ವಿಭಾಗಗಳು

ಸುದ್ದಿಪತ್ರ


 

ರಂಜಾನಿನಲ್ಲಿ ಉಗ್ರರನ್ನು ಕೊಲ್ಲಬಾರದಾ?!

ಭಾರತವನ್ನು ಮುಸ್ಲೀಂ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ಇಂದು ನಿನ್ನೆಯದಲ್ಲ. ಭಾರತದಲ್ಲಿ ಮುಸಲ್ಮಾನರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಜಗತ್ತಿನ ಮುಂದೆ ಸಾಬೀತು ಪಡಿಸಿ ಇಸ್ಲಾಂ ನ ರಕ್ಷಣೆಗೆ ಮುಸಲ್ಮಾನ ರಾಷ್ಟ್ರಗಳಿಂದ ದೊಡ್ಡ ಮೊತ್ತದ ಹಣವನ್ನು ಬಾಚುವುದು ಪಾಕಿಸ್ತಾನದ ಬದುಕಿನ ಶೈಲಿ. ಇದರ ಮೊದಲ ಬೀಜವನ್ನು ಬಿತ್ತಿದ್ದೇ ಮೊಹಮ್ಮದ್ ಅಲಿ ಜಿನ್ಹಾ.

ಜಮ್ಮು-ಕಾಶ್ಮೀರದಲ್ಲಿ ರಂಜಾನ್ ನೆಪದಲ್ಲಿ ಏಕಪಕ್ಷೀಯ ಕದನ ವಿರಾಮ ಘೋಷಣೆಯಾಗಿದೆ. ಶಾಂತಿಯನ್ನು ಬಯಸುವಂತಹ ಮುಸಲ್ಮಾನರು ಆಚರಿಸುವ ರಂಜಾನ್ ಹಬ್ಬ ಶಾಂತಿಯುತವಾಗಿ ಕಳೆಯಲೆಂಬ ಬಯಕೆ ಅವರದ್ದು. ಇಷ್ಟೆಲ್ಲಾ ಶಾಂತಿ ಪ್ರಿಯರಾಗಿರುವಂತಹ ಜಮ್ಮು-ಕಾಶ್ಮೀರದ ಮುಸಲ್ಮಾನರು ಶಾಂತಿಯ ಪಾಠವನ್ನು ಸೈನಿಕರಿಗೆ ಹೇಳಿಕೊಡುವ ಬದಲು ಭಯೋತ್ಪಾದಕರಿಗೇ ಹೇಳಿದರೆ ಈ ವೇಳೆಗೆ ಸಮಸ್ಯೆಯೇ ಪರಿಹಾರವಾಗಿಬಿಟ್ಟಿರುತ್ತಿತ್ತಲ್ಲಾ! ಕಳೆದ 18 ತಿಂಗಳಲ್ಲಿ ಎನ್ಕೌಂಟರ್ಗಳ ಮೂಲಕ ಹುಡು-ಹುಡುಕಿ 300 ಜನ ಭಯೋತ್ಪಾದಕರನ್ನು ಕೊಂದು ಬಿಸಾಡಿದ ಸೇನೆ ಮುಂದಿನ ದಿನಗಳಲ್ಲಿ ಕೈಕಟ್ಟಿ ಕುಳಿತುಕೊಳ್ಳಬೇಕಾದ ಸ್ಥಿತಿ ನಿಮರ್ಾಣವಾಗಿರುವುದು ನರೇಂದ್ರಮೋದಿಯವರ ತುಷ್ಟೀಕರಣದ ರಾಜಕಾರಣವೇ? ಇದೇ ರಂಜಾನ್ನ ಹೊತ್ತಿನಲ್ಲಿ ಉಪವಾಸವನ್ನು ಸಂಜೆಯ ವೇಳೆಗೆ ಬಿಡಬೇಕಾದ ಸಮಯದಲ್ಲಿ ಲೆಫ್ಟಿನೆಂಟ್ ಉಮರ್ ಫಯಾಜ್ ಅನ್ನು ಶೋಪಿಯಾನಿನ ಬೀದಿಗಳಲ್ಲಿ ಕೊಂದು ಬಿಸಾಡಿದರಲ್ಲ ಉಗ್ರರು! ನರೇಂದ್ರಮೋದಿ ಅದನ್ನು ಮರೆತೇ ಬಿಟ್ಟರಾ? ತೀರಿಕೊಂಡ ಸೈನಿಕನ ಬದುಕಿಗೆ ನಯಾಪೈಸೆ ಕಿಮ್ಮತ್ತು ಈ ದೇಶದಲ್ಲಿ ಇಲ್ಲವಾ? ಪ್ರಶ್ನೆಗಳು ಪುಂಖಾನುಪುಂಖವಾಗಿವೆ.

