ಗಾಜಿನ ಮನೆಯಲ್ಲಿ ಕೂತು ಕಲ್ಲೆಸೆದವರ…. @ ಜಾಗೋಭಾರತ್ unedited
Friday, November 29th, 2013
ರೋಗಿಯೋ, ನೊಂದವನೋ ದೇವರೆದುರು ಕುಳಿತು ಸಂಕಟ ಹೇಳಿಕೊಂಡು ಸಮಾಧಾನದುತ್ತರ ಪಡೆವಾಗ ಅವನ ಆತ್ಮವಿಶ್ವಾಸ ವೃದ್ಧಿಯಾಗೋದನ್ನು ನೋಡಬೇಕು. ಅದು ಗೊತ್ತಿದ್ದೇ ವೈದ್ಯರೂ ತಮ್ಮ ಆಸ್ಪತ್ರೆಗಳಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಒಮ್ಮೆ ಭಕ್ತಿಯಿಂದ ಪ್ರಾರ್ಥಿಸಿ ಅನ್ನೋದು. ಐದು ವರ್ಷ ಉಸಿರು ಬಿಗಿ ಹಿಡಿದು, ಬಾಲ ಮುದುರಿಕೊಂಡು ಬಿದ್ದಿದ್ದವರೆಲ್ಲ ಅದೇ ತಮಟೆ ಬಾರಿಸುತ್ತಾ ತಿರುಗಾಡುತ್ತಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದೊಡನೆ ಭೇಟಿ ಮಾಡಿದ ಜನರನ್ನು ಕಂಡಾಗಲೇ ಇಂಥದ್ದೆಲ್ಲದರ ಮುನ್ಸೂಚನೆ ಇತ್ತು. ಈಗ ಇವರು ಮೂಢನಂಬಿಕೆಗಳ ಕುರಿತಂತೆ ವಿಧೇಯಕವೊಂದನ್ನು ಚರ್ಚೆಗೆ ತಂದಿದ್ದಾರೆ. ದೇಹದ ಮೇಲೆ ದಾಳಿ ಮಾಡುವ […]
ಇಷ್ಟೆಲ್ಲಾ ಮಾಹಿತಿ ದೊರೆತ ನಂತರವೂ, ಆಕ್ರಮಣದ ಅನುಮಾನಗಳು ದಟ್ಟವಿದ್ದಾಗ್ಯೂ ಸೋಟ ತಡೆಯಲಾಗದ ಸರ್ಕಾರಗಳು ಇನ್ನು ಭಯೋತ್ಪಾದಕರ ಆಕಸ್ಮಿಕ ದಾಳಿಯನ್ನು ತಡೆಗಟ್ಟುವವೇ? ಅಥವಾ ತಡೆಯಬಲ್ಲ ಸಾಮರ್ಥ್ಯವಿದ್ದಾಗ್ಯೂ ಕಣ್ಮುಚ್ಚಿ ಕುಳಿತಿತೇ ಸರ್ಕಾರ? ದಿನ ಕಳೆದಂತೆ ನರೇಂದ್ರ ಮೋದಿ ವ್ಯಕ್ತಿತ್ವ ಕಳೆಗಟ್ಟುತ್ತಲೇ ಇದೆ. ವಿರೋಧಿಗಳೂ ತಲೆದೂಗುವಂತಹ ಸಮರ್ಥರಾಗಿ ಮೋದಿ ಅನಾವರಣಗೊಳ್ಳುತ್ತಿದ್ದಾರೆ. ಮೊನ್ನೆ ಬಿಹಾರದಲ್ಲಿ ಒಂದರಮೇಲೊಂದು ಬಾಂಬುಗಳು ಸ್ಫೋಟಗೊಂಡವಲ್ಲ ಅವತ್ತು ಮೋದಿಯ ಭಾಷಣ ಕೇಳಿದವರಿಗೆ ಕಣ್ತುಂಬಿ ಬಂದಿತ್ತು. ಖಡಕ್ಕು ಮಾತಿನ ಮೋದಿಯೂ ಅವತ್ತು ಭಾವುಕರಾದಂತೆ ಕಾಣುತ್ತಿತ್ತು. ವಂದೇಮಾತರಂ ಘೋಷಣೆಯ ಬಳಿಕವೂ ಮೈಕಿನ ಬಳಿ […]