ಸೈನ್ಯದ ಮಾನವನ್ನು ಅಡವಿಟ್ಟು, ಬೇಳೆ ಬೇಯಿಸಿಕೊಳ್ಳುವವರು..
Friday, September 27th, 2013ಜನರಲ್ ತಿಮ್ಮಯ್ಯ ಚೀನಿ ಆಕ್ರಮಣದ ಕುರಿತು ಎಚ್ಚರಿಸಿದಾಗ ರಕ್ಷಣಾ ಸಚಿವ ಉರಿದು ಬಿದ್ದಿದ್ದರು. ತಿಮ್ಮಯ್ಯನವರ ನಿಷ್ಠೆಯನ್ನು ಪ್ರಶ್ನಿಸಿದ್ದರು. ಕುಪಿತ ಜನರಲ್ ರಾಜೀನಾಮೆ ಎಸೆದು ನಿರಾಳವಾಗಿ ಬಿಟ್ಟಿದ್ದರು. ನೆಹರೂ ಮಧ್ಯಸ್ಥಿಕೆ ಮಾಡಿ ರಾಜೀನಾಮೆ ಮರಳಿ ಪಡೆಯುವಂತೆ ಮಾಡಿದ್ದಲ್ಲದೇ ಸಂಸತ್ತಿನಲ್ಲಿ ಜನರಲ್ ತಿಮ್ಮಯ್ಯನವರ ಬಗ್ಗೆ ಲಘುವಾಗಿ ಮಾತನಾಡಿ ಅವಮಾನಿತರನ್ನಾಗಿಸಿದ್ದರು. ವಿಕೆ ಸಿಂಗ್ರದೂ ಅದೇ ಕತೆ. ನಿವೃತ್ತ ಜನರಲ್ ವಿ.ಕೆ.ಸಿಂಗ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹರ್ಯಾಣಾದಲ್ಲಿ ನಿವೃತ್ತ ಸೈನಿಕರ ಸಮಾವೇಶದಲ್ಲಿ ಮೋದಿಯೊಂದಿಗೆ ವೇದಿಕೆ ಹಂಚಿಕೊಂಡಾಗಿನಿಂದ ಕೇಂದ್ರ ಸರ್ಕಾರದ ಕಣ್ಣು ಕೆಂಪಗಾಗಿದೆ. ಮಾಧ್ಯಮಗಳೂ ನಿಗಿನಿಗಿಯಾಗಿ […]