ವಿಭಾಗಗಳು

ಸುದ್ದಿಪತ್ರ


 

ಅಧಿಕಾರ ಪಡೆಯಲು ಆಸೀಫಾ ಕೂಡ ಒಂದು ಮೆಟ್ಟಿಲಷ್ಟೇ!

ಆಸೀಫಾಳ ಸುದ್ದಿ ಆರಂಭದಲ್ಲಿ ಕಾಂಗ್ರೆಸ್ಸಿಗೆ ಲಾಭದಾಯಕವೆನಿಸಿತ್ತು. ರಾಹುಲ್ ಬೀದಿಗೆ ಬಂದು ಹೋರಾಟ ಶುರು ಹಚ್ಚಿಕೊಂಡುಬಿಟ್ಟಿದ್ದರು. ಆದರೆ ಕಾಲಕ್ರಮದಲ್ಲಿ ಇದು ಹಿಂದೂಗಳ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಎಂದು ಅರಿವಾದೊಡನೆ ಹಿಂದೂಗಳೆಲ್ಲಾ ಒಗ್ಗಟ್ಟಾಗಿಬಿಟ್ಟರಲ್ಲ ಆಮೇಲೆ ರಾಹುಲ್ ನಿಧಾನವಾಗಿ ಹಿಂದಕ್ಕೆ ಬಂದುಬಿಟ್ಟರು. ನೆನಪಿಡಿ. ಇವರ್ಯಾರಿಗೂ ಬೇಕಾಗಿರುವುದು ಅಸೀಫಾಳ ನ್ಯಾಯವಲ್ಲ. 2019ರಲ್ಲಿ ಮೋದಿಯ್ನನೆದುರಿಸಲು ಚುನಾವಣೆಯ ವಸ್ತು ಬೇಕಷ್ಟೇ.

ಇಡಿಯ ದೇಶದಲ್ಲಿ ಅಸೀಫಾಳದ್ದೇ ಸುದ್ದಿ. ಆಕೆಯನ್ನು ಬಲಾತ್ಕಾರಕ್ಕೆ ಒಳಪಡಿಸಿ ಬರ್ಬರವಾಗಿ ಹತ್ಯೆಮಾಡಿದ ದೋಷಿ ಯಾರೇ ಇದ್ದರೂ ಅವರಿಗೆ ಅತ್ಯಂತ ಕಠಿಣವಾದ ಶಿಕ್ಷೆಯಾಗಬೇಕು. ಆದರೆ ಆ ನೆಪದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ನಿರಪರಾಧಿಗಳನ್ನೆಲ್ಲಾ ಒಳ ತಳ್ಳುವುದು, ಹಿಂಸಿಸುವುದು ಇವೆಲ್ಲವನ್ನೂ ಒಪ್ಪುವುದು ಸಾಧ್ಯವೇ ಇಲ್ಲ. ಬೇರೆ ಯಾವ ಅತ್ಯಾಚಾರಗಳಿಗೂ ಬೀದಿಗೆ ಬರದ ಕೆಲವು ಪತ್ರಕರ್ತರು, ಬುದ್ಧಿಜೀವಿಗಳು, ಸಿನಿಮಾ ನಟ-ನಟಿಯರು ಈ ವಿಚಾರಕ್ಕೆ ಮಾತ್ರ ಬೀದಿಗೆ ಧುಮುಕಿದಾಗಲೇ ಅಂತಹುದೊಂದು ಅನುಮಾನ ಸೃಷ್ಟಿಯಾಗಿತ್ತು. ಸದ್ಯಕ್ಕೆ ವಿಚಾರಣೆ ನಡೆಯಬೇಕಾಗಿರುವುದು ಇದರದ್ದೇ.

