ವಿಭಾಗಗಳು

ಸುದ್ದಿಪತ್ರ


 

Archive for October, 2019

ಯಶಸ್ಸಿಗೆ ರಾಜಮಾರ್ಗ!

Wednesday, October 30th, 2019

ಸಂತ ರಾಮತೀರ್ಥರು ಜಪಾನಿನ ಭಾಷಣವೊಂದರಲ್ಲಿ ಯಶಸ್ಸು ಪಡೆಯುವ ಮಾರ್ಗದ ಕುರಿತಂತೆ ಆಡಿರುವ ಮಾತುಗಳು ನಿಜಕ್ಕೂ ಮನೋಜ್ಞವಾಗಿದೆ. ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಬಲ್ಲಂಥದ್ದು. ದೀಪಾವಳಿಯಂದು ಅವರ ಜನ್ಮದಿನವನ್ನು ನೆನಪಿಸಿಕೊಳ್ಳಲೆಂದೇ ಇಲ್ಲಿ ಆ ಭಾಷಣದ ಸಾರಾಂಶ ಹಂಚಿಕೊಳ್ಳುತ್ತಿದ್ದೇನೆ. ಯಶಸ್ಸು ಯಾರಿಗೆ ಬೇಡ ಹೇಳಿ? ಪ್ರತಿಯೊಬ್ಬರೂ ತಾವು ಮಾಡಿದ ಕೆಲಸ ಯಶಸ್ಸಿನಲ್ಲಿಯೇ ಕೊನೆಗೊಳ್ಳಬೇಕೆಂದು ಆಶಿಸುತ್ತಾರೆ. ಸಾಮಾನ್ಯ ಕೂಲಿ ಕಾಮರ್ಿಕನಿಂದ ಹಿಡಿದು ದೇಶವನ್ನಾಳುವ ಪ್ರಧಾನಮಂತ್ರಿಯವರೆಗೆ ಹಿಡಿದ ಕೆಲಸದಲ್ಲಿ ಗೆಲುವು ಕಾಣಬೇಕೆಂಬ ತವಕ ಇದ್ದದ್ದೇ. ಆದರೆ ನಮ್ಮಲ್ಲನೇಕರು ಗೆಲುವಿನ ಒಂದಿಷ್ಟೂ ರುಚಿ ನೋಡದೇ ಬದುಕನ್ನು ಕಳೆದುಬಿಡುತ್ತಾರೆ. […]

ತಿವಾರಿ ಹತ್ಯೆ ಸಮರ್ಥಕರು ಮನುಷ್ಯರೇ ಅಲ್ಲ!

Wednesday, October 30th, 2019

ಕಮಲೇಶ್ ತಿವಾರಿ ಪ್ರವಾದಿಯ ಕುರಿತಂತೆ ಹೇಳಿಕೆ ಕೊಟ್ಟಿದ್ದರೂ ಎಂಬ ಕಾರಣಕ್ಕೆ ಅವರನ್ನು ವರ್ಷಗಟ್ಟಲೆ ಜೈಲಿನಲ್ಲಿರುವಂತೆ ಮಾಡಲಾಗಿತ್ತು. ಇದು ವಾಕ್ಸ್ವಾತಂತ್ರ್ಯ ಹೊಂದಿರುವಂತಹ ರಾಷ್ಟ್ರದಲ್ಲಿ ಎಂದಿಗೂ ನಡೆಯಬಾರದ ಸಂಗತಿ. ಕೃಷ್ಣ ವ್ಯಭಿಚಾರಿ, ರಾಮ ಹುಟ್ಟಿಯೇ ಇರಲಿಲ್ಲ, ಹಿಂದೂಗಳು ಪೂಜಿಸುವ ಶಿವಲಿಂಗವೆಂದರೆ ಅದು ಪುರುಷನ ಮಮರ್ಾಂಗ ಹೀಗೆಲ್ಲಾ ಅಸಂಬದ್ಧವಾದ ಮಾತುಗಳನ್ನು ಮುಸಲ್ಮಾನರು, ಕ್ರಿಶ್ಚಿಯನ್ನರು ಬೀದಿಗೊಬ್ಬರಂತೆ ಆಡುವಾಗಲೂ ಹಿಂದೂ ತಲೆಕೆಡಿಸಿಕೊಳ್ಳುವುದಿಲ್ಲ. ಕಮಲೇಶ್ ತಿವಾರಿಯ ಹತ್ಯೆ ದೇಶದಲ್ಲಿ ಸಂಚಲನ ಉಂಟುಮಾಡಿಬಿಟ್ಟಿತು. ಪ್ರವಾದಿ ಮೊಹಮ್ಮದ್ ಪೈಗಂಬರರ ಕುರಿತಂತೆ ಹೇಳಿಕೆ ಕೊಟ್ಟು ವರ್ಷಗಟ್ಟಲೆ ಜೈಲಿನಲ್ಲಿದ್ದ ತಿವಾರಿ ಹೊರಬಂದ […]

