ಕೇರಳದ ಕ್ಯಾಥೊಲಿಕ್ ಚರ್ಚಿನಲ್ಲಿ ಅತ್ಯಾಚಾರ ಮಾಡಿ ಸಿಕ್ಕುಬಿದ್ದ ಪಾದ್ರಿಗಳು ಭಾರತವನ್ನು ಹೊಗಳುತ್ತಿರುವುದೇಕೆ ಗೊತ್ತಾ?!
ಹಿಂದೂಧರ್ಮದ ವಿಚಾರಕ್ಕೆ ಬಂದಾಗ ಆಳಿಗೊಂದು ಕಲ್ಲಿನಂತೆ ಬೀಸುವ ಪತ್ರಕರ್ತರು, ಹೋರಾಟಗಾರರು, ಸೆಕ್ಯುಲರ್ ಸಂತ ಮಹಾತ್ಮರೆಲ್ಲಾ ಈಗ ಮೌನವನ್ನೇ ತಾಳಿದ್ದಾರೆ. ಬೂಟಾಟಿಕೆಯ ಜನಕ್ಕೆ ಭಾರತದಲ್ಲಿ ಕೊರತೆಯೇ ಇಲ್ಲ. ಸತಿ ಪದ್ಧತಿಯ ಕುರಿತಂತೆ ಗಂಟೆಗಟ್ಟಲೆ ಮಾತನಾಡುವವರು ತೀನ್ ತಲಾಖಿನ ಕುರಿತಂತೆ ಮೌನಕ್ಕೆ ಶರಣಾಗಿಬಿಡುತ್ತಾರೆ.
ಕೇರಳದ ಮಲಂಕಾರ ಆಥರ್ೋಡಕ್ಸ್ ಸಿರಿಯನ್ ಚಚರ್ು ದೇಶವೆಲ್ಲಾ ಸಂಭ್ರಮಿಸುವ ರೀತಿಯಲ್ಲಿ ಹೇಳಿಕೆ ಕೊಟ್ಟಿದೆ. ಪರಂಪರಾನುಗತವಾಗಿ ಸಹಿಷ್ಣುತೆಯನ್ನು ಪಾಲಿಸಿಕೊಂಡು ಬಂದಿರುವ ಹಿಂದೂಧರ್ಮ ಕ್ರಿಶ್ಚಿಯನ್ ಮತದ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸಬಾರದು ಎಂದಿದೆ. ಇವೇ ಚಚರ್ುಗಳು ಬಿಹಾರದ ಚುನಾವಣೆಗೂ ಮುನ್ನ ಭಾರತದಲ್ಲಿ ಅಸಹಿಷ್ಣುತೆಯಿದೆ ಎಂದು ಎದ್ದೆದ್ದು ಕುಣಿದಾಡಿದ್ದನ್ನು ಈ ಹೊತ್ತಲ್ಲಿ ಮರೆಯುವುದು ಸಾಧ್ಯವೇ ಇಲ್ಲ. ಇಷ್ಟಕ್ಕೂ ಆಗಿದ್ದಿಷ್ಟೇ. ಕ್ಯಾಥೋಲಿಕ್ ಚಚರ್ುಗಳಲ್ಲಿ ತಪ್ಪೊಪ್ಪಿಗೆಯ ಕ್ರಮವೊಂದಿದೆ. ಆ ಚರ್ಚನ್ನು ಅನುಸರಿಸುವವರು ತಾವು ಮಾಡಿರುವ ತಪ್ಪನ್ನು ತಪ್ಪೊಪ್ಪಿಗೆ ಕೊಠಡಿಯಲ್ಲಿ ಕುಳಿತಿರುವ ಪಾದ್ರಿಯ ಮುಂದೆ ಮಂಡಿಸುತ್ತಾರೆ. ಆತ ಸಮಾಧಾನ ಮಾಡಿ ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳಿ ಎನ್ನುತ್ತಾನೆ. ಈ ಕನ್ಫೆಷನ್ನ ದುರುಪಯೋಗ ಮೊದಲಿನಿಂದಲೂ ಆಗುತ್ತಿದೆ. ಸಿರಿವಂತರೆನಿಸಿಕೊಂಡವರು ತಾವು ಮಾಡಿರುವ ತಪ್ಪಿಗೆ ಪಾದ್ರಿಯ ಮುದ್ರೆ ಪಡೆದು ಮತ್ತೊಂದು ತಪ್ಪಿಗೆ ಅಣಿಯಾಗುತ್ತಿದ್ದುದು ಒಂದು ಕಾಲಘಟ್ಟದಲ್ಲಿ ಪ್ರೊಟೆಸ್ಟೆಂಟ್ ಪಂಥದ ಉಗಮಕ್ಕೆ ಕಾರಣವಾಯ್ತು. ಹಾಗಂತ ಕ್ಯಾಥೊಲಿಕ್ ಚಚರ್ುಗಳಲ್ಲಿ ಈ ಪದ್ಧತಿ ನಿಲ್ಲಲಿಲ್ಲ. ಹುಟ್ಟಿನಿಂದ ತಮ್ಮೊಂದಿಗೆ ಬಂದಿರುವ ಪಾಪಗಳು ಕ್ರಿಶ್ಚಿಯನ್ ಮತ ಸ್ವೀಕಾರದೊಂದಿಗೇ ಕಳೆದುಹೋಗುತ್ತದೆ ಎಂಬುದು ಕ್ಯಾಥೊಲಿಕರ ಮೊದಲ ನಂಬಿಕೆ. ಅವರು ಮತಾಂತರ ಮಾಡುವಾಗಲೂ ಈ ಮಾತನ್ನು ಹೇಳುತ್ತಾರೆ. ಆದರೆ ಆನಂತರವೂ ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವೇನು? ಪಾದ್ರಿಗಳ ಮುಂದೆ ತಪ್ಪೊಪ್ಪಿಕೊಂಡು ಆಶೀವರ್ಾದ ಪಡೆಯುವುದಷ್ಟೇ. ಆದರೆ ಹೀಗೆ ತಪ್ಪನ್ನೊಪ್ಪಿಸಿಕೊಳ್ಳುವವನ ಯೋಗ್ಯತೆ ಏನೆಂಬುದು ಒಮ್ಮೆ ಪರೀಕ್ಷೆಯಾಗಬೇಕಲ್ಲ! ಎಲ್ಲವನ್ನೂ ಕಳಚಿದ್ದೇನೆಂದುಕೊಂಡ ನಂತರವೂ ಕೂಡ ಆಸೆ, ಆಮಿಷಗಳಿಗೆ ಬಲಿಯಾಗುವ ವ್ಯಕ್ತಿತ್ವದವರು ತಪ್ಪೊಪ್ಪಿಗೆ ಕೋಣೆಯಲ್ಲಿ ಕುಳಿತು ಭಕ್ತರ ತಪ್ಪಿನ ಕುರಿತಂತೆ ಆಲಿಸಿ ಅದನ್ನು ಹೇಗೆ ಬಳಸಿಕೊಳ್ಳಬಹುದೆಂಬುದನ್ನು ನೀವು ಊಹಿಸಲೂ ಸಾಧ್ಯವಿಲ್ಲ. ಇದಕ್ಕೆ ಅತ್ಯಂತ ಹೆಚ್ಚು ಬಲಿಯಾಗುವುದೇ ಹೆಣ್ಣುಮಕ್ಕಳು!
ಕಳೆದ ವರ್ಷ ಕೇರಳದ ಕಣ್ಣೂರಿನ ಕೊಟ್ಟಿಯೂರ್ ಎನ್ನುವ ಹಳ್ಳಿಯಲ್ಲಿ ಪಾದ್ರಿಯೊಬ್ಬ ಅಪ್ರಾಪ್ತ ವಯಸ್ಕ ಹೆಣ್ಣುಮಗಳನ್ನು ಇದೇ ಸಂದರ್ಭದಲ್ಲಿ ಬುಟ್ಟಿಗೆ ಹಾಕಿಕೊಂಡು ಅತ್ಯಾಚಾರ ಮಾಡಿದ್ದ. ಸ್ಥಳೀಯರು ತುಂಬಾ ದೊಡ್ಡ ಮಟ್ಟದ ಗಲಾಟೆ ಮಾಡಿದ್ದರೂ ಕೂಡ. ಆದರೆ ಆ ಸುದ್ದಿ ಹಳ್ಳಿಯಿಂದ ಆಚೆ ಬಾರದಂತೆ ಚಚರ್ುಗಳು ಅದರ ಮೇಲೆ ಚಪ್ಪಡಿ ಎಳೆದುಬಿಟ್ಟಿದ್ದವು. ಈ ಬಾರಿ ಹಾಗಾಗಲಿಲ್ಲ.