ವಿಭಾಗಗಳು

ಸುದ್ದಿಪತ್ರ


 

ನೌಕೆಗಳ ಮೂಲಕ ಜಗತ್ತನ್ನು ಆಳಿದ ಭಾರತ..

Thursday, November 12th, 2015

ಭಾರತೀಯರಿಗೆ ನೌಕಾಯಾನ ಅನಿವಾರ್ಯವಾಗಿತ್ತು. ಉತ್ತರದಲ್ಲಿ ಹಿಮಾಲಯ ನಮಗೆ ರಕ್ಷಣೆಯಷ್ಟೇ ಅಲ್ಲ, ವಿಸ್ತಾರಗೊಳ್ಳದಂತೆ ತಡೆಗೋಡೆಯೂ ಆಗಿತ್ತು. ದಕ್ಷಿಣದ ಮೂರೂ ದಿಕ್ಕುಗಳಲ್ಲಿ ವಿಶಾಲವಾಗಿ ಹರಡಿಕೊಂಡ ಸಾಗರ. ಮೈ ಚಳಿ ಬಿಡದೇ ಬೇರೆ ದಾರಿಯೇ ಇರಲಿಲ್ಲ. ಖ್ಯಾತ ಇತಿಹಾಸಜ್ಞ ಡಾ|| ರಾಧಾಕುಮುದ ಮುಖಜರ್ಿಯವರ ಪ್ರಕಾರ ಸಿಂಧೂ ನದಿಯ ಬಯಲಿನಲ್ಲಿ ಸುಮಾರು 6000 ವರ್ಷಗಳಷ್ಟು ಹಿಂದೆ ನೌಕೆ ನಿಮರ್ಾಣದ ತಂತ್ರಜ್ಞಾನ ಹುಟ್ಟಿಕೊಂಡಿತು! ಅದರರ್ಥ ಆಗಿನ್ನೂ ಏಸು ಕ್ರಿಸ್ತರ ಜನನವಾಗಿರಲಿಲ್ಲ; ಇಸ್ಲಾಂ ಕಣ್ ಬಿಟ್ಟಿರಲಿಲ್ಲ. ಖಲೀಫಾ ಹರುನ್ ಅಲ್ ರಶೀದ್ ಅನಾರೋಗ್ಯದ ಸಮಸ್ಯೆಯಿಂದ ನರಳುತ್ತಿದ್ದರು. […]

ಬಲು ದಿನದ ಕನಸು ನನಸಾಗುತ್ತಿದೆ

Thursday, November 5th, 2015

ರಷ್ಯಾ ಚೀನಾದೊಂದಿಗಿನ ತನ್ನ ಬಾಂಧವ್ಯವನ್ನೂ ಕಡಿಮೆ ಮಾಡಿಕೊಳ್ಳುತ್ತಿದೆ. ಈ ಹಿಂದೆ ಚೀನಾದೊಂದಿಗೆ ಸೇರಿ ಯುದ್ಧ ವಿಮಾನ ಅಭಿವೃದ್ಧಿ ಪಡಿಸುವ ಯೋಜನೆಯ ಹೊತ್ತಲ್ಲಿ ಚೀನಾ ತಂತ್ರಜ್ಞಾನವನ್ನು ಕದ್ದ ನೆನಪು ರಷ್ಯನ್ನರಿಗೆ ಹಸಿಯಾಗಿದೆ. ಹೀಗಾಗಿ ಈ ಬಾರಿ ಅವರು ಖಿ-50 ಎಂಬ ಫೈಟರ್ ವಿಮಾನದ ತಯಾರಿಗೆ ಭಾರತದೊಂದಿಗೆ ಕೈ ಜೋಡಿಸಿದ್ದಾರೆ. ಚೀನಾ ಜಗತ್ತಿನ ಭರವಸೆಯನ್ನು ಕಳಕೊಂಡಿದೆ. ಆ ಹೊತ್ತಿಗೆ ಸರಿಯಾಗಿ ಭಾರತ ಬಲಾಢ್ಯವಾಗಿ ನಿಂತಿದೆ. ಚೀನಾ ಪಾಕಿಸ್ತಾನ್ ಎಕಾನಾಮಿಕ್ ಕಾರಿಡಾರ್ ಕೇಳಿದ್ದೀರಲ್ಲಾ? ಸುಮಾರು 3 ಸಾವಿರ ಕಿಮೀಗಳಷ್ಟು ಉದ್ದದ ಚೀನಾ-ಪಾಕಿಸ್ತಾನ […]

ನಿಧಿ ತುಂಬಿದ ಪಾತ್ರೆ, ಯಾರು ಹೊಣೆ ತೆಗೆದು ನೋಡದಿದ್ರೆ?

