ವಿಭಾಗಗಳು

ಸುದ್ದಿಪತ್ರ


 

ಮಹಿಳಾವಾದಕ್ಕೊಂದು ಭಾರತೀಯ ಸ್ಪರ್ಶ!

Monday, March 27th, 2017

ಮಹಿಳಾವಾದದ ಭಾರತೀಯ ಚಿಂತನೆಗೆ ನಿವೇದಿತಾ ಕೊಟ್ಟ ವ್ಯಾಖ್ಯೆ ಬಲು ಸುಂದರವಾದುದು. ಅದು ದಾರಿ ತಪ್ಪಿರುವ ರೀತಿ ಅದನ್ನು ಮತ್ತೆ ಹಳಿಗೆ ತರುವ ಮಾರ್ಗ ಎಲ್ಲವನ್ನೂ ಆಕೆ ವಿಷದವಾಗಿ ಹೇಳಿಕೊಟ್ಟಿದ್ದಾಳೆ. ತಿಳಿಯುವ ಸೂಕ್ಷ್ಮಮತಿ ನಮಗೆ ಬೇಕಷ್ಟೇ. ಇದನ್ನರಿತು ಅಂತಹ ಸ್ತ್ರೀವಾದವನ್ನು ಪ್ರತಿಪಾದಿಸುವ ಮಹಿಳೆಯರ ಸಂಖ್ಯೆ ಇಂದು ಹೆಚ್ಚಬೇಕಾಗಿದೆ. ಭಾರತೀಯ ಸಂಸ್ಕೃತಿಯ ಆಳ ವಿಸ್ತಾರಗಳನ್ನು ಸುಲಭದ ಪೆಟ್ಟಿಗೆ ಅರ್ಥ ಮಾಡಿಕೊಳ್ಳುವುದು ಕಷ್ಟ. ಈ ಸಂಸ್ಕೃತಿ ಒಂದೆರಡು ವರ್ಷಗಳ ಚಟುವಟಿಕೆಗಳ ಸಂಗ್ರಹವಲ್ಲ. ಅದು ಸಹಸ್ರಾರು ವರ್ಷಗಳ ಘನೀಭವಿಸಿದ ನವನೀತ. ಈಗಲೂ ಊರ […]

ಇದ್ದಕ್ಕಿದ್ದಂತೆ ಪ್ರೀತಿ ಉಕ್ಕಿದಾಗಲೇ ಅನುಮಾನ ಹುಟ್ಟೋದು!

Tuesday, March 21st, 2017

ಸ್ವತಃ ಎಡಚ ಲೇಖಕ, ಭಾರತದ ಇತಿಹಾಸವನ್ನು ತನಗೆ ಬೇಕಾದಂತೆ ತಿರುಚಿದ ಬಿಪಿನ್ ಚಂದ್ರರೇ ಹೇಳುತ್ತಾರೆ, ‘ಭಗತ್ ಮತ್ತು ಅವನ ಗೆಳೆಯರು ಮಾರ್ಕ್ಸ್ ವಾದದಲ್ಲಿ ಪಂಡಿತರೇನೂ ಆಗಿರಲಿಲ್ಲ. ಹಾಗಂತ ಏನೂ ತಿಳಿದವರಲ್ಲ ಎನ್ನುವಂತೆಯೂ ಇರಲಿಲ್ಲ. ಅವರು ತಾವೇ ಎಲ್ಲೆಡೆ ಅಡ್ಡಾಡಿ ಭಾರತದ ಕ್ರಾಂತಿಯ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುತ್ತಿದ್ದರು’ ಅಂತ. ಅರ್ಥವಾಯಿತಲ್ಲ! ಭಗತ್ರಿಗೆ ಭಾರತೀಯ ಕ್ರಾಂತಿಕಾರ್ಯದ ಸಮಸ್ಯೆಗಳನ್ನು ಅರಿಯಲ್ಲು ಕಮ್ಯುನಿಸಂನ ಪಾಂಡಿತ್ಯ ಬೇಕಿರಲಿಲ್ಲ. ಬಿಪಿನ್ ಚಂದ್ರರು ಮುಂದುವರಿಸಿ ಹೇಳುತ್ತಾರೆ, ‘ಅವರ ಸಮಾಜವಾದದ ಅರ್ಥೈಸಿಕೊಳ್ಳುವಿಕೆಯಲ್ಲಿ ಮತ್ತು ಆಚರಣೆಯಲ್ಲಿ ವಿರೋಧಾಭಾಸಗಳಿತ್ತು. ಅವರು […]

