ತಿವಾರಿ ಹತ್ಯೆ ಸಮರ್ಥಕರು ಮನುಷ್ಯರೇ ಅಲ್ಲ!
ಕಮಲೇಶ್ ತಿವಾರಿ ಪ್ರವಾದಿಯ ಕುರಿತಂತೆ ಹೇಳಿಕೆ ಕೊಟ್ಟಿದ್ದರೂ ಎಂಬ ಕಾರಣಕ್ಕೆ ಅವರನ್ನು ವರ್ಷಗಟ್ಟಲೆ ಜೈಲಿನಲ್ಲಿರುವಂತೆ ಮಾಡಲಾಗಿತ್ತು. ಇದು ವಾಕ್ಸ್ವಾತಂತ್ರ್ಯ ಹೊಂದಿರುವಂತಹ ರಾಷ್ಟ್ರದಲ್ಲಿ ಎಂದಿಗೂ ನಡೆಯಬಾರದ ಸಂಗತಿ. ಕೃಷ್ಣ ವ್ಯಭಿಚಾರಿ, ರಾಮ ಹುಟ್ಟಿಯೇ ಇರಲಿಲ್ಲ, ಹಿಂದೂಗಳು ಪೂಜಿಸುವ ಶಿವಲಿಂಗವೆಂದರೆ ಅದು ಪುರುಷನ ಮಮರ್ಾಂಗ ಹೀಗೆಲ್ಲಾ ಅಸಂಬದ್ಧವಾದ ಮಾತುಗಳನ್ನು ಮುಸಲ್ಮಾನರು, ಕ್ರಿಶ್ಚಿಯನ್ನರು ಬೀದಿಗೊಬ್ಬರಂತೆ ಆಡುವಾಗಲೂ ಹಿಂದೂ ತಲೆಕೆಡಿಸಿಕೊಳ್ಳುವುದಿಲ್ಲ.
ಕಮಲೇಶ್ ತಿವಾರಿಯ ಹತ್ಯೆ ದೇಶದಲ್ಲಿ ಸಂಚಲನ ಉಂಟುಮಾಡಿಬಿಟ್ಟಿತು. ಪ್ರವಾದಿ ಮೊಹಮ್ಮದ್ ಪೈಗಂಬರರ ಕುರಿತಂತೆ ಹೇಳಿಕೆ ಕೊಟ್ಟು ವರ್ಷಗಟ್ಟಲೆ ಜೈಲಿನಲ್ಲಿದ್ದ ತಿವಾರಿ ಹೊರಬಂದ ಕೆಲವೇ ದಿನಗಳಲ್ಲಿ ಹತ್ಯೆಯಾಗಿಹೊಗಿದ್ದು ದುರದೃಷ್ಟಕರ ಸಂಗತಿ. ಆದರೆ ಅದಕ್ಕಿಂತಲೂ ದುದರ್ೈವದ ಸಂಗತಿ ಎಂದರೆ ಮುಸಲ್ಮಾನನೊಬ್ಬ ತರಚಿ ಗಾಯಮಾಡಿಕೊಂಡರೂ ಭಾರತದಲ್ಲಿ ಬದುಕುವುದೇ ಕಷ್ಟವೆಂದು ಬಿಂಬಿಸುವ ಬುದ್ಧಿಜೀವಿಗಳು ಹಿಂದೂವೆಂಬ ಕಾರಣಕ್ಕೆ ಹತ್ಯೆಯಾಗಿ ಹೋದ ಕಮಲೇಶ್ ತಿವಾರಿಯ ಕುರಿತಂತೆ ಒಂದು ಮಾತನ್ನೂ ಆಡಲಿಲ್ಲ ಮತ್ತು ಹತ್ಯೆ ಮಾಡಿದವರನ್ನು, ಅವರ ಮತವನ್ನು ಪ್ರಶ್ನಿಸುವ ಗೋಜಿಗೂ ಹೋಗಲಿಲ್ಲ. ಅಲ್ಲಿಗೆ ಇವರ ಸಾವಿನ ರಾಜಕೀಯ ಎಷ್ಟು ಭಯಾನಕವಾದ್ದೆಂಬುದು ಜಗಜ್ಜಾಹೀರಾಯ್ತು!
ಇಸ್ಲಾಂ ಒಂದರ್ಥದಲ್ಲಿ ಬದುಕಿರುವುದೇ ತನ್ನ ಕಟ್ಟರತೆಯಿಂದಾಗಿ. ಯಾರಾದರೂ ಇಸ್ಲಾಮನ್ನು ಬಿಟ್ಟು ಹೋದರೆ ಅವನನ್ನು ಬದುಕಿರಲೂ ಬಿಡುವುದಿಲ್ಲ. ಹೀಗಾಗಿಯೇ ಅನೇಕರು ಅಂತರಂಗದಲ್ಲಿ ಸನ್ಮಾರ್ಗವನ್ನು ಹಿಡಿದರೂ ಹೆದರಿಕೆಯಿಂದಾಗಿಯೇ ಇಸ್ಲಾಮನ್ನು ಬಿಡದೇ ಉಳಿದಿರುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಅಲ್ಲಾಹ್ನ ಕುರಿತಂತೆ ಜೊತೆಗೆ ಅವರನ್ನು ಮನುಕುಲಕ್ಕೆ ಪರಿಚಯಿಸಿಕೊಟ್ಟ ಪ್ರವಾದಿಯ ಕುರಿತಂತೆ ಅಖಂಡವಾದ ಶ್ರದ್ಧೆಯೇ ಇಸ್ಲಾಂ ಎಂದು ಒಂದೇ ಮಾತಿನಲ್ಲಿ ಮುಗಿಸಿಬಿಡಬಹುದು. ಅಲ್ಲಾಹ್ನಿಗೆ ಸಮಸಮವಾಗಿ ಮತ್ತೊಬ್ಬರನ್ನು ನಿಲ್ಲಿಸುವುದನ್ನು ಇಸ್ಲಾಂ ಒಪ್ಪುವುದಿಲ್ಲ. ಹಾಗೆಯೇ ಪ್ರವಾದಿ ಪೈಗಂಬರ್ರ ಕುರಿತಂತೆ ಯಾವ ಪ್ರಶ್ನೆಗೂ ಇಸ್ಲಾಂ ಅನುಮತಿ ನೀಡುವುದಿಲ್ಲ. ಪೈಗಂಬರರ ಚಿತ್ರ ಬರೆದವನನ್ನು ಗುಂಡಿಟ್ಟು ಕೊಲ್ಲಲಾಗಿತ್ತು ಎಂಬುದನ್ನು ಮರೆಯದಿರಿ.
