ವಿಭಾಗಗಳು

ಸುದ್ದಿಪತ್ರ


 

ಅಸಹಿಷ್ಣುತೆ ಎನ್ನುವುದು ಕಾಂಗ್ರೆಸ್ಸಿಗೆ ರಕ್ತಗತ!

ಕಾಂಗ್ರೆಸ್ಸಿನ ಇತಿಹಾಸದಲ್ಲಿ ಪುಸ್ತಕಗಳನ್ನು ನಿಷೇಧಿಸುವುದು, ಸಿನಿಮಾಗಳನ್ನು ತಡೆಯುವುದು, ತಮಗಾಗದ ವ್ಯಕ್ತಿಗಳನ್ನು ಜೈಲಿಗೆ ತಳ್ಳಿ ಅಗತ್ಯಬಿದ್ದರೆ ಅವರ ಸದ್ದನ್ನೇ ಅಡಗಿಸಿಬಿಡುವುದು ಯಾವುದೂ ಇಲ್ಲವೆನ್ನುವಂತಿಲ್ಲ. ಸುಬ್ರಮಣಿಯನ್ ಸ್ವಾಮಿಯವರ ಪುಸ್ತಕಗಳು ತನಗೆ ಹಿಡಿಸುವುದಿಲ್ಲವೆಂಬ ಕಾರಣಕ್ಕೆ ಸುಬ್ರಮಣಿಯನ್ ಸ್ವಾಮಿಯವರನ್ನು ಕೆಲಸದಿಂದ ಕಿತ್ತುಹಾಕಿದವಳು ಇಂದಿರಾ.

ರಾಹುಲ್ ದುಬೈಗೆ ಹೋಗಿ ಭಾರತ ಅಸಹಿಷ್ಣು ರಾಷ್ಟ್ರವಾಗಿದೆ ಎಂದು ಭಾಷಣ ಮಾಡಿದ್ದಾನೆ. ಇದು ಪಕ್ವ ರಾಜಕಾರಣಿಯ ಲಕ್ಷಣವಲ್ಲ. ಎಳಸುತನದ ಸ್ಪಷ್ಟ ಚಿತ್ರಣ. ಆಂತರಿಕವಾಗಿ ಎಷ್ಟೇ ಕಾದಾಟಗಳಿರಲಿ ಪಕ್ಷ-ಪಕ್ಷಗಳು ಜುಟ್ಟು ಹಿಡಿದುಕೊಂಡು ಬಡಿದಾಡಲಿ. ಆದರೆ ಹೊರನಾಡಿನಲ್ಲಿ ನಿಂತಾಗ ಮಾತ್ರ ರಾಷ್ಟ್ರವನ್ನು ಎಂದಿಗೂ ಬಿಟ್ಟುಕೊಡಬಾರದು. ಮತ್ತು ತನ್ನ ರಾಷ್ಟ್ರದ ನಾಯಕನನ್ನು ಹೊರಗಿನ ರಾಷ್ಟ್ರಗಳ ನಾಯಕರು ಕೆಟ್ಟದಾಗಿ ಚಿತ್ರಿಸಿದಾಗ ಅದನ್ನು ಆನಂದಿಸಲೂಬಾರದು. ಈ ವಿಚಾರದಲ್ಲಿ ನರೇಂದ್ರಮೋದಿ ನಿಜಕ್ಕೂ ಆದರ್ಶಪ್ರಾಯವೇ. ಕಳೆದ ಚುನಾವಣೆಗೂ ಮುನ್ನ ನವಾಜ್ ಷರೀಫ್ ಭಾರತದ ಪ್ರಧಾನಮಂತ್ರಿ ಮನಮೋಹನ್ ಸಿಂಗರನ್ನು ಹಳ್ಳಿ ಹೆಂಗಸು ಎಂದು ಭಾರತದ ಪತ್ರಕತರ್ೆ ಬಖರ್ಾದತ್ಳ ಮುಂದೆ ಜರಿದಿದ್ದ. ಅದನ್ನು ನರೇಂದ್ರಮೋದಿ ಆನಂದಿಸಬಹುದಿತ್ತು. ಸ್ವತಃ ಬಖರ್ಾದತ್ ಅದನ್ನು ಬಾಯಿ ಚಪ್ಪರಿಸಿಕೊಂಡು ಭಾರತದ ಪತ್ರಕರ್ತರ ಮುಂದೆ ಹಂಚಿಕೊಂಡಿದ್ದಳು. ಚುನಾವಣಾ ರ್ಯಾಲಿಯಲ್ಲಿ ನರೇಂದ್ರಮೋದಿ ಪಾಕಿಸ್ತಾನದ ಅಧ್ಯಕ್ಷರಿಗೆ ಸರಿಯಾದ ಛೀಮಾರಿ ಹಾಕಿ ತನ್ನ ದೇಶದ ಪ್ರಧಾನಿಯನ್ನು ಹೀಗೆ ಅಗೌರವದಿಂದ ನೋಡುವುದನ್ನು ನಾನು ಸಹಿಸುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದರು. ಇಂತಹ ವಿಶಾಲವಾದ ಮನಸ್ಥಿತಿ ಪರಿವಾರದ ಅಹಂಕಾರವನ್ನುಂಡು ಬೆಳೆದ ರಾಹುಲ್ನಿಗೆ ಇರುವುದು ಸಾಧ್ಯವೇ ಇಲ್ಲ. ಹೀಗಾಗಿ ಆತನಿಗೆ ಇಡಿಯ ಭಾರತ ಅಸಹಿಷ್ಣುವಾಗಿದೆ ಎಂದೆನಿಸುತ್ತದೆ. ಆತ ದುಬೈನಲ್ಲಿ ಭಾರತವನ್ನು ಹೀಗೆ ಹೀಗಳೆಯುತ್ತಿರುವಾಗಲೇ ಇಲ್ಲಿ ಅವನದ್ದೇ ಪಕ್ಷದ ಕಾರ್ಯಕರ್ತರು ಸಂಜಯ್ ಬರು ಕೃತಿ ಆಧಾರಿತ ದ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ನ ಪ್ರದರ್ಶನವನ್ನು ವಿರೋಧಿಸಿ ಥಿಯೇಟರ್ನ ಪರದೆಗಳನ್ನೇ ಹರಿದು ಬಿಸಾಡಿದರು.

