ಪತ್ರಕರ್ತನೇ ಭ್ರಷ್ಟವ್ಯವಸ್ಥೆಯ ಅಡಿಪಾಯವಾದರೆ ಪರಿಹಾರವೇನು?!
Monday, December 31st, 2018ಶಾಸಕಾಂಗ, ಕಾಯರ್ಾಂಗ, ನ್ಯಾಯಾಂಗಗಳ ನಂತರ ಪ್ರಜಾಪ್ರಭುತ್ವದ ರಕ್ಷಣೆಗೆ ಇರುವ ನಾಲ್ಕನೇ ಸ್ತಂಭವೇ ಮಾಧ್ಯಮ ಎಂದು ಹೇಳಲಾಗುತ್ತಿತ್ತು. ಆದರೆ ಮಾಧ್ಯಮವಿಂದು ಅದೆಷ್ಟು ಭ್ರಷ್ಟವಾಗಿ ಹೋಗಿದೆಯೆಂದರೆ ಉಳಿದ ಮೂರು ಸ್ತಂಭಗಳ ಕುರಿತಂತೆ ದನಿಯೆತ್ತುವ ಯೋಗ್ಯತೆಯಾದರೂ ಇದೆಯಾ ಎಂಬುವ ಪ್ರಶ್ನೆ ಖಂಡಿತ ಕಾಡುತ್ತದೆ. ನಮ್ಮ ಕಾಲದಲ್ಲಿ ನಾವು ಕೇಳಬಹುದಾದ ಅತ್ಯಂತ ಕೆಟ್ಟ ಸುದ್ದಿಯೊಂದು ಬಂಗಾಳದಿಂದ ಹೊರಗೆ ಬಂದಿದೆ. ಬಂಗಾಳದ ಖ್ಯಾತ ಪತ್ರಕರ್ತ ಸುಮನ್ ಚಟ್ಟೋಪಾಧ್ಯಾಯ ಶಾರದಾ ಚಿಟ್ಫಂಡ್ನ ಹಗರಣದಲ್ಲಿ ಸಾಕ್ಷಿ ಸಮೇತ ಸಿಕ್ಕುಬಿದ್ದು ಜೈಲುಪಾಲಾಗಿದ್ದಾರೆ. ಸಿಬಿಐನ ನಿದರ್ೇಶನದಂತೆ ಆತನಿಗೆ ಜಾಮೀನು ಕೂಡಾ […]