ವಿಭಾಗಗಳು

ಸುದ್ದಿಪತ್ರ


 

ಶಿವಾಜಿಯನ್ನು ಅಫ್ಜಲ್ ಖಾನ್ ಅಪ್ಪಿಕೊಂಡಿದ್ದು ಸ್ನೇಹಕ್ಕಲ್ಲ, ನಾಶಕ್ಕೆ!

ಈ ಅವಿಶ್ವಾಸ ನಿರ್ಣಯದ ಆಲೋಚನೆ ಅದ್ಯಾರಿಗೆ ಮೊದಲು ಬಂತೋ ದೇವರೇ ಬಲ್ಲ. ಆದರೆ ಇಂಥದ್ದೊಂದು ಕಾಂಗ್ರೆಸ್ಸು ನಿನರ್ಾಮ ಮಾಡುವ ಆಲೋಚನೆಯನ್ನು ಕೊಟ್ಟವರನ್ನು ಕಾಂಗ್ರೆಸ್ಸಿನಿಂದ ಹೊರದಬ್ಬುವುದೇ ಒಳಿತು. ಹಾಗೆ ಸುಮ್ಮನೆ ಆಲೋಚಿಸಿ ಅವಿಶ್ವಾಸ ನಿರ್ಣಯವನ್ನು ಗೆಲ್ಲುವಷ್ಟು ಲೋಕಸಭಾ ಸದಸ್ಯರ ಸಂಖ್ಯೆ ಕಾಂಗ್ರಸ್ಸಿನ ಬಳಿ ಇರಲಿಲ್ಲ. ಇಲ್ಲಿಗೇ ನಿಲ್ಲಿಸದ ರಾಹುಲ್ ಬರೆದು ಕೊಟ್ಟ ಸ್ಕ್ರಿಪ್ಟ್ನಲ್ಲಿದ್ದಂತೆ ಭ್ರಾತೃತ್ವದ, ಪ್ರೇಮದ ಮಾತುಗಳನ್ನಾಡುತ್ತಾ ಪ್ರಧಾನಮಂತ್ರಿಯವರನ್ನು ತಬ್ಬಿಕೊಳ್ಳಲು ಹೊರಟೇ ಬಿಟ್ಟರು.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಈ ಬಗೆಯ ಅವಿಶ್ವಾಸ ಗೊತ್ತುವಳಿ ಬಹುಶಃ ನಡೆದೇ ಇರಲಿಲ್ಲವೇನೋ. ನರೇಂದ್ರಮೋದಿ ಅಂತಿಮವಾಗಿ ಜಯಭೇರಿ ಬಾರಿಸಿದರು ನಿಜ ಆದರೆ ಪ್ರಜಾಪ್ರಭುತ್ವದ ಮೌಲ್ಯಗಳು ಸತ್ತುಹೋಗಿದ್ದವು. ಹಾಗೆ ಸುಮ್ಮನೆ ಹಳೆಯ ಒಂದಷ್ಟು ದಾಖಲೆಗಳನ್ನು ನೆನಪಿಸಿಕೊಳ್ಳುವುದಾದರೆ ಅಟಲ್ ಬಿಹಾರಿ ವಾಜಪೇಯಿಯವರು ಒಂದು ಮತದಿಂದ ತಮ್ಮ ಸಕರ್ಾರವನ್ನು ಕಳೆದುಕೊಂಡುದ್ದು ಇಂದಿಗೂ ಹಸಿಯಾಗಿದೆ. ವಾಜಪೇಯಿಯವರ ಅಕೌಂಟಿನಲ್ಲಿರುವ ದಾಖಲೆಯೇನು ಗೊತ್ತೇ? ಅವರೊಬ್ಬರೇ ಎರಡು ಬಾರಿ ಸಕರ್ಾರದ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿದ್ದು, ಒಂದು ಬಾರಿ ಅವಿಶ್ವಾಸ ಗೊತ್ತುವಳಿಯನ್ನು ಎದುರಿಸಿದ್ದು! ಮನಮೋಹನ್ ಸಿಂಗರಂತೂ ತಮ್ಮ ಹತ್ತು ವರ್ಷಗಳ ಎರಡು ಪೂರ್ಣ ಅಧಿಕಾರಾವಧಿಯಲ್ಲಿ ಒಮ್ಮೆಯೂ ಅವಿಶ್ವಾಸವನ್ನು ಎದುರಿಸುವ ಪ್ರಮೇಯವೇ ಬರಲಿಲ್ಲ. ಇಂದಿರಾಗಾಂಧಿಯಂತೂ 66-75 ರ ನಡುವೆ 12 ಬಾರಿ ಮತ್ತು 81-82 ರ ನಡುವಿನ 15 ತಿಂಗಳಲ್ಲಿ ಮೂರು ಬಾರಿ ಅವಿಶ್ವಾಸ ಗೊತ್ತುವಳಿಯನ್ನೆದುರಿಸಿದರು. ಮೊರಾಜರ್ಿ ದೇಸಾಯಿ 1979 ರಲ್ಲಿ ಗೊತ್ತುವಳಿ ಮತಕ್ಕೆ ಹೋಗುವ ಮುನ್ನವೇ ರಾಜಿನಾಮೆ ಕೊಟ್ಟರು. 