4

ಘಟನೆ ನಡೆದಿದ್ದರೂ ಸುಳ್ಳಾದರೂ ಅದರ ಹಿಂದೆ ಇರುವುದು ಜಮ್ಮು-ಕಾಶ್ಮೀರದಲ್ಲಿ ಹರಡಿಕೊಂಡಿರುವ ಬಕವರ್ಾಲಾ ಜನಾಂಗದ್ದೇ ಪ್ರಮುಖ ಪಾತ್ರ. ಬಕವರ್ಾಲಾಗಳು ಗುಜ್ಜರ್ಗಳೆಂಬ ದೊಡ್ಡ ಸಮುದಾಯದ ಪುಟ್ಟ ಅಂಗ. ಇವರು ದನ-ಕುರಿಗಳನ್ನು ಮೇಯಿಸುತ್ತಾ ಊರಿಂದ ಊರಿಗೆ ಹೋಗುವ ಅಲೆಮಾರಿಗಳು. ಈ ಗುಜ್ಜರ್ಗಳು ಪಂಜಾಬ್ನಲ್ಲಿ ಸಿಖ್ಖರಾಗಿಯೂ, ಹರಿಯಾಣಾದಲ್ಲಿ ಹಿಂದೂಗಳಾಗಿಯೂ, ಜಮ್ಮು-ಕಾಶ್ಮೀರದಲ್ಲಿ ಮುಸಲ್ಮಾನರಾಗಿಯೂ ಇದ್ದಾರೆ. ದೇಶದ ಕುರಿತ ಇವರ ಅಖಂಡ ಭಕ್ತಿ ಯಾರೂ ಅಲ್ಲಗಳೆಯುವಂತೆಯೇ ಇಲ್ಲ. ಕಳೆದ ನಾಲ್ಕಾರು ದಶಕಗಳಿಂದ ಕಥುವಾದಲ್ಲೂ ಇವರು ಎಲ್ಲರೊಂದಿಗೆ ಬೆರೆತೇ ಇದ್ದಾರೆ. ಇವರನ್ನು ಕಾಡಿನಿಂದ ಹೊರದಬ್ಬುವ ನಾಡಿನಲ್ಲಿ ಎಲ್ಲರೊಂದಿಗೆ ಏಕರಸವಾಗಿಸುವ ಪ್ರಯತ್ನ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿದ್ದು ಈ ಕುರಿತಾಗಿ ಅಲ್ಲಲ್ಲಿ ಸಾಕಷ್ಟು ಗಲಾಟೆಗಳೇ ಆಗಿವೆ. ಇಡಿಯ ಪ್ರಕರಣ ಜಟಿಲವಾಗೋದು ಈ ಕಾರಣಕ್ಕಾಗಿಯೇ. ಅವರನ್ನು ಕಾಡಿನಿಂದೆಬ್ಬಿಸಿದರೆ, ಅವರಿಗಾಗಿಯೇ ಪ್ರತ್ಯೇಕ ಸ್ಥಳ ಮಾಡಿಕೊಟ್ಟರೆ ಜಮ್ಮುವಿನ ಜನಸಂಖ್ಯಾಂಕ ಬದಲಾಗುವ ಭಯ ಹಿಂದೂಗಳಿಗೆ ಇದ್ದೇ ಇದೆ. ಅದಕ್ಕೆ ಪ್ರತಿಯಾಗಿ ಈ ಬಕವರ್ಾಲಾಗಳು ನಾಡಿಗೆ ಬಂದು ಹಿಂದೂಗಳೊಂದಿಗೆ ಸಮರಸವಾಗಿ ಬೆರೆತುಬಿಟ್ಟರೆ ಹುರಿಯತ್ನ ಪ್ರತ್ಯೇಕತಾವಾದಿಗಳಿಗೂ ಅಷ್ಟೇ ತೊಂದರೆಯಿದೆ. ಹೀಗಾಗಿ ಈ ಘಟನೆಯ ಆಯಾಮಗಳು ಆಳಕ್ಕೆ ಸಿಕ್ಕುಹಾಕಿಕೊಂಡಿರುವಂಥದ್ದು.