2

ಹಾಗೆ ನೋಡಿದರೆ ನಿಜವಾದ ಅಸಹಿಷ್ಣುತೆ ಕಾಂಗ್ರೆಸ್ಸಿನದ್ದು. ಪತ್ರಕರ್ತ ಆನಂದ್ ರಂಗನಾಥನ್ ಈ ಪ್ರಕರಣದ ನಂತರ ಟ್ವೀಟ್ಗಳ ಸರಮಾಲೆಯನ್ನೇ ಪ್ರಕಟಿಸಿ ಕಾಂಗ್ರೆಸ್ಸಿನ ಈ ಮನೋಭಾವನೆಯನ್ನು ಬಯಲಿಗೆಳೆದಿದ್ದಾರೆ. 2010ರ ವೇಳೆಗೆ ಅಶ್ವಿನ್ ಕುಮಾರರ ಇನ್ಶಾ ಅಲ್ಲಾ ಫುಟ್ಬಾಲ್ ಸಿನಿಮಾವನ್ನು ಕಾರಣವಿಲ್ಲದೇ ಬ್ಯಾನ್ ಮಾಡಿಸಿದ್ದು ಕಾಂಗ್ರೆಸ್ಸು. ಈ ನಿಷೇಧವನ್ನು ಹಿಂತೆಗೆದುಕೊಂಡ ನಂತರ ಆ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಬಂದಿತು. ಶ್ಯಾಂ ಬೆನಗಲ್ರ ನಿಶಾಂತ್ ಎಂಬ ಸಿನಿಮಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಹೆಸರಿಸಲ್ಪಟ್ಟ ನಂತರವೂ ಕಾಂಗ್ರೆಸ್ಸಿನ ಅವಕೃಪೆಗೆ ಒಳಗಾಗಿ ನಿಷೇಧಿಸಲ್ಪಟ್ಟಿತಂತೆ. ಸ್ವತಃ ನಿದರ್ೇಶಕ ಬೆನಗಲ್ ಈ ಚಿತ್ರ ನೋಡುವಂತೆ ಇಂದಿರಾಗಾಂಧಿಯ ಮನವೊಲಿಸಿದ ನಂತರವೇ ನಿಷೇಧ ತೆರವುಗೊಳಿಸಲ್ಪಟ್ಟಿದ್ದಂತೆ. ತೀರಾ ಇತ್ತೀಚೆಗೆ ಮಧ್ಯಪ್ರದೇಶದ ಕಾಂಗ್ರೆಸ್ ಕಮಿಟಿ ಅಲ್ಲಿನ ಬಿಜೆಪಿಯ ವಕ್ತಾರರು ತ್ರೀ ಇಡೀಯಟ್ಸ್ನ ಆಲ್ ಈಸ್ ವೆಲ್ ಎನ್ನುವ ಹಾಡನ್ನು ಪಪ್ಪು ಆಲ್ ಈಸ್ ವೆಲ್ ಎಂದು ತಿರುಚಿ ವಿಡಿಯೊ ಮಾಡಿ ರಾಹುಲ್ನನ್ನು ಅವಮಾನಿಸಿದ್ದಾರೆಂದು ಪೊಲೀಸ್ ಕಂಪ್ಲೆಂಟ್ ಕೊಟ್ಟಿತ್ತು. ಭೋಪಾಲಿನ ಸೈಬರ್ ಸೆಲ್ನಲ್ಲಿ ಸೆಕ್ಷನ್ 66ರ ಅಡಿಯಲ್ಲಿ ವಕ್ತಾರನನ್ನು ಬಂಧಿಸಬೇಕೆಂದು ರಂಪಾಟ ಮಾಡಿತ್ತು. ಇವರ ಅಟಾಟೋಪ ಹೊಸತಾಗಿರಲಿಲ್ಲ. ನೆಹರೂ ಕಾಲದಿಂದಲೂ ನಡೆದುಕೊಂಡು ಬಂದಿದೆ. ಟೈಮ್ಸ್ ಆಫ್ ಇಂಡಿಯಾ ಸಕರ್ಾರವನ್ನು ಕಟುವಾಗಿ ಪ್ರಶ್ನಿಸುತ್ತದೆ ಎಂಬ ಒಂದೇ ಕಾರಣಕ್ಕೆ ಸಕರ್ಾರಿ ಜಾಹಿರಾತುಗಳಿಂದ ಅದನ್ನು ನಿಷೇಧಿಸಲಾಗಿತ್ತು. ನೆಹರೂ ಟೈಮ್ಸ್ ಆಫ್ ಇಂಡಿಯಾ ತನ್ನನ್ನು ಟೀಕಿಸುವುದೇ ಕೆಲಸ ಮಾಡಿಕೊಂಡಿರುವುದರಿಂದ ಅದನ್ನು ಮನೆಗೂ ತರಬಾರದು ಎಂದು ಆಗ್ರಹಿಸಿಬಿಟ್ಟಿದ್ದರು. ನೆಹರೂ ಆಪ್ತವಲಯದ ಮಥಾಯೀಸ್ ಬರೆದಿರುವ ನೆಹರೂ ಯುಗದ ನೆನಪುಗಳು ಕೃತಿಯನ್ನು ಒಪ್ಪುವುದಾದರೆ ಇಂದಿರಾ ಸಿರಿವಂತ ವ್ಯಾಪಾರಿಯೊಬ್ಬನಿಂದ ದುಬಾರಿ ಸೀರೆಗಳನ್ನು ಉಡುಗೊರೆಯಾಗಿ ಪಡೆದಿದ್ದಾಳೆ ಎಂದು ವರದಿ ಮಾಡಿದ್ದ ಬ್ಲಿಟ್ಸ್ ಪತ್ರಿಕೆ ಕ್ಷಮೆ ಕೇಳಲೇಬೇಕೆಂದು ಆಗ್ರಹಿಸಿದ್ದರಂತೆ. ಮುಂದೊಮ್ಮೆ ಇನ್ಸಾಫ್ ಎಂಬ ಹೆಸರಿನಿಂದ ಬರೆಯುತ್ತಿದ್ದ ಪತ್ರಕರ್ತನೊಬ್ಬ ನೆಹರೂ ಬಗ್ಗೆ ಟೀಕಿಸುತ್ತಿದ್ದಾನೆ ಎಂದು ಗೊತ್ತಾದೊಡನೆ ಹಿಂದೂಸ್ತಾನ್ ಟೈಮ್ಸ್ ಪತ್ರಿಕಾ ಕಛೇರಿಗೆ ಮಾತನಾಡಿದ ನೆಹರೂ ಕೂಗಾಡಿ ಸಂಪಾದಕರನ್ನೇ ಬದಲಾಯಿಸಿದ ಘಟನೆಗಳು ಅದೇ ಕೃತಿಯಲ್ಲಿ ಉಲ್ಲೇಖವಾಗಿವೆ. ನೆಹರೂರವರನ್ನು ಚೀನಾ ಯುದ್ಧದ ಸಂದರ್ಭದಲ್ಲಿ ಕಠೋರವಾಗಿ ಟೀಕಿಸಿದ್ದಲ್ಲದೇ ಅವರು ರಾಜಿನಾಮೆ ಕೊಡಬೇಕೆಂದು ಆಗ್ರಹಿಸಿದ್ದ ನರೇಂದ್ರದತ್ತ, ರೂಪಾ ನಾರಾಯಣ್ ಮತ್ತು ಧರ್ಮಪಾಲ್ರನ್ನು ಬಂಧಿಸಿ ಜೈಲಿಗೇ ತಳ್ಳಲಾಗಿತ್ತು.

