ವಿಭಾಗಗಳು

ಸುದ್ದಿಪತ್ರ


 

ಪೆಟ್ರೋಲು-ಡೀಸೆಲ್ಲು; ಬೆಲೆ ಇಳಿಯುತ್ತಿಲ್ಲ ಏಕೆ?

ಭಾರತ ನಾಲ್ಕುವರೆ ಮಿಲಿಯನ್ ಬ್ಯಾರೆಲ್ಗಳಷ್ಟು ತೈಲವನ್ನು ಪ್ರತಿದಿನವೂ ಜಾಗತಿಕ ಮಾರುಕಟ್ಟೆಯಿಂದ ಅಪೇಕ್ಷಿಸುತ್ತದೆ. ಒಂದು ಬ್ಯಾರೆಲ್ ಅಂದರೆ 159 ಲೀಟರ್. ಅಂದರೆ ಹೆಚ್ಚು-ಕಡಿಮೆ 72 ಕೋಟಿ ಲೀಟರ್ಗಳಷ್ಟು ಕಚ್ಚಾ ತೈಲವನ್ನು ಪ್ರತಿದಿನವೂ ಭಾರತ ಬಸಿಯುತ್ತದೆ ಎಂದು. ಒಂದು ಲೀಟರ್ ಕಚ್ಚಾ ತೈಲಕ್ಕೆ ಒಂದು ರೂಪಾಯಿಯಷ್ಟು ಏರುಪೇರಾದರು ಪ್ರತಿನಿತ್ಯ ಭಾರತದ ಮೇಲಿನ ಹೊರೆ ಸುಮಾರು 72 ಕೋಟಿಯಷ್ಟು, ತಿಂಗಳಿಗೆ 2000 ಕೋಟಿ, ವರ್ಷಕ್ಕೆ ಹೆಚ್ಚು-ಕಡಿಮೆ 25,000 ಕೋಟಿ ರೂಪಾಯಿ.

ತೈಲಬೆಲೆ ಏರುತ್ತಲೇ ಇದೆ. ಆದರೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಅಭಿವೃದ್ಧಿಯನ್ನು ಆಲೋಚಿಸುವ ಎಲ್ಲಾ ರಾಜಕೀಯ ಪಕ್ಷಗಳಿಗೂ ಭಿನ್ನವಾಗಿ ನರೇಂದ್ರಮೋದಿ ಜಪ್ಪಯ್ಯ ಎಂದರೂ ತೈಲ ಬೆಲೆಯನ್ನು ಇಳಿಸುವುದಕ್ಕೆ ಮುಂದಾಗಲಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಆಗುವ ಬದಲಾವಣೆಗಳಿಗೆ ನಾವು ನಮ್ಮದೇ ಆದ ರೀತಿಯಲ್ಲಿ ಪರಿಹಾರ ಹುಡುಕಬೇಕೆಂಬುದು ಅವರ ಬಯಕೆಯಾಗಿರಬಹುದೇನೋ! ಉಚಿತ ಕೊಡುಗೆಗಳಲ್ಲೇ ಆನಂದವನ್ನು ಕಾಣುವ ಸಕರ್ಾರಕ್ಕೆ ತೆರಿಗೆ ಕಟ್ಟುವಾಗ ಅದರಿಂದ ತಪ್ಪಿಸಿಕೊಳ್ಳಲು ಇರಬರುವ ಬುದ್ಧಿಯನ್ನೆಲ್ಲಾ ಬಳಸುವ ನಮಗೆ ಈ ಚಿಂತನೆಗೆ ಹೊಂದಿಕೊಳ್ಳಲು ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು.

