ವಿಭಾಗಗಳು

ಸುದ್ದಿಪತ್ರ


 

ಆತ್ಮನಿರ್ಭರತೆಯ ಯಜ್ಞಕ್ಕೆ ನಾವೇ ಸಮಿತ್ತು!

ನಮ್ಮ ಕಾಲೇಜಿನಲ್ಲಿ ಓದುವ ವಿದ್ಯಾಥರ್ಿಗಳು ಒಂದಷ್ಟು ಕೋಡಿಂಗ್ ಕಲಿತು ಯಾವುದಾದರೂ ಸಾಫ್ಟ್ವೇರ್ ಕಂಪೆನಿ ಕೈ ಹಿಡಿದರೆ ಸಾಕೆಂದು ಕಾಯುತ್ತ ಕುಳಿತಿರುತ್ತಾರೆ. ತನ್ನದ್ದೇ ಆದ ಆವಿಷ್ಕಾರದಲ್ಲಿ ತಾನು ತೊಡಗಬೇಕು, ಹೊಸ ಕಂಪೆನಿ ನಿಮರ್ಿಸಬೇಕು ಎಂಬ ಕಲ್ಪನೆಯಲ್ಲಿ ಅವನಿಲ್ಲವೇ ಇಲ್ಲ. ಇವರನ್ನು ಆತ್ಮನಿರ್ಭರ ಭಾರತಕ್ಕೆ ತಕ್ಕಂತೆ ಪುನರ್ ರೂಪಿಸಬೇಕಾದ ಹೊಣೆಗಾರಿಕೆ ನಮ್ಮ ಮೇಲೆಯೇ ಇದೆ

ಕೊರೊನಾ ಕೈ ಮೀರುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಬಲು ಬೇಗ ಭಾರತ ಅಮೇರಿಕಾವನ್ನು ದಾಟಿಬಿಡುವುದೇನೋ ಎಂಬ ಭಯ ಕಾಡುತ್ತಿದೆ. ಯಾವುದನ್ನು ಮಾಧ್ಯಮಗಳಲ್ಲಿ ಬೇರೆ ದೇಶಗಳಲ್ಲಿ ನೋಡುತ್ತಿದ್ದೆವೋ ಅವೆಲ್ಲಾ ಭಾರತಕ್ಕೆ ವಕ್ಕರಿಸಿಕೊಳ್ಳುವುದು ಮುನ್ಸೂಚನೆಯಾಗಿ ಕಾಣುತ್ತಿದೆ. ಒಂದೆಡೆ ಕೊರೋನಾ ಪ್ರಜೆಗಳನ್ನು ನಿಷ್ಕ್ರಿಯಗೊಳಿಸುತ್ತಿದ್ದರೆ ಮತ್ತೊಂದೆಡೆ ಇದರ ಸೈಡ್ ಎಫೆಕ್ಟ್ನಂತೆ ವ್ಯಾಪಾರೋದ್ಯಮಗಳು ಕುಸಿದುಹೋಗಿ ಅವ್ಯಕ್ತವಾದ ಭಯವೊಂದು ಕಾಡುತ್ತಿದೆ. ಕೊರೋನಾ ಮುಗಿದನಂತರ ಇದು ಚೇತರಿಸಿಕೊಳ್ಳುವುದಾದರೂ ಹೇಗೆ ಎನ್ನುವ ಪ್ರಶ್ನೆ ಈಗಾಗಲೇ ಅನೇಕರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿಯೇ ಯುವಾಬ್ರಿಗೇಡ್ ಈ ಬಾರಿಯ ಫಿಫ್ತ್ಪಿಲ್ಲರ್ ಕಾರ್ಯಕ್ರಮವನ್ನು ಫೈಟ್ಬ್ಯಾಕ್ ಎನ್ನುವ ಹೆಸರಿನಲ್ಲಿ ವಿಶೇಷವಾಗಿ ಆಯೋಜಿಸಿತ್ತು.

