ವಿಭಾಗಗಳು

ಸುದ್ದಿಪತ್ರ


 

ಮೋದಿ ಹುಡುಕುತ್ತಿರುವ ವಸ್ತು ಅದಾವುದು?

ನೇಪಾಳದ ಭೇಟಿಯ ಒಂದು ವಾರದ ಒಳಗೆ ಮೋದಿ ರಷ್ಯಾಕ್ಕೆ ಹೋದರು. ಈ ಬಾರಿ ಕೂಡ ರಾಜಧಾನಿಯಲ್ಲಿ ಔಪಚಾರಿಕ ಭೇಟಿಯಾಗದೇ ಎರಡೂ ರಾಷ್ಟ್ರಗಳ ನಾಯಕರು ಸೋಚಿಯಲ್ಲಿ ಜೊತೆಯಾದರು, ಅಡ್ಡಾಡಿದರು, ಒಂದಷ್ಟು ಹರಟಿದರು ಎಂದು ಪತ್ರಿಕೆಗಳು ವರದಿ ಮಾಡಿದವು. ಹಾಗೆ ಸುಮ್ಮನೆ ಆಲೋಚಿಸಿ ನೋಡಿ. ತಮ್ಮ ರಾಷ್ಟ್ರಗಳ ಅಭಿವೃದ್ಧಿಗೆ ಪುರಸೊತ್ತಿಲ್ಲದೇ ದುಡಿಯುತ್ತಿರುವ ಮೋದಿ ಮತ್ತು ಪುತಿನ್ರು ಹೀಗೆ ಟೈಮ್ಪಾಸ್ ಮಾಡುತ್ತಾ ಅಡ್ಡಾಡುವುದು ಸಾಧ್ಯವೇನು?

ಇತ್ತೀಚೆಗೆ ಅಮೇರಿಕಾ ಪೆಸಿಫಿಕ್ ಸಾಗರದಲ್ಲಿ ಕಾರ್ಯ ನಿರ್ವಹಿಸುವ ತನ್ನ ಕಮಾಂಡೊ ಪಡೆಯ ಹೆಸರನ್ನು ಇಂಡೊ-ಪೆಸಿಫಿಕ್ ಕಮಾಂಡೊ ಎಂದು ಬದಲಾಯಿಸಿ ನಿರ್ಣಯ ಕೊಟ್ಟಿತು. ಅನೇಕರಿಗೆ ಇದು ಮಹತ್ವದ ಸುದ್ದಿ ಎನಿಸಲೇ ಇಲ್ಲ. ಇಡಿಯ ದಕ್ಷಿಣ ಚೀನಾ ಸಮುದ್ರವನ್ನು ಒಳಗೊಂಡಂತಹ ಈ ಪೆಸಿಫಿಕ್ ಪ್ರದೇಶಕ್ಕೆ ಭಾರತದ ಹೆಸರನ್ನು ಜೋಡಿಸಿರುವುದು ಯುದ್ಧ ನೀತಿಯ ದೃಷ್ಟಿಯಿಂದಾಗಲೀ ಅಥವಾ ಸೇನಾ ಜಮಾವಣೆಯ ದೃಷ್ಟಿಯಿಂದಾಗಲಿ ಬಲು ದೊಡ್ಡ ಬದಲಾವಣೆಯೇನೂ ತರಲಾರದು ನಿಜ. ಆದರೆ ಅಮೇರಿಕಾ ಈ ಪ್ರದೇಶದಲ್ಲಿ ಭಾರತಕ್ಕೆ ನೀಡುವ ಮಹತ್ವ ಏಷ್ಟೆಂಬುದು ಜಗತ್ತಿಗೆ ಸಂದೇಶವಾದರೆ ಚೀನಾ ಮತ್ತು ಪಾಕಿಸ್ತಾನಗಳಿಗೆ ನಡುಕ ಹುಟ್ಟಿಸಲು ಸಾಕು. ಪಾಕಿಸ್ತಾನ ತಾನು ಒಳಗೊಂಡಿರುವ ಸಮುದ್ರ ಪ್ರದೇಶಕ್ಕೆ ತನಗೆ ಬೇಕಾಗಿರುವ ಹೆಸರನ್ನಿಡಬೇಕೆಂದು ಎಷ್ಟು ಬಾರಿ ಗೋಗರೆದರೂ ಕ್ಯಾರೆ ಎನ್ನದ ಅಮೇರಿಕಾ ಭಾರತ ಕೇಳಿಕೊಳ್ಳದೆಯೇ ಇಂತಹದ್ದೊಂದು ಹೆಜ್ಜೆ ಇಟ್ಟಿರುವುದು ನರೇಂದ್ರಮೋದಿಯರ ವಿದೇಶಾಂಗ ನೀತಿಗೆ ಗೆಲುವೇ ಸರಿ. ಜೊತೆಗೆ ಏಷ್ಯಾದಲ್ಲಿ ಭಾರತ ಪ್ರಬಲವಾಗಿ ಬೆಳೆಯುತ್ತಿರುವ ರಾಷ್ಟ್ರ ಎಂಬುದರ ಸಂಕೇತ. ಪ್ರತಿಪಕ್ಷ ಕಾಂಗ್ರೆಸ್ಸಿಗೆ ಮತ್ತು ಈ ದೇಶದ ಕೆಲವು ಸ್ವಯಂ ಘೋಷಿತ ಬುದ್ಧಿಜೀವಿಗಳಿಗೆ ದೇಶದ ಪ್ರಧಾನಮಂತ್ರಿ ಮಾಡುತ್ತಿರುವ ಸಾಹಸಮಯ ಕೆಲಸ ಒಂದೋ ಅರಿವಾಗುತ್ತಿಲ್ಲ ಅಥವಾ ಒಪ್ಪಿಕೊಳ್ಳುವ ಛಾತಿ ಅವರಲ್ಲಿಲ್ಲ!