1

ವಾಸ್ತವವಾಗಿ ಕಶ್ಮೀರದ ಕಣಿವೆಯಲ್ಲಿ ಸೈನಕರ ಕೈ ಮೇಲಾಗಿದ್ದು ಕಳೆದ 2017 ರಲ್ಲಿ ಘೋಷಣೆಯಾದ ಆಪರೇಶನ್ ಆಲ್ ಔಟ್ ನಂತರವೇ. ಸ್ವಲ್ಪ ನೆನಪು ಮಾಡಿಕೊಳ್ಳಿ. ಬುಹರ್ಾನ್ ವಾನಿ ಎಂಬ ಭಯೋತ್ಪಾದಕರ ಪೋಸ್ಟರ್ ಬಾಯ್ ತನ್ನ ಇತರೆ ಮಿತ್ರರೊಂದಿಗೆ ಕೈಯಲ್ಲಿ ಸ್ವಯಂ ಚಾಲಿತ ಗನ್ನು ಹಿಡಿದುಕೊಂಡು ಫೇಸ್ಬುಕ್ನಲ್ಲಿ ಫೋಟೊ ಹಾಕಿದ್ದ. ತಾಕತ್ತಿದ್ದರೆ ನನ್ನನ್ನು ಹಿಡಿಯಿರಿ ಎಂಬ ಸವಾಲು ಹಾಕಿದ್ದ. ಆತ ಮಾಡಿದ ಒಂದೇ ತಪ್ಪೆಂದರೆ ಆತ ಸವಾಲನ್ನೆಸೆದದ್ದು ಭಾರತೀಯ ಸೇನೆಗೆ. ಸೇನೆಗೆ ಈ ಫೋಟೊ ಬಲು ಮಹತ್ವದ ದಾಖಲೆಯಾಗಿ ದಕ್ಕಿತು. ಕೆಲವೇ ದಿನಗಳಲ್ಲಿ ಬುಹರ್ಾನ್ ವನಿಯನ್ನು ಅಟ್ಟಿಸಿಕೊಂಡು ಹೋಗಿ ಅವನನ್ನು ಕೊಂದು ಬಿಸಾಡಿತು. ಕೊಂದ ನಂತರ ಅವನ ಶವವನ್ನು ಮನೆಯವರಿಗೆ ಕೊಟ್ಟ ಸೈನ್ಯ ಶವಯಾತ್ರೆಯಲ್ಲಿ ಭಾಗವಹಿಸಿದ್ದ ಸಹಸ್ರಾರು ಜನರ ನಡುವೆ ಬುಹರ್ಾನ್ ವನಿಯ ಉಳಿದ ಭಯೋತ್ಪಾದಕ ಮಿತ್ರರನ್ನು ಗುರುತಿಸಿತು. ಅವರನ್ನು ಉಳಿದವರಿಂದ ಪ್ರತ್ಯೇಕಗೊಳಿಸಿ ಹಂತ-ಹಂತವಾಗಿ ಒಬ್ಬೊಬ್ಬರನ್ನು ಸ್ವರ್ಗದ ಸುಂದರಿಯರ ಬಳಿ ಕಳಿಸಿಕೊಡಲಾಯಿತು. ಅದರ ಜೊತೆ-ಜೊತೆಯಲ್ಲೇ ಶುರುವಾಗಿದ್ದು ಆಪರೇಶನ್ ಆಲ್ ಔಟ್. ನರೇಂದ್ರ ಮೋದಿಯವರು ಬಂದಾಗಿನಿಂದಲೂ ಸೈನಿಕರ ಕೈ ಅದೆಷ್ಟು ಬಲಗೊಂಡಿದೆ ಎಂದರೆ ಕಣಿವೆಯಲ್ಲಿ ತೀರಿಕೊಂಡ ಭಯೋತ್ಪಾದಕರ ಸಂಖ್ಯೆ 53 ಪ್ರತಿಶತ ಏರಿಕೆ ಕಂಡಿದೆ. ಗಡಿಯು ತುಂಬ ಬಲವಾಗಿ ಕಾಯಲ್ಪಡುತ್ತಿರುವುದರಿಂದ, ಜಮ್ಮು-ಕಾಶ್ಮೀರದ ಒಳಗೆ ನುಸುಳುತ್ತಿರುವ ಪಾಕೀ ಉಗ್ರಗಾಮಿಗಳ ಸಂಖ್ಯೆಯೂ ತೀವ್ರವಾಗಿ ಕಡಿಮೆಯಾಗಿದೆ. ಹೀಗಾಗಿಯೇ ಅಪಕ್ವವಾದರೂ ಸರಿ ಕಶ್ಮೀರದ ತರುಣರ ಕೈಲಿ ಆಧುನಿಕ ಗನ್ನುಗಳನ್ನು ಕೊಟ್ಟು ತುಡಿತವನ್ನು ಹೆಚ್ಚಿಸಿ ಅವರನ್ನೇ ಭಯೋತ್ಪಾದನಾ ಕಾರ್ಯಗಳಿಗೆಂದು ಬಳಸಿಕೊಳ್ಳಲಾಗುತ್ತಿದೆ. ಈ ಎಲ್ಲಾ ಹೊಸಬರನ್ನು ಈ ಕಾರ್ಯಕ್ಕೆ ಆಹ್ವಾನಿಸಲು ಕಶ್ಮೀರದ ಪ್ರತಿಗಾಮಿಗಳ ಮುಂದೆ ಇರುವ ಏಕೈಕ ಅಸ್ತ್ರವೆಂದರೆ ನರೇಂದ್ರಮೋದಿಯೇ! ಮುಸಲ್ಮಾನರನ್ನು ನಾಶ ಮಾಡಲೆಂದೇ ಬಂದ ದೆವ್ವವೆಂಬಂತೆ ನರೇಂದ್ರಮೋದಿಯನ್ನು ಚಿತ್ರಿಸಿಯೇ ಅವರು ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳೋದು. ಅದಕ್ಕೆ ಅವರಿಗೆ ಯೋಗಿ ಆದಿತ್ಯನಾಥರ, ಪ್ರವೀಣ್ ತೊಗಾಡಿಯಾರ ಭಾಷಣಗಳೂ ಉಪಯೋಗಕ್ಕೆ ಬರುತ್ತವೆ. ಕಳೆದ ನಾಲ್ಕಾರು ವರ್ಷಗಳಲ್ಲಿ ಪ್ರತಿ ವರ್ಷ ನೂರಿನ್ನೂರು ಜನ ಈ ಕಾರ್ಯಕ್ಕೆ ತಮ್ಮನ್ನು ತಾವು ಸಮಪರ್ಿಸಿಕೊಳ್ಳುತ್ತಿರುವುದು ಭಯ ಹುಟ್ಟಿಸುವಂತ ಸಂಗತಿಯೇ.

