ಇತಿಹಾಸದಿಂದ ಕಲಿತ ಪಾಠ ನಾಳೆಗಳಿಗೆ ದಾರಿಯಾಗಲಿ
Friday, August 23rd, 2013ಇಷ್ಟು ದಿನ ಕಾಶ್ಮೀರ ಸಮಸ್ಯಾಗ್ರಸ್ತವಾಗಿತ್ತು. ಈಗ ಆತಂಕ ಜಮ್ಮುವಿಗೆ ಹಬ್ಬಿದೆ. ಮತಾಂಧತೆಯ ಕ್ಯಾನ್ಸರ್ ಹಬ್ಬುತ್ತಿದೆ. ಕಿಶ್ತ್ವಾರ್ನ ಘಟನೆಗಳು ದೇಶದ ಪಾಲಿಗೆ ಮತ್ತೊಂದು ವಿಭಜನೆಯ ಮುನ್ಸೂಚನೆಯೇ ಸರಿ. ನಾವೀಗ ಸ್ವಲ್ಪ ಎಚ್ಚರಿಕೆಯಿಂದ ಹೆಜ್ಜೆ ಇಡಲಿಲ್ಲವೆಂದರೆ ದೇಶದಾದ್ಯಂತ ದಂಗೆಗಳ ಮಹಾಪೂರವೇ ನಡೆಯಲಿದೆ. ಅನುಮಾನವೇ ಇಲ್ಲ. ಸ್ವಾತಂತ್ರ್ಯ ಬಂದು ೬೬ ಭರ್ತಿ ವರ್ಷಗಳು ಕಳೆದೇ ಹೋದವು ನೋಡಿ. ಆರೂವರೆ ಲಕ್ಷ ಜನರ ಬಲಿದಾನದ ರಕ್ತದಲ್ಲಿ ತೇಲಿಬಂದದ್ದು ಆ ನೌಕೆ. ಸ್ವಾತಂತ್ರ್ಯ ಬಂದ ನಂತರ ಈ ಬಲಿದಾನದ ಉಲ್ಲೇಖ ಮಾಡಲು ದೇಶ ಮರೆತೇಬಿಟ್ಟಿತು. […]