ಯಶಸ್ಸಿಗೆ ರಾಜಮಾರ್ಗ!
Wednesday, October 30th, 2019ಸಂತ ರಾಮತೀರ್ಥರು ಜಪಾನಿನ ಭಾಷಣವೊಂದರಲ್ಲಿ ಯಶಸ್ಸು ಪಡೆಯುವ ಮಾರ್ಗದ ಕುರಿತಂತೆ ಆಡಿರುವ ಮಾತುಗಳು ನಿಜಕ್ಕೂ ಮನೋಜ್ಞವಾಗಿದೆ. ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಬಲ್ಲಂಥದ್ದು. ದೀಪಾವಳಿಯಂದು ಅವರ ಜನ್ಮದಿನವನ್ನು ನೆನಪಿಸಿಕೊಳ್ಳಲೆಂದೇ ಇಲ್ಲಿ ಆ ಭಾಷಣದ ಸಾರಾಂಶ ಹಂಚಿಕೊಳ್ಳುತ್ತಿದ್ದೇನೆ. ಯಶಸ್ಸು ಯಾರಿಗೆ ಬೇಡ ಹೇಳಿ? ಪ್ರತಿಯೊಬ್ಬರೂ ತಾವು ಮಾಡಿದ ಕೆಲಸ ಯಶಸ್ಸಿನಲ್ಲಿಯೇ ಕೊನೆಗೊಳ್ಳಬೇಕೆಂದು ಆಶಿಸುತ್ತಾರೆ. ಸಾಮಾನ್ಯ ಕೂಲಿ ಕಾಮರ್ಿಕನಿಂದ ಹಿಡಿದು ದೇಶವನ್ನಾಳುವ ಪ್ರಧಾನಮಂತ್ರಿಯವರೆಗೆ ಹಿಡಿದ ಕೆಲಸದಲ್ಲಿ ಗೆಲುವು ಕಾಣಬೇಕೆಂಬ ತವಕ ಇದ್ದದ್ದೇ. ಆದರೆ ನಮ್ಮಲ್ಲನೇಕರು ಗೆಲುವಿನ ಒಂದಿಷ್ಟೂ ರುಚಿ ನೋಡದೇ ಬದುಕನ್ನು ಕಳೆದುಬಿಡುತ್ತಾರೆ. […]