ಭಾರತವನ್ನು ಮುಸ್ಲೀಂ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ಇಂದು ನಿನ್ನೆಯದಲ್ಲ. ಭಾರತದಲ್ಲಿ ಮುಸಲ್ಮಾನರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಜಗತ್ತಿನ ಮುಂದೆ ಸಾಬೀತು ಪಡಿಸಿ ಇಸ್ಲಾಂ ನ ರಕ್ಷಣೆಗೆ ಮುಸಲ್ಮಾನ ರಾಷ್ಟ್ರಗಳಿಂದ ದೊಡ್ಡ ಮೊತ್ತದ ಹಣವನ್ನು ಬಾಚುವುದು ಪಾಕಿಸ್ತಾನದ ಬದುಕಿನ ಶೈಲಿ. ಇದರ ಮೊದಲ ಬೀಜವನ್ನು ಬಿತ್ತಿದ್ದೇ ಮೊಹಮ್ಮದ್ ಅಲಿ ಜಿನ್ಹಾ. 1946 ರಲ್ಲಿ ಈಜಿಪ್ಟ್ನ ಕೈರೋದಲ್ಲಿ ನಡೆದ ಅಂತರಾಷ್ಟ್ರೀಯ ಮುಸ್ಲೀಂ ಸಮಾವೇಶದಲ್ಲಿ ಭಾಗವಹಿಸಿದ್ದ ಆತ ಹಿಂದೂಗಳ ವಿಸ್ತಾರವನ್ನು ತಡೆಯಲು ಮುಸಲ್ಮಾನರಿಗಿರುವ ಏಕೈಕ ಮಾರ್ಗ ಪಾಕಿಸ್ತಾನ ಎಂದು ವಾದಿಸಿದ್ದ. ಅಂದು ಅದನ್ನು ಪರಿಪೂರ್ಣವಾಗಿ ಯಾರೂ ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಆದರೆ ಕಾಲಕ್ರಮದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾಶ್ಮೀರದ ವಿಷಯವನ್ನು ಅಗತ್ಯಕ್ಕಿಂತ ಹೆಚ್ಚು ಹಿಗ್ಗಿಸಿ ಪ್ರಸ್ತುತ ಪಡಿಸಿದ ಪಾಕಿಸ್ತಾನ ಮುಸಲ್ಮಾನ ರಾಷ್ಟ್ರಗಳನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯ್ತು. 70 ರ ದಶಕದಲ್ಲಿ ರಷ್ಯಾದೊಂದಿಗಿನ ಕದನದ ವೇಳೆಗೆ ಸೌದಿ ಅರೇಬಿಯಾ ಪೂರ್ಣ ಪ್ರಮಾಣದಲ್ಲಿ ಪಾಕಿಸ್ತಾನದ ಕಡೆ ವಾಲಿಕೊಂಡಿತು. ಆ ವೇಳೆಗಾಗಲೇ ಭಾರತದ ವಿದೇಶಾಂಗ ನೀತಿ ಪಂಚಶೀಲ ತತ್ವದ ಆಧಾರದ ಮೇಲೆ ಅದೆಷ್ಟು ಹುಚ್ಚು-ಹುಚ್ಚಾಗಿ ರೂಪುಗೊಂಡಿತ್ತೆಂದರೆ ರಷ್ಯಾದ ಸೆರಗು ಹಿಡಿದುಕೊಂಡು ಜಗತ್ತನ್ನೆದುರಿಸುವ ಎದೆಗಾರಿಕೆ ತೋರಿತ್ತು ಭಾರತ. ರಷ್ಯಾದ ವಿರುದ್ಧ ಮುಸಲ್ಮಾನ ರಾಷ್ಟ್ರಗಳನ್ನು ಎತ್ತಿಕಟ್ಟಿದ ಅಮೇರಿಕಾ ಪಾಕಿಸ್ತಾನವನ್ನು ತನ್ನತ್ತ ಸೆಳೆದುಕೊಂಡು ಅಲ್ಲಿನ ಅಧಿಕಾರಿಗಳಿಗೆ ಗೂಢಚಯರ್ೆಯ ತರಬೇತಿಯನ್ನೂ ಕೊಟ್ಟಿತು. ಐಎಸ್ಐ ರೂಪುಗೊಂಡಿದ್ದೇ ರಷ್ಯಾದ ವಿರುದ್ಧ ಗೂಢಚಯರ್ೆಗಾಗಿ. ಅಮೇರಿಕಾ ಯಶಸ್ವಿಯಾಗಿ ರಷ್ಯಾವನ್ನು ಮುರಿದು ಹಾಕುವ ವೇಳೆಗೆ ಭಾರತ ಪೂರ್ಣ ಗೊಂದಲದಲ್ಲಿತ್ತು. ಅತ್ತ ರಷ್ಯಾವನ್ನೂ ನೆಚ್ಚಿಕೊಳ್ಳಲಾಗದೇ ಇತ್ತ ಅಮೇರಿಕಾವನ್ನೂ ಒಪ್ಪಿಕೊಳ್ಳಲಾಗದೇ ವಿದೇಶಾಂಗ ನೀತಿ ಹಳ್ಳ ಹಿಡಿದಿತ್ತು. ಇದರ ಲಾಭ ಪಡೆದಿದ್ದು ಮಾತ್ರ ಪಾಕಿಸ್ತಾನವೇ. ಅದು ಅಮೇರಿಕಾದ ಎಲ್ಲ ಸವಲತ್ತುಗಳನ್ನು ಪಡೆಯಿತು. ಅಮೇರಿಕಾದ ಜೊತೆಗಾರನೆಂಬ ಕಾರಣಕ್ಕೆ ಮುಸಲ್ಮಾನ ರಾಷ್ಟ್ರಗಳಲ್ಲಿ ಅದರ ಪ್ರಭಾವವೂ ಅಧಿಕವಾಯಿತು. ಇದನ್ನು ತಡೆಯಲು ಆನಂತರದ ಯಾವ ಪ್ರಧಾನಿಗಳೂ ವಿಶೇಷ ಪ್ರಯತ್ನ ಮಾಡಲೇ ಇಲ್ಲ.