7

ಉದ್ಯಮಿಗಳ ಸಮಸ್ಯೆ ಭಿನ್ನ-ಭಿನ್ನ ಸ್ವರೂಪದ್ದು. ಅಂಗಡಿಗಳ ಬಾಡಿಗೆ ಕಟ್ಟಬೇಕು, ಕೆಲಸದವರಿಗೆ ಸಂಬಳ ಕೊಡಬೇಕು, ಸಂಬಳ ನಿಲ್ಲಿಸಿ ಅವರನ್ನು ಊರಿಗೆ ಕಳಿಸಿಬಿಟ್ಟರೆ ಮರಳಿ ಬರುತ್ತಾರೋ ಇಲ್ಲವೋ ಎನ್ನುವ ಆತಂಕ. ಜೊತೆಯಲ್ಲಿ ಉಳಿಸಿಕೊಳ್ಳೋಣವೆಂದರೆ ಕೊರೋನಾ ಎಷ್ಟು ದಿನ ಎಂಬ ವಿಚಾರವೇ ಗೊತ್ತಿಲ್ಲದ ಅನಿಶ್ಚಿತತೆ. ಕೆಲವು ವಸ್ತುಗಳ ಶೆಲ್ಫ್ ಲೈಫ್ ಸುದೀರ್ಘವಾದದ್ದಾದರೆ ಇನ್ನೂ ಕೆಲವು ತಿಂಗಳು, ವಾರ ಅಥವಾ ಗಂಟೆಗಳಲ್ಲಿ ಹಾಳಾಗುವಂಥದ್ದು. ಮುನ್ಸೂಚನೆ ಕೊಡದೇ ಲಾಕ್ಡೌನ್ ಆರಂಭಿಸಿದಾಕ್ಷಣ ಹೊಟೆಲ್ ಉದ್ಯಮ ಕಳೆದುಕೊಂಡ ಹಣ ಅಪಾರವಾದ್ದು. ಲಾಕ್ಡೌನ್ ತೆರವುಗೊಳಿಸಿದ ನಂತರ ಮತ್ತೆ ಅದನ್ನು ಮುಚ್ಚುವ ಮಾತುಗಳನ್ನು ಆಡುತ್ತಿರುವುದನ್ನು ಕೇಳಿದರೆ ದೊಡ್ಡ-ದೊಡ್ಡ ಉದ್ಯಮಗಳು ಕಣ್ಣೀರಿಡುವ ಸ್ಥಿತಿಯಲ್ಲಿದೆ. ವಿಶೇಷವೆಂದರೆ ಇಂತಹ ಸಂದರ್ಭದಲ್ಲೂ ಅನೇಕ ಉದ್ಯಮಿಗಳು ವ್ಯಾಪಾರವನ್ನು ಜೀವಂತವಾಗಿಟ್ಟಿರಲು ಹೊಸ-ಹೊಸ ಆಲೋಚನೆಗಳನ್ನು ಮಾಡಿದ್ದಾರೆ. ಲಾಕ್ಡೌನ್ ಮುಗಿಯುವ ಸ್ಥಿತಿ ಕಾಣದೇ ಹೋದಾಗ, ಲಾಕ್ಡೌನ್ ಮುಗಿದ ನಂತರವೂ ಹಿಂದಿನ ಸ್ಥಿತಿಗೆ ಮರಳುವುದು ಸುಲಭ ಸಾಧ್ಯವಲ್ಲ ಎಂದು ಅರಿವಾದಾಗ ಅನೇಕ ಉದ್ಯಮಿಗಳು ತಮ್ಮದ್ದೇ ಆದ ಮಾರ್ಗವನ್ನು ರೂಪಿಸಿಕೊಂಡಿದ್ದಾರೆ. ಸ್ವಾತಿಗ್ರೂಪ್ನ ಹೊಟೆಲ್ಗಳ ಮಾಲೀಕರಾದ ಗೋಪಾಲ್ ಶೆಟ್ಟಿಯವರು ತಮ್ಮ ಹೊಟೆಲಿನ ಮೇಲ್ಭಾಗದಲ್ಲಿರುವ ಮದುವೆಯ ಹಾಲನ್ನು 40-50 ಜನರು ಸೇರುವ ಮದುವೆಯ ಆವರಣವಾಗಿ ಪರಿವತರ್ಿಸಿ ಕಡಿಮೆ ಬೆಲೆಗೆ ಅದನ್ನು ಬಾಡಿಗೆಗೆ ಕೊಡುವ ಪ್ರಯತ್ನ ಆರಂಭಿಸಿಬಿಟ್ಟಿದ್ದಾರೆ. ಈ ಲಾಕ್ಡೌನಿನ ಅವಧಿಯಲ್ಲಿಯೇ ಆರೆಂಟು