ದೀದಿ ವಿರುದ್ಧ ಕೂಗಾಡಲಿಲ್ಲ. ಫೇಸ್ಬುಕ್ನಲ್ಲಿ ಯಾರ ಕವನಗಳೂ ಕನವಲಿಕೆಗಳೂ ಇರಲಿಲ್ಲ.
ಒಂದಂತೂ ಸತ್ಯ. ಮೋದಿಯನ್ನು ಎದುರಿಸಲು ಇವರು ತಮ್ಮ ಬತ್ತಳಿಕೆಯಲ್ಲಿದ್ದ ಎಲ್ಲಾ ಅಸ್ತ್ರಗಳನ್ನೂ ಖಾಲಿ ಮಾಡುತ್ತಲಿದ್ದಾರೆ. ಈ ಎಲ್ಲಾ ಅಸ್ತ್ರಗಳನ್ನು 12 ವರ್ಷ ಗುಜರಾತ್ನಲ್ಲಿದ್ದಾಗಲೇ ಎದುರಿಸಿ ಗೆದ್ದುದರಿಂದ ಅವರಿಗೆ ಈಗ ಯಾವುದೂ ಹೊಸತೆನಿಸುತ್ತಿಲ್ಲ. ಎದುರಾಳಿಗಳು ಮೈಯ್ಯೆಲ್ಲಾ ಪರಚಿಕೊಳ್ಳುತ್ತಿದ್ದಾರೆ. ಅದಾಗಲೇ ಕಾಂಗ್ರೆಸ್ಸು ಮಾತನಾಡಲು ಆಗದ ಶಾಂತ ಸ್ಥಿತಿಗೆ ತಲುಪಿಯಾಗಿದೆ. ಕೇಜ್ರಿವಾಲ್ ಪಂಜಾಬು, ಗೋವಾಗಳ ಆಸೆ ಕೈ ಬಿಟ್ಟಿದ್ದಾರೆ. ನಿತೀಶ್ ತಪ್ಪನ್ನರಿತು ಮರಳಿ ಪಾಳಯಕ್ಕೆ ಬರುವ ಸಿದ್ಧತೆ ನಡೆಸಿದ್ದಾರೆ. ಉಳಿದವರು ಬೆಳವಣಿಗೆಗಳನ್ನೆಲ್ಲ ಪಿಳಿ ಪಿಳಿ ನೋಡುತ್ತಿದ್ದಾರೆ ಅಷ್ಟೇ. ಇಡಿಯ ಭಾರತ ಒಂದೆಡೆ ಕೇಂದ್ರೀಕೃತವಾಗುತ್ತಿದೆ. ಹೀಗಾಗಿ ಜಗತ್ತು ಭಾರತವನ್ನು ಕೇಂದ್ರವಾಗಿಸಿಕೊಳ್ಳುತ್ತಿದೆ.