ವಿಭಾಗಗಳು

ಸುದ್ದಿಪತ್ರ


 

ಕಾಂಗ್ರೆಸ್ಸಿನಲ್ಲಿ ಕಣ್ಣಿಗೆ ಕಾಣದೇ ಉರಿಯುವ ಪ್ರತೀಕಾರದ ಬೆಂಕಿ!!

2014ರಲ್ಲೇ ಎಚ್ಚೆತ್ತುಕೊಂಡ ಕಾಂಗ್ರೆಸ್ಸು ಪರಿವಾರದ ಕಪಿಮುಷ್ಠಿಯಿಂದ ಕಾಂಗ್ರೆಸ್ಸನ್ನು ಹೊರತಂದು ರಾಹುಲ್ ಬದಲು ಪ್ರಣಬ್ರನ್ನು ಪ್ರಧಾನಿ ಅಭ್ಯಥರ್ಿಯಾಗಿ ಬಿಂಬಿಸಿಬಿಟ್ಟಿದ್ದರೆ ಇಂದು ಕಥೆಯೇ ಬೇರೆಯಾಗುತ್ತಿತ್ತು. ಮೋದಿಯವರಿಗೆ ಖಂಡಿತ ಅಂದುಕೊಂಡಷ್ಟು ಸೀಟುಗಳು ಬರುತ್ತಿರಲಿಲ್ಲ. ಜೊತೆಗೆ ಅವರೆಣಿಸಿದ ವಿಕಾಸದ ಹಾದಿ ಕ್ರಮಿಸುವುದು ಸಾಧ್ಯವಾಗುತ್ತಿರಲಿಲ್ಲ.

ಬಹಳ ಜನರಿಗೆ ಗೊತ್ತೇ ಇಲ್ಲ. ಇಂದಿರಾಗಾಂಧಿ ಪ್ರಧಾನಿಯಾಗಿರುವಾಗಲೂ ಆಕೆಯ ಮಗ ಸಂಜಯ್ನ ಆರ್ಭಟ ಜೋರಾಗಿಯೇ ಇತ್ತು. ಕಾಂಗ್ರೆಸ್ಸನ್ನು ಬಲವಾಗಿ ನಿಯಂತ್ರಿಸುತ್ತಿದ್ದುದೇ ಆತ. ಆತನಿಗಿದ್ದ ಏಕೈಕ ಅರ್ಹತೆ ಇಂದಿರೆಯ ಮಗ ಎನ್ನುವುದು ಮಾತ್ರ. 1975ರಲ್ಲಿ ಸ್ವತಃ ಇಂದಿರಾ ಆತನನ್ನು ಮಹತ್ವದ ನಿರ್ಣಯ ಕೈಗೊಳ್ಳುವ ಸ್ಥಾನದಲ್ಲಿ ಕೂರಿಸಿಬಿಟ್ಟಿದ್ದರು. ಆನಂತರ ಎಮಜರ್ೆನ್ಸಿಯ ರಾದ್ಧಾಂತ ಈ ಪರಿವಾರದ ಕಥೆಯನ್ನೇ ಮುಗಿಸಿಬಿಡುತ್ತದೆ ಎಂಬ ಪರಿಸ್ಥಿತಿ ನಿಮರ್ಾಣವಾಗಿಬಿಟ್ಟಿತ್ತು. ಆ ಹೊತ್ತಿನಲ್ಲೂ ಇವರನ್ನು ಬಿಡದೇ ಬಲವಾಗಿ ಆತುಕೊಂಡ ಅಂತರಂಗದ ಸದಸ್ಯರು 1980ರ ವೇಳೆಗೆ ಇಂದಿರಾ ಮರುಅಧಿಕಾರ ಸ್ಥಾಪಿಸಿದಾಗ ಆಳುವ ಸಹಜ ಸಾಮಥ್ರ್ಯ ಈ ಪರಿವಾರಕ್ಕೆ ಮಾತ್ರ ಎಂಬುದನ್ನು ಜನರಿಗೆ ನಂಬಿಸಿಬಿಟ್ಟಿದ್ದರು. ಅದರರ್ಥ ಸಂಜಯ ಮುಂದಿನ ಪ್ರಧಾನಿ ಅಂತ. ಅನೇಕ ಹಿರಿತಲೆಗಳಿಗೆ ಇದು ಇರುಸುಮುರಿಸೆನ್ನಿಸಿತಾದರೂ ಮಾತನಾಡುವಂತಿರಲಿಲ್ಲ. ಮಾತನಾಡಿದವರು ಮೂಲೆಗುಂಪಾದರು. ದೇಶಕ್ಕೇ ಎಮಜರ್ೆನ್ಸಿ ಹೇರಿ ಜೀಣರ್ಿಸಿಕೊಂಡವರಿಗೆ ಪಕ್ಷದೊಳಗಿನವರನ್ನು ತುಳಿದು ಕುಪ್ಪಳಿಸುವುದು ಯಾವ ಲೆಕ್ಕ! ಪಿ.