1

ಭಾರತವಿಂದು ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಅಮೇರಿಕಾ ಸುಮಾರು 20 ಮಿಲಿಯನ್ ಬ್ಯಾರೆಲ್ಗಳಷ್ಟು ತೈಲವನ್ನು ಪ್ರತಿನಿತ್ಯವೂ ಖಾಲಿ ಮಾಡಿದರೆ ಭಾರತ ನಾಲ್ಕುವರೆ ಮಿಲಿಯನ್ ಬ್ಯಾರೆಲ್ಗಳಷ್ಟು ತೈಲವನ್ನು ಪ್ರತಿದಿನವೂ ಜಾಗತಿಕ ಮಾರುಕಟ್ಟೆಯಿಂದ ಅಪೇಕ್ಷಿಸುತ್ತದೆ. ಒಂದು ಬ್ಯಾರೆಲ್ ಅಂದರೆ 159 ಲೀಟರ್. ಅಂದರೆ ಹೆಚ್ಚು-ಕಡಿಮೆ 72 ಕೋಟಿ ಲೀಟರ್ಗಳಷ್ಟು ಕಚ್ಚಾ ತೈಲವನ್ನು ಪ್ರತಿದಿನವೂ ಭಾರತ ಬಸಿಯುತ್ತದೆ ಎಂದು. ಒಂದು ಲೀಟರ್ ಕಚ್ಚಾ ತೈಲಕ್ಕೆ ಒಂದು ರೂಪಾಯಿಯಷ್ಟು ಏರುಪೇರಾದರು ಪ್ರತಿನಿತ್ಯ ಭಾರತದ ಮೇಲಿನ ಹೊರೆ ಸುಮಾರು 72 ಕೋಟಿಯಷ್ಟು, ತಿಂಗಳಿಗೆ 2000 ಕೋಟಿ, ವರ್ಷಕ್ಕೆ ಹೆಚ್ಚು-ಕಡಿಮೆ 25,000 ಕೋಟಿ ರೂಪಾಯಿ. ಹಿಂದೆಲ್ಲಾ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾದಾಗಲೂ ಅದರ ಬಿಸಿ ನಮ್ಮವರಿಗೆ ತಟ್ಟದಂತೆ ಕೇಂದ್ರ ಸಕರ್ಾರವೇ ಬೆಲೆ ನಿಯಂತ್ರಣ ಮಾಡುತ್ತಿತ್ತು. ಅದರರ್ಥವೇನು ಗೊತ್ತೇ? ಅಂತರರಾಷ್ಟ್ರೀಯ ಮಾರುಕಟ್ಟೆಯಿಂದ ಕಚ್ಚಾತೈಲವನ್ನು ಪಡೆದು ಅದನ್ನು ಭಾರತೀಯರಿಗೆ ಮಾರುವಾಗ ಸಬ್ಸಿಡಿ ಘೋಷಿಸುವುದು ಅಂತ. ಮೇಲ್ನೋಟಕ್ಕೆ ತೈಲದ ಬೆಲೆ ಕಡಿಮೆಯಂತೆ ಕಂಡರೂ ಅದರ ಹೆಚ್ಚುವರಿ ಹೊರೆಯನ್ನು ತೆರಿಗೆಯ ಹಣದಲ್ಲೇ ಪೂರೈಸಬೇಕಾಗುತ್ತಿತ್ತು. ಅಂದರೆ ತೆರಿಗೆ ಕಟ್ಟದೇ ಕಾರು-ಬೈಕುಗಳಲ್ಲಿ ತಿರುಗಾಡುವ ಕೋಟ್ಯಂತರ ಮಂದಿಯ ಆನಂದಕ್ಕಾಗಿ ನಿಯತ್ತಾಗಿ ತೆರಿಗೆ ಕಟ್ಟುವವರು ಬಲಿಯಾಗಬೇಕಿತ್ತು. ಭಾರತವು ವರ್ಷದ ಕೊನೆಯಲ್ಲಿ ವಿತ್ತೀಯ ಕೊರತೆಯನ್ನು ನೀಗಿಸಿಕೊಳ್ಳಲು ಅಭಿವೃದ್ಧಿಗಾಗಿ ಮೀಸಲಿಟ್ಟ ಹಣದಲ್ಲಿ ದೊಡ್ಡ ಮೊತ್ತವನ್ನು ತೆಗೆಯಬೇಕಾಗಿತ್ತು. ಕೆಲವೊಮ್ಮೆ ಇದು ಲಕ್ಷಾಂತರ ಕೋಟಿಗಳಷ್ಟು ಆಗಿರುತ್ತಿತ್ತೆಂಬುದು ಬೆಳೆದು ನಿಲ್ಲಬೇಕಿದ್ದ ಭಾರತಕ್ಕೆ ಆಘಾತಕಾರಿ ಸಂಗತಿಯೇ. ಹಾಗೆಂದೇ 2010 ರಲ್ಲಿ ಸಕರ್ಾರ ಪೆಟ್ರೋಲ್ ಬೆಲೆಯ ಮೇಲೆ ತನ್ನ ಅಧಿಕಾರವನ್ನು ಕೈಬಿಟ್ಟುಬಿಟ್ಟಿತು. ಅದರರ್ಥ ಜಾಗತಿಕ ಮಾರುಕಟ್ಟೆಗೆ ತಕ್ಕಂತೆ ಭಾರತದಲ್ಲಿ ಪೆಟ್ರೋಲ್ ಬೆಲೆ ವ್ಯತ್ಯಯವಾಗುತ್ತದೆ ಮತ್ತು ಅದನ್ನು ತೈಲ ಕಂಪೆನಿಗಳೇ ನಿರ್ಧರಿಸುತ್ತವೆ. 2014 ರಲ್ಲಿ ಡೀಸೆಲ್ಅನ್ನು ಇದರ ವ್ಯಾಪ್ತಿಗೆ ತರಲಾಯ್ತು. 2016 ರಲ್ಲಿ ನರೇಂದ್ರಮೋದಿಯವರು ಪ್ರಧಾನಿಯಾದ ನಂತರ ಡೈನಮಿಕ್ ಪ್ರೈಸ್ ಚೇಂಜ್ ಮಾಡೆಲ್ ಅನ್ನು ಜಾರಿಗೆ ತಂದು ಜಾಗತಿಕ ಮಾರುಕಟ್ಟೆಗೆ ಈ ಬೆಲೆಗಳು ಆಯಾ ಕ್ಷಣಕ್ಕೆ ಪ್ರತಿಕ್ರಿಯಿಸುವಂತೆ ವ್ಯವಸ್ಥೆ ರೂಪಿಸಲಾಯ್ತು. ಕಳೆದ 4 ವರ್ಷಗಳಲ್ಲಿ ತೈಲಬೆಲೆ ಜಾಗತಿಕ ಮಟ್ಟದಲ್ಲಿಯೇ ಅತೀವ ಕಡಿಮೆಯಾಗಿಬಿಟ್ಟಿದ್ದರಿಂದ ನರೇಂದ್ರಮೋದಿಯವರು ಹಬ್ಬವನ್ನೇ ಆಚರಿಸಿಬಿಟ್ಟಿದ್ದರು. ತೈಲಬೆಲೆಯನ್ನು ಜಾಗತಿಕ ಮಾರುಕಟ್ಟೆಗೆ ಪೂರಕವಾಗಿ ಪೂರ್ಣ ಕಡಿಮೆಗೈಯ್ಯದೇ ಬೆಲೆ ಕಡಿಮೆಯಾಗಿರುವ ಲಾಭವನ್ನು ದೇಶದ ಅಭಿವೃದ್ಧಿಗೆ ಬಳಸುವ ಯೋಜನೆ ರೂಪಿಸಲಾಯ್ತು. ಅಬಕಾರಿ ಸುಂಕವನ್ನು ಸಾಕಷ್ಟು ಏರಿಸಲಾಯ್ತು. ರಾಜ್ಯ ಸಕರ್ಾರಗಳೇನು ಹಿಂದುಳಿಯಲಿಲ್ಲ. ಅವು ವ್ಯಾಟ್ ಅನ್ನು ಏರಿಸಿದವು. ಹೀಗಾಗಿ ಪ್ರತಿ ಬ್ಯಾರೆಲ್ಗೆ 112 ರೂಪಾಯಿಯಷ್ಟಿದ್ದ ಕಚ್ಚಾತೈಲದ ಬೆಲೆ 30 ಡಾಲರ್ಗೆ ಇಳಿದಾಗಲೂ ಭಾರತೀಯರಿಗೇನೂ ದರದಲ್ಲಿ ಭಾರಿ ದೊಡ್ಡ ಬದಲಾವಣೆ ಕಾಣಲಿಲ್ಲ. ಆದರೆ ಕಳೆದ ಒಂದೇ ವರ್ಷದಲ್ಲಿ ಅಬಕಾರಿ ಸುಂಕ 2013 ರಲ್ಲಿ ಸಂಗ್ರಹವಾಗುತ್ತಿದ್ದಕ್ಕಿಂತ ಒಂದೂವರೆ ಪಟ್ಟಾದರು ಹೆಚ್ಚಾಗಿತ್ತು. ರಾಜ್ಯ ಸಕರ್ಾರಗಳೂ ಕೂಡ ತಮ್ಮ ಆದಾಯದಲ್ಲಿ ಅಷ್ಟೇ ಪ್ರಮಾಣದಲ್ಲಿ ಹೆಚ್ಚಳವನ್ನು ಕಂಡವು. ಅದರ ಪರಿಣಾಮವಾಗಿಯೇ ದೇಶದಾದ್ಯಂತ ಶ್ರೇಷ್ಠ ಮಟ್ಟದ ರಸ್ತೆಗಳು ನಿಮರ್ಾಣಗೊಂಡಿದ್ದವು. ಸ್ವಾತಂತ್ರ್ಯ ಬಂದ 70 ವರ್ಷಗಳಲ್ಲಿ ಚೀನಾ ಗಡಿಯಲ್ಲಿ ರಸ್ತೆಗಳನ್ನು ನಿಮರ್ಿಸಲಾಗದೇ ಹೆಣಗಾಡುತ್ತಿದ್ದೆವಲ್ಲಾ ಈ ನಾಲ್ಕು ವರ್ಷಗಳಲ್ಲಿ ಗಡಿ ಭಾಗದಲ್ಲಿ 3400 ಕಿ.ಮೀ ಉದ್ದದ ರಸ್ತೆಯನ್ನು ಗುರುತಿಸಿ 61 ವಿಭಾಗಗಳನ್ನು ಆಯ್ಕೆ ಮಾಡಿ, ಅದರಲ್ಲಿ 27 ಅನ್ನು ಮುಗಿಸಲಾಗಿದೆ. ಅಷ್ಟೇ ಅಲ್ಲದೇ 21 ವಿಭಾಗಗಳಲ್ಲಿ ಕೆಲಸ ಮುಗಿಯುವ ಹಂತದಲ್ಲಿದೆ. ನಮ್ಮ ಸೈನಿಕರು ಈಗ ಚೀನಾದೊಂದಿಗೆ ಮುಖಾ-ಮುಖಿ ಆಗುವ ಹೊತ್ತಿನಲ್ಲಿ ಗುಡ್ಡ-ಬೆಟ್ಟಗಳನ್ನು ಹಾದು ಹೆಣಗಾಡಬೇಕಾದ ಪರಿಸ್ಥಿತಿ ಇಲ್ಲ. ಸೈನಿಕರಿಗೆ ಈ ಪರಿಯ ಆತ್ಮಸ್ಥೈರ್ಯ ತುಂಬಲು ಕಾರಣವಾಗಿದ್ದು ನಾವು ಗೊಣಗಾಡದೇ ಕೊಂಡುಕೊಂಡ ಒಂದು ಲೀಟರ್ ಪೆಟ್ರೋಲು.

ಈ ಹಿಂದೆ ಒಮ್ಮೆ ಸಂಸತ್ತಿನಲ್ಲಿ ಮಾತನಾಡುತ್ತಾ ವಿತ್ತ ಸಚಿವ ಅರುಣ್ ಜೇಟ್ಲಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯ ಇಳಿಕೆಯ ಲಾಭವನ್ನು ಭಾರತ ಹೇಗೆ ತನ್ನದಾಗಿಸಿಕೊಳ್ಳುತ್ತಿದೆ ಎಂಬುದನ್ನು ಬಲು ಸೂಕ್ಷ್ಮವಾಗಿ ವಿವರಿಸಿದರು. ಮೊದಲ ಹಂತದಲ್ಲಿ ಈ ಇಳಿಕೆಯಿಂದ ದೊರೆತ ಲಾಭವನ್ನು ನೇರವಾಗಿ ಗ್ರಾಹಕರಿಗೆ ಒದಗಿಸಲಾಗುತ್ತದೆ. ಹೀಗಾಗಿಯೇ ಯುಪಿಎ ಸಕರ್ಾರ ನರೇಂದ್ರಮೋದಿಯವರ ಕೈಗೆ ಅಧಿಕಾರವನ್ನು ಬಿಟ್ಟುಕೊಟ್ಟಾಗ 73 ರಷ್ಟಿದ್ದ ಪೆಟ್ರೋಲ್ ಬೆಲೆ ಕಾಲಕ್ರಮದಲ್ಲಿ 65 ರುಪಾಯಿವರೆಗೂ ಬಂದು ನಿಂತಿತ್ತು. ಕೆಲವು ರಾಜ್ಯ ಸಕರ್ಾರಗಳಂತೂ ಹೀಗೆ ಬೆಲೆ ಕಡಿಮೆಯಾದೊಡನೆ ವ್ಯಾಟನ್ನು ಏರಿಸಿ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿದ್ದವು. ಎರಡನೇ ಹಂತದಲ್ಲಿ ಕೇಂದ್ರ ಸಕರ್ಾರ ತೆರಿಗೆಯನ್ನು ಹೆಚ್ಚಿಸಿ ತೈಲಬೆಲೆಯ ಇಳಿಕೆಯಲ್ಲಾದ ಲಾಭವನ್ನು ನೇರವಾಗಿ ಬೊಕ್ಕಸಕ್ಕೇ ದೊರೆಯುವಂತೆ ಮಾಡುತ್ತಿದ್ದರು. ಮೂರನೆಯದಾಗಿ ಈ ಹಣದಲ್ಲಿ ಅಂತರರಾಷ್ಟ್ರೀಯ ಮಟ್ಟದ ರಸ್ತೆಗಳ ನಿಮರ್ಾಣ ಮಾಡುವ ಪ್ರಯತ್ನ ಮಾಡಲಾಯ್ತು. ಅದು ಸಹಜವೂ ಹೌದು. ಪೆಟ್ರೋಲ್ ತುಂಬಿಸಿಕೊಂಡು ಗಾಡಿ ಓಡಿಸುವವ ರಸ್ತೆ ನಿಮರ್ಾಣಕ್ಕೆ ಹಣವನ್ನೂ ಕೊಡಬೇಕಾಗುತ್ತದೆ. ಇನ್ನು ನಾಲ್ಕನೇ ಹಂತದಲ್ಲಿ ಕಚ್ಚಾತೈಲ ಬೆಲೆಯಲ್ಲಾದ ಇಳಿಕೆಯ ಲಾಭವನ್ನು ತೈಲ ಕಂಪನಿಗಳಿಗೆ ಸಿಗುವಂತೆ ಮಾಡಲಾಗುತ್ತದೆ. ತೈಲಬೆಲೆ ಏರಿದಾಗಲೂ ಅದನ್ನು ನಿಯಂತ್ರಿಸುವ ಭರದಲ್ಲಿ ಈ ಕಂಪನಿಗಳು ಮಾಡಿಕೊಂಡಿರುವ ನಷ್ಟವನ್ನು ಈ ಸಮಯದಲ್ಲಿ ಹೊಂದಿಸಿಕೊಟ್ಟುಬಿಟ್ಟರೆ ಮತ್ತೊಮ್ಮೆ ಬೊಕ್ಕಸದ ಮೇಲಾಗುವ ಹೊರೆಯನ್ನು ತಪ್ಪಿಸಲು ಸಾಧ್ಯವಾಗುತ್ತದೆ.