ಸಾವರ್ಕರ್ ಎಂದರೆ ಕಾಂಗ್ರೆಸ್ಸಿಗರು ಮೈ ಪರಚಿಕೊಳ್ಳುವುದೇಕೆ?!

Wednesday, October 30th, 2019

ಕಾಂಗ್ರೆಸ್ಸಿಗರ ಸಮಸ್ಯೆಯೇ ಅದು. ಅವರ ಖ್ಯಾತನಾಮ ನಾಯಕರು ಎಂದಿಗೂ ಯಾತನೆಯನ್ನು ಅನುಭವಿಸಲೇ ಇಲ್ಲ. ಅವೆಲ್ಲವನ್ನೂ ದೇಶಭಕ್ತರಿಗೆ ಬಿಟ್ಟು ತಾವು ಜೈಲಿನಲ್ಲಿ ಪೆನ್ನು, ಪೇಪರುಗಳನ್ನು ಪಡಕೊಂಡು ತಮ್ಮ-ತಮ್ಮ ಜೀವನಕಥನಗಳನ್ನು ಬರೆದುಕೊಂಡು ಕಾಲ ತಳ್ಳಿಬಿಟ್ಟರು. ಅದನ್ನೇ ಬಲುದೊಡ್ಡ ಸ್ವಾತಂತ್ರ್ಯ ಹೋರಾಟವೆಂದು ಬಿಂಬಿಸಿದರು. ಸಾವರ್ಕರ್ರದು ಹಾಗಲ್ಲ. ಕೋಟರ್ಿನಲ್ಲಿ ವಿಚಾರಣೆ ನಡೆಯುತ್ತಿತ್ತು. ತಾನು ಮಾಡಿದ ತಪ್ಪಿಗೆ ಸಕರ್ಾರಿ ಅಧಿಕಾರಿಗಳಿಂದ ವಿಚಾರಣೆ ಎದುರಿಸುತ್ತಿದ್ದ ರಾಜಕೀಯ ಖೈದಿಯ ಪರವಾಗಿ ಅವನ ವಕೀಲರು ನ್ಯಾಯಾಧೀಶರ ಬಳಿ ಅಲವತ್ತುಕೊಳ್ಳುತ್ತಿದ್ದರು. ತಮ್ಮ ಕಕ್ಷಿದಾರರು ಜೈಲಿನಲ್ಲಿದ್ದು ಐದು ಕೇಜಿಯಷ್ಟು ತೂಕ ಕಡಿಮೆಯಾಗಿಬಿಟ್ಟಿದೆ […]

ರಾಮಮಂದಿರ ನಿರ್ಮಾಣಕ್ಕೆ ಇನ್ನು ಕ್ಷಣಗಣನೆ!