ವಿ ನರಸಿಂಹರಾಯರ ಕುರಿತಂತೆ ವಿಶೇಷ ಕೃತಿ ಬರೆದಿರುವ ಸಂಜಯ್ ಬಾರು ಪ್ರಕಾರ ಈ ವೇಳೆಗೆ ಹೊಸ ನಾಯಕರ ತಂಡ ಚಿಮ್ಮಿ ಬಂದಿದ್ದು. ಅವರಲ್ಲಿ ಜಗದೀಶ್ ಟ್ರೆಟ್ಲರ್, ರುಕ್ಸಾನಾ ಸುಲ್ತಾನಾ, ಕಮಲ್ನಾಥ್, ಅಂಬಿಕಾಸೋನಿ, ಗುಂಡುರಾವ್ ಇವರೆಲ್ಲ ಪ್ರಮುಖರು. ಅಂದರೆ ‘ಪರಿವಾರಕ್ಕೆ ನಿಷ್ಠರಾಗಿರುವವರು ನಾಯಕರಾಗಿ ಬೆಳೆಯುತ್ತಾರೆ; ವಿರೋಧಿಸಿದವರು ಮಣ್ಣು ಮುಕ್ಕುತ್ತಾರೆ’ ಎಂಬ ಸಂದೇಶ ಸ್ಪಷ್ಟವಾಗಿ ರವಾನೆಯಾಯ್ತು.

Cong supporters celebrate
ಕಾಂಗ್ರೆಸ್ಸಿನ ಕೊನೆಯ ಹಂತದ ಕಾರ್ಯಕರ್ತರಲ್ಲೂ ಪರಿವಾರದ ಜೀತಮಾಡಿದರೆ ಬೆಳೆದು ನಿಲ್ಲುತ್ತೇವೆಂಬ ಭಾವನೆ ಬಲವಾಗಿದ್ದು ಆಗಲೇ. ಅದು ಅಸಹಜವೇನಲ್ಲ. ವಿರೋಧ ಪಕ್ಷಗಳಿಗೆ ಆಳುವಷ್ಟು ಒಗ್ಗಟ್ಟಿಲ್ಲ. ಇಂದಿರೆಗೆ ಅಧಿಕಾರವನ್ನೇ ಮಣಿಸಿಕೊಳ್ಳುವ ಕಲೆಗೊತ್ತು. ಆಕೆಯೊಂದಿಗೆ ನಿಂತರೆ ಅಧಿಕಾರದ ಏಣಿ ಏರುವುದು ಬಲು ಸುಲಭ. ಹೀಗಿರುವಾಗ ಯಾರು ತಾನೆ ಆ ಪಾಳಯ ಬಿಟ್ಟು ಬರಲಿಚ್ಛಿಸುತ್ತಾರೆ ಹೇಳಿ. ರಾಜಕಾರಣದ ಪಡಸಾಲೆಗಳಲ್ಲಿ ಯಾರ ಮಾತು ಚಲಾವಣೆಯಲ್ಲಿರುವುದೋ ಅವರಿಗೇ ಬೆಲೆ. ಗ್ರಾಮಪಂಚಾಯತಿ ಸೀಟೂ ಕೊಡಿಸಲಾಗದವನನ್ನು ಯಾರು ಯಾಕಾದರೂ ಗೌರವಿಸುತ್ತಾರೆ ಹೇಳಿ! ಹಾಗಂತ ಇದು ಕಾಂಗ್ರೆಸ್ಸಿಗೆ ಮಾತ್ರವಲ್ಲ, ಎಲ್ಲ ಪಕ್ಷಗಳಿಗೂ ಅನ್ವಯಿಸುವಂಥದ್ದು. ಜನತಾದಳದಲ್ಲಿ ಅಣ್ಣನ ಮಾತು ನಡೆದರೆ ಅವರ ಸುತ್ತ ಕೈಕಟ್ಟಿ ನಿಲ್ಲುತ್ತಾರೆ. ತಮ್ಮನ ಮಾತು ನಡೆದರೆ ಅವರ ಸುತ್ತ, ಅದಕ್ಕಾಗಿಯೇ ಎಲ್ಲ ಬಗೆಯ ಕದನಗಳೂ ನಡೆಯೋದು.
80ರ ದಶಕದಲ್ಲಿ ಕಾಂಗ್ರೆಸ್ಸು ಹಳ್ಳ ಹಿಡಿಯುವ ಲಕ್ಷಣಗಳನ್ನು ತೋರಿದ್ದು ಆಗಲೇ. ಹಾಗೆ ನೋಡಿದರೆ ಮೋತಿಲಾಲರು ತಮ್ಮ ಕಂದನಿಗೆ ಅಧಿಕಾರ ಬಿಟ್ಟುಕೊಟ್ಟಾಗಲೇ ಕಾಂಗ್ರೆಸ್ಸು ನಿರ್ಲಜ್ಜತೆಯ ಎಲ್ಲ ಎಲ್ಲೆ ಮೀರಿತ್ತು. ಇಂದಿರಾ ಅದನ್ನು ಪರಾಕಾಷ್ಠೆಗೇರಿಸಿದರು ಅಷ್ಟೇ. ಏಕೆಂದರೆ ಅಲ್ಲಿಯವರೆಗೂ ಯಾವ ಪಕ್ಷಗಳೂ ತಮ್ಮ ನಂತರದ ಅಧಿಕಾರವನ್ನು ಮಕ್ಕಳಿಗೆ ವಹಿಸಿಕೊಡುವ ಕುರಿತು ಯೋಚಿಸಿರಲಿಲ್ಲ ಮತ್ತು ಆ ದಿಕ್ಕಿನತ್ತ ಹೆಜ್ಜೆಯೂ ಇಟ್ಟಿರಲಿಲ್ಲ. ಆನಂತರ ಇಂದಿರೆಯ ಈ ಸಾರ್ವಭೌಮತೆಯ ವಿರುದ್ಧ ಹೋರಾಡಿದವರೂ ತಾವು ಕಟ್ಟಿದ ಪಕ್ಷಕ್ಕೆ ತಮ್ಮ ಮಕ್ಕಳನ್ನೇ ತಂದು ಅಧಿಕಾರವನ್ನು ಕ್ರೋಢೀಕರಿಸಿಕೊಳ್ಳುವ ಪರಂಪರೆ ಜಾರಿಗೆ ತಂದರು. ಪ್ರಜಾಪ್ರಭುತ್ವದ ನಾಶದ ಮೊದಲ ಹಂತ ಇದು. ಇಂದು ಎಲ್ಲ ಪಕ್ಷಗಳೂ ಪಕ್ಷಭೇದ ಮರೆತು ‘ಅಪ್ಪ-ಮಕ್ಕಳ’ ಈ ಪರಂಪರೆಯನ್ನು ಎಗ್ಗಿಲ್ಲದೇ ಮುಂದುವರೆಸಿಕೊಂಡು ಬಂದಿವೆ. ಎಲ್ಲಾ ಕೊಡುಗೆ ಇಂದಿರಮ್ಮನದೇ. ಕಾಂಗ್ರೆಸ್ಸಿನಲ್ಲಿ ಆಂತರಿಕ ಚುನಾವಣೆಗಳು ಮಹತ್ವ ಕಳೆದುಕೊಳ್ಳಲಾರಂಭಿಸಿದ ಹೊತ್ತು ಅದು!

4
ಸಂಜಯ್ ವಿಮಾನಾಪಘಾತದಲ್ಲಿ ತೀರಿಕೊಂಡಾಗ ಕಾಂಗ್ರೆಸ್ಸು ಧಿಗ್ಭ್ರಮೆಗೊಳಗಾಗಿತ್ತು. ಮುಂದೇನೆಂದು ತೋಚದೇ ರಾಜೀವ್ರನ್ನು ಎಳತಂದು ಕಾಂಗ್ರೆಸ್ಸಿನ ಅಧ್ಯಕ್ಷಗಾದಿಗೇರಿಸಿತ್ತು. ಸಹಜವಾಗಿಯೇ ಮುಂದಿನ ಪ್ರಧಾನಿ ಕೂಡ! ಹೌದು. ಅಂದಿನ ಹಿರಿಯ ಕಾಂಗ್ರೆಸ್ ನಾಯಕ ಪೋತೇದಾರ್ ವಂಶಪರಂಪರೆಯ ಹಿನ್ನೆಲೆಯಿಂದ ಅವರಿಗೇ ಎಲ್ಲ ಅವಕಾಶಗಳು ಮೀಸಲು ಎಂದೂ ಹೇಳಿಬಿಟ್ಟಿದ್ದರು. ಆಳುವ ಅನುಭವವಿಲ್ಲದ ಕೊನೆಗೆ ಆಸ್ಥೆಯೂ ಇಲ್ಲದ ರಾಜೀವ್ ಅನಿವಾರ್ಯವಾಗಿ ಪ್ರಧಾನಿ ಗಾದಿಯತ್ತ ದಬ್ಬಲ್ಪಟ್ಟರು. 2014ರಲ್ಲಿ ನರೇಂದ್ರಮೋದಿಯಲ್ಲದೇ ಮತ್ತ್ಯಾರು ಪ್ರಧಾನಿ ಅಭ್ಯಥರ್ಿಯಾಗಿದ್ದರೂ ಪರಿವಾರದ ಭಜಕರು ರಾಹುಲ್ನನ್ನು ಪ್ರಧಾನಿಯಾಗಿಸಿಯೇ ಬಿಡುತ್ತಿದ್ದರು. ಹೇಳಿದೆನಲ್ಲ, ಪರಿವಾರದ ಜಾಲ ಹೇಗಿದೆಯೆಂದರೆ ಅನೇಕ ಪತ್ರಕರ್ತರು ರಾಹುಲ್ನನ್ನೂ ಬುದ್ಧಿವಂತನೆಂದು ಬಿಂಬಿಸಲು ತಿಪ್ಪರಲಾಗ ಹೊಡೆದರು. ಸಾಮಾಜಿಕ ಜಾಲತಾಣಗಳು ಸಕ್ರಿಯವಾಗಿದ್ದರಿಂದ ಅವರ ಯಾವ ಚಟುವಟಿಕೆಯೂ ಯಶ ಕಾಣಲಿಲ್ಲ. ಇಲ್ಲವಾದರೆ ಈ ವೇಳೆಗಾಗಲೇ ಇಂದಿರಾ, ರಾಜೀವ್ ಸಾಲಿಗೆ ರಾಹುಲ್ನನ್ನೂ ಸೇರಿಸಿ ಪರಿವಾರದ ಆಳುವ ಹಕ್ಕನ್ನು ಮರು ಸ್ಥಾಪನೆಗೊಳಿಸಿಬಿಡುತ್ತಿದ್ದರು.