ಕುದುರೆ ಮೇಯಿಸಿಕೊಂಡು ಬಂದ ಆಸೀಫಾಳನ್ನು ಅಪಹರಿಸಿಕೊಂಡು ಹೋಗಿ ಆಕೆಯನ್ನು ದನದ ಕೊಟ್ಟಿಗೆಯಲ್ಲಿ ಏಳು ದಿನಗಳ ಕಾಲ ಕೂಡಿ ಹಾಕಿ ಕೊನೆಗೊಮ್ಮೆ ಬಲಾತ್ಕರಿಸಲು ಪ್ರಯತ್ನಿಸಿ ಆಕೆಯ ಕೊಲೆಗೈದವನು ಒಬ್ಬ ಅಪ್ರಾಪ್ತ ವಯಸ್ಕ ಎನ್ನುವುದು ಪೊಲೀಸರ ಆರಂಭಿಕ ವಿಚಾರಣೆಯ ಪ್ರತಿಫಲವಾಗಿತ್ತು. ಆಮೇಲೆಯೇ ಹುರಿಯತ್ ಬೆಂಬಲಿಗ ತಯ್ಯಬ್ ಹುಸೇನ್ ಜನರನ್ನು ಭಡಕಾಯಿಸಿ ಈ ಇಡಿಯ ಕೇಸನ್ನು ‘ಕಶ್ಮೀರದ’ ಕ್ರೈಂ ಬ್ರಾಂಚ್ಗೆ ವರ್ಗವಾಗುವಂತೆ ನೋಡಿಕೊಂಡ. ಅಲ್ಲಿಯವರೆಗೂ ಸಿಬಿಐ ಈ ಇಡೀ ಪ್ರಕರಣವನ್ನು ಕೈಗೆತ್ತಿಕೊಳ್ಳಬೇಕೆಂದು ವಾದಿಸುತ್ತಿದ್ದ ಬಕವರ್ಾಲಾಗಳನ್ನು ಎತ್ತಿಕಟ್ಟಿದ ಈ ತಯ್ಯಬ್ ಹುಸೇನ್ ಮೆಹಬೂಬಾ ಮುಫ್ತಿಯ ಮೇಲೆ ಒತ್ತಡ ತಂದು ಇಡಿಯ ಕೇಸು ಕಶ್ಮೀರದವರು ವಿಚಾರಣೆ ಮಾಡುವಂತೆ ನೋಡಿಕೊಂಡ.

2

ಕೇಸು ಬಲು ಬೇಗ ಜಾತಿಯ ರಂಗು ಪಡೆದುಕೊಂಡಿತು. ಇಡಿಯ ಚಾಜರ್್ಶೀಟ್ನಲ್ಲಿ ಅತ್ಯಾಚಾರಕ್ಕೆ ಒಳಗಾದವಳು ಮುಸ್ಲೀಂ, ಅತ್ಯಾಚಾರಗೈದವರು ಹಿಂದೂಗಳು ಮತ್ತು ಅತ್ಯಾಚಾರ ನಡೆಸಿದ ಸ್ಥಳ ದೇವಿಸ್ಥಾನ ಎಂಬುದನ್ನು ಜೋರಾಗಿಯೇ ಬಿಂಬಿಸಲಾಯ್ತು. ಆಗ ಸ್ಮಶಾನದಲ್ಲಿ ಅರ್ಧ ರಾತ್ರಿಯಲ್ಲಿಯೇ ಎದ್ದೆದ್ದು ಕುಣಿದಾಡುವ ದೆವ್ವಗಳಂತೆ ಒಂದಷ್ಟು ಪತ್ರಕರ್ತರು, ಸಿನಿಮಾ ತಾರೆಯರು ನಡು ಬೀದಿಯಲ್ಲಿ ಕುಣಿದಾಡತೊಡಗಿದರು. ಹಿಂದೂಗಳನ್ನು ಮಾನಸಿಕವಾಗಿ ಬಡಿದು ಹಾಕಿಬಿಡುವ ಸಮರ್ಥವಾದ ಸಂದರ್ಭವಿದೆಂಬುದು ಅವರಿಗೆ ಅನಿಸಿತು. ಹೀಗಾಗಿಯೇ ಕಾನೂನನ್ನು ಮೀರಿ ಆಸೀಫಾಳ ಚಿತ್ರವನ್ನು, ಆಕೆಯ ಹೆಸರನ್ನು, ಆಕೆಯನ್ನು ಬಲಾತ್ಕಾರಗೊಳಿಸಿದ ಅಪ್ರಾಪ್ತ ವಯಸ್ಕನ ಹೆಸರನ್ನು ಮುಲಾಜಿಲ್ಲದೇ ಹಬ್ಬಿಸಿದರು. ದೆಹಲಿಯಲ್ಲಿ 2012 ರಲ್ಲಿ ನಡೆದ ನಿರ್ಭಯಾ ಬಲಾತ್ಕಾರದ ಕೇಸು ಎಲ್ಲರಿಗೂ ತಿಳಿದಿರುವಂಥದ್ದೇ. ಆದರೆ ಅಲ್ಲಿ ಬಲಾತ್ಕಾರಕ್ಕೊಳಗಾದವಳ ಹೆಸರು, ಫೋಟೋ ಮತ್ತು ಆಕೆಯನ್ನು ಬಲಾತ್ಕರಿಸಿದ ಅಪ್ರಾಪ್ತ ವಯಸ್ಕನ ಹೆಸರು ಫೋಟೋಗಳ್ಯಾವುವೂ ಬೆಳಕಿಗೆ ಬರಲೇ ಇಲ್ಲ. ಕಾರಣ ಸ್ಪಷ್ಟ. ಅಲ್ಲಿ ಬಲಾತ್ಕಾರಕ್ಕೊಳಗಾದವಳು ಹಿಂದೂ ಮತ್ತು ಆಕೆಯ ಯೋನಿಯೊಳಗೆ ಕಬ್ಬಿಣದ ರಾಡನ್ನು ತುರುಕಿ ಮೂತ್ರಕೋಶವೇ ಹೊರ ಬರುವಂತೆ ಬರ್ಬರವಾಗಿ ನಡೆದುಕೊಂಡವ ಮುಸಲ್ಮಾನನಾಗಿದ್ದ. ಅವನ ಹೆಸರನ್ನು ಹೇಳುವುದು ಸಮಾಜದ ಸ್ವಾಸ್ಥ್ಯವನ್ನು ಕದಡಿದಂತೆಂದು ನಂಬಿದ, ಒಪ್ಪಿದ ಪತ್ರಕರ್ತರು ಅವರೆಲ್ಲರ ಗುರುತುಗಳನ್ನು ಮುಚ್ಚಿಟ್ಟರು. ಆದರೆ ಆಸೀಫಾಳ ವಿಚಾರದಲ್ಲಿ ಮಾತ್ರ ಅದನ್ನು ಬೇಕಂತಲೇ ಹೊರಗೆವಡಲಾಯ್ತು. ಸಾಗರಿಕಾ, ಬಖರ್ಾ, ರಾಜ್ದೀಪ್, ಶೀಲಾ ರಶೀದ್ ಇವರೇ ಮೊದಲಾದ ಎಡಚ ಗ್ಯಾಂಗುಗಳಿಗೆ ಆಸೀಫಾ ಈಗ ಬಲಾತ್ಕಾರಕ್ಕೊಳಗಾದ ಹೆಣ್ಣುಮಗಳಲ್ಲ. ಬದಲಿಗೆ ಹಿಂದೂಗಳನ್ನು ಹಣಿಯಲು ಒಂದು ವಸ್ತುವಾಗಿದ್ದಳಷ್ಟೇ. ಯಾವ ನಟಿಯರ ಹೆಸರುಗಳೂ ಬಾಯಿಗೆ ಬರುವುದಿಲ್ಲವೋ, ಅವರ ಒಂದು ಸಿನಿಮಾ ಕೂಡ ಬಾಕ್ಸ್ ಆಫೀಸಿನಲ್ಲಿ ಯಶಸ್ಸು ಸಾಧಿಸಿಲ್ಲವೋ ಅಂಥ ನಟಿಮಣಿಯರೆಲ್ಲಾ ಕೈಯಲ್ಲಿ ‘ನಾನು ಹಿಂದೂಸ್ಥಾನಿ ನನಗೆ ಅವಮಾನವಾಗಿದೆ’ ಎಂದು ಕಾಡರ್ು ಹಿಡಿದು ಬೀದಿಗೆ ಬಂದು ನಿಂತರು. ಸ್ವರ ಭಾಸ್ಕರ ಎಂಬ ನಟಿಮಣಿಯಂತೂ ‘ನಾನು ಯೋನಿಗೆ ಸೀಮಿತಳಾಗಿಬಿಟ್ಟಿದ್ದೇನೆ ಎನಿಸಿದೆ’ ಎಂದು ಅನುಕಂಪಗಿಟ್ಟಿಸುವ ಪ್ರಯತ್ನ ಮಾಡಿದಳು. ಕರೀನಾ ಅಲಿ ಖಾನ್ ತನ್ನ ಮಗನಿಗೆ ತೈಮೂರ್ ಎಂದು ಹೆಸರಿಡುವಾಗ ಹೆಮ್ಮೆಯಿಂದ ಸಾಹಸಿ ಎಂಬರ್ಥದ ಅದೇ ಹೆಸರನ್ನಿಡುತ್ತೇನೆಂದು ಕೂಗಾಡಿದ್ದಳು. ಆದರೆ ಇದೇ ತೈಮೂರ್ ಲಕ್ಷಾಂತರ ಹಿಂದೂಗಳ ಮಾರಣ ಹೋಮ ಮಾಡಿದವ, ಸಾವಿರಾರ ಹೆಣ್ಣುಮಕ್ಕಳ ಬರ್ಬರವಾಗಿ ಅತ್ಯಾಚಾರಕ್ಕೊಳಪಡಿಸಿದವ ಎಂಬುದು ಗೊತ್ತಿದ್ದೂ ಆಕೆ ತನ್ನ ನಿರ್ಣಯಕ್ಕೆ ಅಚಲವಾಗಿದ್ದಳು. ಅದೇ ಕರೀನಾ ಈಗ ತಾನು ಹಿಂದೂಸ್ಥಾನಿಯಾಗಿರುವುದಕ್ಕೆ ಅವಮಾನವಾಗುತ್ತಿದೆ ಎಂದಿದ್ದಳು. ಅನೀಲ್ ಕಪೂರ್ನ ಮಗಳು ಸೋನಂ ಕಪೂರ್ ತನ್ನ ತಂದೆ ಹಿಂದೊಮ್ಮೆ ಬಲಾತ್ಕಾರದ ಆರೋಪ ಹೊತ್ತಿದ್ದ ಶೈನೀ ಅಹೂಜಾನನ್ನು ಬೆಂಬಲಿಸಿ ಶೂಟಿಂಗ್ನ ಸಂದರ್ಭದಲ್ಲಿ ಅವನಿಗೆ ಯಾರಿಂದಲೂ ಅವಮಾನವಾಗದಂತೆ ರಕ್ಷಣೆಯನ್ನೂ ಕೊಟ್ಟಿದ್ದನ್ನು ಮರೆತು ಈಗ ತಾನು ಪೋಸ್ಟರ್ ಹಿಡಿದು ಬೀದಿಗೆ ಬಂದು ನಿಂತಿದ್ದಳು. ಈ ನಟಿ ಮಣಿಯರಿಗೆ ಸಾಕಷ್ಟು ಸಿನಿಮಾ ಆಫರ್ಗಳು ಇಲ್ಲ ಮತ್ತು ಅವರು ನಟಿಸಿದ ಚಿತ್ರಗಳು ಭಾರಿ ಸುದ್ದಿಯನ್ನೂ ಮಾಡುವುದಿಲ್ಲ ಹೀಗಾಗಿ ಅವರು ಇಂಥ ಪ್ರತಿಭಟನೆಗಳಿಗೆ ಬಂದು ಕಳೆದುಕೊಳ್ಳುವುದೇನೂ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸ್ವಲ್ಪ ಹೆಸರು ಮಾಡಿಕೊಳ್ಳಬಹುದಷ್ಟೇ. ಇಂಥ ಘಟನೆಗಳಲ್ಲಿ ಅನವಶ್ಯಕವಾಗಿ ಮೂಗು ತೂರಿಸಿದ ಶಾರುಖ್ಖಾನ್ ಅಮೀರ್ಖಾನರು ವೃತ್ತಿ ಬದುಕಿನಲ್ಲಾದ ಹೊಡೆತಗಳಿಂದ ಸಾಕಷ್ಟು ಪಾಠ ಕಲಿತಿದ್ದಾರೆ. ಹೀಗಾಗಿಯೇ ಅವರ್ಯಾರೂ ಈ ಬಾರಿ ಇಂಥ ಚೀಪ್ ಗಿಮಿಕ್ಗಳಿಗೆ ಮೊರೆ ಹೋಗಲಿಲ್ಲ.