ಪರಂಪರೆ ಮುಂದುವರೆಯಲೇಬೇಕಲ್ಲ. ರಾಜೀವ್ಗಾಂಧಿ ಇನ್ಸ್ಟಿಟ್ಯೂಟ್ ಫಾರ್ ಕಾಂಟೆಂಪರರಿ ರಿಸಚರ್್ ಸಂಸ್ಥೆಯ ಮುಖ್ಯಸ್ಥರು ದೇಶದ ಸವರ್ೇ ನಡೆಸಿ ಗುಜರಾತಿಗೆ ನಂಬರ್ ಒನ್ ಪಟ್ಟ ಕೊಟ್ಟಿದ್ದರಿಂದಾಗಿ ಕುಪಿತ ಸೋನಿಯಾ ಆ ಮುಖ್ಯಸ್ಥರನ್ನೇ ಜಾಗ ಖಾಲಿ ಮಾಡಿಸಿದ್ದರು. ಅದಕ್ಕೂ ಮುನ್ನ ಈ ಸಂಸ್ಥೆಯ ಕಾರ್ಯಕ್ರಮವೊಂದಕ್ಕೆ ಆರ್ಎಸ್ಎಸ್ ವಿಚಾರಧಾರೆಯ ಶೇಷಾದ್ರಿಚಾರಿಯನ್ನು ಕರೆಸಿದ್ದಾರೆಂದು ಗೊತ್ತಾದೊಡನೆ ಸೋನಿಯಾ ಕಛೇರಿಯಿಂದ ಮುಖ್ಯಸ್ಥರಿಗೆ ಕರೆ ಹೋಗಿತ್ತಂತೆ. ಆಹ್ವಾನ್ ಪತ್ರಿಕೆಯಿಂದ ಚಾರಿಯವರ ಹೆಸರನ್ನು ಬಿಟ್ಟುಬಿಡಬೇಕು ಅಂತ. ಆತ ನಿರಾಕರಿಸಿದಾಗ ಚಾರಿಯವರ ಭಾಷಣಕ್ಕೂ ಮುನ್ನ ಅವರು ಮಾತನಾಡಲಿರುವ ವಿಚಾರದ ಕುರಿತಂತೆ ಹಸ್ತಲಿಖಿತ ಪ್ರತಿಯನ್ನು ತನಗೆ ತಲುಪಿಸಬೇಕೆಂದು ಸೋನಿಯಾ ಆಗ್ರಹಿಸಿದ್ದರು. ಊರೆಲ್ಲಾ ಇತರರಿಗೆ ಬುದ್ಧಿವಾದ ಹೇಳುವ ರಾಹುಲ್ ಈ ದೇಶದ ಕಾಂಗ್ರೆಸ್ ನಂಬುವ ವಿಚಾರಧಾರೆಗಿಂತಲೂ ಭಿನ್ನವಾದ ವೈಚಾರಿಕ ಎಳೆಯನ್ನು ಹೊಂದಿರುವ ದೊಡ್ಡದೊಂದು ಬಲಪಂಥೀಯ ಗುಂಪನ್ನೇ ಅವರು ನಿರಾಕರಿಸಿದ್ದೇಕೆ ಎಂಬುದಕ್ಕೆ ಮೊದಲು ಉತ್ತರ ಕೊಡಲಿ. ಅಥವಾ ಅಧಿಕಾರದಲ್ಲಿದ್ದಾಗ ತಾವು ಮಾಡಿದ್ದೆಲ್ಲವೂ ಸರಿ ಎನ್ನುವ ದುರಹಂಕಾರದ ಭಾವನೆಯೋ ಅದು.

3

ಕಾಂಗ್ರೆಸ್ಸಿನ ಈ ವರ್ತನೆ ಇಷ್ಟಕ್ಕೇ ನಿಂತಿದ್ದಲ್ಲ. ರಿಲಯನ್ಸ್ ಮತ್ತು ಸಕರ್ಾರದ ನಡುವಿನ ನೈತಿಕವಲ್ಲದ ಸಂಬಂಧಗಳ ಕುರಿತಂತೆ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ಬರೆದಿತ್ತು ಎಂಬ ಕಾರಣಕ್ಕೆ ಅದರ ಮಾಲೀಕ ಗೋಯೆಂಕಾ ಅವರ ಮನೆಯ ಮೇಲೆ ದಾಳಿ ನಡೆಸಿತ್ತು ಸಕರ್ಾರ. ಒಂದಿನಿತೂ ತಲೆ ಕೆಡಿಸಿಕೊಳ್ಳದ ಪತ್ರಿಕೆ ದಮನ ನೀತಿಗಳಿಗೆಲ್ಲಾ ಬಗ್ಗುವ ಜಾಯಮಾನ ತಮ್ಮದ್ದಲ್ಲ ಎಂದೇ ಎಚ್ಚರಿಕೆಕೊಟ್ಟಿತ್ತು. ತೀರಾ ಇತ್ತೀಚೆಗೆ ಮೊಬೈಲ್ ಧಾರವಾಹಿಗಳಲ್ಲಿ ರಾಜೀವ್ಗಾಂಧಿಯನ್ನು ನವಾಜ್ ಸಿದ್ದಿಕಿ ಫಟ್ಟು ಎಂದು ಸಂಬೋಧಿಸಿದ್ದಾನೆ ಎಂಬ ಒಂದೇ ಕಾರಣಕ್ಕೆ ಕಾಂಗ್ರೆಸ್ ಅಧಿಕೃತವಾಗಿ ದೂರು ಕೊಟ್ಟು ಎಫ್ಐಆರ್ ದಾಖಲಿಸುವಂತೆ ನೋಡಿಕೊಂಡಿತ್ತು. ಬೋಲಾನಾಥ್ ಪಾಂಡೆ ಮತ್ತು ದೇವೇಂದ್ರ ಪಾಂಡೇ ಎಂಬ ಇಬ್ಬರು ತರುಣರು ಪಾಟ್ನಾದತ್ತ ಹೊರಟಿದ್ದ ವಿಮಾನವನ್ನು ಅಪಹರಿಸಿ ಇಂದಿರಾಗಾಂಧಿಯ ಮೇಲಿದ್ದ ಎಲ್ಲ ಕೇಸುಗಳನ್ನು ಹಿಂಪಡೆಯಬೇಕೆಂಬ ಬೇಡಿಕೆ ಮಂಡಿಸಿದ್ದರು. ಅವರದ್ದೇನೋ ಹುಚ್ಚು ಎನ್ನೋಣ. ಆದರೆ ದೇಶದ ಅತ್ಯಂತ ಹಳೆಯ ಕಾಂಗ್ರೆಸ್ ಪಾಟರ್ಿಗೇನು ಮಂಕು ಕವಿದಿತ್ತೇ. 1980ರಲ್ಲಿ ಈ ಇಬ್ಬರೂ ಪಾಂಡೆಗಳಿಗೆ ಉತ್ತರಪ್ರದೇಶದಲ್ಲಿ ಟಿಕೆಟ್ ಅನ್ನು ಕೊಟ್ಟು ಶಾಸಕರನ್ನಾಗಿ ಮಾಡಿಸಿಕೊಂಡಿತ್ತು. ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿ ಕಾಂಗ್ರೆಸ್ ಪರವಾಗಿ ವಾದ ಮಂಡಿಸುತ್ತಿದ್ದ ವಕೀಲರು ಸಾವಿರಗಟ್ಟಲೆ ಪ್ರಿಂಟ್ಔಟ್ಗಳನ್ನು ನ್ಯಾಯಾಧೀಶರ ಮುಂದಿರಿಸಿ ಸುಬ್ರಮಣಿಯನ್ ಸ್ವಾಮಿಯವರು ನ್ಯಾಷನಲ್ ಹೆರಾಲ್ಡ್ನ ಕುರಿತಂತೆ ಟ್ವೀಟ್ ಮಾಡದಿರುವಂತೆ ಆದೇಶಿಸಬೇಕೆಂದು ಕೇಳಿಕೊಂಡಿದ್ದರು. ಸ್ವಾಮಿಯವರ ಟ್ವೀಟನ್ನು ಸಹಿಸಿಕೊಳ್ಳಲಾಗದ ಕಾಂಗ್ರೆಸ್ಸಿಗೆ ಈ ದೇಶದೊಳಗಿನ ಸಹಿಷ್ಣುತೆಯ ಕುರಿತಂತೆ ಮಾತನಾಡುವ ಅಧಿಕಾರವಾದರೂ ಇದೆಯೇ. ಸ್ವತಃ ರಾಹುಲ್ ಈ ಹೊತ್ತಿನಲ್ಲಿ ಯಾವ ಪತ್ರಿಕೆಗಳೂ ನ್ಯಾಷನಲ್ ಹೆರಾಲ್ಡ್ನ ಕುರಿತಂತೆ ವರದಿ ಪ್ರಕಟಿಸದಿರುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಇದೇ ಪ್ರಕರಣದ ಮೇಲೆ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಹೊರಗಿದ್ದ ರಾಹುಲ್ ಈ ರೀತಿ ಕೇಳಿದ್ದು ಹಾಸ್ಯಾಸ್ಪದವೇ ಆಗಿತ್ತು. ಸತ್ಯವನ್ನು ಮರೆಮಾಚುವ, ಜಗತ್ತಿನಿಂದ ಮುಚ್ಚಿಡುವ ಮತ್ತು ಸುಳ್ಳನ್ನೇ ಪದೇ ಪದೇ ಹೇಳಿ ಸತ್ಯವೆಂದು ನಂಬಿಸುವ ಕಾಂಗ್ರೆಸ್ಸಿನ ಚಾಳಿ ಹೊಸತಲ್ಲ. ಅದು ಪರಂಪರಾನುಗತವಾಗಿ ರಾಹುಲ್ಗೆ ಬಂದಿರುವಂಥದ್ದು.

