ಕಾಶ್ಮೀರದ ಬೀದಿಗಳಲ್ಲಿ ಭಸ್ಮಾಸುರ ನರ್ತನ!
Sunday, June 25th, 2017ಶ್ರೀನಗರದ ಮುಖ್ಯ ಬೀದಿಗಳಲ್ಲಿ ಒಂದು ಶವಯಾತ್ರೆ. ತೀರಿಕೊಂಡವನ ಸಹೋದರಿ ಎಲ್ಲರೆದುರು ಆಕ್ರೋಶದಿಂದಲೇ ಕಿರುಚುತ್ತಿದ್ದಳು ‘ಹೌದು, ನಾವು ಭಾರತೀಯರೇ’. ಉಳಿದವರೆಲ್ಲ 57 ವರ್ಷದ ಹುತಾತ್ಮ ಡಿಎಸ್ಪಿ ಮೊಹಮ್ಮದ್ ಅಯೂಬ್ ಪಂಡಿತ್ರಿಗೆ ಜೈಕಾರ ಮೊಳಗಿಸುತ್ತ ನಡೆದಿದ್ದರು. ಕಳೆದ ನಾಲ್ಕಾರು ತಿಂಗಳಲ್ಲಿ ತನ್ನ ತಲೆಯ ಮೇಲೆ ತಾನೇ ಕೈಯಿಟ್ಟುಕೊಂಡ ಭಸ್ಮಾಸುರನ ಕಥೆ ಮತ್ತೆ ಮತ್ತೆ ನೆನಪಿಸುತ್ತಿದೆ ಕಾಶ್ಮೀರ. ಅದು ರಂಜಾನ್ ತಿಂಗಳ ವಿಶೇಷ ದಿನ. ಶಕ್ತಿಯ ರಾತ್ರಿ ಅದು. ಶಬ್-ಇ-ಕದರ್ ಅಂತಾರೆ ಅದನ್ನು. ಕುರಾನ್ ಪ್ರವಾದಿಯವರ ಮೇಲೆ ಅವತೀರ್ಣಗೊಂಡ ಮೊದಲ […]