ಭಗತ್ ಸಿಂಗನ ಹೋರಾಟದಲ್ಲೂ ಕಮ್ಯುನಿಸಂನ ವಾಸನೆ ಹಿಡಿದ ಕಾಮ್ರೇಡುಗಳು

Monday, March 20th, 2017

ಭಗತ್ಸಿಂಗ್ ನಾನೇಕೆ ನಾಸ್ತಿಕ ಎಂಬ ಕೃತಿಯಲ್ಲಿ ದೇವರನ್ನು ನಂಬದಿರಲು ಕಾರಣಗಳನ್ನು ಪಟ್ಟಿ ಮಾಡುತ್ತಾನೆ. ಅದನ್ನು ಹಿಡುಕೊಂಡೇ ಎಡಚರೆಲ್ಲ ಭಗತ್ನನ್ನು ತಮ್ಮವನೆನ್ನೋದು. ವಿವೇಕಾನಂದರೂ 33 ಕೋಟಿ ದೇವತೆಗಳನ್ನು ಗಂಟು ಕಟ್ಟಿ ಸಮುದ್ರಕ್ಕೆಸೆಯಿರಿ ಅಂದಿದ್ದರು. ಗೀತೆ ಓದುವುದಕ್ಕಿಂತ ಫುಟ್ಬಾಲ್ ಆಡುವುದು ಭಗವಂತನಿಗೆ ಹತ್ತಿರ ಹೋಗುವ ಮಾರ್ಗ ಎಂದಿದ್ದರು. ಹಾಗಂತ ಅವರು ದೇವರು, ಧರ್ಮದ ವಿರುದ್ಧವೆಂದೇನಲ್ಲ. ಕಾರ್ಯಕರ್ತರನ್ನು ಆಲಸ್ಯದಿಂದ ಅಥವಾ ತೋರಿಕೆಯ ನಿಷ್ಕ್ರಿಯತೆಯಿಂದ ಸಕ್ರಿಯ ಹೋರಾಟದೆಡೆಗೆ ಸೆಳೆದು ತರಲು ಉಪಯುಕ್ತ ಮಾರ್ಗ ಅದು. ಸ್ವತಃ ಭಗತ್ ಈ ಕೃತಿ ಬರೆದ ನಂತರವೂ, […]

ನಿವೇದಿತೆಯ ಋಣ ತೀರಿಸಲು ಜನ್ಮ ಸಾಲದು!

Monday, March 20th, 2017

ಬೋಸರಿಗೆ ಆರ್ಥಿಕ ಸಹಾಯ ಮಾಡಿದ್ದಷ್ಟೇ ಅಲ್ಲ. ಅವರ ಎಲ್ಲಾ ಸಂಶೋಧನಾ ಪ್ರಬಂಧಗಳನ್ನೂ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಅದನ್ನು ಪ್ರಕಟಿಸಲು ಆಕೆ ಬೆನ್ನೆಲುಬಾಗಿ ನಿಂತಳು. ಬೋಸರೊಂದಿಗೆ ಸ್ವತಃ ತಾನೇ ಕೂತು ಅವರ ಪ್ರಬಂಧಗಳನ್ನು ಕರಾರುವಾಕ್ಕಾಗಿ ಮತ್ತು ಆಸಕ್ತಿಕರವಾಗಿ ದಾಖಲಿಸಿ ವಿಷಯದ ಮೇಲೆ ಆಸಕ್ತಿ ಇಲ್ಲದವರೂ ಅರ್ಥೈಸಿಕೊಳ್ಳುವಂತೆ ಪ್ರಭಾವಿಯಾಗಿ ಬರೆದದ್ದು ನಿವೇದಿತೆಯೇ. ಬ್ರಿಟೀಷ್ ವಿಜ್ಞಾನಿಗಳ ಮೇಲೆ ನಿರಂತರ ಒತ್ತಡ ಹೇರಿ ಬೋಸರ ಸಾಧನೆಯನ್ನು ಗೌರವಿಸುವಂತೆ ನಿವೇದಿತೆ ಮಾಡಿದ ಅವಿರತ ಪ್ರಯತ್ನದಿಂದಾಗಿಯೇ ಅವರಿಗೆ ಮುಂದೆ ನೈಟ್ಹುಡ್ ಪದವಿ ದಕ್ಕಿದ್ದು. 1901 ರಲ್ಲೊಮ್ಮೆ […]

ನಿದ್ದೆಯಲ್ಲಿ ನಡೆದಾಡುವ ಪುರುಷತ್ವಹೀನ ಜನಾಂಗ!