ಈ ಪರಿವಾರ ತಮಗಿಂತ ಸಮರ್ಥರನ್ನು ಮುಂದೆ ಬರಲು ಬಿಡಲೇ ಇಲ್ಲ. ಈ ರೀತಿ ಸತತವಾಗಿ ಮೂಲೆಗುಂಪಾಗುತ್ತಾ ಬದುಕನ್ನೇ ಕಳೆದುಕೊಂಡವರಲ್ಲಿ ಪ್ರಣಬ್ ಮುಖಜರ್ಿಯೂ ಒಬ್ಬರು. ಇಂದಿರೆಯ ತಂಡದಲ್ಲಿ ಸಮರ್ಥರೆಂದು ಗುರುತಿಸಿಕೊಂಡ ವ್ಯಕ್ತಿ ಪ್ರಣಬ್ದಾ. ಅನೇಕ ಬಾರಿ ಸಭೆಗಳಲ್ಲಿ ಭಾಗವಹಿಸಲಾಗದಿದ್ದರೆ ಅದರ ಹೊಣೆಗಾರಿಕೆ ಪ್ರಣಬ್ರ ಮೇಲೆಯೇ ಇರುತ್ತಿತ್ತು. ಒಂದು ಹಂತದಲ್ಲಿ ಇಂದಿರೆಯ ನಂತರದ ಪ್ರಭಾವೀ ನಾಯಕ ತಾನೇ ಎಂಬ ಭ್ರಮೆ ಅವರನ್ನು ಆವರಿಸಿಕೊಂಡುಬಿಟ್ಟಿತ್ತು. ಇದು ಆಕೆಗೆ ಅರಿವಾದರೆ ಪ್ರಣಬ್ರ ರಾಜಕೀಯ ಭವಿಷ್ಯವೇ ಮುಗಿದಂತೆ ಎಂದು ಅನೇಕರು ಅವಡುಗಚ್ಚಿಯೇ ಕುಳಿತಿದ್ದರು. ಇಂಥದ್ದನ್ನು ಅರಿಯುವ ಕಲೆ ಆಕೆಗೆ ಇದ್ದುದರಿಂದ ಕೊನೆಗೂ ಪ್ರಣಬ್ ಮೂಲೆಗುಂಪಾದರು. ಸ್ವಸಾಮಥ್ರ್ಯದ ಕಾರಣದಿಂದ ಅವರು ಒಂದಷ್ಟು ಪ್ರಮುಖ ಹುದ್ದೆಗಳಲ್ಲಿ ಉಳಿದದ್ದು ನಿಜವಾದರೂ ದಕ್ಕಬೇಕಾದ್ದು ಮಾತ್ರ ಕೊನೆಯವರೆಗೂ ಸಿಗಲೇ ಇಲ್ಲ. ಮನಮೋಹನಸಿಂಗರು ಅದೊಮ್ಮೆ ವೇದಿಕೆಯ ಮೇಲೆ ಪ್ರಣಬ್ರನ್ನು ಅಭಿನಂದಿಸುತ್ತಾ ಪ್ರಧಾನಿಯಾಗುವ ಎಲ್ಲ ಅರ್ಹತೆಯೂ ಅವರಿಗಿದ್ದರು ನಾನು ‘ಆಕ್ಸಿಡೆಂಟಲಿ’ ಪ್ರಧಾನಿಯಾಗಿಬಿಟ್ಟೆ ಎಂದಿದ್ದರು! ಅದರರ್ಥ ಈ ಪರಿವಾರದ ಪ್ರಣಬ್ ದ್ವೇಷ ಎರಡೆರಡು ಪೀಳಿಗೆವರೆಗೂ ಹರಿದು ಬಂತು. ರಾಹುಲ್ ಪ್ರಧಾನಿ ಗದ್ದುಗೆಗೆ ಪ್ರಣಬ್ ಅಡ್ಡಗಾಲಾಗಬಹುದೆಂದೇ ಅವರನ್ನು ರಾಷ್ಟ್ರಪತಿಯೆಂಬ ಸ್ಥಾನಕ್ಕೇರಿಸಿ ಕೂರಿಸಿಬಿಡಲಾಯ್ತು. ಕೊನೆಗೂ ಅವರ ಅರ್ಹತೆಗೆ, ಸಾಮಥ್ರ್ಯಕ್ಕೆ ತಕ್ಕ ಹುದ್ದೆ ಸಿಗಲಿಲ್ಲ. ಅವರಿಗೆ ವ್ಯಾಪಕವಾದ ಜನಮನ್ನಣೆ ಸಿಕ್ಕಿದ್ದೇ ನರೇಂದ್ರಮೋದಿ ಪ್ರಧಾನಿಯಾದ ನಂತರ. ಪ್ರಣಬ್ದಾ ಕೂಡ ಮೋದಿಯವರನ್ನು ಅತ್ಯಂತ ಪ್ರಮುಖ ಸಂದರ್ಭಗಳಲ್ಲಿ ಹೊಗಳಿ ಕಾಂಗ್ರೆಸ್ಸಿನ ವಿರುದ್ಧದ ತನ್ನೆಲ್ಲ ಆಕ್ರೋಶವನ್ನು ತೀರಿಸಿಕೊಂಡುಬಿಟ್ಟರು. ಅವರು ಸಂಘದ ಕಾರ್ಯಕ್ರಮಕ್ಕೆ ಹೋಗಿಬಂದದ್ದಂತೂ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿಬಿಟ್ಟಿತ್ತಲ್ಲ, ಇವೆಲ್ಲದರ ಬೀಜ ಇಂದಿರಾಳ ದ್ವೇಷದಲ್ಲಡಗಿದೆ ಅಥವಾ ಕಾಂಗ್ರೆಸ್ಸಿನ ಪ್ರಜಾಪ್ರಭುತ್ವ ವಿರೋಧಿ ಚಿಂತನೆಗಳಲ್ಲಿ!

5
2014ರಲ್ಲೇ ಎಚ್ಚೆತ್ತುಕೊಂಡ ಕಾಂಗ್ರೆಸ್ಸು ಪರಿವಾರದ ಕಪಿಮುಷ್ಠಿಯಿಂದ ಕಾಂಗ್ರೆಸ್ಸನ್ನು ಹೊರತಂದು ರಾಹುಲ್ ಬದಲು ಪ್ರಣಬ್ರನ್ನು ಪ್ರಧಾನಿ ಅಭ್ಯಥರ್ಿಯಾಗಿ ಬಿಂಬಿಸಿಬಿಟ್ಟಿದ್ದರೆ ಇಂದು ಕಥೆಯೇ ಬೇರೆಯಾಗುತ್ತಿತ್ತು. ಮೋದಿಯವರಿಗೆ ಖಂಡಿತ ಅಂದುಕೊಂಡಷ್ಟು ಸೀಟುಗಳು ಬರುತ್ತಿರಲಿಲ್ಲ. ಜೊತೆಗೆ ಅವರೆಣಿಸಿದ ವಿಕಾಸದ ಹಾದಿ ಕ್ರಮಿಸುವುದು ಸಾಧ್ಯವಾಗುತ್ತಿರಲಿಲ್ಲ. ನೆನಪಿರಲಿ. ರಾಜೀವ್ ತಾಯಿಯ ಕೊಲೆಯ ನಂತರ ಪ್ರಧಾನಿಗಾದಿ ಏರಿದರಲ್ಲ ಅವರು ತಮ್ಮ ಕ್ಯಾಬಿನೆಟ್ನಲ್ಲಿ ಪ್ರಣಬ್ರಿಗೆ ಸ್ಥಾನವನ್ನು ಕೊಟ್ಟಿರಲಿಲ್ಲ. ‘ಪರಿವಾರ ಬಲವಾಯ್ತು ಕಾಂಗ್ರೆಸ್ಸು ಸಾವಿಗೆ ಸಿದ್ಧವಾಯ್ತು’.

