ಕಾಂಗ್ರೆಸ್ ವಿನಾಶದ ಸಹಿ ಸೋನಿಯಾರದ್ದೇ!
Monday, June 17th, 2019ಈ ಪರಿವಾರಕ್ಕೆ ಕಸಿದುಕೊಳ್ಳುವ ತಾಕತ್ತಿದೆ. ಎದುರು ಬಿದ್ದವರನ್ನು ಮಂಡಿಯೂರಿ ಕುಳಿತು ಗೋಗರೆಯುವಂತೆ ಮಾಡಿಬಿಡುವ ಸಾಮಥ್ರ್ಯವಿದೆ. ಕೊನೆಗೆ ದ್ವೇಷವಿಟ್ಟುಕೊಂಡರೆ ಸತ್ತಮೇಲೂ ಅದನ್ನು ಸಾಧಿಸುವ ಹಠವಿದೆ! ನರಸಿಂಹರಾಯರು ಘಾಟಿ ಆಸಾಮಿ. ಕಾಂಗ್ರೆಸ್ ಪಕ್ಷವನ್ನು ಪರಿವಾರದ ಮುಷ್ಟಿಯಿಂದ ಹೊರತರಬೇಕೆಂದು ಅವರು ಯಾವಾಗಲೋ ಆಲೋಚಿಸಿಬಿಟ್ಟಿದ್ದರು. ಅಜರ್ುನ್ಸಿಂಗ್ ತಮ್ಮ ಜೀವನಚರಿತ್ರೆಯಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ, ‘ತಕ್ಷಣ ಕುಪಿತರಾದ ರಾವ್ ಮನಸ್ಸೊಳಗಿದ್ದುದನ್ನೆಲ್ಲಾ ಹೊರಹಾಕಿಬಿಟ್ಟರು. ಕಾಂಗ್ರೆಸ್ ಪಕ್ಷವೆಂಬುದು ನೆಹರೂ-ಗಾಂಧಿ ಪರಿವಾರವೆಂಬ ಇಂಜಿನ್ನಿಗೆ ತೂಗುಹಾಕಿಕೊಂಡು ಓಡುವ ರೈಲಲ್ಲ’ ಎಂಬುದನ್ನು ನೆನಪಿಸಿಕೊಂಡಿದ್ದಾರೆ. ರಾಜೀವ್ ಸಾವಿನ ನಂತರ ಸೋನಿಯಾರನ್ನು ರಾಜಕಾರಣಕ್ಕೆ ಬರುವಂತೆ ಸಾಕಷ್ಟು […]