ಮದುವೆಗಳನ್ನು ಮಾಡಿ ವಹಿವಾಟನ್ನು ನಿಲ್ಲಿಸದೇ ಜೀವಂತವಾಗಿರಿಸಿದ್ದಾರೆ. ಮನೆ-ಮನೆಗೂ ಊಟ ತಲುಪಿಸುವ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದು ತಮ್ಮ ಬಳಿಯಿದ್ದ ಕೆಲಸಗಾರರು ದುಡಿಯಲು ಬೇಕಾದ ವ್ಯವಸ್ಥೆಯನ್ನು ರೂಪಿಸಿಕೊಟ್ಟಿದ್ದಾರೆ. ಹೊಟೆಲ್ನ ಉದ್ಯಮದವರಿಗೆ ಈ ಬಗೆಯ ಹೊಸ ಉಪಾಯಗಳು ಅನಿವಾರ್ಯ. ಈ ಉದ್ಯಮದಷ್ಟೇ ಹೊಡೆತ ತಿಂದಿರುವ ಮತ್ತೊಂದು ವಹಿವಾಟು ಟ್ಯಾಕ್ಸಿಗಳದ್ದು. ಕ್ವಿಕ್ರೈಡ್ನ ಶೋಭನಾ ತಮ್ಮ ಕಾರ್ಪೂಲಿಂಗ್ ಚಿಂತನೆಯನ್ನು ವೈದ್ಯರುಗಳೇ ಮೊದಲಾದ ಕೊರೋನಾ ವಾರಿಯಸರ್್ಗಳಿಗೆ ವಿಸ್ತರಿಸಿ ವ್ಯವಸ್ಥೆ ಪೂರ್ಣ ಕುಸಿಯದಂತೆ ನೋಡಿಕೊಂಡಿದ್ದಾರೆ. ಹುಬ್ಬಳ್ಳಿಯ ಋತ್ವಿಕ್ ತನ್ನ ಬೇಕರಿಯ ಶಾಖೆಗಳು ಮುಚ್ಚಿದಾಗ ಕೆಲಸಗಾರರ ಸಂಬಳವನ್ನು ಸರಿದೂಗಿಸಲು ನೀಮ್ ಟೆಕ್ ಎಂಬ ಹೊಸ ಕಂಪೆನಿಯನ್ನೇ ಆರಂಭಿಸಿದ. ಮನೆ, ಅಂಗಡಿ, ಫ್ಯಾಕ್ಟರಿಗಳೇ ಮೊದಲಾದವನ್ನು ಬ್ಯಾಕ್ಟಿರಿಯಾ, ವೈರಸ್ಗಳಿಂದ ಮುಕ್ತಗೊಳಿಸುವ ಪ್ರಯತ್ನಕ್ಕೆ ಬೇವಿನಿಂದ ಹೊರತೆಗೆದ ಔಷಧಿಯನ್ನು ಬಳಸುವ ಪಕ್ಕಾ ದೇಸೀ ವಿಧಾನವನ್ನು ಈ ಹೊತ್ತಿನಲ್ಲೇ ಸಾಕಾರಗೊಳಿಸಿಕೊಂಡು ಅದಕ್ಕೆ ಬೇಕಾದ ಅನುಮತಿಯನ್ನೂ ಪಡೆದುಕೊಂಡು ಕೆಲಸ ಆರಂಭಿಸಿಯೇಬಿಟ್ಟ. ಪರಿಣಾಮ ಇಂದು ಆ ಕೆಲಸಗಾರರು ಮೊದಲಿಗಿಂತ ಹೆಚ್ಚು ದುಡಿಯುತ್ತಿದ್ದಾರೆ. ಅಲ್ಲದೇ ಈಗ ಬೇಕರಿಗಳು ತೆರೆದುಕೊಂಡಿರುವುದರಿಂದ ನೀಮ್ ಟೆಕ್ಗಾಗಿ ಹೆಚ್ಚಿನ ಕೆಲಸಗಾರರನ್ನು ಕಂಪೆನಿಗೆ ತುಂಬಿಕೊಳ್ಳಲಾಗಿದೆ. ಕೊರೋನಾ ಕೆಲಸ ತೆಗೆಯಲಿಲ್ಲ, ಬದಲಿಗೆ ಉದ್ಯೋಗ ನೀಡುವ ಸಾಮಥ್ರ್ಯ ಕೊಡುತ್ತಿದೆ ಎಂಬುದನ್ನು ಋತ್ವಿಕ್ ಸಾಬೀತುಪಡಿಸಿದ್ದಾರೆ!

8

ಸಂಗೀತ ಮೊಬೈಲ್ನ ಅಂಗಡಿಗಳನ್ನು ಯಾರು ಕಂಡಿಲ್ಲ ಹೇಳಿ? ದೇಶದಾದ್ಯಂತ 600ಕ್ಕೂ ಹೆಚ್ಚು ಔಟ್ಲೆಟ್ಗಳನ್ನು ಹೊಂದಿರುವ ಸಂಗೀತ ನಿಸ್ಸಂಶಯವಾಗಿ ಭಾರತದ ಅತ್ಯಂತ ದೊಡ್ಡ ಮೊಬೈಲ್ ಮಾರಾಟಗಾರರು. ಅದರ ಮುಖ್ಯಸ್ಥರಾದ ಸುಭಾಷ್ಚಂದ್ರ ಪ್ರತೀ ತಿಂಗಳು ಸಂಬಳಕ್ಕೆಂದೇ ನಾಲ್ಕುಕೋಟಿ ರೂಪಾಯಿ ಖಚರ್ು ಮಾಡುತ್ತಾರೆ. ಸಾವಿರಾರು ಉದ್ಯೋಗಿಗಳು ಕೆಲಸಕ್ಕಿದ್ದಾರೆ. ಅವರೆಲ್ಲರನ್ನೂ ನಿರಂತರವಾಗಿ ಕೆಲಸದಲ್ಲಿರಿಸಲೆಂದೇ ಅವರು ವಿಶೇಷವಾದ ಉಪಾಯ ಮಾಡಿದರಂತೆ. ಇಷ್ಟೂ ದಿನ ತಮ್ಮ ಅಂಗಡಿಗಳಲ್ಲಿ ಮೊಬೈಲ್ ಖರೀದಿಸಿದವರಿಗೆ ಕೆಲಸಗಾರರ ಮೂಲಕ ಫೋನ್ ಮಾಡಿಸಿ, ಅವರಿಗೆ, ಅವರ ಆತ್ಮೀಯರಿಗೆ ಬೇಕಾದ ವಸ್ತುಗಳನ್ನು ತಲುಪಿಸುವ ಹೊಸ ಜಾಲವನ್ನೇ ನಿಮರ್ಿಸಿಕೊಂಡರಂತೆ. ಲಾಕ್ಡೌನ್ನ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಕೆಲವು ಪ್ರಮುಖ ಕೈಗಾರಿಕೆಗಳಿಗೆ ಕಾಮರ್ಿಕರು ಬೇಕಾಗಿದ್ದಾಗ ಇವರೇ ಅದನ್ನು ಒದಗಿಸಿಕೊಟ್ಟರೆಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ತೀರ್ಥಹಳ್ಳಿಯ ವಿಶ್ವನಾಥ ಕುಂಟುವಳ್ಳಿಯವರದ್ದು ಬೇರೆಯೇ ಕಥೆ. ಕುಂಬಳಕಾಯಿ ಬೆಳೆದ ರೈತರು ಲಾಕ್ಡೌನ್ನ ಅವಧಿಯಲ್ಲಿ ಕಣ್ಣೀರಿಡುತ್ತಾ ಕುಳಿತಿದ್ದಾಗ ಅಡುಗೆಮನೆ ಸೇರಿಕೊಂಡ ವಿಶ್ವನಾಥ್ ಈ ಕುಂಬಳಕಾಯಿಗಳಿಂದ ಆಗ್ರಾದ ಪೇಟಾ ಮಾದರಿಯ ಸಿಹಿಯನ್ನು ತಯಾರಿಸಿದರು. ಈ ಕುಂಬಳಕಾಯಿಗಳನ್ನು ಕತ್ತರಿಸಿ ಚೂರು ಮಾಡಲು ತಾವೇ ಯಂತ್ರವನ್ನು ಆವಿಷ್ಕರಿಸಿ ಸುಮಾರು 500 ಟನ್ಗಳಷ್ಟು ಕುಂಬಳಕಾಯಿಯನ್ನು ರೈತರಿಂದ ಖರೀದಿಸಿದರು. ಏಳೆಂಟು ಟನ್ಗಳಿಗಾಗುವಷ್ಟು ಪೇಟಾ ಮಾಡಿ ಆಗ್ರಾ ಪೇಟಕ್ಕೆ ಪಯರ್ಾಯವಾದ ಸಿಹಿಯೊಂದನ್ನು ತಮ್ಮ ಹಳ್ಳಿ ಆರಗದ ಹೆಸರಿನಲ್ಲಿ ಆರಗಾ ಪೇಟಾವಾಗಿ ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಿದರು.

