ವಿಭಾಗಗಳು

ಸುದ್ದಿಪತ್ರ


 

ಮೋದಿ-ಅಟಲ್ ತುಲನೆ ಸರಿಯಾ?

ಇಬ್ಬರೂ ಮಾತಿನ ಮಲ್ಲರೇ. ಎದುರಾಳಿಗಳು ತಲೆದೂಗಿಸಬಲ್ಲಂತಹ ವಕ್ತೃತ್ವವನ್ನು ಇಬ್ಬರೂ ಪಡೆದುಕೊಂಡಿದ್ದಾರೆ. ಆದರೆ ಅಟಲ್ಜಿ ತಮ್ಮ ಕವನಗಳ ಮೂಲಕ ಎಲ್ಲರ ಮನಸೂರೆಗೊಂಡವರು. ಮೋದಿಯವರಿಗೆ ಆ ಭಾಗ್ಯವಿಲ್ಲ. ವಾಜಪೇಯಿ ನಿಮ್ಮನ್ನು ಅಳುವಂತೆ ಮಾಡಬಲ್ಲರು. ಆದರೆ ನರೇಂದ್ರಮೋದಿ ನಿಮ್ಮನ್ನು ಆಲೋಚನೆಗೆ ಹಚ್ಚಬಲ್ಲರು.

ವಾಜಪೇಯಿಯವರು ಬದುಕಿದ್ದಾಗ ಅವರನ್ನು ಕಂಠಮಟ್ಟ ವಿರೋಧಿಸಿದ್ದ ಕೆಲವು ಪತ್ರಕರ್ತರಿಗೆ ತೀರಿಕೊಂಡಾಕ್ಷಣ ಅವರು ಹೀರೊ ಎನಿಸಲಾರಂಭಿಸಿದ್ದು ಕಾಲದ ಮಹಿಮೆ ಎಂದೇ ಹೇಳಬೇಕೇನೊ! ಅಟಲ್ಜಿಯನ್ನು ಗದ್ದಾರ್ (ದೇಶದ್ರೋಹಿ) ಎಂದು ಕರೆದಿದ್ದ ಸೋನಿಯಾ ಅವರು ತೀರಿಕೊಂಡಾಗ ಬೇರೆ ಬಗೆಯ ಮಾತುಗಳನ್ನೇ ಆಡಿದ್ದು ರಾಜಕೀಯದ ಬೇರೆಯದ್ದೇ ರೀತಿನೀತಿ ಇರಬೇಕು. ಇದ್ದಕ್ಕಿದ್ದಂತೆ ವಾಜಪೇಯಿ ಮಹಾನಾಯಕ ಎಂದು ಸಂಘ ವಿರೋಧಿಗಳಿಗೂ ಎನಿಸಿದ್ದರ ಹಿಂದೆ ಮುಖ್ಯ ಕಾರಣ ಏನಿರಬಹುದು ಗೊತ್ತೇ? ನಿಸ್ಸಂಶಯವಾಗಿ ಅದು ನರೇಂದ್ರಮೋದಿಯೇ. ಅಟಲ್ಜಿಯವರ ಸಾವಿನ ನಂತರ ಅನೇಕ ಸಂಘ ವಿರೋಧಿ ಲೇಖಕರು ಮೋದಿಗಿಂತ ವಾಜಪೇಯಿಯವರೇ ಶ್ರೇಷ್ಠ ನಾಯಕ ಎಂಬುದನ್ನು ಪ್ರತಿಬಿಂಬಿಸಲು ಹೆಣಗಾಡಿದ್ದನ್ನು ಕಂಡಾಗ ಮೋದಿ ಬೆಳೆದು ನಿಂತಿರುವ ಪರಿ ಕಂಡು ಎಂಥವನಿಗೂ ಅಸೂಯೆಯಾಗುವುದು ಖಚಿತ. ಅದು ಯಾವಾಗಲೂ ಹಾಗೆಯೇ. ಅಡ್ವಾಣಿ ರಾಮಮಂದಿರದ ಯಾತ್ರೆ ಶುರು ಮಾಡಿದ ನಂತರ ಈ ಲೇಖಕರುಗಳಿಗೆಲ್ಲ ಅವರಿಗಿಂತ ಅಟಲ್ಜಿ ಪರವಾಗಿಲ್ಲ ಎನಿಸಿತ್ತು. ಗುಜರಾತ್ನಲ್ಲಿ ಮೋದಿ ಮುಖ್ಯಮಂತ್ರಿಯಾದ ನಂತರ ಮೋದಿ ಅತ್ಯಂತ ಕಠೋರ ಎನಿಸಿದ್ದಲ್ಲದೇ ಅವರೊಂದಿಗೆ ತುಲನೆ ಮಾಡಿ ಅಟಲ್ಜಿಯನ್ನು ದೇವರೆಂದು ಭಾವಿಸಲಾರಂಭಿಸಿದ್ದರು ಇವರು. ಮೋದಿ ಪ್ರಧಾನಿಯಾದ ಮೇಲಂತೂ ಈ ಎಡಪಂಥೀಯ ಬುದ್ಧಿಜೀವಿಗಳ ಗುಂಪಿಗೆ ಅವರನ್ನು ರಾಕ್ಷಸರೆಂದು ಬಿಂಬಿಸಿದ ಮೇಲೂ ಸಮಾಧಾನವಿಲ್ಲ. ಈ ಚಿಂತಕರೆನಿಸಿಕೊಳ್ಳುವವರಿಗೆ ಮೋದಿ ಒಳ್ಳೆವಯವರಾಗಿ ಕಂಡಿದ್ದು ಯಾವಾಗ ಗೊತ್ತೇ? ಯೋಗಿ ಮುಖ್ಯಮಂತ್ರಿಯಾದ ಮೇಲೇ! ಈಗಲೂ ಹಾಗೆಯೇ ಅಟಲ್ಜಿ ಮೋದಿಗಿಂತ ಸಾವಿರ ಪಾಲು ಒಳಿತಾಗಿದ್ದರು ಎಂದು ಸಾಬೀತುಪಡಿಸುವಲ್ಲಿ ಇವರೆಲ್ಲ ಹೆಣಗಾಡುತ್ತಿರುವ ಪರಿ ಅಷ್ಟಿಷ್ಟಲ್ಲ.