1993 ರಲ್ಲಿ ನರಸಿಂಹರಾಯರು ಅವಿಶ್ವಾಸವನ್ನು ಎದುರಿಸಿ ಗೆದ್ದದ್ದು 20-20 ಕ್ರಿಕೆಟ್ ಮ್ಯಾಚಿನಂತಿತ್ತು. ಗೊತ್ತುವಳಿಯ ವಿರುದ್ಧವಾಗಿ 265 ಮತಗಳು ಚಲಾಯಿಸಲ್ಪಟ್ಟಿದ್ದರೆ, ಪರವಾಗಿ 251 ಮತಗಳು ಬಿದ್ದಿದ್ದವು. ಈ ಹೊತ್ತಲ್ಲೇ ಜಾರ್ಖಂಡ್ ಮುಕ್ತಿ ಮೋಛರ್ಾದ ಲಂಚದ ಹಗರಣ ಹೊರಬಂದು ಪಾಲರ್ಿಮೆಂಟಿನಲ್ಲಿ ಅಲ್ಲೋಲ-ಕಲ್ಲೋಲವೆದ್ದಿತು. ಕಾಂಗ್ರೆಸ್ಸು ಅಧಿಕಾರ ಪಡೆಯಲು ಯಾವ ಹಂತಕ್ಕೆ ಬೇಕಿದ್ದರೂ ಹೋಗಬಲ್ಲುದು. ಅಧಿಕಾರ ಕಳೆದುಕೊಂಡು 5 ವರ್ಷ ತೆಪ್ಪಗೆ ಪ್ರತಿಪಕ್ಷವಾಗಿ ನಿಲ್ಲುವುದು ಸ್ವಾತಂತ್ರ್ಯ ಬಂದಾಗಿನಿಂದಲೂ ಅದಕ್ಕೆ ಸಾಧ್ಯವಿಲ್ಲ. ಜವಹರಲಾಲ್ ನೆಹರೂ ಪಟೇಲರನ್ನು ಹಿಂದೆಳೆದು ತಾವು ಮುಂದೆ ಓಡಿಹೋದರು. ಇಂದಿರಾಗಾಂಧಿ ಅಧಿಕಾರ ಕೈ ತಪ್ಪುವುದೆಂದಾಗ ತುತರ್ು ಪರಿಸ್ಥಿತಿಯನ್ನು ಹೇರಿ ದೇಶವನ್ನೇ ತನ್ನ ಹಿಡಿತಕ್ಕೆಳೆದುಕೊಂಡಳು. ರಾಜೀವ್ಗಾಂಧಿ ತನ್ನ ತಾಯಿಯ ಹತ್ಯೆಯ ಅನುಕಂಪದ ಅಲೆಯನ್ನು ಅಧಿಕಾರ ಪಡೆಯಲು ಬಳಸಿಕೊಂಡರೆ ಸೋನಿಯಾ ಹತ್ತು ವರ್ಷಗಳ ಕಾಲ ಮುಖವಾಡವೊಂದನ್ನಿಟ್ಟುಕೊಂಡು ತಾನೇ ಅಧಿಕಾರ ನಡೆಸಿದಳು. ಇನ್ನೀಗ ರಾಹುಲ್ ಗಾಂಧಿಯ ಸರದಿ. ಬಹುಶಃ ಪ್ರಧಾನಿ ಕುಚರ್ಿಯಲ್ಲಿ ನರೇಂದ್ರಮೋದಿ ಅಲ್ಲದೇ ಮತ್ಯಾರು ಕುಳಿತಿದ್ದರೂ ಕಾಂಗ್ರೆಸ್ಸು ಅವರನ್ನು ಪದವಿಯಿಂದ ಇಷ್ಟರ ವೇಳೆಗೆ ಹೊರದಬ್ಬಿಬಿಡುತ್ತಿತ್ತು. 70 ವರ್ಷಗಳ ನಂತರ ಕಾಂಗ್ರೆಸ್ಸಿಗರ ಕಂಗಳಲ್ಲಿ ಕಣ್ಣಿಟ್ಟು ಎದುರಿಸಿ ಗೆಲ್ಲಬಲ್ಲ ಛಾತಿಯಿರುವ ಒಬ್ಬ ನಾಯಕ ಸಿಕ್ಕಿದ್ದಾನೆ.

