Friday, September 22nd, 2017
ಏನೇ ಹೇಳಿ ಮನಸ್ಸು ಒಂಥರಾ ಮೋಡದ ಮುದ್ದೆ. ಯಾವಾಗ ಹರಳುಗಟ್ಟುತ್ತೋ, ಯಾವಾಗ ಚೆದುರಿಹೋಗುತ್ತೋ ದೇವರೇ ಬಲ್ಲ. ಮೋಡ ಬಿತ್ತನೆ ಮಾಡುವ ಪುಣ್ಯಾತ್ಮನಿಗಾಗಿ ಕಾಯಬೇಕಷ್ಟೇ!
ಏನೇ ಹೇಳಿ ಮನಸ್ಸು ಒಂಥರಾ ಮೋಡದ ಮುದ್ದೆ. ಯಾವಾಗ ಹರಳುಗಟ್ಟುತ್ತೋ, ಯಾವಾಗ ಚೆದುರಿಹೋಗುತ್ತೋ ದೇವರೇ ಬಲ್ಲ. ಮೋಡ ಬಿತ್ತನೆ ಮಾಡುವ ಪುಣ್ಯಾತ್ಮನಿಗಾಗಿ ಕಾಯಬೇಕಷ್ಟೇ!
ಏನೇ ಹೇಳಿ ನಾನು ಅವನನ್ನು ಅರಿಯುವಲ್ಲಿ ಸೋತಿರಬಹುದು, ಆದರೆ ಅವನಿಗೆ ನನ್ನ ಪರಿಚಯ ಚೆನ್ನಾಗಿದೆ…
ಕೊನೆಯ ಬಾರಿ ಅವನು ಬಾಗಿಲು ಬಡಿವಾಗ ನಾನೇ ಎದ್ದು ಬಾಗಿಲು ತೆಗೆವಂತಿದ್ದರೆ ಸಾಕು ಬದುಕು ಏನೇ ಹೇಳಿ
ವಿವೇಕಾನಂದರ ನೂರೈವತ್ತನೇ ಜಯಂತಿಯ ವೇಳೆಗೆ ಈ ಎಲ್ಲವನ್ನೂ ಜಗತ್ತಿಗೆ ಮುಟ್ಟಿಸುವಲ್ಲಿ ನಮಗೊಂದು ಅವಕಾಶವಿತ್ತು. ನಾವು ಕಳಕೊಂಡೆವು. ಭಾರತದ ಪ್ರಭಾವ ಪಶ್ಚಿಮವನ್ನೇ ಬದಲಾಯಿಸಿದೆ ಎಂದು ಸಾಬೀತು ಪಡಿಸುವ ಅವಕಾಶವಾಗಿತ್ತು ಅದು. ಕೈಚೆಲ್ಲಿಬಿಟ್ಟೆವು. ಹಾಗಂತ ಅನ್ಯಾಯವಾಗಿಲ್ಲ. ಅವರ ಚಿಕಾಗೋ ಭಾಷಣಕ್ಕೆ ನೂರಿಪ್ಪತ್ತೈದು ತುಂಬಿದೆ. ಹಾಗೆ ನೋಡಿದರೆ 1893 ಭಾರತದ ಪಾಲಿಗೆ ಬಲು ಮಹತ್ವದ ವರ್ಷ. ತಿಲಕರು ಗಣೇಶೋತ್ಸವಕ್ಕೆ ಸಾರ್ವಜನಿಕ ರೂಪ ಕೊಟ್ಟಿದ್ದು, ಅರವಿಂದರು ಬ್ರಿಟೀಷರ ಚಾಕರಿಯನ್ನು ಧಿಕ್ಕರಿಸಿ ಭಾರತಕ್ಕೆ ಮರಳಿದ್ದೂ ಅದೇ ವರ್ಷವೇ. ಚಿಕಾಗೋದಲ್ಲಿ ವಿವೇಕಾನಂದರ ಪ್ರಖ್ಯಾತ ಭಾಷಣ ನಡೆದದ್ದೂ […]
ಈಗ ಲಂಡನ್ನಿನಲ್ಲಿಯೇ ಬಾಂಬು ಸಿಡಿದಿದೆ. ವಲಸೆ ಬಂದವರಿಂದಾಗಿಯೇ ಕಳೆದ ವರ್ಷದ ಬ್ರುಸೆಲ್ಸ್ ದಾಳಿ ಮತ್ತು 2015 ರಲ್ಲಿ ಜರ್ಮನಿಯಲ್ಲಿ ಹೆಣ್ಣು ಮಕ್ಕಳ ಮೇಲೆ ದಾಳಿ ನಡೆದಿದ್ದನ್ನು ಮರೆಯುವುದು ಹೇಗೆ? ಅದರದ್ದೇ ಮುಂದುವರಿದ ಭಾಗವಾಗಿ ಪಾರ್ಸನ್ ಗ್ರೀನ್ ಟ್ಯೂಬ್ ಟ್ರೇನ್ನಲ್ಲಿ ದಾಳಿಯಾಗಿದೆ. ಹೊರಗಿನಿಂದ ಬಂದವರು ಎಷ್ಟಾದರೂ ಹೊರಗಿನವರೇ. ಪ್ರತಿಯೊಂದು ಕ್ರಿಯೆಗೂ ಪ್ರತಿಕ್ರಿಯೆ ಇರಲೇಬೇಕು ಎನ್ನುವುದು ವಿಜ್ಞಾನದ ನಿಯಮ. ಆಧ್ಯಾತ್ಮವೂ ಒಂದಲ್ಲ ಒಂದು ರೀತಿಯಲ್ಲಿ ಅದನ್ನೇ ಹೇಳುತ್ತದೆ. ಕರ್ಮ ಸಿದ್ಧಾಂತದ ಅಡಿಪಾಯವೇ ಅದು. ಇಲ್ಲಿ ಕ್ರಿಯೆ ಮಾತ್ರವಲ್ಲ, ಆಲೋಚನೆಗೂ ಪ್ರತಿಕ್ರಿಯೆಯಿರುತ್ತದೆ. […]
ಬೆಳಗಾವಿಯಲ್ಲಿ ಸಮಾರೋಪ ನಡೆಸುವುದಕ್ಕೊಂದು ಮುಖ್ಯ ಕಾರಣವಿದೆ. ಸ್ವಾಮಿ ವಿವೇಕಾನಂದರು ಪರಿವ್ರಾಜಕರಾಗಿ ದೇಶ ಸುತ್ತಾಡುತ್ತಿರುವಾಗ ಅವರು ಬೆಳಗಾವಿಗೆ ಬಂದು ಹನ್ನೆರಡು ದಿನ ಇದ್ದರು. ಇಲ್ಲಿರುವಾಗಲೇ ಅವರು ಅಷ್ಟಾಧ್ಯಾಯಿಯ ಮೇಲೆ ತಮ್ಮ ಪಾಂಡಿತ್ಯವನ್ನು ಸಾಬೀತುಪಡಿಸಿದ್ದು. ಇದೇ ಬೆಳಗಾವಿಯಲ್ಲಿ ನೂರು ವರ್ಷಗಳಷ್ಟು ಹಳೆಯದಾದ ಸರಸ್ವತಿ ವಾಚನಾಲಯವಿದೆ. ಸಾವರ್ಕರರೂ ಭೇಟಿ ಕೊಟ್ಟಂತಹ ವಾಚನಾಲಯವಿದು. ಇವೆಲ್ಲ ಕನ್ನಡ ನಾಡಿನ ಆಸ್ತಿಗಳು. ಇವೆಲ್ಲವನ್ನೂ ನಾಡಿಗೆ ಪ್ರಚುರ ಪಡಿಸಬೇಕಾದ ಕರ್ತವ್ಯವೂ ನಮ್ಮ ಹೆಗಲಮೇಲಿತ್ತು. ಹಾಗೆಂದೇ ಈ ಸ್ಥಳವನ್ನು ಆಯ್ದುಕೊಂಡು ಸಾಹಿತ್ಯ ಸಮ್ಮೇಳನದ ಸಮಾರೋಪದ ಕಾರ್ಯಕ್ರಮಕ್ಕೆ ಯೋಜನೆ ಮಾಡಲಾಯ್ತು. […]