ಬಿಡಿ. ನಾವು ಅರಿತುಕೊಳ್ಳಬೇಕಾದ್ದು ಬಹಳಷ್ಟಿದೆ. ಪ್ರತಿ ಬಾರಿ ಒಂದು ಮಹತ್ವದ ಚುನಾವಣೆ ಬಂದಾಗಲೆಲ್ಲಾ ಇವರು ಇಂಥ ಸುದ್ದಿಯೊಂದನ್ನು ಹೊತ್ತುಕೊಂಡು ಮುಂದೆ ಬಂದು ನಿಂತುಬಿಡುತ್ತಾರೆ. ಹಿಂದೂಗಳು ಒಟ್ಟಾಗುವುದನ್ನು ತಡೆಯಬೇಕೆಂಬ ಹಠ ಅವರಿಗೆ. ಬಿಹಾರದ ಚುನಾವಣೆಗೂ ಮುನ್ನ ಅಸಹಿಷ್ಣುತೆ ಎಂಬ ನಾಟಕ ಮಾಡಿದ ಈ ಅಯೋಗ್ಯರು ದನದ ಮಾಂಸ ಇಟ್ಟುಕೊಂಡದ್ದಕ್ಕೆ ಹಿಂದೂಗಳು ಮುಸಲ್ಮಾನರನ್ನು ಕೊಲ್ಲುತ್ತಾರೆಂದು ಪುಕಾರು ಹಬ್ಬಿಸಿಬಿಟ್ಟಿದ್ದರು. ಒಂದು ಕ್ಷಣ ನಾವುಗಳೂ ನಂಬಿಬಿಟ್ಟಿದ್ದೆವು. ಆದರೆ ಅವರು ಹೇಳಿದ್ದೆಲ್ಲಾ ಸುಳ್ಳೆಂದು ಒಂದೊಂದೇ ಘಟನೆಗಳು ಈಗ ಬೆಳಕಿಗೆ ಬರುತ್ತಿವೆ. ಹರಿಯಾಣಾದ ರೈಲಿನಲ್ಲಿ ಜುನೈದ್ ಎಂಬ ಮುಸಲ್ಮಾನ ತರುಣನ ಹತ್ಯೆಯಾಯಿತಲ್ಲ. ಆತ ತೀರಿಕೊಂಡೊಡನೆ ಆತನ ಕೈಯಲ್ಲಿ ದನದ ಮಾಂಸ ಇದ್ದುದರಿಂದಲೇ ಕೊಲ್ಲಲಾಯ್ತೆಂದು ಶಬಾನಾ ಆಜ್ಮಿ ನಂದಿತಾ ದಾಸ್ರೆಲ್ಲಾ ಬೀದಿಗೆ ಬಂದು ನಾಟ್ ಇನ್ ಮೈ ನೇಮ್ ಹೋರಾಟ ಸಂಘಟಿಸಿ ದೊಡ್ಡ ಕೂಗೆಬ್ಬಿಸಿಬಿಟ್ಟಿದ್ದವು. ಬೆಂಗಳೂರಿನ ಟೌನ್ಹಾಲಿನ ಮುಂದೆಯೂ ಪ್ರತಿಭಟನೆಯಾಗಿತ್ತು. ಮೊನ್ನೆ ಆ ಘಟನೆಯ ವಿಚಾರಣೆ ನಡೆಸಿದ ಕೋಟರ್ು ಆ ಘಟನೆಗೂ ಮತ್ತು ದನದ ಮಾಂಸಕ್ಕೂ ಸಂಬಂಧವೇ ಇಲ್ಲ ಎಂದು ತೀಪರ್ುಕೊಟ್ಟಿದೆ. ಅಂದು ಹಿಂದೂಗಳಿಗೆ ಮಾಡಿದ್ದ ಅವಮಾನಕ್ಕೆ ಇವರೆಲ್ಲಾ ಈಗ ಹಿಂದೂಗಳ ಕ್ಷಮೆ ಕೇಳುವರೇನು? ದೆಹಲಿಯಲ್ಲಿ ಹೋಳಿಯ ಹೊತ್ತಲ್ಲಿ ವೀರ್ಯ ತುಂಬಿದ ಬಲೂನುಗಳನ್ನು ಹಿಂದೂಗಳು ಹೆಣ್ಣುಮಕ್ಕಳ ಮೇಲೆ ಎಸೆಯುತ್ತಿದ್ದಾರೆಂಬ ಪ್ರತಿಭಟನೆ ಮಾಡಿದರಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳ ಮನೋಬಲವನ್ನು ಕುಗ್ಗಿಸುವ ಈ ಸುಳ್ಳು ಸುದ್ದಿಯನ್ನು ವ್ಯಾಪಕವಾಗಿ ಪ್ರಚಾರ ಮಾಡಿದರಲ್ಲ ಈಗ ಆ ಬಲೂನಿನಲ್ಲಿ ವೀರ್ಯದ ಅಂಶವೇ ಇರಲಿಲ್ಲ ಎಂಬ ವರದಿ ಮತ್ತು ನ್ಯಾಯಾಲಯದ ನಿರ್ಣಯ ಹೊರಬಂದಿದೆ. ಸುಳ್ಳು ಸುದ್ದಿ ಹೊರಡಿಸಿದವರೆಲ್ಲಾ ಎಲ್ಲಿ ಅಡಗಿದ್ದಾರೆ ಈಗ? ಒಂದೆರಡಲ್ಲ ಈ ಅಯೋಗ್ಯರು ಕಳೆದ 70 ವರ್ಷಗಳಿಂದ ಸುಳ್ಳುಗಳನ್ನೇ ಪೋಣಿಸಿಕೊಂಡು ಬಂದಿದ್ದಾರೆ.