ಜಯಪ್ರಕಾಶ ನಾರಾಯಣರ ಆಂದೋಲನದ ಹೊತ್ತಿಗೆ ಸಮರ್ಥ ನಾಯಕನೊಬ್ಬ ದೊರೆತಿದ್ದಾನೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಜಯಪ್ರಕಾಶರ ಹಿಂದೆ-ಮುಂದೆ ತಿರುಗುತ್ತಿದ್ದ ಅನೇಕ ನಾಯಕರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿನ ಬಾಲಂಗೋಚಿಗಳಾಗಿಬಿಡುತ್ತಾರೆ ಎಂದು ಜಯಪ್ರಕಾಶರಿಗೂ ತಡವಾಗಿ ಅರ್ಥವಾಯ್ತು. ಅತ್ತ ಸಮಾಜವಾದವೂ ಇಲ್ಲ, ಇತ್ತ ಸಮಾಜದ ಕಾಳಜಿಯೂ ಇಲ್ಲ! ಮಜಾ ಮಾಡುವ ನಾಯಕರಿಂದಲೇ ದೇಶ ತುಂಬಿಹೋಯ್ತು. ಜನರನ್ನು ಮರಳು ಮಾಡಿ ವೋಟು ಗಳಿಸುವ ತಂತ್ರಗಾರಿಕೆ ಇವರೆಲ್ಲರಿಗೂ ಬಲವಾಗಿ ಸಿದ್ಧಿಸಿತ್ತು. ಯಾರೋ ತೀರಿಕೊಂಡ ಅನುಕಂಪವೋ, ರೈತರಂತೆ ವೇಷ ಹಾಕಿಯೋ, ಜಾತಿ-ಭಾಷೆ-ಪಂಗಡಗಳ ಹೆಸರನ್ನಿಟ್ಟುಕೊಂಡು ಅಧಿಕಾರ ಹಿಡಿಯುವುದನ್ನು ಇವರೆಲ್ಲರೂ ಕರಗತ ಮಾಡಿಕೊಂಡು ಭಾರತವನ್ನು ಬ್ರಿಟೀಷರ ಆಶಯದಂತೆ ಅಯೋಗ್ಯರ ನಾಡಾಗಿಯೇ ಕಟ್ಟಿಬಿಟ್ಟರು.

6

ಆಗ ಕನಸುಗಳನ್ನು ಬಿತ್ತಿ ಹೊಸ ಭಾರತ ನಿಮರ್ಾಣ ಮಾಡುವೆನೆಂಬ ಭರವಸೆ ಕೊಟ್ಟು ಪ್ರಧಾನಿ ಹುದ್ದೆಗೇರಿದ್ದು ಅಟಲ್ ಬಿಹಾರಿ ವಾಜಪೇಯಿ. ಅವರ ಮಾತು, ಆಡಳಿತ ಶೈಲಿ, ಪ್ರಾಮಾಣಿಕತೆ, ಶುದ್ಧತೆ, ನಿಸ್ವಾರ್ಥ ಇವೆಲ್ಲವೂ ಕಣ್ಣು ಕೋರೈಸುವಂತಿದ್ದವು. ಆದರೂ ಅಟಲ್ಜೀ ಮೋದಿಯಂತಿರಲಿಲ್ಲ. ಅವರ ಹೃದಯ ಎಲ್ಲರಿಗಾಗಿ ಮರುಗುತ್ತಿತ್ತು, ಕಾಂಗ್ರೆಸ್ಸಿಗರಿಗಾಗಿ ಕೂಡ. ಅದಕ್ಕೇ ಈಗಲೂ ಕಾಂಗ್ರೆಸ್ಸಿಗರು ಹೇಳೋದು ಮೋದಿ ಅಟಲ್ಜೀಯಂತಲ್ಲ ಅಂತ. ಹೌದು ಮತ್ತೇ! ಅಟಲ್ಜೀ ಕಾಂಗ್ರೆಸ್ಸಿಗರ ತಪ್ಪುಗಳನ್ನು ಕ್ಷಮಿಸಿ ಅವರನ್ನು ಒಳಗೆ ತಳ್ಳುವ ಎಲ್ಲ ಅವಕಾಶಗಳನ್ನು ಕೈಚೆಲ್ಲಿ ಕೊನೆಗೆ ಅವರೇ ರಚಿಸಿದ್ದ ಖೆಡ್ಡಾಕ್ಕೆ ಬಿದ್ದು ಚೇತರಿಸಿಕೊಳ್ಳಲಾಗದ ಹಂತಕ್ಕೆ ತಲುಪಿಬಿಟ್ಟರು. ಮುಂದಿನ 10 ವರ್ಷ ಭಾರತದ ಪಾಲಿಗೆ ಕರಾಳ ರಾತ್ರಿಯ ನೀರವ ಮೌನ. ಮಾತೇ ಆಡದ ಮನಮೋಹನ ಸಿಂಗರು ಭಾರತದ ಕೀತರ್ಿ ಧ್ವಜವನ್ನು ಸುಂಟರಗಾಳಿಗೂ ಹಾರದಂತೆ ಮಾಡಿಬಿಟ್ಟರು. ಫಡಫಡಿಸುತ್ತಿದ್ದ ಭಾರತೀಯ ತರುಣರಿಗೆ ಬೆಳ್ಳಿ ಕಿರಣವಾಗಿ ಗೋಚರಿಸಿದ್ದು ನರೇಂದ್ರಮೋದಿ! ಅವರು ಪ್ರಧಾನಿಯಾದರೆ ಕೈಯಲ್ಲಿ ಮಂತ್ರದಂಡ ಹಿಡಿದೇ ಬರುತ್ತಾರೆಂದು ಇಡಿಯ ದೇಶ ವಿಶೇಷವಾಗಿ ನಂಬಿಬಿಟ್ಟಿತು. ಅವರ ಬಳಿ ಎಲ್ಲ ಸಮಸ್ಯೆಗಳಿಗೂ ಎಲ್ಲರ ಕಷ್ಟಗಳಿಗೂ ಪರಿಹಾರವಿದೆಯೆಂದು ದೇಶದ ತಾರುಣ್ಯ ಅವರನ್ನು ಆರಿಸಿ ಪ್ರಧಾನಿ ಪಟ್ಟಕ್ಕೇರಿಸಿತು. 2014 ರಲ್ಲಿ ನರೇಂದ್ರಮೋದಿ ಅವರಿಗೆ ಮತ ಹಾಕುವಾಗ ಅವರು ಯಾವ ಪಕ್ಷವೆಂಬುದನ್ನೂ ಜನ ನೋಡಿರಲಿಲ್ಲ. ಆತ ಕೂಡ ಜನರ ಆಶೋತ್ತರಗಳಿಗೆ ತಕ್ಕಂತೆ ನಡೆದುಕೊಂಡರು. ಕೊಟ್ಟ ಮಾತಿನಂತೆ ಒಂದೊಂದನ್ನೇ ಪೂರೈಸುತ್ತಾ ಜನರೆದುರು ಲೆಕ್ಕ ನೀಡುತ್ತಾ ಗೂಳಿಯಂತೆ ನುಗ್ಗುತ್ತಿದ್ದರೆ ಇತ್ತ ಪ್ರತಿಪಕ್ಷಗಳು ಚಡಪಡಿಸಲಾರಂಭಿಸಿದವು. ನೈತಿಕವಾಗಿ ಗಟ್ಟಿ ಇದ್ದವನ ಮತ್ತು ಆಂತರ್ಯದಲ್ಲೂ ಪ್ರಾಮಾಣಿಕತೆ ಇದ್ದವನ ಎದುರಿಸುವುದು ಸುಲಭವಲ್ಲವೆಂದು ನೆಹರೂ ಪ್ರಣೀತ ಕಾಂಗ್ರೆಸ್ಸಿಗೆ ಅರ್ಥವಾಗಲಿಕ್ಕೆ ನರೇಂದ್ರಮೋದಿ ಅವರೇ ಪ್ರಧಾನಿಯಾಗಬೇಕಾಗಿತ್ತು!

12 ವರ್ಷಗಳ ಕಾಲ ಗುಜರಾತಿನಲ್ಲಿ ಮುಖ್ಯಮಂತ್ರಿಯಾಗಿದ್ದುಕೊಂಡು ಕಾಂಗ್ರೆಸ್ಸಿನ ಎಲ್ಲ ಪಟ್ಟುಗಳನ್ನು ಅರಿತಿದ್ದ ಈ ಪುಣ್ಯಾತ್ಮನಿಗೆ ಪ್ರಧಾನಮಂತ್ರಿಯಾದಾಗ ಕಾಂಗ್ರೆಸ್ಸು ಎಸೆದ ಯಾವ ಬಾಣಗಳೂ ತಾಕಲೇ ಇಲ್ಲ. ಪ್ರತೀ ಬಾಣಕ್ಕೂ ಆತ ಪ್ರತಿಬಾಣವನ್ನು ಸಿದ್ಧ ಮಾಡಿಕೊಂಡೇ ಇದ್ದ. ರಾಜ್ಯ-ರಾಜ್ಯಗಳನ್ನೇ ಮೋದಿ ಭಾಜಪದ ತೆಕ್ಕೆಗೆ ಒಪ್ಪಿಸುತ್ತಾ ಕಾಂಗ್ರೆಸ್ಸನ್ನು ಪ್ರಾದೇಶಿಕ ಪಕ್ಷದ ಮಟ್ಟಕ್ಕೆ ಇಳಿಸುತ್ತಾ ವೇಗವಾಗಿ ಬೆಳೆಯುತ್ತಿರುವಾಗ ಅವರನ್ನು ತಡೆಯಲು ಭಿನ್ನ-ಭಿನ್ನ ಮಾರ್ಗಗಳನ್ನು ಅನುಸರಿಸಿ ಸೋತ ಕಾಂಗ್ರೆಸ್ಸು ಕೊನೆಗೆ ಬಂದು ಆತುಕೊಂಡಿದ್ದು ಅವಿಶ್ವಾಸ ಗೊತ್ತುವಳಿ ನಿರ್ಣಯಕ್ಕೆ!

7

ಈ ಅವಿಶ್ವಾಸ ನಿರ್ಣಯದ ಆಲೋಚನೆ ಅದ್ಯಾರಿಗೆ ಮೊದಲು ಬಂತೋ ದೇವರೇ ಬಲ್ಲ. ಆದರೆ ಇಂಥದ್ದೊಂದು ಕಾಂಗ್ರೆಸ್ಸು ನಿನರ್ಾಮ ಮಾಡುವ ಆಲೋಚನೆಯನ್ನು ಕೊಟ್ಟವರನ್ನು ಕಾಂಗ್ರೆಸ್ಸಿನಿಂದ ಹೊರದಬ್ಬುವುದೇ ಒಳಿತು. ಹಾಗೆ ಸುಮ್ಮನೆ ಆಲೋಚಿಸಿ ಅವಿಶ್ವಾಸ ನಿರ್ಣಯವನ್ನು ಗೆಲ್ಲುವಷ್ಟು ಲೋಕಸಭಾ ಸದಸ್ಯರ ಸಂಖ್ಯೆ ಕಾಂಗ್ರಸ್ಸಿನ ಬಳಿ ಇರಲಿಲ್ಲ. ತೀರಾ ಇತ್ತೀಚೆಗೆ ಕನರ್ಾಟಕದ ಚುನಾವಣೆಯಲ್ಲಿ ಗೆದ್ದೇ ಗೆಲ್ಲುವ ಭಾವನೆಯೊಂದಿಗೆ ಧುಮುಕಿದ ಕಾಂಗ್ರೆಸ್ಸು ಸೋತು ಸುಣ್ಣವಾಗಿದ್ದು ಅದಕ್ಕೆ ದೇಶಾದ್ಯಂತ ಜನ ಬೆಂಬಲವೂ ಇರಲಿಲ್ಲ. ಇನ್ನು ಆಳುವ ಪಕ್ಷದ ವಿರುದ್ಧ ಗಂಭೀರವಾದ ಆರೋಪಗಳೂ ಅವರ ಬಳಿ ಇರಲಿಲ್ಲ. ಇಷ್ಟಿದ್ದರೂ ಸೋನಿಯಾ ಅವಿಶ್ವಾಸ ಗೊತ್ತುವಳಿಯನ್ನು ಬೆಂಬಲಿಸಿ ‘ನಮ್ಮ ಬಳಿ ಸಂಖ್ಯೆಯಿದೆ’ ಎಂದು ಹೇಳಿದ್ದರಲ್ಲಿ ಖಂಡಿತವಾಗಿಯೂ ಷಡ್ಯಂತ್ರ ಅಡಗಿತ್ತು. ಕನರ್ಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿಯ ಪ್ರಮಾಣವಚನಕ್ಕೆ ಆಗಮಿಸಿದ್ದ ಸೋನಿಯಾ ಮಹಾಘಟಬಂಧನಕ್ಕೆ ಮುನ್ನುಡಿಯೇನೋ ಬರೆದಿದ್ದರು. ಆದರೆ ಅದರ ನಾಯಕತ್ವ ವಹಿಸಬಲ್ಲ ಸಾಮಥ್ರ್ಯ ರಾಹುಲ್ಗಿದೆ ಎಂಬುದನ್ನು ಎಲ್ಲರಿಗೂ ಒಪ್ಪಿಸುವಲ್ಲಿ ಸೋತು ಹೋಗಿದ್ದರು. ಅದಕ್ಕೆ ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದು ಕಾಂಗ್ರೆಸ್ಸಿನ ವಾರ್ ರೂಮಿನ ಪಂಡಿತರು ನಿಶ್ಚಯಿಸಿಬಿಟ್ಟಿದ್ದರು. ಈ ವಾರ್ ರೂಮಿನ ಸದಸ್ಯರು ಯಾರ್ಯಾರು ಎಂಬುದನ್ನು ಅನುಮಾನಿಸಲು ಬಹಳ ಸಾಹಸ ಮಾಡಬೇಕಿಲ್ಲ. ಅವಿಶ್ವಾಸ ನಿರ್ಣಯದ ವೇಳೆ ರಾಹುಲ್ನ ಅತ್ಯಂತ ಕೆಟ್ಟ 50 ನಿಮಿಷಗಳ ಭಾಷಣವನ್ನು ಮತ್ತು ಆತ ಪ್ರಧಾನಮಂತ್ರಿಯವರಿಗೆ ಅಪ್ಪುಗೆ ನೀಡಿದ್ದನ್ನು ಸಮಥರ್ಿಸಿಕೊಂಡವರನ್ನು ಗಮನಿಸಿದರೆ ಸಾಕು. ಪತ್ರಕರ್ತ ನಿಖಿಲ್ ವಾಗ್ಲೆ ‘ಆಕ್ರಮಣಕಾರಿ ಭಾಷಣದಿಂದ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ ರಾಹುಲ್, ಮೋದಿಯ ಬಂಡವಾಳವನ್ನು ಮತ್ತು ರಫೆಲ್ ಡೀಲಿನಲ್ಲಿ ಅವರ ಕೈವಾಡವನ್ನು ಬಯಲಿಗೆಳೆದಿದ್ದಾರೆ. ಪತ್ರಿಕೆಗಳಿಗೆ ಶೀಷರ್ಿಕೆ ಸಿಕ್ಕಿರಬೇಕು’ ಎಂದು