Thursday, November 5th, 2015

ಆ ವೇಳೆಗಾಗಲೇ ರಾಜಾಶ್ರಯ ಪಡೆದ ಅರಬ್ಬೀ, ಪಷರ್ಿಯನ್ಗಳು ಈ ನೆಲದಲ್ಲಿ ಸಾಕಷ್ಟು ಬೆಳೆದಿದ್ದವು. ಮುಂದೆ ಇವೆರಡೂ ಸೇರಿಕೊಂಡು ಉದರ್ು ಹುಟ್ಟಿತು. ಅನಿವಾರ್ಯತೆಯ ಕಾರಣದಿಂದ ಸಾಮಾನ್ಯ ಜನ ಈ ಭಾಷೆಗಳಿಗೆ ಜೋತು ಬಿದ್ದರು. ಸಂಸ್ಕೃತವನ್ನು ಬಿಡಲು ಸಾಧ್ಯವೇ ಇಲ್ಲದವರು ಮಾತ್ರ ತಮ್ಮದೇ ಲೋಕವೊಂದನ್ನು ಸೃಷ್ಟಿಸಿಕೊಂಡು ವೇದಾಧ್ಯಯನ ಮಾಡುತ್ತ ಉಳಿದರು. ಹೀಗೆ ಆಕ್ರಮಣಕಾರರ ಭಾಷೆಯಿಂದ ಸಂಸ್ಕೃತವನ್ನು ಕಾಪಿಡುವ ಭರದಲ್ಲಿ ಸಂಸ್ಕೃತ ತನ್ನವರಿಂದಲೂ ದೂರವಾಯ್ತು. ಕೆಲವು ಪಂಡಿತರು ನವಾಬರನ್ನು ಮೆಚ್ಚಿಸಲು ಸಂಸ್ಕೃತದ ಜ್ಞಾನವನ್ನು ಯಥೇಚ್ಛವಾಗಿ ಧಾರೆಯೆರೆದರು. ಇನ್ನೂ ಕೆಲವರು ಸಂಸ್ಕೃತವನ್ನು ಮೂಲ […]

ಕಂಪ್ಯೂಟರ್ಗೆ ಸಂಸ್ಕೃತವನ್ನು ಕಂಡರೆ ಪ್ರೀತಿ ಅದೇಕೆ ಗೊತ್ತಾ?

Monday, October 26th, 2015

ನಮ್ಮದೆನ್ನುವ ವಿಚಾರಗಳ ಮೇಲೆ ನಾವು ಅಸಡ್ಡೆ ತೋರಿದರೆ ಬೇರೆಯವರು ಅದನ್ನು ಏಕಾದರೂ ಒಪ್ಪಬೇಕು? ಹಾಗಂತ ಕುರುಡು ಅಭಿಮಾನವೂ ಬೇಕಿಲ್ಲ. ಭಾರತೀಯವಾದುದರ ಎಲ್ಲದರ ಹಿಂದೆಯೂ ಇರುವ ದೂರದೃಷ್ಟಿ, ವೈಜ್ಞಾನಿಕ ಅಭಿಪ್ರಾಯ, ಕಾಳಜಿ ಇವೆಲ್ಲವನ್ನೂ ತಿಳಿದೇ ಅನುಮೋದಿಸೋಣ. ಸುಖಾಸುಮ್ಮನೆ ಜರಿಯುವುದಕ್ಕೇನೂ ಹಾದಿಗೊಬ್ಬರು, ಬೀದಿಗೊಬ್ಬರು ಸಿಗುತ್ತಾರೆ. ನಾವಾದರೂ ಅರಿತು ಆಚರಿಸೋಣ. ಕೆಲವರಿರುತ್ತಾರೆ. ಪ್ರಸ್ಥಾಪಿತ ಸತ್ಯವನ್ನು ಧಿಕ್ಕರಿಸಿಯೇ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಅವರಿಗೆ ಸಮಷ್ಟಿಯ ವಿಕಾಸ ಬೇಕಿಲ್ಲ, ತಮ್ಮ ಬೆಳವಣ ಗೆ ಆದರೆ ಸಾಕು. ಇಂಥವರನ್ನೇ ಬಹುಶಃ ಬುದ್ಧಿ ಜೀವಿಗಳೆನ್ನುತ್ತಾರೇನೋ? ಇವರಲ್ಲಿ ಕಾವಿಧಾರಿಯಾದ […]

ರಾಷ್ಟ್ರಭಾಷೆಯಲ್ಲ , ಸಂಸ್ಕೃತ ವಿಶ್ವಭಾಷೆಯಾಗಲಿ!!

Wednesday, October 21st, 2015

ಸಂಸ್ಕೃತದ ಅರ್ಥವೇ ಹಾಗೆ. ‘ಸಮ್ಯಕ್ ಕೃತಂ’. ಯಾವುದು ಪರಿಪೂರ್ಣ ರೂಪದಲ್ಲಿದೆಯೋ ಅದೇ ಸಂಸ್ಕೃತ ಅಂತ. ಬ್ರಹ್ಮ ಇದನ್ನು ಋಷಿಗಳಿಗೆ ಕೊಟ್ಟಿದ್ದಂತೆ. ಅಲ್ಲಿಂದ ದೇವತೆಗಳಿಗೆ. ಹೀಗಾಗಿ ಇದನ್ನು ದೇವಭಾಷೆ ಅಂತಾನೂ ಕರೀತಾರೆ. ದೇವರಿಲ್ಲದ ಕಲ್ಪನೆ ನಮ್ಮಲ್ಲಿ ಇಲ್ಲವೇ ಇಲ್ಲ. ವ್ಯಾಕರಣ ರಚನೆಗೆ ಬೇಕಾದ ಮೂಲ ಸೂತ್ರಗಳು ಶಿವನ ಢಮರುವಿನಿಂದ ಹೊರಟ ಸದ್ದುಗಳು ಎನ್ನಲಾಗುತ್ತದೆ. ಈ ಸೂತ್ರಗಳ ಜಾಡು ಹಿಡಿದೇ ಪಾಣಿನಿಯು ತನ್ನ ಸೂತ್ರಗಳಿಗೆ ರೂಪು ಕೊಟ್ಟಿರೋದು. ಇವೆಲ್ಲ ಕೇಳಲಿಕ್ಕೆ ಅದೆಷ್ಟು ಸುಂದರ ಅಲ್ಲವೇ? ಭಾಷೆಯನ್ನೂ ಕೂಡ ದೈವತ್ವಕ್ಕೇರಿಸುವ ಪರಿ […]

ಪಕ್ಕಾ ಕಮ್ಯುನಿಸ್ಟ್ ನರೇಂದ್ರ ಮೋದಿ!

Saturday, October 17th, 2015

ಸಾಹಿತಿ-ಕಲಾವಿದರ ವೇಷದಲ್ಲಿರುವ ಅನೇಕರು ರಾಜಕಾರಣಿಗಳಿಂತ ಭ್ರಷ್ಟರು. ಬಡ ಸಾಹಿತಿಗಳ-ಕಲಾವಿದರ ಅವಕಾಶಗಳನ್ನು ಕಸಿದು ಮಜಾ ಉಡಾಯಿಸುವವರು. ದೆಹಲಿಯಲ್ಲಿ ಒಂದಷ್ಟು ಜನ ತಿಂಗಳಿಗೆ 20ಸಾವಿರಕ್ಕಿಂತ ಕಡಿಮೆ ದುಡಿಯುವ ಕಲಾವಿದರಿಗೆ ಮೂರು ವರ್ಷಕ್ಕೆಂದು ಕೊಡುವ ಮನೆಗಳಲ್ಲಿ ಮೂರ್ಮೂರು ದಶಕಗಳಿಂದ ವಾಸವಾಗಿದ್ದು ಮೋದಿ ಬಂದ ಮೇಲೇ ಹೊರ ಬಂದಿದ್ದು. ಕಾಂಗ್ರೆಸ್ಸು ಇವರ ವಿರುದ್ಧ ಚಕಾರ ಎತ್ತುವುದಿಲ್ಲ. ಹೀಗಾಗಿ ಆ ಸಕರ್ಾರ ಮಾಡುವ ಯಾವ ತಪ್ಪುಗಳೂ ಇವರಿಗೆ ತಪ್ಪೇ ಅಲ್ಲ! ಈ ಕೇಂದ್ರ ಸಕರ್ಾರ ಮುಲಾಜಿಲ್ಲದೇ ಅವರನ್ನೆಲ್ಲ ಹೊರದಬ್ಬಿದೆ. ಹೀಗೆ ಹೊರದಬ್ಬಿಸಿಕೊಂಡವರಲ್ಲಿ ಫೈರ್, ವಾಟರ್ […]

ನಿಗೂಢ ಸಾವು ನೇತಾಜಿಯದ್ದಷ್ಟೇ ಅಲ್ಲ!