ಅದೇ ಕೇರಳದಲ್ಲಿ ಮದುವೆಯಾಗದ ಹೆಣ್ಣುಮಗಳೊಬ್ಬಳು ತಾನು ಮಾಡಿಕೊಂಡ ತಪ್ಪೊಪ್ಪಿಗೆಯನ್ನೇ ಆಧಾರವಾಗಿಟ್ಟುಕೊಂಡು ಪಾದ್ರಿಯೊಬ್ಬ ಆಕೆಯನ್ನು ತನಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದ. ಬೇಸತ್ತ ಹೆಣ್ಣುಮಗಳು ಈ ವಿಚಾರವನ್ನು ಮತ್ತೊಬ್ಬ ಪಾದ್ರಿಯ ಬಳಿಗೊಯ್ದಳು. ಈಗ ಆಕೆ ಆತನಿಗೂ ಆಹಾರವಾಗಬೇಕಾಗಿ ಬಂತು. ಆತ ಸುಮ್ಮನಾಗದೇ ಇನ್ನೂ ಮೂವರಿಗೆ ಈ ವಿಚಾರ ಮುಟ್ಟಿಸಿದ. ಐದೂ ಜನ ಆಕೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲಾರಂಭಿಸಿದರು. ತಾನು ಮುಚ್ಚಿಡಬೇಕೆಂದಿದ್ದ ಸಂಗತಿಯೇ ಏಸುವಿನ ಮುಂದೆ ಬಿಚ್ಚಿಟ್ಟಿದ್ದಕ್ಕೆ ಆಕೆ ಸರಿಯಾದ ಶಿಕ್ಷೆ ಅನುಭವಿಸುತ್ತಿದ್ದಳು. ಆಕೆಗೆ ಮದುವೆಯಾದ ಮೇಲೂ ಪಾದ್ರಿಗಳ ಕಾಟ ಮಾತ್ರ ತಪ್ಪಲೇ ಇಲ್ಲ. ಒಟ್ಟಾರೆ 380 ಬಾರಿ ಆಕೆಯನ್ನು ಚಚರ್ಿನ ಪೂಜಕರು ಬಳಸಿಕೊಂಡಿದ್ದಾರೆ. ಇನ್ನು ತಡೆಯಲು ಸಾಧ್ಯವಾಗದೇ ಹೋದಾಗ ಗಂಡನ ಬಳಿ ಎಲ್ಲವನ್ನೂ ಬಿಚ್ಚಿಟ್ಟ ಆ ಹೆಣ್ಣುಮಗಳು ಮುಂದೇನೂ ಮಾಡಲು ತೋಚದೆ ಕೈಚೆಲ್ಲಿಬಿಟ್ಟಿದ್ದಾಳೆ. ಕುಪಿತ ಗಂಡ ತನ್ನ ಆಪ್ತರ ಬಳಿ ಪಾದ್ರಿಗಳ ಕುರಿತಂತೆ ಆಕ್ರೋಶ ಭರಿತನಾಗಿ ನುಡಿಯುತ್ತಿದ್ದಾಗ ಈ ಚಚರ್ಿನ ಬಣ್ಣ ಬಯಲಾಗಿದೆ. ಆ ಹೆಣ್ಣುಮಗಳ ಪತಿಯ ದೂರವಾಣಿ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕ್ಯಾಥೊಲಿಕ್ ಚಚರ್ು ಬೀದಿಗೆ ಬಂತು. ನ್ಯಾಷನಲ್ ಕಮಿಷನ್ ಫಾರ್ ವುಮೆನ್ ತಕ್ಷಣ ಈ ವಿಚಾರವನ್ನು ಕೈಗೆತ್ತಿಕೊಂಡು ಆ ಪಾದ್ರಿಗಳ ವಿರುದ್ಧ ಕಾನೂನು ತೀವ್ರ ಕ್ರಮ ಕೈಗೊಳ್ಳುವಂತೆ ಎಚ್ಚರಿಸಿತು. ಅಷ್ಟೇ ಅಲ್ಲ. ಕ್ಯಾಥೋಲಿಕ್ ಚಚರ್ುಗಳಲ್ಲಿರುವ ಈ ತಪ್ಪೊಪ್ಪಿಗೆ ಕ್ರಮವನ್ನೇ ನಿಷೇಧಿಸಬೇಕೆಂದು ಕೇಳಿಕೊಂಡಿತು.