Wednesday, October 30th, 2019

ಯಾವುದಾದರೊಂದು ಘಟನೆಯ ಐತಿಹಾಸಿಕತೆಯನ್ನು ಪರೀಕ್ಷಿಸುವುದಕ್ಕೆ ಮೊದಲು ಜನಪದದಲ್ಲಿ ಹಬ್ಬಿ ಹೋಗಿರುವಂತಹ ಕಥನಗಳನ್ನು ಗುರುತಿಸಿಕೊಳ್ಳಲಾಗುತ್ತದೆ. ಆ ಕಥನಗಳಿಗೆ ಪೂರಕವಾದ ಸಾಹಿತ್ಯಾತ್ಮಕವಾದ ಆಧಾರಗಳನ್ನು ಆನಂತರ ಸಂಗ್ರಹಿಸಲಾಗುತ್ತದೆ. ಆನಂತರ ಅದಕ್ಕೆ ಸಂಬಂಧಪಟ್ಟ ಶಿಲಾಲೇಖಗಳನ್ನೋ ಸನದು ಪತ್ರಗಳನ್ನೋ ಹುಡುಕಾಡಲಿಕ್ಕೆ ಶುರುಮಾಡುತ್ತಾರೆ. ಇತ್ತೀಚೆಗೆ ಮುಸ್ಲೀಂ ಬೌದ್ಧಿಕವಲಯದ ಹಿರಿತಲೆಗಳೊಂದಷ್ಟು ರಾಷ್ಟ್ರ ಒಪ್ಪುವ ಕೆಲವು ಮಾತುಗಳನ್ನಾಡಿದ್ದರು. ರಾಮ ಹುಟ್ಟಿದ ಅಯೋಧ್ಯೆಯಲ್ಲಿರುವ ವಿವಾದಿತ ಸ್ಥಳವನ್ನು ಹಿಂದೂಗಳಿಗೇ ಬಿಟ್ಟುಕೊಟ್ಟುಬಿಡಬೇಕು ಎಂಬುದು ಅವರ ವಾದವಾಗಿತ್ತು. ನ್ಯಾಯಾಲಯ ಮುಸಲ್ಮಾನರ ಪರವಾಗಿಯೇ ನಿರ್ಣಯ ಕೊಟ್ಟಾಗಲೂ ಮುಸಲ್ಮಾನರು ಅದನ್ನು ಹಿಂದೂಗಳಿಗೆ ಬಿಟ್ಟುಕೊಡುವ ಔದಾರ್ಯ ತೋರಬೇಕೆಂಬುದು ಅವರ […]

ಆರ್ಟಿಕಲ್ 370 ಹೋದಮೇಲೆ ಏನಾಯ್ತು?!

Wednesday, October 23rd, 2019

ಕಾಶ್ಮೀರದ ಕೊಳ್ಳದಲ್ಲಿ ಭಯೋತ್ಪಾದಕರನ್ನು ಇಲ್ಲದಂತೆ ಮಾಡುತ್ತೇವೆಂದು ಎಲ್ಲಾ ಸಕರ್ಾರಗಳು ಘೋಷಿಸಿವೆ. ಆದರೆ ಅದನ್ನು ಆಚರಣೆಗೆ ತರುವಲ್ಲಿ ಮಾತ್ರ ಯಾರೂ ಯಶಸ್ವಿಯಾಗಿಲ್ಲ. ಪುಲ್ವಾಮಾದಾಳಿಯ ನಂತರ ಚುರುಕಾಗಿರುವ ಭಾರತೀಯ ಗೂಢಚರ ಪಡೆ ಮತ್ತು ಸೈನ್ಯ 2019ರ ಮೊದಲ ಆರು ತಿಂಗಳಲ್ಲೇ 121ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹೊಡೆದು ಬಿಸಾಡಿದೆ. ಕಾಶ್ಮೀರದಲ್ಲಿ ಆಟರ್ಿಕಲ್ 370 ಮತ್ತು 35 ಎ ತೆಗೆದೊಗೆದು ಎರಡು ತಿಂಗಳಾಗುತ್ತಾ ಬಂತು. ಆದರೆ ಎಲ್ಲವೂ ಶಾಂತವಾಗಿಯೇ ಇದೆ. ‘370ನ್ನು ಮುಟ್ಟಿ ನೋಡೋಣ’ ಎಂದು ಬೆದರಿಸುತ್ತಿದ್ದ ದೆವ್ವಗಳೆಲ್ಲವೂ ಬೆದರುಬೊಂಬೆಗಳಾಗಿಯಷ್ಟೇ ಉಳಿದುಬಿಟ್ಟಿವೆ. ಕಾಶ್ಮೀರದ […]

ಹೌಡಿಯಲ್ಲಿ ಮೋದಿ ಮೋಡಿ!