Friday, October 16th, 2015

ರಾಜೇಶ್ ಪೈಲೆಟ್, ಜಿತೇಂದ್ರ ಪ್ರಸಾದ್ ಮತ್ತು ಮಾಧವ್ ರಾವ್ ಸಿಂಧ್ಯಾರ ಸರಣಿ ಸಾವಿನ ಕುರಿತಂತೆಯೂ ಹೀಗೇ ಅನುಮಾನಗಳಿವೆ. ಇಂದಿರಾಗಾಂಧಿಯ ಹತ್ಯೆಯ ಕುರಿತಂತೆಯೂ ಅನೇಕ ಊಹಾಪೋಹಗಳಿವೆ. ಕೊನೆಗೆ ರಾಜೀವ್ಗಾಂಧಿಯವರ ಹತ್ಯೆಯಲ್ಲಿ ಅಮೇರಿಕ ಸಿ.ಐ.ಎ ಏಜೆಂಟರ ಕೈವಾಡ, ತಮಿಳುನಾಡಿನ ಕೆಲವು ಕಾಂಗ್ರೆಸ್ ನಾಯಕರ ಕರಾಮತ್ತು ಇದ್ದುದರ ಕುರಿತಂತೆ ವಿಸ್ತೃತ ಕೃತಿಯೇ ಪ್ರಕಟವಾಗಿದೆ. ರಾಜಕೀಯ ಹಿತಾಸಕ್ತಿಗಳ ಕಾರಣಕ್ಕಾಗಿ ತಮ್ಮವರನ್ನೂ ಕೊಲೆಗೈಯ್ಯುವ ಈ ಪರಿವಾರ ಅತ್ಯಂತ ಕ್ರೂರ ಮತ್ತು ಹೇಯ! ಸ್ವಾತಂತ್ರ್ಯ ಪ್ರಾಪ್ತಿಗಾಗಿ ಆರು ದಶಕಗಳು ಕಳೆದ ನಂತರವೂ ಉತ್ತರಿಸಲಾಗದ ಅನೇಕ ಪ್ರಶ್ನೆಗಳು […]

ವಿಶ್ವಗುರುವಿಗೆ ಜೊತೆಯಾಗಬಹುದಾದ ವಿಶ್ವಭಾಷೆ!

Friday, October 16th, 2015

1786 ರಲ್ಲಿ ಯುರೋಪಿನ ಭಾಷಾ ತಜ್ಞ ವಿಲಿಯಂ ಜೋನ್ಸ್ ‘ಸಂಸ್ಕೃತದ ಪ್ರಾಚೀನತೆಯ ಬಗ್ಗೆ ಚಚರ್ೆಗಳು ಏನೇ ಇರಲಿ, ಅದರ ವಿನ್ಯಾಸ ಅತ್ಯದ್ಭುತ; ಅದು ಗ್ರೀಕರ ಭಾಷೆಗಿಂತ ಪರಿಪೂರ್ಣ, ಲ್ಯಾಟಿನ್ಗಿಂತ ಸಮೃದ್ಧ ಮತ್ತು ಇವೆರಡಕ್ಕಿಂತಲೂ ಉತ್ಕೃಷ್ಟವಾಗಿ ಪರಿಷ್ಕರಿಸಲ್ಪಟ್ಟ ಭಾಷೆ’ ಎಂದ. ಈ ಮೂರು ಭಾಷೆಗಳ ನಡುವಿನ ಸಾಮ್ಯವನ್ನು ಗುರುತಿಸಿ ಆಶ್ಚರ್ಯಚಕಿತನಾದ ಆತ ಇವೆಲ್ಲಕ್ಕೂ ಒಂದೇ ಮೂಲವಿದೆಯೆಂದು ಪ್ರತಿಪಾದಿಸಿದ. ಅದು ಸಂಸ್ಕೃತವೇ ಆಗಿರಲಾರದೆಂಬ ಸಹಜ ಆಳುವ ವರ್ಗದ ಧಿಮಾಕು ಅವನಿಗಿತ್ತು. ಹೇಗಾದರೂ ಮಾಡಿ ‘ಸಂಸ್ಕೃತಕ್ಕಿಂತಲೂ ಪ್ರಾಚೀನವಾದ ಭಾಷೆ ಮತ್ತೊಂದಿತ್ತು’ ಎಂದು […]

ಯುದ್ಧದ ಹಿಂದೆಯೂ ಅಡಗಿರುವ ಶಬ್ದ ವಿಜ್ಞಾನ!

