ಗೆದ್ದ ಮೇಲೆ ಬಾಲ ಹಿಡಿಯಲು ಎಲ್ಲರೂ ಧಾವಿಸಿ ಬರುತ್ತಾರೆ!
Wednesday, September 26th, 2018ನಮ್ಮ ದೇಶದ ಜನಪ್ರತಿನಿಧಿಗಳು ಟೇಪ್ ಕತ್ತರಿಸುವುದರಲ್ಲೇ ಸಮಯ ಕಳೆದುಬಿಡುತ್ತಾರೆ. ಅವರಿಗೆ ದೂರದೃಷ್ಟಿಯೂ ಇಲ್ಲ, ಜನಪ್ರತಿನಿಧಿಯಾಗಿ ತಮ್ಮ ಕರ್ತವ್ಯದ ಅರಿವೂ ಇಲ್ಲ. ಗೆದ್ದ ಮೇಲೆ ಫೋಟೊ ತೆಗೆಸಿಕೊಳ್ಳಲು ಧಾವಿಸಿ ಬಂದು ನಿಂತುಬಿಡುತ್ತಾರೆ. ಆದರೆ ಗೆಲ್ಲುವುದಕ್ಕೆ ಬೇಕಾದ ಅಗತ್ಯವನ್ನು ಪೂರೈಸುವಲ್ಲಿ ಅವರಿಗೆ ಆಸ್ಥೆಯೂ ಇಲ್ಲ, ಕಲ್ಪನೆಯೂ ಇಲ್ಲ! ಕೆಲವು ದಿನಗಳ ಹಿಂದೆ ಬಂಗಾಳದ ಜಲ್ಪಾಯ್ಗುರಿಯ ಸ್ವಪ್ನ ಬರ್ಮನ್ಳ ಬಗ್ಗೆ ಬರೆದಿದ್ದೆ. ಆಕೆ ಏಷಿಯನ್ ಗೇಮ್ಸ್ನಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಅತ್ಯಂತ ಕಠಿಣವಾಗಿರುವ ಹೆಪ್ಟಾಥ್ಲಾನ್ ಕ್ರೀಡೆಯಲ್ಲಿ ಏಷ್ಯಾದ ಬೆಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಳು. […]