ಆದರೆ ಈಗ ಆಗಿರುವ ಬದಲಾವಣೆ ಒಂದೇ. ಸಾಮಾಜಿಕ ಜಾಲತಾಣಗಳು ಚುರುಕಾಗಿರುವುದರಿಂದ ಇವರು ಹಬ್ಬಿಸುತ್ತಿರುವ ಸುಳ್ಳುಗಳನ್ನೆಲ್ಲಾ ಸೂಕ್ತ ತಥ್ಯದೊಂದಿಗೆ ಹೊಡೆದು ಬಿಸಾಡಲಾಗುತ್ತಿದೆ. ಹೀಗಾಗಿಯೇ ಹಿಂದೂಗಳು ಹಿಂದೆಂದಿಗಿಂತಲೂ ಏಕವಾಗಿ ನಿಂತಿದ್ದಾರೆ. ಅದೇ ಎಡಪಂಥೀಯರಿಗೆ ಮತ್ತು ಇವರ ಎಲ್ಲಾ ಹೋರಾಟಗಳಿಗೂ ಎಲ್ಲ ಬಗೆಯ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ನೀಡುತ್ತಿರುವ ಕಾಂಗ್ರೆಸ್ಸಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

5

ಆಸೀಫಾಳ ಸುದ್ದಿ ಆರಂಭದಲ್ಲಿ ಕಾಂಗ್ರೆಸ್ಸಿಗೆ ಲಾಭದಾಯಕವೆನಿಸಿತ್ತು. ರಾಹುಲ್ ಬೀದಿಗೆ ಬಂದು ಹೋರಾಟ ಶುರು ಹಚ್ಚಿಕೊಂಡುಬಿಟ್ಟಿದ್ದರು. ಆದರೆ ಕಾಲಕ್ರಮದಲ್ಲಿ ಇದು ಹಿಂದೂಗಳ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಎಂದು ಅರಿವಾದೊಡನೆ ಹಿಂದೂಗಳೆಲ್ಲಾ ಒಗ್ಗಟ್ಟಾಗಿಬಿಟ್ಟರಲ್ಲ ಆಮೇಲೆ ರಾಹುಲ್ ನಿಧಾನವಾಗಿ ಹಿಂದಕ್ಕೆ ಬಂದುಬಿಟ್ಟರು. ನೆನಪಿಡಿ. ಇವರ್ಯಾರಿಗೂ ಬೇಕಾಗಿರುವುದು ಅಸೀಫಾಳ ನ್ಯಾಯವಲ್ಲ. 2019ರಲ್ಲಿ ಮೋದಿಯ್ನನೆದುರಿಸಲು ಚುನಾವಣೆಯ ವಸ್ತು ಬೇಕಷ್ಟೇ. ಯಾರು ಕೈ ಬಿಟ್ಟರೂ ಚಿಂತೆಯಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಿ ಆಸೀಫಾಳಿಗೆ ನ್ಯಾಯ ದೊರಕುವವರೆಗೂ ನಾವು ಹೋರಾಟ ಮಾಡೋಣ. ಅದು ಆಸೀಫಾಳಿಗೆ ಮಾತ್ರವಲ್ಲ ಬಾಗಲಕೋಟೆಯಲ್ಲಿ ಮೌಲಾನಾ ಒಬ್ಬರಿಂದ ಅತ್ಯಾಚಾರಕ್ಕೊಳಗಾದ 8 ವರ್ಷದ ಬಾಲಕಿಗೂ, ಬಿಹಾರದಲ್ಲಿ 40 ವರ್ಷದ ಮೊಹಮ್ಮದ್ ಮಿರಾಜ್ನಿಂದ ಅತ್ಯಾಚಾರಕ್ಕೊಳಗಾದ 11 ವರ್ಷದ ಹೆಣ್ಣುಮಗುವಿಗೂ, ಗುಜರಾತ್ನಲ್ಲಿ ಗುರುತೇ ಸಿಗದೇ ದೇಹದಾದ್ಯಂತ 80 ಗಾಯಗಳನ್ನು ಮಾಡಿಸಿಕೊಂಡು ಅತ್ಯಾಚಾರಕ್ಕೊಳಗಾಗಿ ಪ್ರಾಣ ಬಿಟ್ಟಿರುವ 8 ವರ್ಷದ ಮಗುವಿಗೂ ನ್ಯಾಯ ಸಿಗಬೇಕು. ನಾವು ಅತ್ಯಾಚಾರಕ್ಕೊಳಗಾದವಳ ಮತ್ತು ಅತ್ಯಾಚಾರಿಯ ಜಾತಿ-ಮತಗಳನ್ನು ನೋಡಿ ಹೋರಾಟ ಮಾಡುವುದು ಬೇಡ. ಬದಲಿಗೆ ಭಾರತವನ್ನು ಅತ್ಯಾಚಾರ ಮುಕ್ತ ರಾಷ್ಟ್ರ ಮಾಡಲಿಕ್ಕಾಗಿಯೇ ಸಂಘಟಿತರಾಗೋಣ.

Comments are closed.