ವಿಭಾಗಗಳು

ಸುದ್ದಿಪತ್ರ


 

ಡ್ರ್ಯಾಗನ್ ಮುಸುಡಿಗೇ ಬಿದ್ದಿದೆ ಗುದ್ದು!

ಗಿಲ್ಗಿಟ್ ಪ್ರದೇಶದ ಬಹು ಸಂಖ್ಯಾತರು ಷಿಯಾಗಳು. ಆದರೆ ಇಡಿಯ ಪಾಕೀಸ್ತಾನದ ಬಹುಪಾಲು ಜನ ಸುನ್ನಿಗಳು. ಸದಾ ಷಿಯಾಗಳನ್ನು ದ್ವೇಷಿಸುವ ಈ ಸುನ್ನಿಗಳು ಭಾರತದ ವಿರುದ್ಧ ಎತ್ತಿಕಟ್ಟಲು ಮಾತ್ರ ಗಿಲ್ಗಿಟ್ ಬಾಲ್ಟಿಸ್ತಾನವನ್ನು ಬಳಸಿಕೊಂಡರು. ಧರ್ಮದ ಅಫೀಮಿನ ನಶೆಯಿಂದ ಹೊರಬಂದ ಗಿಲ್ಗಿಟ್ ಭಾಗದಲ್ಲಿ ಪ್ರತ್ಯೇಕತೆಯ ಕೂಗು ಮೊಳಗಲಾರಂಭಿಸಿತು. ಜನ ಪಾಕೀಸ್ತಾನದ ಕಪಿಮುಷ್ಟಿಯಿಂದ ಹೊರಬರಬೇಕೆಂದು ಆಂದೋಲನ ಆರಂಭಿಸಿದರು. ಪಾಕೀಸ್ತಾನ ಯಾವುದಕ್ಕೂ ಜಗ್ಗಲಿಲ್ಲ. ಆಗಲೇ ಚೀನಾ ಪಾಕೀಸ್ತಾನಕ್ಕೆ ತನ್ನ ಕಾರಿಡಾರ್ ಯೋಜನೆಯ ಕನಸು ಕಾಣಿಸಲು ಶುರುಮಾಡಿದ್ದು.

ಬ್ರಿಟನ್ನಿನ ಸಂಸತ್ತು ತೆಗೆದುಕೊಂಡ ಐತಿಹಾಸಿಕ ನಿರ್ಣಯ ನಮ್ಮಲ್ಲನೇಕರ ಕಿವಿಗಳಿಗೂ ರಾಚದೇ ಮಾಯವಾಯಿತು. ಉತ್ತರ ಪ್ರದೇಶದ ರಾಜಕೀಯದ ಸಂವಾದದಲ್ಲಿ ಮೈಮರೆತಿದ್ದ ನಾವು ಜಾಗತಿಕ ಮಟ್ಟದಲ್ಲಿ ಭಾರತದ ಪರವಾಗಿ ಮಂಡಿಸಲ್ಪಟ್ಟ ಮಹತ್ವದ ನಿರ್ಣಯದ ಚರ್ಚೆ ಮಾಡುವುದನ್ನು ಮರೆತೇ ಬಿಟ್ಟಿದ್ದೆವು. ಅಸಲಿಗೆ ಪಾಕೀಸ್ತಾನ ಗಿಲ್ಗಿಟ್-ಬಾಲ್ಟಿಸ್ತಾನಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಘೋಷಣೆ ಮಾಡಲು ಸಿದ್ಧತೆ ನಡೆಸಿತ್ತು. ಈ ಹೊತ್ತಿನಲ್ಲಿಯೇ ಸರಿಯಾಗಿ ಬ್ರಿಟನ್ನಿನ ಸಂಸತ್ತಿನಲ್ಲಿ ಕನ್ಸರ್ವೇಟೀವ್ ಪಕ್ಷದ ಸಂಸದರಾದ ಬಾಬ್ ಬ್ಲ್ಯಾಕ್ಮನ್ ಪಾಕೀಸ್ತಾನ ಗಿಲ್ಗಿಟ್-ಬಾಲ್ಟಿಸ್ತಾನಗಳನ್ನು ನುಂಗಲು ಹವಣಿಸುತ್ತಿರುವುದನ್ನು ವಿರೋಧಿಸಿ ಗೊತ್ತುವಳಿ ಮಂಡಿಸಿದ್ದಾರೆ. ಈ ಪ್ರದೇಶ ಜಮ್ಮು-ಕಾಶ್ಮೀರಕ್ಕೆ ಸೇರಿದ್ದು ಪಾಕೀಸ್ತಾನ ಅದನ್ನು ವಶದಲ್ಲಿಟ್ಟುಕೊಂಡಿರುವುದೇ ಕಾನೂನು ಬಾಹಿರ, ಅಂತಹುದರಲ್ಲಿ ಅಲ್ಲಿ ಚೀನಾದೊಂದಿಗೆ ಸೇರಿ ಎಕಾನಾಮಿಕ್ ಕಾರಿಡಾರ್ ನಿರ್ಮಿಸಲು ಹೊರಟಿರುವುದು ಮತ್ತು ಈ ನಿಟ್ಟಿನಲ್ಲಿ ಜನರೊಂದಿಗೆ ಕ್ರೂರವಾಗಿ ನಡೆದುಕೊಳ್ಳುತ್ತಿರುವುದು ಅಕ್ಷರಶಃ ಮಾನವ ಹಕ್ಕುಗಳ ಉಲ್ಲಂಘನೆಯೇ ಎಂದಿದ್ದಾರೆ. ಮುಂದುವರೆಸಿ ಈ ಪ್ರದೇಶಗಳು ಭಾರತಕ್ಕೆ ಸೇರಿದವು ಎಂದು ಬ್ಲ್ಯಾಕ್ಮನ್ ಹೇಳಿದ ಮಾತಿಗೆ ಎಲ್ಲರೂ ತಲೆದೂಗಿ ನಿಲುವಳಿಯನ್ನು ಒಪ್ಪಿಕೊಂಡಿದ್ದಾರೆ. ಇಷ್ಟು ದಿನ ಯಾವುದನ್ನು ಬೊಬ್ಬೆಯಿಡುತ್ತಾ ನಾವೇ ಅಂಡಲೆಯುತ್ತಿದ್ದೆವೋ ಅದಕ್ಕೊಂದು ಜಾಗತಿಕ ಮೌಲ್ಯ ಈಗ ಬಂದಿದೆ.
ನೆನಪಿಡಿ. ಪಾಕ್ ಆಕ್ರಮಿತ ಕಾಶ್ಮೀರದ ಬಹುದೊಡ್ಡ ಭೂಭಾಗವೇ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ. ಬ್ರಿಟೀಷರು ಮಹಾರಾಜಾ ಹರಿಸಿಂಗರ ಸಹಾಯದಿಂದ ಇದನ್ನು ಆಳುತ್ತಿದ್ದರು. ರಷ್ಯಾದೊಂದಿಗಿನ ಸಂಬಂಧ ಸೂಕ್ತವಾಗಿ ನಿಭಾಯಿಸುವ ದೃಷ್ಟಿಯಿಂದ ಇದು ಅವರಿಗೆ ಮಹತ್ವದ ಪ್ರದೇಶವಾಗಿತ್ತು. ಬ್ರಿಟೀಷರು ಗಿಲ್ಗಿಟ್ ಸ್ಕೌಟ್ಸ್ ಎಂಬ ಸೇನಾ ತುಕಡಿಯನ್ನು ಅಲ್ಲಿ ನೆಲೆಗೊಳಿಸಿದರು. ಎರಡನೇ ಮಹಾಯುದ್ಧದ ನಂತರ ಭಾರತದಲ್ಲಿ ಸ್ವಾತಂತ್ರ್ಯ ಚಳುವಳಿ ತೀವ್ರಗೊಂಡಾಗ ತಾವು ಗೌರವಯುತವಾಗಿ ಹೊರಡುವ ನೆಪದಲ್ಲಿ ಬ್ರಿಟೀಷರು ಈ ದೇಶವನ್ನು ತುಂಡರಿಸುವ ಇರಾದೆ ವ್ಯಕ್ತಪಡಿಸಿದರು. ಅಂತೆಯೇ ಗಿಲ್ಗಿಟ್ ಸ್ಕೌಟ್ನ್ನು ಗಿಲ್ಗಿಟ್ನಿಂದ ಹಿಂಪಡೆದು ಮಹಾರಾಜರಿಗೆ ಮೇಜರ್ ಬ್ರೌನ್ ಮತ್ತು ಕ್ಯಾಪ್ಟನ್ ಮಥೀಸನ್ನ್ನು ಬಳಸಿಕೊಳ್ಳುವಂತೆ ಉಳಿಸಿ ಹೋದರು. ಸ್ವಾತಂತ್ರ್ಯದ ಹೊಸ್ತಿಲಲ್ಲಿ ಭಾರತದೊಂದಿಗೆ ಸೇರುವ ವಿಚಾರದಲ್ಲಿ ಗೊಂದಲದಲ್ಲಿದ್ದ ರಾಜನಿಗೆ ಪಾಕೀಸ್ತಾನದ ಅಪ್ರಚೋದಿತ ದಾಳಿಯಿಂದ ದಿಗಿಲಾಯಿತು. ತಕ್ಷಣಕ್ಕೆ ಭಾರತದೊಂದಿಗೆ ವಿಲೀನವಾಗುವ ಪತ್ರಕ್ಕೆ ಸಹಿ ಹಾಕಿಬಿಟ್ಟರು.
ಕಾಶ್ಮೀರವನ್ನು ಪಾಕೀಸ್ತಾನಕ್ಕೇ ಸೇರಿಸಬೇಕೆಂಬ ಇರಾದೆ ಹೊಂದಿದ್ದ ಮೇಜರ್ ಬ್ರೌನ್ಗೆ ಇದು ನುಂಗಲಾರದ ತುತ್ತಾಗಿತ್ತು. ಆತ ತಡಮಾಡಲಿಲ್ಲ. ಗಿಲ್ಗಿಟ್ ಭಾಗದಲ್ಲಿ ಮಹಾರಾಜರಿಂದ ನೇಮಕವಾಗಿದ್ದ ರಾಜ್ಯಪಾಲರನ್ನು ಕಿತ್ತೆಸೆದು ಪಾಕೀಸ್ತಾನದ ಮುಖ್ಯಸ್ಥರ ಕೈಗೆ ಈ ಪ್ರದೇಶ ಒಪ್ಪಿಸಿದ. ಗಿಲ್ಗಿಟ್ ಸ್ಕೌಟ್ನ ತುಕಡಿ ಬಾಲ್ಟಿಸ್ತಾನವನ್ನು ವಶಪಡಿಸಿಕೊಂಡು ಲಡಾಖ್ನೆಡೆಗೆ ಮುನ್ನುಗ್ಗಿತು. ಭಾರತೀಯ ಸೇನೆ ತೀವ್ರ ಪ್ರತಿರೋಧ ಒಡ್ಡಿ ಕಾರ್ಗಿಲ್ನವರೆಗಿನ ಪ್ರದೇಶವನ್ನೆಲ್ಲ ಮತ್ತೆ ವಶಪಡಿಸಿಕೊಂಡು ಪಾಕೀಸ್ತಾನದ ಬಯಕೆಗೆ ತಣ್ಣೀರೆರೆಚಿತು. ಆದರೆ ಅಷ್ಟರೊಳಗೆ ಗಿಲ್ಗಿಟ್ ಬಾಲ್ಟಿಸ್ತಾನದ ಪ್ರದೇಶಗಳು ಲಡಾಖ್ ಸ್ಕೌಟ್ಸ್ನ ವಶವಾಗಿದ್ದವು. ಈ ವೇಳೆಗೆ ಜಮ್ಮು ಕಾಶ್ಮೀರದ ಗೊಂದಲವನ್ನು ನೆಹರೂ ಅಂತರರಾಷ್ಟ್ರೀಯ ಮಟ್ಟಕ್ಕೊಯ್ದರು. ಅಲ್ಲಿ ಗಡಿಯಲ್ಲಿ ತನ್ನ ಪಡೆಯನ್ನು ಕಡಿತಗೊಳಿಸಬೇಕೆಂದು ಭಾರತಕ್ಕೆ ವಿಶ್ವಸಂಸ್ಥೆ ತಾಕೀತು ಮಾಡಿದರೆ, ಜಮ್ಮು-ಕಾಶ್ಮೀರದ ಒಟ್ಟೂ ಆಕ್ರಮಿತ ಭಾಗದಿಂದ ಪಾಕ್ ಸೇನೆ ಮರಳಬೇಕೆಂದು ಪಾಕೀಸ್ತಾನಕ್ಕೆ ಮಾರ್ಗದರ್ಶನ ಮಾಡಿತು. ಆನಂತರ ಜನಮತ ಗಣನೆ ನಡೆಸಿ ಯಾರು ಎಲ್ಲಿಗೆ ಸೇರಬೇಕೆಂಬ ನಿರ್ಧಾರ ಮಾಡಿದರಾಯ್ತು ಎಂಬುದು ಅದರ ಮನೋಗತವಾಗಿತ್ತು. ಭಾರತ ಸೇನಾ ಜಮಾವಣೆ ಕಡಿತ ಗೊಳಿಸಿತು. ಆದರೆ ಪಾಕೀಸ್ತಾನ ವಶಪಡಿಸಿಕೊಂಡ ಭೂಭಾಗದಿಂದ ಹಿಂದೆ ಸರಿಯಲೇ ಇಲ್ಲ. ಈ ನಿಯಮವನ್ನು ಧಿಕ್ಕರಿಸಿ ಜನಮತಗಣನೆ ಆಗಲೇಬೇಕೆಂದು ಹಠ ಹಿಡಿಯಿತು. ಅನಧಿಕೃತವಾಗಿ ವಶಪಡಿಸಿಕೊಂಡ ಭಾಗದಿಂದ ಹಿಂದೆ ಸರಿಯುವವರೆಗೂ ಜನಮತಗಣನೆಯ ಪ್ರಶ್ನೆಯೇ ಇಲ್ಲವೆಂಬ ವಾದಕ್ಕೆ ಭಾರತ ಬದ್ಧವಾಯ್ತು.