Wednesday, October 23rd, 2019

ಟ್ರಂಪ್ ಪ್ರಚಾರಕ್ಕೆಂದೇ ನಡೆದದ್ದೆಂಬುದರಲ್ಲಿ ಯಾರಿಗೂ ಅನುಮಾನವುಳಿಯಲು ಸಾಧ್ಯವೇ ಇಲ್ಲ. ಅದರಲ್ಲೂ ಟೆಕ್ಸಾಸ್ನ ಈ ಪ್ರದೇಶವನ್ನು ಪ್ರಚಾರಕ್ಕೆಂದು ಮೋದಿ ಆಯ್ದುಕೊಂಡಿರುವುದರಲ್ಲಿ ಅರ್ಥವಿದೆ. ಅಮೇರಿಕಾದ ಅಧ್ಯಕ್ಷರ ಗೆಲುವಿಗೆ ಭಾರತದ ಪ್ರಧಾನಿ ಭಾಷಣ ಮಾಡಬೇಕು ಎನ್ನುವುದೇ ಇತ್ತೀಚಿನ ದಿನಗಳಲ್ಲಿ ಬದಲಾದ ಭಾರತದ ಸ್ಥಾನಮಾನವನ್ನು ಸೂಚಿಸುತ್ತದೆ. ಹೌದು ನಾನು ಹೌಡಿ ಮೋದಿ ಕಾರ್ಯಕ್ರಮದ ಬಗ್ಗೆಯೇ ಮಾತನಾಡುತ್ತಿದ್ದೇನೆ. 50 ಸಾವಿರ ಜನರೆದುರಿಗೆ ನರೇಂದ್ರಮೋದಿ ಅಮೇರಿಕಾದ ಅಧ್ಯಕ್ಷರನ್ನು ಪರಿಚಯಿಸಿಕೊಟ್ಟ ರೀತಿ ಹಾಗೆಯೇ ಇತ್ತು. ‘ಈ ಹಿಂದೆ ನೀವು ನನ್ನನ್ನು ನಿಮ್ಮ ಪರಿವಾರಕ್ಕೆ ಪರಿಚಯಿಸಿದ್ದೀರಿ. ನಾನೀಗ ನಿಮ್ಮನ್ನು […]

ಇಸ್ರೊ ಸಾಧನೆಯನ್ನು ಹೀಗಳೆದ ನಮ್ಮವರು!

Wednesday, October 23rd, 2019

ನರೇಂದ್ರಮೋದಿ ಇಸ್ರೊದ ಆ ವಾತಾವರಣದಲ್ಲಿ ಒಂದರೆಕ್ಷಣವೂ ನಿಲ್ಲದೇ ತಮ್ಮ ಕೋಣೆಗೆ ಹೊರಟರು. ಸುಮಾರು ಏಳುವರೆಯ ಹೊತ್ತಿಗೆ ಮತ್ತೆ ತಯಾರಾಗಿ ಮರಳಿ ಇಸ್ರೊಕ್ಕೆ ಬಂದರು. ಅಲ್ಲಿಯವರೆಗೂ ಎಲ್ಲರ ಮುಖದಲ್ಲೂ ಧಾವಂತ. ಮೋದಿಯವರ ಪ್ರತಿಕ್ರಿಯೆ ಹೇಗಿರಬಹುದು ಎಂಬುದಕ್ಕಾಗಿ ಅವರು ಕಾತರಿಸುತ್ತಿದ್ದರು. ಇಸ್ರೊದ ಖ್ಯಾತಿಯ ವ್ಯಾಪ್ತಿ ದಿನೇ ದಿನೇ ವಿಸ್ತರಿಸುತ್ತಿದೆ. ಮೊನ್ನೆಯಂತೂ ಚಂದ್ರಯಾನ್-2ರಲ್ಲಿ ಇಸ್ರೊ ಸೋತೂ ಗೆದ್ದಿದೆ. ಸೋಲಿಗೂ ಭಿನ್ನ-ಭಿನ್ನ ಆಯಾಮಗಳಿರುತ್ತವೆ. ಕ್ರಿಕೆಟಿನಲ್ಲಿ 350ಕ್ಕೂ ಹೆಚ್ಚಿನ ಸ್ಕೋರನ್ನು ಅಟ್ಟಿಸಿಕೊಂಡು ಹೋಗಿ ಒಂದು ರನ್ನಿನಿಂದ ಸೋತಾಗ, ವಾಸ್ತವವಾಗಿ ಸೋಲೇ ಆದರೂ ಯಾರೂ ಅದನ್ನು […]