ಟ್ವೀಟ್ ಮಾಡಿದ್ದಲ್ಲದೇ ‘ಇದುವರೆಗಿನ ರಾಹುಲನ ಅತ್ಯಂತ ಅದ್ಭುತವಾದ ಭಾಷಣವಿದು. ಇದಕ್ಕೆ 10 ಕ್ಕೆ 8 ಅಂಕಗಳನ್ನು ಕೊಡಬಹುದು’ ಎಂದೂ ಹೇಳಿದ್ದರು. ವಾಗ್ಲೆಯ ಟ್ವೀಟ್ ನೊಡುತ್ತಿದ್ದರೆ ಭಾಷಣವನ್ನು ಅವರೇ ಬರೆದುಕೊಟ್ಟಿದ್ದರೆನಿಸುವಂತಿತ್ತು. ಮೋದಿ ವಿರೋಧಿ ಸಾಗರಿಕಾ ಘೋಷ್ ‘ರಾಹುಲ್ನ ಆಕ್ರಮಣಕಾರಿ ಭಾಷಣವನ್ನು ತಡೆದುಕೊಳ್ಳಲಾಗದೇ ವ್ಯಂಗ್ಯಕ್ಕೆ ಮತ್ತು ಕೂಗಾಟಕ್ಕೆ ಬಿಜೆಪಿ ಮೊರೆಹೋಯ್ತು’ ಎಂದು ಟ್ವೀಟ್ ಮಾಡಿದ್ದರು. ಎಚ್ಚರಿಕೆಯಿಂದಲೇ ಹೆಜ್ಜೆಯಿಟ್ಟಿದ್ದ ರಾಜ್ದೀಪ್ ‘ರಾಹುಲನ ಭಾಷಣದಿಂದ ಭೂಕಂಪವೇನೂ ಬರಲಿಲ್ಲ ಆದರೆ ಸದನದಲ್ಲಿ ಅಲುಗಾಟವಂತೂ ಆಗಿದೆ’ ಎಂದಿದ್ದರು. ನಿಧಿ ರಾಜಧಾನ್, ಶ್ರೀನಿವಾಸ್ ಜೈನ್ರೂ ಕೂಡ ಹೀಗೆಯೇ ಟ್ವೀಟ್ ಮಾಡಿದರು. ರಾಹುಲ್ನ ಭಾಷಣ ಮುಗಿಯುತ್ತಿದ್ದಂತೆ ಇವರು ತುದಿಗಾಲಲ್ಲಿ ನಿಂತು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದನ್ನು ನೋಡಿದರೆ ಇವರುಗಳೇ ಸೇರಿ ಭಾಷಣವನ್ನು ಬರೆದುಕೊಟ್ಟು ಮುಂದೇನು ಮಾಡಬೇಕೆಂಬ ಕಿವಿಮಾತನ್ನು ಹೇಳಿದ್ದಿರಬೇಕು. ಹೀಗಾಗಿಯೇ ಭಾಷಣದುದ್ದಕ್ಕೂ ಅನವಶ್ಯಕವಾಗಿ ದನಿಯನ್ನೇರಿಸುತ್ತಿದ್ದ ರಾಹುಲ್ ಪ್ರಬುದ್ಧ ರಾಜಕಾರಣಿಯಂತೂ ಅನಿಸುತ್ತಿರಲಿಲ್ಲ. ಸಕರ್ಾರದ ವಿರುದ್ಧ ತಾನು ಮಾಡಿದ ಒಂದೇ ಒಂದು ಆರೋಪಕ್ಕೂ ಆತ ಪುರಾವೆಗಳನ್ನು ಒದಗಿಸಲಿಲ್ಲ. ರಫೆಲ್ ಡೀಲ್ನ ಕುರಿತಂತೆ ಮಾತನಾಡುತ್ತಾ ಫ್ರಾನ್ಸಿನ ಅಧ್ಯಕ್ಷರನ್ನು ಚಚರ್ೆಯಲ್ಲಿ ಎಳೆದು ತಂದದ್ದು ರಾಹುಲ್ನನ್ನು ಪಪ್ಪು ಎಂದು ಕರೆಯುವುದಕ್ಕೆ ಸಮರ್ಥನೆಯಂತಿತ್ತು! ಸ್ಥಳದಲ್ಲಿಯೇ ರಕ್ಷಣಾ ಸಚಿವೆ ರಾಹುಲ್ಗೆ ಉತ್ತರ ಕೊಟ್ಟಿದ್ದಲ್ಲದೇ ತನ್ನ ಉತ್ತರಕ್ಕೆ ಪುರಾವೆಗಳನ್ನೂ ಒದಗಿಸಿ ಚಕಿತಗೊಳಿಸಿಬಿಟ್ಟರು. ಭಾರತ ಸಕರ್ಾರ ಅದೆಷ್ಟು ತೀವ್ರಗತಿಯಲ್ಲಿ ತನ್ನ ವಿದೇಶಾಂಗ ಇಲಾಖೆಯ ಜಾಲವನ್ನು ಬಳಸಿಕೊಂಡಿತೆಂದರೆ ಮಧ್ಯಾಹ್ನದ ವಿರಾಮ ಕಳೆಯುವುದರೊಳಗೆ ರಾಹುಲ್ನ ಹೇಳಿಕೆಯನ್ನು ಫ್ರಾನ್ಸ್ ತಿರಸ್ಕರಿಸಿ ಪ್ರಕಟಣೆಯನ್ನೇ ಹೊರಡಿಸಿಬಿಟ್ಟಿತು. ಬಹುಶಃ ಪ್ರತಿಪಕ್ಷಗಳಿಗೆ ಇದಕ್ಕಿಂತಲೂ ದೊಡ್ಡ ಮುಖಭಂಗ ಮತ್ತೊಂದಿರಲಿಕ್ಕಿಲ್ಲ.