OPEC Countries
OPEC Countries

ನರೇಂದ್ರಮೋದಿ ಅಧಿಕಾರಕ್ಕೆ ಬರುವಾಗ ಭಗವಂತ ವರವಾಗಿ ಅವರಿಗೆ ಕಚ್ಚಾತೈಲ ಬೆಲೆಯ ಇಳಿಕೆ ಮಾಡಿಕೊಟ್ಟಿದ್ದ. ಹಾಗಂತ ಇದು ಶಾಶ್ವತವಲ್ಲವೆಂಬುದು ಮೋದಿಯವರಿಗೂ ಗೊತ್ತಿತ್ತ್ತು. ಅಮೇರಿಕಾವನ್ನು ಹಣಿಯಲೆಂದೇ ಒಪೆಕ್ ರಾಷ್ಟ್ರಗಳು ತೈಲಬೆಲೆಯನ್ನು ಇಳಿಸಿದ್ದವು. ಅದರ ಲಾಭವನ್ನುಂಡು ನರೇಂದ್ರಮೋದಿ ಮೈಮರೆತು ಕುಳಿತುಕೊಳ್ಳಲಿಲ್ಲ. ಮಧ್ಯಪ್ರಾಚ್ಯ ದೇಶಗಳಿಗೆ ನಿರಂತರ ಪ್ರವಾಸ ಮಾಡಿ ಅವುಗಳೊಂದಿಗಿನ ಬಾಂಧವ್ಯವನ್ನು ವೃದ್ಧಿಸಿಕೊಂಡರು. ನಮಗೆ ಅತ್ಯಂತ ಹೆಚ್ಚು ತೈಲವನ್ನು ರಫ್ತು ಮಾಡುತ್ತಿದ್ದ ಇರಾನಿನೊಂದಿಗೆ ಭಿನ್ನ ಭಿನ್ನ ರೂಪದ ಒಪ್ಪಂದಗಳನ್ನು ಮಾಡಿಕೊಳ್ಳಲು ಉತ್ಸುಕತೆ ತೋರಿದರು. ಹಾಗಂತ ಅದು ಸಲೀಸಾಗಿರಲಿಲ್ಲ. ಅದಾಗಲೇ ಈ ತೈಲ ಪೂರೈಕೆ ಮಾಡುವ ರಾಷ್ಟ್ರಗಳೊಂದಿಗೆ ನಮ್ಮ ಸಾಲ ಅದೆಷ್ಟಿತ್ತೆಂದರೆ ತೈಲ ಬೆಲೆ ಕುರಿತಂತೆ ಚೌಕಶಿ ಮಾಡುವ ಸಾಮಥ್ರ್ಯವನ್ನು ನಾವು ಕಳೆದುಕೊಂಡಿದ್ದೆವು. ನರೇಂದ್ರಮೋದಿ ತೈಲ ಸಾಲವನ್ನು ಹಂತ ಹಂತವಾಗಿ ತೀರಿಸಿ ಈ ರಾಷ್ಟ್ರಗಳೊಂದಿಗೆ ಮಾತನಾಡುವ ತಮ್ಮ ಕ್ಷಮತೆಯನ್ನು ಬದಲಿಸಿಕೊಂಡರು. ಇಂಧನ ಸಚಿವ ಧಮರ್ೇಂದ್ರ ಪ್ರಧಾನರಂತೂ ಸಮರ್ಪಕ ಬೆಲೆಯಲ್ಲಿ ನಮಗೆ ತೈಲ ಪೂರೈಸದೇ ಹೋದರೆ ಜಗತ್ತಿನ ಬೇರೆ ರಾಷ್ಟ್ರಗಳನ್ನು ನಾವು ಸಂಪಕರ್ಿಸಬೇಕಾಗಬಹುದು ಎಂಬ ಎಚ್ಚರಿಕೆಯನ್ನೂ ಕೊಟ್ಟರು. ಮಧ್ಯಪ್ರಾಚ್ಯ ರಾಷ್ಟ್ರಗಳು ಭಾರತಕ್ಕೆ ಮತ್ತು ಚೀನಾಕ್ಕೆ ತೈಲ ಪೂರೈಸುವಾಗ ಏಷಿಯನ್ ಪ್ರೀಮಿಯಂ ಸರ್ಚಾಜರ್್ ಹಾಕುತ್ತಿದ್ದುದನ್ನು ಈ ಹೊತ್ತಲ್ಲಿ ನಾವು ನೆನಪಿಸಿಕೊಳ್ಳಲೇಬೇಕು. ನಮ್ಮ ಆಗ್ರಹದ ನಂತರ ಸೌದಿ ಅರೇಬಿಯಾ ಅದನ್ನು ತೆಗೆದುಹಾಕುವಲು ಒಪ್ಪಿಕೊಳ್ಳಲೇಬೇಕಾಯ್ತು.

ತೈಲಬೆಲೆ ಒಂದಲ್ಲೊಂದು ದಿನ ಏರಿಕೆಯಾಗುವುದು ಖಾತ್ರಿಯೆಂದರಿತ ನರೇಂದ್ರಮೋದಿ ಪಶ್ಚಿಮದ ರಾಷ್ಟ್ರಗಳೊಂದಿಗೆ ತೈಲ ಸಂಬಂಧವನ್ನು ವೃದ್ಧಿಸಿಕೊಳ್ಳುವ ಪ್ರಯತ್ನ ಮಾಡಿದರು. ಅಮೇರಿಕಾದೊಂದಿಗೆ ನಮ್ಮ ಆಮದು-ರಫ್ತುಗಳ ವಹಿವಾಟಿನಲ್ಲಿ ತೀವ್ರವಾದ ಕೊರತೆಯಿದ್ದು ಅದನ್ನು ನೀಗಿಸಬೇಕೆಂದು ಟ್ರಂಪ್ ಒತ್ತಾಯಿಸುತ್ತಲೇ ಇದ್ದರು. ಇದನ್ನು ಮನಗಂಡ ಪ್ರಧಾನಂತ್ರಿಗಳು ಅಮೇರಿಕಾದಿಂದ ತೈಲವನ್ನು ಆಮದುಮಾಡಿಕೊಂಡು ಈ ವ್ಯಾಪಾರ ಕೊರತೆ ನೀಗಿಸುವ ಪ್ರಯತ್ನ ಮಾಡಿದರು. ಅದರ ಪರಿಣಾಮವಾಗಿಯೇ 1975 ರ ನಂತರ ಮೊದಲ ಬಾರಿಗೆ ಅಮೇರಿಕಾದಿಂದ ಹೊರಟ ಹಡಗೊಂದು 1.6 ಮಿಲಿಯನ್ ಬ್ಯಾರೆಲ್ನಷ್ಟು ಶೇಲ್ ಆಯಿಲ್ ಅನ್ನು ಭಾರತಕ್ಕೆ ಹೊತ್ತು ತಂದಿತು. ಇದೇ ಹೊತ್ತಲ್ಲಿ ಭಾರತದ ಕಂಪನಿಗಳು ಅಮೇರಿಕಾದ ಶೇಲ್ ಗ್ಯಾಸ್ನಲ್ಲಿ 5 ಬಿಲಿಯನ್ ಡಾಲರ್ಗಳಷ್ಟು ಹಣ ಹೂಡಿಕೆ ಮಾಡಿತ್ತು. ಇಷ್ಟಕ್ಕೇ ಸುಮ್ಮನಾಗದ ನರೇಂದ್ರಮೋದಿ ವೆನಿಜಿಯೋಲಾದೊಂದಿಗೂ ಮಾತುಕತೆ ನಡೆಸಿ ಅವರನ್ನು ಆಥರ್ಿಕ ಸಮಸ್ಯೆಯಿಂದ ಪಾರು ಮಾಡಲು ಅವರಿಂದ ತೈಲಕೊಂಡುಕೊಳ್ಳುವ ಭರವಸೆ ಕೊಟ್ಟರು. ನೇರವಾಗಿ ದುಡ್ಡುಕೊಟ್ಟು ಕೊಂಡುಕೊಳ್ಳುವುದಾದರೆ ತೈಲಬೆಲೆಯಲ್ಲಿ ಶೇಕಡಾ 30ರಷ್ಟು ಕಡಿತಗೊಳಿಸುವುದಾಗಿ ವೆನಿಜಿಯೊಲಾ ಭರವಸೆ ಕೊಟ್ಟಿತು. ಎಲ್ಲವೂ ಸುಸೂತ್ರವಾಗಿಯೇ ಇತ್ತು. ಆ ಹೊತ್ತಲ್ಲಿಯೇ ಅಮೇರಿಕಾ ಇರಾನಿನ ಮೇಲೆ ನಿರ್ಬಂಧ ಹೇರಿತು. ಅದರ ಕಾರಣದಿಂದಾಗಿ ಇರಾನ್ ತಾನು ಹೊರತೆಗೆಯುತ್ತಿದ್ದ ತೈಲದ ಪ್ರಮಾಣ ಕಡಿಮೆಯಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಏರುತ್ತಲೇ ಹೋಯ್ತು. ಈ ವೇಳೆಗೆ ನರೇಂದ್ರಮೋದಿ ತುತರ್ಾಗಿ ರಷ್ಯಾಕ್ಕೆ ಭೇಟಿಕೊಟ್ಟಿದ್ದರು. ತೈಲದ ವಿಚಾರದಲ್ಲಿ ಸ್ವಾವಲಂಬಿಯಾಗಿರುವ ರಷ್ಯಾ ನಮಗೆ ನಿರಂತರವಾಗಿ ತೈಲ ಪೂರಿಕೆ ಮಾಡುವ ಪರಿಸ್ಥಿತಿ ನಿಮರ್ಾಣವಾದರೆ ಅಮೇರಿಕಾದೊಂದಿಗೆ ಹಗ್ಗ-ಜಗ್ಗಾಟ ನಡೆಸುವ ಅಗತ್ಯವಿಲ್ಲವೆಂದು ಪ್ರಧಾನಮಂತ್ರಿಗಳಿಗೆ ಚೆನ್ನಾಗಿಯೇ ಗೊತ್ತಿತ್ತು. ಆದರೇನು? ಏರಿಕೆಯಾಗುತ್ತಿದ್ದ ತೈಲಬೆಲೆ ಜನಸಾಮಾನ್ಯರಿಗೆ ಎಷ್ಟು ಸಂಕಟ ತಂದಿತ್ತೋ ಗೊತ್ತಿಲ್ಲ ಪ್ರತಿಪಕ್ಷ ಕಾಂಗ್ರೆಸ್ಸಿಗಂತೂ ತುಪ್ಪದನ್ನವುಂಡಂತಾಗಿತ್ತು. ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಕೇಂದ್ರ ಸಕರ್ಾರದ ಮೇಲೆ ದಾಳಿಗೈದು ನರೇಂದ್ರಮೋದಿ ಮನಸ್ಸು ಮಾಡಿದರೆ 25 ರೂಪಾಯಿಯಷ್ಟು ತೈಲ ಬೆಲೆ ಇಳಿಸಬಹುದು ಎಂದು ಗುಡುಗಿದರು. ಆದರೆ 2013 ರಲ್ಲಿ ತೈಲಬೆಲೆ ನಿಯಂತ್ರಣಕ್ಕೆ ಸಿಗದೇ ಏರುತ್ತಿದ್ದಾಗ ಬೆಂಗಳೂರಿಗೆ ಬಂದಿದ್ದ ಇದೇ ಚಿದಂಬರಂ ‘ಲೀಟರ್ಗೆ 15 ರೂಪಾಯಿ ಕೊಟ್ಟು ಮಿನಿರಲ್ ವಾಟರ್ ಕುಡಿಯುವ, 20 ರೂಪಾಯಿ ಕೊಟ್ಟು ಐಸ್ಕ್ರೀಂ ತಿನ್ನುವ ಜನರಿಗೆ ಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸವಾದೊಡನೆ ಕೋಪ ಬಂದು ಬಿಡುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಸಮಯ ಬಂದಾಗಲೆಲ್ಲಾ ವಿದೇಶಕ್ಕೆ ಓಡಿಹೋಗುವ ರಾಹುಲ್ ತೈಲಬೆಲೆ ಇಳಿಸುವ ಚಾಲೆಂಜನ್ನು ನರೇಂದ್ರಮೋದಿಗೆ ಟ್ವಿಟರ್ನಲ್ಲಿ ನೀಡಿದರು. ತೈಲವನ್ನೂ ಕೂಡ ಜಿಎಸ್ಟಿಯ ವ್ಯಾಪ್ತಿಗೆ ತರಬೇಕೆಂದು ಕಾಂಗ್ರೆಸ್ಸು ಇಂದು ಗಲಾಟೆಯೇನೋ ಮಾಡುತ್ತಿದೆ. ಆದರೆ ಜಿಎಸ್ಟಿಯ ಕುರಿತಂತೆ ಚಚರ್ೆ ನಡೆಸುವಾಗ ಕಾಂಗ್ರೆಸ್ಸು ತೈಲಬೆಲೆಯನ್ನು ಸಂವಿಧಾನದ ವ್ಯಾಪ್ತಿಯಲ್ಲೂ ಇಡಬಾರದೆಂದು ಹಠ ಮಾಡಿತ್ತು. ನರೇಂದ್ರಮೋದಿಯವರ ಅಧಿಕಾರಾವಧಿಯಲ್ಲೇ ತೈಲವನ್ನೂ ಕೂಡ ಜಿಎಸ್ಟಿಯ ವ್ಯಾಪ್ತಿಯಲ್ಲಿ ಮುಂದೊಮ್ಮೆ ತರಬೇಕಾಗಬಹುದು ಮುಂದಾಲೋಚಿಸಿಯೇ ನಿರ್ಣಯ ಕೈಗೊಂಡಿದ್ದರು. ಈಗ ರಾಜ್ಯ ಸಕರ್ಾರಗಳೆಲ್ಲ ಒಮ್ಮತ ತಂದುಕೊಂಡರೆ ತೈಲವನ್ನು ಜಿಎಸ್ಟಿ ಅಡಿಯಲ್ಲಿ ತರಬಹುದೇನೋ ನಿಜ ಆದರೆ ಇದರಿಂದ ತಮಗಾಗಬಹುದಾಗಿರುವ ನಷ್ಟವನ್ನು ಊಹಿಸಿಕೊಂಡೇ ರಾಜ್ಯ ಸಕರ್ಾರಗಳು ಪತರಗುಡುತ್ತಿದ್ದವು.