ಕಮಲೇಶ್ ತಿವಾರಿ ಪ್ರವಾದಿಯ ಕುರಿತಂತೆ ಹೇಳಿಕೆ ಕೊಟ್ಟಿದ್ದರೂ ಎಂಬ ಕಾರಣಕ್ಕೆ ಅವರನ್ನು ವರ್ಷಗಟ್ಟಲೆ ಜೈಲಿನಲ್ಲಿರುವಂತೆ ಮಾಡಲಾಗಿತ್ತು. ಇದು ವಾಕ್ಸ್ವಾತಂತ್ರ್ಯ ಹೊಂದಿರುವಂತಹ ರಾಷ್ಟ್ರದಲ್ಲಿ ಎಂದಿಗೂ ನಡೆಯಬಾರದ ಸಂಗತಿ. ಕೃಷ್ಣ ವ್ಯಭಿಚಾರಿ, ರಾಮ ಹುಟ್ಟಿಯೇ ಇರಲಿಲ್ಲ, ಹಿಂದೂಗಳು ಪೂಜಿಸುವ ಶಿವಲಿಂಗವೆಂದರೆ ಅದು ಪುರುಷನ ಮಮರ್ಾಂಗ ಹೀಗೆಲ್ಲಾ ಅಸಂಬದ್ಧವಾದ ಮಾತುಗಳನ್ನು ಮುಸಲ್ಮಾನರು, ಕ್ರಿಶ್ಚಿಯನ್ನರು ಬೀದಿಗೊಬ್ಬರಂತೆ ಆಡುವಾಗಲೂ ಹಿಂದೂ ತಲೆಕೆಡಿಸಿಕೊಳ್ಳುವುದಿಲ್ಲ. ಹಿಂದುತ್ವದ ಸಿದ್ಧಾಂತದ ಕುರಿತಂತೆ ಭಿನ್ನ ಭಿನ್ನ ಆಯಾಮದಲ್ಲಿ ಚಚರ್ೆ ನಡೆಯುವಾಗಲೂ ಆತ ಸ್ತಿಮಿತ ಕಳೆದುಕೊಳ್ಳುವುದಿಲ್ಲ. ಕೊನೆಗೆ ಸುಳ್ಳುಗಳನ್ನೇ ಪೋಣಿಸಿ ಹಾರಮಾಡಿ ಹಾಕಿದಾಗಲೂ ಆತ ಅದಕ್ಕಾಗಿ ಕಣ್ಣೀರಿಡುತ್ತಾ ಕುಳಿತುಕೊಳ್ಳುವುದಿಲ್ಲ. ತನ್ನ ಆಚರಣೆಯಲ್ಲಿ ತಪ್ಪು ಕಂಡಿತೆನಿಸಿದರೆ ಅದನ್ನು ತಿದ್ದಿಕೊಳ್ಳುವ ವಿಶಾಲಭಾವ ಅವನದ್ದು. ಹೀಗಾಗಿಯೇ ಸಹಸ್ರಾರು ವರ್ಷಗಳಿಂದ ಯಾವ ಅನುಯಾಯಿಗಳನ್ನು ಕೊಲ್ಲದೆಯೂ ತನ್ನ ಅನುಯಾಯಿಗಳಿಗೆ ಕಬ್ಬಿಣದ ಚೌಕಟ್ಟನ್ನು ಹೇರದೆಯೂ ದೃಢವಾಗಿ ನಿಂತುಕೊಂಡಿದೆ ಹಿಂದೂ ಸಮಾಜ. ಈ ಕಾಲದ ಪರೀಕ್ಷೆಯನ್ನು ಇಸ್ಲಾಂ ಎದುರಿಸಿ ಗೆಲ್ಲಬೇಕೆಂದರೆ ಸಮಾಜದ ಸವಾಲುಗಳಿಗೆ ಉತ್ತರಿಸುವಷ್ಟು ಛಾತಿಯನ್ನು ಬೆಳೆಸಿಕೊಳ್ಳಬೇಕು. ಪ್ರಶ್ನೆ ಕೇಳಿದವನನ್ನೇ ಕೊಲ್ಲುವುದರಿಂದ ಸಮಸ್ಯೆಗಳು ಪರಿಹಾರವಾಗುವುದಿಲ್ಲ, ಬದಲಿಗೆ ಹೊಸ ಸಮಸ್ಯೆಗಳು ಹುಟ್ಟುತ್ತವೆ ಮತ್ತು ಒಂದು ಹಂತ ದಾಟಿದ ನಂತರ ಪ್ರಶ್ನೆ ಕೇಳುವವರ ಛಾತಿ ನೂರು ಪಟ್ಟು ಬಲಗೊಳ್ಳುತ್ತದೆ. ಈ ವಿಷಯದಲ್ಲೂ ಹಾಗೇ ಆಯ್ತು. ತಿವಾರಿಯನ್ನು ಕೊಂದು ಮುಗಿಸಿದರೆ ಇನ್ನು ಮುಂದೆ ಇಸ್ಲಾಮಿನ ತಂಟೆಗೆ ಯಾರೂ ಬರಲಾರರು ಎಂದು ಮೌಲ್ವಿಗಳು ಮನಸ್ಸಲ್ಲೇ ಮಂಡಿಗೆ ತಿನ್ನುತ್ತಾ ಕುಳಿತಿದ್ದರೆ ಮರುದಿನವೇ ಟ್ವಿಟರ್ನಲ್ಲಿ ಮೊಹಮ್ಮದ್ ಪೈಗಂಬರರ ಕುರಿತಂತೆ ಕಮಲೇಶ್ ತಿವಾರಿಯ ಹೇಳಿಕೆಗಳಿಗಿಂತಲೂ ಕೆಟ್ಟ ಭಾಷೆ ಬಳಸುವ ಲಕ್ಷಕ್ಕೂ ಮಿಕ್ಕಿ ಟ್ವೀಟುಗಳು ಹರಿದಾಡಿ ದಿನವಿಡೀ ಟ್ರೆಂಡ್ನಲ್ಲಿ ನಿಲ್ಲುವಂತಾಯ್ತು. ಸಭ್ಯ ಮುಸ್ಲೀಮರೆನಿಸಿಕೊಂಡವರು ತಿವಾರಿಯ ಸಾವಿಗೆ ಧೈರ್ಯವಾಗಿ ಪ್ರತಿಕ್ರಿಯಿಸಲಾಗದೇ ಕೊನೆಗೆ ಟ್ವಿಟರ್ನಲ್ಲಿ ನೋವನ್ನು ಹಂಚಿಕೊಳ್ಳಬೇಕಾದ ಸ್ಥಿತಿ ಬಂದೊದಗಿತ್ತು.
ಹೀಗೆ ವ್ಯಕ್ತಿಯೊಬ್ಬರ, ಗ್ರಂಥವೊಂದರ, ಸ್ಥಳವೊಂದರ ಮೇಲೆ ಅಪಾರವಾದ ಶ್ರದ್ಧೆಯನ್ನು ಬೆಳೆಸುವ ನೆಪದಲ್ಲಿ ಜನರನ್ನು ಮತಾಂಧರನ್ನಾಗಿಸುವುದು ಬಲು ಸುಲಭ. ಇಸ್ಲಾಂ ಅದನ್ನೇ ಮಾಡುತ್ತಿದೆ. ಮಕ್ಕಳಿಗೆ ಕೊಡುವ ಶಿಕ್ಷಣದ ಒಂದೊಂದು ಹನಿಯಲ್ಲೂ ಅನ್ಯರ ಕುರಿತಂತೆ ದ್ವೇಷವನ್ನೇ ಬಿತ್ತುವ ಈ ಚಟುವಟಿಕೆ ಬರುಬರುತ್ತಾ ಇಸ್ಲಾಮನ್ನೇ ನುಂಗಿ ನೀಗರ್ುಡಿಯಲಿದೆ. ಇತ್ತೀಚೆಗೆ ಪಾಕಿಸ್ತಾನದ ಶಾಲಾ ಮಕ್ಕಳು ಮಾಡಿರುವ ವಿಡಿಯೊ ನೀವು ಗಮನಿಸಿರಬೇಕು. ಪುಟ್ಟ ಮಕ್ಕಳೊಂದಷ್ಟು ಜನ ಭಾರತೀಯ ಸೈನಿಕರ ಕುರಿತಂತೆ ಅವಹೇಳನಕಾರಿಯಾಗಿ ಮಾತನಾಡುವ, ಇಡಿಯ ಭಾರತವನ್ನು ಪಾಕಿಸ್ತಾನವನ್ನಾಗಿಸುವ ಕೊನೆಗೆ ಭಾರತೀಯರನ್ನು ನಾಶವೇ ಮಾಡಿಬಿಡುವ ಹಂತದವರೆಗೂ ಮಾತನಾಡುತ್ತಾರಲ್ಲಾ, ಇದು ಇಸ್ಲಾಂ ಜಗತ್ತಿನ ಕರಾಳ ಭವಿಷ್ಯದ ಮುನ್ಸೂಚನೆ! ಏಕೆಂದರೆ ಭಾರತ ಮತ್ತು ಪಾಕಿಸ್ತಾನದ ಮುಸ್ಲೀಮರನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟುವಲ್ಲಿ ಒಂದು ದೊಡ್ಡ ಷಡ್ಯಂತ್ರವೇ ನಡೆಯುತ್ತಿದೆ. ಚೀನಾ ಇದಕ್ಕಾಗಿ ಸಾಕಷ್ಟು ಹಣ ವ್ಯಯಿಸುತ್ತಿದೆ. ಆದರೆ ಇದೇ ಚೀನಾದಲ್ಲಿ ಮುಸಲ್ಮಾನರು ನಮಾಜು ಮಾಡುವಂತಿಲ್ಲ, ಮದರಸಾಗಳಿಗೆ ಹೋಗುವಂತಿಲ್ಲ, ಅಜಾನ್ ಕೂಗುವಂತಿಲ್ಲ, ಕೊನೆಗೆ ಕುರಾನ್ ಕೂಡ ಸಾರ್ವಜನಿಕವಾಗಿ ಓದುವಂತಿಲ್ಲ ಎಂಬ ನಿಯಮಗಳನ್ನು ತಂದಿದ್ದಾರಲ್ಲಾ; ಉಯ್ಘುರ್ ಮುಸ್ಲೀಮರನ್ನು ಕ್ಯಾಂಪುಗಳಲ್ಲಿ ಕೂಡಿಹಾಕಿ ನಿರಂತರವಾಗಿ ಅವರಿಗೆ ಕಿರುಕುಳ ಕೊಡುತ್ತಾ ತಾವು ಮುಸ್ಲೀಮರೆಂಬುದನ್ನು ಮರೆಯುವಂತೆ ಮಾಡುತ್ತಿದ್ದಾರಲ್ಲಾ ಖಂಡಿತವಾಗಿಯೂ ಸಾಮಾನ್ಯವಾದ ಸಂಗತಿಯಲ್ಲ. ಆದರೆ ಯಾವೊಂದು ಪಾಕಿಸ್ತಾನದ ಮಸೀದಿಯೂ ಚೀನಿಗರ ವಿರುದ್ಧ ಮಾತನಾಡುತ್ತಿಲ್ಲ. ಯಾವೊಬ್ಬ ಭಾರತೀಯ ಮುಸಲ್ಮಾನನು ಚೀನಾದಲ್ಲಿರುವ ಅವನ ಸಹೋದರನ ಕುರಿತಂತೆ ದನಿ ಎತ್ತುತ್ತಿಲ್ಲ. ಏಕೆಂದರೆ ಅವನಿಗೆ ಹಣ ಸಿಗುತ್ತಿರುವುದು ಹಿಂದೂಗಳ ವಿರುದ್ಧ ಮಾತನಾಡಲು ಮಾತ್ರ. ಹೀಗಾಗಿ ಅವನು ಉಳಿಸುತ್ತಿರುವುದು ಇಸ್ಲಾಮನ್ನಲ್ಲ, ಬದಲಿಗೆ ಭಸ್ಮಾಸುರನಂತೆ ಆತನೇ ಇಸ್ಲಾಮನ್ನು ಆಪೋಶನ ತೆಗೆದುಕೊಳ್ಳುತ್ತಿದ್ದಾನೆ!