8

ಇಲ್ಲಿಗೇ ನಿಲ್ಲಿಸದ ರಾಹುಲ್ ಬರೆದು ಕೊಟ್ಟ ಸ್ಕ್ರಿಪ್ಟ್ನಲ್ಲಿದ್ದಂತೆ ಭ್ರಾತೃತ್ವದ, ಪ್ರೇಮದ ಮಾತುಗಳನ್ನಾಡುತ್ತಾ ಪ್ರಧಾನಮಂತ್ರಿಯವರನ್ನು ತಬ್ಬಿಕೊಳ್ಳಲು ಹೊರಟೇ ಬಿಟ್ಟರು. ಕೂತ ಜಾಗದಿಂದ ಅವರನ್ನು ಎಬ್ಬಿಸಲು ಪ್ರಯತ್ನಿಸಿದ ರಾಹುಲ್ ಪ್ರಧಾನಮಂತ್ರಿ ಕುಚರ್ಿಯಿಂದ ಏಳದೇ ಹೋದಾಗ ಬಹಳ ದಿನಗಳ ನಂತರ ಮನೆಯೊಡೆಯನನ್ನು ಕಂಡು ಸಾಕು ಪ್ರಾಣಿಗಳು ಮೈಮೇಲೆ ಬಿದ್ದು ಮುತ್ತು ಕೊಡುವಂತೆ ಪ್ರಧಾನಮಂತ್ರಿಯ ಮೈಮೇಲೆ ಬಿದ್ದರು. ಈ ಒಟ್ಟಾರೆ ಘಟನೆಯಿಂದ ಒಂದು ಕ್ಷಣ ವಿಚಲಿತರಾದಂತೆ ಕಂಡ ಮೋದಿ ಮರಳಿ ಹೊರಟಿದ್ದ ರಾಹುಲ್ನನ್ನು ಮತ್ತೆ ಕರೆದು ಒಂದಷ್ಟು ಕಿವಿಮಾತು ಹೇಳಿ ಬೆನ್ತಟ್ಟಿ ಕಳುಹಿಸಿದರು. ಬಹುಶಃ ಅಲ್ಲಿಗೇ ಮುಗಿದಿದ್ದರೆ ರಾಹುಲ್ನ ಈ ವರ್ತನೆ ಇದೇ ಆಸ್ಥಾನ ನರ್ತಕಿಯಂತಿರುವ ಪತ್ರಕರ್ತರ ಮೂಲಕ ಗೌರವದ ಗುಣಗಾನವಾಗಿ ಮಾರ್ಪಟ್ಟುಬಿಟ್ಟಿರುತ್ತಿತ್ತು. ರಾಹುಲ್ ತಮ್ಮ ಸೀಟಿಗೆ ಮರಳಿ ತಮ್ಮ ಗುರು ವೇಣುಗೋಪಾಲರತ್ತ ತಿರುಗಿ ಕಣ್ಣು ಹೊಡೆದು ಹೇಳಿಕೊಟ್ಟಿದ್ದನ್ನು ಸರಿಯಾಗಿ ನಿರ್ವಹಿಸಿದ್ದೇನೆ ಎಂಬಂತೆ ನಟನೆ ಮಾಡಿದರು. ಈ ದೃಶ್ಯ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ರಾಹುಲನ ಬಂಡವಾಳ ಬಯಲಾಯ್ತು. ಸ್ವತಃ ಸ್ಪೀಕರ್ ತರಾಟೆಗೆ ತೆಗೆದುಕೊಂಡರು. ಈ ಹೊತ್ತಲ್ಲೂ ಆರ್ಜೆಡಿಯ ನಾಯಕ ತೇಜಸ್ವಿ ಯಾದವ್ ರಾಹುಲ್ನ ಬೆನ್ತಟ್ಟಿ ‘ಓ ಮಿತ್ರ, ಕಣ್ಣು ಹೊಡೆದದ್ದು ಬಹಳ ಚೆನ್ನಾಗಿತ್ತು. ಬಿಜೆಪಿಗೆ ಎಲ್ಲಿ ಹೊಡೆತ ಬೀಳಬೇಕೋ ಅಲ್ಲಿಯೇ ಬಿದ್ದಿದೆ’ ಎಂದು ಟ್ವೀಟ್ ಮಾಡಿದ. ಒಮರ್ ಅಬ್ದುಲ್ಲಾ, ಶಶಿ ತರೂರ್ರಂಥವರು ಅಪ್ಪುಗೆಗೆ ಕಾಯುತ್ತಿದ್ದವರಂತೆ ಆಗಿಂದಾಗ್ಯೆ ಟ್ವೀಟ್ ಮಾಡಿ ಒಟ್ಟಾರೆ ಮನದಿಂಗಿತವನ್ನು ವ್ಯಕ್ತಪಡಿಸಿಬಿಟ್ಟರು. ನಡೆದುದ್ದೆಲ್ಲದಕ್ಕೂ ಒಂದು ಪೂರ್ವ ನಿಯೋಜಿತ ಆಲೋಚನೆ ಇದ್ದೇ ಇತ್ತು ಎಂಬುದಕ್ಕೆ ಹಿಂದಿನ ಎರಡು ದಿನಗಳಲ್ಲಿ ಇದೇ ಪಾಳಯ ಟ್ವಿಟರ್ನಲ್ಲಿ ‘ಟಾಕ್ ಟು ಅ ಮುಸ್ಲಿಂ’ ಎಂಬ ಟ್ರೆಂಡ್ ಸೃಷ್ಟಿಸಿ ದ್ವೇಷವಲ್ಲ ಪ್ರೀತಿ ಬೇಕು ಎಂದು ಹೇಳುವ ಪ್ರಯತ್ನ ಮಾಡಿತ್ತು. ಅವಿಶ್ವಾಸ ಗೊತ್ತುವಳಿಯಲ್ಲಿ ಸೋಲುತ್ತೇವೆಂದು ಗೊತ್ತಿದ್ದರೂ ಅದನ್ನೊಂದು ಜಾಗತಿಕ ಸುದ್ದಿ ಮಾಡಿ ರಾಹುಲ್ನ ಅಪ್ಪುಗೆಯನ್ನು ದೇಶ ಮತ್ತು ಜಗತ್ತು ನೋಡುವಂತೆ ಮಾಡಬೇಕಾಗಿದ್ದುದು ವಾರ್ ರೂಮಿನ ಪಂಡಿತರಿಗೆ ಅಗತ್ಯವಾಗಿತ್ತು. ತಯಾರಿ ಎಷ್ಟಿತ್ತೆಂದರೆ ರಾಹುಲ್ ತಬ್ಬಿಕೊಂಡ ಕೆಲ ಹೊತ್ತಿನಲ್ಲೇ ಬಿಬಿಸಿ ಈ ವರದಿಯನ್ನು ಪ್ರಕಟಿಸಿ ‘ರಾಹುಲನ ಅಪ್ಪ್ಪುಗೆಯಿಂದ ಮೋದಿಗೆ ನಡುಕ’ ಎಂಬ ಶೀಷರ್ಿಕೆಯನ್ನೂ ಕೊಟ್ಟುಬಿಟ್ಟಿತು. ಆದರೆ ದೇವರೂ ನರೇಂದ್ರಮೋದಿಯವರೊಂದಿಗಿದ್ದ. ಹೀಗಾಗಿ ಕಣ್ಣು ಮಿಟುಕಿಸಿ ರಾಹುಲ್ ಅವಿಶ್ವಾಸ ಗೊತ್ತುವಳಿಯಲ್ಲಿ ಸೋತ. ಮಹಾಘಟಬಂಧನದ ವಿಶ್ವಾಸ ಪಡೆಯುವಲ್ಲಿ ಸೋತ. ತಾನು ನಾಯಕನೆಂದು ಜನರಲ್ಲಿ ನಂಬಿಕೆ ಮೂಡಿಸುವಲ್ಲಿ ಸೋತ. ಕೊನೆಗೆ ತನ್ನ ನಂಬಿದವರ ಮುನ್ನಡೆಸುವ ಸಾಮಥ್ರ್ಯವಿದೆ ಎಂಬುದರಲ್ಲಿಯೂ ಕೂಡ ಸೋತು ಹೋದ.

ಎಂದಿನಂತೆ ರಾಹುಲ್ಗೆ ದಕ್ಕಿರುವುದು ನೈತಿಕ ವಿಜಯ ಮಾತ್ರ! ಈಗ ಕಾಂಗ್ರೆಸ್ಸು 2019 ರ ಮತ್ತೊಂದು ನೈತಿಕ ವಿಜಯಕ್ಕಾಗಿ ತಯಾರಿ ನಡೆಸಬೇಕಿದೆ ಅಷ್ಟೇ.

Comments are closed.