ಹೋಯ್ತು ಪಿಶಾಚಿ ಅಂದ್ರೆ ಬಂತು ಗವಾಕ್ಷೀಲಿ!
ಅಮೇರಿಕಾದಲ್ಲಿ ಅದಾಗಲೇ ಎಲ್ಲಾ ಲೆಕ್ಕಾಚಾರವನ್ನೂ ಮೀರಿದ ಭಯಾನಕ ಸಾವು-ನೋವುಗಳಾಗಿವೆ. ಅಮೇರಿಕಾದಲ್ಲಿ 2017-18ರಲ್ಲಿ ನ್ಯುಮೋನಿಯಾ ಕಾರಣಕ್ಕೆ 10ಲಕ್ಷ ಜನರಿಗೆ 20 ರಿಂದ 25 ಜನ ಸಾವನ್ನಪ್ಪಿದರೆ ಕೊರೊನಾ ಅವೆಲ್ಲದರ ದಾಖಲೆಯನ್ನು ಮೀರಿಸಿ, ಅದಾಗಲೇ ಸರಾಸರಿ 40ರ ಬಲಿಯನ್ನು ಪಡೆಯುತ್ತಿದೆ. ಇದು ಅದಾಗಲೇ ಅಲ್ಲಿ ಹೃದ್ರೋಗಕ್ಕೆ ಸಾಯುವವರ ಸಂಖ್ಯೆಯನ್ನು ದಾಟಿ ದಾಪುಗಾಲಿಡುತ್ತಿದೆ. ಇದು ಯಾವುದೇ ಮುನ್ಸೂಚನೆಯನ್ನು ಗಣಿಸದಿದ್ದುದರ ಪರಿಣಾಮ.
ಕೊರೋನಾ, ಕೊರೋನಾ, ಕೊರೋನಾ.. ಇನ್ನು ಎಷ್ಟು ದಿನ ಇದರ ಬಗ್ಗೆನೇ ಮಾತಾಡ್ಬೇಕು, ಕೇಳ್ಬೇಕು, ನೋಡ್ಬೇಕು, ಬರಿಬೇಕು! ನನಗೆ ಗೊತ್ತು, ಪ್ರತಿಯೊಬ್ಬರಿಗೂ ಸಾಕಾಗಿಹೋಗಿದೆ. ಮನೆಯೊಳಗೆ ಧ್ಯಾನ-ಜಪ-ತಪ ಮಾಡಿಕೊಂಡಿದ್ದರೂ ದಿನಕ್ಕೊಮ್ಮೆಯಾದರೂ ಕೊರೋನಾ ಬಗ್ಗೆ ಆಲೋಚಿಸದೇ ಸಮಯ ಮುಂದಕ್ಕೆ ಹೋಗೋದೇ ಇಲ್ಲ. ನಿನ್ನೆ 10,000 ಅಂತೆ, ಇವತ್ತಾಗಲೇ 11 ದಾಟಿತು, ಹದಿನೈದನ್ನ ಮುಟ್ಟೇ ಬಿಟ್ವಲ್ಲೋ. ಬೆಳಗಾವಿಯಲ್ಲಿ 40 ಅಂತೆ. ಮುಂಬೈ ಭಾಳ ಆಯ್ತಂತೆ.. ಈ ಥರದ ಮಾತುಗಳು ಅತ್ಯಂತ ಸಾಮಾನ್ಯರೂ ಆಡುವಂತಾಗಿದೆ. ಬಹುಶಃ ನಮ್ಮ ಕಾಲಘಟ್ಟದಲ್ಲಿ ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತ ಕೊರೋನಾಗಿಂತ ಮತ್ತೊಬ್ಬ ಸೆಲೆಬ್ರಿಟಿ ಇರಲು ಸಾಧ್ಯವೇ ಇಲ್ಲ. ಅಮೇರಿಕಾದ ಶ್ವೇತಭವನದಿಂದ ಹಿಡಿದು ಆಫ್ರಿಕಾದ ಕಾಡುಗಳವರೆಗೆ, ಚೀನಾದ ಕಮ್ಯುನಿಸ್ಟ್ ಪಾಟರ್ಿಯ ಭದ್ರವಾದ ಕೋಣೆಗಳಿಂದ ಶುರುಮಾಡಿ ಭಾರತದ ಹೊಲದಲ್ಲಿ ದುಡಿಯುತ್ತಿರುವ ರೈತನವರೆಗೆ ಕೊರೋನಾ ಗೊತ್ತಿಲ್ಲದವರೇ ಇಲ್ಲ. ಇಡೀ ಜಗತ್ತನ್ನು ಅಲುಗಾಡದಂತೆ ಶಾಂತಸ್ಥಿತಿಗೆ ಒಂದು ವೈರಸ್ ಒಯ್ಯಿತಲ್ಲಾ ಎಂಬುದು ಮುಂದಿನ ಅನೇಕ ದಶಕಗಳ ಕಾಲ ಮನುಕುಲಕ್ಕೆ ಪಾಠವಾಗಿರಲಿದೆ ಅಥವಾ ಈ ರೀತಿಯ ಅನೇಕ ವೈರಸ್ಸುಗಳಿಗೆ ಇದು ಮುನ್ನುಡಿಯಾ ಎಂಬುದನ್ನೂ ಕಾದು ನೋಡಬೇಕಿದೆ. ಹಾಗೇನಾದರೂ ಆದರೆ ಮಾನವ ನಿಸ್ಸಂಶಯವಾಗಿ ತನ್ನ ಹಳೆಯ ಯುಗಕ್ಕೆ ಮರಳುವುದರಲ್ಲಿ ಅಚ್ಚರಿಯಿಲ್ಲ!
ಇತ್ತೀಚೆಗೆ ರಾಹುಲ್ ಪತ್ರಕರ್ತರ ಮುಂದೆ ಬಂದು ಕೊರೋನಾ ಕುರಿತಂತೆ ಸಾಕಷ್ಟು ಮಾತಾಡಿ ಹೋಗಿದ್ದಾರೆ. ಕಾಂಗ್ರೆಸ್ಸಿನ ದುರದೃಷ್ಟವೇ ಸರಿ. ಅನೇಕ ಬುದ್ಧಿವಂತರ ನಡುವೆ ನಾಯಕತ್ವ ವಹಿಸಲು ಅದಕ್ಕೆ ಸಿಕ್ಕಿರೋದು ರಾಹುಲ್ ಮಾತ್ರ. ಏಕೆಂದರೆ ಆತ ಹೇಳಿದ ವಿಚಾರಗಳನ್ನು ತಯಾರು ಮಾಡುವಲ್ಲಿ ಅನೇಕರು ಸೇರಿದ್ದರೆಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆದರೆ ಅದನ್ನು ಪ್ರಸ್ತುತ ಪಡಿಸುವಲ್ಲಿ ರಾಹುಲ್ ಎಡವಿ, ಜಾರಿ, ಕುಸಿದು ಬಿದ್ದದ್ದು ಮಾತ್ರ ಎಂಥವರಿಗೂ ಅರಿವಾಗುವಂಥದ್ದು! ರಾಹುಲ್ಗೆ ಸಂಬಂಧಪಟ್ಟ ಎಲ್ಲವನ್ನೂ ಆಡಿಕೊಳ್ಳುವ ನಮಗೆ ಆತ ಹೇಳಿದ ಒಂದಷ್ಟು ವಿಚಾರಗಳನ್ನು ಮರುಪರಿಶೀಲಿಸಬೇಕಾದ ಅಗತ್ಯವಂತೂ ಖಂಡಿತ ಇದೆ. ಅದರಲ್ಲಿ ಅತ್ಯಂತ ಪ್ರಮುಖವೆನಿಸುವಂಥದ್ದು ‘ಕೊರೋನಾ ತಡೆಗೆ ಲಾಕ್ಡೌನ್ ಪರಿಹಾರವೇ?’ ಎಂಬುದು. ನಿಜಕ್ಕೂ ಯೋಚಿಸಲೇಬೇಕಾದ ಸಂಗತಿ. ಕೊರೋನಾ ಅಥವಾ ಯಾವುದೇ ವೈರಸ್ಗಳು ಸಾಯುವುದು ಎನ್ನುವ ಪ್ರಶ್ನೆಯೇ ಇಲ್ಲ. ಕಾಲ ಪಕ್ವವಾದಾಗ ತನ್ನ ಸಾಮಥ್ರ್ಯವನ್ನು ಅದು ತೋರುತ್ತದೆ. ಅಲ್ಲಿಯವರೆಗೂ ವಾತಾವರಣದಲ್ಲಿ ಶಾಂತಸ್ಥಿತಿಯಲ್ಲೇ ಇರುತ್ತದೆ. ಕೊರೋನಾವೂ ಹಾಗೆಯೇ. ಎಷ್ಟು ದಿನ ಅದರ ತೆಕ್ಕೆಗೆ ನಾವು ಸಿಗುವುದಿಲ್ಲವೋ ಅಷ್ಟು ದಿನ ಅದು ಹಾಗೆಯೇ ಇರುತ್ತದೆ. ನಾವು ಅದರ ಕೈಗೆ ಸಿಕ್ಕೊಡನೆ ನಮ್ಮನ್ನು ನುಂಗುವ ತನ್ನ ಕೆಲಸ ಆರಂಭಿಸಿಬಿಡುತ್ತದೆ. ಹೀಗಾಗಿ ಲಾಕ್ಡೌನ್ ಅನ್ನು 6 ತಿಂಗಳುಗಳ ಕಾಲ ಮುಂದುವರೆಸಿದರೂ ಅದಾದ ಮರುದಿನವೇ ಲಾಕ್ಡೌನ್ ತೆರೆದುಕೊಂಡಾಗ ನಿಧಾನವಾಗಿ ಇದು ಮತ್ತೆ ಹರಡಲಾರಂಭಿಸುತ್ತದೆ. ಜಗತ್ತಿನ ಅನೇಕ ರಾಷ್ಟ್ರಗಳ ಉದಾಹರಣೆ ಇದಕ್ಕಿದೆ. ಮಾಚರ್್ ತಿಂಗಳಲ್ಲಿ ಸಿಂಗಾಪುರ ಕೊರೋನಾ ವಿಚಾರದಲ್ಲಿ ಪ್ರಭುತ್ವವನ್ನು ಮೆರೆದು ಅದನ್ನು ತನ್ನ ತೀರದಿಂದ ಆಚೆ ಇಡುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿಕೊಂಡಿತ್ತು. ಅರೆ ಲಾಕ್ಡೌನ್ಗೆ ಮನಸ್ಸು ಮಾಡಿ ಭಾರತದವರು ಮಾಡುತ್ತಿರುವಂತೆಯೇ ಕೊರೋನಾ ಪೀಡಿತರನ್ನು ಗುರುತಿಸಿ ಅವರಿಂದ ಹಬ್ಬಿರಬಹುದಾದವರನ್ನು ಪರೀಕ್ಷಿಸುವ ಕೆಲಸ ಮಾಡುತ್ತಲೇ ಹೋಯ್ತು. ಜಗತ್ತೆಲ್ಲಾ ಸಿಂಗಾಪುರದ ಕ್ರಮವನ್ನು ಹೆಮ್ಮೆಯಿಂದ ಹೊಗಳಿತ್ತು. ನಮ್ಮಲ್ಲೂ ಕೆಲವರು ಅದೇ ರಾಷ್ಟ್ರದ ಮಾದರಿಯನ್ನು ನಾವೂ ಅನುಸರಿಸಬೇಕಿತ್ತು ಎಂಬ ಸಲಹೆ ಕೊಡುವುದು ಮರೆಯಲಿಲ್ಲ. ಆದರೇನು?! ಏಪ್ರಿಲ್ ತಿಂಗಳಲ್ಲಿ ಸಿಂಗಾಪುರದ ವಲಸಿಗರು ಹೆಚ್ಚಾಗಿ ವಾಸಿಸುವ ಸ್ಥಳವೊಂದರ ಸೂಪರ್ ಮಾಕರ್ೆಟು ಈ ಚೀನಾ ವೈರಸ್ನ ಕೇಂದ್ರವಾಗಿ ಪರಿಣಮಿಸಿತು. ಮುಸ್ತಫಾ ಸೆಂಟರ್ಗೆ ಬಂದ ಜನ ಅಲ್ಲಿಂದ ರೋಗವನ್ನು ತಮ್ಮ-ತಮ್ಮ ಅಪಾಟರ್್ಮೆಂಟ್ಗಳಿಗೆ, ಬಂಧು-ಮಿತ್ರರಿಗೆ ಒಯ್ದರು. ಪರಿಣಾಮ ಏಕಾಕಿ ಅಲ್ಲಿ ಕೊರೋನಾ ಪೀಡಿತರ ಸಂಖ್ಯೆ ಹಿಂದೆಂದೂ ಕಾಣದಷ್ಟು ಮುಗಿಲುಮುಟ್ಟಿತು. ಒಂದೇ ದಿನಕ್ಕೆ 728 ಹೊಸ ಕೇಸುಗಳು ದಾಖಲಾದವು! ಮರು ಮಾತಾಡದೇ ಸಿಂಗಾಪುರ ಒಂದಿಡೀ ಪ್ರದೇಶವನ್ನೇ ಸೀಲ್ಡೌನ್ ಮಾಡಿತು. ಆ ಮೂಲಕ ಸ್ಥಳೀಯರು ಅಲ್ಲಿಗೆ ಹೋಗದಂತೆ ತಡೆಯಿತು. ವಲಸಿಗರೇ ಇರುವಂತಹ ಆ ಜಾಗದಲ್ಲಿ ಊಟ-ತಿಂಡಿ ಉಚಿತವಾಗಿ ಪೂರೈಕೆ ಮಾಡಿತು. ಅವರ ಸಂಬಳಕ್ಕೂ ಕೊರತೆ ಮಾಡಲಿಲ್ಲ. ಹಾಗಂತ ಅಲ್ಲಿಗೇ ಸುಮ್ಮನಾಗದೇ ಸಾರ್ವಜನಿಕವಾಗಿ ಮಾಸ್ಕ್ ಹಾಕದವರಿಗೆ 300 ಡಾಲರ್ ದಂಡವನ್ನು ವಿಧಿಸಿತು. ಮಾಸ್ಕ್ ಧರಿಸದೇ ಎರಡನೇ ಬಾರಿ ಸಿಕ್ಕಿಬಿದ್ದರೆ ಜೈಲಿಗೇ ಅಟ್ಟುವ ಕಾನೂನು ತಂದಿತು!
ಚೀನಾದ ಕಥೆಯೂ ಇದಕ್ಕಿಂತ ಭಿನ್ನವಲ್ಲ. ವುಹಾನ್ ಕೇಂದ್ರವಾಗಿರಿಸಿಕೊಂಡು ಹಬ್ಬಿದ ಈ ವೈರಸ್ಸು ತಾನು ಗೆದ್ದೆ ಎಂದು ರಾಷ್ಟ್ರ ಹೇಳಿಕೊಂಡ ಕೆಲವೇ ದಿನಗಳಲ್ಲಿ ಮತ್ತೆ ಆಕ್ರಮಿಸಲು ಶುರುಮಾಡಿತು. ಸಾವುಗಳೂ ಕೂಡ ಅಷ್ಟೇ ಪ್ರಮಾಣದಲ್ಲಿ ಮತ್ತೆ ನೃತ್ಯ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಹಾಗಂತ ಲಾಕ್ಡೌನ್ ಮಾಡಲೇಬಾರದಾ? ಅದರ ಪರಿಣಾಮ ಏನಾಗುವುದೆಂಬುದಕ್ಕೆ ಅಮೇರಿಕಾವೇ ಉದಾಹರಣೆ! ಅಮೇರಿಕಾದಲ್ಲಿ ಅದಾಗಲೇ ಎಲ್ಲಾ ಲೆಕ್ಕಾಚಾರವನ್ನೂ ಮೀರಿದ ಭಯಾನಕ ಸಾವು-ನೋವುಗಳಾಗಿವೆ. ಅಮೇರಿಕಾದಲ್ಲಿ 2017-18ರಲ್ಲಿ ನ್ಯುಮೋನಿಯಾ ಕಾರಣಕ್ಕೆ 10ಲಕ್ಷ ಜನರಿಗೆ 20 ರಿಂದ 25 ಜನ ಸಾವನ್ನಪ್ಪಿದರೆ ಕೊರೊನಾ ಅವೆಲ್ಲದರ ದಾಖಲೆಯನ್ನು ಮೀರಿಸಿ, ಅದಾಗಲೇ ಸರಾಸರಿ 40ರ ಬಲಿಯನ್ನು ಪಡೆಯುತ್ತಿದೆ. ಇದು ಅದಾಗಲೇ ಅಲ್ಲಿ ಹೃದ್ರೋಗಕ್ಕೆ ಸಾಯುವವರ ಸಂಖ್ಯೆಯನ್ನು ದಾಟಿ ದಾಪುಗಾಲಿಡುತ್ತಿದೆ. ಇದು ಯಾವುದೇ ಮುನ್ಸೂಚನೆಯನ್ನು ಗಣಿಸದಿದ್ದುದರ ಪರಿಣಾಮ. ಅಥವಾ ಸಮಯಕ್ಕೆ ತಕ್ಕಂತೆ ಲಾಕ್ಡೌನ್ ಹೇರದ ಕಾರಣಕ್ಕೆ ಜನ ಅನುಭವಿಸಬೇಕಾಗಿರುವಂಥದ್ದು. ಇಂಗ್ಲೆಂಡೂ ಕೂಡ ಲಾಕ್ಡೌನ್ ಮಾಡಲು ಹಿಂಜರಿದುದರ ಪರಿಣಾಮವಾಗಿ ಸಾಕಷ್ಟು ಸಾವು-ನೋವುಗಳನ್ನು ಅನುಭವಿಸಬೇಕಾಯ್ತು. ಇಟಲಿ, ಸ್ಪೇನ್, ಜರ್ಮನಿಗಳ ಕಥೆಯೂ ಅದೇ. ಜರ್ಮನಿಯಲ್ಲಂತೂ ಪ್ರಧಾನಿಯ ಮಾತಿಗೆ ಕವಡೆ ಕಿಮ್ಮತ್ತಿಲ್ಲದಂತೆ ಜನ ಅಡ್ಡಾಡಿಕೊಂಡೇ ಇದ್ದರಂತೆ! ಭಾರತದಲ್ಲಿ ಹಾಗಾಗಲಿಲ್ಲ. ಚೀನಾದ ರೋಗ ಹಬ್ಬುವಿಕೆಯಿಂದ ಪಾಠ ಕಲಿತಿದ್ದ ಭಾರತ ಬಲುಬೇಗ ತನ್ನ ತಾನು ಲಾಕ್ಡೌನ್ ಮಾಡಿಕೊಂಡಿತು. ಇತರೆಲ್ಲ ದೇಶಗಳಿಗಿಂತಲೂ ಲಾಕ್ಡೌನ್ ಮಾಡಿಕೊಳ್ಳಲು ಅತ್ಯಂತ ಕಷ್ಟವಾಗಿರುವ ದೇಶ ನಮ್ಮದ್ದೇ. 130ಕೋಟಿ ಜನಸಂಖ್ಯೆ, ಹಲವು ಮತ-ಪಂಥಗಳು, ಲೆಕ್ಕವಿಲ್ಲದಷ್ಟು ಭಾಷೆಗಳು, ವಿಭಿನ್ನ ಜನಜೀವನ-ಸಂಸ್ಕೃತಿ, ಬಡತನ ರೇಖೆಯ ಕೆಳಗಿರುವಂತಹ ಕೋಟ್ಯಂತರ ಜನ, ಆಥರ್ಿಕತೆಯನ್ನು 5 ಟ್ರಿಲಿಯನ್ಗೇರಿಸಬೇಕೆಂದು ಕಾತರಿಸುತ್ತಿರುವ ಉದ್ಯಮಿಗಳು ಮತ್ತು ಸಕರ್ಾರ. ಇವೆಲ್ಲವೂ ಈ ದೇಶಕ್ಕೆ ಲಾಕ್ಡೌನ್ ಹಾಕುವುದನ್ನು ತಡೆಯಲು ಸಾಕಷ್ಟು ಕಾರಣಗಳಾಗಿದ್ದವು. ದೇಶದ ಜನರ ಬದುಕನ್ನು ಎಲ್ಲದಕ್ಕಿಂತ ದೊಡ್ಡದೆಂದು ಗಣಿಸಿದ ನಾಯಕ ಮುಲಾಜಿಲ್ಲದೇ ಲಾಕ್ಡೌನ್ ಹೇರಿಬಿಟ್ಟಿದ್ದರ ಪರಿಣಾಮವಾಗಿ ನಾವಿಂದು ನೆಮ್ಮದಿಯಿಂದ ಇದ್ದೇವೆ. ಅನೇಕ ಬಾರಿ ಈ ಚೀನಾ ವೈರಸ್ನ ಕುರಿತಂತೆ ಜಾಗತಿಕ ಚಚರ್ೆಗಳು ನಡೆಯುವಾಗ ಪಟ್ಟಿಯಲ್ಲಿ ಭಾರತದ ಹೆಸರೂ ಉಲ್ಲೇಖವಾಗುವುದಿಲ್ಲ. ಏಕೆಂದರೆ ಅಷ್ಟು ಕಡಿಮೆ ಸಂಖ್ಯೆಯ ರೋಗಿಗಳನ್ನು ಭಾರತ ಹೊಂದಿದೆ. ಆದರೆ, ಈ ಲಾಕ್ಡೌನ್ ಅನ್ನು ತೆರೆಯುವ ಪ್ರಯತ್ನ ಮಾಡಲಿಲ್ಲವೆಂದರೆ ಬರು-ಬರುತ್ತಾ ಕಾಲವೂ ಭಯಂಕರವಾಗಲಿದೆ. ಉದ್ಯೋಗಗಳು ನಷ್ಟವಾಗುತ್ತವೆ, ಉದ್ದಿಮೆಗಳು ಹೊಸ ಸವಾಲಿಗೆ ಎದೆಯೊಡ್ಡಲು ಹೆದರಿಕೊಳ್ಳುತ್ತವೆ, ಈ ಸಂದರ್ಭಕ್ಕೋಸ್ಕರವೇ ಕಾಯುತ್ತಿರುವ ಕಮ್ಯುನಿಸ್ಟರು ತಮ್ಮ ಕಾಮರ್ಿಕ ಸಂಘಟನೆಗಳ ಮೂಲಕ ಬೆಂಕಿ ಹಚ್ಚಲೂ ಯತ್ನಿಸುತ್ತವೆ. ಹೀಗಾಗಿ ಬಹಳ ಕಾಲ ಲಾಕ್ಡೌನ್ ಮುಂದುವರೆಸುವುದು ಸಾಧ್ಯವೇ ಇಲ್ಲ. ಅದನ್ನು ಕೊನೆಗಾಣಿಸಿ ದೇವರ ಮೇಲೆ ಭಾರ ಹಾಕಿ ಲಾಕ್ಡೌನ್ ತೆರೆದೇ ಬಿಡಬೇಕು. ಆದರೆ ಆಗಲೂ ಸಮಾಜದಲ್ಲಿ ವ್ಯವಹಾರ ಮಾಡುವಾಗ ಮಾಸ್ಕ್ ಧರಿಸುವುದನ್ನು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯದೇ ಹೋದರೆ ನಮ್ಮ ಕೆಲಸವನ್ನೂ ಮಾಡಿಕೊಳ್ಳುತ್ತಾ, ಕೊರೋನಾ ವೈರಸ್ಸನ್ನು ವಂಚಿಸುವುದು ನಮಗೆ ಸಾಧ್ಯವಾಗಬಹುದು. ಈಗ ಸಿಂಗಾಪುರ ಅದನ್ನೇ ಪ್ರಯತ್ನಿಸುತ್ತಿದೆ. ಮೇ 3ರ ನಂತರ ನಮ್ಮ ಪ್ರಯತ್ನವೂ ಅದೇ ಆಗಿರಲಿದೆ. ಅಂದರೆ ರಾಹುಲ್ ಹೇಳಿದಂತೆ ಲಾಕ್ಡೌನ್ ಈ ರೋಗವನ್ನೆದುರಿಸಲು ಪರಿಹಾರವಲ್ಲ ನಿಜ, ಆದರೆ ತಕ್ಷಣಕ್ಕೆ ಆಗುವ ಸಾವು-ನೋವುಗಳನ್ನು ತಡೆಗಟ್ಟಲು ಅತ್ಯಂತ ಪ್ರಭಾವಿ ಮಾಧ್ಯಮ ಎಂಬುದಂತೂ ಹೌದು. ಹೀಗಾಗಿಯೇ ಭಾರತ ಇಟ್ಟ ಹೆಜ್ಜೆ ಜಗತ್ತಿನ ಎಲ್ಲ ರಾಷ್ಟ್ರಗಳಿಂದಲೂ ಪ್ರಶಂಸಿಸಲ್ಪಡುತ್ತಿವೆ!