5

ಇಷ್ಟಕ್ಕೂ ಮೋದಿ ಪ್ರಧಾನಿಯಾಗಲು ಅಟಲ್ಜಿಯವರೇ ಕಾರಣ. ಗುಜರಾತಿನಲ್ಲಿ ಪಕ್ಷದ ಜವಾಬ್ದಾರಿ ಹೊತ್ತಿದ್ದ ಮೋದಿಜಿ ಕೇಶುಬಾಯಿ ಪಟೇಲರ ಆತ್ಮೀಯರಾಗಿ ಗುರುತಿಸಿಕೊಂಡವರು. ಇದೇ ಕೇಶುಭಾಯಿ ಮುಂದೆ ಮೋದಿ ತನ್ನ ಬೆಳವಣಿಗೆಗೆ ಅಡ್ಡಗಾಲಾಗುವರೆಂದು ಭಾವಿಸಿ ಅವರನ್ನು ಗುಜರಾತಿನಿಂದ ಆಚೆಗಟ್ಟಿ ದೆಹಲಿಗೆ ತಳ್ಳಿದ್ದರು. ಇದೇ ವೇಳೆಯಲ್ಲಿ ರಾಜಕಾರಣದಿಂದ ಅಜ್ಞಾತವಾಸಕ್ಕೆ ತೆರಳಿದ ಮೋದಿ ಅಮೇರಿಕಾದಲ್ಲಿ ಕೆಲವು ಕಾಲ ಅಧ್ಯಯನಶೀಲರಾಗಿದ್ದರಂತೆ. ಆಗ ವಿದೇಶ ಪ್ರವಾಸಕ್ಕೆ ತೆರಳಿದ್ದ ಅಟಲ್ಜಿ ಪಕ್ಷದ ನೊಗ ಹೊರಬೇಕು ಎಂಬ ಜವಾಬ್ದಾರಿಯನ್ನು ಕೊಟ್ಟು ಅವರನ್ನು ಮರಳಿ ಕರೆತಂದರು. ಮುಂದೆ ಗುಜರಾತಿನಲ್ಲಿ ಭೂಕಂಪವಾಗಿ ಪರಿಹಾರ ಕಾರ್ಯದಲ್ಲಿ ಭಾಜಪಕ್ಕೆ ಕೆಟ್ಟ ಹೆಸರು ಬಂದಾಗ ಇದೇ ಅಟಲ್ಜಿ ಮೋದಿಯವರನ್ನು ಸಂಪಕರ್ಿಸಿ ತಮ್ಮ ಕಛೇರಿಗೆ ಕರೆಸಿಕೊಂಡಿದ್ದರಂತೆ. ಆಗ ಮಿತ್ರನೊಬ್ಬನ ಸಾವಿನ ದುಃಖದಲ್ಲಿದ್ದ ಮೋದಿಯವರಿಗೆ ಗುಜರಾತಿನ ಜವಾಬ್ದಾರಿಯನ್ನು ಹೆಗಲಿಗೇರಿಸಿದ ಅಟಲ್ಜಿ ಆಶಿವರ್ಾದ ಮಾಡಿಯೂ ಕಳಿಸಿದ್ದರು. ಹಾಗೆ ನೋಡಿದರೆ ಮೋದಿ ಅಡ್ವಾಣಿಯವರ ಪಾಳಯದವರು. ಅಡ್ವಾಣಿ ಮತ್ತು ಅಟಲ್ಜಿ ಮೇಲ್ನೋಟಕ್ಕೆ ಒಳ್ಳೆಯ ಗೆಳೆತನ ಹೊಂದಿದ್ದರೂ ಆಂತರಿಕವಾಗಿ ಭಿನ್ನಾಭಿಪ್ರಾಯಗಳು ಇದ್ದೇ ಇದ್ದವು. ಹೀಗಾಗಿ ಮೋದಿಯನ್ನು ಮುಖ್ಯಮಂತ್ರಿಯಾಗಿಸುವ ಮೂಲಕ ಅಟಲ್ಜಿ ಅಡ್ವಾಣಿಯವರನ್ನೂ ಸಮಾಧಾನಪಡಿಸಲೆತ್ನಿಸಿದ್ದರು. ಆದರೆ ಗೋಧ್ರಾ ಹತ್ಯಾಕಾಂಡದ ನಂತರ ಮುನಿಸಿಕೊಂಡ ಅಟಲ್ಜಿ ಮೋದಿಯವರನ್ನು ಕೆಳಗಿಳಿಸಲು ಬಯಸಿದ್ದರೆಂದು ಅರುಣ್ ಶೌರಿಯವರ ಕೃತಿ ಹೇಳುತ್ತದೆ. 