Friday, October 16th, 2015

ಅಶ್ವತ್ಥಾಮ ಅಜರ್ುನನ ಮೇಲೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದ್ದು ನಾವು ಕೇಳುತ್ತೇವಲ್ಲ. ಹಾಗೆ ಪ್ರಯೋಗಕ್ಕೆ ನಿಂತಾಗ ಆತ ಕೈಲಿ ಹಿಡಿದಿದ್ದು ಹುಲ್ಲಿನ ಎಸಳು ಮಾತ್ರ. ಮನಸ್ಸನ್ನು ಏಕಾಗ್ರ ಗೊಳಿಸಿಕೊಂಡು ಬ್ರಹ್ಮಾಸ್ತ್ರಕ್ಕೆ ಬೇಕಾದ ಮಂತ್ರೋಚ್ಚಾರಣೆ ಮಾಡುತ್ತಾ ಹುಲ್ಲು ಕಡ್ಡಿಯನ್ನೇ ಶಸ್ತ್ರ ಮಾಡಿಬಿಟ್ಟ. ಬ್ರಹ್ಮಾಸ್ತ್ರವನ್ನು ಎಸೆದಾಗ ಅಲ್ಲಿಯ ವಾತಾವರಣದ ಬಿಸಿ ತಡೆಯಲಾಗದಷ್ಟು ಏರಿತಂತೆ. ನಿಂತಲ್ಲೇ ಸುಟ್ಟು ಹೋಗುವಂತಹ ಅನುಭವ. ಒಂದು ರೀತಿಯಲ್ಲಿ ನೋಡುವುದಾದರೆ ಇಂದಿನ ದಿನ ಮಾನದ ಅಣುಬಾಂಬ್ ಸಿಡಿದಾಗ ಆಗುವ ಅನುಭವವೇ. ರಾಮಾಯಣ-ಮಹಾಭಾರತಗಳನ್ನು ಯಾರು ಅದೆಷ್ಟೇ ಜರಿದರೂ ಜಗತ್ತಿನಲ್ಲಿ ಅತ್ಯಂತ ಆಕರ್ಷಣೀಯ […]

ಭಗತ್! ಭರತಖಂಡದ ಇತಿಹಾಸದ ಆರದ ಜ್ಯೋತಿ!!

Monday, September 28th, 2015

ರಷ್ಯಾದ ಸ್ಟಾಲಿನ್ ಕೂಡ ಭಗತ್ನನ್ನು ರಷ್ಯಾಕ್ಕೆ ಬಂದು ಹೋಗುವಂತೆ ಕೇಳಿಕೊಂಡಿದ್ದನಂತೆ! ಇಲ್ಲಿನ ಕಮ್ಯುನಿಸ್ಟ್ ನಾಯಕರಲ್ಲಿ ಕೆಲವರು ಭಗತ್ ಸಿಂಗ್ನನ್ನು ತಮ್ಮೆಡೆ ಸೆಳೆಯಲು ಹರಸಾಹಸ ಮಾಡಿ ಕೊನೆಗೆ ಸ್ಟಾಲಿನ್ಗೆ ಸುದ್ದಿ ಮುಟ್ಟಿಸಿದ್ದರಂತೆ. ಆದರೆ ಕಮ್ಯುನಿಸ್ಟ್ ಆಂದೋಲನಕ್ಕೆ ಭಗತ್ಸಿಂಗ್ ಭಾರತೀಯ ರೂಪ ಕೊಟ್ಟು ಬಿಡುವ ಸಾಧ್ಯತೆಯೇ ಹೆಚ್ಚಾಗಿದ್ದುದರಿಂದ ಈ ಪ್ರಯತ್ನ ಕೈ ಬಿಡಲಾಗಿರಬಹುದೆಂದು ಕೆಲವರು ಊಹಿಸುತ್ತಾರೆ. ಅದೂ ಸರಿಯೇ. ದೇವರನ್ನು ನಂಬುತ್ತಿರಲಿಲ್ಲ, ಬಂಡವಾಳಷಾಹಿಗಳನ್ನು ವಿರೋಧಿಸುತ್ತಿದ್ದ ಎಂದ ಮಾತ್ರಕ್ಕೆ ಅವನನ್ನು ಕಮ್ಯುನಿಸ್ಟ್ ಎಂದುಬಿಡುವುದು ಖಂಡಿತ ಸರಿಯಲ್ಲ. ಅವನು ವಾಸ್ತವವಾಗಿ ದೇಶದೆಡೆಗೆ ಬಲವಾದ […]