ಕಾಂಗ್ರೆಸ್ಸಿನ ಇತಿಹಾಸದಲ್ಲಿ ಪುಸ್ತಕಗಳನ್ನು ನಿಷೇಧಿಸುವುದು, ಸಿನಿಮಾಗಳನ್ನು ತಡೆಯುವುದು, ತಮಗಾಗದ ವ್ಯಕ್ತಿಗಳನ್ನು ಜೈಲಿಗೆ ತಳ್ಳಿ ಅಗತ್ಯಬಿದ್ದರೆ ಅವರ ಸದ್ದನ್ನೇ ಅಡಗಿಸಿಬಿಡುವುದು ಯಾವುದೂ ಇಲ್ಲವೆನ್ನುವಂತಿಲ್ಲ. ಸುಬ್ರಮಣಿಯನ್ ಸ್ವಾಮಿಯವರ ಪುಸ್ತಕಗಳು ತನಗೆ ಹಿಡಿಸುವುದಿಲ್ಲವೆಂಬ ಕಾರಣಕ್ಕೆ ಸುಬ್ರಮಣಿಯನ್ ಸ್ವಾಮಿಯವರನ್ನು ಕೆಲಸದಿಂದ ಕಿತ್ತುಹಾಕಿದವಳು ಇಂದಿರಾ. 22 ವರ್ಷಗಳ ಕಾಲ ಕೋಟರ್ಿನಲ್ಲಿ ಬಡಿದಾಡಿ ಕೊನೆಗೂ ನ್ಯಾಯ ಪಡೆದುಕೊಂಡಿದ್ದರು ಸ್ವಾಮಿ. ರುತ್ವಿಕ್ ಘಾಟಕರ ಲೆನಿನ್ ಮೇಲಿನ ಸಾಕ್ಷಿ ಚಿತ್ರ ತಾನು ನೋಡುವವರೆಗೂ ಬಿಡುಗಡೆ ಮಾಡಬಾರದೆಂದು ಇಂದಿರಾ ಆದೇಶಿಸಿದ್ದಳು. ಚೀನಾದ ತಿನ್ನಾಮ್ಮೆನ್ ಚೌಕದಲ್ಲಿ ಸಾವಿರಾರು ಜನರ ಹತ್ಯೆಯಾದ ದೃಶ್ಯಗಳನ್ನು ತೋರಿಸದಿರುವಂತೆ ಸಕರ್ಾರಿ ಮಾಧ್ಯಮಗಳಿಗೆ ತಡೆಹಿಡಿದಿದ್ದು ಕಾಂಗ್ರೆಸ್ ಸಕರ್ಾರವೇ. ದೇವದೂಷಣೆಯ ಕಾನೂನನ್ನು ಜಾರಿಗೆ ತಂದು ಯಾವುದಾದರೂ ಮತದ ಕುರಿತಂತೆ ಪ್ರಶ್ನೆ ಕೇಳುವುದನ್ನು ತಪ್ಪೆಂದು ಹೇಳುವ, ಆ ಮೂಲಕ ಜೀವಾವಧಿ ಶಿಕ್ಷೆಯನ್ನು ಅದಕ್ಕೆ ಕೊಡುವ ಭಯಾನಕವಾದ ಕಾನೂನನ್ನು ಜಾರಿಗೆ ತಂದದ್ದೇ ಕಾಂಗ್ರೆಸ್ಸು. ಇದರ ಲಾಭವನ್ನು ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರು ಪಡೆದುಕೊಂಡರೆಂಬುದನ್ನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ. ರೋಮ್ರಾಜ್ಯ ಮತ್ತು ರಾಮರಾಜ್ಯ ಎಂಬ ಲೇಖನವನ್ನು ಬರೆದದ್ದಕ್ಕೆ ಪತ್ರಕರ್ತ ಕಂಚನ್ಗುಪ್ತ ಅವರನ್ನು ಬೆದರಿಸಿದ್ದು ಸೋನಿಯಾಳ ಆಪ್ತ ಕಾರ್ಯದಶರ್ಿ ವಿನ್ಸೆಂಟ್ ಜಾಜರ್್.

4

ಕಾಂಗ್ರೆಸ್ಸಿನ ಈ ರೋಗ ಪರಿವಾರದ ಜನರಿಗೆ ಮಾತ್ರ ಎಂದುಕೊಳ್ಳಬೇಡಿ. ಅದು ಪಕ್ಷಕ್ಕೆ ರಕ್ತಗತವಾಗಿರುವಂಥದ್ದು. ಮನಮೋಹನ್ ಸಿಂಗರು ಪ್ರಧಾನಿಯಾಗಿದ್ದಾಗ ಎನ್ಡಿಟಿವಿಯಲ್ಲಿ ಯುಪಿಎ ಸಕರ್ಾರದ ಕುರಿತಂತೆ ಟೀಕಾತ್ಮಕವಾದ ವರದಿ ಬರುವುದನ್ನು ಕಂಡು ಪ್ರಧಾನ ಸಂಪಾದಕ ಪ್ರಣಯ್ರಾಯ್ಗೆ ಚೆನ್ನಾಗಿ ಝಾಡಿಸಿದ್ದರು. ಕೊನೆಗೆ ಇಡಿಯ ವರದಿಯನ್ನು ಬದಲಾಯಿಸಿ ಟೀಕೆಯನ್ನು ಹೃಸ್ವಗೊಳಿಸಿ ಅದನ್ನು ಪ್ರಕಟಪಡಿಸಬೇಕಾಯ್ತು. ಕಾನೂನು ಮಂತ್ರಿ ವೀರಪ್ಪಮೊಯ್ಲಿ ಜೋಸೆಫ್ ಲೆಲಿವೆಲ್ಡ್ನ ಪುಸ್ತಕವನ್ನು ನಿಷೇಧಿಸುವ ಆತುರದಲ್ಲಿದ್ದಾಗ ಲೇಖಕ ಮತ್ತು ಮಹಾತ್ಮಾ ಗಾಂಧೀಜಿಯವರ ಮೊಮ್ಮಗ ಬೇಡಿಕೊಳ್ಳುವ ಪರಿಸ್ಥಿತಿ ಬಂದಿತ್ತು. ಅರವಿಂದರ ಮೇಲೆ ಪೀಟರ್ ಹಿ ಪುಸ್ತಕದ ಕಥೆಯೂ ಹೀಗೇ ಆಯ್ತು. ಕೊನೆಗೂ ಅದರ ಮೇಲಿನ ನಿಷೇಧ ತೆರವುಗೊಳ್ಳಲೇ ಇಲ್ಲ. ಯುಪಿಎಯ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ದ ಡಿಸೆಂಟ್ ಆಫ್ ಏರ್ ಇಂಡಿಯಾ ಎಂಬ ಕೃತಿಯಲ್ಲಿ ತನ್ನ ನಿಧರ್ಾರಗಳನ್ನು ಸಾಧಾರವಾಗಿ ಪ್ರಶ್ನಿಸಲಾಗಿದೆ ಎಂಬ ಒಂದೇ ಕಾರಣಕ್ಕೆ ಪ್ರಕಾಶಕರ ಮೂಲಕ ಪುಸ್ತಕವನ್ನು ಹಿಂಪಡೆಯುವಂತೆ ಮಾಡಿಬಿಟ್ಟಿದ್ದರು.

ಕನರ್ಾಟಕದ ಕಥೆ ಕೇಳುವುದೇ ಬೇಡ. ಟಿಪ್ಪುವಿನ ಜಯಂತಿಯ ಹಿನ್ನೆಲೆಯಲ್ಲಿ ಪ್ರಶ್ನಿಸಲೇಬಾರದೆಂಬ ದುರಹಂಕಾರಕ್ಕೆ ಒಳಗಾಗಿತ್ತು ಸಿದ್ದರಾಮಯ್ಯನ ಸಕರ್ಾರ. ಅದೆಷ್ಟೋ ಬಲಪಂಥೀಯ ಪತ್ರಕರ್ತರು ತಮ್ಮ ದನಿಯನ್ನೇ ಕಳೆದುಕೊಳ್ಳವಂತೆ ಪ್ರಹಾರ ನಡೆಸಿದ್ದ ಆತ. ತೀರಾ ಇತ್ತೀಚೆಗೆ ಪತ್ರಕರ್ತ ಸಂತೋಷ್ ತಮ್ಮಯ್ಯ ಟಿಪ್ಪು ಜಯಂತಿಯ ಹೊತ್ತಿನಲ್ಲಿ ಮಾಡಿದ ಭಾಷಣಕ್ಕೆ ಪ್ರತಿಯಾಗಿ ಅರ್ಧರಾತ್ರಿ ಮಾವನ ಮನೆಗೆ ನುಗ್ಗಿ ಅವನನ್ನು ಬಂಧಿಸಿಕೊಂಡು ತರಲಾಗಿತ್ತು. ಅಜಿತ್ ಹನುಮಕ್ಕನವರ್ ಒಂದಷ್ಟು ಪ್ರಶ್ನೆಗಳನ್ನು ಚಚರ್ೆಯ ವೇಳೆ ಕೇಳಿದರೆಂಬ ಒಂದೇ ಕಾರಣಕ್ಕೆ ಕಾಂಗ್ರೆಸ್ಸಿನ ಮಂತ್ರಿಗಳೇ ಮುಂದೆ ನಿಂತು ಅವರ ಮೇಲೆ ಎಫ್ಐಆರ್ ದಾಖಲಾಗುವಂತೆ ನೋಡಿಕೊಂಡಿದ್ದರು. ಬಲಪಂಥೀಯ ಮಿತ್ರರು ಸ್ವಲ್ಪ ಯಾಮಾರಿದ್ದರೂ ಅಜಿತ್ ಈ ವೇಳೆಗಾಗಲೇ ಜೈಲಿನಲ್ಲಿರುತ್ತಿದ್ದರು.

5

ಇದು ಉದ್ದಕ್ಕೂ ಹರಡಿಕೊಂಡಿರುವ ಒಂದಷ್ಟು ಪ್ರಕರಣಗಳಷ್ಟೇ. ಪ್ರತಿ ರಾಜ್ಯದ ಇತಿಹಾಸಗಳನ್ನು ಕೆದಕಿದಾಗಲೂ ಕಾಂಗ್ರೆಸ್ಸಿನ ಕರ್ಮಕಾಂಡಗಳು ಇನ್ನಷ್ಟು ಬಯಲಿಗೆ ಬರುತ್ತವೆ. ಅವರ ಅಸಹಿಷ್ಣುತೆ ದೃಗ್ಗೋಚರವಾಗುತ್ತದೆ. ಅಧಿಕಾರದಲ್ಲಿರಲಿಕ್ಕಾಗಿ ಏನು ಬೇಕಾದರೂ ಮಾಡಬಲ್ಲ ಜನ ಇವರು. ಸಿದ್ದರಾಮಯ್ಯನ ಕಾಲಕ್ಕೆ ವಿಶ್ವಹಿಂದೂ ಪರಿಷತ್ನ ಮುಖ್ಯಸ್ಥರಾದ ಪ್ರವೀಣ್ ಬಾಯಿ ತೊಗಾಡಿಯಾ ಅವರ ಭಾಷಣಕ್ಕೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಿಷೇಧ ಹಾಕಲಾಗಿತ್ತು. ಆದರೆ, ಅದೇ ತೊಗಾಡಿಯಾರನ್ನು ಗುಜರಾತಿನ ಚುನಾವಣೆಯಲ್ಲಿ ರಾಹುಲ್ ಮತಕ್ಕಾಗಿ ಭೇಟಿ ಮಾಡಲು ಹೋಗಿದ್ದನ್ನು ಯಾರು ವಿರೋಧಿಸಲೇ ಇಲ್ಲ. ಅಂದರೆ ತಮಗೆ ಬೇಕಾದಾಗ ಎಲ್ಲರನ್ನೂ ಉಪಯೋಗಿಸಿಕೊಳ್ಳುವ, ತಮ್ಮ ವಿರೋಧಕ್ಕೆ ನಿಂತವರನ್ನು ನಾಶಮಾಡಿಬಿಡುವ ಚಾಳಿ ಕಾಂಗ್ರೆಸ್ಸಿಗೆ ರಕ್ತಗತವಾಗಿತ್ತು. 12 ವರ್ಷಗಳ ಕಾಲ ನರೇಂದ್ರಮೋದಿಯವರ ವಿರುದ್ಧ ಸಿಬಿಐ ಅನ್ನು ಛೂಬಿಟ್ಟು ಅವರನ್ನು ಕೊಲೆಗಡುಕರೆಂದು ಬಿಂಬಿಸಲು ಪ್ರಯತ್ನಿಸಿದ ನಂತರವೂ ಮೋದಿ ಸಿಬಿಐ ಅನ್ನು ಧಿಕ್ಕರಿಸಿರಲಿಲ್ಲ. ಆದರಿಂದು ಪುರಾವೆಗಳ ಸಹಿತ ಒಬ್ಬೊಬ್ಬರನ್ನು ಒಳತಳ್ಳುವ ತಯಾರಿ ನಡೆಸುತ್ತಿದ್ದಂತೆ ಕಾಂಗ್ರೆಸ್ಸು ಸಿಬಿಐನ ವಿರುದ್ಧ ರಂಪಾಟ ನಡೆಸುತ್ತಿದೆ. ಇದು ನಿಜವಾದ ಅಸಹಿಷ್ಣುತೆ. ಇವೆಲ್ಲದರ ಕುರಿತಂತೆ ರಾಹುಲ್ ಮಾತನಾಡಬಲ್ಲನಾದರೆ ನಿಜಕ್ಕೂ ಚೆನ್ನಾಗಿರುತ್ತಿತ್ತು. ಅದೂ ಸರಿ ಬಿಡಿ. ರಾಹುಲ್ನಿಂದ ನಾವು ಬಹಳಷ್ಟನ್ನು ನಿರೀಕ್ಷಿಸುವಂತೆಯೂ ಇಲ್ಲ; ಪಾಪ!

Comments are closed.