ಹಿಂದೂಧರ್ಮದ ವಿಚಾರಕ್ಕೆ ಬಂದಾಗ ಆಳಿಗೊಂದು ಕಲ್ಲಿನಂತೆ ಬೀಸುವ ಪತ್ರಕರ್ತರು, ಹೋರಾಟಗಾರರು, ಸೆಕ್ಯುಲರ್ ಸಂತ ಮಹಾತ್ಮರೆಲ್ಲಾ ಈಗ ಮೌನವನ್ನೇ ತಾಳಿದ್ದಾರೆ. ಬೂಟಾಟಿಕೆಯ ಜನಕ್ಕೆ ಭಾರತದಲ್ಲಿ ಕೊರತೆಯೇ ಇಲ್ಲ. ಸತಿ ಪದ್ಧತಿಯ ಕುರಿತಂತೆ ಗಂಟೆಗಟ್ಟಲೆ ಮಾತನಾಡುವವರು ತೀನ್ ತಲಾಖಿನ ಕುರಿತಂತೆ ಮೌನಕ್ಕೆ ಶರಣಾಗಿಬಿಡುತ್ತಾರೆ. ಶನಿ ಶಿಂಗ್ಣಾಪುರದಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲವೆಂಬುದು ಸುಪ್ರೀಂಕೋಟರ್ಿನ ಮೆಟ್ಟಿಲು ಹತ್ತುವ ವಿಚಾರವಾದರೆ ಹಾಜಿ ಅಲಿ ದಗರ್ಾಕ್ಕಾಗಲೀ, ಪ್ರತಿನಿತ್ಯದ ನಮಾಜಿಗಾಗಲಿ ಹೆಣ್ಣುಮಕ್ಕಳನ್ನು ಒಳಗೇಕೆ ಬಿಡುವುದಿಲ್ಲ ಎಂಬ ವಿಚಾರಕ್ಕೆ ಯಾರೂ ಸೊಲ್ಲೆತ್ತುವುದಿಲ್ಲ. ರಾಜಸ್ಥಾನದಲ್ಲೆಲ್ಲಾ ಹೆಣ್ಣುಮಕ್ಕಳು ಮುಖದ ಮುಂದೆ ಇಳಿಬಿಡುವ ಪರದೆ ಪ್ರತಿಗಾಮಿತನದ್ದು ಎನ್ನುವ ಇವರ ಪಾಲಿಗೆ ಬುಖರ್ಾ ಮಾತ್ರ ಪ್ರಗತಿಯ ದ್ಯೋತಕ. ದೀಪಾವಳಿಯಂದು ಪಟಾಕಿ ಹೊಡೆದರೆ ರಸ್ತೆಯಲ್ಲಿರುವ ನಾಯಿಗಳಿಗೆ ತೊಂದರೆಯಾಗುತ್ತದೆ, ಆದರೆ ಈದ್ಗೆ ಕುರಿಯನ್ನು ಬಲಿಕೊಡುವುದು, ದನವನ್ನು ಕದ್ದೊಯ್ದು ಕಡಿದು ಮಾರಾಟ ಮಾಡುವುದು ಖಂಡಿತ ತಪ್ಪಲ್ಲ. ಶಿವಲಿಂಗದ ಮೇಲೆ ಹಾಲಿನ ಅಭಿಷೇಕ ತಪ್ಪು. ಆದರೆ ಕ್ರಿಸ್ಮಸ್ನಂದು ಕೋಟ್ಯಂತರ ಕ್ಯಾಂಡಲ್ಗಳನ್ನು ಉರಿಸಿ ಪ್ರಕೃತಿಯನ್ನು ಹಾಳುಮಾಡುವುದು ಶುದ್ಧ ಆಚರಣೆ. ಹಿಂದೂಗಳಿಗೆ ಕುಟುಂಬ ನಿಯಂತ್ರಣ ಕಡ್ಡಾಯ. ಆದರೆ ಮುಸಲ್ಮಾನರಿಗೆ ಅದು ಭಗವಂತನ ವರದಾನ. ಆ ಕುರಿತಂತೆ ಮಾತನಾಡುವುದು ಸೆಕ್ಯುಲರ್ ತತ್ವಕ್ಕೆ ವಿರೋಧ. ಈ ಬೂಟಾಟಿಕೆಗಳು ಇತ್ತೀಚೆಗೆ ನಿಜವಾದ ರಂಗು ತೋರಿಸಲಾರಂಭಿಸಿದೆ. ಕೇರಳ ಚಚರ್್ ಆ್ಯಕ್ಟ್ ಆಕ್ಷನ್ ಕೌನ್ಸಿಲ್ನ ಉಪಾಧ್ಯಕ್ಷೆ ಇಂದುಲೇಖಾ ಜೊಸೆಫ್ ಎಲ್ಲ ಬಗೆಯ ಬೂಟಾಟಿಕೆಗಳನ್ನು ಖಂಡಿಸುತ್ತಾ ಚಚರ್ಿನಲ್ಲಿ ಪಾದ್ರಿಗಳು ಮಾತ್ರ ತಪ್ಪೊಪ್ಪಿಗೆ ಪಡೆದುಕೊಳ್ಳಬೇಕು ಎಂಬುದನ್ನು ನಿಷೇಧಿಸಿ ಮಹಿಳೆಯರ ಮತ್ತು ಅಪ್ರಾಪ್ತ ವಯಸ್ಕರ ತಪ್ಪೊಪ್ಪಿಗೆಯನ್ನು ಪಾದ್ರಿಗಳಷ್ಟೇ ಪ್ರಖರ ಸಾಧನೆಗೈಯ್ದಿರುವ ನನ್ಗಳು ಕೇಳಬೇಕು ಎಂಬ ಬೇಡಿಕೆಯನ್ನು ಹೊತ್ತು ಕೋಟರ್ಿನ ಮುಂದೆ ನಿಂತಿದ್ದಾರೆ. ಅಷ್ಟೇ ಅಲ್ಲ, ಚಚರ್ಿನ ಸ್ತ್ರೀ ವಿರೋಧಿ ವ್ಯಕ್ತಿತ್ವವನ್ನು ನಿಚ್ಚಳವಾಗಿ ಕಾಣುವಂತೆ ಜನರ ಮುಂದಿರಿಸಿದ್ದಾರೆ.
ಇದಕ್ಕೆ ಪೂರಕವಾಗಿಯೇ ನ್ಯಾಷನಲ್ ಕಮಿಷನ್ ಫಾರ್ ವುಮೆನ್ ಕ್ಯಾಥೊಲಿಕ್ ಚಚರ್ುಗಳಲ್ಲಿ ತಪ್ಪೊಪ್ಪಿಗೆಯನ್ನೇ ನಿಷೇಧಿಸಬೇಕೆಂದು ಸಕರ್ಾರದ ಮುಂದೆ ಆಗ್ರಹ ಮಂಡಿಸಿದೆ. ಕ್ರಿಶ್ಚಿಯನ್ನರಲ್ಲೇ ದೊಡ್ಡದಾಗಿರುವ ಪ್ರಗತಿಪರ ವರ್ಗವೊಂದು ಇದಕ್ಕೆ ಪೂರ್ಣ ಬೆಂಬಲ ಸೂಚಿಸುತ್ತಿದ್ದರೆ ಚಚರ್ು ಮಾತ್ರ ಒಂದೇ ಕಣ್ಣಿನಲ್ಲಿ ಅಳುತ್ತಿದೆ. ಭಾರತ ಸಹಿಷ್ಣು ದೇಶ ಎಂಬುದು ಅದಕ್ಕೆ ಈಗ ನೆನಪಾಗುತ್ತಿದೆ. ಹೇಗೆ ತನ್ನ ತಾನು ಕಾಲದ ಪ್ರವಾಹಕ್ಕೆ ಒಡ್ಡಿಕೊಂಡು ಬದಲಾವಣೆಗಳನ್ನು ಮೈಗೂಡಿಸಿಕೊಂಡು ನಡೆಯುವ ಸಾಮಥ್ರ್ಯವನ್ನು ಹಿಂದೂಧರ್ಮ ತೋರಿಸಿದೆಯೋ ಚಚರ್ು ಕೂಡ ಈಗ ಅದೇ ಸವಾಲನ್ನು ಸ್ವೀಕರಿಸಬೇಕಿದೆ. ಕ್ರಿಶ್ಚಿಯಾನಿಟಿಗೆ ಆ ಸಾಮಥ್ರ್ಯವಿದೆಯಾ ಎಂಬುದನ್ನು ನಾವು ಕಾದು ನೋಡಬೇಕಿದೆ ಅಷ್ಟೇ!