3

ಸದ್ಯಕ್ಕಂತೂ ಹೆದರಬೇಕಾದ ಅಗತ್ಯವಿಲ್ಲ. ತೈಲ ಬೆಲೆ ಏರಿಕೆಯಿಂದ ಯಾವ ಮಧ್ಯಮ ವರ್ಗದವರಿಗೆ ಹೊರೆಯಾಗುತ್ತದೆ ಎಂದು ಕಾಂಗ್ರೆಸ್ಸು ಬಡಬಡಾಯಿಸುತ್ತಿದೆಯೋ ತೈಲ ಬೆಲೆಯನ್ನು ಇಳಿಸಲೆಂದು ಬೊಕ್ಕಸಕ್ಕೆ ಹೊರೆ ಮಾಡಿದರೆ ಆ ನಷ್ಟವನ್ನು ಸರಿದೂಗಿಸಲು ಇದೇ ಮಧ್ಯಮ ವರ್ಗದವರು ತೆರಿಗೆ ಹೆಚ್ಚು ಕಟ್ಟಬೇಕಾಗುತ್ತದೆ ಎಂಬುದನ್ನು ಅವರು ಮರೆತೇ ಬಿಟ್ಟಿದ್ದಾರೆ. ತೆರಿಗೆಯನ್ನು ಕಟ್ಟಿಯೂ ಅಭಿವೃದ್ಧಿಯೇ ಇಲ್ಲದ ಕಳಪೆ ರಾಷ್ಟ್ರದಲ್ಲಿ ಬದುಕಬೇಕಾದ ಪರಿಸ್ಥಿತಿ ನಿಮರ್ಾಣವಾಗುವುದನ್ನು ಸಹಿಸುವುದಾದರು ಹೇಗೆ? ಇಷ್ಟಕ್ಕೂ ಕಳೆದ ನಾಲ್ಕು ವರ್ಷದಲ್ಲಿ 20 ಬಾರಿ ಪೆಟ್ರೋಲ್ ಬೆಲೆ ಕಡಿಮೆಯಾಗಿದ್ದರೆ, 16 ಬಾರಿ ಡೀಸೆಲ್ ಬೆಲೆ ಕಡಿಮೆಯಾಗಿದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ನರೇಂದ್ರಮೋದಿ ಅಧಿಕಾರ ವಹಿಸಿಕೊಂಡಾಗ ಪೆಟ್ರೋಲ್ ಬೆಲೆ ಲೀಟರ್ ಗೆ 73 ರೂಪಾಯಿಯಿತ್ತು. ಈಗ ಅದು 80 ರೂಪಾಯಿಯಾಗಿದೆ. ನಾಲ್ಕು ವರ್ಷಗಳಲ್ಲಾದ ಏರಿಕೆ ಏಳು ರೂಪಾಯಿಯಷ್ಟು ಮಾತ್ರ.

ವಿದೇಶದಲ್ಲಿ 18 ಸಾವಿರ ಕೋಟಿ ಆಸ್ತಿ ಮಾಡಿದರಲ್ಲ ಚಿದಂಬರಂ; ಇಂಥವರಿಗೆ ತೈಲಬೆಲೆ ಒಂದು ರಾಜಕೀಯ ದಾಳವೇ ಹೊರತು ಮತ್ತೇನಲ್ಲ. ರಾಷ್ಟ್ರದ ಅಭಿವೃದ್ಧಿ ಬೇಕಿರುವುದು ನಮಗೆ ಮತ್ತು ನಮಗಾಗಿಯೇ ಇರುವ ಪ್ರಧಾನ ಸೇವಕರಿಗೆ. ಸ್ವಲ್ಪ ತಾಳ್ಮೆಯಿಂದ ಕಾಯೋಣ.

Comments are closed.