11

ಕನರ್ಾಟಕದ ಚುನಾವಣೆ, ಅದರ ಫಲಿತಾಂಶ ಇಂದು ಕಣ್ಣೆದುರಿಗೇ ಇದೆ. ಕಾಂಗ್ರೆಸ್ಸು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ ಎಂಬ ಚುನಾವಣಾ ಪೂರ್ವ ಸಮೀಕ್ಷೆಯಿಂದ ಶುರುಮಾಡಿ ಕಾಂಗ್ರೆಸ್ಸು ಜೆಡಿಎಸ್ನ ಎದುರಿಗೆ ಕೈ ಚಾಚಿ ನಿಲ್ಲಬೇಕಾದ ಪರಿಸ್ಥಿತಿ ನಿಮರ್ಾಣವಾಗುವವರೆಗೂ ನರೇಂದ್ರಮೋದಿಯವರ 21 ರ್ಯಾಲಿಯ ಪ್ರಭಾವ ಎಂತಹುದು ಎಂಬುದು ಇಂದು ಎಲ್ಲರಿಗೂ ಗೊತ್ತಿರುವಂಥದ್ದೇ. ಹಾಗಂತ ಆತ ಬರಿ ಚುನಾವಣಾ ಭಾಷಣಗಳನ್ನಷ್ಟೇ ಮಾಡುತ್ತ ಉಳಿಯಲಿಲ್ಲ. ಕನರ್ಾಟಕದಲ್ಲಿ ಮೊದಲ ಚುನಾವಣಾ ಭಾಷಣ ಮಾಡುವುದಕ್ಕೂ ಮುಂಚೆ ಸ್ವಿಡನ್, ಯುಕೆ ಮತ್ತು ಜರ್ಮನಿಗಳಿಗೆ ಹೋಗಿ ಬಂದಿದ್ದರು. ಡೆನ್ಮಾಕರ್್, ಫಿನ್ಲ್ಯಾಂಡ್, ಐಲ್ಯಾಂಡ್, ನಾವರ್ೆ ಮತ್ತು ಸ್ವಿಡನ್ (ಈ ರಾಷ್ಟ್ರಗಳನ್ನು ನಾಡರ್ಿಕ್ ಗುಂಪು ಎಂದು ಕರೆಯಲಾಗುತ್ತದೆ) ಈ ಐದು ರಾಷ್ಟ್ರಗಳ ಪ್ರಮುಖರನ್ನು ಸ್ವಿಡನ್ನಿನಲ್ಲಿ ಭಾರತ-ನಾಡರ್ಿಕ್ ಶೃಂಗಸಭೆಯ ಮೂಲಕ ಭೇಟಿಯಾದರು. ನೆನಪಿಡಿ. ಈ ಶೃಂಗಸಭೆಯನ್ನು ಸ್ವಿಡನ್ನಿನ ಸಹಯೋಗದೊಂದಿಗೆ ಆಯೋಜಿಸಿದ್ದೇ ಭಾರತ. ಈ ಎಲ್ಲಾ ರಾಷ್ಟ್ರಗಳೊಂದಿಗೂ ಭಾರತಕ್ಕೆ ಪ್ರತ್ಯೇಕವಾದ ಸಂಬಂಧವಿದೆ. ಆದರೆ ಇವೆಲ್ಲವುಗಳನ್ನು ಒಟ್ಟಿಗೆ ಭೇಟಿ ಮಾಡುವಂಥ ಪ್ರಯತ್ನವನ್ನು ಅಮೇರಿಕಾ ಬಿಟ್ಟರೆ ಮಾಡಿದ ಮತ್ತೊಂದು ರಾಷ್ಟ್ರ ಭಾರತವೇ. ಈ ಐದು ರಾಷ್ಟ್ರಗಳು ಅಪಾರ ಸಿರಿವಂತಿಕೆಯನ್ನು ಹೊಂದಿದೆ. ಸುದೀರ್ಘವಾದ ಆಂತರಿಕ ಸಂಬಂಧವನ್ನೂ ಕೂಡ. ಜೊತೆಗೆ ಭಾರತದ ಕುರಿತಂತೆ ಈ ರಾಷ್ಟ್ರಗಳಿಗೆ ಸಹಜವಾದ ಪ್ರೀತಿ ಇದೆ. ಪೋಖ್ರಾನ್ 2 ರ ನಂತರ ಭಾರತವನ್ನು ನ್ಯೂಕ್ಲಿಯರ್ ಸಪ್ಲೆಯರ್ ಗ್ರೂಪಿನ ಸದಸ್ಯ ರಾಷ್ಟ್ರವಾಗಿ ಪರಿಗಣಿಸಬೇಕೆಂದು