Saturday, March 18th, 2017

ನಿವೇದಿತಾ ಇಷ್ಟೊಂದು ಭಾರತಪ್ರೇಮಿಯಾಗಿದ್ದು ಯಾವಾಗಿನಿಂದ? ಬರಿ ಸ್ವಾಮಿ ವಿವೇಕಾನಂದರೆಡೆಗಿನ ಗೌರವದಿಂದಾಗಿಯೇ ಆಕೆ ಭಾರತವನ್ನು ಪ್ರೀತಿಸಿದ್ದಾ? ಹಾಗಿದ್ದರೆ ಅದು ಇಷ್ಟು ಕಠೋರವಾದ ಮತ್ತು ದೀರ್ಘಕಾಲದ ಭಾರತ ಭಕ್ತಿಯಾಗಿ ಪರಿವರ್ತನೆಯಾಗಲು ಸಾಧ್ಯವೇ ಆಗುತ್ತಿರಲಿಲ್ಲ. ತಾನೇ ಶುರು ಮಾಡಿದ ಹೆಣ್ಣುಮಕ್ಕಳ ಶಾಲೆಯಲ್ಲಿ ಭಾರತದ ರಾಣಿ ಯಾರು? ಎಂಬ ಪ್ರಶ್ನೆಗೆ ಪುಟ್ಟ ಮಕ್ಕಳು ‘ಕ್ವೀನ್ ವಿಕ್ಟೋರಿಯಾ’ ಎಂದಾಗ ಕೆಂಡವಾದ ನಿವೇದಿತಾ ‘ಅಲ್ಲಲ್ಲ ಭಾರತದ ರಾಣಿ ಸೀತೆ, ಸಾವಿತ್ರಿ’ ಎಂದಳಲ್ಲ. ಅವಳಿಗೆ ಈ ದೇಶದ ಅಂತರಂಗ ಅರಿವಾದದ್ದು ಹೇಗೆ? ಗುರ್ಮೆಹೆರ್ ಕೌರ್. 1999ರಲ್ಲಿ ಜಮ್ಮು […]

ದೇಶಭಕ್ತಿಯ ಸೂರ್ಯೋದಯವನ್ನು ತಡೆಯಬಲ್ಲವರು ಯಾರಿದ್ದಾರೆ?

Monday, March 13th, 2017

6 ಸಾವಿರಕ್ಕೂ ಹೆಚ್ಚ್ಚು ಕಾಲೇಜು ಆವರಣಗಳಲ್ಲಿ ಕಾರ್ಯಕರ್ತರು ಸೇರಿ ಹೊಸ ಮತದಾರರ ಸೇರ್ಪಡೆಗೊಳಿಸುವ ಕೆಲಸ ಆರಂಭಿಸಿದ್ದರು. ಒಟ್ಟಾರೆ ಒಂಭತ್ತು ಲಕ್ಷಕ್ಕೂ ಮಿಕ್ಕಿ ಹೊಸಬರನ್ನು ಮತದಾರರನ್ನಾಗಿಸುವ ಕಾರ್ಯ ಯಶಸ್ವಿಯಾಗಿತ್ತು. ನವೆಂಬರ್ನಲ್ಲಿ ಶುರುವಾದ ಪರಿವರ್ತನಾ ರ್ಯಾಲಿಗಳು 4 ದಿಕ್ಕಿನಿಂದ ಉತ್ತರ ಪ್ರದೇಶವನ್ನು ಆವರಿಸಿಕೊಂಡವು. ಡಿಸೆಂಬರ್ನಲ್ಲಿ ಇದು ಮುಗಿದಾಗ ಒಟ್ಟು 403 ವಿಧಾನಸಭಾ ಕ್ಷೇತ್ರದ 50 ಲಕ್ಷಕ್ಕೂ ಹೆಚ್ಚು ಜನರನ್ನು ನೇರವಾಗಿ ಭೇಟಿ ಮಾಡಿತ್ತು. 2 ಸಾವಿರ ಕಾಲೇಜು ರಾಯಭಾರಿಗಳು ಕಾಲೇಜು ಸಭೆಗಳನ್ನು ನಡೆಸಿ ಮೋದಿಯ ಗುಣಗಾನ ಮಾಡತೊಡಗಿದ್ದರು. ಈ ವಿದ್ಯಾರ್ಥಿಗಳೊಂದಿಗೆ […]

ಬುದ್ಧಿಜೀವಿಗಳ ದೆವ್ವ ಬಿಡಿಸಿದ ಕಾಳಿ!