gb

 
ಅತ್ತ ಪಾಕ್ ಆಕ್ರಮಿತ ಕಾಶ್ಮೀರ ಆರಂಭದಲ್ಲಿದ್ದ ಉತ್ಸಾಹವನ್ನು ಕಳೆದುಕೊಂಡು ಅಸಮರ್ಥವಾಯಿತು. ಪಾಕೀಸ್ತಾನವೂ ಗಿಲ್ಗಿಟ್-ಬಾಲ್ಟಿಸ್ತಾನಗಳನ್ನು ಕಡೆಗಣಿಸಿ ಯಾವ ಅಭಿವೃದ್ಧಿಯೂ ಇಲ್ಲದಂತೆ ಮಾಡಿತು. ಇದಕ್ಕೊಂದು ಸಾಂಸ್ಕೃತಿಕ ಕಾರಣವೂ ಇದೆ. ಗಿಲ್ಗಿಟ್ ಪ್ರದೇಶದ ಬಹು ಸಂಖ್ಯಾತರು ಷಿಯಾಗಳು. ಆದರೆ ಇಡಿಯ ಪಾಕೀಸ್ತಾನದ ಬಹುಪಾಲು ಜನ ಸುನ್ನಿಗಳು. ಸದಾ ಷಿಯಾಗಳನ್ನು ದ್ವೇಷಿಸುವ ಈ ಸುನ್ನಿಗಳು ಭಾರತದ ವಿರುದ್ಧ ಎತ್ತಿಕಟ್ಟಲು ಮಾತ್ರ ಗಿಲ್ಗಿಟ್ ಬಾಲ್ಟಿಸ್ತಾನವನ್ನು ಬಳಸಿಕೊಂಡರು. ಧರ್ಮದ ಅಫೀಮಿನ ನಶೆಯಿಂದ ಹೊರಬಂದ ಗಿಲ್ಗಿಟ್ ಭಾಗದಲ್ಲಿ ಪ್ರತ್ಯೇಕತೆಯ ಕೂಗು ಮೊಳಗಲಾರಂಭಿಸಿತು. ಜನ ಪಾಕೀಸ್ತಾನದ ಕಪಿಮುಷ್ಟಿಯಿಂದ ಹೊರಬರಬೇಕೆಂದು ಆಂದೋಲನ ಆರಂಭಿಸಿದರು. ಪಾಕೀಸ್ತಾನ ಯಾವುದಕ್ಕೂ ಜಗ್ಗಲಿಲ್ಲ. ಆಗಲೇ ಚೀನಾ ಪಾಕೀಸ್ತಾನಕ್ಕೆ ತನ್ನ ಕಾರಿಡಾರ್ ಯೋಜನೆಯ ಕನಸು ಕಾಣಿಸಲು ಶುರುಮಾಡಿದ್ದು.
ಚೀನಾ-ಪಾಕೀಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆಯ ಮೂಲಕ ಚೀನಾ ಮತ್ತು ಪಾಕ್ಗಳನ್ನು ಅತ್ಯಾಧುನಿಕ ರಸ್ತೆಯ ಮೂಲಕ ಬೆಸೆಯುವ ಚೀನೀ ಯೋಜನೆ ಪಾಕ್ನ ಭಾಗ್ಯದ ಬಾಗಿಲು ತೆರೆಯಲಿದೆ ಎಂದು ಪುಕಾರು ಹಬ್ಬಿಸಲಾಯ್ತು. ಚೀನಾದ ಕಾಶ್ಗರ್ನಿಂದ ಪಾಕ್ನ ಗ್ವದಾರ್ ಬಂದರಿನವರೆಗೆ ನಿರ್ಮಾಣಗೊಳ್ಳುವ ಈ ರಸ್ತೆ ದಾರಿಯುದ್ದಕ್ಕೂ ಪಾಕೀಸ್ತಾನದ ಹಲವೆಡೆ ಜಲವಿದ್ಯುತ್, ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳನ್ನು ತೆರೆಯಲಿದೆ, ರಾಜಮಾರ್ಗಗಳನ್ನು