2002 ರ ಏಪ್ರಿಲ್ನಲ್ಲಿ ಗೋವಾದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲೆಂದು ಹೊರಟ ಅಟಲ್, ಅಡ್ವಾಣಿ, ಜಸ್ವಂತ್ ಸಿಂಗ್ರೊಂದಿಗೆ ಅಟಲ್ರ ಅಳಿಯ ರಂಜನ್ರ ಅಪೇಕ್ಷೆಯ ಮೇರೆಗೆ ಶೌರಿಯೂ ಹೋಗಿದ್ದರು. ತಮ್ಮ ಶಿಷ್ಯನನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಲು ಒಪ್ಪದಿರುವ ಅಡ್ವಾಣಿಯವರೊಂದಿಗೆ ಅಟಲ್ಜಿಯವರ ಮಾತುಕತೆಯೇ ನಿಂತುಹೋಗಿತ್ತು. ಇಬ್ಬರೂ ತಂತಮ್ಮ ಪಾಡಿಗೆ ಪತ್ರಿಕೆ ಹಿಡಿದು ಓದುತ್ತಾ ಕುಳಿತುಬಿಟ್ಟರಂತೆ. ಶೌರಿ ಇವರಿಬ್ಬರನ್ನೂ ಮಾತಿಗೆಳೆಯುವಂತೆ ಮಾಡಿದಾಗ ಅಟಲ್ಜಿ ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದರಂತೆ. ಆದರೆ ಕಾರ್ಯಕಾರಿಣಿಯಲ್ಲಿ ನಡೆದದ್ದೇ ಬೇರೆ. ಇವರಿಬ್ಬರೂ ಕೇಳಿಕೊಳ್ಳುವ ಮುನ್ನವೇ ಮೋದಿ ತಾನೇ ಅಧಿಕಾರ ಬಿಡುವ ಬಯಕೆಯನ್ನು ವ್ಯಕ್ತಪಡಿಸಿದರು. ತಕ್ಷಣವೇ ಸಭೆಯಲ್ಲಿ ಹಾಹಾಕಾರವೆದ್ದು ಮೋದಿ ಅಧಿಕಾರ ತ್ಯಾಗ ಮಾಡುವ ಅಗತ್ಯವಿಲ್ಲವೆಂದು ಕೂಗಿದರು ಜನ. ಅದು ಮೋದಿಯವರ ಬದುಕಿನ ಬಲು ದೊಡ್ಡ ಟನರ್ಿಂಗ್ ಪಾಯಿಂಟ್. ಅಟಲ್ಜಿ ಮೆತ್ತಗಾಗಲೇಬೇಕಾಗಿ ಬಂತು. ಮುಂದೆ ಅಟಲ್ಜಿ ಗುಜರಾತಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕುಳಿತಾಗ ಗೋಧ್ರಾಕಾಂಡದ ಚಚರ್ೆ ಬಂದಾಗ ರಾಜಧರ್ಮವನ್ನು ಪ್ರತಿಯೊಬ್ಬ ನಾಯಕನೂ ಪಾಲಿಸಬೇಕು ಎಂದಿದ್ದರು. ಮರುಕ್ಷಣವೇ ಮೋದಿಯವರ ಹೆಗಲ ಮೇಲೆ ಕೈ ಹಾಕಿ ಈತ ಅದನ್ನೇ ಮಾಡುತ್ತಿದ್ದಾನೆ ಎಂದು ಸಮಥರ್ಿಸಿಯೂಕೊಂಡರು. ಆಂತರಿಕ ಘರ್ಷಣೆಗಳೇನೇ ಇರಲಿ ಹೊರಗಿನವರ ಮುಂದೆ ತನ್ನ ಮಾತೃ ಸಂಘಟನೆಯನ್ನು ಬಿಟ್ಟುಕೊಡದಿರುವ ಶ್ರೇಷ್ಠ ಗುಣ ಇಬ್ಬರಿಗೂ ಇದೆ. ಸಂಘಟನೆಯನ್ನು ಬಲಗೊಳಿಸುವ ವಿಚಾರದಲ್ಲಿ ಸೈದ್ಧಾಂತಿಕವಾದ ಅಡಿಪಾಯವನ್ನು ಹಾಕಿ ಭವ್ಯ ಸೌಧವನ್ನು ನಿಮರ್ಿಸುವಲ್ಲಿ ಇಬ್ಬರಿಗೂ ಬಲವಾದ ನಂಬಿಕೆ. ಹೀಗಾಗಿಯೇ ಮುಖ್ಯಮಂತ್ರಿಯಾಗಬೇಕೆಂದು ತಾಕೀತು ಮಾಡಿದ ವ್ಯಕ್ತಿಯೇ ಆ ಪದವಿಯಿಂದ ಕೆಳಗಿಳಿಯಬೇಕೆಂದು ಒತ್ತಾಯಿಸಿದಾಗ ಮೋದಿ ಗಲಿಬಿಲಿಗೊಳ್ಳಲಿಲ್ಲ. ಹಾಗೆಯೇ ತನ್ನ ನಿರ್ಣಯಕ್ಕೆ ವಿರುದ್ಧವಾಗಿ ಪಕ್ಷದೊಳಗೆ ಕೂಗು ಕೇಳಿಬಂದಿತು ಎಂಬುದರ ಅರಿವಿದ್ದಾಗಲೂ ಅದಕ್ಕೆ ಕಾರಣನಾದವನನ್ನು ಬಿಟ್ಟುಕೊಡಲು ಅಟಲ್ಜಿ ಸಿದ್ಧರಿರಲಿಲ್ಲ. ಇಬ್ಬರಲ್ಲೂ ಇದ್ದ ಸಾಮ್ಯತೆ ಇಲ್ಲಿಗೇ ಕೊನೆಯಾಗುತ್ತದೆ. ಇನ್ನೇನಿದ್ದರೂ ಇವರಿಬ್ಬರ ನಡುವಿನ ವೈರುಧ್ಯಗಳನ್ನು ಮಾತ್ರ ಗುರುತಿಸಬಹುದು.

ಇಬ್ಬರೂ ಮಾತಿನ ಮಲ್ಲರೇ. ಎದುರಾಳಿಗಳು ತಲೆದೂಗಿಸಬಲ್ಲಂತಹ ವಕ್ತೃತ್ವವನ್ನು ಇಬ್ಬರೂ ಪಡೆದುಕೊಂಡಿದ್ದಾರೆ. ಆದರೆ ಅಟಲ್ಜಿ ತಮ್ಮ ಕವನಗಳ ಮೂಲಕ ಎಲ್ಲರ ಮನಸೂರೆಗೊಂಡವರು. ಮೋದಿಯವರಿಗೆ ಆ ಭಾಗ್ಯವಿಲ್ಲ. ವಾಜಪೇಯಿ ನಿಮ್ಮನ್ನು ಅಳುವಂತೆ ಮಾಡಬಲ್ಲರು. ಆದರೆ ನರೇಂದ್ರಮೋದಿ ನಿಮ್ಮನ್ನು ಆಲೋಚನೆಗೆ ಹಚ್ಚಬಲ್ಲರು. ಅನೇಕರು ವಾಜಪೇಯಿಯವರಿಗೆ ಪೂರ್ಣಬಹುಮತದ ಸಕರ್ಾರ ನಡೆಸುವ ಅವಕಾಶ ದಕ್ಕಿರಲಿಲ್ಲವೆಂದು ಕೊರಗುತ್ತಾರೆ. ಮೋದಿ ಆ ವಿಚಾರದಲ್ಲಿ ಭಾಗ್ಯವಂತರು ಎನ್ನುತ್ತಾರೆ. ಆದರೆ ಅವರಿಗೆ ಗೊತ್ತಿರದ ಸಂಗತಿ ಎಂದರೆ ಮೋದಿ 2014 ರ ಚುನಾವಣೆಗೂ ಮುನ್ನ 8 ತಿಂಗಳ ಕಾಲ 3 ಲಕ್ಷ ಕಿಲೋಮೀಟರ್ಗೂ ಹೆಚ್ಚು ದೂರ ಕ್ರಮಿಸಿ, 450 ಕ್ಕೂ ಹೆಚ್ಚು ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದರು. ಅದರೊಟ್ಟಿಗೆ ಚಾಯ್ ಪೇ ಚಚರ್ಾಗಳು, 3ಡಿ ರ್ಯಾಲಿಗಳು ಬೇರೆ. ತನಗೆ ಬೇಕಾದ ಸಂಖ್ಯೆಯನ್ನು ಪಡೆದುಕೊಳ್ಳಲು ಮೋದಿ ಮುಲಾಜಿಲ್ಲದೇ ಶ್ರಮ ಹಾಕಿದ್ದಾರೆ. ಈಗಲೂ ಅಷ್ಟೇ. ಲೋಕಸಭೆ ಚುನಾವಣೆಯಿಂದ ಹಿಡಿದು ಗ್ರಾಮ ಪಂಚಾಯತ್ ಚುನಾವಣೆಯವರೆಗೂ ಮೋದಿಯೇ ಸ್ಟಾರ್ ಭಾಷಣಕಾರರು. ಬೇಕಿದ್ದರೆ ಅವರೊಬ್ಬರೇ ಭಾಷಣಕಾರರು ಎಂದು ಕರೆದರೂ ತಪ್ಪಿಲ್ಲ. ಅಟಲ್ಜಿ ಉತ್ತಮ ವಾಗ್ಮಿಗಳಾಗಿದ್ದರೂ ಚುನಾವಣಾ ರ್ಯಾಲಿಗಳಲ್ಲಿ ಅನೇಕ ನಾಯಕರೊಂದಿಗೆ ಅವರೂ ಒಬ್ಬರಾಗಿದ್ದರು. ಆದರೆ ಮೋದಿ ಹಾಗಲ್ಲ. ನೂರೆಂಟು ನಾಯಕರಿದ್ದರೂ ಮೋದಿಯೇ ಎಲ್ಲರಿಗೂ ಬೇಕು. ಹೀಗಾಗಿ ಲೋಕಸಭೆಯನ್ನಷ್ಟೇ ಅಲ್ಲದೇ ಮಹಾರಾಷ್ಟ್ರ, ಗುಜರಾತು, ಹರಿಯಾಣ ಇಲ್ಲೆಲ್ಲಾ ಅಧಿಕಾರ ಪಡೆದಿರುವುದರಲ್ಲಿ ನಿಸ್ಸಂಶಯವಾಗಿ ಅವರದ್ದೇ ಸಾಮಥ್ರ್ಯ ಇದೆ. ಈ ಕಾರಣದಿಂದಾಗಿಯೇ ಭಾಜಪದಲ್ಲಿ ಅವರೊಬ್ಬ ಎದುರಾಳಿಯಿಲ್ಲದ ನಾಯಕರಾಗಿಬಿಟ್ಟಿದ್ದಾರೆ. ಯಾವ ನಿರ್ಣಯವನ್ನು ತೆಗೆದುಕೊಳ್ಳಬೇಕಿದ್ದರೂ ತಾವೇ ನಿಶ್ಚಯಿಸುತ್ತಾರೆ. ಪ್ರಧಾನಮಂತ್ರಿ ಕಛೇರಿ ಮೋದಿಯವರ ಒಬ್ಬ ಪರಿವಾರದ ಸದಸ್ಯನೂ ಇಲ್ಲದೇ ಸಮರ್ಥ ಅಧಿಕಾರಿಗಳ ತಾಣವಾಗಿದ್ದು ಪ್ರತಿಯೊಂದು ಮಂತ್ರಿಯ ನಿರ್ಣಯವೂ ಕೂಡ ಈ ಕಛೇರಿಯ ಮೂಲಕವೇ ಹಾದುಹೋಗಬೇಕಾಗಿದೆ. ರಕ್ಷಣಾ ಸಚಿವರೇ ಇರಲಿ ವಿದೆಶಾಂಗ ಸಚಿವರೇ ಇರಲಿ ಪ್ರಮುಖ ಪಾಲಿಸಿ ನಿರ್ಣಯಗಳಿಗೆ ಪ್ರತಿಯೊಬ್ಬರೂ ಪ್ರಧಾನಮಂತ್ರಿ ಕಛೇರಿಯನ್ನೇ ದಾಟಿ ಹೋಗಬೇಕು. ಅಟಲ್ಜಿ ಹಾಗಿರಲಿಲ್ಲ. ಅವರು ಪ್ರತಿಯೊಂದು ನಿರ್ಣಯ ತೆಗೆದುಕೊಳ್ಳುವ ಮೊದಲು ಕ್ಯಾಬಿನೆಟ್ಟಿನ ಪ್ರಮುಖರನ್ನು ಮಾತನಾಡಿಸಿಯೇ ನಿಶ್ಚಯಿಸುತ್ತಿದ್ದರು. ಅಟಲ್ಜಿ ಎಲ್ಲರನ್ನೂ ನಂಬುವ ಗುಣ ಹೊಂದಿದ್ದವರು. ಅವರ ರಕ್ಷಣಾ ಕಾರ್ಯದಶರ್ಿ ಬ್ರಿಜೇಶ್ ಮಿಶ್ರಾ ಬಹುತೇಕ ನಿರ್ಣಯಗಳನ್ನು ತಾವೇ ತೆಗೆದುಕೊಳ್ಳುತ್ತಿದ್ದರು. ಮೋದಿ ಹಾಗಲ್ಲ. ಅವರ ಕೈಕೆಳಗಿನ ಅನೇಕ ಅಧಿಕಾರಿಗಳು ತಮ್ಮ ಡ್ರೈವರ್ಗಳ ಫೋನಿನಿಂದ ಮಾತನಾಡುತ್ತಾರೆ. ಮೋದಿಯ ಹದ್ದುಗಣ್ಣಿನಿಂದ ಬಚಾವಾಗಲೂ ಮಂತ್ರಿ ಮಹೋದಯರೂ ಕಸರತ್ತು ನಡೆಸುತ್ತಿರುತ್ತಾರೆ. 12 ವರ್ಷಗಳ ಕಾಲ ಗುಜರಾತಿನಲ್ಲಿ ಅಧಿಕಾರಿಗಳ ಕಾರ್ಯವೈಖರಿಯನ್ನು ಹತ್ತಿರದಿಂದ ಗಮನಿಸಿದ ಮೋದಿ ಪ್ರಧಾನಿಯಾದೊಡನೆ ಎಲ್ಲೆಲ್ಲಿ ಹಿಂಡಬೇಕೊ ಅಲ್ಲಲ್ಲಿಯೇ ಸರಿಯಾಗಿ ಹಿಂಡಿದ್ದಾರೆ.