ಕಮಲೇಶ್ ತಿವಾರಿಯ ವಿಚಾರಕ್ಕೆ ಬರುವುದಾದರೆ ಆತನ ಹತ್ಯೆಗೈದ ಅಶ್ಫಾಕ್ ನಕಲಿ ಫೇಸ್ಬುಕ್ ಐಡಿಯ ಮೂಲಕ ತಿವಾರಿಯೊಂದಿಗೆ ಗೆಳೆತನ ಬೆಳೆಸಿಕೊಂಡಿದ್ದ. ಮತ್ತು ಆತನ ಐಡಿ ರೋಹಿತ್ ಸೋಲಂಕಿ ಎಂದಿತ್ತು. ಇದು ಮುನ್ನಚ್ಚರಿಕೆ ವಹಿಸಬೇಕಾದಂತಹ ಸಂಗತಿ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳ ಹೆಸರಿಟ್ಟುಕೊಂಡು ಅದರಲ್ಲೂ ಕೆಲವು ಜಾತಿ ವಿಶೇಷಗಳ ಅಡ್ಡ ಹೆಸರುಗಳು ಎದ್ದು ಕಾಣುವಂತೆ ಜೋಡಿಸಿಕೊಂಡು ಹಿಂದೂಗಳನ್ನು, ಸಂಘವನ್ನು ಬೈಯ್ಯುವವರ ಸಂಖ್ಯೆ ಹೆಚ್ಚುತ್ತಿದೆ. ಆ ಮೂಲಕ ಜಾತಿ-ಜಾತಿಗಳ ನಡುವಣ ಸಂಘರ್ಷ ಹುಟ್ಟುಹಾಕಬೇಕೆಂಬ ಪ್ರಯತ್ನ ಅವರದ್ದು. ಇದು ಅಧಿಕೃತವಾಗಿ ಐಎಸ್ಐ ಕಡೆಯಿಂದಲೇ ನಡೆಯುತ್ತಿರುವ ಸೋಷಿಯಲ್ ಮೀಡಿಯಾ ಭಯೋತ್ಪಾದನೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಗೆಳೆತನ ಬೆಳೆಸುವಾಗಾಗಲಿ, ಒಬ್ಬ ವ್ಯಕ್ತಿಯೊಂದಿಗೆ ಅತ್ಯಂತ ನಿಕಟ ಸಂಪರ್ಕ ಹೊಂದುವುದರಲ್ಲಾಗಲಿ ಎಚ್ಚರಿಕೆ ಇಟ್ಟುಕೊಳ್ಳುವುದೊಳಿತು.
ರೋಹಿತ್ ಸೋಲಂಕಿಯಾಗಿ ಬಂದ ಅಶ್ಫಾಕ್ ಕೇಸರಿ ಬಟ್ಟೆ ಧರಿಸಿ ಸಿಗರೇಟು ತರಿಸುವ ನೆಪದಲ್ಲಿ ತಿವಾರಿಯ ಅಂಗರಕ್ಷಕನನ್ನು ಅಂಗಡಿಗೆ ಕಳಿಸಿ ಆ ಹೊತ್ತಿನಲ್ಲಿ ಹತ್ಯೆ ಮಾಡಿದ್ದಾನಲ್ಲಾ, ಇದು ವ್ಯವಸ್ಥಿತವಾದ ಸಂಚು. ಇದನ್ನು ಬುದ್ಧಿಜೀವಿಯಾಗಲೀ, ಮುಸಲ್ಮಾನನಾಗಲೀ ಸಮಥರ್ಿಸಿಕೊಳ್ಳುತ್ತಾನೆಂದರೆ ಆತ ಮನುಷ್ಯನೆನಿಸಿಕೊಳ್ಳುವುದಕ್ಕೂ ನಾಲಾಯಕ್ಕು. ಇಂತಹ ಬರ್ಬರ ಕೃತ್ಯಕ್ಕೆ ಸಮರ್ಥನೆ ಕೊಡುವ ಮುನ್ನ ಆಯಾ ಮತಗಳು, ಮತ ನಾಯಕರು ಮತ್ತು ಅನುಯಾಯಿಗಳು ನೂರು ಬಾರಿ ಯೋಚಿಸುವುದೊಳಿತು!