ಪುಟ್ಟ ಭೂತಾನ್ ಏನೆಲ್ಲಾ ಕಲಿಸಿಬಿಡುತ್ತದೆ!

Wednesday, October 23rd, 2019

ಭೂತಾನಿಗರು ತಮ್ಮ ಎಲ್ಲಾ ಪಾಪಗಳನ್ನು ಭಾರತದ ಮೇಲೆ ಹೇರಿಬಿಡುತ್ತಾರೆ. ಉದಾಹರಣೆಗೆ ಭೂತಾನ್ ಬುದ್ಧನ ಅನುಯಾಯಿಗಳ ನಾಡಾಗಿರುವುದರಿಂದ ಅಲ್ಲಿ ಪ್ರಾಣಿಹತ್ಯೆ ನಡೆಯುವುದಿಲ್ಲ. ಆದರೆ ಇಲ್ಲಿರುವ ಬಹುತೇಕ ವಜ್ರಯಾನ ಪಂಥದ ಬೌದ್ಧಾನುಯಾಯಿಗಳು ಮಾಂಸಾಹಾರಿಗಳೇ. ಆದರೆ ಅವರು ಇಲ್ಲಿ ಕೋಳಿ, ಕುರಿಗಳನ್ನು ಬಿಡಿ, ಮೀನನ್ನೂ ಕೂಡ ಸಾಯಿಸುವುದಿಲ್ಲ. ಖಂಡಿತವಾಗಿಯೂ ಇದು ನಂಬಲಸಾಧ್ಯ. ದೇಶ ಸುತ್ತೋದು ಕೋಶ ಓದೋದು ಅನುಭವವನ್ನು ಹೆಚ್ಚಿಸಿಕೊಳ್ಳಲಿಕ್ಕೆ ಬಹಳ ಅಗತ್ಯ ಎಂದು ಹಿರಿಯರೇನೋ ಹೇಳುತ್ತಾರೆ. ಆದರೆ ಧಾವಂತದ ಬದುಕಿನಲ್ಲಿ ದೇಶ ಪರ್ಯಟನೆಗೆ ಅವಕಾಶ ಯಾರು ಕೊಡುತ್ತಾರೆ ಹೇಳಿ. ಬೆಳಗಾಗೆದ್ದರೆ […]

ಇಟ್ಟ ಹೆಜ್ಜೆ ತಪ್ಪಾದರೆ ಎಷ್ಟೊಂದು ದುರಂತ!

Wednesday, October 23rd, 2019

ಜೀವನಾಥನ್ ಎಂಬ ಹೆಸರಿನೊಂದಿಗೆ ನೇಪಾಳ ಪ್ರವೇಶಿಸಿದ ಅಮರ್ ಚುರುಕಾಗಿ ಕೆಲಸ ಆರಂಭಿಸಿದರು. ತಮ್ಮದ್ದೇ ಆದ ಜಾಲವೊಂದನ್ನು ಸಿದ್ಧಪಡಿಸಿಕೊಂಡಿದ್ದಲ್ಲದೇ ಅಲ್ಲಿ ತಮಗೆ ಬೇಕಾದ ವ್ಯವಸ್ಥೆಯನ್ನೂ ಹೊಸದಾಗಿ ನಿಮರ್ಾಣ ಮಾಡಿಕೊಂಡರು. ರಿಸಚರ್್ ಆ್ಯಂಡ್ ಅನಾಲಿಸಿಸ್ ವಿಂಗ್ನ (ರಾ) ನಿದರ್ೇಶಕರಾಗಿದ್ದ ಅಮರ್ಭೂಷಣ್ ಅವರ ‘ಇನ್ಸೈಡ್ ನೇಪಾಲ್’ ಎಂಬ ಪುಸ್ತಕ ಮಾರುಕಟ್ಟೆಗೆ ಬಂದಿದೆ. ಗೂಢಚಾರರು ಒಂದಿಡೀ ರಾಷ್ಟ್ರದ ಹಣೆಬರಹವನ್ನು ಹೇಗೆ ಬದಲಾಯಿಸಿಬಿಡುತ್ತಾರೆಂಬ ರೋಮಾಂಚನಕಾರಿ ಅಧ್ಯಾಯಗಳನ್ನು ಇದು ಒಳಗೊಂಡಿದೆ. ಹಿಂದಿನಿಂದಲೂ ನೇಪಾಳ ರಾಜಪರಿವಾರದ ಕೈಯಲ್ಲಿತ್ತು. 90ರ ದಶಕದಲ್ಲಿ ವೀರೇಂದ್ರ ವಿಕ್ರಮ್ಸಿಂಗ್ ನೇಪಾಳವನ್ನು ಆಳುತ್ತಿದ್ದರು. ಭಾರತ […]

370 ರದ್ದಾದರೂ ದಂಗೆಗಳಿಲ್ಲವಲ್ಲ, ಏಕೆ?

Wednesday, October 23rd, 2019

ಮೋದಿ-ಶಾಹ್ ಜೋಡಿಯ ಮನಸ್ಸನ್ನು ಅಧ್ಯಯನ ಮಾಡುವುದು ಜೊತೆಗಿರುವವರಿಗೂ ಸಾಧ್ಯವಾಗಲಾರದು. ಕಾಶ್ಮೀರದಲ್ಲಿ ಸ್ವಾತಂತ್ರ್ಯದ ಲಾಗಾಯ್ತು ಇದ್ದ ಸಮಸ್ಯೆಯನ್ನು ಚಿಟಿಕೆ ಹೊಡೆದಂತೆ ಸಮಾಪ್ತಿಗೊಳಿಸಿದ ಈರ್ವರೂ ಆನಂತರ ಸಮಸ್ಯೆ ದೇಶದಾದ್ಯಂತ ವ್ಯಾಪಿಸದಂತೆ ತಡೆದ ರೀತಿ ಇದೆಯಲ್ಲ ಅದು ನಿಜಕ್ಕೂ ಅಪರೂಪದ್ದು. ನಮ್ಮ ದೇಶವನ್ನು ಕಂಡು ಎಲ್ಲೆಲ್ಲೂ ಹೊಟ್ಟೆಯುರಿ ದಿನೇದಿನೇ ಹೆಚ್ಚುತ್ತಿದೆ. ಒಂದೆಡೆ ನರೇಂದ್ರ ಮೋದಿಗೆ ಮುಸ್ಲೀಂ ರಾಷ್ಟ್ರಗಳಲ್ಲಿ ಸಿಗುತ್ತಿರುವ ಬೆಂಬಲ ಪಾಕೀಸ್ತಾನವನ್ನು ಕಂಗೆಡಿಸುತ್ತಿದ್ದರೆ ಮತ್ತೊಂದೆಡೆ ಆಟರ್ಿಕಲ್ 370 ಕಿತ್ತು ಬಿಸಾಡಿ ಸಮಸ್ಯೆಯನ್ನು ವೃಣವಾಗಿಸಿ ಲಾಭ ಪಡೆಯುತ್ತಿದ್ದ ಕಾಂಗ್ರೆಸ್ಸು ಈಗ ಚಿದಂಬರಂ ಮತ್ತು […]