4

ಅಭಿವೃದ್ಧಿಯ ವಿಚಾರದಲ್ಲೂ ಮೋದಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದ್ದಾರೆ. ಅಟಲ್ಜಿಯ ತೆಕ್ಕೆಗೆ ಸುವರ್ಣ ಚತುಷ್ಪಥ, ಪ್ರಧಾನಮಂತ್ರಿ ಗ್ರಾಮ ಸಡಕ್, ಅಣುಪರೀಕ್ಷೆಯಂತಹ ಒಂದಷ್ಟು ಹೆಮ್ಮೆಯ ಸಾಧನೆಗಳು ಬಿದ್ದಿದ್ದರೆ ಮೋದಿ ಅತ್ಯಂತ ಹೆಚ್ಚಿನ ವಿದ್ಯುತ್ ಉತ್ಪಾದನೆ, ಕಲ್ಲಿದ್ದಲು ಉತ್ಪಾದನೆಗಳ ಮೂಲಕ ವಿಕ್ರಮ ಮೆರೆದಿದ್ದಾರೆ. ಅತ್ಯಂತ ಹೆಚ್ಚು ರಸ್ತೆಗಳ ನಿಮರ್ಾಣದ ಕಿರೀಟ ಅವರ ತಲೆ ಮೇಲೆಯೇ ಇದೆ. ಜನ್ಧನ್ ಅಕೌಂಟಿನ ಮೂಲಕ ಅತ್ಯಂತ ಹೆಚ್ಚು ಖಾತೆ ಹೊಂದಿರುವವರನ್ನು ನಿಮರ್ಿಸಿದ ಸಾಧನೆಯೂ ಅವರದ್ದೇ. ಫಸಲ್ ಬಿಮಾ, ಕೃಷಿ ಸಿಂಚಾಯಿ ಈ ಯೋಜನೆಗಳ ಮೂಲಕ ರೈತರ ಮನ ಮುಟ್ಟಿದ್ದರೆ ಕೌಶಲ್ಯವರ್ಧನೆ, ಡಿಜಿಟಲ್ ಇಂಡಿಯಾದ ಕಲ್ಪನೆಯ ಮೂಲಕ ಹಳ್ಳಿಗರ ಜೀವನವನ್ನು ಸುಧಾರಿಸುವ ಪ್ರಯತ್ನ ಮಾಡಿದ್ದಾರೆ. ಕಳೆದ 70 ವರ್ಷಗಳಲ್ಲಿ ವಿಕಾಸದ ಓಟಕ್ಕೆ ಈ ಪರಿಯ ವೇಗವನ್ನು ತಂದುಕೊಟ್ಟ ಮತ್ತೊಬ್ಬ ನಾಯಕನಿರಲಿಲ್ಲ!

ಅಟಲ್ಜಿ ಮೃದು ಹೃದಯದ ವ್ಯಕ್ತಿ. ಪ್ರತಿಪಕ್ಷದವರೂ ಮಾಡಿದ ತಪ್ಪನ್ನೂ ಕ್ಷಮಿಸಿಬಿಡಬಲ್ಲ ವಿಶಾಲ ಹೃದಯ ಅವರದ್ದು. ಮೋದಿ ಹಾಗಲ್ಲ. ರಾಷ್ಟ್ರಕ್ಕೆ, ತನ್ನ ಸಂಘಟನೆಗೆ ಸೂಕ್ತವೆನಿಸಿದ್ದನ್ನು ಎಷ್ಟೇ ಚೌಕಶಿಯಾದರೂ ಸರಿ ಪಡೆದೇ ತೀರುತ್ತಾರೆ. ಬಿಹಾರದಲ್ಲಿ ಬಿಜೆಪಿಗೆ 65 ಸ್ಥಾನಗಳು ಬಂದಿದ್ದು ಜನತಾ ದಳಕ್ಕೆ 35 ಸ್ಥಾನ ಬಂದಾಗಲೂ ನಿತೀಶರಿಗೆ ಮುಖ್ಯಮಂತ್ರಿ ಸ್ಥಾನವನ್ನು ವಾಜಪೇಯಿಯವರು ಬಿಟ್ಟುಕೊಟ್ಟಿದ್ದರು. ಆ ಸ್ಥಾನದಲ್ಲಿ ಮೋದಿ ಇದ್ದಿದ್ದರೆ ಅದು ಖಂಡಿತ ಸಾಧ್ಯವಾಗುತ್ತಿರಲಿಲ್ಲ. ಎರಡನೇ ದೊಡ್ಡ ಪಕ್ಷವಾಗಿ ಪಿಡಿಪಿಯೊಂದಿಗೆ ಸೇರಿ ಜಮ್ಮು-ಕಾಶ್ಮೀರದಲ್ಲಿ ಸಕರ್ಾರ ರಚಿಸಿದಾಗ ಮೋದಿ ಉಪಮುಖ್ಯಮಂತ್ರಿ ಹುದ್ದೆಯನ್ನು ಪಕ್ಷಕ್ಕೆ ಪಡೆದುಕೊಂಡರು. ಅದೇ ವೇಳೆ ಮಹಾರಾಷ್ಟ್ರದಲ್ಲಿ ಶಿವಸೇನೆಗೇನೂ ಉಪಮುಖ್ಯಮಂತ್ರಿ ಹುದ್ದೆಯನ್ನು ಕೊಡಲಿಲ್ಲ.
ಅಟಲ್ಜಿಯನ್ನು ಕಂಡರೆ ಪತ್ರಕರ್ತರಿಗೆ ಬಲುವಾದ ಪ್ರೀತಿ. ಅಟಲ್ಜಿಯೂ ಅವರೊಂದಿಗೆ ನಯವಾಗಿಯೇ ನಡೆದುಕೊಳ್ಳುತ್ತಿದ್ದರು. ಅಧಿಕಾರಕ್ಕೇರಿದ ಕೆಲವೇ ದಿನಗಳಲ್ಲಿ ಅಧಿಕೃತ ನಿವಾಸದಲ್ಲಿ ಎಲ್ಲ ಹಿರಿಯ ಪತ್ರಕರ್ತರಿಗೆ ಅಟಲ್ಜಿ ಔತಣ ಕೂಟ ಆಯೋಜಿಸಿದ್ದರು. ಪತ್ರಕರ್ತರು ಕೇಳಿದ ಎಲ್ಲ ಪ್ರಶ್ನೆಗಳಿಗೂ ತಮ್ಮ ಕವಿ ಭಾಷೆಯಲ್ಲಿಯೇ ಸಹಜವಾಗಿ ಉತ್ತರಿಸಿದ್ದರು. ಮೋದಿ ತಾವು ಅಧಿಕಾರಕ್ಕೇರಿದಾಕ್ಷಣ ಬಿಜೆಪಿ ಮುಖ್ಯ ಕಛೇರಿಯಲ್ಲೇ ಪತ್ರಕರ್ತರೊಂದಿಗೆ ಮಾತನಾಡಿದರು. ಅವರಿಗೆಲ್ಲಾ ಸೆಲ್ಫೀ ತೆಗೆದುಕೊಳ್ಳಲಿಕ್ಕೆ ಮಾತ್ರ ಅವಕಾಶವಿತ್ತು. ಯಾರೂ ಪ್ರಶ್ನೆ ಕೇಳುವ ಗೋಜಿಗೆ ಹೋಗಲಿಲ್ಲ. ಮೋದಿಯನ್ನು ಕಂಡರೆ ಬಹುತೇಕ ಪತ್ರಕರ್ತರಿಗೆ ಅಷ್ಟಕ್ಕಷ್ಟೇ. ಏಕೆಂದರೆ ಮೋದಿ ಇವರನ್ನು ತನ್ನೊಂದಿಗೆ ವಿದೇಶ ಪ್ರವಾಸಕ್ಕೊಯ್ಯುವುದಿಲ್ಲ, ಅನವಶ್ಯಕ ಪ್ರಶಸ್ತಿಗಳನ್ನು ಕೊಡುವುದಿಲ್ಲ, ಸಕರ್ಾರಿ ಹುದ್ದೆಗಳನ್ನು ಅಲಂಕರಿಸುವ ಅವಕಾಶವನ್ನೂ ಕೊಡುವುದಿಲ್ಲ. ಇಷ್ಟಾದರೂ ತನ್ನ ಎಲ್ಲ ಭಾಷಣಗಳು ಟಿವಿಯಲ್ಲಿ ಪ್ರಸಾರವಾಗುವಂತೆ ಮೋದಿ ನೋಡಿಕೊಳ್ಳುತ್ತಾರೆ ಮತ್ತು ಸದ್ಯದಲ್ಲಿ ಅವರ ಭಾಷಣಕ್ಕೆ ಅತಿ ಹೆಚ್ಚು ಬೇಡಿಕೆ ಇರುವುದರಿಂದ ಮಾಧ್ಯಮಗಳು ಅನಿವಾರ್ಯವಾಗಿ ಅವರ ಹಿಂದೆ ಬೀಳುತ್ತವೆ. ಮೋದಿ ಪತ್ರಕರ್ತರ ಹಿಂದೆ ಓಡುವುದಿಲ್ಲ. ಬದಲಿಗೆ ಪತ್ರಕರ್ತರೇ ತನ್ನ ಹಿಂದೆ ಧಾವಿಸುವಂತೆ ಮಾಡಿಕೊಂಡು ಬಿಡುತ್ತಾರೆ.

