ಇವರಿಗೆಲ್ಲ ಸ್ಫೂರ್ತಿ ಎಲ್ಲಿಂದ ಸ್ಫುರಿಸುತ್ತದೆಯೋ!
Saturday, October 27th, 2012ಪ್ರೇರಣೆ ಎಲ್ಲಿಂದ, ಹೇಗೆ ಸಿಗುತ್ತೋ ದೇವರೇ ಬಲ್ಲ. ಕೆಲವರೊಡನೆ ಮಾತನಾಡಿದರೆ, ಕೆಲವರನ್ನು ನೋಡಿದರೆ, ಕೆಲವರ ಕುರಿತು ಓದಿದರೆ, ಕೇಳಿದರೂ ಸಾಕು- ಹೀಗೆ ಬದುಕಬೇಕು ಎನ್ನಿಸಿಬಿಡುತ್ತೆ. ಆರೇಳು ತಿಂಗಳ ಹಿಂದೆ ಅರುಣಾಚಲಕ್ಕೆ ಕಾಲಿಡುವ ಮುನ್ನ ಗೌಹಾಟಿಗೆ ಹೋಗಿದ್ದೆ. ಮಿತ್ರರ ಸಹಾಯದಿಂದ ವಿವೇಕಾನಂದ ಕೇಂದ್ರದಲ್ಲಿ ಉಳಕೊಳ್ಳಲು ಅವಕಾಶ ಸಿಕ್ಕಿತ್ತು. ಅರುಣಾಚಲದೊಳಕ್ಕೆ ಹೋಗಲು ಬೇಕಾದ ಅನುಮತಿ ಪತ್ರಕ್ಕಾಗಿ ಕಾಯುತ್ತ ಕುಳಿತಿದ್ದೆ. ಆಗ ಪರಿಚಯವಾದರವರು ಸುಜಾತಾ ದೀದಿ. ಅಸ್ಸಾಮ್ನ ವಿವೇಕಾನಂದ ಕೇಂದ್ರ ಸಂಬಂಧಿತ ಚಟುವಟಿಕೆಗಳೆಲ್ಲದರ ಕೇಂದ್ರ ಅವರು. ದೀದಿ ಮೂಲತಃ ಕನ್ನಡಿಗರು. ಉಡುಪಿ […]