ಆಗ್ರಹಿಸುವಲ್ಲಿ ನಾಡರ್ಿಕ್ನ ಪಾತ್ರವೂ ಇತ್ತು. ನರೇಂದ್ರಮೋದಿ ಈ ಬಾರಿ ಈ ರಾಷ್ಟ್ರಗಳನ್ನು ವಿಶೇಷವಾಗಿ ಭೇಟಿ ಮಾಡಿ ಅನೇಕ ಬಗೆಯ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ನಾಡರ್ಿಕ್ ಮತ್ತು ಭಾರತದ ನಡುವೆ ಇರುವ ಸಮಾನ ಭೂಮಿಕೆಗಳನ್ನು ಚಚರ್ಿಸಿ ಅದರ ಆಧಾರದ ಮೇಲೆ ಈ ಒಪ್ಪಂದಗಳು ರೂಪುಗೊಂಡಿವೆ. ನಾಡರ್ಿಕ್ ರಾಷ್ಟ್ರಗಳನ್ನು ಪ್ರತ್ಯೇಕವಾಗಿ ಗಣಿಸದೇ ಸಮೂಹವಾಗಿ ಗುರುತಿಸಿ ಅವುಗಳೊಂದಿಗೆ ಇಟ್ಟಿರುವ ಹೆಜ್ಜೆ ನಿಸ್ಸಂಶಯವಾಗಿ ಒಟ್ಟಾರೆ ಯುಕೆಯ ಮೇಲೆ ಪ್ರಭಾವ ಬೀರುವಂಥದ್ದೇ. ಹೀಗಾಗಿಯೇ ಅದಾದೊಡನೆ ಇಂಗ್ಲೆಂಡಿನ ಪ್ರಧಾನಿಯನ್ನು ಭೇಟಿಯಾದರು. ಭಾರತಕ್ಕೆ ಮೋಸ ಮಾಡಿ ಓಡಿ ಬಂದು ಇಂಗ್ಲೆಂಡಿನಲ್ಲಿ ಆಶ್ರಯ ಪಡೆದಿರುವ ಮಲ್ಯ, ಲಲಿತ್ರನ್ನು ವಗರ್ಾಯಿಸಬೇಕೆಂದು ಮೋದಿ ಕೇಳಿಕೊಂಡರು. ಆದರೆ ಈ ವಿಚಾರಕ್ಕೆ ಇಂಗ್ಲೆಂಡಿನ ಸಕರ್ಾರ ತುಂಬಾ ಎಚ್ಚರಿಕೆಯಿಂದ ಪ್ರತಿಕ್ರಿಯೆ ಕೊಡುತ್ತಾ ಭಾರತದ ಜೈಲುಗಳಲ್ಲಿರುವ ವ್ಯವಸ್ಥೆಯನ್ನು ನಾವು ಮೊದಲು ಪರಿಶೀಲಿಸಿ, ಆನಂತರ ಈ ಕುರಿತಂತೆ ಮಾತನಾಡುತ್ತೇವೆಂದಾಗ, ಸ್ವಾಭಿಮಾನದ ಮುದ್ದೆಯಾದ ಮೋದಿ ಕೊಟ್ಟ ಉತ್ತರವೇನಿರಬಹುದು ಗೊತ್ತೇನು? ‘ಇದೇ ಜೈಲುಗಳಲ್ಲಿ ನೀವು ಗಾಂಧಿ-ನೆಹರುರಂತಹ ಮಹಾನಾಯಕರನ್ನು ಇಟ್ಟಿದ್ದಿರೆಂಬುದನ್ನು ಮರೆತುಬಿಡಬೇಡಿ’ ಅಂತ. ಬಹುಶಃ ಇದೇ ಆಕ್ರೋಶ ಅವರನ್ನು ಕಾಡುತ್ತಿದ್ದಿರಬೇಕು. ಅವರು ಇಂಗ್ಲೆಂಡಿನೊಂದಿಗೆ ಕೈ ಚಾಚುವಂತ ಯಾವ ಒಪ್ಪಂದಕ್ಕೂ ಸಿದ್ಧವಿರಲಿಲ್ಲ. ಭಾರತ ಮತ್ತು ಇಂಗ್ಲೆಂಡಿನ ನಡುವೆ ಅಕ್ರಮ ವಲಸೆಗಾರರ ಸಮಸ್ಯೆಯನ್ನು ನಿವಾರಿಸಬೇಕೆಂದು ಪ್ರಧಾನಿ ತೆರೆಸಾ ಕೇಳಿಕೊಂಡಿದ್ದರು. ನರೇಂದ್ರಮೋದಿ ಅದಕ್ಕೆ ಸಿದ್ಧವೆಂದೂ ಆದರೆ ವೀಸಾ ನಿಯಮಗಳ ಸಡಲೀಕರಣ ಮಾಡಲೇಬೇಕಂದು ಹಠ ಹಿಡಿದು ಕುಳಿತರು. ಇಂಗ್ಲೆಂಡ್ ನಿರಾಕರಿಸಿದಾಗ ಮುಲಾಜಿಲ್ಲದೇ ಒಪ್ಪಂದಕ್ಕೆ ಸಹಿ ಮಾಡದೇ ಎದ್ದು ಬಂದುಬಿಟ್ಟರು. ಮೋದಿಯವರಿಗೆ ಚೆನ್ನಾಗಿ ಗೊತ್ತು. ಸುತ್ತ-ಮುತ್ತಲಿನ ಎಲ್ಲಾ ರಾಷ್ಟ್ರಗಳು ಭಾರತವನ್ನು ಬೆಂಬಲಿಸಲು ನಿಂತಿರುವಾಗ ಇಂಗ್ಲೆಂಡು ಭಾರತದ ಮಾತನ್ನು ಕೇಳಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಹೀಗಾಗಿ ಬರಲಿರುವ ದಿನಗಳಲ್ಲಿ ತನ್ನೊಡಲೊಳಗೆ ಅಡಗಿರುವ ಮಲ್ಯಾ, ಲಲಿತ್ ಮೋದಿಯವರನ್ನು ಭಾರತಕ್ಕೆ ಒಪ್ಪಿಸಲೇಬೇಕಾದ ಪರಿಸ್ಥಿತಿಗೆ ಇಂಗ್ಲೆಂಡು ಸಿಲುಕುವುದು ಶತ-ಪ್ರತಿಶತ ಖಾತ್ರಿ.

2

ಅದರ ಹಿಂದು ಹಿಂದೆಯೇ ನರೇಂದ್ರಮೋದಿ ಎಲ್ಲರೂ ಗಾಬರಿಯಾಗುವಂತೆ ಚೀನಾಕ್ಕೆ ಭೇಟಿ ಕೊಟ್ಟರು. ಇತರ ರಾಷ್ಟ್ರಗಳ ಮುಖ್ಯಸ್ಥರನ್ನು ಅಸಡ್ಡೆಯಿಂದಲೇ ಬರಮಾಡಿಕೊಳ್ಳುವ ಶೀ ಜಿನ್ಪಿಂಗ್ ನರೇಂದ್ರಮೋದಿಯವರನ್ನು ಮಾತ್ರ ರಾಜಧಾನಿಯಿಂದ ಹೊರಗೆ ಬಂದು ಎರಡನೇ ಬಾರಿಗೆ ಬರಮಾಡಿಕೊಂಡರು. ಮಾತುಕತೆಗಳು ಸಾಕಷ್ಟು ನಡೆದವು. ಭಾರತ ಮತ್ತು ಚೀನಾಗಳ ಬಾಂಧವ್ಯ ವೃದ್ಧಿಯಾದರೆ ಏಷ್ಯಾ ಜಾಗತಿಕವಾಗಿ ಪ್ರಬಲವಾಗುತ್ತದೆಂಬುದು ಎರಡೂ ನಾಯಕರಿಗೆ ಗೊತ್ತಿರದ ಸಂಗತಿಯೇನಲ್ಲ. ಪದೇ ಪದೇ ಭಾರತಕ್ಕೆ ಕಿರಿಕಿರಿ ಉಂಟುಮಾಡಲೆತ್ನಿಸುವ ಚೀನಾ ನರೇಂದ್ರಮೋದಿ ಪ್ರಧಾನಿಯಾದಾಗಿನಿಂದಲೂ ಬಲು ಎಚ್ಚರಿಕೆಯಿಂದ ನಡೆದುಕೊಳ್ಳುತ್ತಿದೆ. ಈ ಭೇಟಿಯ ಹೊತ್ತಲ್ಲಿ ಅಪ್ಪಿ ತಪ್ಪಿಯೂ ಭಾರತ ವಿರೋಧಿಸುತ್ತಿರುವ ಒನ್ ಬೆಲ್ಟ್ ಒನ್ ರೋಡಿನ ಕುರಿತಂತೆ ಚಕಾರವನ್ನೂ ಎತ್ತಲಿಲ್ಲ. ಏಷ್ಯಾದ ಮತ್ತು ಜಗತ್ತಿನ ಅನೇಕ ರಾಷ್ಟ್ರಗಳಿಗೆ ಮೋದಿಯವರ ಈ ಭೇಟಿ ಅಚ್ಚರಿಯೆನಿಸಿದ್ದರಲ್ಲಿ ಯಾವ ಸಂಶಯವೂ ಇಲ್ಲ.

ಈ ಪ್ರವಾಸದ ನಂತರ ಕನರ್ಾಟಕದ ಚುನಾವಣೆಯ ರ್ಯಾಲಿಗಳಲ್ಲಿ ನಿರಂತರವಾಗಿ ಭಾಗವಹಿಸಿದ ಮೋದಿ ಚುನಾವಣೆಗಳು ಮುಗಿದೊಡನೆ ನೇಪಾಳಕ್ಕೆ ಧಾವಿಸಿದರು. ಇದೂ ಕೂಡ ಸಾಮಾನ್ಯವಾದ ಪ್ರಯತ್ನವಲ್ಲ. ತಾವು ಪ್ರಧಾನಿಯಾದೊಡನೆ ನೇಪಾಳಕ್ಕೆ ಭೇಟಿ ಕೊಟ್ಟು ಅಪಾರ ವಿಶ್ವಾಸ ಗಳಿಸಿದ್ದ ಮೋದಿ ಅದೇ ನೇಪಾಳದಲ್ಲಿ ಕಮ್ಯುನಿಸ್ಟ್ ಸಕರ್ಾರ ಬರದಿರುವಂತೆ ತಡೆಯುವಲ್ಲಿ ಮಾಧೇಶಿಗಳಿಗೆ ಬೆಂಬಲಕೊಟ್ಟು ಅಪಾರ ಟೀಕೆಗೆ ಒಳಗಾಗಿದ್ದರು. ದುದರ್ೈವವೆಂಬಂತೆ ಕಮ್ಯುನಿಸ್ಟ್ ಓಲಿ ಪೂರ್ಣ ಬಹುಮತದೊಂದಿಗೆ ನೇಪಾಳದಲ್ಲಿ ಅಧಿಕಾರಕ್ಕೆ ಬಂದುಬಿಟ್ಟರು. ಸಹಜವಾಗಿಯೇ ಅಂದುಕೊಂಡಂತಾಗದೇ ಕಳೆದ ಒಂದು ವರ್ಷಗಳ ಕಾಲ ನೇಪಾಳದೊಂದಿಗೆ ಕಹಿ ಬಾಂಧವ್ಯ ಮುಂದುವರೆದೇ ಇತ್ತು. ಚೀನಾ ನೇಪಾಳಕ್ಕೆ ಹತ್ತಿರವಾಗುವುದನ್ನು ತಡೆದು ಜಾಗತಿಕ ಮಟ್ಟದಲ್ಲಿ ನೇಪಾಳದೊಂದಿಗಿನ ತನ್ನ ಬಾಂಧವ್ಯವನ್ನು ಮತ್ತೆ ಸಾಬೀತುಪಡಿಸುವ ಧಾವಂತದಲ್ಲಿದ್ದ ನರೇಂದ್ರಮೋದಿ ನೇಪಾಳದ ಪ್ರಧಾನಿ ಓಲಿಯವರನ್ನು ಭಾರತಕ್ಕೆ ಕರೆಸಿಕೊಂಡು ಅಪಾರವಾದ ಗೌರವ ಕೊಟ್ಟದ್ದಲ್ಲದೇ ಈಗ ತಾವೇ ನೇಪಾಳದೆಡೆಗೆ ಧಾವಿಸಿದರು. ಈ ಬಾರಿ ಅವರು ಕಾಠ್ಮಂಡುವಿಗಿಂತ ಜನಕಪುರವನ್ನೇ ವಿಶೇಷವಾಗಿ ಆಯ್ದುಕೊಂಡು ಅಲ್ಲಿ ಕಾರ್ಯಕ್ರಮ ಮಾಡಿದ್ದಲ್ಲದೇ ಪ್ರವಾಸೋದ್ಯಮದ ಒಂದು ಯೋಜನೆಯನ್ನು ಅಲ್ಲಿ ಘೋಷಿಸಿದರು. ಜನಕ್ಪುರ-ಅಯೋಧ್ಯಾ ಬಸ್ ಸಂಚಾರವನ್ನು ಆರಂಭಿಸುವುದರ ಜೊತೆಗೆ ಜನಕಪುರದ ಅಭಿವೃದ್ಧಿಗೆ 100 ಕೋಟಿ ರೂಪಾಯಿಯ ಸಹಾಯವನ್ನೂ ಘೋಷಿಸಿದರು. ಪ್ರಧಾನಿ ಓಲಿಯವರನ್ನು ಕಾಠ್ಮಂಡುವಿನಲ್ಲಿ ಭೇಟಿ ಮಾಡಿ ಹಾಳಾಗಿದ್ದ ಸಂಬಂಧವನ್ನು ತಿಳಿಗೊಳಿಸುವ ಬಲು ದೊಡ್ಡ ಪ್ರಯಾಸವನ್ನು ಮಾಡಿದರು. ದೂರದಿಂದ ನೋಡುವವರಿಗೆ ನೇಪಾಳ ಮೋದಿಯವರ ಮತ್ತೊಂದು ವಿದೇಶ ಪ್ರವಾಸವಷ್ಟೇ. ಆದರೆ ಬಲ್ಲವರಿಗೆ ಮಾತ್ರ ಇದು ಚೀನಾದ ತೆಕ್ಕೆಯಿಂದ ನೇಪಾಳವನ್ನು ಸೆಳೆದುಕೊಳ್ಳುವ ಬಲು ದೊಡ್ಡ ಪ್ರಯಾಸವೆಂದು ಅರ್ಥವಾದೀತು.

3

ನೇಪಾಳದ ಭೇಟಿಯ ಒಂದು ವಾರದ ಒಳಗೆ ಮೋದಿ ರಷ್ಯಾಕ್ಕೆ ಹೋದರು. ಈ ಬಾರಿ ಕೂಡ ರಾಜಧಾನಿಯಲ್ಲಿ ಔಪಚಾರಿಕ ಭೇಟಿಯಾಗದೇ ಎರಡೂ ರಾಷ್ಟ್ರಗಳ ನಾಯಕರು ಸೋಚಿಯಲ್ಲಿ ಜೊತೆಯಾದರು, ಅಡ್ಡಾಡಿದರು, ಒಂದಷ್ಟು ಹರಟಿದರು ಎಂದು ಪತ್ರಿಕೆಗಳು ವರದಿ ಮಾಡಿದವು. ಹಾಗೆ ಸುಮ್ಮನೆ ಆಲೋಚಿಸಿ ನೋಡಿ. ತಮ್ಮ ರಾಷ್ಟ್ರಗಳ ಅಭಿವೃದ್ಧಿಗೆ ಪುರಸೊತ್ತಿಲ್ಲದೇ ದುಡಿಯುತ್ತಿರುವ ಮೋದಿ ಮತ್ತು ಪುತಿನ್ರು ಹೀಗೆ ಟೈಮ್ಪಾಸ್ ಮಾಡುತ್ತಾ ಅಡ್ಡಾಡುವುದು ಸಾಧ್ಯವೇನು? ಅದರಲ್ಲೂ ಈ ಬಾರಿಯ ಚುನಾವಣೆಯಲ್ಲಿ ಪುತಿನ್ರ ಗೆಲುವು ರಷ್ಯಾದ ಮೇಲೆ ಅವರಿಗೊಂದು ಬಲವಾದ ಹಿಡಿತವನ್ನು ತಂದುಕೊಟ್ಟಿದೆ. ಜಾಗತಿಕ ಮಟ್ಟದಲ್ಲೂ ಕೂಡ ರಷ್ಯಾ ಹಿಂದೆಂದಿಗಿಂತಲೂ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಿದೆ. ಭಾರತ ಅಮೇರಿಕಾದತ್ತ ವಾಲುತ್ತಿದೆ ಎಂಬ ಕೂಗು ಜೋರಾಗಿರುವಾಗಲೇ ಮೋದಿ ರಷ್ಯಾಕ್ಕೆ ಭೇಟಿ ನೀಡುವ ಮೂಲಕ ಮಾಸ್ಟರ್ ಸ್ಟ್ರೋಕ್ ಕೊಟ್ಟರು. ಹೊರ ನೋಟಕ್ಕೆ ರಷ್ಯಾದೊಂದಿಗೆ ರಕ್ಷಣಾ ಇಲಾಖೆಗೆ ಸಂಬಂಧಪಟ್ಟ ಒಪ್ಪಂದಗಳಾಗಿವೆ ಎಂಬ ಸುದ್ದಿ ಕಂಡು ಬಂತು. ಒಳಗೆ ನಡೆದಿದ್ದೇನೆಂಬುದು ಅಥರ್ೈಸಿಕೊಳ್ಳುವುದು ಸುಲಭ ಸಾಧ್ಯವೇನಲ್ಲ. ಏಕೆಂದರೆ ರಷ್ಯಾದ ಭೇಟಿಯಾಗಿ ನರೇಂದ್ರಮೋದಿ ಭಾರತಕ್ಕೆ ಮರಳಿ ಬಂದೊಡನೆ ಅಮೇರಿಕಾ ಭಾರತದೊಂದಿಗೆ ತಗಾದೆ ತೆಗೆದು ಒಂದಷ್ಟು ಕಿರಿ ಕಿರಿ ಮಾಡಿತು. ಮುಂದೇನೆಂದು ಎಲ್ಲರೂ ಕಾತರವಾಗಿರುವಾಗಲೇ ಮೋದಿ ಇಂಡೋನೇಷ್ಯಾ, ಮಲೇಷಿಯಾ, ಸಿಂಗಾಪೂರಗಳ ಪ್ರವಾಸವನ್ನು ಕೈಗೊಂಡರು. ಇಂಡೋನೇಷ್ಯಾದಲ್ಲಿ ಮೋದಿಯವರಿಗೆ ಸಿಕ್ಕ ಅದ್ದೂರಿ ಸ್ವಾಗತ ಭಾರತದೊಳಗಿರುವ ಪ್ರತಿಯೊಬ್ಬ ಮಹತ್ವಾಕಾಂಕ್ಷಿ ಕಾಂಗ್ರೆಸ್ ನಾಯಕನ ಹೊಟ್ಟೆಯೊಳಗೆ ನೂರಾರು ಲೀಟರ್ ಪೆಟ್ರೋಲಿಗೆ ಬೆಂಕಿ ಹಚ್ಚಿದಂತಾಗಿರಬಹುದು. ಅಲ್ಲಿನ ಅಧ್ಯಕ್ಷರು ತಮ್ಮ ಮೊಮ್ಮಗನಿಗೆ ಶ್ರೀನರೇಂದ್ರ ಎಂಬ ಹೆಸರನ್ನಿಟ್ಟುದದನ್ನು ಹೆಮ್ಮೆಯಿಂದ ಹೇಳಿಕೊಂಡರು. ಮೋದಿ ಚೀನಾದೊಂದಿಗೆ ಇಂಡೋನೇಷಿಯಾಕ್ಕಿದ್ದ ಆಂತರಿಕ ಸಂಘರ್ಷವನ್ನು ಮುಂದಿರಿಸಿಕೊಂಡು ಅಲ್ಲಿನ ಬಂದರೊಂದನ್ನು ಅಭಿವೃದ್ಧಿಪಡಿಸುವ ಮತ್ತು ಅದನ್ನು ರಕ್ಷಣಾ ದೃಷ್ಟಿಯಿಂದ ಬಳಸಿಕೊಳ್ಳುವ ಒಪ್ಪಂದಗಳನ್ನು ಮಾಡಿಕೊಂಡರು. ಮಲೇಷ್ಯಾದ ಪ್ರವಾಸವನ್ನು ಮುಗಿಸಿ ಅವರು ಸಿಂಗಾಪುರಕ್ಕೆ ಕಾಲಿಡುವ ವೇಳೆಗಾಗಲೇ ಅಮೇರಿಕಾ ತನ್ನ ಪೆಸಿಫಿಕ್ ಕಮಾಂಡಿನ ಹೆಸರನ್ನು ಇಂಡೊ-ಪೆಸಿಫಿಕ್ ಕಮಾಂಡೊ ಎಂದು ಬದಲಿಸಿಯಾಗಿತ್ತು. ಇದು ಸಿಂಗಾಪುರಕ್ಕೆ ಹೋಗುವ ಮುನ್ನ ನರೇಂದ್ರಮೋದಿಯವರ ಬತ್ತಳಿಕೆಯಲ್ಲಿ ಅಮೇರಿಕಾ ಇಟ್ಟ ವಿಶಿಷ್ಟವಾದ ಬಾಣ. ಲೇಖನದ ಆರಂಭದಲ್ಲೇ ಹೇಳಿದಂತೆ ಹೆಸರಿನ ಬದಲಾವಣೆಯಿಂದ ರಕ್ಷಣಾ ರೂಪುರೇಷೆಗಳಲ್ಲಿ ಬದಲಾವಣೆ ಏನು ಬಂದಿರಲಿಲ್ಲ ಆದರೆ ಪೆಸಿಫಿಕ್ ಸಮುದ್ರದಲ್ಲಿ ಪ್ರಮುಖವಾದ ಹೊಣೆಗಾರಿಕೆ ಭಾರತದ್ದೇ ಎಂದು ಬಲು ದೊಡ್ಡ ಸಂದೇಶವನ್ನು ರವಾನಿಸಿಯಾಗಿತ್ತು. ಚೀನಾಕ್ಕೆ ಟಕ್ಕರ್ ಕೊಡಬಲ್ಲಂತಹ ರಾಷ್ಟ್ರ ಭಾರತ ಮಾತ್ರ ಎಂಬುದನ್ನು ನರೇಂದ್ರಮೋದಿ ಜಗತ್ತಿಗೆ ಒಪ್ಪಿಸುವಲ್ಲಿ ಈ ನಾಲ್ಕು ವರ್ಷಗಳಲ್ಲಿ ಯಶಸ್ವಿಯಾಗಿದ್ದರು. ಅದರ ಪ್ರಭಾವ ಸಿಂಗಾಪುರದ ಭೇಟಿಯ ಸಂದರ್ಭದಲ್ಲಿ ಖಂಡಿತ ಕಂಡು ಬಂತು. ಈಗ ಮೋದಿ ಅಲ್ಲಿ ಮಾತುಕತೆಗೆ ನಿಲ್ಲುವಾಗ ಅತಿ ದೊಡ್ಡ ಜನಸಂಖ್ಯೆಯ ರಾಷ್ಟ್ರವೊಂದರ ಪ್ರಧಾನಿಯಾಗಿ ಅಷ್ಟೇ ಅಲ್ಲ ಬದಲಿಗೆ ಏಷ್ಯಾದ ಪ್ರಭಾವಿ ರಾಷ್ಟ್ರವೊಂದರ ಪ್ರಧಾನಿಯಾಗಿ ನಿಂತಿದ್ದರು. ಸಿಂಗಾಪೂರದ ಪ್ರಧಾನಿ ತನ್ನ ದೇಶದ ಸಸ್ಯವೊಂದಕ್ಕೆ ಮೋದಿಯವರ ಹೆಸರನ್ನಿಟ್ಟರು. ಅಚ್ಚರಿಯೇನು ಗೊತ್ತೇ? ಇದೇ ತಿಂಗಳ 12 ನೇ ತಾರೀಕು ಉತ್ತರ ಕೊರಿಯಾದ ನಾಯಕ ಕಿಮ್ನೊಂದಿಗೆ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಕತೆ ನಡೆಸುತ್ತಿರುವುದು ಸಿಂಗಾಪುರದಲ್ಲೇ.

ಎಲ್ಲಾ ಚುಕ್ಕಿಗಳನ್ನು ಹರಡಿ ಬಿಟ್ಟಿದ್ದೇನೆ, ಅವುಗಳನ್ನು ಸೇರಿಸಿದಾಗ ಚಿತ್ತಾರ ಏನಾಗುತ್ತದೆಂಬುದನ್ನು ನಾವೇ ಊಹಿಸಬೇಕು ಅಷ್ಟೇ. ಇಂಗ್ಲೆಂಡಿನಲ್ಲಿ ತನ್ನ ಪ್ರಭಾವವನ್ನು ಬೀರುವ ಮುಂಚೆ ನಾಡರ್ಿಕ್ ರಾಷ್ಟ್ರಗಳನ್ನು ಸೆಳೆದುಕೊಳ್ಳುವುದು, ನೇಪಾಳಕ್ಕೆ ಹೋಗುವ ಮುನ್ನ ಚೀನಾದೊಂದಿಗೆ ಮಾತುಕತೆಯಾಡಿ ಭೂಮಿಕೆ ಸಿದ್ಧಪಡಿಸುವುದು, ರಷ್ಯಾದೊಂದಿಗೆ ಮಹತ್ವದ ರಕ್ಷಣಾ ಒಪ್ಪಂದ ಮಾಡಿಕೊಂಡ ನಂತರವೂ ಅಮೇರಿಕಾದೊಂದಿಗಿನ ಅತೀ ಘನಿಷ್ಠ ಬಾಂಧವ್ಯವನ್ನು ಆನಂದಿಸುವುದು, ಸಿಂಗಾಪುರದಲ್ಲಿ ಟ್ರಂಪ್ ಕಿಮ್ ಭೇಟಿಗೆ ಮುನ್ನ ಭೂಮಿಕೆ ಸಿದ್ಧಪಡಿಸುವುದು ಇವೆಲ್ಲವೂ ಸಾಮಾನ್ಯವಾದ ಸಂಗತಿಯಲ್ಲ. ಬರಲಿರುವ ದಿನಗಳಲ್ಲಿ ಮಹತ್ವದ್ದೇನೋ ಘಟಿಸಲಿದೆ. ಮೋದಿ ಮನಮೋಹನ್ ಸಿಂಗರಂತೆ ಅಲ್ಲ. ಅವರು ಗುಡ್ಡ ತನ್ನ ಬಳಿ ಬರಲೆಂದು ಕಾಯುತ್ತ ಕುಳಿತುಕೊಳ್ಳುವ ಜಾಯಮಾನದವರೇ ಅಲ್ಲ; ತಾನೇ ಗುಡ್ಡಕ್ಕೆ ಹೋಗಿ ತನಗೆ ಬೇಕಾಗಿರುವ ರತ್ನವನ್ನು ಹುಡುಕಿಕೊಂಡೇ ತರುತ್ತಾರೆ. ಅವರು ತರಲು ಪ್ರಯತ್ನಿಸುತ್ತಿರುವ ಆ ವಸ್ತು ಯಾವುದೆಂಬುದು ಕೆಲವೇ ದಿನಗಳಲ್ಲಿ ಗೊತ್ತಾಗುತ್ತದೆ. ಅಲ್ಲಿಯವರೆಗೂ ಕಾಂಗ್ರೆಸ್ಸಿಗರು ಬಾಯಿ ಬಡೆದುಕೊಳ್ಳುತ್ತಿರಲಿ. ನಾವು ರಾಷ್ಟ್ರವನ್ನು ವಿಶ್ವಮಟ್ಟದಲ್ಲಿ ಎದೆಯೆತ್ತಿ ನಿಲ್ಲುವಂತೆ ಮಾಡಲು ಪ್ರಯತ್ನಿಸುತ್ತಿರುವ ಒಬ್ಬ ಅಪರೂಪದ ನಾಯಕನೊಂದಿಗೆ ದೃಢವಾಗಿ ನಿಲ್ಲೋಣ.

Comments are closed.