Sunday, February 26th, 2017

ನಿವೇದಿತಾ ಭಾರತೀಯ ಆಚರಣೆಗಳನ್ನು ವಿರೋಧಿಸಲಿಲ್ಲ, ಭಾರತೀಯರನ್ನು ದೂಷಿಸಲಿಲ್ಲ. ತಾನು ಇಲ್ಲಿನ ಅನಾಗರಿಕ ಜನರ ಸೇವೆಗೆ ಬಂದವಳೆಂದು ಪತ್ರಿಕಾ ಹೇಳಿಕೆ ಕೊಡಲಿಲ್ಲ. ಕೊನೆಗೆ ತನ್ನ ಮತವನ್ನು ಇಲ್ಲಿನ ಜನರ ಮೇಲೆ ಹೇರಿ ಅವರ ಪರಿವರ್ತನೆಗೆ ಪ್ರಯತ್ನ ಪಡಲಿಲ್ಲ. ಎಲ್ಲಾ ಬಿಡಿ ಯಾವ ಕಾಳಿಯ ಕುರಿತಂತೆ ಇಷ್ಟು ಅಮೋಘವಾಗಿ ಮಾತನಾಡುತ್ತಿದ್ದಳೋ ದಕ್ಷಿಣೇಶ್ವರದ ಅದೇ ಕಾಳಿ ಮಂದಿರಕ್ಕೆ ಅವಳಿಗೆ ವಿದೇಶೀಯಳೆಂಬ ಕಾರಣಕ್ಕೆ ಕೊನೆಯವರೆಗೂ ಪ್ರವೇಶ ದಕ್ಕಲಿಲ್ಲ. ಆದಾಗ್ಯೂ ಮನಸಿಗೆ ಕಿರಿಕಿರಿ ಮಾಡಿಕೊಳ್ಳಲಿಲ್ಲ. ಇಲ್ಲಿನ ನಂಬಿಕೆಗಳನ್ನು ವಿರೋಧಿಸುವ ಅಧಿಕಾರ ತನಗಿಲ್ಲವೆಂದೇ ಶಾಂತವಾಗಿ ಒಪ್ಪಿಕೊಂಡಳು. […]

ನೋವು ನುಂಗುವ ಶಿವ, ಪ್ರೇಮ ಪ್ರವಾಹದ ಬುದ್ಧ!

Tuesday, February 21st, 2017

ನಿವೇದಿತಾಗೆ ಸ್ವಾಮೀಜಿಯವರ ಮೇಲೆ ಅಪಾರ ಶ್ರದ್ಧೆಯಿತ್ತು. ಸ್ವಾಮೀಜಿ ಹೇಳಿದ ಕೆಲಸ ಮಾಡುವುದಷ್ಟೇ ತನ್ನ ಜೀವನದ ಗುರಿಯೆಂದು ಆಕೆ ನಿರ್ಧರಿಸಿಯಾಗಿತ್ತು. ಹೀಗೆ ನಿರ್ಧರಿಸುವ ಮುನ್ನ ಅನೇಕ ತಾಕಲಾಟಗಳು ಎದುರಾದರೂ ಅದನ್ನು ಎದುರಿಸಿ ಗೆದ್ದು ಭಾರತದ ಶಿಶುವಾದಳು. ಹಾಗಂತ ಇದು ಏಕಾಕಿ ನಡೆದ ಪ್ರಕ್ರಿಯೆಯಲ್ಲ. ಸ್ವಾಮೀಜಿ ಭಾರತಕ್ಕೆ ಬಂದ ನಂತರ ಮಾರ್ಗರೇಟ್ ನೋಬಲ್ಳೊಡನೆ ನಿರಂತರ ಪತ್ರ ವ್ಯವಹಾರ ನಡೆದಿದೆ. ಅತ್ತ ಆಕೆಯೂ ವೇದಾಂತದ ಪ್ರಚಾರ ಕಾರ್ಯದಲ್ಲಿ ತನ್ನ ತಾನು ಪೂತರ್ಿ ತೊಡಗಿಸಿಕೊಂಡು ಆಧ್ಯಾತ್ಮದ ಅತ್ಯುನ್ನತ ಸವಿ ಅನುಭವಿಸಲಾರಂಭಿಸಿದ್ದಳು. ಆ ವೇಳೆಗೆ […]

ಎದುರಿಸಿ ಗೆಲ್ಲುವಲ್ಲಿಯೇ ನಿಜವಾದ ಆನಂದ!!