9

ಈ ಬಗೆಯ ಅನೇಕ ಕಥನಗಳು ಕೊರೋನಾ ಕಾಲದಲ್ಲಿ ನಡೆದಿವೆ. ಸಮಸ್ಯೆಗಳನ್ನೇ ವೈಭವೀಕರಿಸುವ ಬಹುತೇಕರು ಈ ರೀತಿಯ ಸಾಹಸಗಳನ್ನು ಮರೆಮಾಚಿಬಿಡುತ್ತಾರೆ. ಇಂತಹ ಪ್ರತೀ ಹೋರಾಟವೂ ಹೊಸಬರಲ್ಲಿ ಚೈತನ್ಯವನ್ನು ಹುಟ್ಟುಹಾಕಲು ಸಾಕಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಉದ್ಯಮಿಗಳ ಈ ಸಾಹಸಪ್ರವೃತ್ತಿಯನ್ನು ಕಾರ್ಯಕ್ರಮ ಉದ್ಘಾಟಿಸಿದ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ರವರು ಸಾವಧಾನಚಿತ್ತವಾಗಿ ಆಲಿಸಿದರು. ಸಕರ್ಾರ ಉದ್ಯಮ ಕ್ರಿಯಾಶೀಲವಾಗಲು ಕೈಗೊಂಡಿರುವ ಕ್ರಮಗಳನ್ನೆಲ್ಲಾ ವಿಸ್ತಾರವಾಗಿ ವಿವರಿಸಿದರು. ಆನಂತರ ಉದ್ಯಮಿಗಳೊಂದಿಗೆ ಮುಕ್ತ ಚಚರ್ೆಯಲ್ಲಿ ಪಾಲ್ಗೊಂಡು ಅನೇಕ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಹುಡುಕುವಲ್ಲಿ ತಾನು ಕಟಿಬದ್ಧವಾಗಿದ್ದೇನೆ ಎಂದು ಹೇಳಲು ಮರೆಯಲಿಲ್ಲ. ಕಟ್ಟಡ ನಿಮರ್ಾಣಕ್ಕೆ ಹತ್ತಾರು ಕಛೇರಿಗಳ ಎದುರಿಗೆ ಅಲೆಯುವ ಪರಿಸ್ಥಿತಿಯನ್ನು ನಿವಾರಿಸಬೇಕೆಂಬ ಉದ್ಯಮಿ ರವೀಂದ್ರ ಪೈ ಅವರ ಬೇಡಿಕೆಗೆ ಸಕಾರಾತ್ಮಕ ಸ್ಪಂದನೆಯಿತ್ತು. ಅದಕ್ಕೆ ಕಾರಣವೂ ಇದೆ. ಆಥರ್ಿಕ ಪುನಶ್ಚೇತನಕ್ಕೆ ಕಟ್ಟಡ ನಿಮರ್ಾಣ ನಿಜಕ್ಕೂ ಶಕ್ತಿ ತುಂಬುತ್ತದೆ. ಮೇಲ್ನೋಟಕ್ಕೆ ಕಟ್ಟಡ ನಿಮರ್ಾಣ ಕೈಗಾರಿಕೆ ಎಂದೆನಿಸುವುದಿಲ್ಲವಾದರೂ ನಿಮರ್ಾಣಕ್ಕೆ ಬೇಕಾದ ಪ್ರತಿಯೊಂದು ವಸ್ತುವೂ ಒಂದೊಂದು ಕೈಗರಿಕೆಯೇ. ಸಿಮೆಂಟ್, ಕಬ್ಬಿಣಗಳಿಂದ ಹಿಡಿದು ಮನೆಯನ್ನು ಒಳಗೆ ಸಿಂಗರಿಸುವವರೆಗೂ ಎಲ್ಲವೂ ಸ್ವತಃ ದೊಡ್ಡ ಕೈಗಾರಿಕೆಗಳಾಗಿ ಬೆಳೆದು ನೀಂತಿವೆ. ಒಮ್ಮೆ ಕಟ್ಟಡ ನಿಮರ್ಾಣ ಚಟುವಟಿಕೆಗಳು ಚುರುಕುಗೊಂಡರೆ ಇದಕ್ಕೆ ಪೂರಕವಾದ ಎಲ್ಲ ಉದ್ಯಮಗಳೂ ವೇಗವನ್ನು ಪಡೆದುಕೊಂಡುಬಿಡುತ್ತವೆ. ಇದರೊಟ್ಟಿಗೆ ಮೊಬೈಲ್ ತಯಾರಿಕೆಯ ವಿಚಾರಕ್ಕೆ ಬಂದರೆ ಕನರ್ಾಟಕವಷ್ಟೇ ಅಲ್ಲ, ಇಡಿಯ ದೇಶ ಹಿಂದೆ ಉಳಿದಿದೆ. ಚೀನಾದೊಂದಿಗಿನ ಆಥರ್ಿಕ ಸಮರದ ಈ ಹೊತ್ತಿನಲ್ಲಿ ಆತ್ಮನಿರ್ಭರವಾಗಬೇಕಿರುವ ಭಾರತದ ಕನಸನ್ನು ನನಸಾಗಿಸಲು ಸಿದ್ಧರಿದ್ದೇವೆ ಎಂದು ಹೇಳಿದ ಮೊಬೈಲ್ ತಯಾರಿಕರಿಗೆ ಮಂತ್ರಿಗಳು ವಿಶೇಷ ಭರವಸೆ ಕೊಟ್ಟು ಬೆನ್ತಟ್ಟಿದ್ದು ಪ್ರೋತ್ಸಾಹದಾಯಕವಾಗಿತ್ತು!

10

ಉದ್ಯಮಗಳಿಗೆ ಸಮಸ್ಯೆಗಳು ಖಂಡಿತ ಇವೆ. ಆದರೆ ಅದರ ನಿವಾರಣೆಗೆ ಸಕರ್ಾರಗಳಷ್ಟೇ ಅಲ್ಲ, ಪ್ರತಿಯೊಬ್ಬ ವ್ಯಕ್ತಿಯೂ ಈಗ ಮನಸ್ಸು ಮಾಡಬೇಕಿದೆ. ನಾವೆಲ್ಲರೂ ಸಕರ್ಾರದೆಡೆಗೆ ಮುಖ ಮಾಡುತ್ತಾ ನಮ್ಮ ಆಂತರ್ಯದ ಶಕ್ತಿಯನ್ನು ಮರೆತೇಬಿಟ್ಟಿದ್ದೇವೆ. ಚೀನಾ ಕಡಿಮೆ ಬೆಲೆಗೆ ವಸ್ತು ಕೊಡುತ್ತದೆ ಎಂದು ಗಂಟೆಗಟ್ಟಲೆ ಕೊರೆಯುವ ಕಮ್ಯುನಿಸ್ಟರು ಚೀನಾದ ಕಾಮರ್ಿಕರ ಕಾರ್ಯಕ್ಷಮತೆಯೂ ಅಪರೂಪದ್ದು ಎಂದು ಹೇಳುವುದನ್ನು ಮರೆತೇಬಿಡುತ್ತಾರೆ. ತಮಾಷೆಗಾದರೂ ಜಗತ್ತಿನಲ್ಲಿ ಚಾಲ್ತಿಯಲ್ಲಿರುವ ಮಾತೊಂದಿದೆ. ಚೀನಿಯರು ಎಂಟು ಗಂಟೆ ಕೆಲಸ ಮಾಡಿದರೆ ಹತ್ತು ಗಂಟೆಗಳಿಗಾಗುವಷ್ಟು ಉತ್ಪಾದಕತೆ ತೋರುತ್ತಾರೆ. ಭಾರತೀಯರಾದರೋ ಹತ್ತು ದಿನಗಳಿಗೆ ಕೆಲಸ ಮಾಡಿದರೆ ಎಂಟು ಗಂಟೆಗಳಿಗೆ ಸಾಕಾಗುವಷ್ಟು ಉತ್ಪಾದಕತೆ ತೋರುತ್ತಾರೆ ಅಂತ. ಜಗತ್ತಿನ ಅರಿವಿದ್ದವರು ಇದನ್ನು ಸುಳ್ಳೆಂದು ಹೇಳುವುದಿಲ್ಲ. ಆದರೆ ನಮ್ಮ ಕಮ್ಯುನಿಸ್ಟರನ್ನು ಕೇಳಿ ನೋಡಿ, ಅವರಿಗೆ ಎಲ್ಲಕ್ಕೂ ಚೀನಾ ಬೇಕು. ಆದರೆ ಭಾರತೀಯ ಕಾಮರ್ಿಕರನ್ನು ಮಾತ್ರ ಪ್ರತಿಭಟನೆಯ ಹೆಸರಿನಲ್ಲಿ ಸದಾ ಬೀದಿಗೆ ತಂದು ನಿಲ್ಲಿಸಬೇಕು. ಹೀಗಾಗಿ ಉದ್ಯಮಿಯೊಬ್ಬರು ಕೆಲಸಕ್ಕೆ ಸಂಬಳ ದಿನಗೂಲಿ ಎಂದು ಕೊಡುವ ಬದಲು ವ್ಯಕ್ತಿಯ ಕಾರ್ಯಕ್ಕೆ ಸರಿದೂಗುವಷ್ಟು ಕೊಡಬೇಕೆಂಬ ಕಲ್ಪನೆಯನ್ನು ಹರಿಬಿಟ್ಟಿದ್ದು ಅನೇಕರಿಗೆ ಹಿಡಿಸಿತ್ತು. ಇಡಿಯ ಸಭೆ ವಿಶೇಷವಾಗಿ ಚಚರ್ೆ ನಡೆಸಿದ್ದು ಇಂದಿನ ಶಿಕ್ಷಣ ವ್ಯವಸ್ಥೆಯ ಮೇಲೆ. ನಮ್ಮ ಕಾಲೇಜಿನಲ್ಲಿ ಓದುವ ವಿದ್ಯಾಥರ್ಿಗಳು ಒಂದಷ್ಟು ಕೋಡಿಂಗ್ ಕಲಿತು ಯಾವುದಾದರೂ ಸಾಫ್ಟ್ವೇರ್ ಕಂಪೆನಿ ಕೈ ಹಿಡಿದರೆ ಸಾಕೆಂದು ಕಾಯುತ್ತ ಕುಳಿತಿರುತ್ತಾರೆ. ತನ್ನದ್ದೇ ಆದ ಆವಿಷ್ಕಾರದಲ್ಲಿ ತಾನು ತೊಡಗಬೇಕು, ಹೊಸ ಕಂಪೆನಿ ನಿಮರ್ಿಸಬೇಕು ಎಂಬ ಕಲ್ಪನೆಯಲ್ಲಿ ಅವನಿಲ್ಲವೇ ಇಲ್ಲ. ಇವರನ್ನು ಆತ್ಮನಿರ್ಭರ ಭಾರತಕ್ಕೆ ತಕ್ಕಂತೆ ಪುನರ್ ರೂಪಿಸಬೇಕಾದ ಹೊಣೆಗಾರಿಕೆ ನಮ್ಮ ಮೇಲೆಯೇ ಇದೆ ಎಂದು ಎಲ್ಲರಿಗೂ ಈಗ ಅನಿಸುತ್ತಿದೆ. ಬರಲಿರುವ ದಿನಗಳಲ್ಲಿ ಈ ಕುರಿತಂತೆ ಆಲೋಚಿಸಬೇಕಿದೆ. ಜಿಲ್ಲಾಕೇಂದ್ರಗಳಲ್ಲಿ ಈ ರೀತಿ ಉದ್ಯಮಿಗಳನ್ನು ಸೇರಿಸಿ ಅವರುಗಳಲ್ಲೂ ಈ ಬಗೆಯ ಆತ್ಮವಿಶ್ವಾಸವನ್ನು ತುಂಬಿ, ತನ್ಮೂಲಕ ಹೊಸ ಪೀಳಿಗೆಯ ತರುಣರನ್ನು ಸೂಕ್ತವಾಗಿ ನಿಮರ್ಿಸುವ ಜವಾಬ್ದಾರಿಯನ್ನು ನಾವೆಲ್ಲಾ ಹೊರಬೇಕಿದೆ. ಭಾರತ ಹೊಸದಾಗಿ ನಿಮರ್ಾಣವಾಗಬೇಕೆಂದರೆ ನಮ್ಮೆಲ್ಲರ ಶ್ರಮ ಅಗತ್ಯ. ಚೀನಾದ ಎದುರಿಗೆ ಯುದ್ಧಕ್ಕೆಂದು ತಯಾರಾಗುವಾಗ ನಮ್ಮನ್ನು ಅನೇಕ ಪ್ರಶ್ನೆಗಳು ಕಾಡುತ್ತಿವೆ. ಚೀನಾ ಶಕ್ತಿಶಾಲಿ ಎಂದು ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ ವಾಸ್ತವವಾಗಿ ಯಾವ ದಿಕ್ಕಿನಿಂದ ನೋಡಿದರೂ ಚೀನಾಕ್ಕಿಂತಲೂ ನಾವೇ ಬಲಶಾಲಿ. ಇಲ್ಲಿ ಪ್ರಜಾಪ್ರಭುತ್ವ ಇದೆ, ಪೊಲೀಸರ ದೌರ್ಜನ್ಯವಿಲ್ಲ, ಯಾರ ಮೇಲೂ ಒತ್ತಡ ಹಾಕಿ ದೇಶ ತನಗೆ ಬೇಕಾದ್ದನ್ನು ಮಾಡಿಸಿಕೊಳ್ಳುವುದಿಲ್ಲ, ಪತ್ರಿಕೆಗಳು ಅಗತ್ಯಬಿದ್ದಾಗ ಪ್ರಧಾನಮಂತ್ರಿಯನ್ನು ಟೀಕಿಸುತ್ತವೆ. ಸೈನ್ಯ ಮತ್ತು ದೇಶಗಳು ಒಂದಕ್ಕೊಂದು ಪೂರಕವಾಗಿ ಕೆಲಸ ನಿಮರ್ಿಸುತ್ತವೆ. ಚೀನಾದಲ್ಲಿ ಇವ್ಯಾವುವೂ ಇಲ್ಲ. ಅಲ್ಲಿರುವುದು ಒಂದೇ ಒಂದು ಸವರ್ಾಧಿಕಾರತ್ವ. ಶಿಜಿನ್ಪಿಂಗ್ ಆದೇಶಿಸಿದಂತೆ ಜನ ಕೇಳಿಕೊಂಡಿರಬೇಕು ಅಷ್ಟೇ. ಹಾಗಂತ ನಾವು ಹೆದರಬೇಕಿಲ್ಲ. ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿಯೇ ಸಮರ್ಥವಾಗಿರುವ ರಾಷ್ಟ್ರವನ್ನು ಕಟ್ಟಬಹುದು ಅದಕ್ಕೆ ನಮಗೆ ನಾವೇ ಚೌಕಟ್ಟು ಹಾಕಿಕೊಂಡು ಕಾರ್ಯಕ್ಷಮತೆಯನ್ನು ವೃದ್ಧಿಸಿಕೊಳ್ಳಬೇಕಾಗಿದೆ ಅಷ್ಟೇ. ಇದೊಂದು ಪರ್ವಕಾಲ. ಈಗಲೂ ಇದನ್ನು ಮಾಡಲು ನಮ್ಮಿಂದಾಗದಿದ್ದರೆ, ಇನ್ನೆಂದೂ ಇಲ್ಲ!

Comments are closed.