1991ರಲ್ಲಿ ರಾಜೀವ್ ಹತ್ಯೆಯ ನಂತರ ಪಿ.ವಿ ನರಸಿಂಹರಾಯರು ಮತ್ತೆ ಕಾಂಗ್ರೆಸ್ಸನ್ನು ಹಳಿಗೆ ತರುವ ಯತ್ನ ಮಾಡಿದರು. ಸಮರ್ಥ ನಾಯಕರನ್ನು ಕಾರ್ಯಕರ್ತರೇ ಆರಿಸುವ ಪರಿಪಾಠ ಮತ್ತೆ ಬರಲೆಂದು ಆಶಯಪಟ್ಟರು. ವಾಸ್ತವವಾಗಿ ನರಸಿಂಹರಾಯರ ಜನಮನ್ನಣೆ ತೀವ್ರವಾಗಿಲ್ಲವಾದುದರಿಂದ ಅವರು ಬಲುಬೇಗ ಸಕರ್ಾರ ಸಂಭಾಳಿಸಲಾಗದೇ ಕೈಚೆಲ್ಲಿ ಮತ್ತೆ ಜನ ಆಸೆ ಕಂಗಳಿಂದ ಪರಿವಾರದತ್ತ ಹೊರಳುತ್ತಾರೆಂದು ಭಜಕರೆಲ್ಲ ಭಾವಿಸಿಬಿಟ್ಟರು.

6
ನರಸಿಂಹರಾಯರು ಕಾಂಗ್ರೆಸ್ಸಿಗೆ ಚುನಾವಣೆಗಳನ್ನು ಘೋಷಿಸುವ ಮೂಲಕ ಒಳವಲಯದಲ್ಲಿ ತಲ್ಲಣವನ್ನು ಹುಟ್ಟಿಸಿಬಿಟ್ಟಿದ್ದರು. ಚುನಾವಣೆಗಳ ನಂತರ ಹಿಂದೂ ಪತ್ರಿಕೆ ‘ಇತ್ತೀಚೆಗೆ ನಡೆದ ಸಂಘಟನಾತ್ಮಕ ಚುನಾವಣೆಗಳು ನರಸಿಂಹರಾಯರ ಮೇಲಿನ ವಿಶ್ವಾಸವನ್ನು ಬಲಗೊಳಿಸಿದೆಯಲ್ಲದೇ ಆತ ಪ್ರಬಲ ಮುತ್ಸದ್ದಿ ಎಂದು ಸಾಬೀತುಪಡಿಸಿದೆ’ ಎಂದು ಬರೆದಿತ್ತು. ಇದು ಪರಿವಾರಕ್ಕೆ ತಲ್ಲಣಗಳನ್ನು ಹುಟ್ಟಿಸಲು ಸಾಕಿತ್ತು. ಈ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಕಾಂಗ್ರೆಸ್ ಸದಸ್ಯರು ಕಾಂಗ್ರೆಸ್ನ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪಧರ್ಿಸುವ ಇರಾದೆ ವ್ಯಕ್ತಪಡಿಸಿದರು. ಚುನಾವಣೆಗಳ ನಂತರ ಅಜರ್ುನ್ಸಿಂಗ್, ಎಕೆ ಆ್ಯಂಟನಿ, ಜಿತೇಂದ್ರಪ್ರಸಾದ್, ಶರತ್ಪವಾರ್, ಧವನ್, ಗುಲಾಂನಬಿಆಜಾದ್, ಬಲರಾಮ್ಜಾಖಡ್, ರಾಜೇಶ್ ಪೈಲಟ್, ಅಹ್ಮದ್ ಪಟೇಲ್, ವಿಜಯ ಭಾಸ್ಕರ್ರೆಡ್ಡಿ ಇಷ್ಟೂ ಜನ ಭಿನ್ನ-ಭಿನ್ನ ಸ್ಥಾನಗಳಲ್ಲಿ ಗೆದ್ದು ಬಂದರು. ಆದರೆ, ಚುನಾವಣೆಗಳು ನರಸಿಂಹರಾಯರು ಅಂದುಕೊಂಡಂತಹ ಫಲಿತಾಂಶವನ್ನು ಕೊಟ್ಟಿರಲಿಲ್ಲ. ಬಹುತೇಕರು ಅವರ ವಿರೋಧಿಗಳಾಗಿದ್ದು ಪರಿವಾರದ ಸಮರ್ಥಕರಾಗಿದ್ದವರೇ ಗೆದ್ದು ಬಂದಿದ್ದರು. ನರಸಿಂಹರಾಯರ ನಿರ್ಣಯಗಳನ್ನು ಎಲ್ಲ ಕಾಲಗಳಲ್ಲೂ ಸಮಥರ್ಿಸಿಕೊಂಡು ಬಂದಿದ್ದ ಕರುಣಾಕರನ್ ಮತ್ತು ಪ್ರಣಬ್ ಮುಖಜರ್ಿಯವರೇ ಸೋಲುಂಡಿದ್ದರು. ಆದರೆ, ನರಸಿಂಹರಾಯರು ಸಾಮಾನ್ಯವಾದ ವ್ಯಕ್ತಿಯೇ ಅಲ್ಲ. ಈ ಇಡಿ ಚುನಾವಣೆಯಲ್ಲಿ ಬಲಿಷ್ಠರು ಪ್ರಭಾವ ಬೀರಿ ಗೆದ್ದು ಬಂದುದನ್ನು ಅರಿತಿದ್ದ ಅವರು ಅದಕ್ಕೊಂದು ಪ್ರತಿದಾಳ ಸಿದ್ಧಪಡಿಸಿಕೊಂಡಿಯೇ ಇದ್ದರು. ಇಡಿಯ ಚುನಾವಣೆಯಲ್ಲಿ ಒಬ್ಬ ದಲಿತ ನಾಯಕನಾಗಲೀ ಹೆಣ್ಣುಮಗಳಾಗಲೀ ಗೆಲ್ಲದಿರುವುದನ್ನು ಬಲವಾಗಿ ವಿರೋಧಿಸಿ ತಮ್ಮ ಅಸಂತೋಷವನ್ನು ವ್ಯಕ್ತಪಡಿಸಿದರು. ಕಾಂಗ್ರೆಸ್ಸಿನ ಹಳೆಯ ದಾಳವನ್ನು ಅದನ್ನು ಪ್ರಯೋಗಿಸಲು ಕಲಿಸಿಕೊಟ್ಟವರ ಮೇಲೆಯೇ ಪ್ರಯೋಗಿಸಿದರು. ಮೇಲ್ವರ್ಗದವರೆಲ್ಲಾ ಸೇರಿ ಚುನಾವಣಾ ಅಕ್ರಮ ನಡೆಸಿ ದಲಿತರನ್ನು ಶೋಷಿಸಿದ್ದೀರಾ ಎಂದು ಆರೋಪಿಸಿ ಚುನಾಯಿತ ಪ್ರತಿನಿಧಿಗಳೆಲ್ಲರಿಗೂ ರಾಜಿನಾಮೆ ಕೊಡುವಂತೆ ಹೇಳಿದರು. ದಲಿತ ಮತ್ತು ಸ್ತ್ರೀ ಪ್ರತಿನಿಧಿಗಳನ್ನು ಒಳತರಲು ಈ ಕ್ರಮ ಅಗತ್ಯ ಎಂದು ನರಸಿಂಹರಾಯರು ಮುಲಾಜಿಲ್ಲದೇ ತಮ್ಮ ಮಿತ್ರ ಕರುಣಾಕರನ್, ಸುಶೀಲ್ಕುಮಾರ್ ಶಿಂಧೆ ಮತ್ತು ಒಮನ್ದೇವ್ರಿ ಎಂಬ ಈಶಾನ್ಯ ರಾಜ್ಯದ ಮಹಿಳೆಯೊಬ್ಬರನ್ನು ಒಳತಂದರು. ಹಾಗೆಯೇ ಚುನಾವಣೆಯಲ್ಲಿ ಗೆದ್ದಿದ್ದ ಎಲ್ಲರನ್ನೂ ತಾವೇ ನಾಮನಿದರ್ೇಶನ ಮಾಡಿ ಅವರೆಲ್ಲರ ಸಂವಿಧಾನಾತ್ಮಕ ಅಧಿಕಾರವನ್ನು ಮೊಟಕುಗೊಳಿಸಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡರು. ಇದು ಪರಿವಾರದ ನಿಷ್ಠರಿಗೆ ಇರುಸುಮುರಿಸು ಉಂಟುಮಾಡಿತ್ತಾದರೂ ಕಾಂಗ್ರೆಸ್ಸು ಸಮರ್ಥ ದಾರಿಯನ್ನು ಹಿಡಿಯುವ ಹೊತ್ತು ಬಂದಿತ್ತು. ಪಿ.ವಿ ನರಸಿಂಹರಾಯರು ತಮ್ಮ ಸಕರ್ಾರದ ಅವಧಿಯಲ್ಲಿ ಆಥರ್ಿಕ ಸುಧಾರಣೆಯನ್ನು ತಂದು ಜನಮನ್ನಣೆಯನ್ನು ಗಳಿಸಿದರು. ಹಳ್ಳ ಸೇರುತ್ತಿದ್ದ ಭಾರತದ ಆಥರ್ಿಕ ಸ್ಥಿತಿಗತಿಗಳನ್ನು ಸುಧಾರಿಸಿ ಅದಕ್ಕೊಂದು ಸ್ವರೂಪವನ್ನು ಕೊಟ್ಟರು. ಇದು ಪರಿವಾರದ ಹೊರತಾಗಿಯೂ ಅಧಿಕಾರ ನಡೆಸುವ ಸಾಮಥ್ರ್ಯ ಬೇರೆಯವರಲ್ಲಿದೆ ಎಂಬ ವಿಶ್ವಾಸವನ್ನು ಜನರೊಳಗೆ ತುಂಬಲು ಸಾಕಷ್ಟಾಗಿತ್ತು. ಆಗಲೇ ಕಾಂಗ್ರೆಸ್ಸು ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಿದ್ದರೆ ಇಂದು ಪ್ರಾದೇಶಿಕ ಪಕ್ಷಗಳೆದುರಿಗೆ ಕೈಚಾಚಿಕೊಂಡು ನಿಲ್ಲುವ ಪರಿಸ್ಥಿತಿ ಇರುತ್ತಿರಲಿಲ್ಲ. ಆದರೇನು, ಮರುಚುನಾವಣೆಗಳಲ್ಲಿ ಅಧಿಕಾರ ನಡೆಸುವಷ್ಟು ಪೂರ್ಣ ಬಹುಮತ ನರಸಿಂಹರಾಯರಿಗೆ ಬರದೇ ಹೋದಾಗ ಅವರು ಉಳಿದೆಲ್ಲ ಪಕ್ಷಗಳನ್ನು ಒಲಿಸಿ ಸಮ್ಮಿಶ್ರ ಸಕರ್ಾರ ನಡೆಸುವ ಪ್ರಯತ್ನ ಆರಂಭಿಸಿದ್ದಾಗಲೇ ಕಾಂಗ್ರೆಸ್ಸಿನ ಪರಿವಾರಭಜಕರು ಪತ್ರಿಕಾಗೋಷ್ಠಿಯನ್ನು ಕರೆದು ತಮಗೆ ಅಧಿಕಾರ ನಡೆಸುವ ಇರಾದೆ ಇಲ್ಲವೆಂದು, ಯಾರಾದರೂ ಇಚ್ಛೆಪಟ್ಟರೆ ಅವರಿಗೆ ಬೆಂಬಲ ಕೊಡುವೆವೆಂದು ಹೇಳಿಕೆಕೊಟ್ಟು ನರಸಿಂಹರಾಯರನ್ನು ಹೊರದಬ್ಬುವ ತಮ್ಮ ಯೋಜನೆಗಳನ್ನು ಸಾಕಾರಗೊಳಿಸಿಕೊಂಡರು! ಅದು ಅಕ್ಷರಶಃ ಅವರ ರಾಜಕೀಯ ಅಂತ್ಯವೇ ಆಗಿತ್ತು. ಹಾಂಗತ ಕಾಂಗ್ರೆಸ್ಸು ಇಲ್ಲಿಗೇ ನಿಲ್ಲಲಿಲ್ಲ. ನರಸಿಂಹರಾಯರು ತೀರಿಕೊಂಡಾಗ ಅವರ ಶವಕ್ಕೆ ಕೊಡಬೇಕಾದ ಯಾವ ಗೌರವವನ್ನೂ ಕೊಡಲಿಲ್ಲ. ಒಂದು ಕಾಲದಲ್ಲಿ ಪಕ್ಷದ ಅಧ್ಯಕ್ಷರಾಗಿದ್ದ ಅವರ ಪಾಥರ್ಿವ ಶರೀರಕ್ಕೆ ಪಕ್ಷದ ಕಛೇರಿಗೂ ಪ್ರವೇಶ ಕೊಡಲಿಲ್ಲ. ಕೊನೆಗೆ ಅವರ ಶವಸಂಸ್ಕಾರಕ್ಕೆ ದೆಹಲಿಯಲ್ಲೇ ಅವಕಾಶ ಕೊಡಬಾರದೆಂಬ ಹಠ ಕೂಡ ಮಾಡಲಾಯ್ತು. ತಮ್ಮ ಅಧ್ಯಕ್ಷನಿಗೆ ಕಷ್ಟಕಾಲದಲ್ಲಿ ಪಕ್ಷದ ನಾಯಕನಾಗಿ, ದೇಶವನ್ನು ಮುನ್ನಡೆಸಿದ ಒಬ್ಬ ಪ್ರಧಾನಿಗೆ ಕಾಂಗ್ರೆಸ್ಸು ಕೊಟ್ಟ ಗೌರವ ಇದು.
ಬಿಡಿ. ಇದು ಬೇರೊಂದು ಚಚರ್ೆ. ಆದರೆ ಕೊನೆಯ ಪಕ್ಷ ನರಸಿಂಹರಾಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಛಾತಿಯನ್ನು ಕಾಂಗ್ರೆಸ್ಸಿಗರು ತೋರಿದ್ದರೂ ಕಾಂಗ್ರೆಸ್ಸು ಮುಕ್ತ ಭಾರತದ ನಿಮರ್ಾಣದ ಕನಸು ಕಾಣುವ ಪರಿಸ್ಥಿತಿ ದೇಶಕ್ಕಿರುತ್ತಿರಲಿಲ್ಲ. ಹಾಗಂತ ತಿದ್ದಿಕೊಳ್ಳುವ ಅವಕಾಶಗಳು ಮತ್ತೂ ಇತ್ತು..

Comments are closed.