ಎದುರಾಳಿಗಳಲ್ಲಿ ಮೋದಿ ಎಂತಹ ಅಸಹನೆಯನ್ನು ಹುಟ್ಟುಹಾಕಬಲ್ಲರೆಂಬುದಕ್ಕು ಪತ್ರಕರ್ತ ರಾಜ್ದೀಪ್ ಸರ್ದೇಸಾಯಿಯೇ ಸಾಕ್ಷಿ. ಆತ ವಿಸ್ತಾರವಾದ ಲೇಖನವೊಂದನ್ನು ಬರೆದು ಅಟಲ್-ಅಡ್ವಾಣಿಯವರ ಜೋಡಿಯ ಮುಂದೆ ಮೋದಿ-ಷಾ ಜೋಡಿ ಯಾವ ಲೆಕ್ಕಕ್ಕೂ ಇಲ್ಲ ಎಂದಿದ್ದಾರೆ. ಹಳಬರಿಬ್ಬರೂ ರಾಜಧರ್ಮವನ್ನು ಅನುಸರಿಸುತ್ತಿದ್ದರೆ ಈಗಿನವರು ಚಾಣಕ್ಯನೀತಿಯ ಮಾತನಾಡುತ್ತಾರೆ ಎಂದು ಹೊಟ್ಟೆ ಉರಿಸಿಕೊಂಡಿದ್ದಾರೆ. ಈ ಬಗೆಯ ಆಕ್ರೋಶದ ನಡುವೆಯೂ ಮೋದಿ ಭಾಜಪವನ್ನು ಬ್ರಾಹ್ಮಣ ಪಕ್ಷವೆಂಬ ಹಣೆಪಟ್ಟಿಯಿಂದ ದೂರಗೊಳಿಸಿ ಅದನ್ನು ಸರ್ವಸ್ಪಶರ್ಿಯಾಗಿ ಮಾಡಿಬಿಟ್ಟಿದ್ದಾರೆಂದು ಹೇಳುವುದನ್ನು ಮರೆಯುವುದಿಲ್ಲ. ಅದೇ ವೇಳೆ ಹವಾಲಾ ಹಗರಣದ ಕಾರಣ ಕ್ಯಾಬಿನೆಟ್ಟಿನಿಂದ ಹೊರಬಂದ ಅಡ್ವಾಣಿಯವರಿಗೂ ಕನರ್ಾಟಕದಲ್ಲಿ ಅನೈತಿಕವಾಗಿ ಸಕರ್ಾರ ರಚಿಸ ಹೊರಟಿದ್ದ ಮೋದಿ-ಷಾ ಅವರಿಗೂ ಅಜಗಜಾಂತರವಿದೆಯೆಂದು ತಮ್ಮದೇ ಆದ ತೀಪರ್ು ಕೊಟ್ಟಿದ್ದಾರೆ.
ಬಹುಶಃ ದೇಶದ 128 ಕೋಟಿ ಜನರು ಮೋದಿಯವರ ಕುರಿತಂತೆಯೇ ಭಗವಂತನಲ್ಲಿ ಪ್ರಾಥರ್ಿಸುತ್ತಿರುತ್ತಾರೆ. ಕೆಲವರು ಒಳಿತಾಗಲಿ ಎಂದು ಕೇಳಿಕೊಂಡರೆ ಇನ್ನೂ ಕೆಲವರು ಕೆಡುಕಾಗಲಿ ಅಂತ. ಮನಸ್ಸಿಲ್ಲದೇ ಹೋದಾಗಲೂ ಹೀಗೆ ನಾಯಕನೊಬ್ಬನ ಕುರಿತಂತೆ ಆಲೋಚನೆ ಮಾಡಲೇಬೇಕಾದ ಪರಿಸ್ಥಿತಿಯನ್ನು ಮೋದಿ ನಿಮರ್ಾಣ ಮಾಡಿಬಿಟ್ಟಿದ್ದಾರೆ.

ಅಟಲ್ಜೀಯೊಂದಿಗೆ ತುಲನೆ ಮಾಡಿ ಮೋದಿಯವರನ್ನು ಕಡಿಮೆಯೆಂದು ಬಿಂಬಿಸುವ ಪ್ರಯತ್ನವೇನೂ ಬೇಕಾಗಿಲ್ಲ. ಏಕೆಂದರೆ ಇಬ್ಬರೂ ಒಂದೇ ಸಿದ್ಧಾಂತದ ಬೇರನ್ನು ಹೊಂದಿರುವ, ರಾಷ್ಟ್ರ ಧ್ವಜವನ್ನು ಹಿಡಿದು ನಿಲ್ಲಲೆಂದೇ ಎತ್ತರಕ್ಕೆ ಬೆಳೆದಿರುವ ಮಹಾವೃಕ್ಷಗಳು!

Comments are closed.