Thursday, February 16th, 2017

ಈ ಸಮ್ಮೇಳನ ಎರಡು ವಿಶ್ವದಾಖಲೆಗಳಿಗೆ ಸಾಕ್ಷಿಯಾಯಿತು. ಪುಸ್ತಕ ಮಾರಾಟವೂ ಅಷ್ಟೇ. ರಾಷ್ಟ್ರೀಯ ಸಾಹಿತ್ಯ, ವಿವೇಕ-ನಿವೇದಿತೆಯರ ವಿಚಾರಧಾರೆಯ ಸಾಹಿತ್ಯಕ್ಕೆ ಜನ ಮುಗಿಬಿದ್ದ ರೀತಿ ರೋಚಕವಾಗಿತ್ತು. ಒಟ್ಟು ಎರಡು ದಿನಗಳಲ್ಲಿ 70 ಸಾವಿರಕ್ಕೂ ಮಿಕ್ಕಿ ಜನ ಆವರಣಕ್ಕೆ ಬಂದು ಹೋಗಿದ್ದುಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸಾಕ್ಷಿಯಾಗಿತ್ತು. ಇವೆಲ್ಲವನ್ನೂ ಗಮನಿಸಿಯೇ ರಾಜ್ಕೋಟ್ನಿಂದಾಗಮಿಸಿದ್ದ ಸ್ವಾಮಿ ಸರ್ವಸ್ಥಾನಂದಜೀ ಗುಜರಾತ್ನಲ್ಲಿ ಇಂತಹುದೇ ಸಮ್ಮೇಳನ ಮಾಡುವ ಆಲೋಚನೆ ಮಾಡಿದ್ದೇವೆಂದಾಗ ಕಾರ್ಯಕರ್ತರು ನೆಲದ ಮೇಲೆ ನಿಂತಿರಲಿಲ್ಲ! ಅಚ್ಚರಿಯೇನು ಗೊತ್ತೇ? ಈ ಸಮ್ಮೇಳನವನ್ನು ವಿರೋಧಿಸಿದ ಎಡಪಂಥೀಯರು ಸುಮ್ಮನಾಗುವುದಿರಲಿ ಹೊಗಳಲು ಆರಂಭ ಮಾಡಿದ್ದರು. […]

ನರೇಂದ್ರ ಭಾರತಕ್ಕಿದೋ ಭದ್ರ ಹೆಜ್ಜೆ!

Monday, January 30th, 2017

20 ನೇ ಶತಮಾನದ ಆಲೋಚನೆಗಳ ಮೇಲೆ ಸ್ವಾಮೀಜಿಯವರ ಪ್ರಭಾವ ಅಗಾಧವಾದುದು. ಪಶ್ಚಿಮದ ಖ್ಯಾತ ವಿಜ್ಞಾನಿ ನಿಕೋಲಾ ಟೆಸ್ಲಾ ವಿದ್ಯುತ್ ವಿಜ್ಞಾನದಲ್ಲಿ ಮಹತ್ವದ ಸಂಶೋಧನೆಯ ಹುಚ್ಚು ಹತ್ತಿಸಿಕೊಂಡಿದ್ದನಲ್ಲ ಅವನಿಗೆ ಸಾಂಖ್ಯ ದರ್ಶನದ ಕಲ್ಪನೆ ಕೊಟ್ಟದ್ದೇ ಸ್ವಾಮಿ ವಿವೇಕಾನಂದರು. ಆನಂತರವೇ ಆತ ಬೇಕಾದ್ದೆಲ್ಲವೂ ಆಕಾಶದಲ್ಲಿದೆ ಎಂಬ ಚಿಂತನೆಯ ಜಾಡು ಹಿಡಿದು ಹೆಜ್ಜೆ ಹಾಕಿದ್ದು. ಸ್ವಾಮೀಜಿಯ ರಾಜಯೋಗದಲ್ಲಿ ಅಡಗಿದ್ದ ವಿಜ್ಞಾನದ ಅಧ್ಯಯನದಿಂದಲೇ ಪಶ್ಚಿಮದ ಚಿಂತಕರು ಹೊಸ ಲೋಕದೆಡೆಗೆ ಹೊರಳಿದ್ದು. ಹಾರ್ವಡರ್್ ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರಜ್ಞ ವಿಲಿಯಂ ಜೋನ್ಸ್ ತನ್ನ ಕೃತಿಗಳ ಹಿಂದಿನ ಸ್ಫೂತರ್ಿ […]