ಇದೇ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಕೊರೋನಾಕ್ಕೆ ಪರಿಹಾರ ಹೆಚ್ಚು ಪರೀಕ್ಷೆ ಮಾಡುವುದು ಮತ್ತು ಹೆಚ್ಚು ಜನರನ್ನು ಕ್ವಾರೆಂಟೈನ್ನಲ್ಲಿಡುವುದೊಂದೇ ಎಂದು ಹೇಳಿದ್ದಾರೆ. ಈ ಹಿಂದೆ ಪಿ.ಚಿದಂಬರಂ ಕೂಡ ಅದನ್ನೇ ಹೇಳಿದ್ದರು. ಟೆಸ್ಟಿಂಗ್ ಕಿಟ್ ಬಳಸಿ ಒಬ್ಬನಿಗೆ ಕೊರೋನಾ ಬಂದಿರುವ ಕುರಿತಂತೆ ಪರೀಕ್ಷೆ ನಡೆಸಬೇಕಾದಲ್ಲಿ ಸುಮಾರು 5000ವರೆಗೂ ಖಚರ್ು ಬರಬಹುದೆಂದು ಅಂದಾಜು ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಭಾರತ ತನ್ನ ಅಷ್ಟೂ ಪ್ರಜೆಗಳ ಪರೀಕ್ಷೆಗೆ ನಿಲ್ಲುವುದೆಂದರೆ ಲಕ್ಷಾಂತರ ಕೋಟಿ ರೂಪಾಯಿಗಳನ್ನು ವ್ಯಯಿಸುವುದೆಂದರ್ಥ. ಹೀಗಾಗಿಯೇ ಭಾರತ ಕೊರೋನಾ ಪರೀಕ್ಷೆಗೆ ವೈಜ್ಞಾನಿಕ ಮಾದರಿಯನ್ನು ಬಳಸಿಕೊಂಡು ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. ಒಬ್ಬನಿಗೆ ಕೊರೋನಾ ಬಂತೆಂದರೆ ಆತ ಅದನ್ನು ಸುಮಾರು 400 ಜನರಿಗೆ ಹರಡಿಸಬಲ್ಲ. ಹೀಗಾಗಿ ಪರೀಕ್ಷೆ ನಡೆಸಿ ಆಯಾ ವ್ಯಕ್ತಿಗಳನ್ನು ಕ್ವಾರೆಂಟೈನ್ ಮಾಡಿಬಿಡುವುದು ಸಿಂಗಾಪುರ, ಸ್ಪೇನ್, ಇಟಲಿ ಇಂತಹ ರಾಷ್ಟ್ರಗಳಿಗೆ ಸುಲಭವಾಗಬಹುದೇನೋ. ಆದರೆ ಭಾರತದಂತಹ ಬೃಹತ್ ರಾಷ್ಟ್ರಕ್ಕೆ ಇದು ಸುಲಭವಾಗಿ ಆಗುವಂತಹ ಮಾತಲ್ಲ. ತಬ್ಲೀಘಿನ ಕಾರ್ಯಕ್ರಮಕ್ಕೆ ಹೋಗಿಬಂದವರು ಪರೀಕ್ಷೆ ಮಾಡಿಕೊಳ್ಳಲೇ ಹಿಂದೇಟು ಹಾಕುತ್ತಿರುವಾಗ ಇನ್ನು ಸಮಾಜದ ಪ್ರತಿಯೊಬ್ಬರನ್ನೂ ಹಾಗೆ ಕರೆ-ಕರೆದು ಪರೀಕ್ಷೆ ನಡೆಸುವುದು ಸುಲಭದ ಸಂಗತಿಯೇ ಅಲ್ಲ. ಆದರೂ ಒಟ್ಟಾರೆ ಜನಸಮೂಹದ ನಡುವಿನಿಂದ ಅಲ್ಲಲ್ಲಿ ವ್ಯಕ್ತಿಗಳ ನಮೂನೆಯನ್ನು ಪಡಕೊಂಡು ಪರೀಕ್ಷೆ ನಡೆಸುವ ಕಾರ್ಯ ಗುಜರಾತ್ನಲ್ಲಿ ಆರಂಭವಾಗಿದೆ. ಬರಲಿರುವ ದಿನಗಳಲ್ಲಿ ಅದನ್ನು ದೇಶಕ್ಕೆಲ್ಲಾ ವಿಸ್ತರಿಸಿ ಕೊರೋನಾ ಸಾಮುದಾಯಿಕವಾಗಿ ಎಷ್ಟು ಹಬ್ಬಿದೆ ಎಂಬುದನ್ನು ಅಂದಾಜಿಸಲಾಗುತ್ತದೆ. ಕಳೆದ ಒಂದು ವಾರದಲ್ಲಿ ಹಬ್ಬುವಿಕೆಯ ವೇಗವೂ ಕಡಿಮೆಯಾಗಿರುವುದು ಖುಷಿ ಕೊಡುವ ಸಂಗತಿ. ಮೊದಲು ಏಳು ದಿನಗಳಿಗೆ ದ್ವಿಗುಣಗೊಳ್ಳುತ್ತಿದ್ದ ಪೀಡಿತರ ಸಂಖ್ಯೆ ತಬ್ಲೀಘಿನ ಕೊಡುಗೆಯಿಂದಾಗಿ ನಾಲ್ಕು ದಿನಕ್ಕೆ ಬಂದುಬಿಟ್ಟಿತ್ತು. ಈಗ ಮತ್ತೆ ಅದು ಆರು ದಿನದತ್ತ ಹೊರಳಿದೆ. ಇವೆಲ್ಲವೂ ಒಳ್ಳೆಯ ಬೆಳವಣಿಗೆಗಳೇ.
ಇಷ್ಟರ ನಡುವೆಯೂ ಆತಂಕವಂತೂ ಖಂಡಿತ ಕಾಡುತ್ತಿದೆ. ಲಾಕ್ಡೌನ್ ತೆರವಿನೊಂದಿಗೆ ಇಷ್ಟು ದಿನ ಅವ್ಯಕ್ತವಾಗಿಯೇ ತಾಂಡವನೃತ್ಯ ಮಾಡುತ್ತಿರುವ ಕೊರೋನಾ ವ್ಯಕ್ತವಾಗಲಾರಂಭಿಸುವುದೇ? ಅಥವಾ ಈ ದೇಶದ ಬಿಸಿಲುಗಾಲದ ಬೇಗೆಯನ್ನು ತಾಳಲಾಗದೇ ಅದರ ಹಬ್ಬುವಿಕೆಯ ದರ ಕಡಿಮೆಯಾಗುತ್ತಲೇ ಹೋಗುವುದೇ? ಹಾಗೇನಾದರೂ ಇದರ ವಿಸ್ತಾರ ಕಡಿಮೆಯಾಯಿತೆಂದೆನಿಸಿದರೆ ರಾಹುಲ್ ಮತ್ತೊಂದು ಪತ್ರಿಕಾಗೋಷ್ಠಿ ನಡೆಸಿ ನರೇಂದ್ರಮೋದಿ ಲಾಕ್ಡೌನ್ ಅನ್ನು ಅನಗತ್ಯವಾಗಿ ದೇಶದ ಮೇಲೆ ಹೇರಿದರು ಎಂದು ಆರೋಪಿಸಲೂ ಹಿಂದೆ-ಮುಂದೆ ನೋಡುವುದಿಲ್ಲ. ಒಟ್ಟಾರೆ ಸ್ಥಿತಿ ಇನ್ನೂ ಅಯೋಮಯವಾಗಿದೆ. ನಾವು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು!