ವಿಭಾಗಗಳು

ಸುದ್ದಿಪತ್ರ


 

Archive for March, 2018

ನಮ್ಮ ವೈಯಕ್ತಿಕ ಬದುಕಿನೊಳಕ್ಕೆ ಇಣುಕಿ ನೋಡುವ ದುಷ್ಟ ಕಾಂಗ್ರೆಸ್ಸು!

Saturday, March 31st, 2018

ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ಸು ಮುಖಭಂಗವನ್ನು ಅನುಭವಿಸಿದೆ. ಕಳೆದ ವರ್ಷ ಇಂಗ್ಲೆಂಡಿನ ಕೇಂಬ್ರಿಡ್ಜ್ ಅನಾಲಿಟಿಕಾದೊಂದಿಗೆ ಒಪ್ಪಂದ ಮಾಡಿಕೊಂಡು ಮೋದಿಯನ್ನು ಮಣಿಸಲು ಸರ್ವ ಸನ್ನದ್ಧರಾಗಿದ್ದೇವೆ ಎಂದು ಬೀಗುತ್ತಿದ್ದ ಕಾಂಗ್ರೆಸ್ಸು ಈಗ ತಾನೇ ತೋಡಿದ ಖೆಡ್ಡಾಕ್ಕೆ ಬಿದ್ದಿದೆ. ಜಾತಿ-ಮತ-ಪಂಥಗಳನ್ನು ವಿಭಜಿಸಿ ವೋಟು ಗಳಿಸುವ ತನ್ನ ಎಪ್ಪತ್ತು ವರ್ಷಗಳ ಹಳೆಯ ಚುನಾವಣಾ ಚಾಳಿಯಿಂದ ಹೊರಬರಲು ಅದಕ್ಕೆ ಇನ್ನೂ 70 ವರ್ಷಗಳೇ ಬೇಕೇನೊ! ಕೇಂಬ್ರಿಡ್ಜ್ ಅನಾಲಿಟಿಕಾದಂತಹ ಸಂಸ್ಥೆಗಳಿಗೆ ತಮ್ಮನ್ನು ತಾವು ಸಂಪೂರ್ಣ ಶರಣಾಗಿಸಿಕೊಂಡ ಕನರ್ಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ತಮ್ಮದ್ದೇ ಹೆಸರಿನ ಅಪ್ಲಿಕೇಶನ್ ಅನ್ನು ತುತರ್ಾಗಿ ಪ್ಲೇ […]

ಮತ-ಧರ್ಮಗಳ ವಿಭಜಿಸಿದವರಿಗೆ ಮತದಿಂದಲೇ ಉತ್ತರ!!

Monday, March 26th, 2018

‘ಗುರಿಯಷ್ಟೇ ಸಾಗುವ ಹಾದಿಯೂ ಮುಖ್ಯ’ ಎನ್ನುತ್ತಾರೆ ಸ್ವಾಮಿ ವಿವೇಕಾನಂದರು. ಸಿದ್ದರಾಮಯ್ಯನವರು ಕೈಯ್ಯಲ್ಲಿ ವಿವೇಕಾನಂದರ ಪುಸ್ತಕ ಹಿಡಿದು ಅದೇನು ಓದಿದರೋ ದೇವರೇ ಬಲ್ಲ. ಆಚರಣೆಯಲ್ಲಂತೂ ಯಾವುದೂ ಕಾಣುತ್ತಿಲ್ಲ. ಗೆಲುವಿಗಾಗಿ ಯಾವ ಸಿದ್ಧಾಂತವನ್ನಾದರೂ ತಲೆ ಕೆಳಗು ಮಾಡಬಲ್ಲ ಸಾಮಥ್ರ್ಯವಿದೆ ಅವರಿಗೆ. ಆದರೆ ಇತಿಹಾಸ ಬೆನ್ನಿಗೆ ಚೂರಿ ಹಾಕಿದ ಅನೇಕ ಖಿಲ್ಜಿಗಳನ್ನು ರಾಕ್ಷಸರೆಂದೇ ನೆನಪಿಟ್ಟುಕೊಳ್ಳೋದು. ದಾರಾಷಿಕೋರಂಥವರನ್ನು ತಂಪು ಹೊತ್ತಿನಲ್ಲಿಯೇ ಸ್ಮರಿಸಿಕೊಳ್ಳೋದು. ಹೌದು. ಲಿಂಗಾಯತ ಮತೀಯರನ್ನು ಎತ್ತಿ ಕಟ್ಟಿ ಹಿಂದೂ ವಿರೋಧಿಗಳಾಗಿ ಅವರನ್ನು ರೂಪಿಸಿ ಪ್ರತ್ಯೇಕ ಧರ್ಮದ ಲಾಜಿಕಲ್ ಎಂಡ್ನವರೆಗೆ ಒಯ್ಯಬೇಕೆಂಬ ತೋರಿಕೆಯ […]

ಕಷ್ಟಗಳ ಮಳೆ- ಸಾಧನೆಯ ಹೊಳೆ

Monday, March 19th, 2018

ಸ್ಟೀಫನ್ ದಿನಚರಿ 11 ಗಂಟೆಗೆ ಆರಂಭವಾಗುತ್ತದೆ. ಅವತ್ತಿನ ದಿನದ ಭೇಟಿಗಳ ಬಗ್ಗೆ ಸೆಕ್ರೆಟರಿ ವರದಿ ನೀಡಿದ ನಂತರ ವಿಜ್ಞಾನದೊಳಗೆ ಮುಳುಗಿ ಹೋಗುತ್ತಾನೆ. ಭೇಟಿಗೆ ಬಂದವರೊಡನೆ ಕಂಪ್ಯೂಟರಿನ ಮೂಲಕವೇ ಮಾತನಾಡಿಸುತ್ತಾನೆ. ಒಂದು ಗಂಟೆಯಾಯಿತೆಂದರೆ ಮಳೆಯೇ ಬರಲಿ, ಬಿರು ಬಿಸಿಲೇ ಇರಲಿ ತನ್ನ ಕಂಪ್ಯೂಟರೀಕೃತ ಗಾಲಿಕುಚರ್ಿಯನ್ನು ಕೊಠಡಿಯ ಹೊರತಂದು ಮನೆಯತ್ತ ಪಯಣ ಬೆಳೆಸುತ್ತಾನೆ. ಅದನ್ನು ಏನಂತ ಬೇಕಾದರೂ ಕರೀರಿ. ಅದೊಂದು ಅದ್ಭುತ ಪವಾಡ ಅಷ್ಟೇ! ಮೃತ್ಯುವಿನ ಕುಣಿಕೆಯನ್ನು ಕೊರಳಿಗೆ ಸುತ್ತಿಕೊಂಡೇ, ಗೆಲುವಿನ ಗಂಟೆ ಬಾರಿಸುವುದು ತಮಾಷೆಯ ಮಾತಲ್ಲ. ಸ್ಟೀಫನ್ ಹಾಕಿಂಗ್ […]

ಮಾತೇ ಬಾರದವ ಬರೆದು ಸಾಧಿಸಿದ್ದು ಬೆಟ್ಟದಷ್ಟು!

Monday, March 19th, 2018

ಸ್ಟೀಫನ್ ಬದುಕಿನ ಮಜಾ ಏನು ಅಂದರೆ, ಆತ ಎಂದಿಗೂ ಕತ್ತಲ ಕೋಣೆಯಲ್ಲಿ ಕಳೆಯದಿದ್ದುದು. ತನ್ನ ಬದುಕು ಮುಗಿಯಿತೆಂದು ಆತ ಎಂದಿಗೂ ಯೋಚಿಸಲೇ ಇಲ್ಲ. ರಾಕ್ಫೆಲ್ಲರ್ ಯುನಿವಸರ್ಿಟಿ ಹಾಕಿಂಗ್ನ ಕಾರ್ಯಕ್ರಮ ಆಯೋಜಿಸಿತ್ತು. ಭಾಷಣ, ಚಚರ್ೆಗಳ ನಂತರ ಪಾಟರ್ಿಯನ್ನೂ ಏರ್ಪಡಿಸಲಾಗಿತ್ತು. ಆದರೆ ಹಾಕಿಂಗ್ ಉಪನ್ಯಾಸದ ನಂತರ ನದಿಯ ದಂಡೆಯ ಮೇಲೆ ಹೋಗಿ ಕುಳಿತ. ‘ಇನ್ನು ಪಾಟರ್ಿಯ ಕತೆ ಮುಗಿದೇಹೋಯ್ತು. ಹಾಕಿಂಗ್ ನದಿಯ ಮುಂದೆ ರೋಧಿಸುತ್ತಾ ಕುಳಿತುಬಿಟ್ಟ’ ಎಂದು ಅಂದುಕೊಳ್ಳುತ್ತಿರುವಾಗಲೇ ಆತ ಮರಳಿ ಬಂದ. ಸ್ಟೀಫನ್ಗೆ ಆಪರೇಶನ್ ಮಾಡಿದರೆ ಮಾತೇ ನಿಂತು […]

ದೇವರಿಲ್ಲ, ವಿಜ್ಞಾನವೇ ಎಲ್ಲ!

Sunday, March 18th, 2018

ಸ್ಟೀಫನ್ ವಿಶ್ವದ ಉಗಮ ಮತ್ತು ಅತ್ಯಂದ ಬಗ್ಗೆ ಮಂಡಿಸಿದ ಚಿಂತನೆಗಳಂತೂ ಕ್ರಿಶ್ಚಿಯನ್ ಧರ್ಮದ ಬುಡವನ್ನು ಅಲ್ಲಾಡಿಸಿಬಿಟ್ಟವು. ವಿಶ್ವದ ಉಗಮವೂ ಆಗಿರಲಿಲ್ಲ, ಅಂತ್ಯವೂ ಆಗಲಾರದು ಎಂಬ ಅವನ ಮಾತಿಗೆ ಪೋಪ್ ಆಕ್ಷೇಪವೆತ್ತಿದ್ದರು. ಭಗವಂತನ ರೀತಿಗಳ ಬಗ್ಗೆ ವಿಚಾರಣೆ ನಡೆಸಿದರೆ ನೋಡು ಎಂದು ಎಚ್ಚರಿಕೆ ಕೊಟ್ಟು ಬಾಯ್ಮುಚ್ಚಿಸುವ ಪ್ರಯತ್ನ ನಡೆಸಿದ್ದರು. ಹಾಗಂತ ಸ್ಟೀಫನ್ ಹೆದರಿಬಿಟ್ಟ ಎಂದೇನಲ್ಲ. ದೊಡ್ಡ ಕಾಯಗಳನ್ನು ಗಮನಿಸಿ ಅಧ್ಯಯನ ಮಾಡಬೇಕು ಅನ್ನೋದು ಬರಿ ಹುಚ್ಚಾಗಿತ್ತು ಅಷ್ಟೇ. ಆ ನೆಪದಲ್ಲಿ ಪಿ.ಎಚ್.ಡಿ ಸಿಕ್ಕಿಬಿಟ್ಟರೆ ಬದುಕಿಗೆ ಆಧಾರವಾದೀತು ಎಂಬ ನಂಬಿಕೆ […]

ಬದುಕಿಗೆ ಬೆಳಕು ಕೊಟ್ಟ ಕಪ್ಪು ರಂಧ್ರಗಳು!

Saturday, March 17th, 2018

1980 ರ ಆರಂಭವಿರಬಹುದು. ಹಾಕಿಂಗ್ನ ಮಾತು ಅಸ್ಪಷ್ಟವಾಯ್ತು. ಆತ ಮಾತನಾಡುವಾಗ ತಡವರಿಸುತ್ತಿದ್ದ. ಬಹುಕಾಲ ಜೊತೆಯಲ್ಲಿದ್ದವರಿಗೆ ಮಾತ್ರ ಅವನ ಮಾತು ಅರ್ಥವಾಗುತ್ತಿತ್ತು. ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಟಿರೋಸಿಸ್ ರೋಗದ ಮತ್ತೊಂದು ಲಕ್ಷಣ ಅದು. ಮೊದಲು ಕೈ ಕಾಲುಗಳ ಸ್ವಾಧೀನ ತಪ್ಪುತ್ತದೆ, ಆನಂತರ ಮಾತು ನಿಲ್ಲುತ್ತದೆ. ಹಾಕಿಂಗ್ನ ಅದೃಷ್ಟವೆಂದರೆ ರೋಗದ ಎರಡೂ ಲಕ್ಷಣಗಳ ನಡುವೆ ದೀರ್ಘಕಾಲದ ಅಂತರವಿತ್ತು. ಆತನ ಕೈಕಾಲುಗಳು ಸೋತು ಬಸವಳಿದಿದ್ದರೂ ಮಾತು ಗಟ್ಟಿಯಾಗಿತ್ತು. ಆದರೆ ಈಗ ಮಾತೇ ಕೈಕೊಟ್ಟಿತು. ಕಣ್ಣಿಗೆ ಕಾಣದ ಕಪ್ಪು ರಂಧ್ರಗಳನ್ನು ಕಂಡು, ಅವುಗಳ ಉಗಮ-ಬದುಕು-ಸಾವು […]

ಯೋಗಿಯ ಸೋಲಿಸಲು ಭೋಗಿಗಳೆಲ್ಲ ಒಂದಾಗಬೇಕಾಯ್ತು!

Friday, March 16th, 2018

ಮಾಚರ್್ 19 ರಂದು ಪ್ರಮಾಣ ವಚನ ಸ್ವೀಕರಿಸಿದ ಯೋಗಿಜಿ ವಿಕಾಸಕ್ಕಾಗಿ ಮತ್ತು ಅಪರಾಧ ಮುಕ್ತ ಉತ್ತರ ಪ್ರದೇಶಕ್ಕಾಗಿ ಪಣತೊಟ್ಟು ನಿಂತರು. ಕನಿಷ್ಠ 15 ವರ್ಷಗಳಿಂದ ಭ್ರಷ್ಟಾಚಾರ ವಂಶವಾದ, ಜಾತಿವಾದ ಇವುಗಳಲ್ಲಿ ನರಳಿದ್ದ ಉತ್ತರ ಪ್ರದೇಶವನ್ನು ಸಮರ್ಥವಾಗಿ ಕಟ್ಟುವ ನಿಶ್ಚಯವನ್ನಂತೂ ಅವರು ಮಾಡಿದ್ದರು. ಹಾಗಂತ ಹಿಂದುತ್ವವಾದದಿಂದ ಒಂದಿನಿತೂ ದೂರಸರಿಯಲಾರೆನೆಂಬ ಭರವಸೆಯನ್ನೂ ಅವರು ಕೊಟ್ಟಿದ್ದರು. ಎಷ್ಟು ಬೇಗನೇ ಒಂದು ವರ್ಷ ಆಗಿಹೋಯ್ತು. ಉತ್ತರ ಪ್ರದೇಶಕ್ಕೆ ಮುಖ್ಯಮಂತ್ರಿಯನ್ನಾಗಿ ಯೋಗಿ ಆದಿತ್ಯನಾಥ್ ಅವರನ್ನು ಆಯ್ಕೆ ಮಾಡಿದಾಗ ಇಡಿಯ ದೇಶದಲ್ಲಿ ಸಂಚಲನ ಉಂಟಾಗಿತ್ತು. ಕಾವಿ […]

ಬದುಕೇ ಕತ್ತಲಾದವ ಕಪ್ಪು ರಂಧ್ರಗಳಿಗೆ ಬೆಳಕು ನೀಡಿದ!

Friday, March 16th, 2018

ಮೊದಲ ಬಾರಿಗೆ ವೈಜ್ಞಾನಿಕ ಲೋಕ ಅಚ್ಚರಿಯ ಮಡುವಿಗೆ ಬಿತ್ತು. ಸ್ಟೀಫನ್ ಪ್ರಸ್ತುತ ಪಡಿಸಿದ ಸಿದ್ಧಾಂತವನ್ನು ಬೆರಗು ಕಂಗಳಿಂದ ನೋಡಿತು. ಕೊನೆಗೆ ಕಪ್ಪು ರಂಧ್ರಗಳು ಹೊರಸೂಸುವ ಕಿರಣಗಳಿಗೆ ‘ಹಾಕಿಂಗ್ ಕಿರಣಗಳು’ ಎಂಬ ಹೆಸರನ್ನೇ ನೀಡಿತು. ಅಲ್ಲಿಯವರೆಗೂ ಅಂದುಕೊಂಡಿದ್ದ ಸಿದ್ಧಾಂತಗಳೆಲ್ಲ ತಲೆಕೆಳಗಾದವು. 1960 ರ ಕೊನೆಯ ಭಾಗದ ವೇಳೆಗೆ ಸ್ಟೀಫನ್ ಹಾಕಿಂಗ್ನ ಆರೋಗ್ಯ ಹದಗೆಡುತ್ತಾ ಹೋಯಿತು. ಹಾಗಂತ ಆತ ಎಲ್ಲರ ಮುಂದೆ ಮಂಡಿಯೂರಿ ಕುಳಿತುಬಿಡುತ್ತಿದ್ದ ಎಂದಲ್ಲ. ತನ್ನನ್ನು ಹಿಡಿಯಲು ಬಂದವರ, ಆಸರೆ ನೀಡಲು ಹೊರಟವರ ದೂರ ತಳ್ಳುತ್ತಿದ್ದ. ‘ನನ್ನನ್ನು ನಾನೇ […]

ಮದ್ದೇ ಇಲ್ಲದ ರೋಗಕ್ಕೆ ಹೆದರದೇ ಇರುವುದು ಹೇಗೆ?

Thursday, March 15th, 2018

ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಟಿರೋಸಿಸ್. ಆ ರೋಗಕ್ಕೆ ಔಷಧಿಯೇ ಇಲ್ಲ. ಈ ರೋಗದಿಂದಾಗಿ ನರಕೋಶಗಳು ನಿಧಾನವಾಗಿ ಸಾಯುತ್ತವೆ. ಆ ಮೂಲಕ ಸ್ನಾಯುಗಳನ್ನು ನಿಯಂತ್ರಿಸಬಲ್ಲ ಮೆದುಳಿನ ಶಕ್ತಿ ಕ್ಷೀಣವಾಗುತ್ತದೆ. ಆರಂಭದಲ್ಲಿ ಕೈಯ ಶಕ್ತಿ ಕುಂಠಿತವಾಗುತ್ತದೆ. ಮಾತು ತೊದಲುತ್ತದೆ. ನರಕೋಶಗಳು ಸಾಯಲಾರಂಭಿಸಿದಂತೆಯೇ ದೇಹದ ಒಂದೊಂದೇ ಅಂಗ ನಿಯಂತ್ರಣ ಕಳೆದುಕೊಳ್ಳುತ್ತದೆ. ಸ್ಟೀಫನ್ ಹಾಕಿಂಗನ್ನು ಇಡೀ ಜಗತ್ತು ಅಚ್ಚರಿಯ ಮೆದುಳು ಎನ್ನುವುದೇನೋ ನಿಜ. ಹಾಗಂತ ಕಾಲೇಜಿನ ದಿನಗಳಲ್ಲಿ ಹಾಕಿಂಗ್ ದಿನಗಟ್ಟಲೇ ಪುಸ್ತಕದ ಮುಂದೆ ಕುಳಿತಿರುತ್ತಿದ್ದ ಎಂದೇನಲ್ಲ, ಬರೀ ಪುಸ್ತಕದಲ್ಲಿರುವುದನ್ನೇ ಓದಿ ತಲೆಗೆ ತುಂಬಿಕೊಂಡವ ಹೊಸತರ […]

ಸಮಸ್ಯೆಯೇ ತಪ್ಪಾಗಿದೆ! ಆ ತಪ್ಪೇ ಬದುಕಿಗೆ ಬೆಳಕಾಗಿದೆ!!

Wednesday, March 14th, 2018

ಅಪ್ಪನಿಗೆ ಮಗನನ್ನು ವೈದ್ಯನನ್ನಾಗಿಸುವ ಹಂಬಲವಿತ್ತು. ಆದರೆ ಒಂಭತ್ತರ ಸ್ಟೀಫನ್ ಅದನ್ನು ಅಲ್ಲಗಳೆದುಬಿಡುತ್ತಿದ್ದ. ಜೀವಶಾಸ್ತ್ರಜ್ಞರು, ತಳಮಟ್ಟದ ವಿವರಣೆ ನೀಡುವಲ್ಲಿ ಸೋಲುತ್ತಾರೆ. ಅಲ್ಲಿ ಕಾಣದ ವಸ್ತುಗಳ ಚಿತ್ರ ಬಿಡಿಸಿ ತೋರುವುದೇ ಹೆಚ್ಚು ಎನ್ನುತ್ತಿದ್ದ. ನಾನು ವಿಜ್ಞಾನಿಯಾಗುತ್ತೇನೆ. ಕಣ್ಣಿಗೆ ಕಾಣದ್ದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತೇನೆ ಎಂದು ಕಣ್ತುಂಬಾ ಕನಸು ಕಾಣುತ್ತಿದ್ದ. ಆ ರೋಗವನ್ನು ‘ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಥಿರೋಸಿಸ್’ ಎನ್ನುತ್ತಾರೆ. ಆಡು ಭಾಷೆಯಲ್ಲಿ ಅಮೆರಿಕನ್ನರು ‘ಲೌಗೇರಿ’ ರೋಗ ಎಂದು ಕರೆದುಕೊಳ್ಳುತ್ತಾರೆ. ಕೂಲಿ ಕಾಮರ್ಿಕ ಯಾಂಕೀ ಎನ್ನುವವನಲ್ಲಿ ಆ ರೋಗ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. […]