ಬುದ್ಧಿಜೀವಿಗಳ ದೆವ್ವ ಬಿಡಿಸಿದ ಕಾಳಿ!
Sunday, February 26th, 2017ನಿವೇದಿತಾ ಭಾರತೀಯ ಆಚರಣೆಗಳನ್ನು ವಿರೋಧಿಸಲಿಲ್ಲ, ಭಾರತೀಯರನ್ನು ದೂಷಿಸಲಿಲ್ಲ. ತಾನು ಇಲ್ಲಿನ ಅನಾಗರಿಕ ಜನರ ಸೇವೆಗೆ ಬಂದವಳೆಂದು ಪತ್ರಿಕಾ ಹೇಳಿಕೆ ಕೊಡಲಿಲ್ಲ. ಕೊನೆಗೆ ತನ್ನ ಮತವನ್ನು ಇಲ್ಲಿನ ಜನರ ಮೇಲೆ ಹೇರಿ ಅವರ ಪರಿವರ್ತನೆಗೆ ಪ್ರಯತ್ನ ಪಡಲಿಲ್ಲ. ಎಲ್ಲಾ ಬಿಡಿ ಯಾವ ಕಾಳಿಯ ಕುರಿತಂತೆ ಇಷ್ಟು ಅಮೋಘವಾಗಿ ಮಾತನಾಡುತ್ತಿದ್ದಳೋ ದಕ್ಷಿಣೇಶ್ವರದ ಅದೇ ಕಾಳಿ ಮಂದಿರಕ್ಕೆ ಅವಳಿಗೆ ವಿದೇಶೀಯಳೆಂಬ ಕಾರಣಕ್ಕೆ ಕೊನೆಯವರೆಗೂ ಪ್ರವೇಶ ದಕ್ಕಲಿಲ್ಲ. ಆದಾಗ್ಯೂ ಮನಸಿಗೆ ಕಿರಿಕಿರಿ ಮಾಡಿಕೊಳ್ಳಲಿಲ್ಲ. ಇಲ್ಲಿನ ನಂಬಿಕೆಗಳನ್ನು ವಿರೋಧಿಸುವ ಅಧಿಕಾರ ತನಗಿಲ್ಲವೆಂದೇ ಶಾಂತವಾಗಿ ಒಪ್ಪಿಕೊಂಡಳು. […]