2

ನರೇಂದ್ರ ಮೋದಿ ಅಧಿಕಾರಕ್ಕೆ ಬಂದೊಡನೆ ಅವರಿಗಿದ್ದ ದೊಡ್ಡ ಸವಾಲು ಮುಸಲ್ಮಾನ ರಾಷ್ಟ್ರಗಳನ್ನು ತಮ್ಮತ್ತ ಸೆಳೆದುಕೊಳ್ಳುವುದೇ ಆಗಿತ್ತು. ಅದಾಗಲೇ ಭಾರತದ ಪರ ಒಲವಿರುವಂತಹ ಗಲ್ಫ್ ರಾಷ್ಟ್ರಗಳನ್ನು ಮುಂದಿಟ್ಟುಕೊಂಡು ಅವರ ಮೂಲಕ ಇತರೆಲ್ಲ ರಾಷ್ಟ್ರಗಳನ್ನು ಸೆಳೆಯುತ್ತಾ ಪಾಕಿಸ್ತಾನವನ್ನು ಏಕಾಂಗಿಯಾಗಿಸಬೇಕಿತ್ತು. ಸೂಕ್ಷ್ಮವಾಗಿ ಗಮನಿಸಿದರೆ ಎಲ್ಲ ಮುಸಲ್ಮಾನ ರಾಷ್ಟ್ರಗಳೂ ಅಮೇರಿಕಾದ ವಿರೋಧಿ ಎಂದೆನಿಸಿದರೂ ಆಂತರ್ಯದಲ್ಲಿ ಅಮೇರಿಕಾ ಹೇಳಿದಂತೆ ಬದುಕು ನಡೆಸುವಂಥವು. ಈ ಮುಸಲ್ಮಾನ ರಾಷ್ಟ್ರಗಳ ರಕ್ಷಣೆ ನೀತಿ-ನಿರೂಪಣೆ ಬದುಕಿನ ಶೈಲಿ ಎಲ್ಲವೂ ಕ್ರಿಶ್ಚಿಯನ್ ರಾಷ್ಟ್ರಗಳಿಂದ ಬಹುವಾಗಿ ಪ್ರಭಾವಿತಗೊಂಡಿವೆ. ನರೇಂದ್ರಮೋದಿ ಅಮೇರಿಕಾಕ್ಕೆ ಹತ್ತಿರವಾಗುವ ಮೂಲಕ ಮುಸ್ಲೀಂ ರಾಷ್ಟ್ರಗಳ ನಾಡಿಯನ್ನು ಬಲವಾಗಿ ಹಿಡಿದುಬಿಟ್ಟರು. ಈ ಒಂದೊಂದೇ ರಾಷ್ಟ್ರಗಳು ನರೇಂದ್ರಮೋದಿಯನ್ನು ವಿಶೇಷವಾಗಿ ಸ್ವಾಗತಿಸಲಾರಂಭಿಸಿದವು. ಗೋಧ್ರಾದ ಹತ್ಯಾಕಾಂಡದೊಂದಿಗೆ ಜಾಗತಿಕ ಮಟ್ಟದಲ್ಲಿ ಕೊಲೆಗಡುಕನೆಂದು ಬಿರುದು ಪಡೆದುಕೊಂಡಿದ್ದ ನರೇಂದ್ರಮೋದಿ ಈಗ ಇದ್ದಕ್ಕಿದ್ದಂತೆ ಜಗತ್ತಿನಲ್ಲಿ ಅತ್ಯಂತ ನಂಬಿಕಸ್ಥ ಮತ್ತು ಶಾಂತಿಯನ್ನು ಪ್ರಸ್ಥಾಪಿಸುವ ಸಾಮಥ್ರ್ಯವುಳ್ಳ ಮಹಾನಾಯಕನಾಗಿ ಗುರುತಿಸಿಕೊಂಡರು. ಅನೇಕ ಮುಸಲ್ಮಾನ ರಾಷ್ಟ್ರಗಳ ರಾಜರುಗಳಿಗೊಂತು ನರೇಂದ್ರಮೋದಿಯವರ ಮೇಲೆ ಅಪಾರವಾದ ವಿಶ್ವಾಸ. ಅಬುದಾಬಿಗೆ ಎರಡೆರೆಡು ಬಾರಿ ಹೋಗಿಬಂದ ಪ್ರಧಾನಿ ಅಲ್ಲಿ ದೇವಸ್ಥಾನ ನಿಮರ್ಾಣಕ್ಕೆ ಜಾಗವನ್ನು ಗಿಟ್ಟಿಸಿಕೊಳ್ಳುವಲ್ಲಿಯೂ ಯಶಸ್ವಿಯಾದರು. ಕಠೋರ ಇಸ್ಲಾಂ ಪ್ರಚಾರ ಮಾಡುವ ಸೌದಿ ಅರೇಬಿಯಾ ಕೂಡ ಮೋದಿಯವರ ಮೋಡಿಗೆ ಒಳಗಾಗಿ ಅವರಿಗೆ ತಮ್ಮ ರಾಷ್ಟ್ರದ ಅತ್ಯುನ್ನತ ನಾಗರೀಕ ಗೌರವವನ್ನು ನೀಡಿ ಗೌರವ ಸಮಪರ್ಿಸಿತು. ನೆನಪಿರಲಿ ಇಂತಹದ್ದೊದು ಗೌರವವನ್ನು ಸೌದಿ ಪಾಕಿಸ್ತಾನದ ಯಾವೊಬ್ಬನಿಗೂ ಇದುವರೆಗೂ ಕೊಟ್ಟಿಲ್ಲ. ಹಾಗಂತ ನರೇಂದ್ರ ಮೋದಿ ಈ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಗಟ್ಟಿಮಾಡಿಕೊಳ್ಳಬೇಕೆಂದು ಆಲೋಚಿಸಿದ್ದು ಅನವಶ್ಯಕ ವಿದೇಶಾಂಗ ಹೊರೆಯಲ್ಲ. ಗಲ್ಫ್ ರಾಷ್ಟ್ರಗಳಲ್ಲಿ ಲಕ್ಷಾಂತರ ಭಾರತೀಯರು ಕೆಲಸ ಮಾಡುತ್ತಿದ್ದು ಇವರೆಲ್ಲರೂ ಭಾರತಕ್ಕೆ ಮರಳಿ ಹಣ ಕಳಿಸುತ್ತಾರಲ್ಲಾ 2015 ರಲ್ಲಿ ಹೀಗೆ ಜಾಗತಿಕವಾಗಿ ಬಂದ ಹಣದಲ್ಲಿ ಅರ್ಧಕ್ಕೂ ಹೆಚ್ಚು ಭಾಗ ಇವರದ್ದೇ ಆಗಿತ್ತು. ಭಾರತ ಗಲ್ಫ್ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಬಲಗೊಳಿಸಿಕೊಳ್ಳುವುದೆಂದರೆ ಅಲ್ಲಿರುವ ಭಾರತೀಯರ ಜೀವನವನ್ನು ಇನ್ನೂ ಹೆಚ್ಚು ಸುಂದರಗೊಳಿಸುವುದೆಂದರ್ಥ. ಜೊತೆಗೆ ಪಾಕಿಸ್ತಾನವನ್ನು ಎಲ್ಲರಿಂದಲೂ ದೂರವಾಗಿಸಿ ಆಂತರಿಕವಾಗಿ ಬೇಯುವಂತೆ ಮಾಡುವಲ್ಲಿ ಸಫಲವಾಗುವುದೂ ಕೂಡ.

ಭಾರತದ ವಿದೇಶಾಂಗ ಸಚಿವಾಲಯವೂ ಬಲು ತೀಕ್ಷ್ಣವಾಗಿ ಕೆಲಸ ಮಾಡಿತು. ಹೋದ ಹೋದಲ್ಲೆಲ್ಲಾ ಪಾಕಿಸ್ತಾನದ ಭಯೋತ್ಪಾದನಾ ತುಡಿತವನ್ನು ಜಗತ್ತಿನ ಮುಂದೆ ವಿಸ್ತಾರವಾಗಿ ತೆರೆದಿಟ್ಟಿತು. ಮೊದ-ಮೊದಲೆಲ್ಲಾ ಪದೇ ಪದೇ ಗುಡ್-ಟೆರರಿಸಂ ಬ್ಯಾಡ್-ಟೆರರಿಸಂನ ಕುರಿತಂತೆ ಪ್ರಧಾನಮಂತ್ರಿಯಾದಿಯಾಗಿ ವಿದೇಶಾಂಗ ಸಚಿವರು ಇಲಾಖೆಯ ಅಧಿಕಾರಿಗಳೆಲ್ಲಾ ಎಲ್ಲಾ ಜಾಗತಿಕ ವೇದಿಕೆಗಳಲ್ಲೂ ಮಾತನಾಡುವುದನ್ನು ಕಂಡಾಗ ನಮಗೂ ಕಿರಿ-ಕಿರಿ ಎನಿಸುತ್ತಿತ್ತು. ಆದರೆ ಈ ಮಾತುಗಳ ಕಾರಣದಿಂದಾಗಿಯೇ ಪಾಕಿಸ್ತಾನದ ವಿರುದ್ಧ ಜಾಗತಿಕ ಅಭಿಪ್ರಾಯ ಮೂಡಿದ್ದಲ್ಲದೇ ಅದರ ಬೆಂಬಲಕ್ಕೆ ನಿಲ್ಲುವುದು ಬದಲಾವಣೆಯ ಈ ಹೊತ್ತಲ್ಲಿ ಪ್ರಗತಿಪರವಲ್ಲವೆಂಬುದು ಎಲ್ಲ ರಾಷ್ಟ್ರಗಳಿಗೂ ಅರಿವಾಗಲಾರಂಭಿಸಿತು. ಬೇರೆಲ್ಲ ರಾಷ್ಟ್ರಗಳು ಬಿಡಿ ಈಗ ಚೀನಾ ಕೂಡ ಪಾಕಿಸ್ತಾನ ತನ್ನ ಮಿತ್ರ ಎಂದು ಧೈರ್ಯವಾಗಿ ಹೇಳಲಾಗದ ಸ್ಥಿತಿ ತಲುಪಿದೆ. ತನ್ನ ಆಪ್ತ ಮಿತ್ರನಾಗಿದ್ದ ಸೌದಿಯೊಂದಿಗೆ ಎಮನ್ನ ವಿಚಾರದಲ್ಲಿ ಪಾಕಿಸ್ತಾನ ಕಿತ್ತಾಡಿಕೊಂಡ ಮೇಲಂತೂ ಭಾರತದ ತೂಕ ಒಂದಷ್ಟು ಜಾಸ್ತಿಯೇ ಆಗಿದೆ. ಭಾರತದ ಪರವಾಗಿ ಮುಸಲ್ಮಾನ ರಾಷ್ಟ್ರಗಳು ಈಗ ಬಲು ಜೋರಾಗಿಯೇ ಪ್ರತಿಪಾದನೆ ಆರಂಭಿಸಿವೆ. ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋ ಆಪರೇಶನ್ ಎಂಬ ವಿಶ್ವಸಂಸ್ಥೆಯ ನಂತರದ ದೊಡ್ಡ ರಾಷ್ಟ್ರಗಳ ಸಂಘಟನೆಯಲ್ಲಿ ಭಾರತಕ್ಕೂ ಸ್ಥಾನ ಕೊಡಬೇಕೆಂದು ಈಗ ಮತ್ತೊಮ್ಮೆ ಚಚರ್ೆ ಹುಟ್ಟು ಹಾಕಿರುವುದು ಬಾಂಗ್ಲಾದೇಶವೇ. 57 ರಾಷ್ಟ್ರಗಳ ಈ ಒಕ್ಕೂಟದಲ್ಲಿ ಭಾರತಕ್ಕೆ ಸ್ಥಾನ ಸಿಗುವುದೆಂದರೆ ಪಾಕಿಸ್ತಾನದ ಕಥೆ ಶಾಶ್ವತವಾಗಿ ಮುಗಿದಂತೆ. ಈ ಒಕ್ಕೂಟದಲ್ಲಿ ಸೇರಿಕೊಳ್ಳಲು 2006 ರಲ್ಲೂ ನಮಗೆ ಅಡ್ಡಗಾಲು ಹಾಕಿದ್ದು ಪಾಕಿಸ್ತಾನ ಮಾತ್ರ. ಭಾರತದ ಕುರಿತಂತೆ ಭೀತಿಯನ್ನು ತುಂಬಿಸಿ ಅದು ತನ್ನ ಬೇಳೆ ಬೇಯಿಸಿಕೊಳ್ಳುತ್ತಲೇ ಇತ್ತು. ಈ ಬಾರಿ ನಮ್ಮ ಪರವಾಗಿ ಮಾತನಾಡುತ್ತಿರುವುದು ನಮ್ಮ ನೆರೆಯೇ ಆಗಿರುವಂಥ ಮತ್ತೊಂದು ಮುಸಲ್ಮಾನ ರಾಷ್ಟ್ರ ಬಾಂಗ್ಲಾದೇಶ ಎನ್ನುವುದು ಪಾಕಿಸ್ತಾನಕ್ಕೆ ಖಂಡಿತ ನುಂಗಲಸಾಧ್ಯ.

ಇಂತಹ ಹೊತ್ತಲ್ಲಿ ಕಾಶ್ಮೀರದ ಕಣಿವೆಯಲ್ಲಿ ಒಂದು ಸಣ್ಣ ಪ್ರೇರಣಾದಾಯಿ ನಡೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಾಮಥ್ರ್ಯವನ್ನು ನೂರು ಪಟ್ಟು ಹೆಚ್ಚಸಲಿದೆ ಎಂಬುದು ಮೋದಿಯವರಿಗೆ ಗೊತ್ತಿದ್ದುದರಿಂದಲೇ ಏಕಪಕ್ಷೀಯ ಕದನ ವಿರಾಮಕ್ಕೆ ಕೈ ಹಾಕಿದ್ದು. ಹಾಗಂತ ಇದು ಮೊದಲ ಬಾರಿಯೇನಲ್ಲ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಮಂತ್ರಿ ಆಗಿದ್ದಾಗ ಎರಡು ಬಾರಿ ಹೀಗೆ ಕದನ ವಿರಾಮ ಘೋಷಿಸಲಾಗಿತ್ತು. ಆಗ ಭಯೋತ್ಪಾದಕರ ಸಂಖ್ಯೆ ಕಡಿಮೆಯಾಗಿರಲಿಲ್ಲವಾದರೂ ಶಾಂತಿ ನೆಲೆಸುವಂತೆ ಮಾಡುವ ಭಾರತದ ಪ್ರಯತ್ನದ ಕುರಿತಂತೆ ಜಾಗತಿಕ ಗೌರವ ವ್ಯಕ್ತವಾಗಿತ್ತು. ಈಗ ನರೇಂದ್ರಮೋದಿ ಮತ್ತೊಮ್ಮೆ ಅದೇ ಹೆಜ್ಜೆ ಇಟ್ಟಿದ್ದಾರೆ. ರಂಜಾನಿಗೂ ಒಂದು ದಿನದ ಮುಂಚೆ ಕೇಂದ್ರ ಸಕರ್ಾರ ಕೊಟ್ಟ ಈ ಹೇಳಿಕೆಯಿಂದಾಗಿ ಮುಸಲ್ಮಾನ ರಾಷ್ಟ್ರಗಳಲ್ಲಿ ಉತ್ಪಾತವೇ ಆಗಿದೆ. ಅಲ್ ಜಜೀರಾ ಎಂಬ ಮಧ್ಯ ಏಷಿಯಾದ ಮಹತ್ವದ ಮಾಧ್ಯಮ ಈ ಸುದ್ದಿಯನ್ನು ವಿಶೇಷವಾಗಿ ಪ್ರಕಟವಾಗುವಂತೆ ನೋಡಿಕೊಂಡಿದೆ. ನರೇಂದ್ರಮೋದಿಯೂ ಎಷ್ಟು ಎಚ್ಚರಿಕೆಯಿಂದ ಕದನ ವಿರಾಮ ಘೋಷಿಸಿದ್ದಾರೆಂದರೆ ರಂಜಾನಿಗಿಂತ ಒಂದೇ ದಿನದ ಮುನ್ನ ಈ ಹೇಳಿಕೆಯನ್ನು ಕೊಟ್ಟು ಭಯೋತ್ಪಾದಕರಿಗೆ ಪ್ರತಿಕ್ರಿಯಿಸಲು ಸೂಕ್ತ ಸಮಯವೂ ಇಲ್ಲದಂತೆ ನೋಡಿಕೊಂಡಿದ್ದಾರೆ. ಸಹಜವಾಗಿಯೇ ಆತುರಕ್ಕೆ ಬಿದ್ದ ಲಷ್ಕರ್-ಎ-ತೊಯ್ಬಾ ರಂಜಾನ್ ನ ವೇಳೆಯೂ ನಾವು ಭಯೋತ್ಪಾದನೆ ನಿಲ್ಲಿಸಲಾರೆವು ಎಂಬ ಹೇಳಿಕೆ ಕೊಟ್ಟು ಭಾರತ ಸಕರ್ಾರ ರಚಿಸಿದ ಖೆಡ್ಡಾಕ್ಕೆ ಹೋಗಿ ಬಿದ್ದಿದ್ದಾರೆ.

3

ನಮ್ಮಲ್ಲನೇಕರಿಗೆ ಗೊತ್ತಿಲ್ಲದಿರುವ ಸಂಗತಿ ಒಂದೇ. ಈ ಕದನ ವಿರಾಮ ಬೇಶರತ್ತಾಗಿರುವಂಥದ್ದಲ್ಲ. ಭಯೋತ್ಪಾದಕರನ್ನು ಹುಡುಕಲು ಕಶ್ಮೀರಿಗಳ ಮನೆಯೊಳಗೆ ನುಗ್ಗುವ ಮತ್ತು ಅಲ್ಲಿಯೇ ಅವರನ್ನು ಕೊಲ್ಲುವ ಸೈನಿಕ ಕಾಯರ್ಾಚರಣೆಯನ್ನು ಬಿಟ್ಟು ಉಳಿದೆಲ್ಲವೂ ಎಂದಿನಂತೆ ಚಾಲ್ತಿಯಲ್ಲಿರುತ್ತದೆ. ಹೀಗಾಗಿಯೇ ಕದನ ವಿರಾಮ ಘೋಷಣೆಯಾದ ನಂತರವೂ ದಾಳಿಗೆಂದು ಬಂದ ನಾಲ್ಕು ಉಗ್ರರನ್ನು ಭಾರತೀಯ ಸೇನೆ ಕೊಂದು ಬಿಸಾಡಿತು.

ಈ ಪ್ರಯತ್ನದಿಂದಾಗಿ ನರೇಂದ್ರಮೋದಿ ಕಣಿವೆಯಲ್ಲಿ ಪ್ರತ್ಯೇಕತಾವಾದದ ಬಾವುಟವನ್ನು ಹಿಡಿದು ತಿರುಗುತ್ತಿದ್ದವರಿಗೆ ಸರಿಯಾಗಿಯೇ ಹೊಡೆತ ಕೊಟ್ಟಿದ್ದಾರೆ. ಮತ್ತು ಕಶ್ಮೀರದ ಒಳಿತನ್ನು ಬಯಸುತ್ತಿದ್ದ ಮುಸಲ್ಮಾನರಿಗೆ ಸಕರ್ಾರದೊಂದಿಗೆ ವ್ಯವಹರಿಸಲು ರಾಜಮಾರ್ಗ ರೂಪಿಸಿಕೊಟ್ಟಿದ್ದಾರೆ. ಹಾಗೊಂದು ಅಭಿಪ್ರಾಯವಂತೂ ಎಲ್ಲ ದಿಕ್ಕಿನಿಂದಲೂ ವ್ಯಕ್ತವಾಗುತ್ತಿದೆ. ಹೀಗಾಗಿಯೇ ಕನರ್ಾಟದಲ್ಲಿ ಕಾಂಗ್ರೆಸ್ಸು ರಾಜಕೀಯ ದೊಂಬರಾಟದಲ್ಲಿ ನಿರತವಾಗಿದ್ದಾಗ ಮೋದಿ ಶ್ರೀನಗರದಲ್ಲಿ ಜಲವಿದ್ಯುತ್ ಕೇಂದ್ರವೊಂದನ್ನು ಲೋಕಾರ್ಪಣೆ ಮಾಡಲು, ಜೋಜಿಲಾ ಪಾಸ್ನಲ್ಲಿ ಟನಲ್ ನಿಮರ್ಾಣ ಮಾಡಲು ಅಡಿಗಲ್ಲು ಹಾಕಲು ಹೋಗಿದ್ದರು.

4

ಮೋದಿಯವರ ದೃಷ್ಟಿ ವಿಶಾಲವಾಗಿದೆ. ಬಲು ನಿಚ್ಚಳವೂ ಆಗಿದೆ. ಫಲಿತಾಂಶಕ್ಕಾಗಿ ಕಾದು ನೋಡುವ ವ್ಯವಧಾನ ನಮಗೆ ಬೇಕಿದ ಅಷ್ಟೇ.

Comments are closed.