ನಿರ್ಮಿಸಲಿದೆ, ನೂರಾರು ಕೈಗಾರಿಕಾ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲಿದೆ, ಪ್ರಮುಖ ನಗರಗಳನ್ನು ಬೆಸೆಯಲಿದೆ, ಲಕ್ಷಾಂತರ ಉದ್ಯೋಗ ಸೃಷ್ಟಿಸಲಿದೆ ಎಂದೆಲ್ಲ ಚೀನಾ ಹೇಳುತ್ತೆ. ಇಷ್ಟನ್ನೇ ಓದಿಕೊಂಡರೆ ಪಾಕೀಸ್ತಾನದ ಅಭಿವೃದ್ಧಿಗೆ ಚೀನಾ ಬಲವಾಗಿ ನಿಂತಿದೆ ಎಂದರೂ ಅಚ್ಚರಿಯಿಲ್ಲ. ವಾಸ್ತವವಾಗಿ ದೊಡ್ಡಮಟ್ಟದ ಲಾಭವಾಗೋದು ಚೀನಾಕ್ಕೇ. ತನ್ನ ವಸ್ತುಗಳನ್ನು ಜಗತ್ತಿಗೆ ತಲುಪಿಸಲು ಸಾವಿರಾರು ಮೈಲಿ ಸಮುದ್ರ ಮಾರ್ಗವನ್ನು ಕ್ರಮಿಸಬೇಕಿದ್ದ ಚೀನಾ ಈ ಹೊಸ ರಸ್ತೆಯಿಂದ ಅಷ್ಟು ಪ್ರಯಾಣ ಉಳಿಸುವುದಲ್ಲದೇ ಜಗತ್ತಿನ ಪ್ರಮುಖ ಭೂಭಾಗಗಳನ್ನು ಅತಿ ಕಡಿಮೆ ಅವಧಿಯಲ್ಲಿ, ಕಡಿಮೆ ಖರ್ಚಿನಲ್ಲಿ ಮುಟ್ಟಬಲ್ಲದು. ಹೀಗಾಗಿಯೇ ಸುಮಾರು 50 ಶತಕೋಟಿ ಡಾಲರುಗಳ ವೆಚ್ಚಕ್ಕೆ ಅದು ಸಿದ್ಧವಾಗಿರೋದು. ಅದಕ್ಕಿರುವ ಏಕೈಕ ಸಮಸ್ಯೆಯೆಂದರೆ ಹೀಗೆ ಹಾದು ಹೋಗಬೇಕಿರುವ ರಸ್ತೆ ವಿವಾದದ ಕೇಂದ್ರವಾಗಿರುವ ಗಿಲ್ಗಿಟ್-ಬಾಲ್ಟಿಸ್ತಾನಗಳ ಮತ್ತು ಸಿಂಧ್-ಬಲೂಚಿಸ್ತಾನಗಳ ಮೂಲಕ ಹಾದು ಹೋಗುತ್ತಿರೋದು.

CPEC
ಭಾರತಕ್ಕೆ ಈ ಯೋಜನೆ ನಿಜಕ್ಕೂ ಆತಂಕಕಾರಿಯೇ. ಗ್ವದಾರ್ ಬಂದರಿನ ನಿರ್ಮಾಣ ಮಾಡಿದ ಚೀನಾ ಅಲ್ಲಿಂದ ಭಾರತದ ಸಮುದ್ರೀಯ ಚಟುವಟಿಕೆಗಳ ಮೇಲೆ ನಿಗಾ ಇಡುವುದು ಸಾಧ್ಯವಾಗುತ್ತದೆ. ಅಲ್ಲದೇ ಪಾಕೀಸ್ತಾನಕ್ಕೆ ಯಾವಾಗ ಬೇಕಿದ್ದರೂ ಸೈನ್ಯದ ಸಹಕಾರವನ್ನು ಅತ್ಯಂತ ವೇಗವಾಗಿ ತಲುಪಿಸುವಲ್ಲಿಯೂ ಯಶಸ್ವಿಯಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಮೋದಿ ಸರ್ಕಾರ ಬಂದೊಡನೆ ಇರಾನಿನ ಚಾಬಹಾರ್ ಬಂದರನ್ನು ಅಭಿವೃದ್ಧಿ ಪಡಿಸಿಕೊಳ್ಳುವ ಪ್ರಯತ್ನ ಮಾಡಿದ್ದು. ಅಷ್ಟಕ್ಕೇ ಸುಮ್ಮನಾಗದೇ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ಪರ ಒಲವು ಮೂಡುವಂತೆ ಮಾಡುವಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡರು. ಪ್ರವಾಹದಲ್ಲಿ ಕಾಶ್ಮೀರ ಕೊಚ್ಚಿ ಹೋಗಿದ್ದಾಗ ಸ್ವತಃ ಪ್ರಧಾನಿಗಳೇ ಕಾಳಜಿ ವಹಿಸಿ ಕಾಶ್ಮೀರದ ಪುನಶ್ಚೇತನಕ್ಕೆ ಕೈಗೊಂಡ ಕಾರ್ಯಾಚರಣೆ ಪಾಕ್ ವಶದಲ್ಲಿರುವ ಕಾಶ್ಮೀರಿಗರಿಗೆ ಹೊಟ್ಟೆ ಉರಿಸಲು ಸಾಕಿತ್ತು. ಅಲ್ಲಿಂದಾಚೆಗೆ ತಮ್ಮನ್ನು ‘ಕ್ಯಾರೆ’ ಎಂದೂ ಕೇಳದ ಪಾಕ್ನ ವಿರುದ್ಧ ತಿರುಗಿಬಿತ್ತು ಗಿಲ್ಗಿಟ್-ಬಾಲ್ಟಿಸ್ತಾನ. ಅದರೊಟ್ಟಿಗೇ ಬಲೂಚಿಸ್ತಾನ ಸಿಂಧ್ಗಳೂ ಮುಗಿಬಿದ್ದವು. ಚೀನಾದ ಈ ಯೋಜನೆಯಿಂದ ನವಾಜ್ ಷರೀಫ್ರ ಪಂಜಾಬ್ಗೆ ಲಾಭ ಹೊರತು ಇತರರಿಗಿಲ್ಲ ಎನ್ನುವ ಸಂದೇಶ ತೀವ್ರವಾಗಿ ಹಬ್ಬಿ ಪ್ರತಿಯೊಬ್ಬರೂ ತಿರುಗಿಬಿದ್ದರು. ಬಲೂಚಿಸ್ತಾನ-ಸಿಂಧ್ಗಳಲ್ಲಿ ಸ್ವಾತಂತ್ರ್ಯದ ಕೂಗು ಮೊಳಗಲಾರಂಭಿಸಿತು. ಸ್ವತಃ ಭಾರತ ತನ್ನೆಲ್ಲಾ ಲಾಬಿ ಬಳಸಿ ಈ ಹೋರಾಟಗಳು ತೀವ್ರವಾಗುವಂತೆ ನೋಡಿಕೊಂಡಿತು.

ಬ಻ಲೊ
ಹೌದು. ಇದು ರಾಜ ತಾಂತ್ರಿಕತೆಯ ಒಂದು ಮಹತ್ವದ ಭಾಗ. ಯಾವುದಾದರೂ ಆಮಿಷದ ಮೂಲಕ ಶತ್ರು ರಾಷ್ಟ್ರದಲ್ಲಿ ಅವರದ್ದೇ ವಿರುದ್ಧ ಕೆಲಸ ಮಾಡುವವರನ್ನು ಹಿಡಿದು ವ್ಯೂಹ ರಚಿಸೋದು. ಚೀನಾ ಜೆಎನ್ಯು ಪ್ರೊಫೆಸರುಗಳ ಮೂಲಕ, ಅವಾಡರ್್ ವಾಪ್ಸಿ ಗ್ಯಾಂಗುಗಳ ಮೂಲಕ ಭಾರತದಲ್ಲಿ ಮಾಡುತ್ತಲ್ಲ ಹಾಗೆಯೇ. ಭಾರತ ಪಾಕೀಸ್ತಾನದಲ್ಲಿ ಎಂತಹ ದೊಡ್ಡ ಜಾಲ ಹಬ್ಬಿಸಿದೆಯೆಂದರೆ ಚೀನಾದ ಕೆಲಸಕ್ಕೆ ಗಲ್ಲಿ ಗಲ್ಲಿಯಲ್ಲೂ ತಡೆಯೊಡ್ಡುವಂತೆ ಸ್ಥಳೀಯರನ್ನು ಎತ್ತಿಕಟ್ಟಿದೆ. ಈ ಕಾರಣದಿಂದಾಗಿಯೇ ಗಿಲ್ಗಿಟ್ ಬಾಲ್ಟಿಸ್ತಾನಗಳನ್ನು ತನ್ನದೇ ಅಂಗವೆಂದು ಘೋಷಿಸಿ ಅದನ್ನು ತನ್ನಿಚ್ಛೆಗೆ ತಕ್ಕಂತೆ ನಿಯಂತ್ರಿಸುವ, ಚೀನಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡುವ ಪ್ರಯತ್ನ ಮಾಡಿತ್ತು. ಅದಕ್ಕೆ ಪೂರಕವಾಗಿ ಆ ಪ್ರದೇಶದಲ್ಲಿ ಭಾರತ ವಿರೋಧಿ ಚಿಂತನೆಗಳನ್ನು ವ್ಯಾಪಕವಾಗಿ ಹಬ್ಬಿಸುವ ಅದರ ಕೆಲಸವೂ ತೀವ್ರಗೊಂಡಿತ್ತು.
ಅಕ್ಷರಶಃ ಇದೇ ಹೊತ್ತಲ್ಲಿ ಮೋದಿಯವರ ರಾಜತಾಂತ್ರಿಕ ನಡೆಯ ಪ್ರಭಾವ ಹೇಗಾಗಿದೆಯೆಂದರೆ ಗಿಲ್ಗಿಟ್ ಬಾಲ್ಟಿಸ್ತಾನ ಪಾಕೀಸ್ತಾನಕ್ಕೆ ಸೇರಿದ್ದೇ ಅಲ್ಲ. ಅದು ನ್ಯಾಯಯುತವಾಗಿ ಭಾರತದ್ದೇ ಅಂಗವೆಂದು ಇಂಗ್ಲೆಂಡು ಘೋಷಿಸಿದೆ. ಡೊನಾಲ್ಡ್ ಟ್ರಂಪ್ ಮೋದಿಯವರಿಗೆ ಕರೆ ಮಾಡಿ ಅಮೇರಿಕಾಕ್ಕೆ ಬರುವಂತೆ ಆಹ್ವಾನ ನೀಡಿದ್ದಂತೂ ಇನ್ನೊಂದು ಮಹತ್ವದ ಹೆಜ್ಜೆ. ಪಾಕೀಸ್ತಾನವಂತೂ ಬಾಯಿ ಬಡಕೊಳ್ಳುವುದು ಖಚಿತ, ಚೀನಾ ಕೂಡ ಹೂಡಿದ ಶತಕೋಟ್ಯಾಂತರ ಡಾಲರುಗಳ ಬಂಡವಾಳ ನೀರು ಪಾಲಾಯಿತೆಂದು ಕಣ್ಣೀರಿಡಲೇಬೇಕು. ನಾವು ಮುಸುಡಿಗೆ ಕೊಟ್ಟ ಪೆಟ್ಟನ್ನು ಜೀರ್ಣಿಸಿಕೊಳ್ಳಲು ಅದಕ್ಕೆ ಸಮಯ ಬೇಕು. ಹಾಗಂತ ಅದು ಸುಮ್ಮನಿರುವುದಿಲ್ಲ. ಡ್ರ್ಯಾಗನ್ ಮುಂದಿನ ಹೆಜ್ಜೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುತ್ತದೆ. ಸಿಂಹವಾಗಿ ಎದುರಿಸುವುದಕ್ಕೆ ನಾವು ಸಿದ್ಧವಿದ್ದರೆ ಆಯಿತು, ಅಷ್ಟೇ.

Comments are closed.